<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Soldiers &#8211; Peepal Media</title>
	<atom:link href="https://peepalmedia.com/tag/soldiers/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 21 Jan 2025 06:36:45 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Soldiers &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ ಶಂಕಿತ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮ</title>
		<link>https://peepalmedia.com/soldier-martyred-in-gunfight-with-suspected-militants-in-jammu-and-kashmirs-sopore/</link>
		
		<dc:creator><![CDATA[Peepal Media]]></dc:creator>
		<pubDate>Tue, 21 Jan 2025 06:36:09 +0000</pubDate>
				<category><![CDATA[ದೇಶ]]></category>
		<category><![CDATA[indian army]]></category>
		<category><![CDATA[Jammu & Kashmir]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Soldiers]]></category>
		<guid isPermaLink="false">https://peepalmedia.com/?p=52620</guid>

					<description><![CDATA[ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಶಂಕಿತ ಉಗ್ರರೊಂದಿಗೆ ಜನವರಿ 20, 2025 ರ ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಭಾನುವಾರ&#160;ಜಲೂರಾ ಗ್ರಾಮದಲ್ಲಿ ಪೊಲೀಸರು, ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ&#160;ಜಂಟಿ ಕಾರ್ಯಾಚರಣೆ ನಡೆಸಿತು. ಉಗ್ರರ ಅಡಗುತಾಣವನ್ನು ಪತ್ತೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದರು. ಕಾರ್ಯಾಚರಣೆಯ ಸಮಯದಲ್ಲಿ, ಅಡಗುತಾಣದಿಂದ ಗುಂಡಿನ ದಾಳಿಗಳು ಆರಂಭವಾಗಿ, ಆ ಪ್ರದೇಶವನ್ನು ಸುತ್ತುವರಿಯಲು ಸೇನೆಯನ್ನು ಪ್ರೇರೇಪಿಸಿತು. ಪಡೆಯನ್ನು ನಿಯೋಜಿಸಿ, ಕಾರ್ಡನ್ ಅನ್ನು [&#8230;]]]></description>
										<content:encoded><![CDATA[
<p>ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಶಂಕಿತ ಉಗ್ರರೊಂದಿಗೆ ಜನವರಿ 20, 2025 ರ ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನಾ ಯೋಧರೊಬ್ಬರು <a href="https://twitter.com/ChinarcorpsIA/status/1881294917374247094" target="_blank" rel="noreferrer noopener"><u>ಹುತಾತ್ಮರಾಗಿದ್ದಾರೆ</u>.</a></p>



<p>ಭಾನುವಾರ&nbsp;ಜಲೂರಾ ಗ್ರಾಮದಲ್ಲಿ ಪೊಲೀಸರು, ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ&nbsp;<a href="https://www.aninews.in/news/national/general-news/j-k-army-carries-out-joint-search-operation-in-sopore-to-hunt-down-terrorists20250120123446/" rel="noreferrer noopener" target="_blank">ಜಂಟಿ ಕಾರ್ಯಾಚರಣೆ ನಡೆಸಿತು.</a></p>



<p>ಉಗ್ರರ ಅಡಗುತಾಣವನ್ನು ಪತ್ತೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದರು. ಕಾರ್ಯಾಚರಣೆಯ ಸಮಯದಲ್ಲಿ, ಅಡಗುತಾಣದಿಂದ ಗುಂಡಿನ ದಾಳಿಗಳು ಆರಂಭವಾಗಿ, ಆ ಪ್ರದೇಶವನ್ನು ಸುತ್ತುವರಿಯಲು ಸೇನೆಯನ್ನು ಪ್ರೇರೇಪಿಸಿತು.</p>



