<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>sports &#8211; Peepal Media</title>
	<atom:link href="https://peepalmedia.com/tag/sports/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 16 Jan 2025 04:51:55 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>sports &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕ್ರಿಕೆಟಿಗರ ಜೊತೆ ಕುಟುಂಬ ಸದಸ್ಯರ ಪ್ರಯಾಣಕ್ಕೆ ನಿರ್ಬಂಧಗಳನ್ನು ಹೇರಿದ ಬಿಸಿಸಿಐ</title>
		<link>https://peepalmedia.com/restrictions-on-family-members-staying-with-cricketers/</link>
		
		<dc:creator><![CDATA[Peepal Media]]></dc:creator>
		<pubDate>Thu, 16 Jan 2025 04:51:54 +0000</pubDate>
				<category><![CDATA[ಆಟೋಟ]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[sports]]></category>
		<guid isPermaLink="false">https://peepalmedia.com/?p=52348</guid>

					<description><![CDATA[ದೆಹಲಿ: ಭಾರತೀಯ ತಂಡದ ಪ್ರವಾಸಗಳ ಸಮಯದಲ್ಲಿ ಕ್ರಿಕೆಟಿಗರ ಜೊತೆ ಕುಟುಂಬ ಸದಸ್ಯರು ಇರುವುದಕ್ಕೆ ಬಿಸಿಸಿಐ ನಿರ್ಬಂಧಗಳನ್ನು ವಿಧಿಸಲಿದೆ. ವಿದೇಶಿ ಪ್ರವಾಸಗಳ ಸಮಯದಲ್ಲಿ ಆಟಗಾರರು ಕುಟುಂಬ ಸದಸ್ಯರೊಂದಿಗೆ ಕಳೆಯುವ ಸಮಯದ ಬಗ್ಗೆ ಕಠಿಣ ನಿಯಮಗಳನ್ನು ಜಾರಿಗೆ ತರಲು ಬಿಸಿಸಿಐ ಉದ್ದೇಶಿಸಿದೆ. ಮಂಡಳಿಯ ನಿಯಮಗಳು ಜಾರಿಗೆ ಬಂದರೆ, ಸಂಗಾತಿಗಳು ಮತ್ತು ಮಕ್ಕಳು 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಪ್ರವಾಸಗಳಲ್ಲಿ ಕ್ರಿಕೆಟಿಗರೊಂದಿಗೆ 14 ದಿನಗಳಿಗಿಂತ ಹೆಚ್ಚು ಕಾಲ ಇರಲು ಅನುಮತಿಸಲಾಗುವುದಿಲ್ಲ. ಪ್ರವಾಸದ ಮೊದಲ ಎರಡು ವಾರಗಳ ಕಾಲ ಇರುವಂತೆಯೇ [&#8230;]]]></description>
										<content:encoded><![CDATA[
<p>ದೆಹಲಿ: ಭಾರತೀಯ ತಂಡದ ಪ್ರವಾಸಗಳ ಸಮಯದಲ್ಲಿ ಕ್ರಿಕೆಟಿಗರ ಜೊತೆ ಕುಟುಂಬ ಸದಸ್ಯರು ಇರುವುದಕ್ಕೆ ಬಿಸಿಸಿಐ ನಿರ್ಬಂಧಗಳನ್ನು ವಿಧಿಸಲಿದೆ. ವಿದೇಶಿ ಪ್ರವಾಸಗಳ ಸಮಯದಲ್ಲಿ ಆಟಗಾರರು ಕುಟುಂಬ ಸದಸ್ಯರೊಂದಿಗೆ ಕಳೆಯುವ ಸಮಯದ ಬಗ್ಗೆ ಕಠಿಣ ನಿಯಮಗಳನ್ನು ಜಾರಿಗೆ ತರಲು ಬಿಸಿಸಿಐ ಉದ್ದೇಶಿಸಿದೆ.</p>



<p>ಮಂಡಳಿಯ ನಿಯಮಗಳು ಜಾರಿಗೆ ಬಂದರೆ, ಸಂಗಾತಿಗಳು ಮತ್ತು ಮಕ್ಕಳು 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಪ್ರವಾಸಗಳಲ್ಲಿ ಕ್ರಿಕೆಟಿಗರೊಂದಿಗೆ 14 ದಿನಗಳಿಗಿಂತ ಹೆಚ್ಚು ಕಾಲ ಇರಲು ಅನುಮತಿಸಲಾಗುವುದಿಲ್ಲ. ಪ್ರವಾಸದ ಮೊದಲ ಎರಡು ವಾರಗಳ ಕಾಲ ಇರುವಂತೆಯೇ ಇಲ್ಲ.</p>



<p>ಕುಟುಂಬ ಸದಸ್ಯರು ಸಣ್ಣ ಪ್ರವಾಸಗಳಲ್ಲಿ ಗರಿಷ್ಠ ಒಂದು ವಾರ ಮಾತ್ರ ಇರಲು ಅವಕಾಶವಿದೆ. ಅಭ್ಯಾಸ ಮತ್ತು ಪಂದ್ಯಗಳ ಸಮಯದಲ್ಲಿ, ಆಟಗಾರರು ಪ್ರತ್ಯೇಕವಾಗಿ ಪ್ರಯಾಣಿಸದೆ, ತಂಡದ ಬಸ್‌ನಲ್ಲಿ ಪ್ರಯಾಣಿಸಬೇಕು.</p>



<p>ಈ ನಿಬಂಧನೆಗಳು ಆಟಗಾರರ ಒಪ್ಪಂದಗಳ ಭಾಗವಾಗಿದ್ದರೂ, ಕೋವಿಡ್ -19ರ ಸಮಯದಲ್ಲಿ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಡಿಲಿಕೆಗಳನ್ನು ಮಾಡಲಾಗಿತ್ತು.</p>



<p>ಆಸ್ಟ್ರೇಲಿಯಾ ಪ್ರವಾಸದ ನಂತರ ಶನಿವಾರ ಮುಂಬೈನಲ್ಲಿರುವ ಬಿಸಿಸಿಐ ಕಚೇರಿಗೆ ಭೇಟಿ ನೀಡಿದ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರಿಗೆ ಹಿಂದಿನ ನಿಯಮಗಳ ಅನುಷ್ಠಾನದ ಬಗ್ಗೆ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದರು.</p>



<p>ಪ್ರವಾಸಗಳ ಸಮಯದಲ್ಲಿ ಮಂಡಳಿಯು ಕುಟುಂಬ ಸದಸ್ಯರಿಗೆ ವಸತಿ ಸೌಕರ್ಯವನ್ನು ಒದಗಿಸಿದರೆ, ಕ್ರಿಕೆಟಿಗರು ಪ್ರಯಾಣ ವೆಚ್ಚವನ್ನು ತಾವೇ ಭರಿಸುತ್ತಿದ್ದಾರೆ. ಈ ನಿಬಂಧನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಂಡಳಿಯ ಮೂಲಗಳು ತಿಳಿಸಿವೆ.</p>
]]></content:encoded>
					
		
		
			</item>
		<item>
		<title>ಜಪಾನ್‌ನಲ್ಲಿ ನಡೆಯಲಿರುವ ಎಎಸಿ ಗಾಲ್ಫ್‌ನಲ್ಲಿ ಭಾರತದ ಸಿರೋಹಿ, ಕೃಷ್ಣವ್</title>
		<link>https://peepalmedia.com/sirohi-krishnav-ready-for-aac-challenge-in-japan/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 01 Oct 2024 08:26:49 +0000</pubDate>
				<category><![CDATA[ಆಟೋಟ]]></category>
		<category><![CDATA[Asia-Pacific Amateur Championship]]></category>
		<category><![CDATA[golf]]></category>
		<category><![CDATA[india]]></category>
		<category><![CDATA[japan]]></category>
		<category><![CDATA[Kartik Singh]]></category>
		<category><![CDATA[Krishnav Nikhil Chopraa]]></category>
		<category><![CDATA[Rakshit Dahiya]]></category>
		<category><![CDATA[sports]]></category>
		<category><![CDATA[Vedant Sirohi]]></category>
		<guid isPermaLink="false">https://peepalmedia.com/?p=46462</guid>

					<description><![CDATA[ಗೊಟೆಂಬಾ (ಶಿಜುಕಾ): 2024 ರ ಏಷ್ಯಾ-ಪೆಸಿಫಿಕ್ ಅಮೆಚೂರ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ವರು ಭಾರತೀಯರು ಸ್ಪರ್ಧಿಸಲಿದ್ದಾರೆ, ಅವರಲ್ಲಿ ಮೂವರು ಈವೆಂಟ್‌ನಲ್ಲಿ ಸತತ ಎರಡನೇ ವರ್ಷವೂ ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಿದ್ದಾರೆ, ಇದರಲ್ಲಿ ಹವ್ಯಾಸಿ ಗಾಲ್ಫ್ ಆಟಗಾರರಿಗೆ ಉತ್ತಮ ಬಹುಮಾನವನ್ನು ನೀಡಲಾಗುತ್ತದೆ. ಅಮೇರಿಕಾದಲ್ಲಿ ಕಾಲೇಜು ಗಾಲ್ಫ್ ಆಡಿರುವ ಕೃಷ್ಣವ್ ನಿಖಿಲ್ ಚೋಪ್ರಾ, ಜೂನಿಯರ್ ಪ್ರೆಸಿಡೆಂಟ್ಸ್ ಕಪ್ನಲ್ಲಿ ಇಂಟರ್ನ್ಯಾಷನಲ್ ತಂಡದ ಸದಸ್ಯರಾದ ವೇದಾಂತ್ ಸಿರೋಹಿ ಮತ್ತು ಕಾರ್ತಿಕ್ ಸಿಂಗ್ ಅವರೊಂದಿಗೆ ಸತತ ಎರಡನೇ ವರ್ಷಕ್ಕೆ ಆಡಲಿದ್ದಾರೆ. ಇಂಡಿಯನ್ ಗಾಲ್ಫ್ ಯೂನಿಯನ್‌ನ ಹೋಮ್ ಸರ್ಕ್ಯೂಟ್‌ನಲ್ಲಿ ತಕ್ಕಮಟ್ಟಿಗೆ [&#8230;]]]></description>
										<content:encoded><![CDATA[
<p><strong>ಗೊಟೆಂಬಾ (ಶಿಜುಕಾ)</strong>: 2024 ರ ಏಷ್ಯಾ-ಪೆಸಿಫಿಕ್ ಅಮೆಚೂರ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ವರು ಭಾರತೀಯರು ಸ್ಪರ್ಧಿಸಲಿದ್ದಾರೆ, ಅವರಲ್ಲಿ ಮೂವರು ಈವೆಂಟ್‌ನಲ್ಲಿ ಸತತ ಎರಡನೇ ವರ್ಷವೂ ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಿದ್ದಾರೆ, ಇದರಲ್ಲಿ ಹವ್ಯಾಸಿ ಗಾಲ್ಫ್ ಆಟಗಾರರಿಗೆ ಉತ್ತಮ ಬಹುಮಾನವನ್ನು ನೀಡಲಾಗುತ್ತದೆ.</p>



<p>ಅಮೇರಿಕಾದಲ್ಲಿ ಕಾಲೇಜು ಗಾಲ್ಫ್ ಆಡಿರುವ ಕೃಷ್ಣವ್ ನಿಖಿಲ್ ಚೋಪ್ರಾ, ಜೂನಿಯರ್ ಪ್ರೆಸಿಡೆಂಟ್ಸ್ ಕಪ್ನಲ್ಲಿ ಇಂಟರ್ನ್ಯಾಷನಲ್ ತಂಡದ ಸದಸ್ಯರಾದ ವೇದಾಂತ್ ಸಿರೋಹಿ ಮತ್ತು ಕಾರ್ತಿಕ್ ಸಿಂಗ್ ಅವರೊಂದಿಗೆ ಸತತ ಎರಡನೇ ವರ್ಷಕ್ಕೆ ಆಡಲಿದ್ದಾರೆ.</p>



<p>ಇಂಡಿಯನ್ ಗಾಲ್ಫ್ ಯೂನಿಯನ್‌ನ ಹೋಮ್ ಸರ್ಕ್ಯೂಟ್‌ನಲ್ಲಿ ತಕ್ಕಮಟ್ಟಿಗೆ ಯಶಸ್ಸನ್ನು ಕಂಡಿರುವ ರಕ್ಷಿತ್ ದಹಿಯಾ ಅವರು ನಾಲ್ಕು ಸದಸ್ಯರ ತಂಡದಲ್ಲಿ ಏಕೈಕ ಚೊಚ್ಚಲ ಆಟಗಾರರಾಗಿದ್ದಾರೆ.</p>



<p>(PTI)</p>
]]></content:encoded>
					
		
		
			</item>
		<item>
		<title>ವಿಶ್ವಕಪ್‌ ಫೈನಲ್‌ ನಲ್ಲಿ ಭಾರತ ತಂಡ: ರಾಹುಲ್‌ ದ್ರಾವಿಡ್‌ ಪಾತ್ರ ಎಷ್ಟು ಗೊತ್ತೇ?</title>
		<link>https://peepalmedia.com/rahul-dravid-role-in-world-cup-final/</link>
		
		<dc:creator><![CDATA[Charan Aivarnad]]></dc:creator>
		<pubDate>Sat, 18 Nov 2023 07:43:53 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[cricket]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[RAHUL DRAVID]]></category>
		<category><![CDATA[sports]]></category>
		<category><![CDATA[state politics]]></category>
		<category><![CDATA[Virat Kohli]]></category>
		<category><![CDATA[world cup 2023]]></category>
		<category><![CDATA[writing]]></category>
		<guid isPermaLink="false">https://peepalmedia.com/?p=32548</guid>

