<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>state goverments &#8211; Peepal Media</title>
	<atom:link href="https://peepalmedia.com/tag/state-goverments/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 14 Oct 2023 05:57:20 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>state goverments &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮುಜರಾಯಿ ಇಲಾಖೆಯ 34,000 ಕ್ಕೂ ಹೆಚ್ಚು ಅರ್ಚಕರಿಗೆ ರಾಜ್ಯ ಸರ್ಕಾರದಿಂದ ವಿಶೇಷ ಅನುಧಾನ</title>
		<link>https://peepalmedia.com/special-grant-for-more-than-34000-priests/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 14 Oct 2023 05:56:26 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state goverments]]></category>
		<guid isPermaLink="false">https://peepalmedia.com/?p=29815</guid>

					<description><![CDATA[ರಾಜ್ಯಾದ್ಯಂತ &#8216;ಸಿ&#8217; ವರ್ಗದ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 34,000 ಕ್ಕೂ ಹೆಚ್ಚು ಅರ್ಚಕರಿಗೆ ಕುಟುಂಬ ಸದಸ್ಯರಿಗೆ ವಿಮೆ ಮತ್ತು ಶೈಕ್ಷಣಿಕ ಅನುದಾನ ಸೇರಿದಂತೆ ಪ್ರಯೋಜನವಾಗಲು ರಾಜ್ಯ ಸರ್ಕಾರ ಶುಕ್ರವಾರ ಕಲ್ಯಾಣ ಕ್ರಮಗಳನ್ನು ಪ್ರಕಟಿಸಿದೆ. ಅದರಂತೆ &#8216;ಬಿ&#8217; ಮತ್ತು &#8216;ಸಿ&#8217; ವರ್ಗದ ದೇವಾಲಯಗಳಲ್ಲಿ ಕೆಲಸ ಮಾಡುವ ಅರ್ಚಕರ ಮಕ್ಕಳು ಯಾವ ಕೋರ್ಸ್‌ಗಳಿಗೆ ಅನುಗುಣವಾಗಿ ವಾರ್ಷಿಕ ಶಿಕ್ಷಣ ಅನುದಾನವನ್ನು ₹ 5,000 ರಿಂದ ₹ 50,000 ವರೆಗೆ ನೀಡಲು ನಿರ್ಧರಿಸಿದ್ದೇವೆ.&#160;ವಿದೇಶದಲ್ಲಿ ಶಿಕ್ಷಣ ಪಡೆಯುವವರಿಗೆ ಒಂದು ಬಾರಿ ₹ 1 ಲಕ್ಷ ಅನುದಾನ [&#8230;]]]></description>
										<content:encoded><![CDATA[
<p>ರಾಜ್ಯಾದ್ಯಂತ &#8216;ಸಿ&#8217; ವರ್ಗದ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 34,000 ಕ್ಕೂ ಹೆಚ್ಚು ಅರ್ಚಕರಿಗೆ ಕುಟುಂಬ ಸದಸ್ಯರಿಗೆ ವಿಮೆ ಮತ್ತು ಶೈಕ್ಷಣಿಕ ಅನುದಾನ ಸೇರಿದಂತೆ ಪ್ರಯೋಜನವಾಗಲು ರಾಜ್ಯ ಸರ್ಕಾರ ಶುಕ್ರವಾರ ಕಲ್ಯಾಣ ಕ್ರಮಗಳನ್ನು ಪ್ರಕಟಿಸಿದೆ.</p>



<p>ಅದರಂತೆ &#8216;ಬಿ&#8217; ಮತ್ತು &#8216;ಸಿ&#8217; ವರ್ಗದ ದೇವಾಲಯಗಳಲ್ಲಿ ಕೆಲಸ ಮಾಡುವ ಅರ್ಚಕರ ಮಕ್ಕಳು ಯಾವ ಕೋರ್ಸ್‌ಗಳಿಗೆ ಅನುಗುಣವಾಗಿ ವಾರ್ಷಿಕ ಶಿಕ್ಷಣ ಅನುದಾನವನ್ನು ₹ 5,000 ರಿಂದ ₹ 50,000 ವರೆಗೆ ನೀಡಲು ನಿರ್ಧರಿಸಿದ್ದೇವೆ.&nbsp;ವಿದೇಶದಲ್ಲಿ ಶಿಕ್ಷಣ ಪಡೆಯುವವರಿಗೆ ಒಂದು ಬಾರಿ ₹ 1 ಲಕ್ಷ ಅನುದಾನ ನೀಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ&nbsp;ತಿಳಿಸಿದ್ದಾರೆ.</p>



