<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>social media &#8211; Peepal Media</title>
	<atom:link href="https://peepalmedia.com/tag/social-media/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 09 May 2025 07:34:26 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>social media &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕಿಸ್ತಾನ ಸಾಮಾಜಿಕ ಮಾಧ್ಯಮಗಳ ಬಗ್ಗೆ ಪಿಐಬಿ ಎಚ್ಚರಿಕೆ</title>
		<link>https://peepalmedia.com/pib-warns-pakistani-social-media-platforms-spreading-fake-news/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 09 May 2025 07:26:52 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಸುಳ್ಳು ಸುದ್ದಿ ಪತ್ತೆ]]></category>
		<category><![CDATA[factcheck]]></category>
		<category><![CDATA[Fake news]]></category>
		<category><![CDATA[india]]></category>
		<category><![CDATA[news]]></category>
		<category><![CDATA[Pahalgam terror attack]]></category>
		<category><![CDATA[Pakistan]]></category>
		<category><![CDATA[peepalmedia]]></category>
		<category><![CDATA[PIB warns]]></category>
		<category><![CDATA[social media]]></category>
		<category><![CDATA[War]]></category>
		<guid isPermaLink="false">https://peepalmedia.com/?p=58580</guid>

					<description><![CDATA[ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಭಾರತದ ವಿರುದ್ಧ ಸಂಘಟಿತ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ಪಿಬಿಐ (ಪ್ರೆಸ್ ಇನ್ ಫರ್ಮೇಷನ್ ಬ್ಯೂರೋ) ಭಾರತೀಯರಿಗೆ ಎಚ್ಚರಿಕೆ ನೀಡಿದೆ.&#160; ಭಾರತದ ಜನರಲ್ಲಿ ಅಪನಂಬಿಕೆ, ಆತಂಕ ಮತ್ತು ಗೊಂದಲ ಸೃಷ್ಟಿಸುವುದು ಪಾಕ್ ಮಾಧ್ಯಮಗಳ ಉದ್ದೇಶವಾಗಿದ್ದು, ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಪಿಬಿಐ ಮನವಿ ಮಾಡಿದೆ.&#160; ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಸುದ್ದಿ ಹರಡುವಂತಹ, ಅದರಲ್ಲೂ ಸಶಸ್ತ್ರ ಪಡೆಯ ಕುರಿತ ತಪ್ಪು ಮಾಹಿತಿಯನ್ನು ಪಾಕ್ ಮಾಧ್ಯಮಗಳು ಪ್ರಕಟಿಸಿದರೆ, ಅಂತಹ [&#8230;]]]></description>
										<content:encoded><![CDATA[
<p>ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಭಾರತದ ವಿರುದ್ಧ ಸಂಘಟಿತ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ಪಿಬಿಐ (ಪ್ರೆಸ್ ಇನ್ ಫರ್ಮೇಷನ್ ಬ್ಯೂರೋ) ಭಾರತೀಯರಿಗೆ ಎಚ್ಚರಿಕೆ ನೀಡಿದೆ.&nbsp;</p>



<p>ಭಾರತದ ಜನರಲ್ಲಿ ಅಪನಂಬಿಕೆ, ಆತಂಕ ಮತ್ತು ಗೊಂದಲ ಸೃಷ್ಟಿಸುವುದು ಪಾಕ್ ಮಾಧ್ಯಮಗಳ ಉದ್ದೇಶವಾಗಿದ್ದು, ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಪಿಬಿಐ ಮನವಿ ಮಾಡಿದೆ.&nbsp;</p>



<p>ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಸುದ್ದಿ ಹರಡುವಂತಹ, ಅದರಲ್ಲೂ ಸಶಸ್ತ್ರ ಪಡೆಯ ಕುರಿತ ತಪ್ಪು ಮಾಹಿತಿಯನ್ನು ಪಾಕ್ ಮಾಧ್ಯಮಗಳು ಪ್ರಕಟಿಸಿದರೆ, ಅಂತಹ ಸುದ್ದಿಗಳ ಕುರಿತು #PIBFactCheck ಗೆ ರಿಪೋರ್ಟ್ ಮಾಡುವಂತೆ ಮನವಿ ಮಾಡಿಕೊಂಡಿದೆ.</p>



<p>ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂತಹ ಸುಳ್ಳು ಮಾಹಿತಿಗಳಿಂದಲೇ ತುಂಬಿಹೋಗುವ ಲಕ್ಷಣಗಳಿವೆ. ಆದ್ದರಿಂದ&nbsp; ಯಾವುದೇ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಮುಖ್ಯ ಎಂದು ಪಿಐಬಿ ತಿಳಿಸಿದೆ.</p>



<p>ಇಂಥಹ ಸುದ್ದಿಗಳ ಬಗ್ಗೆ ಈ ಕೆಳಗಿನ ವಾಟ್ಸ್‌ಆ್ಯಪ್ ಸಂಖ್ಯೆ, ಇಮೇಲ್ ಮೂಲಕ ಮಾಹಿತಿ ಹಂಚಿಕೊಳ್ಳಲು ಕೋರಲಾಗಿದೆ. Email: <strong> <a href="mailto:factcheck@pib.gov.in">factcheck@pib.gov.in</a> </strong>ಅಥವಾ  91 8799711259 ನಂಬರ್‌ ಗೆ ತಿಳಿಸುವಂತೆ ಕೋರಿದೆ.</p>



<p></p>
]]></content:encoded>
					
		
		
			</item>
		<item>
		<title>13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್</title>
		<link>https://peepalmedia.com/supreme-court-rejects-plea-to-ban-social-media-for-children-under-13/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 05 Apr 2025 09:22:53 +0000</pubDate>
				<category><![CDATA[Uncategorized]]></category>
		<category><![CDATA[facebook]]></category>
		<category><![CDATA[Instagram]]></category>
		<category><![CDATA[social media]]></category>
		<category><![CDATA[social media addict]]></category>
		<category><![CDATA[twitter]]></category>
		<category><![CDATA[X]]></category>
		<guid isPermaLink="false">https://peepalmedia.com/?p=56682</guid>

					<description><![CDATA[13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಹೇಳುವ ಮೂಲಕ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಎಜಿ ಮಸಿಹ್ ಅವರ ಪೀಠವು ಈ ವಿಷಯದ ಬಗ್ಗೆ ನಿರ್ದೇಶನಗಳನ್ನು ನೀಡಲು ನಿರಾಕರಿಸಿತು.&#160;ಕಾನೂನು ಜಾರಿಗೆ ತರಲು&#160;ಸಂಸತ್ತನ್ನು ಕೇಳುವಂತೆ ನ್ಯಾಯಾಲಯವು ಅರ್ಜಿದಾರರಿಗೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಹಾಗಿದ್ದೂ, ಅರ್ಜಿಯಲ್ಲಿ ಹೈಲೈಟ್ ಮಾಡಲಾದ [&#8230;]]]></description>
										<content:encoded><![CDATA[
<p>13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾದ <a href="https://www.barandbench.com/news/supreme-court-refuses-to-entertain-pil-seeking-social-media-ban-for-children-below-13" target="_blank" rel="noreferrer noopener">ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು</a> ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ ಎಂದು <em>ಬಾರ್ ಆಂಡ್ ಬೆಂಚ್</em> ವರದಿ ಮಾಡಿದೆ.</p>



<p>ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಹೇಳುವ ಮೂಲಕ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಎಜಿ ಮಸಿಹ್ ಅವರ ಪೀಠವು ಈ ವಿಷಯದ ಬಗ್ಗೆ ನಿರ್ದೇಶನಗಳನ್ನು ನೀಡಲು ನಿರಾಕರಿಸಿತು.&nbsp;ಕಾನೂನು ಜಾರಿಗೆ ತರಲು&nbsp;<a href="https://www.ndtv.com/india-news/supreme-court-says-no-to-plea-for-barring-kids-below-13-from-using-social-media-8086303" rel="noreferrer noopener" target="_blank">ಸಂಸತ್ತನ್ನು ಕೇಳುವಂತೆ ನ್ಯಾಯಾಲಯವು ಅರ್ಜಿದಾರರಿಗೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.</a></p>



<p>ಹಾಗಿದ್ದೂ, ಅರ್ಜಿಯಲ್ಲಿ ಹೈಲೈಟ್ ಮಾಡಲಾದ ವಿಷಯಗಳ ಕುರಿತು ಕೇಂದ್ರ ಸರ್ಕಾರವನ್ನು ಸಂಪರ್ಕಿಸಲು ಅರ್ಜಿದಾರರಿಗೆ ನ್ಯಾಯಾಲಯ ಅವಕಾಶ ನೀಡಿತು.</p>



<p>ಸಾಮಾಜಿಕ ಮಾಧ್ಯಮಗಳಿಗೆ ಅನಿಯಂತ್ರಿತ ಪ್ರವೇಶವು ಮಕ್ಕಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ, ಇದು ಆರೋಗ್ಯ ಮತ್ತು ಘನತೆಯ ಹಕ್ಕನ್ನು ಒಳಗೊಂಡಂತೆ ಬದುಕುವ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಮಕ್ಕಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.</p>



<p>&#8220;ಅರ್ಥಪೂರ್ಣ ನಿಯಂತ್ರಕ ಮೇಲ್ವಿಚಾರಣೆ ಇಲ್ಲದೆ ಸಾಮಾಜಿಕ ಮಾಧ್ಯಮ ಮಾನಸಿಕ ಯುದ್ಧಭೂಮಿಯಾಗಿ ಪರಿವರ್ತನೆಯಾಗಿದೆ, ಅಲ್ಲಿ ಅಪ್ರಾಪ್ತ ವಯಸ್ಕರು ಪ್ರಿಡೇಟರಿ ಅಲ್ಗೋರಿತಂ, ಅವಾಸ್ತವಿಕ ಹೋಲಿಕೆಗಳು ಮತ್ತು ಆಳವಾಗಿ ಹಾನಿಕಾರಕ ವಿಚಾರಗಳಿಗೆ ಒಳಗಾಗುತ್ತಾರೆ&#8221; ಎಂದು <em>ಬಾರ್ ಆಂಡ್ ಬೆಂಚ್</em> ಮನವಿಯನ್ನು ಉಲ್ಲೇಖಿಸಿದೆ.</p>



<p>13 ರಿಂದ 18 ವರ್ಷದೊಳಗಿನ ಮಕ್ಕಳಿಗೆ ರಿಯಲ್‌ ಟೈಮ್ ಮೇಲ್ವಿಚಾರಣಾ ವ್ಯವಸ್ಥೆ, ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನೆ ಮತ್ತು ವಿಷಯ ನಿರ್ಬಂಧಗಳಂತಹ ಕಡ್ಡಾಯ ಪೋಷಕ ನಿಯಂತ್ರಣ ಕ್ರಮಗಳನ್ನು ಸೇರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.</p>



<p>ಈ ನಿಯಮಗಳನ್ನು ಪಾಲಿಸಲು ವಿಫಲವಾದ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಕಠಿಣ ದಂಡ ವಿಧಿಸಬೇಕೆಂದು ಅದು ಒತ್ತಾಯಿಸಿದೆ.</p>



<p>ಹೆಚ್ಚುವರಿಯಾಗಿ, ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯ ಅಪಾಯಗಳ ಬಗ್ಗೆ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರವ್ಯಾಪಿ ಡಿಜಿಟಲ್ ಸಾಕ್ಷರತಾ ಅಭಿಯಾನವನ್ನು ಪ್ರಾರಂಭಿಸಲು ಅದು ಸರ್ಕಾರವನ್ನು ವಿನಂತಿಸಿತು.</p>



<p>ಜನವರಿ 3 ರಂದು ಕೇಂದ್ರ ಸರ್ಕಾರವು ಕರಡು ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಯಮಗಳನ್ನು ಬಿಡುಗಡೆ ಮಾಡಿತು, ಅದು ಮಕ್ಕಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಖಾತೆಗಳನ್ನು ರಚಿಸಲು <a href="https://www.meity.gov.in/writereaddata/files/259889.pdf" target="_blank" rel="noreferrer noopener">ಪರಿಶೀಲಿಸಬಹುದಾದ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಹೊಂದಿದೆ.</a></p>



<p>ಸಾರ್ವಜನಿಕ ಸಮಾಲೋಚನೆಗಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಕಟಿಸಿದ ಕರಡು ನಿಯಮಗಳಲ್ಲಿ, ಪೋಷಕರು ಅಥವಾ ಕಾನೂನುಬದ್ಧ ಪೋಷಕರು ನೀಡುವ ಒಪ್ಪಿಗೆಯನ್ನು ಸರ್ಕಾರದಿಂದ ಅನುಮೋದಿತ ಗುರುತಿನ ಪುರಾವೆಯ ಮೂಲಕ ಸ್ವಯಂಪ್ರೇರಣೆಯಿಂದ ಮೌಲ್ಯೀಕರಿಸಬೇಕು ಎಂದು ಹೇಳಲಾಗಿದೆ.</p>



<p></p>
]]></content:encoded>
					
		
		
			</item>
		<item>
		<title>ಘಿಬ್ಲಿ ಎಂಬ ಭಯಾನಕ ಮಾಹಿತಿ ದರೋಡೆಕೋರ!</title>
		<link>https://peepalmedia.com/a-terrifying-information-robber-named-ghibli/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 02 Apr 2025 08:09:26 +0000</pubDate>
				<category><![CDATA[ಅಂಕಣ]]></category>
		<category><![CDATA[AI]]></category>
		<category><![CDATA[data stealing]]></category>
		<category><![CDATA[ghibli]]></category>
		<category><![CDATA[internet]]></category>
		<category><![CDATA[open-AI]]></category>
		<category><![CDATA[social media]]></category>
		<guid isPermaLink="false">https://peepalmedia.com/?p=56378</guid>

					<description><![CDATA[ಜನರು ಘಿಬ್ಲಿ ಟ್ರೆಂಡಿಗೆ ಬಿದ್ದು ತಮ್ಮ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪ್ರಸಿದ್ಧ ಆನಿಮೇಟರ್ ಹಯಾವೊ ಮಿಯಾಜಾಕಿಯವರ ಸೃಜನಶೀಲ ಚಿತ್ರಗಳನ್ನು AI ಮೂಲಕ ಪರಿವರ್ತಿಸಲಾಗುತ್ತಿದೆ. ತಮ್ಮ ಕೌಶಲ್ಯವನ್ನು ಈ ರೀತಿ ತಾಂತ್ರಿಕವಾಗಿ AI ಅತಿಕ್ರಮಿಸಿಕೊಳ್ಳುತ್ತಿರುವ ಬಗ್ಗೆ ಹಯಾವೊ ಪ್ರತಿರೋಧ ವ್ಯಕ್ತಪಡಿಸಿದ್ದರು. ಆದರೂ, ಜನರು ತಮ್ಮ ಘಿಬ್ಲಿ -ಫೈಡ್‌ ಫೋಟೋಗಳನ್ನು ಹಂಚಿಕೊಂಡು ಆನಂದಿಸುತ್ತಿದ್ದಾರೆ. ಇದರ ಹಿಂದಿನ ಕರಾಳತೆಯನ್ನು ಡಿಜಿಟಲ್‌ ಗೌಪ್ಯತಾ ತಜ್ಞರು ಬಿಚ್ಚಿಡುತ್ತಿದ್ದು, ಓಪನ್‌ ಎಐ ನಮ್ಮ ಅರಿವಿಗೆ ಬಾರದಂತೆ ಬೃಹತ್‌ ಪ್ರಮಾಣದ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತಿರುವ ಬಗ್ಗೆ [&#8230;]]]></description>
										<content:encoded><![CDATA[
<p>ಜನರು ಘಿಬ್ಲಿ ಟ್ರೆಂಡಿಗೆ ಬಿದ್ದು ತಮ್ಮ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪ್ರಸಿದ್ಧ ಆನಿಮೇಟರ್ ಹಯಾವೊ ಮಿಯಾಜಾಕಿಯವರ ಸೃಜನಶೀಲ ಚಿತ್ರಗಳನ್ನು AI ಮೂಲಕ ಪರಿವರ್ತಿಸಲಾಗುತ್ತಿದೆ. ತಮ್ಮ ಕೌಶಲ್ಯವನ್ನು ಈ ರೀತಿ ತಾಂತ್ರಿಕವಾಗಿ AI ಅತಿಕ್ರಮಿಸಿಕೊಳ್ಳುತ್ತಿರುವ ಬಗ್ಗೆ ಹಯಾವೊ ಪ್ರತಿರೋಧ ವ್ಯಕ್ತಪಡಿಸಿದ್ದರು. ಆದರೂ, ಜನರು ತಮ್ಮ ಘಿಬ್ಲಿ -ಫೈಡ್‌ ಫೋಟೋಗಳನ್ನು ಹಂಚಿಕೊಂಡು ಆನಂದಿಸುತ್ತಿದ್ದಾರೆ. </p>



