<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Srinagar &#8211; Peepal Media</title>
	<atom:link href="https://peepalmedia.com/tag/srinagar/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 05 Dec 2024 06:39:34 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Srinagar &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕಾಶ್ಮೀರದ ಟ್ರಾಲ್‌ನಲ್ಲಿ ಉಗ್ರರ ದಾಳಿ- ಯೋಧ ಮುಷ್ತಾಕ್ ಸೋಫಿ ಗಾಯ</title>
		<link>https://peepalmedia.com/militants-shoot-at-injure-soldier-in-tral/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 05 Dec 2024 06:39:34 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[J&K]]></category>
		<category><![CDATA[jammu and kashmir]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Militants Shoot]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[poonch]]></category>
		<category><![CDATA[Srinagar]]></category>
		<category><![CDATA[Tral]]></category>
		<guid isPermaLink="false">https://peepalmedia.com/?p=50225</guid>

					<description><![CDATA[ಶ್ರೀನಗರ : ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಕೆಲ ಗಂಟೆಗಳ ನಂತರ ಡಿಸೆಂಬರ್ 4, ಬುಧವಾರ ಸಂಜೆ ದಕ್ಷಿಣ ಕಾಶ್ಮೀರದ ತ್ರಾಲ್ ಪ್ರದೇಶದಲ್ಲಿ ಸೇನಾ ಯೋಧನೊಬ್ಬರು ಶಂಕಿತ ಉಗ್ರರ ಗುಂಡಿಗೆ ಗಾಯಗೊಂಡಿದ್ದಾರೆ. ಪುಲ್ವಾಮಾ ಜಿಲ್ಲೆಯ ಟ್ರಾಲ್‌ನ ಖಾನಗುಂಡ್ ಗ್ರಾಮದ ನಿವಾಸಿ ಡೆಲೈರ್ ಮುಷ್ತಾಕ್ ಸೋಫಿ ಎಂದು ಗುರುತಿಸಲಾಗಿರು ಈ ಯೋಧ ತಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ರಜೆಯ ಮೇಲೆ ಇತ್ತೀಚೆಗೆ ಮನೆಗೆ ಬಂದಿದ್ದರು. ಬುಧವಾರ ಸಂಜೆ ಸೋಫಿಯವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ [&#8230;]]]></description>
										<content:encoded><![CDATA[
<p><strong>ಶ್ರೀನಗರ</strong> : ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಕೆಲ ಗಂಟೆಗಳ ನಂತರ ಡಿಸೆಂಬರ್ 4, ಬುಧವಾರ ಸಂಜೆ ದಕ್ಷಿಣ ಕಾಶ್ಮೀರದ ತ್ರಾಲ್ ಪ್ರದೇಶದಲ್ಲಿ ಸೇನಾ ಯೋಧನೊಬ್ಬರು ಶಂಕಿತ ಉಗ್ರರ ಗುಂಡಿಗೆ ಗಾಯಗೊಂಡಿದ್ದಾರೆ.</p>



<p>ಪುಲ್ವಾಮಾ ಜಿಲ್ಲೆಯ ಟ್ರಾಲ್‌ನ ಖಾನಗುಂಡ್ ಗ್ರಾಮದ ನಿವಾಸಿ ಡೆಲೈರ್ ಮುಷ್ತಾಕ್ ಸೋಫಿ ಎಂದು ಗುರುತಿಸಲಾಗಿರು ಈ ಯೋಧ ತಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ರಜೆಯ ಮೇಲೆ ಇತ್ತೀಚೆಗೆ ಮನೆಗೆ ಬಂದಿದ್ದರು.</p>



<p>ಬುಧವಾರ ಸಂಜೆ ಸೋಫಿಯವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ಮನೆಯ ಬಳಿ ಶಂಕಿತ ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.</p>



<p>“ಸಂತ್ರಸ್ತರನ್ನು ತಕ್ಷಣವೇ ಸ್ಥಳೀಯರ ಸಹಾಯದಿಂದ ಪೊಲೀಸರು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದರು. ಅವರ ಬಲಗಾಲಿಗೆ ಎರಡು ಗುಂಡುಗಳು ಬಿದ್ದಿವೆ, ಅವರ ಸ್ಥಿತಿ ಸದ್ಯ ಸ್ಥಿರವಾಗಿದೆ, ದುಷ್ಕರ್ಮಿಗಳನ್ನು ಹಿಡಿಯಲು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.</p>



