<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>supreme court judgement &#8211; Peepal Media</title>
	<atom:link href="https://peepalmedia.com/tag/supreme-court-judgement/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 03 Nov 2023 11:28:30 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>supreme court judgement &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಭಾಧ್ಯಕ್ಷರ ಕ್ಷಮೆ ಯಾಚಿಸಲು ರಾಘವ್‌ ಚಡ್ಡಾ ಸಿದ್ದ</title>
		<link>https://peepalmedia.com/raghav-chadha-agrees-to-apologize-to-rajya-sabha/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 03 Nov 2023 11:24:06 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[Aam Aadmi Party]]></category>
		<category><![CDATA[AAP]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[constitution]]></category>
		<category><![CDATA[india]]></category>
		<category><![CDATA[judgement]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[law]]></category>
		<category><![CDATA[legal]]></category>
		<category><![CDATA[member of parliment]]></category>
		<category><![CDATA[MP]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[raghav chadda]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[trending news]]></category>
		<category><![CDATA[verdict]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=31112</guid>

					<description><![CDATA[ಬೆಂಗಳೂರು,ನವೆಂಬರ್.‌03: ಆಮ್ ಆದ್ಮಿ ಪಾರ್ಟಿ ಸಂಸದ ರಾಘವ್ ಚಡ್ಡಾ ಅವರ ಅಮಾನತು ವಿಚಾರದಲ್ಲಿ &#8216;ಮುಂದಕ್ಕೆ ತೆಗೆದುಕೊಂಡು ಹೋಗುವ &#8211; way forward&#8217; ನಿರ್ಧಾರವನ್ನು ಮಾಡಿರುವ ಸುಪ್ರೀಂ ಕೋರ್ಟ್ ಇಂದು ರಾಜ್ಯಸಭೆಯ ಅಧ್ಯಕ್ಷರ ಬಳಿ ಬೇಷರತ್ ಕ್ಷಮೆಯಾಚಿಸಲು ಒಪ್ಪಿಗೆ ಸೂಚಿಸಿದ ಚಡ್ಡಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಮತ್ತು ಅದನ್ನು ಇದನ್ನು ಪರಿಗಣಿಸಿ ʼಸಹಾನುಭೂತಿʼ ತೋರುವಂತೆ ಸಭಾಧ್ಯಕ್ಷರನ್ನು ಒತ್ತಾಯಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ನವೆಂಬರ್.‌03: </strong>ಆಮ್ ಆದ್ಮಿ ಪಾರ್ಟಿ ಸಂಸದ ರಾಘವ್ ಚಡ್ಡಾ ಅವರ ಅಮಾನತು ವಿಚಾರದಲ್ಲಿ &#8216;ಮುಂದಕ್ಕೆ ತೆಗೆದುಕೊಂಡು ಹೋಗುವ &#8211; way forward&#8217; ನಿರ್ಧಾರವನ್ನು ಮಾಡಿರುವ ಸುಪ್ರೀಂ ಕೋರ್ಟ್ ಇಂದು ರಾಜ್ಯಸಭೆಯ ಅಧ್ಯಕ್ಷರ ಬಳಿ ಬೇಷರತ್ ಕ್ಷಮೆಯಾಚಿಸಲು ಒಪ್ಪಿಗೆ ಸೂಚಿಸಿದ ಚಡ್ಡಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಮತ್ತು ಅದನ್ನು ಇದನ್ನು ಪರಿಗಣಿಸಿ ʼಸಹಾನುಭೂತಿʼ ತೋರುವಂತೆ ಸಭಾಧ್ಯಕ್ಷರನ್ನು ಒತ್ತಾಯಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ.</p>



<p>ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ  ಅವರನ್ನೊಳಗೊಂಡ ಪೀಠವು ಚಡ್ಡಾ ಸಂಸತ್ತಿನ ಅತ್ಯಂತ ಕಿರಿಯ ಮತ್ತು ಮೊದಲ ಬಾರಿಗೆ ಸಂಸದರಾದವರು. ಸಭಾಧ್ಯಕ್ಷರು ಈ ವಿಷಯದಲ್ಲಿ ವಸ್ತುನಿಷ್ಠ ದೃಷ್ಟಿಕೋನದಿಂದ ಪರಿಗಣಿಸಬೇಕು ಎಂದಿದೆ. ಕಳೆದ ವಿಚಾರಣೆಯಲ್ಲಿ ಪೀಠವು ಚಡ್ಡಾ ಅವರ ಅನಿರ್ದಿಷ್ಟ ಅವಧಿಯ ಅಮಾನತಿನ ಬಗ್ಗೆ ಕಳವಳ ವ್ಯಕ್ತಪಡಿಸಿ, ವಿರೋಧ ಪಕ್ಷದ ಧ್ವನಿಯನ್ನು ಹೊರಗಿಡುವುದು ಗಂಭೀರ ವಿಷಯ ಎಂದು ಟೀಕೆ ಮಾಡಿತ್ತು. ಸಿಜೆಐ &#8220;ನಾವು ಸಂಸತ್ತಿನಿಂದ ಆ ಧ್ವನಿಗಳನ್ನು ಹೊರಗಿಡದಂತೆ ಬಹಳ ಜಾಗರೂಕರಾಗಿರಬೇಕು,&#8221; ಎಂದು ಎಚ್ಚರಿಸಿದ್ದರು.</p>



<p><strong>ಕೇಸ್‌:</strong> <a href="https://indiankanoon.org/doc/185605658/" data-type="link" data-id="https://indiankanoon.org/doc/185605658/">Raghav Chadha v. Rajya Sabha Secretariat And Ors. W.P.(C) No. 1155/2023</a></p>



<p>&#8220;ಕಳೆದ ಬಾರಿ ಅವರು ಕ್ಷಮೆಯಾಚಿಸುತ್ತಿದ್ದರೆ, ಅತ್ಯಂತ ಪ್ರತಿಷ್ಠಿತ ವ್ಯಕ್ತಿ ಮತ್ತು ಸಂವಿಧಾನದ ಮಹಾನ್ ಸ್ಥಾನದಲ್ಲಿರುವ  ಸಭಾಧ್ಯಕ್ಷರು, ಬಹುಶಃ ವಸ್ತುನಿಷ್ಠ ದೃಷ್ಟಿಕೋನದಿಂದ ಅದನ್ನು ಸ್ವೀಕರಿಸುತ್ತಿದ್ದರೋ ಏನೋ,” ಎಂದು ಸಿಜೆಐ ಹೇಳಿದ್ದಾರೆ.</p>



<p>ಅಟಾರ್ನಿ ಜನರಲ್ ಹಾಗೂ ಸಾಲಿಸಿಟರ್ ಜನರಲ್ ಇದಕ್ಕೆ ಒಪ್ಪಿಗೆ ಸೂಚಿಸಿದ ನಂತರ ಸಿಜೆಐ ಅವರು ಕ್ಷಮೆ ಯಾಚಿಸಲು ಸಿದ್ಧರಿದ್ದಾರೆಯೇ ಎಂದು ಚಡ್ಡಾ ಪರವಾಗಿ ಹಾಜರಾದ ವಕೀಲ ಶಾದನ್ ಫರಾಸತ್ ಅವರನ್ನು ಕೇಳಿದ್ದಾರೆ.</p>



<p>ಸಿಜೆಐ, &#8220;ಮಿಸ್ಟರ್ ಫರಾಸತ್, ನೀವು ಈಗಾಗಲೇ ಆರು ಬಾರಿ ಕ್ಷಮೆಯಾಚಿಸಿದ್ದೀರಿ. ಆದರೆ ನೀವು ಗೌರವಾನ್ವಿತ ಸಭಾಧ್ಯಕ್ಷರೊಂದಿಗೆ ಅಪಾಯಿಂಟ್‌ಮೆಂಟ್ ಪಡೆಯಲು ಮತ್ತು ಅಧ್ಯಕ್ಷರನ್ನು ಭೇಟಿ ಮಾಡಲು ಸಿದ್ಧರಿದ್ದೀರಾ, ಕ್ಷಮೆಯಾಚಿಸಲು ಬಯಸುತ್ತೀರಾ?&#8221; ಎಂದು ಕೇಳಿದ್ದಾರೆ.</p>



<p>ಫರಸತ್ ಅವರು ಇದಕ್ಕೆ ಒಪ್ಪಿಕೊಂಡಿದ್ದು, &#8220;ಅವರು ಹಿರಿಯರ ಮನೆಯಲ್ಲಿ ಅತ್ಯಂತ ಕಿರಿಯ ಸದಸ್ಯ. ಅವರಿಗೆ ಕ್ಷಮೆಯಾಚಿಸಲು ಮನಸ್ಸಿಲ್ಲ. ವಿಶೇಷಾಧಿಕಾರ ಸಮಿತಿಗೆ ನಾನು ಬರೆದ ಪತ್ರದಲ್ಲಿಯೂ ನಾನು ಸಭಾಧ್ಯಕ್ಷರಿಗೆ ನನ್ನ ವೈಯಕ್ತಿಕ ಕ್ಷಮೆಯಾಚನೆಯನ್ನು ಹೇಳಿದ್ದೇನೆ&#8230;&#8221; ಅಮಾನತಿನ ವಿರುದ್ಧ ಎದ್ದಿರುವ ಕಾನೂನು ವಿವಾದಗಳಿಗೆ ಕ್ಷಮೆಯಾಚನೆಯು ಪೂರ್ವಾಗ್ರಹವಾಗುವುದಿಲ್ಲ ಎಂದು ಫರಾಸತ್ ಹೇಳಿದ್ದಾರೆ.</p>