<p>ಇದರ ಹಿಂದಿನ ಕರಾಳತೆಯನ್ನು ಡಿಜಿಟಲ್‌ ಗೌಪ್ಯತಾ ತಜ್ಞರು ಬಿಚ್ಚಿಡುತ್ತಿದ್ದು, <a href="https://www.instagram.com/reel/DH2faysNfOK/?utm_source=ig_web_copy_link">ಓಪನ್‌ ಎಐ ನಮ್ಮ ಅರಿವಿಗೆ ಬಾರದಂತೆ </a>ಬೃಹತ್‌ ಪ್ರಮಾಣದ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತಿರುವ ಬಗ್ಗೆ ಎಚ್ಚರಿಸುತ್ತಿದ್ದಾರೆ. ಜನರು ಯಾವುದೇ ಚಿಂತೆಯಿಲ್ಲದೆ ತಮ್ಮ ಬಗೆಗಿನ ಮಾಹಿತಿಯನ್ನು ತಾವಾಗಿಯೇ ಕೊಡುತ್ತಿದ್ದಾರೆ. </p>



<p><strong>OpenAI ತನ್ನ AI ಗೆ ತರಬೇತಿ ನೀಡಲು ನಿಮ್ಮನ್ನು ಬಳಸಿಕೊಳ್ಳುತ್ತಿದೆ!</strong></p>



<p>ಇಡೀ ಸಮಸ್ಯೆಯ ಹಿಂದೆ ಒಂದು ದೊಡ್ಡ ಪ್ರಶ್ನೆಯಿದೆ: ಓಪನ್‌ಎಐ ತನ್ನ AI ಮಾದರಿಗಳಿಗೆ ತರಬೇತಿ ನೀಡಲು ಉಚಿತ, ಉತ್ತಮ-ಗುಣಮಟ್ಟದ ದೃಶ್ಯ ಡೇಟಾವನ್ನು ಸಂಗ್ರಹಿಸಲು ಈ ವೈರಲ್ ತಂತ್ರವನ್ನು ಬಳಸುತ್ತಿದೆಯೇ?</p>



<p>ಘಿಬ್ಲಿಯ ಬಗೆಗಿನ ತಕರಾರು ಕೇವಲ ಹಯಾವೊ ಮಿಯಾಜಾಕಿಯವರ ಕಲೆಯ ಹಕ್ಕುಸ್ವಾಮ್ಯದ ಬಗ್ಗೆ ಮಾತ್ರವಲ್ಲ. ಅದಕ್ಕಿಂತಲೂ ದೊಡ್ಡ ಸಮಸ್ಯೆಯನ್ನು ಘಿಬ್ಲಿ ತಂದಿಟ್ಟಿದೆ. ಅದು ಭಯಾನಕ ʼಡೇಟಾ ಸಂಗ್ರಹಣೆ.ʼ</p>



<p>ಸಾಮಾನ್ಯ ದತ್ತಾಂಶ ಸಂರಕ್ಷಣಾ ನಿಯಂತ್ರಣ (GDPR) ಅಡಿಯಲ್ಲಿ, OpenAI ಸಾಮಾನ್ಯವಾಗಿ &#8216;ಕಾನೂನುಬದ್ಧ ಹಿತಾಸಕ್ತಿ&#8221; ಅಡಿಯಲ್ಲಿ ಇಂಟರ್ನೆಟ್‌ನಿಂದ ಫೋಟೋಗಳನ್ನು ಸ್ಕ್ಯಾಪ್ ಮಾಡುವುದನ್ನು ಸಮರ್ಥಿಸಬೇಕಾಗುತ್ತದೆ, ದತ್ತಾಂಶ ಸುರಕ್ಷಿತವಾಗಿದೆ ಎಂಬುದನ್ನು ತೋರಿಸಲು ಸಂರಕ್ಷಣಾ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆ ಎಂದು ಖಚಿತಪಡಿಸುತ್ತದೆ. ಆದಾಗ್ಯೂ, ಬಳಕೆದಾರರು ತಮ್ಮ ಫೋಟೋಗಳನ್ನು ತಾವೇ ಮುಕ್ತವಾಗಿ ಅಪ್ ಲೋಡ್ ಮಾಡಿದಾಗ, ಅವರು ಸ್ಪಷ್ಟ ಒಪ್ಪಿಗೆಯನ್ನು ನೀಡುತ್ತಿದ್ದಾರೆ, ಈ ನಿರ್ಬಂಧಗಳನ್ನು ಸಂಪೂರ್ಣವಾಗಿ ಬೈಪಾಸ್ ಮಾಡುತ್ತಿದ್ದಾರೆ.</p>



<p>&#8220;ಜನರು ಈ ಚಿತ್ರಗಳನ್ನು ಸ್ವಯಂಪ್ರೇರಣೆಯಿಂದ ಅಪ್‌ಲೋಡ್ ಮಾಡಿದಾಗ, ಅವುಗಳನ್ನು ಪ್ರಕ್ರಿಯೆಗೊಳಿಸಲು ಅವರು ಓಪನ್‌ಐಗೆ ತಮ್ಮ ಒಪ್ಪಿಗೆಯನ್ನು ನೀಡುತ್ತಾರೆ. ಇದು ಓಪನ್‌ಐಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುವ ವಿಭಿನ್ನ ಕಾನೂನು ಆಧಾರವಾಗಿದೆ,&#8221; ಎಂದು ಎಐ, ಟೆಕ್ ಮತ್ತು ಗೌಪ್ಯತೆ ಅಕಾಡೆಮಿಯ ಗೌಪ್ಯತೆ ತಜ್ಞ ಲೂಯಿಜಾ ಜರೋವಿ ಎಚ್ಚರಿಸಿದ್ದಾರೆ.</p>



<p>ಸರಳವಾಗಿ ಹೇಳುವುದಾದರೆ, AI ತರಬೇತಿಗಾಗಿ OpenAI ಉಚಿತ, ಹೆಚ್ಚಿನ ರೆಸಲ್ಯೂಶನ್ ಇರುವ ಫೋಟೋಗಳನ್ನು ಪಡೆದುಕೊಳ್ಳುತ್ತಿದೆ, ಈ ಮೂಲ ಫೋಟೋವನ್ನು ತನ್ನಲ್ಲೇ ಇರಿಸಿಕೊಳ್ಳುತ್ತದೆ. ಫೇಸ್ಬುಕ್‌, ವಾಟ್ಸಾಪ್‌ನಂತಹ ಇತರ ಪ್ಲಾಟ್‌ಫಾರ್ಮ್‌ಗಳಿಗೆ ಬಳಕೆದಾರರು ಅಪ್‌ಲೋಡ್‌ ಮಾಡುವ &#8220;ಘಿಬ್ಲಿ-ಶೈಲಿಯ&#8221; ಫೋಟೋ ಮಾತ್ರ ಸಿಗುತ್ತದೆ. OpenAI ತಾನು ಸಂಗ್ರಹಿಸಿರುವ ಕಚ್ಚಾ ಡೇಟಾವನ್ನು ಬಳಸಿಕೊಂಡು ಭವಿಷ್ಯದಲ್ಲಿ ಬರುವ AI ಮಾದರಿಗಳಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತದೆ.</p>



<p><strong>ನಿಮ್ಮ ಮುಖವನ್ನು ಬಳಸಿಕೊಂಡು ಮುಂದಿನ AIಗೆ ತರಬೇತಿ ನೀಡಲಾಗುತ್ತದೆಯೇ? </strong></p>



<p>ಘಿಬ್ಲಿಯ ಭಯಾನಕತೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.  ಹಿಮಾಚಲ ಸೈಬರ್ ವಾರಿಯರ್ಸ್‌ನಂತಹ ಸೈಬರ್ ಸೆಕ್ಯುರಿಟಿ ಗುಂಪುಗಳು, ಬಳಕೆದಾರರು ತಮ್ಮ ಮುಖಗಳನ್ನು AI ಪ್ಲಾಟ್‌ಫಾರ್ಮ್‌ಗಳಿಗೆ ಅಪ್ ಲೋಡ್ ಮಾಡುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿವೆ. X ನಲ್ಲಿ ವೈರಲ್ ಆಗಿರುವ ಒಂದು ಪೋಸ್ಟ್ ಹೀಗಿದೆ: &#8220;ನೀವು #Ghibli ಮಾಡುವ ಮೊದಲು ಒಮ್ಮೆ ಯೋಚಿಸಿ . ಆ ಮುದ್ದಾದ Ghibli-ಶೈಲಿಯ ಸೆಲ್ಫಿ? ನೀವು ಯೋಚಿಸುವುದಕ್ಕಿಂತ ಹೆಚ್ಚು ಅಪಾಯಕಾರಿ. ನಿಮ್ಮ ಫೋಟೋವನ್ನು ದುರುಪಯೋಗಪಡಿಸಿಕೊಳ್ಳಬಹುದು ಅಥವಾ ಕುಶಲತೆಯಿಂದ ಬಳಸಬಹುದಾಗಿದೆ. ನಿಮ್ಮ ಒಪ್ಪಿಗೆಯಿಲ್ಲದೆ AI ಗೆ ತರಬೇತಿ ನೀಡಲು ಬಳಸಬಹುದು. ಡೇಟಾ ಬೋಕರ್‌ಗಳು ಅದನ್ನು ಉದ್ದೇಶಿತ ಜಾಹೀರಾತುಗಳಿಗಾಗಿ ಮಾರಾಟ ಮಾಡಬಹುದು. ಸೈಬರ್ ಸ್ಮಾರ್ಟ್ ಆಗಿರಿ. ನಿಮ್ಮ ಗೌಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ.&#8221;</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">⚠️ Think before you <a href="https://twitter.com/hashtag/Ghibli?src=hash&amp;ref_src=twsrc%5Etfw">#Ghibli</a> ⚠️<br><br>That cute “Ghibli-style” selfie? It might cost more than you think.<br><br>🔎 Your photo could be misused or manipulated.<br>🧑‍💻 AI may train on it without your consent.<br>💰 Data brokers might sell it for targeted ads.<br>Stay cyber smart. Your privacy matters.… <a href="https://t.co/aEjT3sHtTN">pic.twitter.com/aEjT3sHtTN</a></p>&mdash; Himachal Cyber Warriors (@hpcyberwarriors) <a href="https://twitter.com/hpcyberwarriors/status/1905947943883993414?ref_src=twsrc%5Etfw">March 29, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಹೆಚ್ಚುತ್ತಿರುವ ಆತಂಕ ಕೇವಲ ಭ್ರಮೆಯಲ್ಲ. ಓಪನ್‌ಎಐನ ಸ್ವಂತ ಗೌಪ್ಯತಾ ನೀತಿಯು ಕಂಪನಿಯು ತನ್ನ AI ಮಾದರಿಗಳಿಗೆ ತರಬೇತಿ ನೀಡಲು ಬಳಕೆದಾರರಿಂದ, ಆಯ್ಕೆಯಿಂದ ಹೊರಗುಳಿಯದ ಹೊರತು ವೈಯಕ್ತಿಕ ಡೇಟಾ ಇನ್‌ಪುಟ್ ಅನ್ನು ಸಂಗ್ರಹಿಸುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದರೂ, ಘಿಬ್ಲಿ-ಫಿಕೇಶನ್‌ನಂತಹ ಪ್ರವೃತ್ತಿಗಳಲ್ಲಿ ಉತ್ಸಾಹದಿಂದ ಭಾಗವಹಿಸುವಾಗ ಇದನ್ನು ಅರ್ಥ ಮಾಡಿಕೊಳ್ಳಬೇಕು.</p>



<p><strong>AI ಗೆ ನಿಮ್ಮ ಫೋಟೋ ಏಕೆ ಬೇಕು?</strong></p>



<p>ಇದು ಕೇವಲ ವ್ಯಾನಿಟಿ ಫಿಲ್ಟರ್‌ಗಳ ಬಗ್ಗೆ ಅಲ್ಲ. ಮೆಟಾದ ಮುಖ್ಯ AI ವಿಜ್ಞಾನಿ ಯಾನ್ ಲೆಕುನ್, ಮಾನವ ಮಟ್ಟದ ಬುದ್ಧಿಮತ್ತೆಯನ್ನು ತಲುಪಲು AI ಮಾದರಿಗಳಿಗೆ ಫೋಟೋ ರೀತಿಯ ದೃಶ್ಯ ಇನ್ ಪುಟ್ ಅಗತ್ಯವಿದೆ ಎಂದು ಬಹಳ ಹಿಂದಿನಿಂದಲೂ ವಾದಿಸುತ್ತಿದ್ದಾರೆ. ಕೇವಲ ಟೆಕ್ಸ್ಟ್ ಸಾಕಾಗುವುದಿಲ್ಲ ಎಂದು ಅವರು ಹೇಳುತ್ತಾರೆ.</p>



<ul class="wp-block-list">
<li>ಇಂದಿನ ಅತಿದೊಡ್ಡ AI ಮಾದರಿಗಳು 20 ಟ್ರಿಲಿಯನ್ ಪದಗಳ ಮೇಲೆ ತರಬೇತಿ ಪಡೆದಿವೆ &#8211; ಇದು ಅಂತರ್ಜಾಲದಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಎಲ್ಲಾ ಪಠ್ಯಗಳಿಗೆ ಸಮಾನವಾಗಿದೆ.</li>



<li>ಆದರೆ ಒಂದು ಮಗು ಕೇವಲ ನಾಲ್ಕು ವರ್ಷಗಳಲ್ಲಿ ಅದೇ ಪ್ರಮಾಣದ ದೃಶ್ಯ ದತ್ತಾಂಶವನ್ನು ಪ್ರಕ್ರಿಯೆಗೊಳಿಸುತ್ತದೆ.</li>