					<description><![CDATA[ಬೆಂಗಳೂರು: ಭಾರತ ಕ್ರಿಕೆಟ್‌ ತಂಡ ಫೈನಲ್‌ ಗೇರಿದೆ. ಎಲ್ಲರ ಬಾಯಲ್ಲೂ ಕೊಹ್ಲಿ-ರೋಹಿತ್‌, ಬುಮ್ರಾ-ಶಮಿ, ರಾಹುಲ್-ಶ್ರೇಯಸ್‌ ಹೆಸರುಗಳು ಕೇಳಿಬರುತ್ತಿವೆ. ನಿಜ, ಈ ಬಾರಿಯ ಭಾರತ ಕ್ರಿಕೆಟ್‌ ತಂಡದ ಪ್ರತಿಯೊಬ್ಬ ಆಟಗಾರನೂ ಎಲ್ಲರ ಮನಗೆದ್ದಿದ್ದಾರೆ. ಅವರೆಲ್ಲರೂ ಒಂದು ತಂಡವಾಗಿ ಆಡಿದ್ದಾರೆ. ಅಸಾಧ್ಯಗಳನ್ನು ಸಾಧಿಸಿದ್ದಾರೆ. ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಗೆದ್ದಿದ್ದಾರೆ. ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸತತ ಹತ್ತು ಗೆಲುವುಗಳು ಅಷ್ಟು ಸುಲಭವಲ್ಲ. ಎಲ್ಲ ವಿಭಾಗಗಳಲ್ಲೂ ಬಲಶಾಲಿಯಾಗಿರುವ ತಂಡವಷ್ಟೇ ಹೀಗೆ ಗೆಲ್ಲಲು ಸಾಧ್ಯ ಆದರೆ ಕೇವಲ ಆಡುವ ಹನ್ನೊಂದು ಆಟಗಾರರಿಂದ ಇದೆಲ್ಲ ಸಾಧನೆ ಸಾಧ್ಯವೇ? [&#8230;]]]></description>
										<content:encoded><![CDATA[
<p><br><strong>ಬೆಂಗಳೂರು: </strong>ಭಾರತ ಕ್ರಿಕೆಟ್‌ ತಂಡ ಫೈನಲ್‌ ಗೇರಿದೆ. ಎಲ್ಲರ ಬಾಯಲ್ಲೂ ಕೊಹ್ಲಿ-ರೋಹಿತ್‌, ಬುಮ್ರಾ-ಶಮಿ, ರಾಹುಲ್-ಶ್ರೇಯಸ್‌ ಹೆಸರುಗಳು ಕೇಳಿಬರುತ್ತಿವೆ. ನಿಜ, ಈ ಬಾರಿಯ ಭಾರತ ಕ್ರಿಕೆಟ್‌ ತಂಡದ ಪ್ರತಿಯೊಬ್ಬ ಆಟಗಾರನೂ ಎಲ್ಲರ ಮನಗೆದ್ದಿದ್ದಾರೆ. ಅವರೆಲ್ಲರೂ ಒಂದು ತಂಡವಾಗಿ ಆಡಿದ್ದಾರೆ. ಅಸಾಧ್ಯಗಳನ್ನು ಸಾಧಿಸಿದ್ದಾರೆ. ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಗೆದ್ದಿದ್ದಾರೆ. ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸತತ ಹತ್ತು ಗೆಲುವುಗಳು ಅಷ್ಟು ಸುಲಭವಲ್ಲ. ಎಲ್ಲ ವಿಭಾಗಗಳಲ್ಲೂ ಬಲಶಾಲಿಯಾಗಿರುವ ತಂಡವಷ್ಟೇ ಹೀಗೆ ಗೆಲ್ಲಲು ಸಾಧ್ಯ</p>



<p>ಆದರೆ ಕೇವಲ ಆಡುವ ಹನ್ನೊಂದು ಆಟಗಾರರಿಂದ ಇದೆಲ್ಲ ಸಾಧನೆ ಸಾಧ್ಯವೇ? ಭಾರತ ತಂಡ ಇವತ್ತು ಎದುರಾಳಿಗಳಿಗೆ ನಡುಕ ಹುಟ್ಟಿಸುವ ಪಡೆಯಾಗಿ ನಿಲ್ಲಲು ಮುಖ್ಯಕಾರಣ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್.‌ ಹೀಗಾಗಿ ಭಾರತ ತಂಡದ ಸಾಧನೆಯನ್ನು ದ್ರಾವಿಡ್‌ ಹೆಸರು ಹೇಳದೇ ಶ್ಲಾಘಿಸುವುದು ಅನ್ಯಾಯ. ಹಾಗೆ ನೋಡಿದರೆ ದ್ರಾವಿಡ್‌ ಎಂದೂ ತನ್ನ ಬಗ್ಗೆ ತಾನು ಕೊಚ್ಚಿಕೊಂಡು ಮಾತನಾಡಿದ್ದಿಲ್ಲ. ತಂಡದ ನಾಯಕನನ್ನು ಹಿಂದೆ ಸರಿಸಿ ಎಲ್ಲ ತನ್ನಿಂದನೇ ಆಗುತ್ತಿದೆ ಎಂಬಂತೆ ಫೋಜು ಕೊಟ್ಟವರೂ ಅಲ್ಲ. ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತ, ತಂಡದ ಗೆಲುವಿಗೆ ಏನೇನು ಸ್ಟ್ರಾಟರ್ಜಿಗಳನ್ನು ಮಾಡಬೇಕೋ ಮಾಡುತ್ತ, ಆಟಗಾರರನ್ನು ತಿದ್ದುತ್ತ ವಿಶ್ವಕಪ್‌ ಗೆಲ್ಲುವ ಹಂತಕ್ಕೆ ತಂದುನಿಲ್ಲಿಸಿರುವ ದ್ರಾವಿಡ್‌ ನಿಜವಾದ ಅರ್ಥದಲ್ಲಿ ನಿಸ್ವಾರ್ಥಿ.</p>



<p>ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವ ಕಾಲಕ್ಕೆ ದ್ರಾವಿಡ್‌ ʻದಿ ವಾಲ್‌ʼ (ಗೋಡೆ) ಎಂದೇ ಹೆಸರಾದವರು. ಸಾಧಾರಣವಾಗಿ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದ ದ್ರಾವಿಡ್‌ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಪಾರು ಮಾಡುತ್ತಿದ್ದವರು. ಯಾರನ್ನು ಬೇಕಾದರೂ ಔಟ್‌ ಮಾಡಬಹುದು, ಆದರೆ ರಾಹುಲ್‌ ಅವರನ್ನಲ್ಲ ಎಂದು ಇತರೆ ದೇಶಗಳ ಬೌಲರ್‌ ಗಳು ಪರಿತಪಿಸುವಷ್ಟು ಅವರು ಕ್ರೀಜ್‌ ಗೆ ಅಂಟಿ ನಿಲ್ಲುತ್ತಿದ್ದರು. 2011ರಲ್ಲಿ ಭಾರತ ತಂಡ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದಾಗ ಅತ್ಯಂತ ಹೀನಾಯವಾಗಿ 4-0 ಅಂತರದಲ್ಲಿ ಟೆಸ್ಟ್‌ ಸರಣಿಯನ್ನು ಸೋತಿತ್ತು. ಆದರೆ ರಾಹುಲ್‌ ದ್ರಾವಿಡ್‌ ಆ ಸರಣಿಯಲ್ಲಿ ಗಳಿಸಿದ ರನ್‌ ಗಳ ಸಂಖ್ಯೆ 602! ಛಲ ಬಿಡದೆ ಹೋರಾಡುವುದು ರಾಹುಲ್‌ ಸ್ವಭಾವ.</p>



<p>ದ್ರಾವಿಡ್‌ ಕೋಚ್‌ ಹುದ್ದೆಗೆ ದಿಢೀರನೇ ಬರಲಿಲ್ಲ. ಅದಕ್ಕೆ ಅವರು ಪೂರ್ವ ತಯಾರಿಗಳನ್ನು ಮಾಡಿಕೊಂಡೇ ಬಂದಿದ್ದರು. ಮೊದಲು ಅವರು 2016ರಲ್ಲಿ ಅಂಡರ್‌-19 ಭಾರತ ತಂಡಕ್ಕೆ ಕೋಚ್‌ ಆದರು. ಆ ಹುದ್ದೆಗೆ ಅಂಥ ಡಿಮ್ಯಾಂಡೇನೂ ಇರಲಿಲ್ಲ. ಆದರೆ ದ್ರಾವಿಡ್‌ ಹೊಸ ತಲೆಮಾರಿನ ಕ್ರಿಕೆಟಿಗರನ್ನು ತಯಾರು ಮಾಡುವ ಕಾರ್ಯದಲ್ಲಿ ತಾವೇ ಆಸಕ್ತಿ ವಹಿಸಿ ಈ ಹುದ್ದೆಗೆ ಬಂದಿದ್ದರು. ಈಗ ಭಾರತ ಕ್ರಿಕೆಟ್‌ ತಂಡದಲ್ಲಿ ಆಡುತ್ತಿರುವ ಹಲವು ಆಟಗಾರರು ದ್ರಾವಿಡ್‌ ಗರಡಿಯಲ್ಲಿ ಪಳಗಿದವರೇ ಆಗಿದ್ದಾರೆ. ಮೂರು ವರ್ಷಗಳ ಕಾಲ ಹೊಸ ಹುಡುಗರಿಗೆ ತರಬೇತಿ ನೀಡಿದ ನಂತರ ದ್ರಾವಿಡ್‌ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ (ಎನ್‌ ಸಿ ಎ) ನಿರ್ದೇಶಕರಾಗಿ ಬಂದರು. ಎನ್.ಸಿ.ಎ ಒಂದು ಬಗೆಯಲ್ಲಿ ಆಟಗಾರರಿಗೆ ಸಂಜೀವಿನಿ ಇದ್ದಂತೆ. ಗಾಯಗೊಂಡವರು, ಫಿಟ್ನೆಸ್‌ ಕಳೆದುಕೊಂಡವರು ಇಲ್ಲಿ ಬಂದು ಪರಿಪೂರ್ಣವಾಗಿ ಸಿದ್ಧರಾಗುತ್ತಾರೆ. ಎನ್‌.ಸಿ.ಎ ಯನ್ನು ಸಮರ್ಥವಾಗಿ ಕಟ್ಟುವಲ್ಲಿ ದ್ರಾವಿಡ್‌ ಯಶಸ್ವಿಯಾದರು.</p>



<p>ಇದಾದ ನಂತರವೇ ದ್ರಾವಿಡ್‌ ಭಾರತ ತಂಡದ ಮುಖ್ಯ ಕೋಚ್‌ ಆದರು. ಅವರು ಕೋಚ್‌ ಆದಾಗ ವಿರಾಟ್‌ ಕೊಹ್ಲಿ ತಂಡದ ನಾಯಕರಾಗಿದ್ದರು. ಆದರೆ ಕೊಹ್ಲಿಯನ್ನು ಒಂದು ಬಗೆಯಲ್ಲಿ ಅಪಮಾನಿಸಿ ನಾಯಕತ್ವದಿಂದ ಇಳಿಯುವಂತೆ ಮಾಡಿತು ಬಿಸಿಸಿಐ. ರೋಹಿತ್‌ ಶರ್ಮಾ ನಾಯಕರಾದರು. ಇಂಥ ಸಂದರ್ಭದಲ್ಲಿ ತಂಡವನ್ನು ಕಟ್ಟುವುದು ಕಷ್ಟದ ಕೆಲಸ. ದ್ರಾವಿಡ್‌ ಸವಾಲಾಗಿ ತೆಗೆದುಕೊಂಡು ಸತತ ಶ್ರಮವಹಿಸಿ ತಂಡ ಕಟ್ಟುತ್ತ ಹೋದರು. ಹೊಸಹೊಸ ಪ್ರಯೋಗಗಳನ್ನು ಮಾಡಿದರು. ಫಾರ್ಮ್‌ ಕಳೆದುಕೊಂಡಿದ್ದ ಕೆ.ಎಲ್.ರಾಹುಲ್‌ ಕೈಗೆ ಗ್ಲೌಸ್‌ ಕೊಟ್ಟು ವಿಕೆಟ್‌ ಕೀಪಿಂಗ್‌ ಗೆ ಹಚ್ಚಿದರು. ತಂಡದ ನಾಯಕ ರೋಹಿತ್‌ ಶರ್ಮಾ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡರು. ಭಾರತ ತಂಡದ ಡ್ರೆಸಿಂಗ್‌ ರೂಮ್‌ ಲವಲವಿಕೆಯಿಂದ ತುಂಬಿ ತುಳುಕಿತು. ದ್ರಾವಿಡ್‌ ಎಲ್ಲರಿಗೂ ಸ್ಪೂರ್ತಿಯಾಗಿ ನಿಂತರು.</p>



<p>ದ್ರಾವಿಡ್‌ ಎಂದರೆ ಹಾಗೆಯೇ. ಸದ್ದುಗದ್ದಲವಿಲ್ಲದೆ ತಮ್ಮ ಕೆಲಸ ತಾವು ಮಾಡುವವರು. ಅವರು ಜೋರಾಗಿ ಮಾತಾಡಿದ್ದನ್ನು ನೋಡಿದವರೇ ವಿರಳ. ಎಲ್ಲಿ ಯಾವಾಗ ಎಷ್ಟು ಮಾತಾಡಬೇಕು ಎಂಬುದು ಅವರಿಗೆ ಗೊತ್ತು. ಅಷ್ಟೆಲ್ಲ ದೊಡ್ಡ ಸಾಧನೆ ಮಾಡಿಯೂ ಅವರು ಎಲೆಮರೆಯ ಕಾಯಿಯಂತೆ ಉಳಿದವರು. ಈಗಲೂ ಅಷ್ಟೆ. ಭಾರತ ವಿಶ್ವಕಪ್‌ ಗೆದ್ದು ನಿಂತಾಗ ಅವರು ಇದು ನನ್ನ ಸಾಧನೆ ಎಂದು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಮೀಡಿಯಾಗಳ ಕಣ್ಣಿಗೂ ಪದೇಪದೇ ಬೀಳುವುದಿಲ್ಲ. ಅವರು ಹಿನ್ನೆಲೆಯಲ್ಲೇ ನಿಂತು ಸಂಭ್ರಮಿಸುವ ಜೀವ. ದ್ರಾವಿಡ್‌ ಅಂದರೆ ಹಾಗೆಯೇ, ʻಕಾಣ್ತಿದೆ, ಆದರೆ ಕಾಣಾಕಿಲ್ಲʼ!</p>
]]></content:encoded>
					
		
		
			</item>
		<item>
		<title>ಬರಿಗಾಲಲ್ಲಿ ಆಡಿದ ಭಾರತ ತಂಡ, ದ ಫ್ಲೈಯಿಂಗ್ ಹೌಸ್ ವೈಫ್ ಮತ್ತು ಎಡಗೈ ಶೂಟರ್ ; 1948ರ ಲಂಡನ್ ಒಲಿಂಪಿಕ್ಸ್ ನ ಮೆಲುಕು</title>
		<link>https://peepalmedia.com/the-indian-team-played-barefoot-in-the-olympics/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 03 Jul 2023 05:38:44 +0000</pubDate>
				<category><![CDATA[ಅಂಕಣ]]></category>
		<category><![CDATA[Olympic]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sports]]></category>
		<guid isPermaLink="false">https://peepalmedia.com/?p=23073</guid>