<p>ಪೀಠವು &#8220;ರಾಜ್ಯಸಭೆಯಲ್ಲಿ ತಾನು ಅತ್ಯಂತ ಕಿರಿಯ ಸದಸ್ಯ ಎಂದು ಶ್ರೀ ಫರಸತ್ ಹೇಳುತ್ತಾರೆ. ಅವರು ಸದಸ್ಯರಾಗಿರುವ ಮನೆಯ ಘನತೆಗೆ ಧಕ್ಕೆ ತರುವ ಉದ್ದೇಶವಿಲ್ಲ ಎಂದು ಮನಸ್ಸಿನಲ್ಲಿಟ್ಟುಕೊಂಡು, ಅರ್ಜಿದಾರರು ಸಭಾಧ್ಯಕ್ಷರೊಂದಿಗೆ ಅಪಾಯಿಂಟ್ಮೆಂಟ್ ಕೇಳುತ್ತಾರೆ ಎಂದು ಶ್ರೀ ಫರಸತ್ ಹೇಳಿಕೆ ಸಲ್ಲಿಸಿದ್ದಾರೆ. ಅವರು ಕೇಳಬಹುದಾದ ಬೇಷರತ್ತಾದ ಕ್ಷಮೆಯನ್ನು ಸಹಾನುಭೂತಿಯಿಂದ ಪರಿಗಣಿಸಿ,” ಎಂದು ಹೇಳಿದೆ.</p>



<p>GNCTD (ತಿದ್ದುಪಡಿ) ಮಸೂದೆ 2023 ರ ಆಯ್ಕೆ ಸಮಿತಿಯ ಸದಸ್ಯರಾಗಿ ಒಪ್ಪಿಗೆ ಇಲ್ಲದೆ ನಾಲ್ವರು ಎಂಪಿಗಳ ಹೆಸರನ್ನು ಪ್ರಸ್ತಾಪಿಸಿದ (breach of privilege)&nbsp; ಕಾರಣಕ್ಕೆ ಅಗಸ್ಟ್‌ 1ರಂದು ಚಡ್ಡಾರವರನ್ನು ಅಮಾನತು ಮಾಡಲಾಗಿತ್ತು. &nbsp;</p>



<p><br><br></p>
]]></content:encoded>
					
		
		
			</item>
		<item>
		<title>ಸುಪ್ರೀಂ ಕೋರ್ಟ್‌ ತೀರ್ಪು ಸಮಲಿಂಗಿಗಳನ್ನು ಅಪ್ರಾಮಾಣಿಕವಾಗಿ ಬದುಕುವಂತೆ ಮಾಡುತ್ತದೆ: ಮರುಪರಿಶೀಲನಾ ಅರ್ಜಿ</title>
		<link>https://peepalmedia.com/same-sex-marriage-verdict-review-petition/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 02 Nov 2023 08:33:38 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[gay]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[LGBTQ]]></category>
		<category><![CDATA[LGBTQIA]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[state politics]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[trending news]]></category>
		<category><![CDATA[viral news]]></category>
		<guid isPermaLink="false">https://peepalmedia.com/?p=31018</guid>

					<description><![CDATA[ಬೆಂಗಳೂರು,ಅಕ್ಟೋಬರ್.‌02: ಸಮಲೈಂಗಿಕ ವಿವಾಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು ಕ್ವೀಯರ್ ಸಮುದಾಯದ ಮೂಲಭೂತ ಹಕ್ಕುಗಳ &#8220;ಉದೇಶಪೂರ್ವಕ ಹತ್ತಿಕ್ಕುವಿಕೆ&#8221;ಯನ್ನು ತೋರಿಸುತ್ತದೆ ಎಂದು ಸುಪ್ರೀಂ ಕೋರ್ಟಿಇನ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಬುಧವಾರ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ. &#8220;ಬಹುಮತದ ತೀರ್ಪು ಪರಿಣಾಮಕಾರಿಯಾಗಿ ಕ್ವೀಯರ್ ಸಮುದಾಯದ ಯುವ ಭಾರತೀಯರನ್ನು ಒಂಟಿಗಳಾಗಿ (closet) ಉಳಿಯಲು ಮತ್ತು ಅವರು ನಿಜವಾದ ಕೌಟುಂಬಿಕ ಸಂತೋಷವನ್ನು ಬಯಸಿದರೂ, ಅಪ್ರಾಮಾಣಿಕ ಜೀವನವನ್ನು ನಡೆಸುವಂತೆ ಮಾಡುತ್ತದೆ&#8221; ಎಂದು ಪರಿಶೀಲನಾ ಅರ್ಜಿಯಲ್ಲಿ ತಿಳಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್.‌02:</strong> ಸಮಲೈಂಗಿಕ ವಿವಾಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು ಕ್ವೀಯರ್ ಸಮುದಾಯದ ಮೂಲಭೂತ ಹಕ್ಕುಗಳ &#8220;ಉದೇಶಪೂರ್ವಕ ಹತ್ತಿಕ್ಕುವಿಕೆ&#8221;ಯನ್ನು ತೋರಿಸುತ್ತದೆ ಎಂದು ಸುಪ್ರೀಂ ಕೋರ್ಟಿಇನ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಬುಧವಾರ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.</p>



<p>&#8220;ಬಹುಮತದ ತೀರ್ಪು ಪರಿಣಾಮಕಾರಿಯಾಗಿ ಕ್ವೀಯರ್ ಸಮುದಾಯದ ಯುವ ಭಾರತೀಯರನ್ನು ಒಂಟಿಗಳಾಗಿ (closet) ಉಳಿಯಲು ಮತ್ತು ಅವರು ನಿಜವಾದ ಕೌಟುಂಬಿಕ ಸಂತೋಷವನ್ನು ಬಯಸಿದರೂ, ಅಪ್ರಾಮಾಣಿಕ ಜೀವನವನ್ನು ನಡೆಸುವಂತೆ ಮಾಡುತ್ತದೆ&#8221; ಎಂದು ಪರಿಶೀಲನಾ ಅರ್ಜಿಯಲ್ಲಿ ತಿಳಿಸಲಾಗಿದೆ.</p>



<p>ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಅವರ ನೇತೃತ್ವದ ಎಸ್.ಕೆ. ಕೌಲ್, ಎಸ್.ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್. ನರಸಿಂಹ ಒಳಗೊಂಡ ಐವರು ನ್ಯಾಯಮೂರ್ತಿಗಳ ಪೀಠ &nbsp;ಅಕ್ಟೋಬರ್ 17ರಂದು ನೀಡಿದ ತೀರ್ಪಿನಲ್ಲಿ ಮದುವೆಯಾಗುವ ಹಕ್ಕು ಮೂಲಭೂತ ಹಕ್ಕಲ್ಲ ಮತ್ತು ಸಮಲೈಂಗಿಕ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವುದು ವಿಶೇಷ ವಿವಾಹ ಕಾಯಿದೆಯ (Special Marriage Act &#8211; SMA) &nbsp;ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿತ್ತು. ಸಮಲೈಂಗಿಕ ವಿವಾಹವನ್ನು ಅಂಗೀಕರಿಸುವ ವಿಶೇಷ ಹಕ್ಕು ಇರುವುದು ಸಂಸತ್ತಿಗೆ ಎಂದು ತಿಳಿಸಿತ್ತು.</p>



<p>3:2 ಅಭಿಪ್ರಾಯದ ಈ ತೀರ್ಪಿನಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಕ್ವೀರ್ ಸಮುದಾಯದ ಹಕ್ಕನ್ನು ಕೂಡ ಪೀಠವು ನಿರಾಕರಿಸಿತ್ತು. ನ್ಯಾಯಮೂರ್ತಿಗಳಾದ ಭಟ್, ಕೊಹ್ಲಿ ಮತ್ತು ನರಸಿಂಹ ಅವರು ಈ ಅಭಿಪ್ರಾಯಕ್ಕೆ ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.</p>