<p>ಗಾಯಗೊಂಡ ಯೋಧನನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಟ್ರಾಲ್ ಉಪಜಿಲ್ಲಾ ಆಸ್ಪತ್ರೆಯ ಬ್ಲಾಕ್ ಮೆಡಿಕಲ್ ಆಫೀಸರ್ ಡಾ.ಜಹೂರ್ ಅಹ್ಮದ್ ಭಟ್ ತಿಳಿಸಿದ್ದಾರೆ. ಸೋಫಿ ಅವರು ಟೆರಿಟೋರಿಯಲ್ ಆರ್ಮಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರು ಉತ್ತರ ಕಾಶ್ಮೀರದ ಪಟ್ಟನ್‌ನಲ್ಲಿ 29 ರಾಷ್ಟ್ರೀಯ ರೈಫಲ್ಸ್‌ನೊಂದಿಗೆ ನಿಯೋಜಿಸಲ್ಪಟ್ಟಿದ್ದಾರೆ.</p>



<p>ಕಾಶ್ಮೀರ ಸ್ಟ್ರೈಕರ್ಸ್ ಎಂಬ ಹೊಸ ಉಗ್ರಗಾಮಿ ಗುಂಪು, ಕಳೆದ ಎರಡು ತಿಂಗಳಲ್ಲಿ ಸ್ಥಳೀಯ ಸೈನಿಕನನ್ನು ಗುರಿಯಾಗಿಸಿಕೊಂಡು ನಡೆಸಿದ ಈ ಎರಡನೇ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.</p>



<p><a href="https://m.economictimes.com/news/defence/missing-territorial-army-mans-body-found-in-anantnag-forest/articleshow/114094112.cms">ಅಕ್ಟೋಬರ್ 8 ರಂದು ದಕ್ಷಿಣ ಕಾಶ್ಮೀರದ ಕೋಕರ್‌ನಾಗ್‌ನಲ್ಲಿ</a> ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಟೆರಿಟೋರಿಯಲ್ ಆರ್ಮಿಯ ರೈಫಲ್‌ಮನ್‌ನನ್ನು ಶಂಕಿತ ಉಗ್ರರು ಅಪಹರಿಸಿ ಕೊಂದರು.<a href="https://m.economictimes.com/news/defence/missing-territorial-army-mans-body-found-in-anantnag-forest/articleshow/114094112.cms"></a></p>



<p><strong>ಸೇನಾ ಶಿಬಿರದ ಮೇಲೆ ಗ್ರೆನೇಡ್‌ ದಾಳಿ </strong></p>



<p>ಜಮ್ಮುವಿನ ಪಿರ್ ಪಂಜಾಲ್ ಪ್ರದೇಶದ ಪೂಂಚ್ ಜಿಲ್ಲೆಯ ಸೇನಾ ಪೋಸ್ಟ್‌ನಲ್ಲಿ ಶಂಕಿತ ಉಗ್ರರು ಗ್ರೆನೇಡ್‌ಗಳನ್ನು ಎಸೆದ ಕೆಲವೇ ಗಂಟೆಗಳ ನಂತರ ತ್ರಾಲ್‌ನಲ್ಲಿ ದಾಳಿ ನಡೆದಿದೆ, ಆದರೆ ಯಾವುದೇ ಹಾನಿಯಾಗಲಿಲ್ಲ.</p>



<p>ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪೂಂಚ್‌ನ ಸುರನ್‌ಕೋಟೆ ಪ್ರದೇಶದಲ್ಲಿನ ಸೇನಾ ಶಿಬಿರದ ಹಿಂಭಾಗದ ಪೋಸ್ಟ್‌ನಲ್ಲಿ ಎರಡು ಗ್ರೆನೇಡ್‌ಗಳನ್ನು ಲಾಬ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಗ್ರೆನೇಡ್‌ಗಳಲ್ಲಿ ಒಂದು ದೊಡ್ಡ ಸದ್ದಿನಿಂದ ಸ್ಫೋಟಗೊಂಡರೂ ಯಾವುದೇ ಹಾನಿಯಾಗಲಿಲ್ಲ, ಎರಡನೆಯದು ಸ್ಫೋಟಗೊಳ್ಳದೆ ಉಳಿದಿದೆ, ನಂತರ ಅದನ್ನು ಬಾಂಬ್ ನಿಷ್ಕ್ರಿಯ ದಳದಿಂದ ನಿಷ್ಕ್ರಿಯಗೊಳಿಸಲಾಯಿತು.</p>