					<description><![CDATA[ಒಲಿಂಪಿಕ್ ಎಂದೊಡನೆ ಎಲ್ಲಾ ತಪ್ಪು ಕಾರಣಗಳಿಗಾಗಿ ನನಗೆ ನೆನಪಾಗುವುದು ಹಿಟ್ಲರ್ ಅದ್ದೂರಿಯಾಗಿ ಆಯೋಜಿಸಿದ 1936 ಬರ್ಲಿನ್ ಒಲಿಂಪಿಕ್ಸ್ ಮತ್ತು ಇಸ್ರೇಲಿ ಕ್ರೀಡಾಪಟುಗಳ ಮಾರಣಹೋಮ ನೆಡೆದ 1972ರ ಮ್ಯುನಿಕ್ ಒಲಿಂಪಿಕ್. ಬರ್ಲಿನಲ್ಲಿನ ಜೆಸ್ಸಿ ಒವೆನ್ಸ್ ಸಾಧನೆ ಮತ್ತು ಮ್ಯುನಿಕಿನಲ್ಲಿ ಮಾರ್ಕ್ ಸ್ಪಿಟ್ಜ್ ಸಾಧನೆ ಮಾಡಿದರು ಆ ಸಾಧನೆಗಳನ್ನ ಮರೆಮಾಚುವಂತೆ ದೈತ್ಯ ಹಿಟ್ಲರ್ ಮತ್ತು ಇಸ್ರೇಲಿ ಕ್ರೀಡಾಪಟುಗಳ ಹತ್ಯೆ ನನ್ನನ್ನ ಕಾಡಿದೆ. ಈ ಎರಡು ಅಸಾಧಾರಣ ಒಲಿಂಪಿಕ್ಸ್ಗಳ ನಡುವೆ ನಡೆದ 1948ರ ಲಂಡನ್ ಒಲಿಂಪಿಕ್ಸ್ ನಮ್ಮೆಲರ ಸಾಮೂಹಿಕ ನೆನಪಿನಿಂದ ಅಳಿಸಿಹೋಗಿದೆ. [&#8230;]]]></description>
										<content:encoded><![CDATA[
<p><strong>ಒಲಿಂಪಿಕ್ ಎಂದೊಡನೆ ಎಲ್ಲಾ ತಪ್ಪು ಕಾರಣಗಳಿಗಾಗಿ ನನಗೆ ನೆನಪಾಗುವುದು ಹಿಟ್ಲರ್ ಅದ್ದೂರಿಯಾಗಿ ಆಯೋಜಿಸಿದ 1936 ಬರ್ಲಿನ್ ಒಲಿಂಪಿಕ್ಸ್ ಮತ್ತು ಇಸ್ರೇಲಿ ಕ್ರೀಡಾಪಟುಗಳ ಮಾರಣಹೋಮ ನೆಡೆದ 1972ರ ಮ್ಯುನಿಕ್ ಒಲಿಂಪಿಕ್. ಬರ್ಲಿನಲ್ಲಿನ ಜೆಸ್ಸಿ ಒವೆನ್ಸ್ ಸಾಧನೆ ಮತ್ತು ಮ್ಯುನಿಕಿನಲ್ಲಿ ಮಾರ್ಕ್ ಸ್ಪಿಟ್ಜ್ ಸಾಧನೆ ಮಾಡಿದರು ಆ ಸಾಧನೆಗಳನ್ನ ಮರೆಮಾಚುವಂತೆ ದೈತ್ಯ ಹಿಟ್ಲರ್ ಮತ್ತು ಇಸ್ರೇಲಿ ಕ್ರೀಡಾಪಟುಗಳ ಹತ್ಯೆ ನನ್ನನ್ನ ಕಾಡಿದೆ. ಈ ಎರಡು ಅಸಾಧಾರಣ ಒಲಿಂಪಿಕ್ಸ್ಗಳ ನಡುವೆ ನಡೆದ 1948ರ ಲಂಡನ್ ಒಲಿಂಪಿಕ್ಸ್ ನಮ್ಮೆಲರ ಸಾಮೂಹಿಕ ನೆನಪಿನಿಂದ ಅಳಿಸಿಹೋಗಿದೆ. 1948ರ ಜುಲೈ ತಿಂಗಳಲ್ಲಿ ನಡೆದ ಈ ಒಲಿಂಪಿಕ್ಸ್ ಮೆಲಕು ಹಾಕುವ ಪ್ರಯತ್ನ ಈ ಬರಹದ್ದು.</strong></p>



<p>1940ರಲ್ಲಿ ಟೋಕಿಯೋದಲ್ಲಿ, 1944ರಲ್ಲಿ ಲಂಡನಿನಲ್ಲಿ ನಡೆಯಬೇಕಿದ್ದ ಎರಡನೇ ಮಹಾಯುದ್ಧದಿಂದ ರದ್ದಾದವು. ಜಗತ್ತೇ ಬಣಗಳಾಗಿ, ಬುಲೆಟ್, ಬಾಂಬುಗಳಿಂದ ಲಕ್ಷಾಂತರ ಮುಗ್ಧರು ಹೆಣವಾಗುತ್ತಿದ್ದ ದಿನಗಳಲ್ಲಿ ಕ್ರೀಡೆ ಆಯೋಜಿಸುವುದಾದರೂ ಹೇಗೆ? ಅಪಾರ ಸಾವು ನೋವಿನ ನಂತರ 1945ರಲ್ಲಿ ಮಹಾಯುದ್ಧ ಕೊನೆಗೊಂಡಿತು. ವಿಷಮಗೊಂಡಿದ್ದ ಭುವಿಯನ್ನ ಶಾಂತತೆಯೆಡೆಗೆ ಮುನ್ನಡೆಸುವ ಜವಾಬ್ದಾರಿ ಲಂಡನ್ ನಗರದ ಮೇಲಿತ್ತು. ಅದರಂತೆ 1948ರಲ್ಲಿ ಒಲಿಂಪಿಕ್ಸ್ ಆಯೋಜನೆಗೊಂಡಿತು. ಮಹಾಯುದ್ಧದ ವೇಳೆ ಜರ್ಮನಿ ನೀಡಿದ ಆಘಾತವನ್ನ ಮರೆಯದ ಇಂಗ್ಲೆಂಡ್ ತನ್ನ ನೆಲದಲ್ಲಿ ನೆಡೆದ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಜರ್ಮನಿಗೆ ಆಹ್ವಾನ ನೀಡಲಿಲ್ಲ. ಏನೇನೋ ಸಬೂಬು ಹೇಳಿ ಜಪಾನನ್ನೂ ಕೂಡ ಹೊರಗಿಡಲಾಯಿತು. ಅರಬ್ ದೇಶಗಳ ಆಕ್ಷೇಪಣೆಯಿಂದ ಇಸ್ರೇಲಿ ಕ್ರೀಡಾಪಟುಗಳಿಗೆ ಅವಕಾಶ ನಿರಾಕರಿಸಲಾಯಿತು. ಲಂಡನ್ ಒಲಿಂಪಿಕ್ಸ್ ತವರಾದ ವೆಂಬ್ಲಿ ಕ್ರೀಡಾಂಗಣ ರಾಜಕೀಯ ಪಗಡೆ ಹಾಸಾಯಿತು.</p>



<p>ಲಂಡನ್ ಒಲಿಂಪಿಕ್ಸ್ ಭಾರಿ ಸಂಯಮ ಹಾಗು ಆರ್ಥಿಕ ಬಿಗುವಿನಿಂದ ಆಯೋಜಿಸಿದ ಕ್ರೀಡಾಕೂಟ. ಯುದ್ಧದ ಭೀಕರ ಪರಿಣಾಮಗಳು, ಆರ್ಥಿಕ ಬಿಕ್ಕಟ್ಟು ಯಾವುದೇ ಆಡಂಬರಕ್ಕೆ ಅವಕಾಶ ನೀಡಲಿಲ್ಲ. ಚಿನ್ನದ ಪದಕಗಳನ್ನೂ ಕೂಡ ಹೊನ್ನಿನ ತಗಡಿನಿಂದ ಮಾಡಿಸಲಾಗಿತ್ತು. ವೆಂಬ್ಲಿ ಕ್ರೀಡಾಂಗಣವನ್ನ ಬಹಳ ಶ್ರಮದಿಂದ ಸಜ್ಜುಗೊಳಿಸಲಾಗಿತ್ತು. ಬೇರೆ ಒಲಿಂಪಿಕ್ಸ್ ಗಳಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಗ್ರಾಮವೊಂದನ್ನ ನಿರ್ಮಿಸಲಾಗುತ್ತಿತ್ತು ಆದರೆ ಲಂಡನಿಗೆ ಬಂದ ಕ್ರೀಡಾಳುಗಳು ಮಿಲಿಟರಿ ಕ್ಯಾಂಪ್ಗಳಲ್ಲಿ ಮತ್ತು ಸ್ಕೂಲುಗಳಲ್ಲಿ ತಂಗಬೇಕಾಯಿತು!</p>



<p>ಯುದ್ಧದ ದಿನಗಳಲ್ಲಿ ಜರ್ಮನಿ ಲಂಡನ್ನಿನ ಮೇಲೆ ಬಾಂಬುಗಳ ಸುರಿಮಳೆಗೈದಿತ್ತು. ಸುಮಾರು ಅರ್ಧ ಮಿಲಿಯನ್ ಜನರ ಪ್ರಾಣ ತೆತ್ತಿದ್ದರು. 1948 ಇಂಗ್ಲೆಂಡ್ ಇನ್ನು ಯುದ್ಧದ ದುಷ್ಪರಿಣಾಮಗಳಿಂದ ದಿಂದ ಚೇತರಿಸಿಕೊಂಡಿರಲಿಲ್ಲ. ಆಹಾರಕ್ಕಾಗಿ ಎಲ್ಲೆಡೆ ಆಹಾಕಾರವಿದ್ದ ದಿನಗಳವು. ಅಂತಹ ಸಮಯದಲ್ಲಿ 4300 ಕ್ರೀಡಾಳುಗಳು ಲಂಡನ್ನಿಗೆ ಬಂದಿಳಿದಿದ್ದಾರೆ! ಆ ದಿನಗಳಲ್ಲಿ ಕ್ರೀಡೆಗೆಂದು ಬಂದವರು ಜೊತೆಗೆ ಆಹಾರವನ್ನೂ ಕೊಂಡೊಯ್ಯುವ ಪರಿಸ್ಥಿತಿ ಉದ್ಭವವಾಗಿತ್ತು.</p>



<p>ಅರ್ಜೆಂಟೀನಾ, ಅಮೇರಿಕಾ, ಡೆನ್ಮಾರ್ಕ್, ಫ್ರಾನ್ಸ್ ತಮ್ಮ ಕ್ರೀಡಾಳುಗಳಿಗೆ ನೂರಾರು ಟನ್ ದನದ ಮಾಂಸ, ಮೊಟ್ಟೆ, ಬೆಣ್ಣೆ, ಹಂದಿಯ ಮಾಂಸ, ಬ್ರೆಡ್ಡು ರವಾನಿಸಿದ್ದವು. ಇಂಗ್ಲೆಂಡ್ ಕೂಡ ಸ್ವಲ್ಪ ಮಟ್ಟಿಗೆ ಆಹಾರ ಆಮದು ಮಾಡಿಕೊಂಡು ಯುದ್ಧದ ದಿನಗಳಲ್ಲಿ ಆಗಸದಿಂದ ಬೀಳುವ ಬಾಂಬ್ಗಳಿಂದ ಪ್ರಾಣ ಉಳಿಸಿಕೊಳ್ಳಲು ಮಾಡಿಕೊಂಡಿದ್ದ ಸುರಂಗಗಳಲ್ಲಿಟ್ಟು ಕಾಯಲಿಕ್ಕೆ ಸೈನಿಕರನ್ನ, ಕೆಲವೆಡೆ ವಿದ್ಯಾರ್ಥಿಗಳನ್ನ ನಿಯೋಜಿಸಿತ್ತು. ಬೆಣ್ಣೆ, ಬ್ರೆಡ್ಡು, ಹಾಲು, ಚಾಕೋಲೇಟ್, ಟೀ, ಹಿಟ್ಟು, ವೈನ್ ಲೂಟಿಯಾಗುತ್ತಿದ್ದ ದಿನಗಳವು.</p>



<p>ಫುಟ್ಬಾಲ್ ಇತಿಹಾಸದ ಅತ್ಯಂತ ವಿಚಿತ್ರ ಪಂದ್ಯವೊಂದು ಲಂಡನ್ ಒಲಿಂಪಿಕ್ಸ್ ನಲ್ಲಿ ನಡೆಯಿತು. ಭಾರತದ ಫುಟ್ಬಾಲ್ ತಂಡ ಫ್ರೆಂಚ್ ತಂಡಕ್ಕೆ ಎದುರಾಳಿ. ಏಷ್ಯಾದ ಹೊರಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡದ ಭಾರತ ತಂಡದ ಫುಟ್ಬಾಲ್ ಆಟಗಾರರು ಬರಿಗಾಲಲ್ಲೇ ಮೈದಾನಕ್ಕಿಳಿದಿದ್ದರು! ವಸ್ತ್ರಸಂಹಿತೆಯ ಪ್ರಕಾರ ಅಂದಿನ ಸ್ವೀಡಿಷ್ ತೀರ್ಪುಗಾರ ಭಾರತವನ್ನ ತಕ್ಷಣ ಅನರ್ಹಗೊಳಿಸಬಹುದಿತ್ತು. ಆದರೆ ಅಂದು ಅಂಪೈರ್ ಭಾರತ ತಂಡವನ್ನ ಬರಿಗಾಲಲ್ಲೇ ಆಡಲು ಬಿಟ್ಟಿದ್ದ. ಫ್ರೆಂಚರಿಗೆ ಭಾರತ ಸುಲಭ ತುತ್ತಾಗಬಹುದೆಂದು ಅಂದುಕೊಂಡಿದ್ದವರಿಗೆ ಅಚ್ಚರಿ ಕಾದಿತ್ತು. ಭಾರತ ತಂಡ ಫ್ರೆಂಚ್ ತಂಡಕ್ಕೆ ತೀವ್ರ ಪೈಪೋಟಿ ನೀಡಿತು. ಫ್ರೆಂಚ್ ಮೊದಲ ಗೋಲ್ ಹೊಡೆದರೂ ಸಾರಂಗಪರಿ ಧನರಾಜ್ ರಾಮನ್ ಹೊಡೆದ ಗೋಲ್ ಭಾರತವನ್ನ ಐತಿಹಾಸಿಕ ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿತ್ತು. ಪಂದ್ಯದ ಅಂತ್ಯಕ್ಕೆ ಐದು ನಿಮಿಷಗಳಿರುವಾಗ ಭಾರತ ತಂಡಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತ್ತು. ಶೈಲೇಂದ್ರ ನಾಥ್ ಮಾನ ಅವಕಾಶ ಕೈಚೆಲ್ಲಿದರು. ಫ್ರೆಂಚ್ ತಂಡ ಕೊನೆಯ ಗಳಿಗೆಯಲ್ಲಿ ಗೋಲ್ ಹೊಡೆದು ವಿಜಯಿಯಾದರು.</p>