<p>ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ಮೂಲ ತೀರ್ಪನ್ನು ನೀಡಿದ ಅದೇ ಪೀಠ ಚೇಂಬರ್‌ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಕೂಡ ಆಲಿಸಲಿದೆ. ನ್ಯಾಯಮೂರ್ತಿ ಭಟ್ ಅವರು ನಿವೃತ್ತರಾಗಿರುವ ಕಾರಣ ಸಿಜೆಐ ಪೀಠಕ್ಕೆ ಹೊಸ ಸದಸ್ಯರೊಬ್ಬರನ್ನು ನೇಮಿಸಬೇಕಾಗುತ್ತದೆ. ಒಂದು ವೇಳೆ ಹೊಸ ಸದಸ್ಯರು ಮರುಪರಿಶೀಲನಾ ಅರ್ಜಿಯನ್ನು ಆಲಿಸಲು ಒಪ್ಪಿಕೊಂಡರೆ, ಮುಂದೆ ಮುಕ್ತ ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ತೆಗೆದುಕೊಳ್ಳಲಾಗುವುದು.</p>



<p>ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಅವರು ಶಾಸನಬದ್ಧ ಕಾನೂನಾಗಿರುವ ಎಸ್‌ಎಂಎ ಅಡಿಯಲ್ಲಿ ಸಮಲೈಂಗಿಕ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನ್ಯಾಯಾಲಯಕ್ಕೆ ಏಕೆ ಅಧಿಕಾರ ನೀಡಿಲ್ಲ ಎಂಬುದರ ಕುರಿತು ವಿವರವಾದ ಅಭಿಪ್ರಾಯಗಳನ್ನು ಬರೆದಿದ್ದರೂ ಸಹ, ಮರುಪರಿಶೀಲನಾ ಅರ್ಜಿಯು ನ್ಯಾಯಮೂರ್ತಿ ಭಟ್ ಅವರ ಅಭಿಪ್ರಾಯವನ್ನು ವ್ಯಾಪಕವಾಗಿ ಉಲ್ಲೇಖಿಸುತ್ತದೆ.</p>



<p style="font-size:20px"><strong>ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸ ನ್ಯಾಯಾಲಯದ್ದು, ಸರ್ಕಾರದ್ದಲ್ಲ!</strong></p>



<p>ಕ್ವೀಯರ್ ಸಮುದಾಯದ ನಾಲ್ವರು ಸಲ್ಲಿಸಿರುವ ಈ ಅರ್ಜಿಯ ಪ್ರಕಾರ, ಬಹುಮತದ ತೀರ್ಪು ತಪ್ಪಾಗಿದೆ ಏಕೆಂದರೆ ತಾರತಮ್ಯ ಮಾಡುವ ಮೂಲಕ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಒಪ್ಪಿಕೊಂಡರೂ, ತಾರತಮ್ಯವನ್ನು ನಿಲ್ಲಿಸುವಲ್ಲಿ ವಿಫಲವಾಗಿದೆ.</p>



<p>ಬಹುಮತದ ಅಭಿಪ್ರಾಯವು ಸಮಾನತೆ ಮತ್ತು ತಾರತಮ್ಯದ ವಿರುದ್ಧದ ಹಕ್ಕುಗಳನ್ನು ಮೂಲಭೂತ ಹಕ್ಕುಗಳೆಂದು ಹೇಳಿದ್ದರೂ ಸಹ, ತಾರತಮ್ಯವನ್ನು ತಡೆಯುವ ತಾರ್ಕಿಕ ಹೆಜ್ಜೆಯನ್ನು ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದರ ಬದಲಾಗಿ ತಾರತಮ್ಯದ ಪರಿಶೀಲನೆ ನಡೆಸಿ, ಶಿಫಾರಸ್ಸುಗಳನ್ನು ಮಾಡಲು “ಪ್ರತಿವಾದಿಯನ್ನು (ಸರ್ಕಾರ)&#8221;ಗೆ ಹೇಳಲಾಗಿದೆ.</p>



<p>“ಇದು ಸ್ಪಷ್ಟವಾದ ದೋಷವಾಗಿದ್ದು, ಗೌರವಾನ್ವಿತ ನ್ಯಾಯಾಲಯ ಸಂವಿಧಾನ ತನಗೆ ವಹಿಸಿದ ಕರ್ತವ್ಯಗಳಿಂದ ಹಿಂದೆ ಸರಿದಿದೆ. ನಾಗರಿಕರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವ ಮೊದಲ ಕೆಲಸ ನ್ಯಾಯಾಲಯದ್ದೇ ಹೊರತು, ಸರ್ಕಾರವನ್ನಲ್ಲ,” ಎಂದು ಈ ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.</p>



<p><strong>ಇದನ್ನೂ ಓದಿ: </strong><a href="https://peepalmedia.com/petition-in-supreme-court-abou-same-sex-marriage/" data-type="link" data-id="https://peepalmedia.com/petition-in-supreme-court-abou-same-sex-marriage/">ಸಲಿಂಗ ವಿವಾಹ | ಅಕ್ಟೋಬರ್ 17ರ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ</a></p>



<p>ಮರುಪರಿಶೀಲನಾ ಅರ್ಜಿಯಲ್ಲಿ ತೀರ್ಪಿನಲ್ಲಿ ʼಮದುವೆʼಯನ್ನು ಅರ್ಥೈಸುವಲ್ಲಿ ಆಗಿರುವ &#8220;ಸ್ವಯಂ-ವಿರೋಧಾಭಾಸʼವನ್ನೂ ಉಲ್ಲೇಖಿಸಲಾಗಿದೆ. ವಿಶೇಷ ವಿವಾಹ ಕಾಯ್ದೆ ಮದುವೆಗೆ ಕಾನೂನಾತ್ಮಕ ಸ್ಥಾನಮಾನವನ್ನು ನೀಡುತ್ತದೆ ಎಂದು ತೀರ್ಪು ಒಪ್ಪಿಕೊಂಡರೂ, ಅದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ನೀಡುತ್ತದೆ ಎಂದು ಅದು ಹೇಳಿದೆ.</p>



<p>ಅರ್ಜಿಯ ಪ್ರಕಾರ, ಮದುವೆಯ ನಿಯಮಗಳನ್ನು ನಿರ್ದೇಶಿಸುವುದು ಸ್ಟೇಟಿನದ್ದಾದರೂ, ಮದುವೆಯ ಸ್ಥಿತಿಯ ಬಗ್ಗೆ ಇನ್ನೂ ರಾಜ್ಯಗಳು ಏನನ್ನೂ ನೀಡಿಲ್ಲ ಎಂಬುದನ್ನು ತೀರ್ಪು ಒಪ್ಪಿಕೊಂಡಿದೆ.</p>



<p>ಬಹುಪಾಲು ತೀರ್ಪು ಮದುವೆಯನ್ನು ಜಾರಿಗೊಳಿಸಬಹುದಾದ ಸಾಮಾಜಿಕ ಒಪ್ಪಂದವಾಗಿದೆ ಎಂದು ಕಡೆಗಣಿಸುತ್ತದೆ. ಅವನು/ಅವಳು/ಅವರ ನಂಬಿಕೆ ಏನೇ ಆಗಿದ್ದರೂ ಅಂತಹ ಒಪ್ಪಂದದ ಹಕ್ಕನ್ನು ಹೊಂದುವ ಸಾಮರ್ಥ್ಯ ವಯಸ್ಕರಿಗಿದೆ.</p>



<p>&#8220;ಮದುವೆ ಎಂದರೆ ಏನೆಂದು ಯಾವುದೇ ಗುಂಪಿನ ಜನರು ಇನ್ನೊಂದು ಗುಂಪಿಗೆ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಯಾವುದೇ ಒಪ್ಪಂದ, ಅಥವಾ ಜೈಲು ಶಿಕ್ಷೆಯಂತಹ ಬಲವಂತದ ಕ್ರಮದಿಂದ ಮದುವೆಯಾಗಲು ಬಯಸುವ ವಯಸ್ಕರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ, ”ಎಂದು ಪರಿಶೀಲನಾ ಅರ್ಜಿಯಲ್ಲಿ ವಾದಿಸಲಾಗಿದೆ.</p>



<p>ಅರ್ಜಿಯಲ್ಲಿ ಇರುವ ಇನ್ನೊಂದು ಅಂಶವೆಂದರೆ, 1948 ರಲ್ಲಿ ಭಾರತದ ಅಭಿಪ್ರಾಯಗಳನ್ನೂ ಒಳಗೊಂಡು ರಚನೆಯಾದ &nbsp;ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (Universal Declaration of Human Rights) ನಿರ್ಲಕ್ಷ್ಯ.</p>



<p>ವಿಶ್ವಸಂಸ್ಥೆಯು ಅಂಗೀಕರಿಸಿದ ಈ ಘೋಷಣೆ ಪ್ರಕಾರ ಪೂರ್ಣ ವಯಸ್ಸಿನ ಪುರುಷರು ಮತ್ತು ಮಹಿಳೆಯರು, ಜನಾಂಗ, ರಾಷ್ಟ್ರೀಯತೆ ಅಥವಾ ಧರ್ಮದ ಯಾವುದೇ ಮಿತಿಯಿಲ್ಲದೆ, ಮದುವೆಯಾಗಲು ಮತ್ತು ಕುಟುಂಬವನ್ನು ಹೊಂದುವ ಹಕ್ಕನ್ನು ಹೊಂದಿದ್ದಾರೆ. ಈ ಘೋಷಣೆಯು ಭಾರತೀಯ ಸಂವಿಧಾನದ ಭಾಗ III ರಲ್ಲಿ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸುತ್ತದೆ.</p>