<figure class="wp-block-embed aligncenter is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">During a CASO launched by Police &amp; SFs at Zaloora, Sopore a hideout was busted. During the same, fire was observed from inside.  Area cordoned off.  Further details shall follow.<a href="https://twitter.com/JmuKmrPolice?ref_src=twsrc%5Etfw">@JmuKmrPolice</a></p>&mdash; Kashmir Zone Police (@KashmirPolice) <a href="https://twitter.com/KashmirPolice/status/1880992692718760432?ref_src=twsrc%5Etfw">January 19, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಪಡೆಯನ್ನು ನಿಯೋಜಿಸಿ, ಕಾರ್ಡನ್ ಅನ್ನು ಬಲಪಡಿಸಿದಾಗ ಕತ್ತಲೆಯಾಗಿ ಕಾರ್ಯಾಚರಣೆಯನ್ನು <a href="https://indianexpress.com/article/india/kashmir-sopore-army-soldier-killed-militants-encounter-9789423/" target="_blank" rel="noreferrer noopener"><u>ರಾತ್ರಿಯಿಡೀ ನಿಲ್ಲಿಸಬೇಕಾಯಿತು</u></a> ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ <em>ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.</em></p>



<p>ಸೋಮವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದಾಗ ಉಗ್ರರು ಮತ್ತೊಮ್ಮೆ ಗುಂಡಿನ ದಾಳಿ ನಡೆಸಿದ್ದು, ಯೋಧ ಪಾಂಗಾಳ ಕಾರ್ತೀಕ್ ಗಾಯಗೊಂಡಿದ್ದಾರೆ. ಅವರನ್ನು ಸ್ಥಳಾಂತರಿಸಲಾಯಿತು ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.</p>



<figure class="wp-block-embed aligncenter is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">&quot;A Braveheart&#39;s Sacrifice Resounds through Eternity, Igniting Courage in Generations to come.&quot;<br><br>All Ranks of the Chinar Corps salute the supreme sacrifice of Braveheart Swr Pangala Kartheek, who laid down his life in the line of duty.<br><br>Chinar Warriors salute his immense valour… <a href="https://t.co/O0cK2tPRpQ">pic.twitter.com/O0cK2tPRpQ</a></p>&mdash; Chinar Corps🍁 &#8211; Indian Army (@ChinarcorpsIA) <a href="https://twitter.com/ChinarcorpsIA/status/1881294917374247094?ref_src=twsrc%5Etfw">January 20, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p></p>
]]></content:encoded>
					
		
		
			</item>
		<item>
		<title>ಪುಲ್ವಾಮಾ ದಾಳಿ: ಹುತಾತ್ಮ ಸೈನಿಕರ ಮನೆಯವರಿಂದ ನವೆಂಬರ್‌ 26ಕ್ಕೆ ಕೇಂದ್ರದ ವಿರುದ್ದ ಪ್ರತಿಭಟನೆ</title>
		<link>https://peepalmedia.com/protest-march-again-centre-by-pulwama-attack-jawans-family/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 18 Oct 2023 12:33:59 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[army]]></category>
		<category><![CDATA[attack]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[indian army]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[pulwama attack]]></category>
		<category><![CDATA[Satyapal malik]]></category>
		<category><![CDATA[Soldiers]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=30101</guid>

					<description><![CDATA[ನವದೆಹಲಿ, ಅಕ್ಟೋಬರ್.‌18:&#160;&#160;2019 ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರ ಕುಟುಂಬದ ಸದಸ್ಯರು ಸಂಭವಿಸಿದ ಲೋಪಗಳಿಗೆ ಹೊಣೆಗಾರಿಕೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿ ನವೆಂಬರ್ 26 ರಂದು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ. ಮಾಜಿ ಅರೆಸೇನಾ ಪಡೆಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಬ್ಯಾನರ್‌ನಡಿಯಲ್ಲಿ (Confederation of Ex-Paramilitary Forces Welfare Associations), ಹತ್ಯೆಗೀಡಾದ ಯೋಧರ ಪತ್ನಿಯರು ಮತ್ತು &#160;ಕುಟುಂಬ ಸದಸ್ಯರು ನವೆಂಬರ್ 26, ಸಂವಿಧಾನ ದಿನದಂದು ಪ್ರತಿಭಟಿಸಿ ಸರ್ಕಾರಕ್ಕೆ ಒತ್ತಾಯಿಸಲಿದ್ದಾರೆ. &#160; [&#8230;]]]></description>
										<content:encoded><![CDATA[
<p><strong>ನವದೆಹಲಿ</strong><strong>, </strong><strong>ಅಕ್ಟೋಬರ್</strong><strong>.‌18:&nbsp;</strong>&nbsp;2019 ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರ ಕುಟುಂಬದ ಸದಸ್ಯರು ಸಂಭವಿಸಿದ ಲೋಪಗಳಿಗೆ ಹೊಣೆಗಾರಿಕೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿ ನವೆಂಬರ್ 26 ರಂದು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ.</p>