<p>ಲಂಡನ್ ನಲ್ಲಿ ನೀಡಿದ ಈ ಅದ್ಭುತ ಪ್ರದರ್ಶನದಿಂದ 1950ರಲ್ಲಿ ಬ್ರೆಜಿಲ್ ನಲ್ಲಿ ನಡೆಯಬೇಕಿದ್ದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಡಲು ಭಾರತ ತಂಡ ಅರ್ಹತೆಗಳಿಸಿತು. ಆದರೆ ಈ ಬಾರಿ ಬರಿಗಾಲಲ್ಲಿ ಆಡುವಂತಿಲ್ಲವೆಂದು ಫಿಫಾ ಪಟ್ಟುಹಿಡಿಯಿತು. ಶೂ ತೊಟ್ಟು ಪ್ರತಿಷ್ಠಿತ ಪಂದ್ಯಾವಳಿ ಆಡುವುದಕ್ಕಿಂತ ಬ್ರೆಜಿಲ್ ದೇಶಕ್ಕೆ ಹೋಗದೆ ಇರುವುದೇ ಇರುವುದೇ ಒಳಿತೆಂದು ಭಾರತ ನಿರ್ಧರಿಸಿತು!</p>



<p>1936ರ ಬರ್ಲಿನ್ ಒಲಿಂಪಿಕ್ಸ್ ಎಂದರೆ ಜೆಸ್ಸಿ ಒವೆನ್ಸ್ ಎಂತಾದರೆ, 1948ರ ಲಂಡನ್ ಒಲಿಂಪಿಕ್ಸ್ ಹಾಲೆಂಡ್ ದೇಶದ ಫ್ಯಾನಿ ಬ್ಲ್ಯಾಂಕರ್ಸ್ -ಕೊಯೆನ್ ನದ್ದು. (Fanny Blankers-Koen). ಫ್ಯಾನಿ 1936ರ ಒಲಿಂಪಿಕ್ಸ್ ನಲ್ಲಿ ಭಾಗವಹಸಿದಾಗ ಆಕೆಗೆ ಕೇವಲ 17ವರ್ಷ. ಬರ್ಲಿನಲ್ಲಾವುದೇ ಪದಕ ಗೆಲ್ಲಲಿಲ್ಲವಾದರೂ ದಿಗ್ಗಜ ಜೆಸ್ಸಿ ಒವೆನ್ಸ್ ಅನ್ನು ಕಣ್ಣಾರೆ ಕಂಡು ಸ್ಪೂರ್ತಿ ಪಡೆದಿದ್ದಳು . ಜೆಸ್ಸಿ ಒವೆನ್ಸ್ ಮಾಡಿದ ಸಾಧನೆಯನ್ನ ಸರಿಗಟ್ಟಬೇಕೆಂದುಕೊಂಡವಳಿಗೆ ಇತಿಹಾಸ ಬಾರಿ ಪೆಟ್ಟನ್ನೇ ನೀಡಿತ್ತು. 1936-1948 ನಡುವೆ ನಡೆಯಬೇಕಿದ್ದ ಎರಡು ಒಲಿಂಪಿಕ್ಸ್ಗಳು ಮಹಾಯುದ್ಧದಿಂದ ರದ್ದಾಗಿದ್ದವು.</p>



<p>ಲಂಡನ್ ಒಲಿಂಪಿಕ್ಸ್ ಶುರುವಾಗುವ ವೇಳೆಗೆ ಫ್ಯಾನಿ 30ವರ್ಷದವಳಾಗಿದ್ದಳು. ಆಕೆಗೆ ವಿವಾಹವಾಗಿ ಇಬ್ಬರು ಮಕ್ಕಳಿದ್ದರು. ಮನೆಮಡದಿಯಾದರು ಆಕೆ ಮಹದಾಸೆಗಳನ್ನ ಮಣ್ಣುಪಾಲು ಮಾಡಿರಲಿಲ್ಲ. ನಿರಂತರ ಅಭ್ಯಾಸದಲ್ಲಿ ತೊಡಗಿದ್ದಳು. ತುಂಡು ಚಡ್ಡಿ ತೊಟ್ಟು ಓಡುವಾಗ ಜನರ ಅಣಕಕ್ಕೆ, ಕೆಂಗಣ್ಣಿ ಫ್ಯಾನಿ ಗುರಿಯಾಗಿದ್ದೂ ಇದೆ. ಪತಿ ಯಾನ್ ಬ್ಲ್ಯಾಂಕರ್ಸ್ ತರಬೇತುದಾರಾನಾದುದರಿಂದ ಜನರ ನಿಂದನೆಯನ್ನ ನಿರ್ಲಕ್ಷ್ಯಸಿಸಿ ಆಕೆ ಸಾಧನೆಯತ್ತ ತನ್ನ ದೃಷ್ಟಿ ನೆಟ್ಟಳು. ಲಂಡನ್ ಒಲಿಂಪಿಕ್ಸ್ ನಲ್ಲಿ ಆಕೆ ಮಾಡಿದ ಸಾಧನೆ ಬಹುಶ ಸಾರ್ವಕಾಲಿಕ ಶ್ರೇಷ್ಠ ಸಾಧನೆಯೆಂದರೆ ಸುಳ್ಳಲ್ಲ. 100, 200 ಮೀಟರ್ ಓಟ. 80ಮೀಟರ್ ಹರ್ಡಲ್ ಓಟ ಮತ್ತು 4&#215;100ರಿಲೆ ಓಟದಲ್ಲಿ ಆಕೆ ಚಿನ್ನದ ಪದಕ ಗೆದ್ದಳು. ವಿವಾಹಿತೆಯೊಬ್ಬಳು, ಮಕ್ಕಳನ್ನ ಹೆತ್ತವಳು ಸಾಧನೆ ಮಾಡಲಾರರು ಎಂಬ ನಂಬಿಕೆಯನ್ನ ಮಣ್ಣುಮಾಡಿದಳು. ಮೊದಲು ನಿಂದಿಸುತ್ತಿದ್ದ ಜನ ಆಕೆಗೆ ನೀಡಿದ ಬಿರುದು- ದ ಫ್ಲೈಯಿಂಗ್ ಹೌಸ್ ವೈಫ್ (The Flying Housewife) ಎಂದು. ಒಲಿಂಪಿಕ್ಸ್ ನಂತರ ಆಂಸ್ಟರ್ಡ್ಯಾಮ್ ನಗರದಲ್ಲಿ ಆಕೆಯ ಮೆರವಣಿಗೆ ನೆಡೆಯಿತು. ಶುಭ ಹಾರೈಸಲು ಬಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಅಭಿಮಾನಿಯೊಬ್ಬ ಫ್ಯಾನಿಗೆ ಸೈಕಲ್ ವೊಂದನ್ನ ಕೊಡುಗೆ ನೀಡಿದನಂತೆ. &#8221; ಕೆಲ ಮೀಟರ್ ಓಡಿದಕ್ಕೆ ಇಷ್ಟು ದುಬಾರಿ ಕೊಡುಗೆಯೇ&#8221; ಎಂದು ಫ್ಯಾನಿ ಉದ್ಗರಿಸಿದ್ದಳಂತೆ! ಫ್ಯಾನಿ &#8220;೨೦ನೇ ಶತಮಾನದ ಶ್ರೇಷ್ಠ ಕ್ರೀಡಾಪಟು&#8221;ವೆಂದು ಅಂತರರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ 1999ರಲ್ಲಿ ಘೋಷಿಸಿತು.</p>



<p>ಲಂಡನ್ ಒಲಿಂಪಿಕ್ಸ್ ಕಥನ ಸಾರ್ಜೇಂಟ್ ಕರೋಲಿ ಟಕಾಕ್ಸ್ (karoly Takacs) ಪ್ರಸ್ತಾಪವಿಲ್ಲದೆ ಸಂಪೂರ್ಣವಾಗುವುದಿಲ್ಲ. ಟಕಾಕ್ಸ್ ಹಂಗೇರಿಯ ಶ್ರೇಷ್ಠ ಶೂಟರ್. ಅವನ ಬಲಗೈ ಬಳಸಿ ಟ್ರಿಗರ್ ಎಳೆದರೆ ಗುಂಡು ಗುರಿತಲುಪದೇ ಇರುತ್ತಿರಲಿಲ್ಲ. ಪ್ರತಿ ಬಾರಿಯೂ bulls eye. ಆತ 1936ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಬೇಕಿತ್ತು. ಹಂಗೇರಿ ಸೇನೆಯ ಮೇಲಧಿಕಾರಿಗಳಿಗೆ ಮಾತ್ರ ಒಲಿಂಪಿಕ್ಸ್ನಂತಹ ಪ್ರತಿಷ್ಠಿತ ಶೂಟರ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅನುಮತಿಯಿದ್ದ ಕಾರಣದಿಂದ ಆತನಿಗೆ ಅವಕಾಶ ಕೈತಪ್ಪಿತ್ತು. ನಿರಾಶನಾಗದೆ ಶ್ರದ್ಧೆಯಿಂದ ದುಡಿದು ಸೇನೆಯಲ್ಲಿ ಲೆಫ್ಟ್ನೆಂಟ್ ಆದ.</p>



<p>ದುರದೃಷ್ಟವಶಾತ್ ಒಮ್ಮೆ ಆತನ ಬಲಗೈಯಲ್ಲಿದ್ದ ದೋಷಪೂರಿತ ಗ್ರೆನೇಡೊಂದು ಸ್ಫೋಟಿಸಿತು. ಟಕಾಕ್ಸ್ ಬಲಗೈ ಛಿದ್ರಗೊಂಡಿತು. ಅಲ್ಲಿಗೆ ಟಕಾಕ್ಸ್ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಕೂಡ ಭಗ್ನಗೊಂಡಿತು ಅಂದಿಕೊಂಡಿರ? ಹೂ ಹೂ. ಟಕಾಕ್ಸ್ ತನ್ನ ಎಡಗೈಯಲ್ಲಿ ತರಬೇತಿ ಆರಂಭಿಸಿದ. ಬಹುಬೇಗ ಎಲ್ಲಾ ಚಾಂಪಿಯನ್ಷಿಪಗಳಲ್ಲೂ ಜಯಿಸಿದ. ಒಲಿಂಪಿಕ್ಸ್ ಆಡಲು ಅರ್ಹನಾದ.</p>



<p>ಒಲಿಂಪಿಕ್ಸ್ ಫೈನಲ್ ಸುತ್ತಿನಲ್ಲಿ ಟಕಾಕ್ಸ್ ಎದುರಾಳಿ ಅರ್ಜೆಂಟೀನಾದ ಕಾರ್ಲೋಸ್ ಡಿಯಾಜ್ ಸಾಯೆನ್ಜ್ ವಾಲಿಯೆಂಟೇ. &#8220;ನೀನು ಲಂಡನ್ಗೇಕೆ ಬಂದೆ?&#8221; ಎಂದು ಕಾರ್ಲೋಸ್ ಟಕಾಕ್ಸ್ನನ್ನು ಚೇಡಿಸಿದನಂತೆ. ಸ್ಥಿತಪ್ರಜ್ಞಾನಾದ ಟಕಾಕ್ಸ್ ಸರಳವಾಗಿ &#8220;ನಾನು ಕಲಿಯಲು ಬಂದೆ&#8221; ಎಂದನಂತೆ. ಕೊನೆಯ ಸುತ್ತಿನಲ್ಲಿ ಟಕಾಕ್ಸ್ ಪ್ರದರ್ಶನ ನೋಡಿದ್ದ, ದ್ವೀತಿಯ ಬಹುಮಾನ ಗೆದ್ದ ಕಾರ್ಲೋಸ್ ಹೇಳಿದನಂತೆ &#8221; ಶುಭಾಶಯಗಳು ಟಕಾಕ್ಸ್, ನೀನು ತುಂಬಾನೇ ಕಲಿತುಬಿಟ್ಟಿದ್ದೀಯ.&#8221; ಎಂದು. ಟಕಾಕ್ಸ್ ಮುಂದುವರೆದು 1952ರ ಹೆಲ್ಸಿಂಕಿ ಒಲಿಂಪಿಕ್ಸ್ನಲ್ಲೂ ಚಿನ್ನದ ಪದಕ ಪಡೆದ. ಇಂದಿಗೂ ಹಂಗೇರಿಯಲ್ಲಿ ಟಕಾಕ್ಸ್ ಹೋರಾಟ, ಶ್ರಮ ಮತ್ತು ಆಶಾವಾದದ ಪ್ರತೀಕ.</p>



<p>ಕ್ರೀಡೆಯೆಂದರೆ ಇಂದಿಗೂ ಕೆಲವರು ಮೂಗು ಮುರಿಯುತ್ತಾರೆ. ಕ್ರೀಡೆಯಂದರೆ ವಿಲಾಸಿ ಜೀವಿಗಳ ಶೋಕಿ, ಅದೊಂದು ದುಬಾರಿ ಹವ್ಯಾಸವೆಂದುಕೊಂಡು, ಕ್ರೀಡೆಯನ್ನ ಸಾರಾಸಗಟಾಗಿ ತಳ್ಳಿ ಹಾಕುವವರಿದ್ದಾರೆ. ಕೆಲ ಕ್ರೀಡೆಗಳು ವಿಲಾಸಿ ಜನರಿಗೆ ಮಾತ್ರ ಸೀಮಿತವಾಗಿರಬಹುದು ಆದರೆ ಕ್ರೀಡೆಯಲ್ಲಿ ನಿಮಗೆ ಸದಾ ಹ್ಯೂಮನ್ ಸ್ಟೋರೀಸ್ ಸಿಗುತ್ತಲೇ ಇರುತ್ತವೆ. ಇಲ್ಲಿ ಎಲ್ಲಾ ಅಡೆತಡೆಗಳನು ಮೀರಿ ಸಾಧನೆ ಮಾಡಿದ ಜೆಸ್ಸಿ ಒವೆನ್ಸ್, ಫ್ಯಾನಿ, ಟಕಾಕ್ಸ್ ನಂತಹ ಸಾಧಕರಿದ್ದಾರೆ. ಸ್ಟೆರೊಯ್ಡ್ಸ್ ಸೇವಿಸಿ ಓಟ ಗೆದ್ದ ಬೆನ್ ಜಾನ್ಸನ್ ನಂತಹ ಖಳನಾಯಕರಿದ್ದಾರೆ.</p>