<li>AI ಮಾನವ ಬುದ್ಧಿಮತ್ತೆಯನ್ನು ತಲುಪಲು ಬಯಸಿದರೆ, ಅದು ಅಪಾರ ಪ್ರಮಾಣದ ದೃಶ್ಯ ಇನ್‌ಪುಟ್ ಅನ್ನು ಪ್ರಕ್ರಿಯೆಗೊಳಿಸಬೇಕು ಮತ್ತು ಅದನ್ನು ಪಡೆಯಲು ಸುಲಭವಾದ ಮಾರ್ಗ ಯಾವುದು? ನೇರವಾಗಿ ಬಳಕೆದಾರರಿಂದ ಪಡೆಯುವುದು. </li>
</ul>



<p>&#8220;ಕೇವಲ ಪಠ್ಯ (ಟೆಕ್ಸ್ಟ್) ತರಬೇತಿಯಿಂದ ನಾವು ಎಂದಿಗೂ ಮಾನವ ಮಟ್ಟದ AI ಅನ್ನು ತಲುಪಲು ಸಾಧ್ಯವಿಲ್ಲ. ನೈಜ ಜಗತ್ತನ್ನು ಅರ್ಥಮಾಡಿಕೊಳ್ಳಲು ನಾವು ವ್ಯವಸ್ಥೆಗಳನ್ನು ಪಡೆಯಬೇಕಾಗಿದೆ ಮತ್ತು ನೈಜ ಜಗತ್ತನ್ನು ಅರ್ಥಮಾಡಿಕೊಳ್ಳುವುದು ನಿಜವಾಗಿಯೂ ಕಷ್ಟ ಎಂದು LeCun ವಿವರಿಸುತ್ತದೆ.</p>



<p>ಘಿಬ್ಲಿ ಜನರೇಟರ್‌ನಂತಹ ವೈರಲ್ ದೃಶ್ಯ ಪ್ರವೃತ್ತಿಗಳ ಹಿಂದಿನ ಓಪನ್-ಎಐ ಪ್ರೇರಣೆಯನ್ನು ಇದು ವಿವರಿಸಬಹುದು. ದುಬಾರಿ ಇಮೇಜ್ ಡೇಟಾಸೆಟ್‌ಗಳನ್ನು ಖರೀದಿಸುವ ಬದಲು, ಓಪನ್‌-ಎಐ ಲಕ್ಷಾಂತರ ಚಿತ್ರಗಳನ್ನು ಉಚಿತವಾಗಿ ಪಡೆಯುವ ಮಾರ್ಗವನ್ನು ಕಂಡುಕೊಂಡಿರಬಹುದು.</p>



<p>ಭ್ರಮೆಯಲ್ಲಿ ಮೋಜು!: ಮುಖವಾಡ ಹಾಕಿ ನಿಮ್ಮ ಡೇಟಾದ ದರೋಡೆ! </p>



<p>ಘಿಬ್ಲಿ ಶೈಲಿಯ AI ಭಾವಚಿತ್ರಗಳು ಕ್ಯೂಟ್‌ ಅನ್ನಿಸಿದರೂ, ಅದರ ಮೂಲ ವಾಸ್ತವವು ಹೆಚ್ಚು ಸಂಕೀರ್ಣವಾಗಿದೆ. ಇಂಟರ್ನೆಟ್‌ನಲ್ಲಿ ಇದೇ ರೀತಿಯ ವೈರಲ್ AI ಪ್ರವೃತ್ತಿಗಳು ಮೊದಲೂ ಇದ್ದವು &#8211; ಲೆನ್ನಾ AI ನ ಮ್ಯಾಜಿಕ್ ಅವತಾರಗಳು ಅಥವಾ ಫೇಸ್‌ಆಪ್‌ನಲ್ಲಿದ್ದ ಮುದುಕರಾದಾಗ ಹೇಗೆ ಕಾಣುತ್ತೇವೆ ಎಂಬ ಫಿಲ್ಮರ್ ನೆನಪಿದೆಯೇ? ಪ್ರತಿ ಬಾರಿಯೂ ಗೌಪ್ಯತೆ ಕಾಳಜಿಗಳು ಅನುಸರಿಸುತ್ತಿದ್ದವು. ಆದರೆ ಆ ಹೊತ್ತಿಗಾಗಲೇ ತಮಗೆ ಬೇಕಾದ ಡೇಟಾವನ್ನು ಸಂಗ್ರಹಿಸಲಾಗಿತ್ತು.</p>



<p>ನಾವು ಮತ್ತೆ ಅದೇ ಪ್ಲೇಬುಕ್ ಅನ್ನು ನೋಡುತ್ತಿದ್ದೇವೆಯೇ? ಹಾಗಿದ್ದಲ್ಲಿ, ಇದಕ್ಕೆ ನಾವು ತೆರುವ ಬೆಲೆ ಅಪಾಯಕಾರಿಯಾಗಿರುತ್ತದೆ. ಬಳಕೆದಾರರು ತಿಳಿಯದೆಯೇ ಓಪನ್‌ಐಗೆ ಅತ್ಯಂತ ಅಗತ್ಯವಿರುವ ಮಾಹಿತಿಯನ್ನು ನೀಡುತ್ತಿದ್ದಾರೆ.  </p>



<p>ಇನ್ನೊಮ್ಮೆ ನಿಮ್ಮ ಕ್ಯೂಟ್‌ ಕ್ಯೂಟ್‌ ಘಿಬ್ಲಿ ಇಮೇಜನ್ನು ಅಪ್‌ಲೋಡ್‌ ಮಾಡುವ ಮೊದಲು ಯೋಚಿಸಿ. </p>



<p></p>



<p></p>
]]></content:encoded>
					
		
		
			</item>
		<item>
		<title>ಸುಳ್ಳು ಸುದ್ದಿ ಪತ್ತೆ ವ್ಯವಸ್ಥೆ ನಿಲ್ಲಿಸಲಿರುವ ಮೆಟಾ: ಭಾರತದಲ್ಲಿ ಏನಾಗಬಹುದು?</title>
		<link>https://peepalmedia.com/meta-to-stop-fake-news-detection-system-what-will-happen-in-india/</link>
		
		<dc:creator><![CDATA[Charan Aivarnad]]></dc:creator>
		<pubDate>Sat, 11 Jan 2025 11:36:50 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[Donald Trump]]></category>
		<category><![CDATA[facebook]]></category>
		<category><![CDATA[Fact check]]></category>
		<category><![CDATA[fact checking]]></category>
		<category><![CDATA[Fake news]]></category>
		<category><![CDATA[Instagram]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[meta]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[social media]]></category>
		<category><![CDATA[thread]]></category>
		<category><![CDATA[twitter]]></category>
		<category><![CDATA[whatsaap]]></category>
		<category><![CDATA[X]]></category>
		<guid isPermaLink="false">https://peepalmedia.com/?p=52117</guid>

					<description><![CDATA[ಜನವರಿ 7, 2025 ಮಂಗಳವಾರ ಥರ್ಡ್‌-ಪಾರ್ಟಿ-ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ. ಇದನ್ನು ಅಮೇರಿಕಾದಿಂದ ಆರಂಭಿಸಲು ತೀರ್ಮಾನಿಸಿದೆ. ಈ ಮೂಲಕ 130 ದೇಶಗಳ 90 ಸಂಸ್ಥೆಗಳ ಜೊತೆಗೆ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಥ್ರೆಡ್‌ನಲ್ಲಿ ಸುಳ್ಳು ಸುದ್ದಿ ಪತ್ತೆಗಾಗಿ ಮಾಡಿಕೊಂಡಿದ್ದ ಒಪ್ಪಂದವನ್ನು ಮೆಟಾ ನಿಲ್ಲಿಸಲಿದೆ. ಮೆಟಾ ಸುಳ್ಳು ಸುದ್ದಿ ಪತ್ತೆಗಾಗಿ ಈ ವ್ಯವಸ್ಥೆಯನ್ನು 2016 ರಲ್ಲಿ ಆರಂಭಿಸಿತು. ಈಗ ಇದನ್ನು ನಿಲ್ಲಿಸಿ, X ನಲ್ಲಿರುವ ನೋಟ್ಸ್‌ನಂತೆ ಸಾಮೂಹಿಕ ( crowdsourced) ಫ್ಯಾಕ್ಟ್‌ ಚೆಕ್ಕಿಂಗ್‌ ಮಾದರಿಯನ್ನು ಜಾರಿಗೆ ತರಲಿದೆ. ಇದರಲ್ಲಿ [&#8230;]]]></description>
										<content:encoded><![CDATA[
<p>ಜನವರಿ 7, 2025 ಮಂಗಳವಾರ <a href="https://www.facebook.com/formedia/mjp/programs/third-party-fact-checking/partner-map">ಥರ್ಡ್‌-ಪಾರ್ಟಿ-ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು</a> ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ. ಇದನ್ನು ಅಮೇರಿಕಾದಿಂದ ಆರಂಭಿಸಲು ತೀರ್ಮಾನಿಸಿದೆ. ಈ ಮೂಲಕ 130 ದೇಶಗಳ 90 ಸಂಸ್ಥೆಗಳ ಜೊತೆಗೆ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಥ್ರೆಡ್‌ನಲ್ಲಿ ಸುಳ್ಳು ಸುದ್ದಿ ಪತ್ತೆಗಾಗಿ ಮಾಡಿಕೊಂಡಿದ್ದ ಒಪ್ಪಂದವನ್ನು ಮೆಟಾ ನಿಲ್ಲಿಸಲಿದೆ.</p>



<p>ಮೆಟಾ ಸುಳ್ಳು ಸುದ್ದಿ ಪತ್ತೆಗಾಗಿ ಈ ವ್ಯವಸ್ಥೆಯನ್ನು 2016 ರಲ್ಲಿ ಆರಂಭಿಸಿತು. ಈಗ ಇದನ್ನು ನಿಲ್ಲಿಸಿ, X ನಲ್ಲಿರುವ ನೋಟ್ಸ್‌ನಂತೆ ಸಾಮೂಹಿಕ ( crowdsourced) ಫ್ಯಾಕ್ಟ್‌ ಚೆಕ್ಕಿಂಗ್‌ ಮಾದರಿಯನ್ನು ಜಾರಿಗೆ ತರಲಿದೆ. ಇದರಲ್ಲಿ ಬಳಕೆದಾರರು ಮಾಹಿತಿಯ ಬಗ್ಗೆ ತಮ್ಮ ಸ್ಪಷ್ಟನೆಯನ್ನು ನೀಡಲು ಸಾಧ್ಯವಿದೆ, ಈ ಸ್ಪಷ್ಟೀಕರಣವು ಜನರ ದಾರಿ ತಪ್ಪಿಸುವ ಪೋಸ್ಟ್‌ನ ಪಕ್ಕದಲ್ಲಿಯೇ ಕಾಣಿಸಿಕೊಳ್ಳಲಿದೆ. </p>



<p>ಸದ್ಯ ಇದನ್ನು ಅಮೇರಿಕಾದಿಂದ ಆರಂಭಿಸಲಾಗುತ್ತಿದೆ, ನಂತರ ಇತರ ದೇಶಗಳಲ್ಲೂ ಇದನ್ನು ಜಾರಿಗೊಳಿಸಲಿದೆ. ಅಮೇರಿಕಾದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಸಂತೋಪಡಿಸಲು, ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುವ ಟ್ರಂಪನ್ನು ಮೆಚ್ಚಿಸಲು ಮೆಟಾ ಈ ದಾರಿ ಹಿಡಿದಿದೆ ಎಂಬ ಟೀಕೆಗಳು ಜಾಗತಿಕವಾಗಿ ಕೇಳಿಬರುತ್ತಿದೆ.</p>



<p>ಮೆಟಾದ ಈ ನಡೆಯು ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಸರ್ಕಾರವಿರುವ ಭಾರತದಂತಹ ದೇಶಗಳಲ್ಲಿ ಸರ್ಕಾರದ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ. </p>



<p><strong>ಮೆಟಾದ ಪಾಲಿಸಿಯಲ್ಲಿ ಆಗುವ ಬದಲಾವಣೆಯಿಂದ ಏನಾಗಲಿದೆ?</strong></p>



<p>ಸದ್ಯದ ಸಂದರ್ಭದಲ್ಲಿ ಫ್ಯಾಕ್ಟ್‌ ಚೆಕ್ಕರ್‌ಗಳು ಒಂದು ಪೋಸ್ಟ್‌ ಅನ್ನು ಸುಳ್ಳು ಎಂದು ಹೇಳಿದರೆ, ಮೆಟಾ ಆ ಪೋಸ್ಟ್‌ನ <a href="https://www.facebook.com/business/help/2593586717571940?id=673052479947730">ವಿಸಿಬಿಲಿಟಿ ಮತ್ತು ರೀಚ್‌ ಕಡಿಮೆ </a>ಮಾಡುವ ಮೂಲಕ ಹೆಚ್ಚೆಚ್ಚು ಜನರಿಗೆ ತಲುಪದಂತೆ ಮಾಡುತ್ತದೆ.  ಅಲ್ಲದೇ, ಅದು ಸುಳ್ಳು ಸುದ್ದಿ ಎಂದು ಪೋಸ್ಟ್‌ ಮೇಲೆ ಲೇಬಲ್‌ ಮಾಡುತ್ತದೆ, ಜೊತೆಗೆ ಸತ್ಯ ಏನು ಎಂದು ತಿಳಿಯಲು ಲಿಂಕ್‌ ಅನ್ನು ನೀಡುತ್ತದೆ.</p>



<p>ಮೆಟಾದ ಹೊಸ ಮಾನದಂಡವು, X  ನ ಪಾಲಿಸಿಯಂತೆ ಕೆಲಸ ಮಾಡಲಿದೆ. ಎಕ್ಸ್‌ನ ಮಾಲೀಕ ಎಲನ್‌ ಮಸ್ಕ್‌ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆತ್ಮೀಯ ಸ್ನೇಹಿತ ಎಂಬುದನ್ನು ಮರೆಯುವಂತಿಲ್ಲ.  <a href="https://communitynotes.x.com/guide/en/contributing/signing-up">X ನ ಪಾಲಿಸಿಯು ಪ್ರೋಗ್ರಾಂಗೆ ಸೈನ್‌ಅಪ್‌ ಮಾಡಿ</a>ದ ಖಾತೆಗಳು ಮಾಡುವ ಎಲ್ಲಾ ಸಮುದಾಯ ಟಿಪ್ಪಣಿ (ಜನರ ಅಭಪ್ರಾಯ)ಯನ್ನು ಪ್ರಕಟಿಸಲು ಅನುಮತಿ ನೀಡುತ್ತದೆ. ಹೆಚ್ಚು ಜನ ಸಮ್ಮತಿಸಿದ್ದಾರೆ ಎಂಬ ಕಾರಣಕ್ಕೆ ಆ ನೋಟ್‌ ಅನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ, &#8220;<a href="https://communitynotes.x.com/guide/en/about/introduction">ವೈವಿಧ್ಯಮಯ ದೃಷ್ಟಿಕೋನಗಳಿಂದ</a>&#8221; ಕೂಡಿರುವ ಖಾತೆಗಳ ನೋಟ್‌ಗಳು ಉಪಯುಕ್ತ ಎಂದು ಅನ್ನಿಸಿದರೆ ಮಾತ್ರ ಆ ನೋಟ್‌ ಎಲ್ಲಿರಿಗೂ ಕಾಣಿಸಲಿದೆ.   </p>