<p>ಗುರುತಿನ ಚೀಟಿ ನೀಡುವುದರ ಜೊತೆಗೆ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಎಲ್ಲಾ ಅರ್ಚಕರು ಮತ್ತು ನೌಕರರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ನೀಡಲಾಗುವುದು ಎಂದು ಅವರು ಹೇಳಿದರು.</p>



<p><em>‘ಸಿ’ ವರ್ಗದ ದೇವಸ್ಥಾನಗಳಿಗೆ ನೀಡುತ್ತಿರುವ ವಾರ್ಷಿಕ ತಸ್ತಿಕ್</em>&nbsp;ಮೊತ್ತವನ್ನು ವಾರ್ಷಿಕ ₹ 60,000ದಿಂದ ₹ 1.2 ಲಕ್ಷಕ್ಕೆ ಹೆಚ್ಚಿಸಬೇಕು ಮತ್ತು ‘ಸಿ’ ವರ್ಗದ ದೇವಾಲಯಗಳಲ್ಲಿನ ಅರ್ಚಕರಿಗೆ ತಿಂಗಳಿಗೆ ₹ 10,000 ಗೌರವಧನ ನೀಡಬೇಕೆಂಬ ಬೇಡಿಕೆಯ ನಡುವೆಯೇ ಈ ಘೋಷಣೆ ಮಾಡಲಾಗಿದೆ&nbsp;.&nbsp;ಆದರೆ, ಇದು ಹೆಚ್ಚಿನ ವೆಚ್ಚವನ್ನು ಒಳಗೊಂಡಿರುವ ಕಾರಣ, ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರಾಮಲಿಂಗಾರೆಡ್ಡಿಯವರು ಹೇಳಿದ್ದಾರೆ.</p>



<p>ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಅನ್ನಸಂತರ್ಪಣೆ ಕೊಠಡಿಗಳನ್ನು ಸ್ಥಾಪಿಸಲಾಗುತ್ತಿದ್ದು, ಕೊಠಡಿ ಕಾಯ್ದಿರಿಸುವಿಕೆ, ಸೇವೆಗಾಗಿ ಕಾಯ್ದಿರಿಸುವಿಕೆ ಮತ್ತು ದರ್ಶನದ ಸಮಯದ ಮಾಹಿತಿಗಾಗಿ ಕಾಲ್ ಸೆಂಟರ್ ಸ್ಥಾಪಿಸಲು ಪರಿಷತ್ತು ಶುಕ್ರವಾರ ಅನುಮೋದನೆ ನೀಡಿದೆ ಎಂದು ಸಚಿವರು ಹೇಳಿದರು.</p>
]]></content:encoded>
					
		
		
			</item>
		<item>
		<title>ತೂಗು ಸೇತುವೆ ದುರಂತ: ನ್ಯಾಯಾಂಗ ತನಿಖೆ ವಿಚಾರಣೆಯನ್ನು ನವೆಂಬರ್‌ 14ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್‌</title>
		<link>https://peepalmedia.com/suspension-bridge-tragedy-supreme-court-adjourns-hearing-of-judicial-inquiry-to-november-14/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 01 Nov 2022 09:41:24 +0000</pubDate>
				<category><![CDATA[ದೇಶ]]></category>
		<category><![CDATA[gujarath]]></category>
		<category><![CDATA[india]]></category>
		<category><![CDATA[Morbi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state goverments]]></category>
		<category><![CDATA[Supreme Court]]></category>
		<category><![CDATA[Suspension bridge tragedy]]></category>
		<guid isPermaLink="false">https://peepalmedia.com/?p=13595</guid>