<p>ಮರುಪರಿಶೀಲನಾ ಅರ್ಜಿಯ ಪ್ರಕಾರ, &#8221; ಸುಪ್ರೀಂ ಕೋರ್ಟ್ ಭಾರತದ ಸಂವಿಧಾನವು ಮದುವೆಯಾಗಲು, ಕುಟುಂಬವನ್ನು ಕಂಡುಕೊಳ್ಳಲು ಯಾವುದೇ ಮೂಲಭೂತ ಹಕ್ಕನ್ನು ಖಾತರಿಪಡಿಸುವುದಿಲ್ಲ ಎಂಬ ತಣ್ಣನೆಯ ಘೋಷಣೆಯನ್ನು ಮಾಡುವಾಗ&#8221; ಮಾಡಲು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ನಿರ್ಲಕ್ಷಿಸಿದೆ.</p>



<p>ಇದಲ್ಲದೆ, ಬಹುಮತದ ತೀರ್ಪಿನಲ್ಲಿ ಅರ್ಜಿದಾರರ ಬೇಡಿಕೆಯನ್ನು ಓಡಾಡುವ ಹಕ್ಕನ್ನು ಜಾರಿಗೊಳಿಸಲು &#8220;ರಸ್ತೆ ನಿರ್ಮಾಣ (construction of road )&#8221; ಮಾಡುವ ಮನವಿಗೆ ಮತ್ತು ಕವಿಗೆ ತನ್ನ ಕವಿತೆಗಳನ್ನು ಪ್ರಕಟಿಸಲು ಪ್ಲಾಟ್‌ಫಾರ್ಮ್‌ (platform) ರಚಿಸುವ &#8220;ತಪ್ಪಾದ ಹೋಲಿಕೆಯನ್ನು ಮಾಡಲಾಗಿದೆ&#8221; ಎಂದು ಮನವಿ ಸೇರಿಸಲಾಗಿದೆ. ಈ ಎರಡೂ ಪದಗಳನ್ನು ಶಾಸಕಾಂಗದ ಫ್ರೇಮ್‌ವರ್ಕ್‌ ಇಲ್ಲದೆ ಸಮಲೈಂಗಿಕ ವಿವಾಹವನ್ನು ಹಕ್ಕನ್ನಾಗಿ ಮಾಡಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಹೇಳುವಾಗ ಈ ಎರಡು ಪದಗಳನ್ನು ನ್ಯಾಯಮೂರ್ತಿ ಭಟ್‌ ಉಲ್ಲೇಖಿಸಿದ್ದರು.</p>
]]></content:encoded>
					
		
		
			</item>
		<item>
		<title>UAPA ವಿರುದ್ಧ ಉಮರ್‌ ಖಾಲಿದ್‌ ಸುಪ್ರೀಂ ಕೋರ್ಟ್‌ಗೆ</title>
		<link>https://peepalmedia.com/umar-khalid-to-supreme-court-against-uapa/</link>
		
		<dc:creator><![CDATA[Charan Aivarnad]]></dc:creator>
		<pubDate>Sat, 21 Oct 2023 09:56:07 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[act]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[Delhi]]></category>
		<category><![CDATA[india]]></category>
		<category><![CDATA[jnu]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[law]]></category>
		<category><![CDATA[legal]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[UAPA]]></category>
		<category><![CDATA[Umar Khalid]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=30326</guid>

					<description><![CDATA[ಬೆಂಗಳೂರು,ಅಕ್ಟೋಬರ್.‌21: ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರು ತಮ್ಮ ಮೇಲಿನ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿರುವ ಪ್ರಕರಣಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ. 2020 ರ ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಖಾಲಿದ್ ಸೆಪ್ಟೆಂಬರ್ 2020 ರಿಂದ ಬಂಧನದಲ್ಲಿದ್ದಾರೆ. ಫೆಬ್ರವರಿ 23 ರಿಂದ ಫೆಬ್ರವರಿ 26, 2020 ರವರೆಗೆ ಈಶಾನ್ಯ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ &#160;ಸಂಘರ್ಷದಲ್ಲಿ 53 ಮಂದಿ ಹತರಾಗಿ, ನೂರಾರು ಮಂದಿ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್.‌21:</strong> ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರು ತಮ್ಮ ಮೇಲಿನ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿರುವ ಪ್ರಕರಣಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ.</p>



<p>2020 ರ ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಖಾಲಿದ್ ಸೆಪ್ಟೆಂಬರ್ 2020 ರಿಂದ ಬಂಧನದಲ್ಲಿದ್ದಾರೆ.</p>



<p>ಫೆಬ್ರವರಿ 23 ರಿಂದ ಫೆಬ್ರವರಿ 26, 2020 ರವರೆಗೆ ಈಶಾನ್ಯ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ &nbsp;ಸಂಘರ್ಷದಲ್ಲಿ 53 ಮಂದಿ ಹತರಾಗಿ, ನೂರಾರು ಮಂದಿ ಗಾಯಗೊಂಡಿದ್ದರು. ಇವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು.</p>



<p>ಈ ಹಿಂಸಾಚಾರವು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಮಾನಹಾನಿ ಮಾಡುವ ದೊಡ್ಡ ಪಿತೂರಿಯ ಭಾಗ ಎಂದು ದೆಹಲಿ ಪೊಲೀಸರು ಹೇಳಿದ್ದರು.</p>



<p>ಶುಕ್ರವಾರ, ವಿಭಾಗೀಯ ಪೀಠವು ಯುಎಪಿಎ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಇತರ ಅರ್ಜಿಗಳೊಂದಿಗೆ ಖಾಲಿದ್ ಅವರ ಅರ್ಜಿಯನ್ನು ಕೂಡ ಟ್ಯಾಗ್ ಮಾಡಿದೆ.</p>



<p>ಸೆಪ್ಟೆಂಬರ್ 13, 2020 ರಂದು ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಖಾಲಿದ್ ಅವರು ಈ ಹಿಂಸಾಚಾರದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಅಥವಾ ಪ್ರಕರಣದ ಇತರ ಆರೋಪಿಗಳೊಂದಿಗೆ ಯಾವುದೇ &nbsp;ಸಂಬಂಧವನ್ನು ಹೊಂದಿಲ್ಲ&#8221; ಎಂದು ವಾದಿಸಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.</p>



<p>ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಉಮರ್ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು.</p>



<p>ಖಾಲಿದ್ ಪ್ರಕರಣವು ಮೊದಲ ಬಾರಿಗೆ ಮೇ 18 ರಂದು ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಬಂತು. ನಂತರ ಆರು ಬಾರಿ ಮುಂದೂಡಲ್ಪಟ್ಟ ಕಾರಣ ಪೊಲೀಸರು ಕೌಂಟರ್‌ ಅಫಿಡವಿಟ್ ಸಲ್ಲಿಸಲು ಹೆಚ್ಚಿನ ಸಮಯ ಕೋರಿದರು. ಓರ್ವ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯುತ್ತಾರೆ. &nbsp;ಖಾಲಿದ್ ಅವರ ವಕೀಲರ ಅಲಭ್ಯತೆಯಿಂದಾಗಿ ಪ್ರಕರಣವನ್ನು ಬೇರೆ ಬೇರೆ ದಿನಗಳಿಗೆ ಪಟ್ಟಿ ಮಾಡಲಾಗಿತ್ತು.</p>



<p>ನಾಗರಿಕರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯಾಲಯಗಳು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಪದೇ ಪದೇ ಈ ಪ್ರಕರಣವನ್ನು ಮುಂದೂಡಲಾಗಿದೆ.</p>
]]></content:encoded>
					
		
		
			</item>
		<item>
		<title>ನನ್ನ ಸಂಗಾತಿಯನ್ನು ಮದುವೆಯಾಗಲು ಬಯಸಿದ್ದೆ, ಆದರೆ… ಸಮಲಿಂಗ ವಿವಾಹದ ಬಗ್ಗೆ ಸು.ಕೋ ತೀರ್ಪಿಗೆ ದ್ಯುತಿ ಚಂದ್‌ ಅಸಮಧಾನ</title>
		<link>https://peepalmedia.com/plan-to-marry-my-partner-but-dutee-chand-upset-on-same-sex-marrige-verdict/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 18 Oct 2023 13:42:38 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[dutee chand]]></category>
		<category><![CDATA[gay]]></category>
		<category><![CDATA[gay love]]></category>
		<category><![CDATA[gay marriage]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[state politics]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[trending news]]></category>
		<category><![CDATA[verdict]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=30119</guid>