<p>ಮಂಗಳವಾರದ ತನ್ನ ಪ್ರಕಟಣೆಯಲ್ಲಿ, ಮೆಟಾ ಈ ವಿಧಾನವು X ನಲ್ಲಿ ಕೆಲಸ ಮಾಡಿದೆ ಮತ್ತು&nbsp;<a href="https://about.fb.com/news/2025/01/meta-more-speech-fewer-mistakes/" target="_blank" rel="noreferrer noopener">&#8220;ಪಕ್ಷಪಾತ ಕಡಿಮೆಯಾಗುತ್ತದೆ&#8221;</a>&nbsp;ಎಂದು ಹೇಳಿಕೊಂಡಿದೆ .</p>



<p>ಇದರಿಂದ, ಒಂದು ಪೋಸ್ಟ್‌ ಸುಳ್ಳು ಸುದ್ದಿಯಾಗಿದ್ದರೂ, ಬಹುಪಾಲು ಜನರು ಅದನ್ನು ಸತ್ಯವೆಂದು ಕರೆದರೂ ಆ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲಿದೆ. ಸುಳ್ಳನ್ನು ಸತ್ಯ ಎಂದು ಹೇಳುವವರ ನೋಟ್‌ಗಳು ಹೆಚ್ಚಾದರೆ, ಆ ಸುಳ್ಳು ಅಧಿಕೃತ ಮಾಹಿತಿಯಂತೆ ಹರಡುವ ಸಾಧ್ಯತೆ ಇದೆ. ‌</p>



<p><strong>ಟ್ರಂಪ್‌ ಕೃಪೆಗಾಗಿ ಈ ಸರ್ಕಸ್?</strong></p>



<p>ಅಮೇರಿಕಾದಲ್ಲಿ ಟ್ರಂಪ್‌ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವಾಗ, ಟ್ರಂಪ್‌ ಆಶೀರ್ವಾದ ಪಡೆಯಲು ಮೆಟಾ ಮತ್ತು ಎಕ್ಸ್‌ ಈ ಸರ್ಕಸ್‌ ನಡೆಸುತ್ತಿರುವಂತೆ ಕಾಣುತ್ತದೆ. ಟ್ರಂಪ್‌ನ ಕಟ್ಟರ್‌ ಬೆಂಬಲಿಗ, ಬಲಪಂಥೀಯ <a href="https://edition.cnn.com/2025/01/02/tech/meta-nick-clegg-stepping-down-joel-kaplan/index.html" target="_blank" rel="noreferrer noopener">ಜೋಯಲ್ ಕಪ್ಲಾನ್ ಅವರನ್ನು ಜಾಗತಿಕ ವ್ಯವಹಾರಗಳ ಮುಖ್ಯಸ್ಥರನ್ನಾಗಿ ಮೆಟಾ 2025 ರ ಜನವರಿ 2 ರಂದು ನೇಮಿಸಿತು.</a> ಇದು ಸರ್ಕಾರಕ್ಕೆ ಹತ್ತಿರ ಇರುವ ವ್ಯಕ್ತಿಯನ್ನು ಕೂರಿಸಿಕೊಂಡು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವಂತೆ, ಸರ್ಕಾರದ ಸುಳ್ಳುಗಳನ್ನು ಸುಲಭವಾಗಿ ಪ್ರಚಾರ ಮಾಡಲು ಸಾಧ್ಯವಾಗುವಂತೆ ಮಾಡುವ ತಂತ್ರದಂತೆ ಕಾಣುತ್ತದೆ. </p>



<p>ಟ್ರಂಪ್‌ ಹಾಗೂ ಅವರ ಬೆಂಬಲಿಗರು <a href="https://apnews.com/article/meta-facts-trump-musk-community-notes-413b8495939a058ff2d25fd23f2e0f43">ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಸತತವಾಗಿ ಟೀಕೆಗಳನ್ನು</a> ಮಾಡುತ್ತಲೇ ಬಂದಿದ್ದಾರೆ. ಇವರ ಈ ನಡೆಗೆ ಪೂರಕವಾಗಿ, ಬೆಂಬಲವಾಗಿ ಮೆಟಾ ಹಂತ ಹಂತವಾಗಿ ಥರ್ಡ್‌-ಪಾರ್ಟಿ ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸಲು ಹೊರಟಿದೆ. ಇದರ ಜೊತೆಗೆ ದ್ವೇಷ ಹರಡುವ ನಡವಳಿಕೆಗಳ ಮೇಲೆ ನಿಯಂತ್ರಣ ಹೇರಲು ಇದ್ದ <a href="https://transparency.meta.com/en-gb/policies/community-standards/hateful-conduct/">ಪಾಲಿಸಿಯಲ್ಲಿಯೂ ಬದಲಾವಣೆಯನ್ನು</a> ಮೆಟಾ ತಂದಿದೆ. </p>



<p><strong>ಇದನ್ನು ಓದಿ: </strong><a href="https://peepalmedia.com/meta-allow-lgbtq-people-to-be-insulted-as-mentally-ill/"><strong>LGBTQ+ ಗಳನ್ನು ಮಾನಸಿಕ ರೋಗಿಗಳೆಂದು ಅವಮಾನಿಸಲು ಮೆಟಾ ಅನುಮತಿ!</strong></a></p>



<p>ಇದರಿಂದ ಟ್ರಂಪ್‌ ಅವರಿಗೆ ದೊಡ್ಡ ಲಾಭವಾದರೂ, ಬದಿಯಲ್ಲಿ ಲಾಭ ಪಡೆಯುವವರು ನರೇಂದ್ರ ಮೋದಿ ಹಾಗೂ ಬಿಜೆಪಿ ಎಂಬುದು ಭಾರತದ ವಿಚಾರದಲ್ಲಿ ಸತ್ಯ.</p>



<p>ಸದ್ಯ ಯಾವ ರೀತಿಯಲ್ಲಿಯೂ ಉಪದ್ರವನ್ನು ನೀಡದ ಪೋಸ್ಟ್‌ಗಳೂ ಸೆನ್ಸಾರ್‌ ಆಗುತ್ತಿವೆ ಎಂದು ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಆರೋಪಿಸುವಂತೆ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.  &#8220;ಮೆಟಾ ನಿರ್ಬಂಧಿಸುತ್ತಿದೆ. ಇದರಿಂದ ಜನರು ಫೇಸ್‌ಬುಕ್‌ ಜೈಲಿನನಲ್ಲಿ ಬಂಧಿಗಳಾಗಿರುವಂತೆ ಭಾವಿಸುತ್ತಾರೆ, ಅವರಿಗೆ ನಾವು ನಿಧಾನವಾಗಿ ಪ್ರತಿಕ್ರಿಯೆ ನೀಡುತ್ತೇವೆ,&#8221; ಎಂದು ಅಭಿವ್ಯಕ್ತಿ ಸ್ವಾತಂತ್ರ್ಯದ <a href="https://about.fb.com/news/2025/01/meta-more-speech-fewer-mistakes/">ಪಾಠವನ್ನು ಮೆಟಾ ಹೇಳಿದೆ</a>. </p>



<figure class="wp-block-image size-full"><img fetchpriority="high" decoding="async" width="1009" height="372" src="https://peepalmedia.com/wp-content/uploads/2025/01/image-30.png" alt="" class="wp-image-52122" srcset="https://peepalmedia.com/wp-content/uploads/2025/01/image-30.png 1009w, https://peepalmedia.com/wp-content/uploads/2025/01/image-30-300x111.png 300w, https://peepalmedia.com/wp-content/uploads/2025/01/image-30-768x283.png 768w, https://peepalmedia.com/wp-content/uploads/2025/01/image-30-150x55.png 150w, https://peepalmedia.com/wp-content/uploads/2025/01/image-30-696x257.png 696w" sizes="(max-width: 1009px) 100vw, 1009px" /></figure>



<p>ಆದರೆ, ಯಾವುದೇ ಫ್ಯಾಕ್ಟ್‌ ಚೆಕ್ಕರ್‌ಗಳೂ ಮೆಟಾದಲ್ಲಿ ಪೋಸ್ಟ್‌ ಅನ್ನು ಸೆನ್ಸಾರ್‌ ಮಾಡಿಲ್ಲ, ಮತ್ತು ಮಾಡಲು ಸಾಧ್ಯವೂ ಇಲ್ಲ. ಅವರು ಮೆಟಾದ ಟೂಲ್‌ಗಳನ್ನು ಮತ್ತು ನಿಯಮಗಳನ್ನು ಬಳಸಿಕೊಂಡು ಪೋಸ್ಟ್‌ಗಳ ಸ್ವತಂತ್ರ ವಿಮರ್ಶೆಯನ್ನು ಮಾಡಿ, ಅದನ್ನು ಸುಳ್ಳು ಅಥವಾ ಸತ್ಯ ಎಂದು ನಿರ್ಧರಿಸಿ ನಿಖರ ಆಕರಗಳ ಮೂಲಕ ತಮ್ಮ ತೀರ್ಮಾಣವನ್ನು ದೃಢೀಕರಿಸುತ್ತಾರೆ. ಆ ನಂತರ ಆ ಸುದ್ದಿಯನ್ನು ಸೆನ್ಸಾರ್‌ ಮಾಡುವುದು, ಬಿಡುವುದು ಮೆಟಾಕ್ಕೆ ಬಿಟ್ಟ ಕೆಲಸವಾಗಿದೆ. &#8220;More Speech and Fewer Mistakes&#8221; ಎನ್ನುವ ಮೆಟಾ, 2024 ರ ಅಕ್ಟೋಬರ್‌ನಲ್ಲಿ ಪ್ರಕಟಿಸಿದ <a href="https://transparency.meta.com/sr/dsa-transparency-report-sep2024-facebook" target="_blank" rel="noreferrer noopener">Regulation (EU) 2022/2065 &#8211; Digital Services Act &#8211; Transparency Report for Facebook ವರದಿಯಲ್ಲಿ</a>, ಮೆಟಾದಲ್ಲಿ ಮಾಡಲಾಗುವ ಸುಳ್ಳು ಸುದ್ದಿ ಪತ್ತೆಯಲ್ಲಿ ಕೇವಲ 3% ಮಾತ್ರ ದೂರುಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.</p>



<p>ಮೆಟಾ ಥರ್ಡ್-ಪಾರ್ಟಿ-ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯಾತ್ಮಕ ಬದಲಾವಣೆಗಳು ನಡೆಯುವ ಸಾಧ್ಯತೆಗಳಿವೆ. ಫ್ಯಾಕ್ಟ್‌ ಚೆಕ್ಕಿಂಗ್‌ನಿಂದ ಉಪಯೋಗವಿಲ್ಲ ಎಂಬುದು, ಸೆನ್ಸಾರ್‌ ಮಾಡಿದಂತಾಗುತ್ತದೆ ಎಂಬಿತ್ಯಾದಿ ಕಾರಣಗಳನ್ನು ನೀಡುವ ಮೆಟಾ ಮುಂದೆ ಹೆಚ್ಚು ಹೆಚ್ಚು ತಪ್ಪು ಮಾಹಿತಿಗಳು-ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಲು ಕಾರಣವಾಗಬಹುದು.</p>



<p><strong>ಮೆಟಾದ ಈ ನಡೆಯಿಂದ ಮೋದಿ ಸರ್ಕಾರದ ಬೇಳೆ ಬೇಯುತ್ತಾ?</strong></p>



<p>ಸದ್ಯ ಫ್ಯಾಕ್ಟ್‌ ಚೆಕ್ಕಿಂಗ್‌ ನಿಲ್ಲಿಸುವ ಮೆಟಾ, ಈ ಕೆಲಸವನ್ನು ಮೊದಲು ಅಮೇರಿಕಾದಲ್ಲಿ ಆರಂಭಿಲಿದೆ. ಇದರಿಂದ ಟ್ರಂಪ್‌ ಸರ್ಕಾರಕ್ಕೆ ಲಾಭವಾಗಲಿದೆ ಎಂಬುದನ್ನು ಜಾಗತಿಕ ಮಟ್ಟದ ತಜ್ಞರು, ವಿಶ್ಲೇಷಕರು ಒಪ್ಪಿಕೊಂಡಿದ್ದಾರೆ. ಇದರಿಂದ ಭಾರತಕ್ಕೆ ಏನು ಲಾಭವಾಗಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಟ್ರಂಪ್‌ ನಂತೆ ಮೋದಿಯವರೂ, ಅವರಿಬ್ಬರ ಬೆಂಬಲಿಗರೂ ಭಾರತದಲ್ಲಿ ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಅಸಹನೆಯನ್ನು ಹೊಂದಿರುವುದನ್ನು ನಾವು ಅನೇಕ ನಿದರ್ಶನಗಳ ಮೂಲಕ ನೋಡಬಹುದು.</p>



<p>2020 ರ ಅಗಸ್ಟ್‌ನಲ್ಲಿ, ಭಾರತದ ಬಿಜೆಪಿ ನಾಯಕರ ದ್ವೇಷ ಭಾಷಣದ ಮೇಲೆ ನಿರ್ಬಂಧ ಹೇರಬೇಡಿ, ಇದರಿಂದ ಕಂಪನಿಯ ನಿರೀಕ್ಷೆಗಳಿಗೆ ಹಾನಿಯಾಗುತ್ತದೆ ಎಂದು ತನ್ನ ಸಿಬ್ಬಂದಿಗಳಿಗೆ ಫೇಸ್‌ಬುಕ್‌ನ ಭಾರತದ ಸಾರ್ವಜನಿಕ ನೀತಿ ಮುಖ್ಯಸ್ಥೆ ಆಂಖಿ ದಾಸ್ ಹೇಳಿದ್ದಾರೆ ಎಂದು <a href="https://www.wsj.com/articles/facebook-hate-speech-india-politics-muslim-hindu-modi-zuckerberg-11597423346">ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ </a>ವರದಿ ಮಾಡಿತ್ತು. ಈ ಸಂದರ್ಭದಲ್ಲಿ ಅಂಖಿ ದಾಸ್‌ ಮೇಲೆ ಬಿಜೆಪಿ ನಾಯಕರನ್ನು ಫೇಸ್‌ಬುಕ್‌ನ ದ್ವೇಷ ಭಾಷಣದ ನಿಯಮಗಳಿಂದ ರಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂತು.</p>



<p>ಈ ಆರೋಪವನ್ನು ನಿರಾಕರಿಸಿದ ಫೇಸ್‌ಬುಕ್‌, &#8220;ತಾನು ಯಾವುದೇ ಪಕ್ಷದ ಪರವಾಗಿ ಇಲ್ಲ,&#8221; ಎಂದು ಸಮರ್ಥನೆ ಮಾಡಿಕೊಂಡಿತ್ತು. ಇದಾಗಿ ಎರಡು ತಿಂಗಳು ಕಳೆದ ಮೇಲೆ, 2020 ರ ಅಕ್ಟೋಬರ್‌ 27 ರಂದು ಅಂಖಿ ದಾಸ್‌ ತಮ್ಮ<a href="https://www.bbc.com/news/world-asia-india-54715995"> ಹುದ್ದೆಗೆ ರಾಜೀನಾಮೆಯನ್ನು</a> ನೀಡಿದರು. ಮೆಟಾ ಹಾಗೂ ಭಾರತ ಸರ್ಕಾರದ ನಡುವಿನ ಸಂಬಂಧ ಅಸ್ಪಷ್ಟ ಹಾಗೂ ಅಪಾರದರ್ಶಕವಾಗಿ ಕಂಡು ಬರುತ್ತದೆ. </p>