<p>ಕ್ರೀಡೆ ಎಲ್ಲಾ ಕಾಲದ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತಾ ಸಾಗಿದೆ. ಹಿಟ್ಲರ್ ಬರುವನ್ನು ಮೊದಲೇ ಸೂಚಿಸಿದೆ. ಆತನ ವರ್ಣಭೇದ ನೀತಿಗೆ ಎಂದಿಗೂ ಗೆಲುವುಸಿಗದೆಂದು ಮಹಾಯುದ್ಧದ ಮುನ್ನವೇ ಸಾರಿದೆ. ಮಹಾಯುದ್ಧಗಳು ನೆಡೆದಾಗ ಕ್ರೀಡೆ ದಿಗಿಲುಗೊಂಡು ಅವಿತಿದೆ. ರಾಜಕೀಯ, ಕಲೆ, ಸಮಾಜ, ವಿಜ್ಞಾನ, ಜಾಗತಿಕ ಬೆಳವಣಿಗೆಗಳು, ವಿತ್ತ ನೀತಿಗಳು, ರಾಜ್ಯಶಾಸ್ತ್ರ, ವರ್ಗ/ಜಾತಿ ಸಂಘರ್ಷ, ರಾಜತಾಂತ್ರಿಕತೆ ಮತ್ತು ದೇಶದ ಸ್ವಾಸ್ತ್ಯವನ್ನ ಕ್ರೀಡೆಯ ಮೂಲಕವು ಓದಬಹುದೆಂಬುದು ಸತ್ಯ.</p>



<ul class="wp-block-list">
<li>ಹರೀಶ್ ಗಂಗಾಧರ್</li>
</ul>
]]></content:encoded>
					
		
		
			</item>
		<item>
		<title>ಬ್ಯಾಟ್ಸ್ ಮನ್ ಗಳ ಅಬ್ಬರ, ರಾಹುಲ್ ಪಂದ್ಯಶ್ರೇಷ್ಠ: ಭಾರತಕ್ಕೆ ಟಿ 20 ಸರಣಿ</title>
		<link>https://peepalmedia.com/batsmangala-abbararahul-pandya-shreshta-bharatakke-t20-sarani/</link>
		
		<dc:creator><![CDATA[Peepal Media]]></dc:creator>
		<pubDate>Mon, 03 Oct 2022 06:05:09 +0000</pubDate>
				<category><![CDATA[ಆಟೋಟ]]></category>
		<category><![CDATA[cricket]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[match]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sports]]></category>
		<category><![CDATA[T20 cricket]]></category>
		<guid isPermaLink="false">https://peepalmedia.com/?p=8665</guid>

					<description><![CDATA[ಮೊಟ್ಟ ಮೊದಲ ಬಾರಿಗೆ ಭಾರತ ತನ್ನ ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಕ್ರಿಕೆಟ್ ಸರಣಿ ಜಯಿಸಿದೆ. ನಿನ್ನೆ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ 1-0 ಪಂದ್ಯಗಳ ಮುನ್ನಡೆಯೊಂದಿಗೆ ಆತ್ಮವಿಶ್ವಾಸದಿಂದ ಕಣಕ್ಕಿಳಿದ ಭಾರತ ತಂಡ ಬ್ಯಾಟ್ಸ್ ಮನ್ ಗಳ ಅಬ್ಬರದ ಆಟದಿಂದಾಗಿ ಸರಣಿಯನ್ನು 2-0 ಯಿಂದ ಗೆದ್ದುಕೊಂಡಿದೆ. ಸರಣಿಯ ಕೊನೆಯ ಪಂದ್ಯ ಅಕ್ಟೋಬರ್ 4 ರಂದು ಇಂದೋರ್ ನಲ್ಲಿ ನಡೆಯಲಿದೆ. ಟಾಸ್ ಗೆದ್ದು ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ ದಕ್ಷಿಣ ಆಫ್ರಿಕಾದ ನಾಯಕ ಬವುಮಾ [&#8230;]]]></description>
										<content:encoded><![CDATA[
<p style="font-size:20px">ಮೊಟ್ಟ ಮೊದಲ ಬಾರಿಗೆ ಭಾರತ ತನ್ನ ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಕ್ರಿಕೆಟ್ ಸರಣಿ ಜಯಿಸಿದೆ. ನಿನ್ನೆ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ 1-0 ಪಂದ್ಯಗಳ ಮುನ್ನಡೆಯೊಂದಿಗೆ ಆತ್ಮವಿಶ್ವಾಸದಿಂದ ಕಣಕ್ಕಿಳಿದ ಭಾರತ ತಂಡ ಬ್ಯಾಟ್ಸ್ ಮನ್ ಗಳ ಅಬ್ಬರದ ಆಟದಿಂದಾಗಿ ಸರಣಿಯನ್ನು 2-0 ಯಿಂದ ಗೆದ್ದುಕೊಂಡಿದೆ. ಸರಣಿಯ ಕೊನೆಯ ಪಂದ್ಯ ಅಕ್ಟೋಬರ್ 4 ರಂದು ಇಂದೋರ್ ನಲ್ಲಿ ನಡೆಯಲಿದೆ.</p>



<p style="font-size:20px">ಟಾಸ್ ಗೆದ್ದು ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ ದಕ್ಷಿಣ ಆಫ್ರಿಕಾದ ನಾಯಕ ಬವುಮಾ ಅವರ ಲೆಕ್ಕಾಚಾರಗಳನ್ನು ಉಲ್ಟಾ ಪಲ್ಟಾ ಮಾಡಿದ್ದು ಭಾರತದ ಬ್ಯಾಟಿಂಗ್. <br>ಕೆ.ಎಲ್. ರಾಹುಲ್ ಅವರ 28 ಬಾಲ್ ಗಳಲ್ಲಿ 57, ಸೂರ್ಯಕುಮಾರ್ ಯಾದವ್ ಅವರ ಸಿಡಿಲಬ್ಬರದ 22 ಬಾಲ್ ಗಳಲ್ಲಿ 61, ವಿರಾಟ್ ಕೊಹ್ಲಿ ಅವರ 28 ಬಾಲ್ ಗಳಲ್ಲಿ ಅಜೇಯ 49 ಮತ್ತು ಕೊನೆಯಲ್ಲಿ ದಿನೇಶ್ ಕಾರ್ತಿಕ್ ಅವರ 7 ಬಾಲ್ ಗಳಲ್ಲಿ 17 ರನ್ ಗಳ ನೆರವಿನಿಂದ ಭಾರತ ನಿಗದಿತ 20 ಓವರ್ ಗಳಲ್ಲಿ 237 ರನ್ ಗಳ ಬೃಹತ್ ಮೊತ್ತ ದಾಖಲಿಸಿತು. </p>



<figure class="wp-block-image size-large"><img fetchpriority="high" decoding="async" width="1024" height="1024" src="https://peepalmedia.com/wp-content/uploads/2022/10/WhatsApp-Image-2022-10-03-at-11.33.30-AM-1024x1024.jpeg" alt="" class="wp-image-8672" srcset="https://peepalmedia.com/wp-content/uploads/2022/10/WhatsApp-Image-2022-10-03-at-11.33.30-AM-1024x1024.jpeg 1024w, https://peepalmedia.com/wp-content/uploads/2022/10/WhatsApp-Image-2022-10-03-at-11.33.30-AM-300x300.jpeg 300w, https://peepalmedia.com/wp-content/uploads/2022/10/WhatsApp-Image-2022-10-03-at-11.33.30-AM-150x150.jpeg 150w, https://peepalmedia.com/wp-content/uploads/2022/10/WhatsApp-Image-2022-10-03-at-11.33.30-AM-768x768.jpeg 768w, https://peepalmedia.com/wp-content/uploads/2022/10/WhatsApp-Image-2022-10-03-at-11.33.30-AM-696x696.jpeg 696w, https://peepalmedia.com/wp-content/uploads/2022/10/WhatsApp-Image-2022-10-03-at-11.33.30-AM-1068x1068.jpeg 1068w, https://peepalmedia.com/wp-content/uploads/2022/10/WhatsApp-Image-2022-10-03-at-11.33.30-AM-24x24.jpeg 24w, https://peepalmedia.com/wp-content/uploads/2022/10/WhatsApp-Image-2022-10-03-at-11.33.30-AM-48x48.jpeg 48w, https://peepalmedia.com/wp-content/uploads/2022/10/WhatsApp-Image-2022-10-03-at-11.33.30-AM-96x96.jpeg 96w, https://peepalmedia.com/wp-content/uploads/2022/10/WhatsApp-Image-2022-10-03-at-11.33.30-AM.jpeg 1080w" sizes="(max-width: 1024px) 100vw, 1024px" /></figure>



<p style="font-size:20px">ಈ ಮೊತ್ತ ಆರಂಭದಿಂದಲೂ ದಕ್ಷಿಣ ಆಫ್ರಿಕಾಕ್ಕೆ ಸವಾಲಿನ ಮೊತ್ತವಾಗಿತ್ತು. ಆರಂಭದಲ್ಲೇ ಅತಿ ಬೇಗನೇ 2 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾತಂಡದ ಮೊತ್ತ 1 ರನ್ ಆಗುವಷ್ಟರಲ್ಲಿ ನಾಯಕ ಬವುಮಾ ಮತ್ತು ರೊಸ್ಸೋ ಪೆವಿಲಿಯನ್ ಸೇರಿಕೊಂಡರು. ಆನಂತರ ಮಾರ್ಕ್ ರಮ್ ಕೊಂಚ ಪ್ರತಿರೋಧ ತೋರಿದರು. ಆದರೆ ಮೂರು ವಿಕೆಟ್ ಪತನದ ನಂತರ ಬಂದ ಡೇವಿಡ್ ಮಿಲ್ಲರ್ ಮತ್ತು ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಡಿಕಾಕ್ ಇಬ್ಬರೂ ಕ್ರಮೇಣ ರನ್ ಗಳಿಸಲು ಶುರು ಮಾಡಿದರು. ಆದರೆ ಅದು ತೀರಾ ತಡವಾಗಿತ್ತು. ಹಾಗಾಗಿ 47 ಬಾಲ್ ಗಳಲ್ಲಿ 106 ರನ್ ಗಳಿಸಿದ ಮಿಲ್ಲರ್ ಅವರ ಅಬ್ಬರದ ಆಟದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ 16 ರನ್ ಗಳಿಂದ ಸೊಲೊಪ್ಪಿಕೊಂಡಿತು. </p>



<figure class="wp-block-image size-large"><img decoding="async" width="1024" height="954" src="https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1-1024x954.jpeg" alt="" class="wp-image-8673" srcset="https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1-1024x954.jpeg 1024w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1-300x280.jpeg 300w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1-768x716.jpeg 768w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1-150x140.jpeg 150w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1-696x649.jpeg 696w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1-1068x995.jpeg 1068w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1.jpeg 1159w" sizes="(max-width: 1024px) 100vw, 1024px" /></figure>



<p style="font-size:20px">ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ ಡಿಕಾಕ್ ಕೊನೆಯವರೆಗೂ ಅಜೇಯವಾಗಿ ಉಳಿದು 48 ಬಾಲ್ ಗಳಲ್ಲಿ 69 ರನ್ ಗಳಿಸಿದರು. ಭಾರತ 238 ರನ್ ಗುರಿ ನೀಡಿದಾಗ ಪಂದ್ಯ ಗೆಲ್ಲುವುದು ಬಹುತೇಕ ನಿಶ್ಚಿತವಾಗಿತ್ತು. ಆದರೆ ನೀರಸವಾಗಿ ಸಾಗಿದ್ದ ಪಂದ್ಯಕ್ಕೆ ಕಳೆ ತಂದಿದ್ದು ಮಿಲ್ಲರ್ ಅವರ ಆಟ. ಆದರೆ ಅವರಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. ಹಾಗಾಗಿ ಭಾರತಕ್ಕೆ ಸರಣಿ ಜಯ ಒಲಿದು ಬಂತು .</p>



<figure class="wp-block-image size-large"><img decoding="async" width="1010" height="1024" src="https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1010x1024.jpeg" alt="" class="wp-image-8674" srcset="https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1010x1024.jpeg 1010w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-296x300.jpeg 296w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-768x779.jpeg 768w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1515x1536.jpeg 1515w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-150x152.jpeg 150w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-300x304.jpeg 300w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-696x706.jpeg 696w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-1068x1083.jpeg 1068w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-24x24.jpeg 24w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-48x48.jpeg 48w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM-96x96.jpeg 96w, https://peepalmedia.com/wp-content/uploads/2022/10/WhatsApp-Image-2022-10-03-at-11.33.29-AM.jpeg 1578w" sizes="(max-width: 1010px) 100vw, 1010px" /></figure>



<p style="font-size:20px">ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು 200 ಗಡಿ ದಾಟಿ ಕ್ರಮವಾಗಿ 237 ಮತ್ತು 221 ರನ್ ಗಳಿಸಿದ್ದು, ಎರಡೂ ತಂಡಗಳು ತಲಾ ಕೇವಲ 3 ವಿಕೆಟ್ ಕಳೆದುಕೊಂಡಿದ್ದು ಪಿಚ್ ಬ್ಯಾಟ್ಸ್ ಮನ್ ಗಳಿಗೆ ಸಹಕಾರಿ ಆಗಿತ್ತು ಅನ್ನೋದನ್ನು ನಿರೂಪಿಸಿತು. ಭಾರತದ ಪರ ಅರ್ಶ್ ದೀಪ್ ಸಿಂಗ್ ಆರಂಭದ ಒಂದೇ ಓವರ್ನಲ್ಲಿ ಎರಡು ವಿಕೆಟ್ ಪಡೆದರಾದರೂ 4 ಓವರ್ ಗಳಲ್ಲಿ 62 ರನ್ ಕೊಟ್ಟು ದುಬಾರಿ ಆದರು. ಮಿಲ್ಲರ್ ಅವರ ಸಾಹಸದ ಶತಕ, ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಆಟದ ನಡುವೂ ಪಂದ್ಯಶ್ರೇಷ್ಠ ಪ್ರಶಸ್ತಿ ಕೆ.ಎಲ್ ರಾಹುಲ್ ಅವರ ಪಾಲಾಯಿತು.</p>