					<description><![CDATA[ಭಾರತದ ಸರ್ವೋಚ್ಚ ನ್ಯಾಯಾಲಯವು ಅಕ್ಟೋಬರ್‌,18 ಮಂಗಳವಾರ ಸಮಲಿಂಗಿಗಳ ವಿವಾಹದ ಕುರಿತು ತನ್ನ ತೀರ್ಪನ್ನು ಪ್ರಕಟಿಸಿದ್ದು, ಕ್ವೀಯರ್ ಜೋಡಿಗಳ ವಿವಾಹಗಳನ್ನು ಕಾನೂನುಬದ್ಧಗೊಳಿಸಲು ಅಥವಾ ಮಕ್ಕಳನ್ನು ದತ್ತು ಪಡೆಯುವ ಹಕ್ಕನ್ನು ನೀಡಲು ನಿರಾಕರಿಸಿದೆ ಅನೇಕ ಕ್ವೀಯರ್ ಜೋಡಿಗೆ ಸುಪ್ರೀಂ ಕೋರ್ಟಿನ &#160;ತೀರ್ಪಿಗಾಗಿ ಎದುರು ನೋಡುತ್ತಿದ್ದರು. ಇವರಲ್ಲಿ ಭಾರತದ ಅಥ್ಲೀಟ್ ದ್ಯುತಿ ಚಂದ್ ಕೂಡ ಒಬ್ಬರು. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ದ್ಯುತಿಯವರಿಗೆ ನಿರಾಶೆಯಾಗಿದೆ. &#8220;ನಾನು ನನ್ನ ಬಾಳ ಸಂಗಾತಿ ಮೊನಾಲಿಸಾಳನ್ನು ಮದುವೆಯಾಗಲು ಬಯಸಿದ್ದೆ. ಆದರೆ ಉಚ್ಚ ನ್ಯಾಯಾಲಯದ ತೀರ್ಪು ಎಲ್ಲಾ [&#8230;]]]></description>
										<content:encoded><![CDATA[
<p>ಭಾರತದ ಸರ್ವೋಚ್ಚ ನ್ಯಾಯಾಲಯವು ಅಕ್ಟೋಬರ್‌,18 ಮಂಗಳವಾರ ಸಮಲಿಂಗಿಗಳ ವಿವಾಹದ ಕುರಿತು ತನ್ನ ತೀರ್ಪನ್ನು ಪ್ರಕಟಿಸಿದ್ದು, ಕ್ವೀಯರ್ ಜೋಡಿಗಳ ವಿವಾಹಗಳನ್ನು ಕಾನೂನುಬದ್ಧಗೊಳಿಸಲು ಅಥವಾ ಮಕ್ಕಳನ್ನು ದತ್ತು ಪಡೆಯುವ ಹಕ್ಕನ್ನು ನೀಡಲು ನಿರಾಕರಿಸಿದೆ</p>



<p>ಅನೇಕ ಕ್ವೀಯರ್ ಜೋಡಿಗೆ ಸುಪ್ರೀಂ ಕೋರ್ಟಿನ &nbsp;ತೀರ್ಪಿಗಾಗಿ ಎದುರು ನೋಡುತ್ತಿದ್ದರು. ಇವರಲ್ಲಿ ಭಾರತದ ಅಥ್ಲೀಟ್ ದ್ಯುತಿ ಚಂದ್ ಕೂಡ ಒಬ್ಬರು. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ದ್ಯುತಿಯವರಿಗೆ ನಿರಾಶೆಯಾಗಿದೆ.</p>



<p>&#8220;ನಾನು ನನ್ನ ಬಾಳ ಸಂಗಾತಿ ಮೊನಾಲಿಸಾಳನ್ನು ಮದುವೆಯಾಗಲು ಬಯಸಿದ್ದೆ. ಆದರೆ ಉಚ್ಚ ನ್ಯಾಯಾಲಯದ ತೀರ್ಪು ಎಲ್ಲಾ ಯೋಜನೆಗಳನ್ನೂ ತಡೆದಿದೆ. ನಾನು ಐದು ವರ್ಷಗಳಿಂದ ಮೊನಾಲಿಸಾ ಜೊತೆ ವಾಸಿಸುತ್ತಿದ್ದೇನೆ. ನಾವು ಒಟ್ಟಿಗೆ ಸಂತೋಷವಾಗಿದ್ದೇವೆ ಮತ್ತು ವಯಸ್ಕರಾದ ನಾವು ನಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಹಕ್ಕುಗಳನ್ನು ಹೊಂದಿದ್ದೇವೆ. ನಾವು ಸಮಲಿಂಗಿ ವಿವಾಹಗಳನ್ನು ಅನುಮತಿಸುವ ಕಾನೂನನ್ನು ಸಂಸತ್ತು ರೂಪಿಸುತ್ತದೆ ಎಂದು ಭಾವಿಸುತ್ತೇವೆ&#8221; ಎಂದು ದ್ಯುತಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.</p>



<p>ಮೊನಾಲಿಸಾ ಜೊತೆಗಿನ ಸಂಬಂಧದ ವಿರುದ್ಧ ಇರುವ ದ್ಯುತಿಯವರ ಹೆತ್ತವರು ಈ ತೀರ್ಪನ್ನು ಸ್ವಾಗತಿಸಿದ್ದಾರೆ.</p>



<p>ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇರುವಂತೆಯೇ ತಮ್ಮ ಇಷ್ಟದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಇರಬೇಕು ಎಂದು ದ್ಯುತಿ ಹೇಳಿದ್ದಾರೆ. ಹಲವಾರು ಇತರ ದೇಶಗಳು ಈಗಾಗಲೇ ಸಮಲಿಂಗಿ ವಿವಾಹಗಳನ್ನು ಹೇಗೆ ಕಾನೂನುಬದ್ಧಗೊಳಿಸಿವೆ ಎಂಬುದನ್ನು ಅವರು ವಿವರಿಸಿದ್ದಾರೆ.</p>



<p>&#8220;ನಾವು ನಮ್ಮೊಂದಿಗೆ ಸಂಬಂಧ ಮಾಡಿಕೊಳ್ಳಲು ಯಾರನ್ನೂ ಒತ್ತಾಯಿಸುವುದಿಲ್ಲ. ನಾವು &nbsp;ನಮ್ಮ ಆಯ್ಕೆಯಂತೆ ಅದನ್ನು ಮಾಡುತ್ತೇವೆ. ನಮ್ಮ ಆಯ್ಕೆಯ ಪ್ರಕಾರ ಜೀವನವನ್ನು ನಡೆಸಲು ನಮಗೂ ಅವಕಾಶ. ನಾವೇಕೆ (ಗೇ, ಲೆಸ್ಬಿಯನ್..) ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಿಲ್ಲ? ಹಲವಾರು ದೇಶಗಳು ಸಮಲಿಂಗೀಯ ವಿವಾಹಕ್ಕೆ ಮಾನ್ಯತೆ ನೀಡಿವೆ. ಭಾರತದಲ್ಲಿ ಕಾನೂನುಬದ್ಧಗೊಳಿಸಲು ಏನು ಸಮಸ್ಯೆ?&#8221; ಎಂದು ಪ್ರಶ್ನಿಸಿದ್ದಾರೆ.</p>



<p>&#8220;ಕ್ವೀಯರ್‌ ಸಮುದಾಯ ಮತದಾನದ ಹಕ್ಕನ್ನು ಹೊಂದಿರುವಂತೆ, ಅವರ ಇಷ್ಟದ ವ್ಯಕ್ತಿಯನ್ನು ಮದುವೆಯಾಗಲು ಅವರಿಗೆ ಅವಕಾಶ ನೀಡಬೇಕು&#8221; ಎಂದು ಅವರು ಒತ್ತಾಯಿಸಿದ್ದಾರೆ.</p>



<p>&#8220;ವಿಲಕ್ಷಣ ಜನರ ಹಕ್ಕುಗಳು ಮತ್ತು ವಿಲಕ್ಷಣ ದಂಪತಿಗಳಿಗೆ ಸುರಕ್ಷಿತ ಮನೆಗಳನ್ನು ರಚಿಸುವ ನಿರ್ಧಾರದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ನಾನು ಸ್ವಾಗತಿಸುತ್ತೇನೆ&#8221; ಎಂದು ಅವರು ಹೇಳಿದರು.</p>
]]></content:encoded>
					
		
		
			</item>
		<item>
		<title>ಸಮಲಿಂಗಿ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ!- ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಏನಿದೆ?</title>
		<link>https://peepalmedia.com/supreme-court-refuses-to-same-sex-marriages/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Oct 2023 08:35:22 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[gay]]></category>
		<category><![CDATA[gay love]]></category>
		<category><![CDATA[gay marriage]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[LGBTQ+]]></category>
		<category><![CDATA[LGBTQIA]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[trending news]]></category>
		<category><![CDATA[verdict]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29979</guid>