<p>ಈಗ X ನ ಮಾದರಿಯನ್ನು ಅನುಸರಿಸಲು ಮೆಟಾ ಹೊರಟಿದೆ. 2024 ರಲ್ಲಿ ಯುರೋಪಿನ ಫ್ಯಾಕ್ಟ್-ಚೆಕಿಂಗ್ ಸ್ಟ್ಯಾಂಡರ್ಡ್ಸ್ ನೆಟ್‌ವರ್ಕ್‌ ನಡೆಸಿದ ಅಧ್ಯಯನವು ಸುಮಾರು 69% ಟ್ವಿಟ್‌ಗಳನ್ನು ಸುಳ್ಳು ಅಥವಾ ತಪ್ಪುದಾರಿಗೆಳೆಯುವವು  ಎಂದು ಫ್ಯಾಕ್ಟ್‌-ಚೆಕ್ಕರ್‌ಗಳು ಹೇಳಿರುವುದನ್ನು ಬಹಿರಂಗಪಡಿಸಿದೆ. ಆದರೆ<a href="https://science.feedback.org/despite-community-notes-most-content-reviewed-eu-fact-checkers-goes-unaddressed-x-twitter/"> X ಮಾತ್ರ ಈ ಬಗ್ಗೆ ತಲೆ </a>ಕೆಡಿಸಿಕೊಳ್ಳಲೇ ಇಲ್ಲ.  </p>



<p>ಈಗ ಮೆಟಾ ತನ್ನ ಹೊಸ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೆ ತಂದರೆ, ಅದನ್ನು ಮೊದಲು ಬಿಜೆಪಿ ಹೈಜಾಕ್‌ ಮಾಡಿಕೊಳ್ಳುತ್ತದೆ. ಈ ಹಿಂದೆ ಪ್ರೆಸ್‌ ಇನ್ಪಾರ್ಮೇಷನ್‌ ಬ್ಯೂರೋ (PIB) ಅಡಿಯಲ್ಲಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ತನ್ನದೇ ಆದ ಫ್ಯಾಕ್ಟ್‌ ಚೆಕ್ಕಿಂಗ್‌ ಘಟಕ ಆರಂಭಿಸಲು ಹೊರಟಾಗ, ಆ <a href="https://www.thehindu.com/news/national/supreme-court-stays-it-ministrys-notification-establishing-fact-check-unit-under-pib-to-identify-fake-news/article67975405.ece">ಅಧಿಸೂಚನೆಗೆ ಸುಪ್ರೀಂ ಕೋರ್ಟ್‌ ತಡೆಯನ್ನು</a> ಒಡ್ಡಿತ್ತು.</p>



<p>ಸರ್ಕಾರಗಳೇ ಫ್ಯಾಕ್ಟ್‌-ಚೆಕ್ಕಿಂಗ್‌ ಯೂನಿಟ್‌ಗಳನ್ನು ಆರಂಭಿಸುವುದು ನರಿಯನ್ನು ಕೋಳಿಗೂಡಿನ ಕಾವಲು ಕಾಯಲು ಹೇಳಿ ಬೀಗದ ಕೀಯನ್ನು ಕೊಟ್ಟಂತೆ. ಸರ್ಕಾರಗಳು ಈ ಫ್ಯಾಕ್ಟ್‌-ಚೆಕ್ಕಿಂಗ್‌ ಯೂನಿಟ್‌ಗಳ ಮೂಲಕ ತಮ್ಮನ್ನು ಟೀಕಿಸುವ, ಪ್ರಶ್ನಿಸುವ ದನಿಗಳನ್ನು ಸುಲಭವಾಗಿ ಹತ್ತಿಕ್ಕಲು ಸಾಧ್ಯ. </p>



<p>ಭಾರತದಲ್ಲಿ ಸದ್ಯ ಮೆಟಾದ ಜೊತೆಗೆ <a href="https://www.facebook.com/formedia/mjp/programs/third-party-fact-checking/partner-map">ಸಹಯೋಗವನ್ನು</a> ಹೊಂದಿರುವ ಥರ್ಡ್‌-ಪಾರ್ಟಿ-ಫ್ಯಾಕ್ಟ್‌-ಚೆಕ್ಕಿಂಗ್‌ ಸಂಸ್ಥೆಗಳೆಂದರೆ, <a href="https://factcheck.afp.com/afp-india?fbclid=IwZXh0bgNhZW0CMTEAAR1bQ2B2pK0WlUvVEs6RcTksRnDpfPQv1MznqWYPjdKd4jGiSFfhu0_KpXY_aem_sBM5-5gRUdTkGrq3vS2RZA" target="_blank" rel="noreferrer noopener">AFP &#8211; ಹಬ್</a>, <a href="https://l.facebook.com/l.php?u=https%3A%2F%2Fwww.boomlive.in%2F%3Ffbclid%3DIwZXh0bgNhZW0CMTEAAR20VhnUH6jGL_tFqUoTBTKV85Y95_Vb1x8Kcpl-iic7YzkrnrKvFzBLWIA_aem_wHUU2t4nPE9r1TdiCvYQNg&amp;h=AT2KcRdD2ZQ30FypECDRIYbGV2dwvrzxVDGR4DIt6A10oennjlUv66L3Xb6a7yqMsXxOLjucuIRSALPvWKVKj_PvsNXJ-2UKk7LXcbxBv9d1w-EO00sBlS7hH2sygkQdwby5z3f8bxYMsWmE91yFFA" target="_blank" rel="noreferrer noopener">ಬೂಮ್</a>, <a href="https://factcrescendo.com/?fbclid=IwZXh0bgNhZW0CMTEAAR1ADY9DVl-WFmbPUZBYWo1SJ5F5LvVwyT4X7frvKqjWDRd9l5d7HeHfcmw_aem_ytlK2fuJHVw8DwldlotmjQ" target="_blank" rel="noreferrer noopener">ಫ್ಯಾಕ್ಟ್ ಕ್ರೆಸೆಂಡೋ</a>, <a href="https://www.thip.media/category/health-news-fact-check/?fbclid=IwZXh0bgNhZW0CMTEAAR17VmbD78uqnohidvwDppAno_NvwbrzQWddscWWptEpO7y7y9Pw0WbqY_o_aem_KknsGD2cyBcEPSOU8J7myg" target="_blank" rel="noreferrer noopener">ದಿ ಹೆಲ್ದೀ ಇಂಡಿಯನ್‌ ಪ್ರಾಜೆಕ್ಟ್</a> , <a href="https://factly.in/?fbclid=IwZXh0bgNhZW0CMTEAAR0G6WlS8KAnlmprG3Ws1N13AcrAgjiiSAsxEg-EJY8q2VMQIt8Yp-RlAtc_aem_5Z7Ps4grwdv3qGr2wv7Dwg" target="_blank" rel="noreferrer noopener">ಫ್ಯಾಕ್ಟ್ಲೀ</a>, <a href="https://www.indiatoday.in/fact-check?fbclid=IwZXh0bgNhZW0CMTEAAR0AFJ6P-xZ3vmRDdcLFQZkKm1YlU8BhdJKo8yjbrQFx0M2JTVi1MUSkUpU_aem_dmOURwmGLiG9Z_qUC6vRyw" target="_blank" rel="noreferrer noopener">ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್</a> , <a href="https://www.newschecker.in/?fbclid=IwZXh0bgNhZW0CMTEAAR0QVLKmSsdAA3rYAEKR2dmnYo_GmhQ8NHTZdRCXwth9V3aKXHQ9LKCUT7w_aem_9zkN4E3x8BSJ5xt7IK97cw" target="_blank" rel="noreferrer noopener"> ನ್ಯೂಸ್‌ಚೆಕ್ಕರ್ </a>, <a href="https://newsmeter.in/fact-check?fbclid=IwZXh0bgNhZW0CMTEAAR0-XHOndcjyOM-6Uh1wDzxshma1jB0RyfYsco89PalcIEq3U0U8X47YvaA_aem_IuekF8U_MPQcPmM8Qtzw4A" target="_blank" rel="noreferrer noopener"> ನ್ಯೂಸ್‌ಮೀಟರ್ </a>, <a href="http://www.newsmobile.in/?fbclid=IwZXh0bgNhZW0CMTEAAR2IZ7JrQMJkIs7csEH42FQ2lY61nQDpreBcwgQ0JZ640ImsynP22qEcGR8_aem_anmnqPGoNR-ePQQsFbVd3Q" target="_blank" rel="noreferrer noopener">ನ್ಯೂಸ್‌ಮೊಬೈಲ್ ಫ್ಯಾಕ್ಟ್  ಚೆಕ್ಕರ್ </a>, <a href="https://l.facebook.com/l.php?u=https%3A%2F%2Fwww.thequint.com%2F%3Ffbclid%3DIwZXh0bgNhZW0CMTEAAR002BB_sUJxvksD03bwMHwK0fyGfgDTIOlb4QjEHEoVnb_GxVgXcjqmtsE_aem_JFekj2_JSowt4LXAsKpTJw&amp;h=AT0OQJZvhUstb2ocGHoL-4x3nM4QkNdKtEjYw7mGp6QyfahtAyBu15pEt0s8aZfIk1s7ehNrOhsjtqdn5zzK6vgW1IGizRuSssTd2GRNQwa0JmVd0yeUxRmi1Tjd_XWnZ73rAyGKLTr93FewVpus-A" target="_blank" rel="noreferrer noopener">ದಿ ಕ್ವಿಂಟ್</a> , <a href="https://www.vishvasnews.com/?fbclid=IwZXh0bgNhZW0CMTEAAR3jMSrVrw6z02x65Cyjll45qy-9C1RTgm3122_VP-yElWn_1RIKfRH8k80_aem_QuYfLY_SrWycAmh48xMwNQ">ವಿಶ್ವಸ್.ನ್ಯೂಸ್ </a>.‌</p>



<p>ಮೆಟಾ ತನ್ನ ಪಾಲಿಸಿಯಲ್ಲಿ ತಂದಿರುವ ಬದಲಾವಣೆಗಳು ಭಾರತದಲ್ಲಿ ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದು ಅಮೇರಿಕಾದಲ್ಲಿ ಆಗುವ ಬದಲಾವಣೆಗಳಿಂದ ಗ್ರಹಿಸಬಹುದು. ಅಧಿಕಾರದಲ್ಲಿ ಇರುವವರಿಗೆ ತಾನು ನೀಡಿದ ಮಾತನ್ನು ಉಳಿಸಿಕೊಳ್ಳಲು ಮೆಟಾ ಈ ರೀತಿಯ ಸರ್ಕಸ್‌ ಮಾಡುತ್ತಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಅಮೇರಿಕಾದಲ್ಲಿ ಏನಾಗಲಿದೆಯೋ, ಅದು ಭಾರತದಲ್ಲೂ ಆಗುವ ಸಾಧ್ಯತೆ ಇದೆ. </p>



<p></p>



<p></p>



<p></p>



<p></p>



<p></p>



<p></p>



<p></p>
]]></content:encoded>
					
		
		
			</item>
		<item>
		<title>ಒಟಿಟಿ, ಸಾಮಾಜಿಕ ಮಾಧ್ಯಮಗಳಿಗೆ &#8216;ಕಠಿಣ&#8217; ಕಾನೂನುಗಳ ಅಗತ್ಯವಿದೆ: ಅಶ್ವಿನಿ ವೈಷ್ಣವ್</title>
		<link>https://peepalmedia.com/strict-law-need-on-ott-and-social-media-ashwini-vaishnaw/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 28 Nov 2024 08:13:19 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[Ashwini Vaishnaw]]></category>
		<category><![CDATA[IT Act]]></category>
		<category><![CDATA[ott]]></category>
		<category><![CDATA[social media]]></category>
		<guid isPermaLink="false">https://peepalmedia.com/?p=49753</guid>

					<description><![CDATA[ಬೆಂಗಳೂರು: ನವೆಂಬರ್ 27, ಬುಧವಾರ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ, ಕೇಂದ್ರ ಮಾಹಿತಿ ಮತ್ತು ಪ್ರಸಾರ, ರೈಲ್ವೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮ ಮತ್ತು ಒಟಿಟಿಯನ್ನು ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸುವ ಬಗ್ಗೆ ಮಾತನಾಡಿದರು.  “ನಾವು ಸಾಮಾಜಿಕ ಮಾಧ್ಯಮ ಮತ್ತು OTT ಪ್ಲಾಟ್‌ಫಾರ್ಮ್‌ಗಳ ಯುಗದಲ್ಲಿ ಜೀವಿಸುತ್ತಿದ್ದೇವೆ. ಹಾಗಿದ್ದರೂ, ಜವಾಬ್ದಾರಿ ಮತ್ತು ಕಂಟೆಂಟ್‌ನ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಸಂಪಾದಕೀಯ ಪರಿಶೀಲನೆಗಳನ್ನು ಒಂದೊಮ್ಮೆ ಅವಲಂಬಿಸಿದ್ದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಪತ್ರಿಕೆಗಳ ಸಾಂಪ್ರದಾಯಿಕ ರೂಪಗಳು [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ನವೆಂಬರ್ 27, ಬುಧವಾರ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ, ಕೇಂದ್ರ ಮಾಹಿತಿ ಮತ್ತು ಪ್ರಸಾರ, ರೈಲ್ವೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ <a href="https://pib.gov.in/PressReleasePage.aspx?PRID=2077854">ಅಶ್ವಿನಿ ವೈಷ್ಣವ್ ಅವರು</a> ಸಾಮಾಜಿಕ ಮಾಧ್ಯಮ ಮತ್ತು ಒಟಿಟಿಯನ್ನು ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸುವ ಬಗ್ಗೆ ಮಾತನಾಡಿದರು. </p>



<p>“ನಾವು ಸಾಮಾಜಿಕ ಮಾಧ್ಯಮ ಮತ್ತು OTT ಪ್ಲಾಟ್‌ಫಾರ್ಮ್‌ಗಳ ಯುಗದಲ್ಲಿ ಜೀವಿಸುತ್ತಿದ್ದೇವೆ. ಹಾಗಿದ್ದರೂ, ಜವಾಬ್ದಾರಿ ಮತ್ತು ಕಂಟೆಂಟ್‌ನ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಸಂಪಾದಕೀಯ ಪರಿಶೀಲನೆಗಳನ್ನು ಒಂದೊಮ್ಮೆ ಅವಲಂಬಿಸಿದ್ದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಪತ್ರಿಕೆಗಳ ಸಾಂಪ್ರದಾಯಿಕ ರೂಪಗಳು ಕಾಲಾನಂತರದಲ್ಲಿ ಈ ರೀತಿ ಪ್ರಕಟಣೆಗೆ ಮುನ್ನ ಪರಿಶೀಲನೆ ನಡೆಸುವುದನ್ನು ಕಡಿಮೆ ಮಾಡಿರುವುದನ್ನು ನೋಡಿದ್ದೇನೆ,&#8221; ಎಂದು ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.</p>



<p>ಈ ಬಗ್ಗೆ ಪಿಐಬಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಅಶ್ವಿನ್‌ ವೈಷ್ಣವ್‌ ಹೇಳಿರುವ ಹೇಳಿಕೆ, &#8220;ಇಂತಹ ಸಂಪಾದಕೀಯ ಮೇಲ್ವಿಚಾರಣೆಯ ಇಲ್ಲದಿರುವುದರಿಂದಾಗಿ, ಸಾಮಾಜಿಕ ಮಾಧ್ಯಮವು ಒಂದು ಕಡೆ ಪತ್ರಿಕಾ ಸ್ವಾತಂತ್ರ್ಯದ ವೇದಿಕೆಯಾದರೆ, ಮತ್ತೊಂದೆಡೆ, ಇದು ಅಸಭ್ಯ ವಿಚಾರಗಳನ್ನು ಹೊಂದಿರುವ ಅನಿಯಂತ್ರಿತ ಅಭಿವ್ಯಕ್ತಿಯ ವೇದಿಕೆಯಾಗಿದೆ,&#8221; ಎಂಬುದು ಪ್ರಕಟವಾಗಿದೆ. </p>