<p><strong>ಚಿತ್ರಕೃಪೆ: ಬಿಸಿಸಿಐ</strong></p>
]]></content:encoded>
					
		
		
			</item>
		<item>
		<title>‘ಗೋ’ಸ್ವಾಮಿ ಎಂಬ ಹಳೆಯ ‘ಹುಲಿ’, ಇಟ್ಸ್ ಟೈಮ್ ಟು ‘ಗೋ’ ಎಂದ ಜೂಲನ್</title>
		<link>https://peepalmedia.com/go-swami-emba-haleya-huli-its-time-to-go-enda-julan/</link>
		
		<dc:creator><![CDATA[Peepal Media]]></dc:creator>
		<pubDate>Tue, 27 Sep 2022 05:13:33 +0000</pubDate>
				<category><![CDATA[ವಿಶೇಷ]]></category>
		<category><![CDATA[ಸಿನಿಮಾ]]></category>
		<category><![CDATA[cricket]]></category>
		<category><![CDATA[india]]></category>
		<category><![CDATA[Jhulan]]></category>
		<category><![CDATA[jhulan-goswami]]></category>
		<category><![CDATA[kannada]]></category>
		<category><![CDATA[match]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[sports]]></category>
		<category><![CDATA[sports news]]></category>
		<guid isPermaLink="false">https://peepalmedia.com/?p=7435</guid>

					<description><![CDATA[ಆಕೆ ಗೋ ಸ್ವಾಮಿ ಎಂಬ ಹೆಸರಿಗೆ ತಕ್ಕಂತೆ ನಿಜವಾದ ಗೋ ಗೆಟ್ಟರ್. ಹೆಸರಲ್ಲಿ ‘ಗೋ’ ಅಂತಿದ್ದರೂ, ಮೈದಾನಕ್ಕೆ ಇಳಿದರೆ ಆಕೆ ಥೇಟು ‘ಹುಲಿ’. ಕೈಯಲ್ಲಿ ಬಾಲ್ ಹಿಡಿದು ಬ್ಯಾಟ್ಸ್ ಮನ್ ಕಡೆ ನುಗ್ಗುತ್ತಿದ್ದರೆ ಕಣ್ಣಲ್ಲಿ ಕಾಣಿಸೋದು ಕೇವಲ ವಿಕೆಟ್ ತೆಗೆಯುವ ಹಂಬಲ. ಹೌದು, ಭಾರತದ ಹಿರಿಯ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿ ಈಗ ಅಂತರಾಷ್ಟ್ರೀಯ ಕ್ರಿಕಟ್ ಗೆ ವಿದಾಯ ಹೇಳಿದ್ದಾರೆ. ಭಾರತ ತಂಡಕ್ಕಾಗಿ ಇಷ್ಟು ವರ್ಷಗಳ ಅವರ ಕ್ರಿಕೆಟ್ ಸೇವೆ, ಸಾಧನೆ ಮತ್ತು ಮನರಂಜನೆಗೆ ಈಗ ತೆರೆ [&#8230;]]]></description>
										<content:encoded><![CDATA[
<p style="font-size:20px">ಆಕೆ ಗೋ ಸ್ವಾಮಿ ಎಂಬ ಹೆಸರಿಗೆ ತಕ್ಕಂತೆ ನಿಜವಾದ ಗೋ ಗೆಟ್ಟರ್. ಹೆಸರಲ್ಲಿ ‘ಗೋ’ ಅಂತಿದ್ದರೂ, ಮೈದಾನಕ್ಕೆ ಇಳಿದರೆ ಆಕೆ ಥೇಟು ‘ಹುಲಿ’. ಕೈಯಲ್ಲಿ ಬಾಲ್ ಹಿಡಿದು ಬ್ಯಾಟ್ಸ್ ಮನ್ ಕಡೆ ನುಗ್ಗುತ್ತಿದ್ದರೆ ಕಣ್ಣಲ್ಲಿ ಕಾಣಿಸೋದು ಕೇವಲ ವಿಕೆಟ್ ತೆಗೆಯುವ ಹಂಬಲ. ಹೌದು, ಭಾರತದ ಹಿರಿಯ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿ ಈಗ ಅಂತರಾಷ್ಟ್ರೀಯ ಕ್ರಿಕಟ್ ಗೆ ವಿದಾಯ ಹೇಳಿದ್ದಾರೆ. ಭಾರತ ತಂಡಕ್ಕಾಗಿ ಇಷ್ಟು ವರ್ಷಗಳ ಅವರ ಕ್ರಿಕೆಟ್ ಸೇವೆ, ಸಾಧನೆ ಮತ್ತು ಮನರಂಜನೆಗೆ ಈಗ ತೆರೆ ಬಿದ್ದಿದೆ.</p>



<p style="font-size:20px">ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್ ಜೂಲನ್ ಗೋಸ್ವಾಮಿ ಇನ್ನು ಮುಂದೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವುದನ್ನು ನೋಡಲಾಗುವುದಿಲ್ಲ. ಜೂಲನ್ ಸೆಪ್ಟೆಂಬರ್ 24 ರಂದು &#8216;ಹೋಮ್ ಆಫ್ ಕ್ರಿಕೆಟ್&#8217; ಅಂದರೆ ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ತಮ್ಮ 20 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. 39 ವರ್ಷದ ಜೂಲನ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯವಾಗಿತ್ತು. ಈ ಹಾದಿಯಲ್ಲಿ ತಮ್ಮ ಕೊನೆಯ ಪಂದ್ಯದಲ್ಲಿ ವಿಶ್ವದಾಖಲೆಯನ್ನೂ ನಿರ್ಮಿಸಿದ್ದಾರೆ ಜೂಲನ್.</p>



<figure class="wp-block-image size-full"><img loading="lazy" decoding="async" width="800" height="450" src="https://peepalmedia.com/wp-content/uploads/2022/09/julan-goswami-2.webp" alt="" class="wp-image-7438" srcset="https://peepalmedia.com/wp-content/uploads/2022/09/julan-goswami-2.webp 800w, https://peepalmedia.com/wp-content/uploads/2022/09/julan-goswami-2-300x169.webp 300w, https://peepalmedia.com/wp-content/uploads/2022/09/julan-goswami-2-768x432.webp 768w, https://peepalmedia.com/wp-content/uploads/2022/09/julan-goswami-2-150x84.webp 150w, https://peepalmedia.com/wp-content/uploads/2022/09/julan-goswami-2-696x392.webp 696w" sizes="auto, (max-width: 800px) 100vw, 800px" /></figure>



<p style="font-size:20px">ಬಲಗೈ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಅಂತರಾಷ್ಟ್ರೀಯ ಕ್ರಿಕೆಟ್ ಜೀವನ ಒಂದು ಅದ್ಭುತ ಪಯಣ. ಅವರು 204 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಅವರು&nbsp; 255 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವೇಗದ ಬೌಲರ್ 7 ಬಾರಿ 4 ವಿಕೆಟ್ ಮತ್ತು ಎರಡು ಬಾರಿ 5 ವಿಕೆಟ್ಗಳನ್ನು ಪಡೆದಿದ್ದಾರೆ.</p>



<p style="font-size:20px">ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಜೂಲನ್ ನಂತರ, ಸ್ಟೆಫನಿ ಟೇಲರ್ ಸಕ್ರಿಯ ಆಟಗಾರರಲ್ಲಿ ಅತಿ ಹೆಚ್ಚು ಅಂದರೆ 152 ವಿಕೆಟ್‌ಗಳನ್ನು ಹೊಂದಿದ್ದಾರೆ. ಜೂಲನ್ 12 ಟೆಸ್ಟ್ ಪಂದ್ಯಗಳಲ್ಲಿ 44 ವಿಕೆಟ್ ಹಾಗೂ 68 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 56 ವಿಕೆಟ್ ಪಡೆದಿದ್ದಾರೆ. ಅಲ್ಲದೆ, ಮಹಿಳೆಯರ ODI ಕ್ರಿಕೆಟ್‌ನಲ್ಲಿ 10000 ಕ್ಕೂ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ ಮೊದಲ ಬೌಲರ್. ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಜೂಲನ್ ಈ ಸಾಧನೆ ಮಾಡಿದ್ದಾರೆ.</p>



<p style="font-size:20px">25 ನವೆಂಬರ್ 1982 ರಂದು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಚಕ್ಡಾ ಎಂಬ ಸಣ್ಣ ಪಟ್ಟಣದಲ್ಲಿ ಸರಳ ಕುಟುಂಬದಲ್ಲಿ ಜನಿಸಿದ ಈ ಆಟಗಾರ್ತಿ ಹುಡುಗರೊಂದಿಗೆ ಆಡುವ ಮೂಲಕ ಕ್ರಿಕೆಟ್ ಪ್ರಾರಂಭಿಸಿದರು. ಆರಂಭದ ದಿನಗಳಲ್ಲಿ ಜೂಲನ್ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರು. ಪ್ರತಿದಿನ ಅಭ್ಯಾಸಕ್ಕಾಗಿ ಲೋಕಲ್ ರೈಲಿನಲ್ಲಿ ಎರಡೂವರೆ ಗಂಟೆಗಳ ಕಾಲ ಪ್ರಯಾಣಿಸುತ್ತಿದ್ದರು.</p>



<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/09/Jhulan-Goswami-3-1024x576.webp" alt="" class="wp-image-7439" srcset="https://peepalmedia.com/wp-content/uploads/2022/09/Jhulan-Goswami-3-1024x576.webp 1024w, https://peepalmedia.com/wp-content/uploads/2022/09/Jhulan-Goswami-3-300x169.webp 300w, https://peepalmedia.com/wp-content/uploads/2022/09/Jhulan-Goswami-3-768x432.webp 768w, https://peepalmedia.com/wp-content/uploads/2022/09/Jhulan-Goswami-3-150x84.webp 150w, https://peepalmedia.com/wp-content/uploads/2022/09/Jhulan-Goswami-3-696x392.webp 696w, https://peepalmedia.com/wp-content/uploads/2022/09/Jhulan-Goswami-3-1068x601.webp 1068w, https://peepalmedia.com/wp-content/uploads/2022/09/Jhulan-Goswami-3.webp 1280w" sizes="auto, (max-width: 1024px) 100vw, 1024px" /></figure>



<p style="font-size:20px">ಜೂಲನ್ ಗೋಸ್ವಾಮಿ ತಮ್ಮ ವೇಗದ ಬೌಲಿಂಗ್‌ನಿಂದಾಗಿ &#8216;ಚಕ್ಡಾ ಎಕ್ಸ್‌ಪ್ರೆಸ್&#8217; ಎಂದು ಕರೆಯಲ್ಪಟ್ಟರು. ಜೂಲನ್ ಗಂಟೆಗೆ 120 ಕಿಮೀ ವೇಗದಲ್ಲಿ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದರು. ಜೂಲನ್ ಗೋಸ್ವಾಮಿ ಫಿಟ್ನೆಸ್ ವಿಚಾರದಲ್ಲಿ ಯಾವತ್ತೂ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ಬಾರಿ ಗಾಯಗೊಂಡರೂ ಎಂದಿಗೂ ಛಲ ಬಿಡಲಿಲ್ಲ. ಜೂಲನ್ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. </p>



<p style="font-size:20px">ಟೆಸ್ಟ್, ಏಕದಿನ ಹಾಗೂ ಟಿ20ಯಲ್ಲಿ ಒಟ್ಟು 353 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆ ನೋಡಿದರೆ ಬೆಳೆಯುವ ಪೈರು ಮೊಳಕೆಯಲ್ಲೇ ಎಂಬಂತೆ ಜೂಲನ್ 23 ನೇ ವಯಸ್ಸಿನಲ್ಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದರು. ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್ ಎನಿಸಿಕೊಂಡರು. ಜೂಲನ್ ಮಹಿಳಾ ವಿಶ್ವಕಪ್‌ನಲ್ಲೂ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. </p>



<figure class="wp-block-image size-large"><img loading="lazy" decoding="async" width="1024" height="614" src="https://peepalmedia.com/wp-content/uploads/2022/09/jhulan-goswami-1024x614.webp" alt="" class="wp-image-7440" srcset="https://peepalmedia.com/wp-content/uploads/2022/09/jhulan-goswami-1024x614.webp 1024w, https://peepalmedia.com/wp-content/uploads/2022/09/jhulan-goswami-300x180.webp 300w, https://peepalmedia.com/wp-content/uploads/2022/09/jhulan-goswami-768x461.webp 768w, https://peepalmedia.com/wp-content/uploads/2022/09/jhulan-goswami-150x90.webp 150w, https://peepalmedia.com/wp-content/uploads/2022/09/jhulan-goswami-696x418.webp 696w, https://peepalmedia.com/wp-content/uploads/2022/09/jhulan-goswami-1068x641.webp 1068w, https://peepalmedia.com/wp-content/uploads/2022/09/jhulan-goswami.webp 1500w" sizes="auto, (max-width: 1024px) 100vw, 1024px" /></figure>



<p style="font-size:20px">ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅವರು ಒಟ್ಟು 40 ಬಲಿ ಪಡೆದಿದ್ದಾರೆ. ಅಲ್ಲದೆ, ಸುಮಾರು 6 ವಿಶ್ವಕಪ್‌ಗಳಲ್ಲಿ ಭಾಗವಹಿಸಿ, 2007 ರಲ್ಲಿ ಐಸಿಸಿ ಫೀಮೇಲೆ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ ಕೂಡಾ ಪಡೆದಿದ್ದಾರೆ. 2010 ರಲ್ಲಿ, ಇವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2002 ರಲ್ಲಿ ಜೂಲನ್ ಅವರ ಚೊಚ್ಚಲ ಪಂದ್ಯದ ನಂತರ ಅನೇಕ ಮಹಿಳಾ ಕ್ರಿಕೆಟಿಗರು ಬಂದು ಹೋಗಿದ್ದಾರೆ. ಆದರೆ ಬಂಗಾಳದ ಈ ಬೌಲರ್ ಇಲ್ಲಿಯವರೆಗೂ ತಮ್ಮನ್ನು ತಾವು ಸಮರ್ತಿಸಿಕೊಂಡಿದ್ದಾರೆ ಮತ್ತು ದೊಡ್ಡ ಕ್ರಿಕೆಟ್ ತಾರೆಯಾಗಿ ಹೊರಹೊಮ್ಮಿದ್ದಾರೆ. </p>