<p>ಮಾಜಿ ಅರೆಸೇನಾ ಪಡೆಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಬ್ಯಾನರ್‌ನಡಿಯಲ್ಲಿ (Confederation of Ex-Paramilitary Forces Welfare Associations), ಹತ್ಯೆಗೀಡಾದ ಯೋಧರ ಪತ್ನಿಯರು ಮತ್ತು &nbsp;ಕುಟುಂಬ ಸದಸ್ಯರು ನವೆಂಬರ್ 26, ಸಂವಿಧಾನ ದಿನದಂದು ಪ್ರತಿಭಟಿಸಿ ಸರ್ಕಾರಕ್ಕೆ ಒತ್ತಾಯಿಸಲಿದ್ದಾರೆ. &nbsp;</p>



<p>“ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಜವಾನರ ಪತ್ನಿಯರು ಮತ್ತು ಕುಟುಂಬ ಸದಸ್ಯರನ್ನು ಕರೆತರಲು ನಾವು ಯೋಜಿಸಿದ್ದೇವೆ. ಪುಲ್ವಾಮಾ ದಾಳಿಯಾಗಿ ನಾಲ್ಕು ವರ್ಷಗಳು ಕಳೆದಿವೆ ಮತ್ತು ನಮ್ಮ 40 ಯೋಧರ ಹತ್ಯೆಗೆ ಕಾರಣವಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ,&#8221; ಎಂದು ಸಂಘದ ರಾಷ್ಟ್ರೀಯ ಸಂಯೋಜಕ ರಣಬೀರ್ ಸಿಂಗ್ ತಿಳಿಸಿದ್ದು ದಿ ಟೆಲಿಗ್ರಾಫ್‌ ವರದಿ ಮಾಡಿದೆ.</p>



<p>ಚುನಾವಣೆಯ ಸಮಯದಲ್ಲಿ ಯಾವಾಗಲೂ ರಾಷ್ಟ್ರೀಯತೆಯನ್ನು ಪ್ರಚಾರಕ್ಕೆ &nbsp;ಬಳಸುವ ನರೇಂದ್ರ ಮೋದಿ ಸರ್ಕಾರವು 40 ಸಿಆರ್‌ಪಿಎಫ್ ಸಿಬ್ಬಂದಿಗಳ ಹತ್ಯೆಗೆ ಕಾರಣವಾದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ನೀಡಿಲ್ಲ ಎಂದು ಅವರು ಅವರು ಆರೋಪಿಸಿದ್ದಾರೆ. ಫೆಬ್ರವರಿ 14, 2019 ರಂದು ಸೈನಿಕರು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಬಾಂಬ್ ಸ್ಫೋಟಗೊಂಡು ನಲವತ್ತು ಸೈನಿಕರು ಹತರಾಗಿದ್ದರು.</p>



<p>“ಹತರಾದ ಈ 40 ಸಿಆರ್‌ಪಿಎಫ್ ಸೈನಿಕರ ಕುಟುಂಬಗಳಿಗೆ ಗುಪ್ತಚರ ವರದಿಗಳ ನಿರ್ಲಕ್ಷ್ಯಕ್ಕೆ ಯಾರು ಹೊಣೆ ಎಂದು ತಿಳಿದುಕೊಳ್ಳುವ ಎಲ್ಲಾ ಹಕ್ಕುಗಳಿವೆ” ಎಂದು ಸಿಂಗ್ ಹೇಳಿದ್ದಾರೆ.</p>