<p>ವೈಷ್ಣವ್ ಅವರು ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಪ್ರತಿಪಾದಿಸಲಾಗಿರುವ ಅಭಿವ್ಯಕ್ತಿಯ ಹಕ್ಕುಗಳನ್ನು ಹತ್ತಿಕ್ಕಲು ಮೋದಿ ಸರ್ಕಾರವು ಆಗಾಗ್ಗೆ ಬಳಸುತ್ತಿದ್ದ ಸಾಂಸ್ಕೃತಿಕ ಅಂಶವನ್ನು ಮತ್ತೆ ಹೇಳಿದರು.</p>



<p>“ಭಾರತದ ಸಾಂಸ್ಕೃತಿಕ ಸೂಕ್ಷ್ಮತೆಗಳು ಈ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಿದ ಪ್ರದೇಶಗಳಿಗಿಂತ ಹೆಚ್ಚು ಭಿನ್ನವಾಗಿವೆ. ಈಗ ಭಾರತದಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಹೆಚ್ಚು ಕಠಿಣಗೊಳಿಸುವುದು ಅನಿವಾರ್ಯವಾಗಿದೆ ಮತ್ತು ಈ ವಿಚಾರದಲ್ಲಿ ಎಲ್ಲರೂ ಒಮ್ಮತಕ್ಕೆ ಬರಬೇಕು,&#8221; ಎಂದು ಅವರು ಒತ್ತಾಯಿಸಿದರು.</p>



<p>ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಅರುಣ್ ಗೋವಿಲ್ (1980 ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರವನ್ನು ಮಾಡಿದ ನಟ) ಸರ್ಕಾರವು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ದುರುಪಯೋಗವನ್ನು ತಡೆಯಲು ಹೆಚ್ಚು ಕಠಿಣವಾದ ಕಾನೂನುಗಳನ್ನು ಮಾಡಲು ಉದ್ದೇಶಿಸಿದೆಯೇ ಎಂಬ ಪ್ರಶ್ನೆಗೆ ಅಶ್ವಿನಿಯವರು ಪ್ರತಿಕ್ರಿಯಿಸಿದರು. </p>



<p>ಸಂಸದೀಯ ಸ್ಥಾಯಿ ಸಮಿತಿಯು ಇದನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕು, &#8220;ಈ ಸವಾಲನ್ನು ಎದುರಿಸಲು ಕಠಿಣ ಕಾನೂನುಗಳ ಜೊತೆಗೆ ಸಾಮಾಜಿಕ ಒಮ್ಮತ ಇರಬೇಕು&#8221; ಎಂದು ಅವರು ಹೇಳಿದರು.</p>



<p>ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 (IT ನಿಯಮಗಳು, 2021) OTT ಪ್ಲಾಟ್‌ಫಾರ್ಮ್‌ಗಳಿಗೆ ನೀತಿ ಸಂಹಿತೆಯನ್ನು ಕಡ್ಡಾಯಗೊಳಿಸಿದೆ. ಪ್ರಕಾಶಕರು ಕಾನೂನಿನಿಂದ ನಿಷೇಧಿಸಲ್ಪಟ್ಟ ಯಾವುದೇ ಕಂಟೆಂಟ್‌ ಅನ್ನು ರವಾನಿಸಬಾರದು ಮತ್ತು ನಿಯಮಗಳು, <a href="https://www.barandbench.com/news/ashwini-vaishnaw-stricter-laws-vulgar-content-social-media-ott-platforms">ವರದಿಗಳ ಬಾರ್ ಮತ್ತು ಬೆಂಚ್‌ಗೆ</a> ನೀಡಲಾದ ಸಾಮಾನ್ಯ ಮಾರ್ಗಸೂಚಿಗಳ ಆಧಾರದ ಮೇಲೆ ಐದು ವರ್ಗಗಳಾಗಿ ಕಂಟೆಂಟಿನ ಪ್ರಾಯ-ಆಧಾರಿತ ವರ್ಗೀಕರಣವನ್ನು ಮಾಡಬೇಕಾಗುತ್ತದೆ.<a href="https://www.barandbench.com/news/ashwini-vaishnaw-stricter-laws-vulgar-content-social-media-ott-platforms"></a></p>



<p>OTT ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಸುರಕ್ಷತೆಗಳನ್ನು ನೀಡಬೇಕು ಮತ್ತು ಕೇವಲ ವಯಸ್ಸಿಗೆ ಸೂಕ್ತವಲ್ಲದ ಕಂಟೆಂಟ್ ಮಕ್ಕಳ ಕೈಗೆ ಸಿಗಲು ದಾರಿ ಮಾಡಿಕೊಡಬಾರದು ಎಂದು ಕೋಡ್ ಕಡ್ಡಾಯಗೊಳಿಸುತ್ತದೆ.</p>



<p>ಐಟಿ ನಿಯಮಗಳು, 2021 ಯುಟ್ಯೂಬ್ ಮತ್ತು ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳು ತಮ್ಮ ಬಳಕೆದಾರರು “ಅಶ್ಲೀಲ, ಅಶ್ಲೀಲ, ಪೀಡೋಫಿಲಿಕ್, ಇನ್ನೊಬ್ಬರ ಗೌಪ್ಯತೆಯ ಮೇಲೆ ದಾಳಿ ನಡೆಸುವ, ಲಿಂಗದ ಆಧಾರದ ಮೇಲೆ ಅವಮಾನಿಸುವ ಅಥವಾ ಕಿರುಕುಳ ನೀಡುವ, ಜನಾಂಗೀಯವಾಗಿ ಅಥವಾ ಜನಾಂಗೀಯವಾಗಿ ಆಕ್ಷೇಪಾರ್ಹ, ಮಕ್ಕಳಿಗೆ ಹಾನಿಕಾರಕವಾದ ಯಾವುದೇ ಮಾಹಿತಿಯನ್ನು ಹೋಸ್ಟ್, ಡಿಸ್‌ಪ್ಲೇ, ಅಪ್‌ಲೋಡ್, ಮಾರ್ಪಡಿಸುವುದು, ಪ್ರಕಟಿಸುವುದು, ರವಾನೆ ಮಾಡುವುದು ಇತ್ಯಾದಿಗಳನ್ನು ಮಾಡಲು ಅವಕಾಶ ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಮಂಜಸವಾದ ಪ್ರಯತ್ನಗಳನ್ನು ಮಾಡುವುದು ಕಡ್ಡಾಯವಾಗಿದೆ.&#8221;</p>



<p>ಫೆಬ್ರವರಿ 2021 ರಲ್ಲಿ, ಸರ್ಕಾರವು ಡಿಜಿಟಲ್ ಮತ್ತು OTT ಪ್ಲಾಟ್‌ಫಾರ್ಮ್‌ಗಳ ಮೇಲೆ ತನ್ನ ನಿಯಂತ್ರಣವನ್ನು ಮೂರು-ಹಂತದ ಕಾರ್ಯವಿಧಾನದೊಂದಿಗೆ ಔಪಚಾರಿಕವಾಗಿ ಬಿಗಿಗೊಳಿಸಿತು, ಇದನ್ನು <a href="https://www.livemint.com/industry/media/ashwini-vaishnaw-social-media-regulations-ott-regulations-freedom-of-press-winter-session-11732716796160.html">&#8220;ಸಾಫ್ಟ್-ಟಚ್ ರೆಗ್ಯುಲೇಟರಿ ಆರ್ಕಿಟೆಕ್ಚರ್&#8221; ಎಂದು ಕರೆಯಲಾಗುತ್ತದೆ.</a> ಮೊದಲ ಎರಡು ಹಂತಗಳು ಸ್ವಯಂ ನಿಯಂತ್ರಣದ ವ್ಯವಸ್ಥೆಯನ್ನು ಜಾರಿಗೆ ತಂದವು, ನಿರ್ಣಾಯಕ ಮೂರನೆಯದು ಕೇಂದ್ರ ಸರ್ಕಾರದ ಅಧಿಕಾರಿಗಳು ನಿರ್ವಹಿಸುವ ಮೇಲ್ವಿಚಾರಣಾ ಕಾರ್ಯವಿಧಾನಕ್ಕೆ ಅವಕಾಶ ನೀಡುತ್ತದೆ. ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ಟೀಕೆಗೆ ಒಳಗಾಗಿತ್ತು.  </p>



<p>2023 ರ ಅಗಸ್ಟ್‌ನಲ್ಲಿ, ಇಂಟರ್ನೆಟ್ ಫ್ರೀಡಂ ಫೌಂಡೇಶನ್ OTT ಕಂಟೆಂಟ್ ಅನ್ನು ನಿಯಂತ್ರಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ವಿವರವಾದ <a href="https://trai.gov.in/sites/default/files/Internet_Freedom_Foundation_01092023.pdf">ಪ್ರತಿಕ್ರಿಯೆಯನ್ನು ಸಲ್ಲಿಸಿ, </a>&#8220;OTT ಸೇವೆಗಳ ಆಯ್ದ ನಿಷೇಧದ ವಿಧಾನದ ಬಗ್ಗೆ ಆತಂಕವಿದೆ, ಅದರ ತಾತ್ಕಾಲಿಕ, ಅಸ್ಪಷ್ಟ ಮತ್ತು ಅಪ್ರಾಯೋಗಿಕ ಅನ್ವಯವನ್ನು ನೀಡಲಾಗಿದೆ, ಮತ್ತು ಅದು ಬಳಕೆದಾರರ ಆಯ್ಕೆ ಮತ್ತು ಸ್ವಾತಂತ್ರ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಬಹುದಾದ,&#8221; ಎಂದು ಹೇಳಿತ್ತು.</p>



<p></p>
]]></content:encoded>
					
		
		
			</item>
		<item>
		<title>ಸೋಷಿಯಲ್‌ ಮೀಡಿಯಾ&#124; ಕಣ್ತಪ್ಪಿನಿಂದ ಫಾರ್ವರ್ಡ್‌ ಮಾಡುವುದು ಕೂಡಾ ತಪ್ಪು: ಸುಪ್ರೀಂ ಕೋರ್ಟ್</title>
		<link>https://peepalmedia.com/it-wrong-to-forward-a-message-by-mistake-too/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 19 Aug 2023 06:04:11 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[india]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[social media]]></category>
		<guid isPermaLink="false">https://peepalmedia.com/?p=25921</guid>

					<description><![CDATA[ಹೊಸದಿಲ್ಲಿ: ಓದದೆ ಅಥವಾ ಯೋಚಿಸದೆ ಸಾಮಾಜಿಕ ಮಾಧ್ಯಮದಲ್ಲಿ (Social media) ಅಶ್ಲೀಲ ಮತ್ತು ಅವಮಾನಕರ ಪೋಸ್ಟ್‌ಗಳನ್ನು ಯಾಂತ್ರಿಕವಾಗಿ ಫಾರ್ವರ್ಡ್ ಮಾಡುವುದು ಸಹ ತಪ್ಪು ಮತ್ತು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನಟ ಹಾಗೂ ಮಾಜಿ ಶಾಸಕ ಎಸ್.ವಿ.ಶೇಖರ್ ಅವರ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ಆರ್.ಗವಾರ್ ಮತ್ತು ನ್ಯಾಯಮೂರ್ತಿ ಪಿ.ಕೆ.ಮಿಶ್ರಾ ಅವರನ್ನೊಳಗೊಂಡ ಪೀಠವು ಹೀಗೆ ಹೇಳಿದೆ. ಮಹಿಳಾ ಪತ್ರಕರ್ತರ ಕುರಿತು ಅಶ್ಲೀಲ ಪೋಸ್ಟ್‌ಗಳನ್ನು ಫಾರ್ವರ್ಡ್ ಮಾಡಿದ ಆರೋಪ ಶೇಖರ್ ಮೇಲಿದೆ. ಅವರು ತಾನು ಅದನ್ನು ಫಾರ್ವರ್ಡ್‌ [&#8230;]]]></description>
										<content:encoded><![CDATA[
<p>ಹೊಸದಿಲ್ಲಿ: ಓದದೆ ಅಥವಾ ಯೋಚಿಸದೆ ಸಾಮಾಜಿಕ ಮಾಧ್ಯಮದಲ್ಲಿ (Social media) ಅಶ್ಲೀಲ ಮತ್ತು ಅವಮಾನಕರ ಪೋಸ್ಟ್‌ಗಳನ್ನು ಯಾಂತ್ರಿಕವಾಗಿ ಫಾರ್ವರ್ಡ್ ಮಾಡುವುದು ಸಹ ತಪ್ಪು ಮತ್ತು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.</p>



<p>ನಟ ಹಾಗೂ ಮಾಜಿ ಶಾಸಕ ಎಸ್.ವಿ.ಶೇಖರ್ ಅವರ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ಆರ್.ಗವಾರ್ ಮತ್ತು ನ್ಯಾಯಮೂರ್ತಿ ಪಿ.ಕೆ.ಮಿಶ್ರಾ ಅವರನ್ನೊಳಗೊಂಡ ಪೀಠವು ಹೀಗೆ ಹೇಳಿದೆ.</p>



<p>ಮಹಿಳಾ ಪತ್ರಕರ್ತರ ಕುರಿತು ಅಶ್ಲೀಲ ಪೋಸ್ಟ್‌ಗಳನ್ನು ಫಾರ್ವರ್ಡ್ ಮಾಡಿದ ಆರೋಪ ಶೇಖರ್ ಮೇಲಿದೆ. ಅವರು ತಾನು ಅದನ್ನು ಫಾರ್ವರ್ಡ್‌ ಮಾಡಿದಾಗ ಕಣ್ಣಿಗೆ ಡ್ರಾಪ್‌ ಹಾಕಿಕೊಂಡಿದ್ದೆ. ಆಕಸ್ಮಾತ್ ಬೆರಳು ಸೆಂಡ್‌ ಬಟನ್‌ ಒತ್ತಿದ ಕಾರಣ ಹೀಗಾಯಿತು ಎಂದು ಕೋರ್ಟಿನೆದುರು ಹೇಳಿದ್ದರು.</p>



<p>ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್‌ ಕಣ್ಣಿನ ಹನಿ ಜಾಕಿಕೊಂಡಿರುವಾಗಲೂ ಸೋಷಿಯಲ್‌ ಮೀಡಿಯಾ ಏಕೆ ಬಳಸಬೇಕಿತ್ತು ಎಂದು ಕೇಳಿದೆ.</p>



<p>ಸೋಷಿಯಲ್‌ ಮೀಡಿಯಾ ಬಳಸುವಾಗ ಅದರ ಪರಿಣಾಮಗಳ ಕುರಿತು ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಕಾಗುವುದಿಲ್ಲ. ಸೋಷಿಯಲ್‌ ಮೀಡಿಯಾ ಎನ್ನವುದು ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆಯೆನ್ನುವುದು ಎಷ್ಟು ನಿಜವೋ, ಸೋಷಿಯಲ್‌ ಮೀಡಿಯಾ ಬಳಸುವವರಿಗೆ ಸ್ವಯಂ ನಿಯಂತ್ರಣವೂ ಅಷ್ಟೇ ಅಗತ್ಯ ಎನ್ನುವುದು ಕೂಡಾ ನಿಜ.</p>