					<description><![CDATA[ಬೆಂಗಳೂರು,ಅಕ್ಟೋಬರ್‌.17: ಇಂದು ಸುಪ್ರೀಂ ಕೋರ್ಟ್ ಭಾರತದಲ್ಲಿ ಕ್ವೀರ್ (ಸಮಲಿಂಗಿ) ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದೆ. ಆದಾಗ್ಯೂ, ಪೀಠದ ಎಲ್ಲಾ ನ್ಯಾಯಾಧೀಶರು ಕ್ವೀರ್ &#160;ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಈ ಸಂಬಂಧವನ್ನು &#8220;ಮದುವೆ&#8221; ಎಂದು ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್‌.17:</strong> ಇಂದು ಸುಪ್ರೀಂ ಕೋರ್ಟ್ ಭಾರತದಲ್ಲಿ ಕ್ವೀರ್ (ಸಮಲಿಂಗಿ) ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದೆ. ಆದಾಗ್ಯೂ, ಪೀಠದ ಎಲ್ಲಾ ನ್ಯಾಯಾಧೀಶರು ಕ್ವೀರ್ &nbsp;ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಈ ಸಂಬಂಧವನ್ನು &#8220;ಮದುವೆ&#8221; ಎಂದು ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ</p>



<p>ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು ಏಪ್ರಿಲ್ 18, 2023 ರಂದು ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿತ್ತು. ಚರ್ಚೆಯ ನಂತರ, ಪೀಠವು ಮೇ 11, 2023 ರಂದು ತೀರ್ಪನ್ನು&nbsp; ಕಾದಿರಿಸಿತ್ತು.</p>



<p>ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ನಾಲ್ಕು ತೀರ್ಪುಗಳನ್ನು ಪ್ರಕಟಿಸಿತು- ಕ್ರಮವಾಗಿ ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಎಸ್‌ಕೆ ಕೌಲ್, ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ತೀರ್ಪನ್ನು ಬರೆದಿದ್ದಾರೆ.</p>



<p>ಕೆಲವು ಅಂಶಗಳಲ್ಲಿ ಈ ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯಗಳಿವೆ. </p>



<p>ಕೇಸ್‌ ಮಾಹಿತಿ: Supriyo v. Union of India | Writ Petition (Civil) No. 1011 of 2022 + connected matters</p>



<p><strong>ನ್ಯಾಯಾದೀಶರ ಆಭಿಪ್ರಾಯಗಳೇನು?</strong></p>



<p>ಸಿಜೆಐ ಡಿವೈ ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ, &#8220;ಸಾಂಸ್ಥಿಕ ಮಿತಿಗಳ&#8221; ಕಾರಣದಿಂದಾಗಿ ವಿಶೇಷ ವಿವಾಹ ಕಾಯ್ದೆಯ ನಿಬಂಧನೆಗಳನ್ನು ನ್ಯಾಯಾಲಯವು ರದ್ದುಗೊಳಿಸಲು ಅಥವಾ ರೀಡ್‌ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಅದು ಸಂಸತ್ತು ಮತ್ತು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ. ಆದಾಗ್ಯೂ, ಕ್ವಿಯರ್ &nbsp;ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ನಿರ್ಧರಿಸಲು ಕೇಂದ್ರ ಸರ್ಕಾರವು ಸಮಿತಿಯನ್ನು ರಚಿಸಬೇಕು ಎಂದು ಒಕ್ಕೂಟದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ದಾಖಲಿಸಿದ್ದಾರೆ. ತಮ್ಮ ತೀರ್ಪಿನಲ್ಲಿ, ಸಿಜೆಐ ಭಿನ್ನಲಿಂಗೀಯ ಸಂಬಂಧದಲ್ಲಿರುವ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು (ಉದಾ.ಟ್ರಾನ್ಸ್‌ಜೆಂಡರ್‌ ಹೆಣ್ಣು- ಪುರುಷ) ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ, ಕ್ವೀರ್ ದಂಪತಿಗಳು ಸೇರಿದಂತೆ ಅವಿವಾಹಿತ ದಂಪತಿಗಳು ಜಂಟಿಯಾಗಿ ಮಗುವನ್ನು ದತ್ತು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ, ಸಿಜೆಐ ಸಿಎಆರ್‌ಎ ನಿಯಮಾವಳಿಗಳ 5(3) ನಿಬಂಧನೆಯು (Regulation 5(3) of the CARA Regulations), ಅವಿವಾಹಿತರು ಮತ್ತು LGBTQ+ ಜೋಡಿಗಳು ದತ್ತು ತೆಗೆದುಕೊಳ್ಳುವುದನ್ನು ನಿಷೇಧಿಸುವುದು, ಸಂವಿಧಾನದ 15 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ನ್ಯಾಯಮೂರ್ತಿ ಎಸ್‌ಕೆ ಕೌಲ್ ಅವರು ಸಿಜೆಐ ಅವರ ತೀರ್ಪಿಗೆ ಸಮ್ಮತಿಸಿ, ಕ್ವೀರ್ ಸಂಬಂಧಗಳನ್ನು &#8220;ಸಂಗಾತಿಗಾಗಿ ಮತ್ತು ಪ್ರೀತಿಗಾಗಿ ಒಂದಾಗಿರುವುದು &#8211; Are to be recognised as a union to give partnership and love&#8221; ಎಂದು ಪರಿಗಣಿಸುತ್ತಾ, ವಿಶೇಷ ವಿವಾಹ ಕಾಯಿದೆಯು (Special marriage act) ಸಂವಿಧಾನದ ಆರ್ಟಿಕಲ್ 14 ಅನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಸಂಬಂಧವನ್ನು ವಿಶೇಷ ವಿವಾಹ ಕಾಯಿದೆಯ ಅಡಿಯಲ್ಲಿ ತರಲು ನ್ಯಾಯಾಲಕ್ಕೆ ಮಿತಿಗಳಿವೆ ಎಂದು ನ್ಯಾಯಮೂರ್ತಿ ಕೌಲ್ ಕೂಡ ಅಭಿಪ್ರಾಯ ತಿಳಿಸಿದ್ದಾರೆ. ಸಂಸತ್ತಿನ ಅಭಿಪ್ರಾಯವೂ ಇದೇ ಆಗಿದೆ.</p>



<p>ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರು ಸಿಜೆಐ ತೀರ್ಪನ್ನು ವಿರೋಧಿಸಿ, ವಿವಾಹದ ಕಾನೂನಾತ್ಮಕ ಅರ್ಹತೆಯು ಜಾರಿಯಲ್ಲಿ ಇರುವ ಕಾನೂನಿನ ಮೂಲಕ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಸಾಲಿಸಿಟರ್ ಜನರಲ್ ಅವರು</p>



<p>ನ್ಯಾಯಾಲಯಕ್ಕೆ ನೀಡಿದ ಹೇಳಿಕೆಗೆ ಅನುಗುಣವಾಗಿ, ಜಸ್ಟೀಸ್ ಭಟ್ ಕೂಡ ಒಕ್ಕೂಟವು LGBTQ+ ದಂಪತಿಗಳಿಗೆ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪರಿಶೀಲಿಸಲು ಉನ್ನತ ಅಧಿಕಾರದ ಸಮಿತಿಯನ್ನು ಸ್ಥಾಪಿಸಬೇಕು ಎಂದು ತೀರ್ಮಾನಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಕಾನೂನು &nbsp;ರಚಿಸುವ ಅಗತ್ಯವಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಕ್ವೀರ್ ಹಕ್ಕುಗಳಿಗೆ ಸಂಬಂಧಿಸಿದ ಹಿಂದಿನ ಪ್ರಕರಣಗಳಿಂದ ಪ್ರಸ್ತುತ ಪ್ರಕರಣವನ್ನು ಪ್ರತ್ಯೇಕಿಸಿದ ಅವರು, ನಾಗರಿಕರ ಹಕ್ಕನ್ನು ರಕ್ಷಿಸುವ ಸರ್ಕಾರದ ಕರ್ತವ್ಯದ ಆಧಾರದ ಮೇಲೆ ನ್ಯಾಯಾಲಯವು ಕ್ವಿಯರ್ ವ್ಯಕ್ತಿಗಳನ್ನು ಹಿಂಸಾಚಾರ ಅಥವಾ ಅಪರಾಧಿಗಳನ್ನಾಗಿ ಮಾಡುವುದರಿಂದ ರಕ್ಷಿಸಿದ ನಿದರ್ಶನಗಳಲ್ಲಿ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಿತ್ತು ಎಂದು ಹೇಳಿದ್ದಾರೆ. ಆದರೂ, ಈ ಪ್ರಕರಣ ಆ ರೀತಿ ಇಲ್ಲ. ವಿವಾಹವು &#8220;ಸಾಮಾಜಿಕ ಸಂಸ್ಥೆ&#8221;ಯಾಗಿದೆ ಎಂದು ಅವರು ಪ್ರತಿಪಾದಿಸಿ &#8220;ಮದುವೆ ಒಂದು ಸಾಮಾಜಿಕ ಸಂಸ್ಥೆ (Social institute) ಎಂದು ಒಪ್ಪಿಕೊಂಡರೆ, ಅಂತಹ ಸಂಸ್ಥೆಯನ್ನು ರಚಿಸಲು ಬಯಸುವ ಸಮಾಜದ ಯಾವುದೇ ವರ್ಗವು ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಪರಿಹಾರವನ್ನು ಪಡೆಯಬಹುದೇ?&#8221; ಎಂದು ಅವರು ಹೇಳಿದ್ದಾರೆ.</p>