					<description><![CDATA[ಗುಜರಾತ್‌: ಗುಜರಾತ್‌ನ ಮೋರ್ಬಿ ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ, ವಕೀಲರೊಬ್ಬರು ಸೋಮವಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು, ಸುಪ್ರೀಂ ಕೋರ್ಟ್‌ ನವೆಂಬರ್‌ 14ಕ್ಕೆ ಮುಂದೂಡಿದೆ. ಪಶ್ಚಿಮ ಗುಜರಾತ್‌ನ ಮೊರ್ಬಿಯಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆಯು ಅಕ್ಟೋಬರ್‌ 30 ಭಾನುವಾರದಂದು ಕುಸಿದಿತ್ತು. ಈ ದುರಂತದಲ್ಲಿ ಕನಿಷ್ಠ 47 ಮಕ್ಕಳು ಸೇರಿದಂತೆ, ಹಲವಾರು ಮಹಿಳೆಯರು ಮತ್ತು ವೃದ್ಧರು ಸೇರಿ ಒಟ್ಟು 135 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು [&#8230;]]]></description>
										<content:encoded><![CDATA[
<p style="font-size:20px"><strong>ಗುಜರಾತ್‌:</strong> ಗುಜರಾತ್‌ನ ಮೋರ್ಬಿ ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ, ವಕೀಲರೊಬ್ಬರು ಸೋಮವಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು, ಸುಪ್ರೀಂ ಕೋರ್ಟ್‌ ನವೆಂಬರ್‌ 14ಕ್ಕೆ ಮುಂದೂಡಿದೆ.</p>



<p style="font-size:20px">ಪಶ್ಚಿಮ ಗುಜರಾತ್‌ನ ಮೊರ್ಬಿಯಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆಯು ಅಕ್ಟೋಬರ್‌ 30 ಭಾನುವಾರದಂದು ಕುಸಿದಿತ್ತು. ಈ ದುರಂತದಲ್ಲಿ ಕನಿಷ್ಠ 47 ಮಕ್ಕಳು ಸೇರಿದಂತೆ, ಹಲವಾರು ಮಹಿಳೆಯರು ಮತ್ತು ವೃದ್ಧರು ಸೇರಿ ಒಟ್ಟು 135 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು ಎಂದು ಮೂಲಗಳಿಂದ ತಿಳಿದುಬಂದಿತ್ತು.</p>



<p style="font-size:20px">ಈ ಹಿನ್ನಲೆಯಲ್ಲಿ ಸೇತುವೆ ಕುಸಿತದ ಬಗ್ಗೆ ನ್ಯಾಯಾಂಗ ತನಿಖೆಯಾಗುವಂತೆ ಅರ್ಜಿ ಸಲ್ಲಿಸಲಾಗಿತ್ತು.</p>



<p style="font-size:20px">ಈ ಕುರಿತು ವಕೀಲರು ಸಲ್ಲಿಸದ ಮನವಿಯಲ್ಲಿ, ಪರಿಸರದ ಕಾರ್ಯಸಾಧ್ಯತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಳೆಯ ಮತ್ತು ಅಪಾಯಕಾರಿ ಸ್ಮಾರಕಗಳು ಮತ್ತು ಸೇತುವೆಗಳ ಸಮೀಕ್ಷೆ ನಡೆಸಲು ಸಮಿತಿಯನ್ನು ರಚಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡುವಂತೆ ಕೂರಲಾಗಿತ್ತು.</p>



<p style="font-size:20px">ಆದರೆ ಇಂದು ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿದ್ದು, ಅರ್ಜಿಯಲ್ಲಿನ ವಿಚಾರಣೆಯನ್ನು ನವೆಂಬರ್‌ 14ಕ್ಕೆ ನಡೆಸಲಾಗುವುದು ಎಂದು ತಿಳಿಸಿದೆ.</p>
]]></content:encoded>
					
		
		
			</item>
	</channel>
</rss>