<p>ಇತ್ತೀಚೆಗೆ ನಟ ಉಪೇಂದ್ರ ಕೂಡಾ ಸೋಷಿಯಲ್‌ ಮೀಡಿಯಾ ವಿಡಿಯೋ ಒಂದರಲ್ಲಿ ತನ್ನ ನಾಲಗೆ ಹರಿಬಿಟ್ಟು ನೀಚ ಗಾದೆಯ ಮೂಲಕ ಪೇಚಿಗೆ ಸಿಲುಕಿ ತಲೆ ಮರೆಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.</p>



<p>ಶೇಖರ್‌ ಅವರ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿತ್ತು. ಶೇಖರ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಪೀಠ ಅವಕಾಶ ನೀಡಿರಡಲಿಲ್ಲ.</p>
]]></content:encoded>
					
		
		
			</item>
		<item>
		<title>ಅಹೋರಾತ್ರ ಎಂಬ ವ್ಯಕ್ತಿಯ ಹತ್ಯೆಗೆ ಸಂಚು? ; ಜಾಲತಾಣಗಳಲ್ಲಿ ವೈರಲ್ ಆಗ್ತಿರೋ ಆಡಿಯೋದಲ್ಲಿ ಏನಿದೆ ಗೊತ್ತಾ?</title>
		<link>https://peepalmedia.com/murder-plan-secret-revealed-ahoratra-rushikumar/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 18 Nov 2022 08:59:46 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[Ahoratra]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Rushikumar]]></category>
		<category><![CDATA[social media]]></category>
		<category><![CDATA[Viral Audio]]></category>
		<guid isPermaLink="false">https://peepalmedia.com/?p=15824</guid>

					<description><![CDATA[ಧರ್ಮರಕ್ಷಕ ಸ್ವಾಮಿ ಎಂಬ ಹಣೆಪಟ್ಟಿ ಹೊತ್ತ ಋಷಿ ಕುಮಾರ ಮತ್ತು ಆತನ ಸಹಚರ ಎಂದು ಗುರುತಿಸಿಕೊಂಡಿರುವ ಸುರೇಶ್ ಕುಮಾರ್ ಎಂಬ ವ್ಯಕ್ತಿ ಇಬ್ಬರೂ ದೂರವಾಣಿಯಲ್ಲಿ ಮಾತನಾಡಿಕೊಂಡ ಆಡಿಯೋ ಒಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಡಿಯೋದಲ್ಲಿ ಅಹೋರಾತ್ರ ಎಂಬ ವ್ಯಕ್ತಿಯ ಹತ್ಯೆಗೆ? ಸಂಬಂಧಿಸಿದಂತೆ ಇಬ್ಬರೂ ಮಾತನಾಡಿದ ಸ್ಪೋಟಕ ವಿಚಾರಗಳು ಬೆಳಕಿಗೆ ಬಂದಿದೆ. ಹಿನ್ನೆಲೆ: ವೃಕ್ಷ ರಕ್ಷ ಎಂಬ ಸಂಸ್ಥೆ ಮೂಲಕ ಪರಿಸರ ರಕ್ಷಣೆ ಕಾರ್ಯ ಮಾಡುವ ಹೋರಾತ್ರ ಎಂಬುವವರು ಇತ್ತೀಚಿಗೆ ಮಠ ಸಿನಿಮಾ ವಿರುದ್ಧ ಧ್ವನಿ ತೆಗೆದ ಋಷಿಕುಮಾರನನ್ನು [&#8230;]]]></description>
										<content:encoded><![CDATA[
<p style="font-size:20px">ಧರ್ಮರಕ್ಷಕ ಸ್ವಾಮಿ ಎಂಬ ಹಣೆಪಟ್ಟಿ ಹೊತ್ತ ಋಷಿ ಕುಮಾರ ಮತ್ತು ಆತನ ಸಹಚರ ಎಂದು ಗುರುತಿಸಿಕೊಂಡಿರುವ ಸುರೇಶ್ ಕುಮಾರ್ ಎಂಬ ವ್ಯಕ್ತಿ ಇಬ್ಬರೂ ದೂರವಾಣಿಯಲ್ಲಿ ಮಾತನಾಡಿಕೊಂಡ <a href="https://fb.watch/gS_zDKjl4N/?mibextid=RUbZ1f" data-type="URL" data-id="https://fb.watch/gS_zDKjl4N/?mibextid=RUbZ1f">ಆಡಿಯೋ</a> ಒಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಡಿಯೋದಲ್ಲಿ ಅಹೋರಾತ್ರ ಎಂಬ ವ್ಯಕ್ತಿಯ ಹತ್ಯೆಗೆ? ಸಂಬಂಧಿಸಿದಂತೆ ಇಬ್ಬರೂ ಮಾತನಾಡಿದ ಸ್ಪೋಟಕ ವಿಚಾರಗಳು ಬೆಳಕಿಗೆ ಬಂದಿದೆ.</p>



<p style="font-size:20px">ಹಿನ್ನೆಲೆ: ವೃಕ್ಷ ರಕ್ಷ ಎಂಬ ಸಂಸ್ಥೆ ಮೂಲಕ ಪರಿಸರ ರಕ್ಷಣೆ ಕಾರ್ಯ ಮಾಡುವ ಹೋರಾತ್ರ ಎಂಬುವವರು ಇತ್ತೀಚಿಗೆ ಮಠ ಸಿನಿಮಾ ವಿರುದ್ಧ ಧ್ವನಿ ತೆಗೆದ ಋಷಿಕುಮಾರನನ್ನು ಟೀಕಿಸಿದ್ದರು. ಅಲ್ಲದೆ ವೇಶ್ಯಾವಾಟಿಕೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಪುನೀತ್ ಕೆರೆಹಳ್ಳಿ ಎಂಬಾತನಿಗೆ ಬೆಂಬಲ ನೀಡುತ್ತಿರುವುದನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಋಷಿಕುಮಾರ ಮತ್ತು ಸುರೇಶ್ ಕುಮಾರ ಎಂಬುವವರ ನಡುವೆ ನಡೆದ ಮಾತುಕತೆಯ ಆಡಿಯೋ ಈಗ ವೈರಲ್ ಆಗಿದೆ.</p>



<p style="font-size:20px">35 ನಿಮಿಷಗಳ ಇವರಿಬ್ಬರ <a href="https://youtu.be/N2lOPb4ulVQ" data-type="URL" data-id="https://youtu.be/N2lOPb4ulVQ">ಸಂಭಾಷಣೆಯಲ್ಲಿ</a> ಋಷಿಕುಮಾರ ಮತ್ತು ಸುರೇಶ್ ಕುಮಾರ ಇಬ್ಬರೂ ಅಹೋರಾತ್ರ ಎಂಬ ವ್ಯಕ್ತಿಯ ಮೇಲೆ ಹೇಗೆ ಹಲ್ಲೆ ನಡೆಸಬೇಕು, ಯಾವ ರೀತಿಯಲ್ಲಿ ಹತ್ಯೆ ಮಾಡಬೇಕು ಎಂದು ನಡೆಸಿದ ಮಾತುಕತೆ ಭೀಕರವಾಗಿದೆ. ತನಗೆ ಆಗದ, ತನ್ನ ವಿರುದ್ಧ ನಡೆಯುವ ಎಂತಹವರನ್ನೂ ಮಟ್ಟ ಹಾಕಬೇಕು, ಇವರನ್ನು ಬೆಳೆಯಲು ಬಿಡಬಾರದು ಎನ್ನುವ ಅಂಶಗಳನ್ನು ಒತ್ತಿ ಹೇಳುವ ಋಷಿಕುಮಾರ ಅಹೋರಾತ್ರರನ್ನು ಹೇಗೆ &#8216;ಹೊಡೆಯಬೇಕು&#8217; ಎಂಬುದರ ಕುರಿತೇ 35 ನಿಮಿಷಗಳ ಕಾಲ ಮಾತನಾಡಿದ್ದಾರೆ.</p>



<p style="font-size:20px">ಆಡಿಯೋ ಸಂಭಾಷಣೆಯ ಅಷ್ಟೂ ಮಾತುಕತೆಯಲ್ಲಿ ಋಷಿಕುಮಾರ ಎಂಬ ಸ್ವಾಮೀಜಿ ವೇಷದ ವ್ಯಕ್ತಿ ಅತ್ಯಂತ ಕೆಟ್ಟ ಮತ್ತು ತುಚ್ಛ ಪದಗಳ ಬಳಕೆಯನ್ನು ಮಾಡಿದ್ದಾನೆ. ಜೊತೆಗೆ ತಾನು ಮಾತನಾಡುವುದೇ ಹೀಗೆ, ನಾನೊಂತರಾ ಡಿಫರೆಂಟ್ ಸ್ವಾಮೀಜಿ ಎಂದು ತನ್ನ ಪದ ಬಳಕೆಯನ್ನು ಸಮರ್ಥಿಸಿಕೊಂಡಿದ್ದಾನೆ. ಮಾತುಕತೆಯ ಅಷ್ಟೂ ಹೊತ್ತು ಹೆಣ್ಣಿನ ಸಂಬಂಧಿತ ಬೈಗುಳಗಳು, ಅಮ್ಮನ್, ಅಕ್ಕನ್ ಪದಗಳೇ ಹೆಚ್ಚು ಮಾತನಾಡಿದ್ದು ಒಬ್ಬ ಕಾವಿಧಾರಿ ವ್ಯಕ್ತಿ ಇಷ್ಟು ಕೆಳಮಟ್ಟಕ್ಕೂ ಇಳಿಯಬಲ್ಲನೇ ಎಂಬಂತೆ ಯೋಚಿಸುವಂತಿದೆ.</p>



<p style="font-size:20px">ಸಂಭಾಷಣೆಯಲ್ಲಿ ಅಹೋರಾತ್ರನನ್ನು ಹೊಡೆಯುವ ಬಗ್ಗೆ ಮಾತನಾಡುತ್ತಾ &#8220;ಆಹೋರಾತ್ರನನ್ನು ಕಡಿದು ತುಂಡುತುಂಡು ಮಾಡಿ ಮಾವಿನ‌ಮರದ ಕೆಳಗೆ ಕೂತುಹಾಕಬೇಕು, ಆಹೋರಾತ್ರನ್ನ ಉಪಾಯವಾಗಿ ಹೊರಗೆ ಕರೆದುಕೊಂಡು ಬರಬೇಕು&#8221; ಎಂಬ ಮಾತನ್ನು ಋಷಿಕುಮಾರ ಆಗಿದ್ದಾನೆ. ನಂತರ ಹೊಡೀಬೇಕು ಹೂತು ಹಾಕಬೇಕು ಎಂಬ ಮಾತುಗಳು ಭೀಕರವಾಗಿದೆ.<font style="vertical-align: inherit;"><font style="vertical-align: inherit;"><font style="vertical-align: inherit;"><font style="vertical-align: inherit;"></font></font></font></p>



<p style="font-size:20px">ಜಾಲತಾಣಗಳಲ್ಲಿ ಅಹೋರಾತ್ರರ ಹತ್ಯೆ ಮತ್ತು ಹಲ್ಲೆಗೆ ಸಂಬಂಧಿಸಿದ ಸಂಚಿನ ಆಡಿಯೋ ವೈರಲ್ ಆಗಿದ್ದರೂ ಋಷಿಕುಮಾರ ಮತ್ತು ಸುರೇಶ್ ಕುಮಾರ ಎಂಬುವವನ ಮೇಲೆ ಇಲ್ಲಿಯವರೆಗೂ ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ಬಗ್ಗೆ ಅಹೋರಾತ್ರರ<font style="vertical-align: inherit;"><font style="vertical-align: inherit;">ನ್ನು ಪೀಪಲ್ ಮೀಡಿಯಾ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕ ಲಭ್ಯವಾಗಿಲ್ಲ.</font></font></p>
]]></content:encoded>
					
		
		
			</item>
		<item>
		<title>ಊಟಿಯಲ್ಲಿ ಕಾಣಿಸಿಕೊಂಡ ಹುಲಿ: ಬೆಚ್ಚಿಬಿದ್ದ ನೆಟ್ಟಿಗರು</title>
		<link>https://peepalmedia.com/ootiyalli-kaanisikonda-huli-becchibidda-nettigaru/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 04 Nov 2022 13:47:19 +0000</pubDate>
				<category><![CDATA[ಚಾಮರಾಜನಗರ]]></category>
		<category><![CDATA[bengalure]]></category>
		<category><![CDATA[chamarajnagar]]></category>
		<category><![CDATA[forest]]></category>
		<category><![CDATA[kannada]]></category>
		<category><![CDATA[ooti]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[social media]]></category>
		<category><![CDATA[tiger]]></category>
		<category><![CDATA[uti]]></category>
		<category><![CDATA[writing]]></category>
		<guid isPermaLink="false">https://peepalmedia.com/?p=14217</guid>

					<description><![CDATA[ಚಾಮರಾಜನಗರ: ಅರಣ್ಯಾಧಿಕಾರಿಯೊಬ್ಬರು ಸೆರೆ ಹಿಡಿದ ವಿಡೀಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಅರಣ್ಯ ನಾಶದ ಚರ್ಚೆಗೆ ನಾಂದಿ ಹಾಡಿದೆ. ಬಹಳಷ್ಟು ಜನರು ಈ ವಿಡಿಯೋವನ್ನು ಶೇರ್‌ ಮಾಡಿಕೊಂಡು ಹುಲಿ ಮತ್ತು ಅದರ ಆವಾಸಸ್ಥಾನಗಳ ಕುರಿತು ಚರ್ಚೆ ಮಾಡಲಾರಂಭಿಸಿದ್ದಾರೆ. ಐಆರ್‌ಎಸ್‌ ಅಧಿಕಾರಿಯಾದ ಅನಂತ್‌ ರೂಪನಗುಡಿಯವರು ಟ್ವಿಟರ್‌ ಮೂಲಕ ಹಂಚಿಕೊಂಡಿರುವ ವಿಡಿಯೋ ಮತ್ತು ಫೋಟೊಗಳಲ್ಲಿ ಹುಲಿಯ ವಿವಿಧ ಭಾವ ಭಂಗಿಗಳು ಮತ್ತು ಅದು ಆಗಷ್ಟೇ ಹಿಡಿದ ಬೇಟೆಯನ್ನು ಎಳೆದೊಯ್ಯುತ್ತಿರುವುದನ್ನು ಕಾಣಬಹುದಾಗಿದೆ. ಈ ಬೇಟೆಗೆ ಬಂದಿರುವ ಹುಲಿಯ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ [&#8230;]]]></description>
										<content:encoded><![CDATA[
<p><strong>ಚಾಮರಾಜನಗರ:</strong> ಅರಣ್ಯಾಧಿಕಾರಿಯೊಬ್ಬರು ಸೆರೆ ಹಿಡಿದ ವಿಡೀಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಅರಣ್ಯ ನಾಶದ ಚರ್ಚೆಗೆ ನಾಂದಿ ಹಾಡಿದೆ. ಬಹಳಷ್ಟು ಜನರು ಈ ವಿಡಿಯೋವನ್ನು ಶೇರ್‌ ಮಾಡಿಕೊಂಡು ಹುಲಿ ಮತ್ತು ಅದರ ಆವಾಸಸ್ಥಾನಗಳ ಕುರಿತು ಚರ್ಚೆ ಮಾಡಲಾರಂಭಿಸಿದ್ದಾರೆ.</p>