<p>ಅಧಿಕಾರಿಗಳ ಪ್ರಕಾರ, ಸೇನಾ ಶಿಬಿರದ ಸುತ್ತುಗೋಡೆಯ ಬಳಿ ಗ್ರೆನೇಡ್‌ಗಳಲ್ಲಿ ಒಂದರ ಸೇಫ್ಟಿ ಪಿನ್ ಪತ್ತೆಯಾಗಿದೆ, ನಂತರ ಉಗ್ರರನ್ನು ಪತ್ತೆಹಚ್ಚಲು ಸೇನೆ ಮತ್ತು ಪೊಲೀಸರು ಭಾರಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.</p>



<p>ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ದ ಸಂಬಂಧಿ ಸಂಘಟನೆ ಎಂದು ಅಧಿಕಾರಿಗಳು ನಂಬಿರುವ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಉಗ್ರನೊಬ್ಬ ಶ್ರೀನಗರದ ಹೊರವಲಯದಲ್ಲಿರುವ ಹರ್ವಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಒಂದು ದಿನದ ನಂತರ ಬುಧವಾರದ ದಾಳಿಗಳು ನಡೆದಿವೆ. </p>



<p>ಪೊಲೀಸರ ಪ್ರಕಾರ, ಜುನೈದ್ ಅಹ್ಮದ್ ಭಟ್ ಎಂದು ಗುರುತಿಸಲಾಗಿರುವ ಉಗ್ರಗಾಮಿ ಎಲ್‌ಇಟಿಯ (LeT) ಉನ್ನತ ಕಮಾಂಡರ್ ಮತ್ತು ಗಂದರ್‌ಬಲ್‌ ಜಿಲ್ಲೆಯ ಗಗಂಗೀರ್ ಪ್ರದೇಶದ ಆಪ್ಕೊ ಇನ್‌ಫ್ರಾ ಕನ್‌ಸ್ಟ್ರಕ್ಷನ್ ಕಂಪನಿಯ ಬೇಸ್ ಮೇಲೆ ಅಕ್ಟೋಬರ್‌ನಲ್ಲಿ ನಡೆದ ದಾಳಿ ಮಾಡಿದ ನಂತರ ವೈದ್ಯರು ಸೇರಿದಂತೆ ಏಳು ಕಾರ್ಮಿಕರನ್ನು ಕೊಂದ ಸ್ಕ್ವಾಡ್‌ನ ಇಬ್ಬರು ಸದಸ್ಯರಲ್ಲಿ ಒಬ್ಬರು. </p>



<p>ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಆಯಕಟ್ಟಿನ ಝಡ್-ಮೋರ್ಹ್ ಸುರಂಗವನ್ನು ನಿರ್ಮಿಸುತ್ತಿರುವ ಕಂಪನಿಯ ಕಾರ್ಮಿಕರಿಗೆ ರಾತ್ರಿಯ ಉಳಿದುಕೊಳ್ಳಲು ನೀಡಿದ್ದ ಬೇಸ್‌ನಲ್ಲಿ ವಾಸಿಸುವ ಕ್ವಾರ್ಟರ್‌ನಲ್ಲಿ ರೈಫಲ್ ಹಿಡಿದುಕೊಂಡು ಓಡಾಡುತ್ತಿರುವ ಜುನೈದ್ ಅಹ್ಮದ್ ಭಟ್  ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ.</p>



<p>ಹರ್ವಾನ್ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಕನಿಷ್ಠ ಒಂದರಿಂದ ಇಬ್ಬರು ಉಗ್ರರು ಅಡಗಿಕೊಂಡಿದ್ದಾರೆ ಎಂದು ನಂಬಲಾಗಿದೆ, ಅಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ದಟ್ಟವಾದ ಕಾಡುಗಳು ಮತ್ತು ಪೊದೆಗಳು ಇರುವ ಕಾರಣ, ಯಾವುದೇ ಹಾನಿ ನಡೆಯದಂತೆ ತಡೆಗಟ್ಟಲು ಭದ್ರತಾ ಪಡೆಗಳು ಎಚ್ಚರಿಕೆಯಿಂದ ಕಾರ್ಯಾಚರಣೆಯನ್ನು ಮುಂದುವರೆಸುತ್ತಿವೆ.</p>



<p>ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ಕನಿಷ್ಠ 63 ಉಗ್ರರನ್ನು ಹೊಡೆದುರುಳಿಸಲಾಗಿದೆ, ಅಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ದಂಗೆ-ಸಂಬಂಧಿತ ಹಿಂಸಾಚಾರವು ತೀವ್ರ ಏರಿಕೆಗೆ ಸಾಕ್ಷಿಯಾಗಿದೆ. 2024 ರಲ್ಲಿ ಕನಿಷ್ಠ 31 ನಾಗರಿಕರು ಸಾವನ್ನಪ್ಪಿದ್ದಾರೆ, ಇದು ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚು.</p>