<p>ಮೋದಿ ಸರ್ಕಾರದ ಗುಪ್ತಚರ ವೈಫಲ್ಯದ ಪರಿಣಾಮವಾಗಿ ದಾಳಿ ನಡೆದಿದೆ ಎಂದು ಆರೋಪಿಸಿ ದಿ ವೈರ್‌ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್<a href="https://www.youtube.com/watch?v=b8wmHUhLvOI" data-type="link" data-id="https://www.youtube.com/watch?v=b8wmHUhLvOI"> ಸತ್ಯಪಾಲ್ ಮಲಿಕ್ ನೀಡಿದ ಸಂದರ್ಶನ</a> ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆ ಸಂದರ್ಶನದಲ್ಲಿ ಸೈನಿಕರಿಗೆ ಕೇಂದ್ರ ಸರ್ಕಾರವು ವಿಮಾನವನ್ನು ನೀಡಲು ನಿರಾಕರಿಸಿದ್ದು ಅವರ ಹತ್ಯೆಗೆ ಕಾರಣ ಎಂದು ನೇರ ಆರೋಪ ಮಾಡಿದ್ದರು. ಇದನ್ನು ಮೋದಿಯವರು ಗಮನಕ್ಕೆ ತಂದಾಗ ಅವರು “ತುಮ್ ಅಭಿ ಚುಪ್ ರಹೋ (ನೀನೂ ಈಗ ಸುಮ್ಮನಿರು)” ಎಂದು ಹೇಳಿದ್ದರು ಎಂದು ಮಲಿಕ್ ಹೇಳಿದ್ದರು.</p>



<p>ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ವಿಮಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸತ್ಯಪಾಲ್‌ ಮಲಿಕ್ ವಿರುದ್ಧ ಸಮನ್ಸ್ ಜಾರಿ ಮಾಡಿತು.</p>



<p>ಸತ್ಯಪಾಲ್‌ ಮಲಿಕ್‌ ಅವರ ಆರೋಪಗಳನ್ನು ಉಲ್ಲೇಖಿಸಿ ರಣಬೀರ್ ಸಿಂಗ್, “ಇದಾಗಿ ನಾಲ್ಕು ವರ್ಷಗಳು ಕಳೆದಿವೆ, ಆದರೆ ಮೋದಿ ಸರ್ಕಾರವು ಹೊಣೆಗಾರಿಕೆಯನ್ನು ಸರಿಪಡಿಸಲು ವಿಫಲವಾಗಿದೆ. ಚುನಾವಣೆ ಗೆಲ್ಲುವುದೊಂದೇ ಅವರ ಆದ್ಯತೆ. ಸಂಸತ್ ಚುನಾವಣೆಗೂ ಮುನ್ನ ಈ ಬಾರಿಯೂ ಇದೇ ರೀತಿಯ ದಾಳಿಗಳು ನಡೆಯಬಹುದು. ಈ ದೇಶದ ಜನರು ಎಚ್ಚರದಿಂದಿರಬೇಕು” ಎಂದು ಕೇಂದ್ರ ಸರ್ಕಾರವನ್ನು ಆರೋಪಿಸಿದ್ದಾರೆ.</p>



<p>&#8220;ಇದರ ಬದಲು ಅವರ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಿಟ್ಟು ಬಾಯಿಮುಚ್ಚಿಸುವ ಪ್ರಯತ್ನವಾಗುತ್ತಿದೆ,&#8221; ಎಂದು ಮಲಿಕ್‌ ಅವರಿಗೆ ಸಿಬಿಐ ಕಳಿಸಿರುವ ಸಮನ್ಸ್‌ ಉಲ್ಲೇಖಿಸಿ ಸಿಂಗ್‌ ಹೇಳಿದ್ದಾರೆ.</p>