<p>ಜಸ್ಟಿಸ್ ಎಸ್ ರವೀಂದ್ರ ಭಟ್ ಅವರು ಕ್ವಿರ್ ದಂಪತಿಗಳಿಗೆ ನ್ಯಾಯಾಲಯವು ಕಾನೂನನ್ನು ರಚಿಸಲು ಸಾಧ್ಯವಿಲ್ಲ ಮತ್ತು ನೀತಿಗೆ ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಅದನ್ನು ಶಾಸಕಾಂಗ ಮಾಡಬೇಕೆಂದು ಹೇಳಿದ್ದಾರೆ. ಆದರೂ, ಗೇ-ಲೆಸ್ಬಿಯನ್ ದಂಪತಿಗಳು ಸಂಬಂಧಗಳ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ಪುನರುಚ್ಚರಿಸಿದರು. ನ್ಯಾಯಮೂರ್ತಿ ಭಟ್ ತಮ್ಮ ತೀರ್ಪಿನಲ್ಲಿ, &#8220;ಪ್ರತಿಯೊಬ್ಬ ಕ್ವೀಯರ್ ವ್ಯಕ್ತಿಗೂ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ. ಆದರೆ ಅಂತಹ ಸಂಬಂಧವನ್ನು ಕಡಿದುಕೊಳ್ಳುವ ಹಕ್ಕುಗಳನ್ನು ಗುರುತಿಸುವುದಲ್ಲಿ ಸರ್ಕಾರದ ಪಾತ್ರವಿರುವುದಿಲ್ಲ. ಈ ಅಂಶದಲ್ಲಿ ನಾವು ಸಿಜೆಐ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದೇವೆ,&#8221; ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ, ವಿಶೇಷ ವಿವಾಹ ಕಾಯಿದೆಯ ಜೆಂಡರ್‌ ನ್ಯೂಟ್ರಲ್ ವ್ಯಾಖ್ಯಾನವು ಎಲ್ಲರಿಗೂ ಸಮಾನವಾಗಿರುವುದಿಲ್ಲ, ಮಹಿಳೆಯರು ಉದ್ದೇಶಪೂರ್ವಕವಲ್ಲದೆಯೂ &nbsp;ದುರ್ಬಲತೆಗೆ ಒಡ್ಡಿಕೊಳ್ಳಬಹುದಾದ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ. ಕ್ವೀಯರ್ ಜೋಡಿಗೆ ಪಿಎಫ್, ಇಎಸ್‌ಐ, ಪಿಂಚಣಿ ಮುಂತಾದ ಪ್ರಯೋಜನಗಳ ನಿರಾಕರಣೆ ತಾರತಮ್ಯವಾಗಿದೆ ಎಂದು ಗುರುತಿಸಿದ ನ್ಯಾಯಮೂರ್ತಿ ಭಟ್, ಈ ಸಮಸ್ಯೆಗಳನ್ನು ಪರಿಹರಿಸುವುದು ಹಲವಾರು ಕಾನೂನುಗಳನ್ನು ಜಾರಿಗೊಳಿಸಬೇಕು ಮತ್ತು ಉನ್ನತ ಸಮಿತಿಯನ್ನು ರಚಿಸಬೇಕೆಂದು ಹೇಳಿದ್ದಾರೆ. &nbsp;</p>



<p>ಇದಲ್ಲದೇ, ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಮದುವೆಯಾಗಲು ತೃತೀಯಲಿಂಗಿಗಳಿಗೆ ಇರುವ ಹಕ್ಕುಗಳ ಬಗ್ಗೆ &nbsp;ನ್ಯಾಯಮೂರ್ತಿ ಭಟ್ ಅವರು ಸಿಜೆಐ ಜೊತೆ ಒಪ್ಪಿಗೆ ಸೂಚಿಸಿದ್ದಾರೆ. ಅವರು ಕ್ವಿಯರ್ ದಂಪತಿಗಳ ದತ್ತು ಪಡೆಯುವ ಹಕ್ಕಿನ ಬಗ್ಗೆ ಸಿಜೆಐ ಜೊತೆಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. CARA ನಿಯಂತ್ರಣದ 5 (3) ನಿಯಮವನ್ನು ಅಸಂವಿಧಾನಿಕವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜಸ್ಟಿಸ್ ಹಿಮಾ ಕೊಹ್ಲಿ ಅವರು ಜಸ್ಟೀಸ್ ಭಟ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.</p>



<p>ಜಸ್ಟಿಸ್ ಭಟ್ ಅವರ ಮಾತಿಗೆ ಸಮ್ಮತಿಸಿದ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ಮದುವೆಯಾಗಲು ಯಾವುದೇ ಅನರ್ಹ ಹಕ್ಕು ಇಲ್ಲ ಮತ್ತು ವಿವಾಹದ ಹಕ್ಕು ಶಾಸನಬದ್ಧ ಹಕ್ಕು, ಇಲ್ಲವೇ ಅದೊಂದು ಸಂಪ್ರದಾಯಿಕವಾಗಿ ಬಂದ ರಿವಾಜು ಎಂದು ಹೇಳಿದ್ದಾರೆ. CARA ನಿಯಮಗಳು ಮತ್ತು ಕ್ವಿರ್ ದಂಪತಿಗಳ ದತ್ತು ಪಡೆಯುವ ಹಕ್ಕಿನ ವಿಚಾರದಲ್ಲಿ ನ್ಯಾಯಮೂರ್ತಿ ಭಟ್ ಅವರ ಅಭಿಪ್ರಾಯವನ್ನು ಅವರು ಒಪ್ಪಿಕೊಂಡಿದ್ದಾರೆ. CARA ನಿಯಮಾವಳಿಗಳನ್ನು ಅಸಾಂವಿಧಾನಿಕವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಪಿಂಚಣಿ, ಪಿಎಫ್, ಗ್ರಾಚ್ಯುಟಿ, ವಿಮೆ ಇತ್ಯಾದಿಗಳಿಂದ ಕ್ವೀಯರ್ ದಂಪತಿಗಳನ್ನು ಹೊರಗಿಡುವ ಶಾಸಕಾಂಗದ ಯೋಜನೆಗಳ ಪರಿಶೀಲನೆಯನ್ನು ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ನರಸಿಂಹ ಹೇಳಿದ್ದಾರೆ.</p>



<p>ಈ&nbsp; ತೀರ್ಪಿನ ವಿಚಾರಣೆಯ ಬ್ಯಾಚ್ ಸಲಿಂಗ ದಂಪತಿಗಳು, ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮತ್ತು LGBTQIA+ ಕಾರ್ಯಕರ್ತರು ಸಲ್ಲಿಸಿದ ಇಪ್ಪತ್ತು ಅರ್ಜಿಗಳಿದ್ದವು. ಈ ಅರ್ಜಿಗಳು ಸಾಮೂಹಿಕವಾಗಿ ವಿಶೇಷ ವಿವಾಹ ಕಾಯಿದೆ 1954, ಹಿಂದೂ ವಿವಾಹ ಕಾಯಿದೆ 1955, ಮತ್ತು ವಿದೇಶಿ ವಿವಾಹ ಕಾಯಿದೆ 1969 ಗಳು ಮಾಡುವ ನಿಯಂತ್ರಣಗಳನ್ನು ಪ್ರಶ್ನಿಸಿವೆ. ನಿರ್ದಿಷ್ಟವಾಗಿ, ಈ ಶಾಸನಗಳು ಸದ್ಯ ಭಿನ್ನಲಿಂಗೀಯವಲ್ಲದ ವಿವಾಹಗಳನ್ನು ಪರಿಗಣಿಸುವುದಿಲ್ಲ. ಹೀಗಾಗಿ LGBTQIA+ ಸಮುದಾಯದ ವಿರುದ್ದದ ತಾರತಮ್ಯ ಎಂದೆಂದಿಗೂ ಇರುತ್ತದೆ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ, ಪೀಠವು ಸವಾಲನ್ನು ವಿಶೇಷ ವಿವಾಹ ಕಾಯ್ದೆಗೆ ಮಾತ್ರ ಸೀಮಿತಗೊಳಿಸುತ್ತದೆ ಮತ್ತು ವೈಯಕ್ತಿಕ ಕಾನೂನುಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. &nbsp;ಹೀಗಾಗಿ, ಹಿಂದೂ ವಿವಾಹ ಕಾಯ್ದೆಗೆ ಸಂಬಂಧಿಸಿದ ಸವಾಲನ್ನು ಸ್ವೀಕರಿಸಲಿಲ್ಲ.</p>