<p>ಮೊದಲು ಕಾಶ್ಮೀರ ಕಣಿವೆಗೆ ಮಾತ್ರ ಸೀಮಿತವಾಗಿದ್ದ ಹೋರಾಟ ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ ಜಮ್ಮು ಪ್ರದೇಶಕ್ಕೂ ಹರಡಿದೆ. ಅಧಿಕೃತ ಮಾಹಿತಿಯ ಪ್ರಕಾರ, ಜಮ್ಮುವಿನ 10 ಜಿಲ್ಲೆಗಳಲ್ಲಿ  ಈ ವರ್ಷ ಎಂಟು ಉಗ್ರಗಾಮಿ ದಾಳಿಗೆ ಸಾಕ್ಷಿಯಾಗಿದೆ, ಇದರಲ್ಲಿ ಭದ್ರತಾ ಸಿಬ್ಬಂದಿ ಮತ್ತು ಯಾತ್ರಿಗಳು ಸೇರಿದಂತೆ ಅನೇಕ ನಾಗರಿಕರು ಹತರಾಗಿದ್ದಾರೆ.</p>
]]></content:encoded>
					
		
		
			</item>
		<item>
		<title>ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಈದ್ ಪ್ರಾರ್ಥನೆಗೆ ಅವಕಾಶವಿಲ್ಲ</title>
		<link>https://peepalmedia.com/eid-prayers-not-allowed-at-srinagars-jamia-masjid/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 10 Apr 2024 06:31:14 +0000</pubDate>
				<category><![CDATA[ರಾಜಕೀಯ]]></category>
		<category><![CDATA[Jamia Masjid]]></category>
		<category><![CDATA[Jammu kashmir]]></category>
		<category><![CDATA[Srinagar]]></category>
		<category><![CDATA[Srinagar Jamia Masjid]]></category>
		<guid isPermaLink="false">https://peepalmedia.com/?p=38173</guid>

					<description><![CDATA[ಹೊಸದಿಲ್ಲಿ: ಶ್ರೀನಗರದ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಈದ್ ನಮಾಝ್ ಗೆ ಅಧಿಕಾರಿಗಳು ಅನುಮತಿ ನೀಡದೆ ಏಪ್ರಿಲ್ 10, ಬುಧವಾರ  ಬೆಳಗ್ಗೆ ಬೀಗ ಜಡಿದಿದ್ದಾರೆ, ಹಾಗೂ ಹುರಿಯತ್ ನಾಯಕ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ಮತ್ತೆ ಗೃಹಬಂಧನದಲ್ಲಿ ಇರಿಸಲಾಗಿದೆ. ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿರುವ 14 ನೇ ಶತಮಾನದ ಮಸೀದಿಯ ಆಡಳಿತ ಮಂಡಳಿ ಅಂಜುಮನ್ ಔಕಾಫ್ ಜಾಮಿಯಾ ಮಸೀದಿಯ ಹೇಳಿಕೆಯ ಪ್ರಕಾರ, ಬುಧವಾರ ಬೆಳಿಗ್ಗೆ ಪ್ರಾರ್ಥನೆಯ ನಂತರ ಯಾವುದೇ ಲಿಖಿತ ವಿವರಣೆಯಿಲ್ಲದೆ ಪೊಲೀಸ್ ಸಿಬ್ಬಂದಿ ಮಸೀದಿಯ ಗೇಟ್‌ಗಳಿಗೆ ಬೀಗ ಹಾಕಿದ್ದಾರೆ. [&#8230;]]]></description>
										<content:encoded><![CDATA[
<p><strong>ಹೊಸದಿಲ್ಲಿ:</strong> ಶ್ರೀನಗರದ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಈದ್ ನಮಾಝ್ ಗೆ ಅಧಿಕಾರಿಗಳು ಅನುಮತಿ ನೀಡದೆ ಏಪ್ರಿಲ್ 10, ಬುಧವಾರ  ಬೆಳಗ್ಗೆ ಬೀಗ ಜಡಿದಿದ್ದಾರೆ, ಹಾಗೂ ಹುರಿಯತ್ ನಾಯಕ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ಮತ್ತೆ ಗೃಹಬಂಧನದಲ್ಲಿ ಇರಿಸಲಾಗಿದೆ.</p>