<p>ಲೋಕಸಭೆ ಚುನಾವಣೆಯ ವೇಳೆ 40 ಸಿಆರ್‌ಪಿಎಫ್ ಯೋಧರ ಹತ್ಯೆ ಮತ್ತು ಬಾಲಾಕೋಟ್‌ನಲ್ಲಿ ನಡೆದ ಐಎಎಫ್ ದಾಳಿಯನ್ನು ಮೋದಿ ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಮತ್ತು ಮತದಾರರು ತಮ್ಮ ಮತವನ್ನು ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿಗೆ &nbsp;ಹತರಾದ ವೀರ ಯೋಧರಿಗೆ ಅರ್ಪಿಸುವಂತೆ ಕೇಳಿಕೊಂಡಿದ್ದರು ಎಂದು ಮಲಿಕ್ ಹೇಳಿದ್ದರು. &nbsp;ಪುಲ್ವಾಮಾ ದಾಳಿಯು 2019 ರ ಸಂಸತ್ ಚುನಾವಣೆಗೆ ಎಂಟು ವಾರಗಳ ಮೊದಲು ನಡೆದಿತ್ತು</p>
]]></content:encoded>
					
		
		
			</item>
		<item>
		<title>ಗಡಿರೇಖೆ ಪ್ರದೇಶದಲ್ಲಿ ಚೀನಾ ಸೈನಿಕರ ಉಪಟಳ : ಸಂಸತ್ ನಲ್ಲಿ ತೇಪೆ ಹಚ್ಚಲು ಮುಂದಾದ ಬಿಜೆಪಿ</title>
		<link>https://peepalmedia.com/subversion-of-chinese-soldiers-in-the-border-area-bjp-is-ready-to-patch-it-in-parliament/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 13 Dec 2022 11:07:23 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[Border]]></category>
		<category><![CDATA[china]]></category>
		<category><![CDATA[india]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Soldiers]]></category>
		<guid isPermaLink="false">https://peepalmedia.com/?p=18402</guid>

					<description><![CDATA[ಒಂದು ಕಡೆ &#8216;ಚೀನಾದೊಂದಿಗಿನ ಗಡಿ ಘರ್ಷಣೆಯಲ್ಲಿ ನಮ್ಮ ಸೈನಿಕರು ಯಾರೂ ಸಾವನ್ನಪ್ಪಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ&#8217; ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿದ್ದಾರೆ. ಇನ್ನೊಂದು ಕಡೆ ಚೀನಾದ ಸುಮಾರು 300 ಕ್ಕೂ ಹೆಚ್ಚಿನ ಸೈನಿಕರು ಭಾರತೀಯ ಸೈನಿಕರೊಂದಿಗೆ ನಡೆಸಿದ ಸೆಣಸಾಟದಲ್ಲಿ 6 ಸೈನಿಕರು ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಸೇನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸಲಿಗೆ ಚೀನಾ ಸೈನಿಕರು ಈಗಾಗಲೇ ಭಾರತದ ಗಡಿರೇಖೆಯನ್ನು ಅರುಣಾಚಲ ಪ್ರದೇಶ, ಅಸ್ಸಾಂ ಭಾಗದಲ್ಲಿ ಕಿಲೋಮೀಟರ್ ಗಟ್ಟಲೆ ವಶಪಡಿಸಿಕೊಂಡು, ದೊಡ್ಡ ದೊಡ್ಡ [&#8230;]]]></description>
										<content:encoded><![CDATA[
<p style="font-size:20px">ಒಂದು ಕಡೆ &#8216;ಚೀನಾದೊಂದಿಗಿನ ಗಡಿ ಘರ್ಷಣೆಯಲ್ಲಿ ನಮ್ಮ ಸೈನಿಕರು ಯಾರೂ ಸಾವನ್ನಪ್ಪಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ&#8217; ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿದ್ದಾರೆ. ಇನ್ನೊಂದು ಕಡೆ ಚೀನಾದ ಸುಮಾರು 300 ಕ್ಕೂ ಹೆಚ್ಚಿನ ಸೈನಿಕರು ಭಾರತೀಯ ಸೈನಿಕರೊಂದಿಗೆ ನಡೆಸಿದ ಸೆಣಸಾಟದಲ್ಲಿ 6 ಸೈನಿಕರು ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಸೇನಾ ಆಸ್ಪತ್ರೆಗೆ ದಾಖಲಾಗಿದ್ದಾರೆ.</p>