<p style="font-size:20px">ಕಳೆದ 20 ವರ್ಷಗಳಲ್ಲಿ ಅವರು ಯುವ ಆಟಗಾರ್ತಿಯರಿಗೆ ಮಾದರಿಯಾಗಿದ್ದಾರೆ. ದೇಶದ ಮೂಲೆ ಮೂಲೆಯ  ಯುವ ಆಟಗಾರ್ತಿಯರು ಅವರನ್ನು ತಮ್ಮ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ. ಜೂಲನ್ ಯುವ ಆಟಗಾರರಲ್ಲಿ &#8216;ಜೂಲನ್ ದೀ&#8217; ಎಂದು ಪ್ರಸಿದ್ಧರಾಗಿದ್ದರು. ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ  ಅವರಿಗೆ ಅಭಿಮಾನಿಗಳಿದ್ದಾರೆ.  ಪಾಕಿಸ್ತಾನದ ಬೌಲರ್ ಕೈನಾತ್ ಇಮ್ತಿಯಾಜ್ ಇತ್ತೀಚೆಗೆ ಜೂಲನ್ ಅವರನ್ನು ನೋಡಿದ ನಂತರವೇ ತಾನು ವೇಗದ ಬೌಲರ್ ಆಗಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಜೂಲನ್ ಗೋಸ್ವಾಮಿ 1997 ರ ವಿಶ್ವಕಪ್‌ನಲ್ಲಿ ಬಾಲ್ ಗರ್ಲ್ (ಮೈದಾನದ ಹೊರಗೆ ಬಿದ್ದ ಚೆಂಡನ್ನು ಹಿಂತಿರುಗಿಸುವುದು) ಆಗಿದ್ದರು. ಅಂತಹ ಹುಡುಗಿ ಇಂದು ಭಾರತೀಯ ಕ್ರಿಕೆಟ್ ನಲ್ಲಿ ಏರಿರುವ ಎತ್ತರ ಎಲ್ಲರ ಕಣ್ಣ ಮುಂದಿದೆ. ಹಾಗಾಗಿ ಅವರ ಎಲ್ಲರ ಕ್ರಿಕೆಟ್ ದಾಖಲೆಗಳು ಮತ್ತು ಅವರ ಕ್ರಿಕೆಟ್ ಪ್ರೀತಿ ಅವರ ನಿವೃತ್ತಿಯ</p>



<p></p>



<p></p>



<p style="font-size:20px">🔶<strong> <mark style="background-color:rgba(0, 0, 0, 0)" class="has-inline-color has-vivid-red-color">ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ</mark></strong><br>https://chat.whatsapp.com/GBc6sg7E2FQLuXblEdBxSi</p>



<p></p>



<p style="font-size:20px"><mark style="background-color:rgba(0, 0, 0, 0)" class="has-inline-color has-vivid-purple-color"><strong>ದಯವಿಟ್ಟು ನನ್ನೂರಿಗೆ ಮನುಷ್ಯರನ್ನು ಹುಟ್ಟಿಸು ಕಳಿಸು ದೇವಾ ಎಂಬ ಆರ್ದ್ರ ಆರ್ತನಾದದ ಈ ಕವಿತೆ ಪ್ರಸ್ತುತ ಸನ್ನಿವೇಶಗಳಿಗೆ ಕನ್ನಡಿ ಹಿಡಿದಂತಿದೆ. ಕವಯಿತ್ರಿ ಫಾತಿಮಾ ರಲಿಯಾ ಅವರ ಈ ಕವಿತೆಯನ್ನು ಒಮ್ಮೆ ಕೇಳಿಸಿಕೊಳ್ಳಿ… <br>ಇದನ್ನೂ ನೋಡಿ:</strong> </mark><a href="https://www.facebook.com/watch?v=808934966912602">https://www.facebook.com/watch?v=808934966912602</a></p>
]]></content:encoded>
					
		
		
			</item>
		<item>
		<title>ಭಾರತಕ್ಕೆ ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ</title>
		<link>https://peepalmedia.com/bharatakke-kaige-bandiddu-bayige-baralilla/</link>
		
		<dc:creator><![CDATA[Peepal Media]]></dc:creator>
		<pubDate>Sat, 10 Sep 2022 06:17:33 +0000</pubDate>
				<category><![CDATA[ಆಟೋಟ]]></category>
		<category><![CDATA[cricket]]></category>
		<category><![CDATA[games]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[match]]></category>
		<category><![CDATA[news]]></category>
		<category><![CDATA[pakistana]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sports]]></category>
		<category><![CDATA[sports news]]></category>
		<guid isPermaLink="false">https://peepalmedia.com/?p=4640</guid>

					<description><![CDATA[ನೆಟ್ ಪ್ರಾಕ್ಟೀಸ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲು ಭಾರತ ಕ್ರಿಕೆಟ್ ತಂಡ ಮೂರು ದಿನಗಳ ಹಿಂದೆ ಶ್ರೀಲಂಕಾ ವಿರುದ್ಧ ಸೋತು, ಏಷ್ಯಾ ಕಪ್ ನಿಂದ ಹೊರಹೋಗುವ ಭೀತಿಯಲ್ಲಿದ್ದಾಗ, ಇನ್ನೇನಿದ್ದರೂ ಪವಾಡ ನಡೆದರೆ ಮಾತ್ರ ಭಾರತ ಫೈನಲ್ ಗೆ ಹೋಗಬಹುದು ಎಂದು ಭಾರತೀಯ ಅಭಿಮಾನಿಗಳು ನಿರಾಸೆ ಇದ್ದರೂ ಕಾದು ಕುಳಿತಿದ್ದರು. ಆದರೆ ಕಳೆದ ಎರಡು ದಿನಗಳ ಬೆಳವಣಿಗೆಗಳನ್ನು ನೋಡಿದರೆ ಆ ಪವಾಡ ಬಹುತೇಕ ನಡೆದು ಹೋಗಿತ್ತು. ಭಾನುವಾರ ಪೈನಲ್ ಆಡಲಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಿನ್ನೆ ನಡೆದ [&#8230;]]]></description>
										<content:encoded><![CDATA[
<h2 class="wp-block-heading">ನೆಟ್ ಪ್ರಾಕ್ಟೀಸ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲು</h2>



<p class="has-medium-font-size">ಭಾರತ ಕ್ರಿಕೆಟ್ ತಂಡ ಮೂರು ದಿನಗಳ ಹಿಂದೆ ಶ್ರೀಲಂಕಾ ವಿರುದ್ಧ ಸೋತು, ಏಷ್ಯಾ ಕಪ್ ನಿಂದ ಹೊರಹೋಗುವ ಭೀತಿಯಲ್ಲಿದ್ದಾಗ, ಇನ್ನೇನಿದ್ದರೂ ಪವಾಡ ನಡೆದರೆ ಮಾತ್ರ ಭಾರತ ಫೈನಲ್ ಗೆ ಹೋಗಬಹುದು ಎಂದು ಭಾರತೀಯ ಅಭಿಮಾನಿಗಳು ನಿರಾಸೆ ಇದ್ದರೂ ಕಾದು ಕುಳಿತಿದ್ದರು. ಆದರೆ ಕಳೆದ ಎರಡು ದಿನಗಳ ಬೆಳವಣಿಗೆಗಳನ್ನು ನೋಡಿದರೆ ಆ ಪವಾಡ ಬಹುತೇಕ ನಡೆದು ಹೋಗಿತ್ತು.</p>



<p class="has-medium-font-size">ಭಾನುವಾರ ಪೈನಲ್ ಆಡಲಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಿನ್ನೆ ನಡೆದ ಕೊನೆಯ ಪಂದ್ಯ, ಪೈನಲ್ ಗೆ ಮುಂಚಿನ ನೆಟ್ ಪ್ರಾಕ್ಟೀಸ್ ರೀತಿಯಲ್ಲಿತ್ತು. ಆದರೆ ಈ ಪಂದ್ಯದಲ್ಲಿ ಶ್ರೀಲಂಕಾ ಸಂಪೂರ್ಣ ಮೇಲುಗೈ ಸಾಧಿಸಿ ಗೆದ್ದಿದೆ. ಟಾಸ್ ಗೆದ್ದು ಪಾಕ್ ಗೆ ಬ್ಯಾಟಿಂಗ್ ನೀಡಿ ಅವರನ್ನು ಕೇವಲ 121 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಶ್ರೀಲಂಕಾ ನಂತರ ಆ ಗುರಿಯನ್ನು ಸುಲಭವಾಗಿ ತಲುಪಿತು. 3 ವಿಕೆಟ್ ಕಿತ್ತ ಹಸರಂಗ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. </p>



<figure class="wp-block-image size-large"><img loading="lazy" decoding="async" width="1024" height="640" src="https://peepalmedia.com/wp-content/uploads/2022/09/ps2-1024x640.webp" alt="" class="wp-image-4645" srcset="https://peepalmedia.com/wp-content/uploads/2022/09/ps2-1024x640.webp 1024w, https://peepalmedia.com/wp-content/uploads/2022/09/ps2-300x188.webp 300w, https://peepalmedia.com/wp-content/uploads/2022/09/ps2-768x480.webp 768w, https://peepalmedia.com/wp-content/uploads/2022/09/ps2.webp 1200w" sizes="auto, (max-width: 1024px) 100vw, 1024px" /></figure>



<p class="has-medium-font-size">ಆದರೆ, ಈ ಫಲಿತಾಂಶ ನೋಡಿ , ಕೈ ಬಂದಿದ್ದು ಬಾಯಿಗೆ ಬರಲಿಲ್ಲವಲ್ಲ ಎಂದು ಬೇಸರ ಮಾಡಿಕೊಂಡಿದ್ದು ಮಾತ್ರ ಭಾರತೀಯ ಅಭಿಮಾನಿಗಳು ನಿನ್ನೆಯ ಪಂದ್ಯದಲ್ಲಿ ಶ್ರೀಲಂಕಾ ಪಾಕ್ ಅನ್ನು ಮಣಿಸಿದಾಗ ಎಲ್ಲರೂ ನೆನಪಿಸಿಕೊಂಡಿದ್ದು ಪಾಕಿಸ್ತಾನ ಮತ್ತು ಆಫ್ಗಾನಿಸ್ತಾನದ ನಡುವಿನ ಪಂದ್ಯವನ್ನು. ಆ ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್ ಕಳೆದುಕೊಂಡು, ಕೊನೆಯ ಓವರ್ ನಲ್ಲಿ ಗೆಲ್ಲಲು 11 ರನ್ ಗಳಿಸಬೇಕಿದ್ದಾಗ, ಆಫ್ಗನ್ ಬೋಲರ್ ಫಾರೂಖಿ ಎರಡು ಸತತ ಫುಲ್ ಟಾಸ್ ಹಾಕಿ ನಸೀಮ್ ಶಾ ಅವರಂಥ ನಂಬರ್ 11 ಬ್ಯಾಟ್ಸ್ ಮನ್ ಕೈಯಲ್ಲಿ ಎರಡು ಸತತ ಸಿಕ್ಸರ್ ಹೊಡೆಸಿಕೊಳ್ಳದೇ ಇದ್ದಿದ್ದರೆ ಭಾನುವಾರದ ಫೈನಲ್ ನಲ್ಲಿ ಭಾರತಕ್ಕೆ ಆಡುವ ಅವಕಾಶ ಸಿಗುತ್ತಿತ್ತು ಎಂದು ಅಭಿಮಾನಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. </p>



<p class="has-medium-font-size">ಭಾರತೀಯ ತಂಡಕ್ಕೆ ಫೈನಲ್ ಪ್ರವೇಶಿಸಲು ಏನೇನು ಬೇಕಿತ್ತೋ ಅದೆಲ್ಲ ಹೆಚ್ಚು ಕಡಿಮೆ ಆಗಿ ಹೋಗಿತ್ತು. ಆಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಶತಕ ಮತ್ತು ಭುವನೇಶ್ವರ್ ಅವರ ಮಾರಕ ಬೋಲಿಂಗ್ ನಿಂದ ಭಾರೀ ಅಂತರದಿಂದ ಗೆದ್ದು ಎಲ್ಲಾ ತಂಡಗಳಿಗಿಂತ ಹೆಚ್ಚು ರನ್ ರೇಟ್ ಅನ್ನು ಗಳಿಸಿತ್ತು. ನಿನ್ನೆ ಶ್ರೀಲಂಕಾ ಕೂಡಾ ಪಾಕಿಸ್ತಾನವನ್ನು ಸೋಲಿಸಿತು. ಹಾಗಾಗಿ, ಅಂದಿನ ಆಫ್ಘಾನಿಸ್ತಾನ, ಪಾಕಿಸ್ತಾನದ ಪಂದ್ಯದಲ್ಲಿ ಫಾರೂಖಿ ಕೊನೆಯ ಓವರ್ ನಲ್ಲಿ ಕೊಂಚ ಸಂಯಮ ತೋರಿ ಗೆದ್ದಿದ್ದರೆ, ಭಾರತಕ್ಕೆ ಅದೃಷ್ಠ ಲಕ್ಷ್ಮಿ ಒಲಿಯುತ್ತಿತ್ತು ಅನ್ನೋದು ಭಾರತೀಯ ಅಭಿಮಾನಿಗಳ ಬೇಸರ.</p>
]]></content:encoded>
					
		
		
			</item>
		<item>
		<title>ಭಾರತೀಯ ಒಲಂಪಿಕ್‌ ಸಂಸ್ಥೆಗೆ ಇದು ಅಂತಿಮ ಎಚ್ಚರಿಕೆ: ವಿಶ್ವ ಕ್ರೀಡಾ ಸಂಸ್ಥೆ</title>
		<link>https://peepalmedia.com/bharathiya-olampic-samsthege-idu-anthima-eccharike-vishva-kroda-samsthe/</link>
		
		<dc:creator><![CDATA[Peepal Media]]></dc:creator>
		<pubDate>Fri, 09 Sep 2022 08:23:23 +0000</pubDate>
				<category><![CDATA[ಆಟೋಟ]]></category>
		<category><![CDATA[india]]></category>
		<category><![CDATA[Indian Olympic Association]]></category>
		<category><![CDATA[International Olympic Committee]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sports]]></category>
		<category><![CDATA[warning]]></category>
		<guid isPermaLink="false">https://peepalmedia.com/?p=4428</guid>