<p>ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿರುವ 14 ನೇ ಶತಮಾನದ ಮಸೀದಿಯ ಆಡಳಿತ ಮಂಡಳಿ ಅಂಜುಮನ್ ಔಕಾಫ್ ಜಾಮಿಯಾ ಮಸೀದಿಯ ಹೇಳಿಕೆಯ ಪ್ರಕಾರ, ಬುಧವಾರ ಬೆಳಿಗ್ಗೆ ಪ್ರಾರ್ಥನೆಯ ನಂತರ ಯಾವುದೇ ಲಿಖಿತ ವಿವರಣೆಯಿಲ್ಲದೆ ಪೊಲೀಸ್ ಸಿಬ್ಬಂದಿ ಮಸೀದಿಯ ಗೇಟ್‌ಗಳಿಗೆ ಬೀಗ ಹಾಕಿದ್ದಾರೆ.</p>



<p>ಬೆಳಿಗ್ಗೆ 9:30 ಕ್ಕೆ ನಿಗದಿಯಾಗಿದ್ದ ಸಭೆಯಲ್ಲಿ ಈದ್ ಪ್ರಾರ್ಥನೆಯನ್ನು ಮಸೀದಿಯಲ್ಲಿ ನಡೆಸಲು ಅನುಮತಿ ಸೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಬುಧವಾರ ಬೆಳಿಗ್ಗೆ ತಿಳಿಸಿದ್ದರು ಎಂದು ಅಂಜುಮನ್ ಹೇಳಿದ್ದಾರೆ. ಇಂದು ಮುಂಜಾನೆ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ಮತ್ತೆ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ..</p>



<p>ಮಂಗಳವಾರ ಸಂಜೆ ಲಡಾಖ್‌ನ ಕಾರ್ಗಿಲ್ ಜಿಲ್ಲೆಯಲ್ಲಿ ಅರ್ಧಚಂದ್ರ ಕಾಣಿಸಿಕೊಂಡ ನಂತರ ಜಮ್ಮು ಮತ್ತು ಕಾಶ್ಮೀರದಾದ್ಯಂತ ಬುಧವಾರ ಈದ್ ಆಚರಿಸಲಾಗುತ್ತದೆ. ದೇಶದ ಉಳಿದ ಭಾಗಗಳಲ್ಲಿ, ಮುಸ್ಲಿಂ ತಿಂಗಳ ರಂಜಾನ್ ಉಪವಾಸದ ಕೊನೆಗೊಳಿಸುವ ಸೂಚಿಸುವ ಹಬ್ಬವನ್ನು ಗುರುವಾರ ಆಚರಿಸಲಾಗುತ್ತದೆ.</p>



<p>ಕೇಂದ್ರ ಸರ್ಕಾರವು ಆರ್ಟಿಕಲ್ 370 ಅನ್ನು ತೆಗೆದು ಹಾಕಿದ ನಂತರ, ಹಿಂದಿನ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸಲಾಗಿತ್ತು., ಸೂಕ್ಷ್ಮ ಪ್ರದೇಶವಾದ ಶ್ರೀನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳು ಭುಗಿಲೇಳಬಹುದು ಎಂಬ ಕಾರಣವನ್ನು ಉಲ್ಲೇಖಿಸಿ ಅಧಿಕಾರಿಗಳು ಅಂಜುಮನ್‌ಗೆ ಜಾಮಿಯಾ ಮಸೀದಿಯಲ್ಲಿ ಈದ್ ಪ್ರಾರ್ಥನೆಗಳನ್ನು ಆಯೋಜಿಸಲು ಅವಕಾಶ ನೀಡಲಿಲ್ಲ.&nbsp;</p>



<p>ಇದಕ್ಕೂ ಮೊದಲು, ಜಮ್ಮು ಕಾಶ್ಮೀರದ ಅತಿದೊಡ್ಡ ಮಸೀದಿಯಾಗಿರುವ ಜಾಮಿಯಾವನ್ನು ಶಾಬ್-ಎ-ಕದ್ರ್ ಮತ್ತು ಜುಮಾತ್-ಉಲ್-ವಿದಾದ ಸಭೆಯ ಪ್ರಾರ್ಥನೆ ಮಾಡದಂತೆ ಮುಚ್ಚಲಾಗಿತ್ತು ಮತ್ತು ಈ ಸಂದರ್ಭಗಳಲ್ಲಿ ಮಿರ್ವೈಜ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಶ್ರೀನಗರದ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡದಂತೆ ಅವರನ್ನು ತಡೆಹಿಡಿಯಲಾಯಿತು.</p>
]]></content:encoded>
					
		
		
			</item>
	</channel>
</rss>