<p style="font-size:20px">ಅಸಲಿಗೆ ಚೀನಾ ಸೈನಿಕರು ಈಗಾಗಲೇ ಭಾರತದ ಗಡಿರೇಖೆಯನ್ನು ಅರುಣಾಚಲ ಪ್ರದೇಶ, ಅಸ್ಸಾಂ ಭಾಗದಲ್ಲಿ ಕಿಲೋಮೀಟರ್ ಗಟ್ಟಲೆ ವಶಪಡಿಸಿಕೊಂಡು, ದೊಡ್ಡ ದೊಡ್ಡ ಹಳ್ಳಿಗಳನ್ನೇ ನಿರ್ಮಾಣ ಮಾಡಿದ್ದಾರೆ. ಈ ನಡುವೆ ಮತ್ತೆ ಗಡಿ ಭಾಗದಲ್ಲಿ ಚೀನಾ ಸೈನಿಕರು ಭಾರತೀಯ ಸೈನಿಕರೊಂದಿಗೆ ಜಗಳಕ್ಕೆ ನಿಂತಿದ್ದಾರೆ. ಇಷ್ಟಾದರೂ ಈ ಬಗ್ಗೆ ಕೇಂದ್ರ ಸರ್ಕಾರ ಏನೂ ನಡೆದೇ ಇಲ್ಲವೆಂಬಂತೆ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದೆ.</p>



<p style="font-size:20px">ಅಂದಹಾಗೆ ಗಡಿ ಭಾಗದಲ್ಲಿ ಆದ ಈ ಘರ್ಷಣೆ ನಡೆದದ್ದು ಡಿಸೆಂಬರ್ 9 ರಂದು. ಇಂದು ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಗಡಿ ರೇಖೆ ಉಲ್ಲಂಘನೆ ಬಗ್ಗೆ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದು ಕೂತ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗಡಿ ಭಾಗದಲ್ಲಿ ಎಲ್ಲವೂ ಸುರಕ್ಷಿತ ಎಂಬ ಹೇಳಿಕೆ ನೀಡಿದ್ದಾರೆ. ಡಿ.9 ರಂದೇ ನಡೆದ ಈ ದಾಳಿಯ ಬಗ್ಗೆ ಕೇಂದ್ರ ಸರ್ಕಾರ ಮತ್ತು ಗಡಿ ಮಿಲಿಟರಿ ಪಡೆ ಈ ವರೆಗೂ ಯಾವುದೇ ವಿಚಾರವನ್ನು ಬಹಿರಂಗಪಡಿಸಲಿಲ್ಲ.</p>



<p style="font-size:20px">ಇನ್ನೊಂದು ಕಡೆ ಬಿಜೆಪಿ ಗುಜರಾತ್ ರಾಜ್ಯದ ಚುನಾವಣೆ ಸಂಭ್ರಮಾಚರಣೆಗೆ ಈ ಸುದ್ದಿ ತೊಡಕಾಗಬಾರದು ಎಂದು ಬೇಕಂತಲೇ ಇದನ್ನು ಬಹಿರಂಗಪಡಿಸಿಲ್ಲ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ. ಡಿಸೆಂಬರ್ 8 ಕ್ಕೆ ಗುಜರಾತ್ ಫಲಿತಾಂಶ ಬಂದ ಮಾರನೇ ದಿನದಿಂದ ಗುಜರಾತ್ ರಾಜ್ಯಾದ್ಯಂತ ಬಿಜೆಪಿ ಸಂಭ್ರಮಾಚರಣೆ ಹಮ್ಮಿಕೊಂಡಿತ್ತು. ಈ ಸಂಭ್ರಮಾಚರಣೆಗೆ ಭಾರತೀಯ ಯೋಧರ ಮೇಲಿನ ದಾಳಿಯ ಸುದ್ದಿ ತೊಡಕಾಗಬಾರದು ಎಂಬ ಕಾರಣಕ್ಕೇ ಸರ್ಕಾರ ಇದನ್ನು ಗೌಪ್ಯವಾಗಿ ಇಟ್ಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.</p>