<p>ಐಆರ್‌ಎಸ್‌ ಅಧಿಕಾರಿಯಾದ ಅನಂತ್‌ ರೂಪನಗುಡಿಯವರು ಟ್ವಿಟರ್‌ ಮೂಲಕ ಹಂಚಿಕೊಂಡಿರುವ ವಿಡಿಯೋ ಮತ್ತು ಫೋಟೊಗಳಲ್ಲಿ ಹುಲಿಯ ವಿವಿಧ ಭಾವ ಭಂಗಿಗಳು ಮತ್ತು ಅದು ಆಗಷ್ಟೇ ಹಿಡಿದ ಬೇಟೆಯನ್ನು ಎಳೆದೊಯ್ಯುತ್ತಿರುವುದನ್ನು ಕಾಣಬಹುದಾಗಿದೆ. ಈ ಬೇಟೆಗೆ ಬಂದಿರುವ ಹುಲಿಯ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್‌ ಆಗುತ್ತಿದ್ದು, ಜನರು ಕಾಮೆಂಟ್‌ಗಳ ಮುಖಾಂತರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.</p>



<p>ಈ ಕುರಿತು ಕಾಮೆಂಟ್‌ ಮಾಡಿರುವ ಶ್ರೀಮೋಯಿ ಚೌಧರಿಯರು, ʼಸಫಾರಿಗಳ ಸಮಯದಲ್ಲಿಯೂ &nbsp;ಹುಲಿಯನ್ನು ಗುರುತಿಸುವುದು ತುಂಬಾ ಕಷ್ಟಕರವಾಗಿದೆ. ಅದಕ್ಕಾಗಿಯೇ ಊಟಿಯ ಇಂದು ನಗರದ ಮೀಸಲು ಅರಣ್ಯದ ಅಂಚಿನಲ್ಲಿ ಹುಲಿ ಕಾಣಿಸಿಕೊಂಡಾಗ ಜನರು ಆಘಾತಕ್ಕೊಳಗಾಗಿದ್ದಾರೆ. ಭವ್ಯವಾದ ಹುಲಿಯ ವೀಡಿಯೊಗಳು ಮತ್ತು ಚಿತ್ರಗಳು ಈಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿವೆʼ ಎಂದು ಹೇಳಿದ್ದಾರೆ.</p>



<p>ಹುಲಿಯು ಮಾನವ ವಾಸಸ್ಥಾನಕ್ಕೆ ಇಷ್ಟು ಹತ್ತಿರದಲ್ಲಿ ಇರುವುದನ್ನು ನೋಡಿ ಜನರು ಆಘಾತಕ್ಕೊಳಗಾಗಿದ್ದಾರೆ. ನೈಸರ್ಗಿಕ ಆವಾಸಸ್ಥಾನದ ನಾಶವು ಹೇಗೆ ಹುಲಿಗಳನ್ನು ಕಾಡಿನ ಹೊರಗೆ ಬರುವಂತೆ ಮಾಡಿದೆ ಎಂಬುದರ ಬಗ್ಗೆ ಅನೇಕರು ಬರೆದಿದ್ದಾರೆ.</p>



<p>&#8220;ಮನುಷ್ಯರು ಇರುವಾಗ ಆ ಹುಲಿಗಳು ಎಚ್ಚರದಿಂದ ಇರಬೇಕು. ನಮ್ಮ ಮನರಂಜನೆಗಾಗಿ ನಾವು ಅವುಗಳ ವಾಸದ ಸ್ಥಳವನ್ನು ಅತಿಕ್ರಮಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ&#8221; ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ. &#8220;ಹುಲಿ ತುಂಬಾ ಸುಂದರವಾಗಿ ಕಾಣುತ್ತಿದೆ&#8221; ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.</p>



<p>“ಇದು ಮಾನವರು ಅರಣ್ಯವನ್ನು ಮಿತಿಯಿಲ್ಲದೆ ಆಕ್ರಮಿಸಿರುವುದರ ಸ್ಪಷ್ಟ ಸೂಚನೆಯಾಗಿದೆ. ಹುಲಿಗಳು ಜಾನುವಾರುಗಳ ಮೇಲೆ ದಾಳಿಗಿಳಿಯುವುದು ಅವು ಮುಂದೆ ಮನುಷ್ಯರನ್ನು ತಿನ್ನಲು ತೊಡಗುವುದರ ಮುನ್ಸೂಚನೆಯಾಗಿದೆ. ಇಂತಹ ಬೆಳವಣಿಗೆ ನನ್ನನ್ನು ನೋವಿಗೆ ದೂಡುತ್ತಿದೆ.” ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.</p>
]]></content:encoded>
					
		
		
			</item>
		<item>
		<title>ಲಕ್ಷಗಟ್ಟಲೆ Spam ಖಾತೆಗಳಿಗೆ ಕತ್ತರಿ ಹಾಕಿದ ವಾಟ್ಸಾಪ್!</title>
		<link>https://peepalmedia.com/whatsapp-cut-millions-of-spam-accounts/</link>
		
		<dc:creator><![CDATA[Peepal Media]]></dc:creator>
		<pubDate>Wed, 02 Nov 2022 02:32:03 +0000</pubDate>
				<category><![CDATA[ವಿಶೇಷ]]></category>
		<category><![CDATA[Central Government]]></category>
		<category><![CDATA[india]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[social media]]></category>
		<guid isPermaLink="false">https://peepalmedia.com/?p=13672</guid>

					<description><![CDATA[2021 ರ ಹೊಸ ಮಾಹಿತಿ ತಂತ್ರಜ್ಞಾನದ ನಿಯಮಗಳ ಅಡಿಯಲ್ಲಿ ಕೇವಲ ಸೆಪ್ಟೆಂಬರ್ ತಿಂಗಳ ಒಂದರಲ್ಲೇ ಭಾರತದಲ್ಲಿ 26 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಮೆಟಾ-ಮಾಲೀಕತ್ವದ &#8216;ವಾಟ್ಸಾಪ್&#8217; ಮಂಗಳವಾರ ಹೇಳಿದೆ. ಸಾಮಾಜಿಕ ಮಾಧ್ಯಮದಂತಹ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ಹಾಕಲು ವಾಟ್ಸಾಪ್ ನಲ್ಲಿ ಹಲವು ತಿದ್ದುಪಡಿ ಮಾಡಲಾಗುತ್ತಿದ್ದು, ಕೆಲವು ವರ್ಷಗಳ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದೆ.&#160; ಒಟ್ಟಾರೆ ದೇಶದಲ್ಲಿ ಸುಮಾರು 500 ಮಿಲಿಯನ್ ಬಳಕೆದಾರರನ್ನು ಹೊಂದಿರುವ (ಥರ್ಡ್ ಪಾರ್ಟಿ ಡೇಟಾ ಪ್ರಕಾರ) ವಾಟ್ಸಾಪ್ ಮೆಸೇಜಿಂಗ್ ವಲಯ, ಭಾರತದಲ್ಲಿ [&#8230;]]]></description>
										<content:encoded><![CDATA[
<p style="font-size:20px">2021 ರ ಹೊಸ ಮಾಹಿತಿ ತಂತ್ರಜ್ಞಾನದ ನಿಯಮಗಳ ಅಡಿಯಲ್ಲಿ ಕೇವಲ ಸೆಪ್ಟೆಂಬರ್ ತಿಂಗಳ ಒಂದರಲ್ಲೇ ಭಾರತದಲ್ಲಿ 26 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಮೆಟಾ-ಮಾಲೀಕತ್ವದ &#8216;ವಾಟ್ಸಾಪ್&#8217; ಮಂಗಳವಾರ ಹೇಳಿದೆ. ಸಾಮಾಜಿಕ ಮಾಧ್ಯಮದಂತಹ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ಹಾಕಲು ವಾಟ್ಸಾಪ್ ನಲ್ಲಿ ಹಲವು ತಿದ್ದುಪಡಿ ಮಾಡಲಾಗುತ್ತಿದ್ದು, ಕೆಲವು ವರ್ಷಗಳ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದೆ.&nbsp;</p>



<p style="font-size:20px">ಒಟ್ಟಾರೆ ದೇಶದಲ್ಲಿ ಸುಮಾರು 500 ಮಿಲಿಯನ್ ಬಳಕೆದಾರರನ್ನು ಹೊಂದಿರುವ (ಥರ್ಡ್ ಪಾರ್ಟಿ ಡೇಟಾ ಪ್ರಕಾರ) ವಾಟ್ಸಾಪ್ ಮೆಸೇಜಿಂಗ್ ವಲಯ, ಭಾರತದಲ್ಲಿ ಕೇವಲ ಸೆಪ್ಟೆಂಬರ್ ಒಂದೇ ತಿಂಗಳಲ್ಲಿ 666 ದೂರು ವರದಿಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿಕೊಂಡಿದೆ. ಈ ದೂರುಗಳ ಅನ್ವಯ ಇಲ್ಲಿಯ ವರೆಗೆ 23 ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ.</p>



<p style="font-size:20px">&#8220;ಮಾಹಿತಿ ತಂತ್ರಜ್ಞಾನ ನಿಯಮಗಳು 2021 ರ ಪ್ರಕಾರ, ನಾವು &#8216;ಸೆಪ್ಟೆಂಬರ್ 2022 ರ ತಿಂಗಳಿಗೆ ನಮ್ಮ ವರದಿಯನ್ನು ಪ್ರಕಟಿಸಿದ್ದೇವೆ. ಬಳಕೆದಾರ ಸುರಕ್ಷತಾ ದೃಷ್ಟಿಯಿಂದ ಬಳಕೆದಾರರ ಕಡೆಯಿಂದ ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ಇದಕ್ಕೆ ಅನುಗುಣವಾಗಿ WhatsApp ಕೈಗೊಂಡ ಕ್ರಮಗಳ ಬಗ್ಗೆ ಪ್ರಕಟಿಸಿದ್ದೇವೆ. ಇದರ ಜೊತೆಗೆ ನಮ್ಮ ಪ್ಲಾಟ್ಫಾರ್ಮ್ನಲ್ಲಿನ ದುರ್ಬಳಕೆಯನ್ನು ತಡೆಗಟ್ಟಲು ಮತ್ತು ಅದನ್ನು ಎದುರಿಸಲು ಮಾಹಿತಿ ತಂತ್ರಜ್ಞಾನದ ನಿಯಮಗಳ ಹೊರತಾಗಿ WhatsApp ಸ್ವಂತ ತಡೆಗಟ್ಟುವ ಕ್ರಮಗಳನ್ನು ಕೂಡ ಒಳಗೊಂಡಿದೆ&#8221; ಎಂದು &#8216;ವಾಟ್ಸಾಪ್&#8217; ಹೇಳಿಕೆಯಲ್ಲಿ ತಿಳಿಸಿದೆ.</p>



<p style="font-size:20px">2021 ರ ನವೀಕರಣಗೊಂಡ ಮಾಹಿತಿ ತಂತ್ರಜ್ಞಾನ ನಿಯಮ 2021 ರ ಅಡಿಯಲ್ಲಿ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸಬೇಕು. ಏತನ್ಮಧ್ಯೆ, ಮುಕ್ತ, ಸುರಕ್ಷಿತ, ವಿಶ್ವಾಸಾರ್ಹತೆ ಉಳಿಸುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು &#8220;ಡಿಜಿಟಲ್ ನಾಗರೀಕರ&#8221; ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಕೆಲವು ತಿದ್ದುಪಡಿಗಳನ್ನು ಸೂಚಿಸಿದೆ. ಈ ನಿಯಮಗಳ ಅಡಿಯಲ್ಲಿ ವಾಟ್ಸಾಪ್ ಸಂಸ್ಥೆ ಆಗಸ್ಟ್‌ ತಿಂಗಳಲ್ಲೂ ಸಹ ಭಾರತದಲ್ಲಿ 23 ಲಕ್ಷಕ್ಕೂ ಹೆಚ್ಚು Spam ಖಾತೆಗಳನ್ನು ನಿಷೇಧಿಸಿತ್ತು.</p>
]]></content:encoded>
					
		
		
			</item>
		<item>
		<title>ಆಮ್‌ ಆದ್ಮಿ ಪಕ್ಷದ ಕಚೇರಿ ಮೇಲೆ ಪೊಲೀಸ್‌ ದಾಳಿ ಸುಳ್ಳು!</title>
		<link>https://peepalmedia.com/police-attack-on-aam-aadmi-party-office-is-a-lie/</link>
		
		<dc:creator><![CDATA[Peepal Media]]></dc:creator>
		<pubDate>Mon, 12 Sep 2022 10:18:53 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[Aam Aadmi Party]]></category>
		<category><![CDATA[Ahmedabad Police]]></category>
		<category><![CDATA[fakenews]]></category>
		<category><![CDATA[gujarath]]></category>
		<category><![CDATA[india]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[police ride]]></category>
		<category><![CDATA[social media]]></category>
		<guid isPermaLink="false">https://peepalmedia.com/?p=4950</guid>

					<description><![CDATA[ಗುಜರಾತ್:‌ ಆಮ್‌ ಆದ್ಮಿ ಪಕ್ಷದ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬೆಳಕಿಗೆ ಬಂದಿದ್ದು, ಅದು ಸುಳ್ಳು ಎಂದು ಅಹಮದಾಬಾದ್‌ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಆಮ್‌ ಆದ್ಮಿ ಪಕ್ಷದ ಮೇಲೆ ಅಂತಹ ಯಾವುದೇ ದಾಳಿ ನಡೆದಿಲ್ಲ, ಇದು ಸಾಮಾಜಿಕ ಜಾಲಾತಾಣದಲ್ಲಿ &#160;ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿಯಾಗಿದ್ದು, ಈ ಹಿನ್ನಲೆ ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.]]></description>
										<content:encoded><![CDATA[
<p class="has-medium-font-size"><strong>ಗುಜರಾತ್:‌</strong> ಆಮ್‌ ಆದ್ಮಿ ಪಕ್ಷದ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬೆಳಕಿಗೆ ಬಂದಿದ್ದು, ಅದು ಸುಳ್ಳು ಎಂದು ಅಹಮದಾಬಾದ್‌ ಪೊಲೀಸರು ತಿಳಿಸಿದ್ದಾರೆ.</p>


<div class="wp-block-image">
<figure class="aligncenter size-full is-resized"><img decoding="async" src="https://peepalmedia.com/wp-content/uploads/2022/09/aap-1.jpg" alt="" class="wp-image-4952" width="403" height="185" srcset="https://peepalmedia.com/wp-content/uploads/2022/09/aap-1.jpg 828w, https://peepalmedia.com/wp-content/uploads/2022/09/aap-1-300x138.jpg 300w, https://peepalmedia.com/wp-content/uploads/2022/09/aap-1-768x352.jpg 768w" sizes="(max-width: 403px) 100vw, 403px" /></figure></div>


<p class="has-medium-font-size">ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಆಮ್‌ ಆದ್ಮಿ ಪಕ್ಷದ ಮೇಲೆ ಅಂತಹ ಯಾವುದೇ ದಾಳಿ ನಡೆದಿಲ್ಲ, ಇದು ಸಾಮಾಜಿಕ ಜಾಲಾತಾಣದಲ್ಲಿ &nbsp;ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿಯಾಗಿದ್ದು, ಈ ಹಿನ್ನಲೆ ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. </p>
]]></content:encoded>
					
		
		
			</item>
	</channel>
</rss>