					<description><![CDATA[ಮುಂಬೈ: ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಯು ಗುರುವಾರ ಭಾರತೀಯ ಒಲಂಪಿಕ್ ಸಂಸ್ಥೆ(ಐಒಎ)ಗೆ ತನ್ನ ಆಡಳಿತದ ಕಾಳಜಿಗಳನ್ನು ಪರಿಹರಿಸಿ ಡಿಸೆಂಬರ್‌ನೊಳಗೆ ಚುನಾವಣೆಗಳನ್ನು ನಡೆಸಲಿಲ್ಲದಿದ್ದರೆ ವಿಶ್ವ ಕ್ರೀಡಾ ಸಂಸ್ಥೆಯು ಭಾರತವನ್ನು ನಿಷೇಧಿಸುತ್ತದೆ ಎಂದು ಅಂತಿಮ ಎಚ್ಚರಿಕೆ ನೀಡಿದೆ. ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯು ತನ್ನ ಚುನಾವಣೆಗಳನ್ನು ನಡೆಸಲು ಡಿಸೆಂಬರ್ 2022 ರವರೆಗೆ ಭಾರತಕ್ಕೆ ಕಾಲಾವಕಾಶವನ್ನು ನೀಡಿದೆ. ಇಲ್ಲದಿದ್ದರೆ ವಿಶ್ವ ಸಂಸ್ಥೆಯ ಕಾರ್ಯಕಾರಿ ಮಂಡಳಿಯು ಸಭೆ ಸೇರಿದಾಗ ತಕ್ಷಣದ ಅಮಾನತು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ. ಮುಂದಿನ ವರ್ಷ ಮುಂಬೈನಲ್ಲಿ ನಡೆಯಲಿರುವ ಐಒಸಿ ಅಧಿವೇಶನವನ್ನು ಅದರ [&#8230;]]]></description>
										<content:encoded><![CDATA[
<pre class="wp-block-preformatted has-medium-font-size"><strong>ಮುಂಬೈ:</strong> ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಯು ಗುರುವಾರ ಭಾರತೀಯ ಒಲಂಪಿಕ್ ಸಂಸ್ಥೆ(ಐಒಎ)ಗೆ ತನ್ನ ಆಡಳಿತದ ಕಾಳಜಿಗಳನ್ನು ಪರಿಹರಿಸಿ ಡಿಸೆಂಬರ್‌ನೊಳಗೆ ಚುನಾವಣೆಗಳನ್ನು ನಡೆಸಲಿಲ್ಲದಿದ್ದರೆ ವಿಶ್ವ ಕ್ರೀಡಾ ಸಂಸ್ಥೆಯು ಭಾರತವನ್ನು ನಿಷೇಧಿಸುತ್ತದೆ ಎಂದು ಅಂತಿಮ ಎಚ್ಚರಿಕೆ ನೀಡಿದೆ.

ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯು ತನ್ನ ಚುನಾವಣೆಗಳನ್ನು ನಡೆಸಲು ಡಿಸೆಂಬರ್ 2022 ರವರೆಗೆ ಭಾರತಕ್ಕೆ ಕಾಲಾವಕಾಶವನ್ನು ನೀಡಿದೆ. ಇಲ್ಲದಿದ್ದರೆ ವಿಶ್ವ ಸಂಸ್ಥೆಯ ಕಾರ್ಯಕಾರಿ ಮಂಡಳಿಯು ಸಭೆ ಸೇರಿದಾಗ ತಕ್ಷಣದ ಅಮಾನತು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ.

ಮುಂದಿನ ವರ್ಷ ಮುಂಬೈನಲ್ಲಿ ನಡೆಯಲಿರುವ ಐಒಸಿ ಅಧಿವೇಶನವನ್ನು ಅದರ ಮೂಲ ದಿನಾಂಕದಿಂದ ಸೆಪ್ಟೆಂಬರ್-ಅಕ್ಟೋಬರ್‌ಗೆ ಮುಂದೂಡಲು ಕಾರ್ಯಕಾರಿ ಮಂಡಳಿ(ಇಬಿ)ನಿರ್ಧರಿಸಿದೆ.

</pre>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/09/indian-olympic-association-1024x768.jpg" alt="" class="wp-image-4432" width="730" height="546"/><figcaption><strong>ಭಾರತೀಯ ಒಲಂಪಿಕ್ ಸಂಸ್ಥೆ(ಐಒಎ)</strong></figcaption></figure></div>]]></content:encoded>
					
		
		
			</item>
		<item>
		<title>ಕ್ರೀಡಾ ದಿನಾಚರಣೆ: ಪ್ರಧಾನಿ ಮೋದಿ ಸೇರಿದಂತೆ ಹಲವು ಕ್ರೀಡಾಪಟುಗಳಿಂದ ಶುಭ ಸಂದೇಶ</title>
		<link>https://peepalmedia.com/krida-dinacharane-pradhani-modi-seridanthe-halavu-kridaptugalinda-shubha-sandesha/</link>
		
		<dc:creator><![CDATA[Peepal Media]]></dc:creator>
		<pubDate>Mon, 29 Aug 2022 13:38:44 +0000</pubDate>
				<category><![CDATA[ಆಟೋಟ]]></category>
		<category><![CDATA[india]]></category>
		<category><![CDATA[narendramodi]]></category>
		<category><![CDATA[nationalsportsday]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sachin tendulkar]]></category>
		<category><![CDATA[sports]]></category>
		<guid isPermaLink="false">https://peepalmedia.com/?p=3363</guid>

					<description><![CDATA[ನವದೆಹಲಿ: ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಮತ್ತು ಕ್ರೀಡಾಪಟುಗಳು ರಾಷ್ಟ್ರೀಯ ಕ್ರೀಡಾ ದಿನಾಚರಣೆಗೆ ಶುಭ ಸಂದೇಶ ಕೋರಿದ್ದಾರೆ. ʼರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು ಮತ್ತು ಮೇಜರ್‌ ಧ್ಯಾನ್‌ ಚಂದ್‌ ಜಿ ಅವರಿಗೆ ಜನ್ಮ ದಿನದ ಗೌರವ ನಮನಗಳು. ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗಳು ಉತ್ತಮವಾಗಿವೆ, ಇದೇ ರೀತಿಯ ಗೆಲುವಿನ ಓಟ ಮುಂದುವರೆಯಲಿ, ಕ್ರೀಡೆಯು ಭಾರತದಾದ್ಯಂತ ಜನಪ್ರಿಯತೆ ಗಳಿಸುತ್ತಿರಲಿʼ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿ ಶುಭ ಕೋರಿದರು. ಕ್ರಿಕೆಟ್‌ ದಿಗ್ಗಜ ಸಚ್ಚಿನ್‌ ತೆಂಡೂಲ್ಕರ್‌ ಕಾಮನ್‌ ವೇಲ್ತ್‌ [&#8230;]]]></description>
										<content:encoded><![CDATA[
<p class="has-medium-font-size"><strong>ನವದೆಹಲಿ:</strong> ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಮತ್ತು ಕ್ರೀಡಾಪಟುಗಳು ರಾಷ್ಟ್ರೀಯ ಕ್ರೀಡಾ ದಿನಾಚರಣೆಗೆ ಶುಭ ಸಂದೇಶ ಕೋರಿದ್ದಾರೆ.</p>



<p class="has-medium-font-size">ʼರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು ಮತ್ತು ಮೇಜರ್‌ ಧ್ಯಾನ್‌ ಚಂದ್‌ ಜಿ ಅವರಿಗೆ ಜನ್ಮ ದಿನದ ಗೌರವ ನಮನಗಳು. ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗಳು ಉತ್ತಮವಾಗಿವೆ, ಇದೇ ರೀತಿಯ ಗೆಲುವಿನ ಓಟ ಮುಂದುವರೆಯಲಿ, ಕ್ರೀಡೆಯು ಭಾರತದಾದ್ಯಂತ ಜನಪ್ರಿಯತೆ ಗಳಿಸುತ್ತಿರಲಿʼ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿ ಶುಭ ಕೋರಿದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Greetings on National Sports Day and tributes to Major Dhyan Chand Ji on his birth anniversary. <br><br>The recent years have been great for sports. May this trend continue. May sports keep gaining popularity across India. <a href="https://t.co/g04aqModJT">pic.twitter.com/g04aqModJT</a></p>&mdash; Narendra Modi (@narendramodi) <a href="https://twitter.com/narendramodi/status/1564079378287546368?ref_src=twsrc%5Etfw">August 29, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p class="has-medium-font-size">ಕ್ರಿಕೆಟ್‌ ದಿಗ್ಗಜ ಸಚ್ಚಿನ್‌ ತೆಂಡೂಲ್ಕರ್‌ ಕಾಮನ್‌ ವೇಲ್ತ್‌ ಗೇಮ್ಸ್‌ನಲ್ಲಿ ʼಲಾನ್‌ ಬಾಲ್ಸ್‌ʼ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ ಮಹಿಳಾ ತಂಡದ ಸಾಧನೆಯನ್ನು ಕೊಂಡಾಡುವ ಮೂಲಕ ಕ್ರೀಡಾ ದಿನದ ಶುಭಶಯಗಳನ್ನು ತಿಳಿಸಿದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Age is no bar to transform 🇮🇳 into a <a href="https://twitter.com/hashtag/SportPlayingNation?src=hash&amp;ref_src=twsrc%5Etfw">#SportPlayingNation</a>!<br><br>On <a href="https://twitter.com/hashtag/NationalSportsDay?src=hash&amp;ref_src=twsrc%5Etfw">#NationalSportsDay</a> let’s all pick up any sport and play it regularly. Let’s be a fitter nation. <a href="https://t.co/pLMckBcgDs">pic.twitter.com/pLMckBcgDs</a></p>&mdash; Sachin Tendulkar (@sachin_rt) <a href="https://twitter.com/sachin_rt/status/1564136805250875395?ref_src=twsrc%5Etfw">August 29, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p class="has-medium-font-size">ಹಾಕಿ ಕ್ರೀಡಾಪಟು ಮೇಜರ್‌ ಧ್ಯಾನ್‌ಚಂದ್‌ ಅವರ ಜನ್ಮದಿನವನ್ನು ʼರಾಷ್ಟ್ರೀಯ ಕ್ರೀಡಾದಿನʼವನ್ನಾಗಿ ಆಚರಿಸಲಾಗುತ್ತದೆ.</p>
]]></content:encoded>
					
		
		
			</item>
		<item>
		<title>‘ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ’: ಪ್ರಧಾನಿ ಮೋದಿ</title>
		<link>https://peepalmedia.com/idi-deshave-hemme-paduva-sadhane-pradhani-modi/</link>
		
		<dc:creator><![CDATA[Peepal Media]]></dc:creator>
		<pubDate>Sat, 13 Aug 2022 07:40:16 +0000</pubDate>
				<category><![CDATA[ಆಟೋಟ]]></category>
		<category><![CDATA[commanwealth game 2022]]></category>
		<category><![CDATA[narendramodi]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[sports]]></category>
		<category><![CDATA[twitter]]></category>
		<guid isPermaLink="false">https://peepalmedia.com/?p=1699</guid>

					<description><![CDATA[ನವದೆಹಲಿ: ‘ನೀವೆಲ್ಲರೂ ನಿಮ್ಮ ಸಮಯವನ್ನು ಬಿಡುವು ಮಾಡಿಕೊಂಡು ನನ್ನನ್ನು ಬೇಟಿ ಮಾಡಲು ಬಂದಿದ್ದಕ್ಕೆ ಅಭಿನಂದಿಸುತ್ತೆನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಬರ್ಮಿಂಗ್ ಹ್ಯಾಮ್‌ನ ಕಾಮನ್ ವೆಲ್ತ್ ಗೇಮ್ಸ್ 2022 ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪದಕ ಗಳಿಸಿದ ಭಾರತದ ಆಟಗಾರರ ಜೊತೆ ಇಂದು ತಮ್ಮ ನಿವಾಸದಲ್ಲಿಯೇ ಬೇಟಿಯಾಗಿ ಸಂವಾದ ನಡೆಸಿದರು. ದೇಶವು ಅಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಕ್ರೀಡಾ ಕ್ಷೇತ್ರದಲ್ಲಿಯೂ ಮಾಡಿರುವ ಈ ಸಾಧನೆ [&#8230;]]]></description>
										<content:encoded><![CDATA[
<p class="has-medium-font-size"><strong>ನವದೆಹಲಿ:</strong> ‘ನೀವೆಲ್ಲರೂ ನಿಮ್ಮ ಸಮಯವನ್ನು ಬಿಡುವು ಮಾಡಿಕೊಂಡು ನನ್ನನ್ನು ಬೇಟಿ ಮಾಡಲು ಬಂದಿದ್ದಕ್ಕೆ ಅಭಿನಂದಿಸುತ್ತೆನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.</p>



<p class="has-medium-font-size">ಬರ್ಮಿಂಗ್ ಹ್ಯಾಮ್‌ನ ಕಾಮನ್ ವೆಲ್ತ್ ಗೇಮ್ಸ್ 2022 ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪದಕ ಗಳಿಸಿದ ಭಾರತದ ಆಟಗಾರರ ಜೊತೆ ಇಂದು ತಮ್ಮ ನಿವಾಸದಲ್ಲಿಯೇ ಬೇಟಿಯಾಗಿ ಸಂವಾದ ನಡೆಸಿದರು.</p>



<p class="has-medium-font-size">ದೇಶವು ಅಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಕ್ರೀಡಾ ಕ್ಷೇತ್ರದಲ್ಲಿಯೂ ಮಾಡಿರುವ ಈ ಸಾಧನೆ ದೇಶಕ್ಕೆ ಬಹಳಷ್ಟು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.</p>



<p class="has-medium-font-size">ಈ ಕುರಿತು ಪ್ರಧಾನಿಯವರೇ ತಮ್ಮ ಟ್ವಟರ್ ಖಾತೆಯ ಮೂಲಕ ‘ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಿರಿ’ ಎಂದು ಅಭಿನಂದನೆ ವ್ಯಕ್ತಪಡಿಸಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Elated to interact with our CWG 2022 contingent. Entire nation is proud of their outstanding achievements. <a href="https://t.co/eraViqKcnl">https://t.co/eraViqKcnl</a></p>&mdash; Narendra Modi (@narendramodi) <a href="https://twitter.com/narendramodi/status/1558342320902516736?ref_src=twsrc%5Etfw">August 13, 2022</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
	</channel>
</rss>