<p style="font-size:20px">ಇತ್ತ ಇಷ್ಟೊಂದು ಗಂಭೀರದ ಸಮಸ್ಯೆ ಎದುರಾದಾಗ ದೇಶದ ಗೃಹ ಸಚಿವರಾಗಿ ಜವಾಬ್ದಾರಿಯುತರಾಗಿ ಪರಿಸ್ಥಿತಿ ಬಗ್ಗೆ ವಿಚಾರ ಮಾಡಬೇಕಾದ ಅಮಿತ್ ಷಾ ಅವರು ಕೂಡಾ ಕಾಂಗ್ರೆಸ್ ಮೇಲೆಯೇ ಆರೋಪ ಹೊರಿಸಿದ್ದಾರೆ. 2005 ರಿಂದ 2007 ರ ಅವಧಿಯಲ್ಲಿ ರಾಜೀವ್ ಗಾಂಧಿ ಫೌಂಡೇಶನ್ ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂಪಾಯಿ ಅನುದಾನವನ್ನು ಪಡೆದುಕೊಂಡಿದೆ ಎಂಬ ಮಾತನ್ನು ಆಗಿದ್ದಾರೆ.</p>



<p style="font-size:20px">ಸಂಸತ್ತಿನ ಅಧಿವೇಶನದಲ್ಲಿ ನನಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಸಿಕ್ಕಿದ್ದರೆ, ರಾಜೀವ್ ಗಾಂಧಿ ಫೌಂಡೇಶನ್ ಪಡೆದುಕೊಂಡ ಅನುಧಾನದ ಬಗ್ಗೆ ಪ್ರಸ್ತಾಪಿಸುತ್ತಿದ್ದೆ.. ಇದು ಎಫ್‌ಸಿಆರ್‌ಎ ಪ್ರಕಾರ ಸೂಕ್ತವಲ್ಲ. ಆದ್ದರಿಂದ ನಿಯಮಗಳ ಪ್ರಕಾರ, ಗೃಹ ಸಚಿವಾಲಯ ಅದರ ನೋಂದಣಿಯನ್ನು ರದ್ದುಗೊಳಿಸಿದೆ ಎಂದು ಅಮಿತ್ ಷಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.</p>



<p style="font-size:20px">ಒಟ್ಟಾರೆ ಭಾರತೀಯ ಸೈನಿಕರ ಮೇಲಾದ ಹಲ್ಲೆಯ ಬಗ್ಗೆ, ಚೀನಾ ಗಡಿರೇಖೆ ಉಲ್ಲಂಘನೆ ಬಗ್ಗೆ ಮಾತನಾಡಿದರೆ ಆಡಳಿತ ಪಕ್ಷದ ನಾಯಕರು ಒಂದೋ ಸಮರ್ಥನೆ ಅಥವಾ ಬೇರೊಂದು ವಿಚಾರ ಪ್ರಸ್ತಾಪಿಸಿ ಮಾತನಾಡುತ್ತಿರುವುದು ವಿಚಾರವನ್ನು ತಿರುಚುವ ಕೆಲಸಕ್ಕೆ ಮುಂದಾಗಿದೆ ಎಂದೇ ಅಂದಾಜಿಸಬಹುದು.</p>
]]></content:encoded>
					
		
		
			</item>
	</channel>
</rss>