<p>ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಈ ಸಂಬಂಧವನ್ನು &#8220;ಮದುವೆ&#8221; ಎಂದು ಕಾನೂನಾತ್ಮಕವಾಗಿ ಮಾನ್ಯ ಮಾಡದೆ ಸಮಲಿಂಗ ಮತ್ತು ಕ್ವಿಯರ್ ದಂಪತಿಗಳಿಗೆ ಕೆಲವು ಕಾನೂನು ಹಕ್ಕುಗಳನ್ನು ನೀಡಬಹುದೇ ಎಂಬುದನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಸಲಿಂಗ ಮತ್ತು ಕ್ವೀಯರ್ ದಂಪತಿಗಳು ಸರ್ಕಾರದ ಯೋಜನೆಗಳನ್ನು ಮತ್ತು ಸಾಮಾಜಿಕ ಭದ್ರತೆಯನ್ನು‌, ಜಂಟಿ ಬ್ಯಾಂಕ್ ಖಾತೆ, ಜೀವ ವಿಮಾ ಪಾಲಿಸಿಗಳು, ಪಿಎಫ್, ಪಿಂಚಣಿ ಇತ್ಯಾದಿಗಳಲ್ಲಿ ನಾಮಿನಿ ಹೊಂದಲು ಸಾಧ್ಯವಾಗುವಂತೆ ಕ್ರಮಗಳನ್ನು ತರಲು ಸೂಚನೆ ನೀಡಲಾಗಿದೆ.</p>



<p>ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಡಾ.ಅಭಿಷೇಕ್ ಮನು ಸಿಂಘ್ವಿ, ರಾಜು ರಾಮಚಂದ್ರನ್ ಕೆ.ವಿ.ವಿಶ್ವನಾಥನ್, ಡಾ.ಮೇನಕಾ ಗುರುಸ್ವಾಮಿ, ಜಯನಾ ಕೊಠಾರಿ, ಸೌರಭ್ ಕಿರ್ಪಾಲ್, ಆನಂದ್ ಗ್ರೋವರ್, ಗೀತಾ ಲೂತ್ರಾ, ವಕೀಲರಾದ ಅರುಂಧತಿ ಕಟ್ಜು, ವೃಂದಾ ಗ್ರೋವರ್, ಕರುಣಾ ನಂದಿ ಮುಂತಾದವರು ಅರ್ಜಿ ಸಲ್ಲಿಸಿದ್ದರು. . ಕೇಂದ್ರ ಸರ್ಕಾರದ ಪರವಾಗಿಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಅರ್ಜಿಗಳನ್ನು ವಿರೋಧಿಸಿ ಮಧ್ಯಪ್ರದೇಶ ರಾಜ್ಯದ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ ವಾದ ಮಂಡಿಸಿದರು. ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅರವಿಂದ್ ದಾತಾರ್ ಕೂಡ ಅರ್ಜಿಗಳನ್ನು ವಿರೋಧಿಸಿ ವಾದ ಮಂಡಿಸಿದರು.</p>
]]></content:encoded>
					
		
		
			</item>
		<item>
		<title>ಗೇ ಸೇರಿದಂತೆ ಪ್ರತಿಯೊಬ್ಬರಿಗೂ ನೈತಿಕವಾಗಿ ಬದುಕುವ ಹಕ್ಕಿದೆ &#8211; ಸುಪ್ರೀಂ ಕೋರ್ಟ್</title>
		<link>https://peepalmedia.com/same-sex-marriage-verdict-sc/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Oct 2023 07:50:29 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[gay]]></category>
		<category><![CDATA[gay love]]></category>
		<category><![CDATA[gay marriage]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[love]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29975</guid>

					<description><![CDATA[ಬೆಂಗಳೂರು,ಅಕ್ಟೋಬರ್.‌17: ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್.‌17: </strong>ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. ಇದು ಹಿಂದೂ ವಿವಾಹ ಕಾಯ್ದೆ ಅಥವಾ ವೈಯಕ್ತಿಕ ಕಾನೂನುಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.</p>



<p style="font-size:18px"><strong>ಕ್ವೀರ್‌ (ಗೇ-ಲೆಸ್ಬಿಯನ್….)‌ ಎಂಬುದು ನಗರ ಕೇಂದ್ರಿತ ಇಲೀಟ್‌ನೆಸ್‌ ಅಲ್ಲ. ಸಲಿಂಗಕಾಮ ಅಥವಾ ಕ್ವೆರ್ನೆಸ್ ನಗರ ಪರಿಕಲ್ಪನೆಯಲ್ಲ ಅಥವಾ ಸಮಾಜದ ಉನ್ನತ ವರ್ಗಗಳಿಗೆ ಸೀಮಿತವಾಗಿಲ್ಲ</strong> – ಸುಪ್ರೀಂ ಕೋರ್ಟ್‌</p>



<p style="font-size:18px">ಗೇ – ಕ್ವೀರ್‌ ವ್ಯಕ್ತಿ ಸೇರಿದಂತೆ ಪ್ರತಿಯೊಬ್ಬನಿಗೂ ತನ್ನ ಜೀವನದ ನೈತಿಕ ಗುಣಮಟ್ಟವನ್ನು ಪ್ರಶ್ನಿಸುವ ಹಕ್ಕಿದೆ &#8211; ಸಿಜೆಐ ಡಿವೈ ಚಂದ್ರಚೂಡ್</p>



<p style="font-size:18px">ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಬ್ಬರ ಜೀವನ ಕ್ರಮದ ಅವಿಭಾಜ್ಯ ಅಂಗವಾಗಿದೆ. ಕೆಲವರು ಇದನ್ನು ತಮ್ಮ ಜೀವನದ ಪ್ರಮುಖ ನಿರ್ಧಾರವೆಂದು ಪರಿಗಣಿಸಬಹುದು. ಈ ಹಕ್ಕು ಆರ್ಟಿಕಲ್ 21 ರ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಬರುತ್ತದೆ &#8211; ಸರ್ವೋಚ್ಚ ನ್ಯಾಯಾಲಯ</p>
]]></content:encoded>
					
		
		
			</item>
		<item>
		<title>ಸಮಲಿಂಗೀ ವಿವಾಹದ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ಏನು?</title>
		<link>https://peepalmedia.com/supreme-court-verdict-on-same-sex-marriage/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Oct 2023 07:44:16 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[gay]]></category>
		<category><![CDATA[gay love]]></category>
		<category><![CDATA[gay marriage]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[LGBTQ+]]></category>
		<category><![CDATA[love]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[sex]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29972</guid>

					<description><![CDATA[ಬೆಂಗಳೂರು,ಅಕ್ಟೋಬರ್‌.17: ಸಮಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಇಂದು ತನ್ನ ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸುತ್ತಿದೆ. ಕ್ವೀರ್ ಸಮುದಾಯದ ವಿರುದ್ಧದ ತಾರತಮ್ಯ ತಡೆಯುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ಸೌಲಭ್ಯ ಮತ್ತು ಸೇವೆಗಳನ್ನು ಕ್ವೀರ್ ಸಮುದಾಯವು ಯಾವುದೇ ತಾರತಮ್ಯವನ್ನು ಎದುರಿಸಿದರೆ ಪಡೆಯುವುದನ್ನು ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್‌.17: </strong>ಸಮಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಇಂದು ತನ್ನ ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸುತ್ತಿದೆ.</p>



<p>ಕ್ವೀರ್ ಸಮುದಾಯದ ವಿರುದ್ಧದ ತಾರತಮ್ಯ ತಡೆಯುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.</p>



<p>ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ಸೌಲಭ್ಯ ಮತ್ತು ಸೇವೆಗಳನ್ನು ಕ್ವೀರ್ ಸಮುದಾಯವು ಯಾವುದೇ ತಾರತಮ್ಯವನ್ನು ಎದುರಿಸಿದರೆ ಪಡೆಯುವುದನ್ನು ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.</p>



<p>&#8220;ಈ ಹಕ್ಕುಗಳ ಬಗ್ಗೆ ಸಾರ್ವಜನಿಕರನ್ನು ಜಾಗೃತಗೊಳಿಸಿ&#8221; ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದು, “ಕ್ವೀರ್ ಸಮುದಾಯಕ್ಕಾಗಿ ಹಾಟ್‌ಲೈನ್ ರಚಿಸಿ. ದಂಪತಿಗಳಿಗೆ ಸುರಕ್ಷಿತೆಯನ್ನು ನೀಡಿ” ಎಂದು ನಿರ್ದೇಶನ ನೀಡಿದೆ.</p>



<p>ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠ, ಇಂಟರ್‌ ಸೆಕ್ಸ್ ಮಕ್ಕಳನ್ನು ಬಲವಂತವಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸುವಂತಿಲ್ಲ ಎಂದು ಆದೇಶಿಸಿದೆ.</p>



<p>&#8220;ಯಾವುದೇ ವ್ಯಕ್ತಿಯನ್ನು ಯಾವುದೇ ಹಾರ್ಮೋನ್ ಥೆರಪಿಗೆ ಒಳಗಾಗುವಂತೆ ಒತ್ತಾಯಿಸಬಾರದು&#8221; ಎಂದು ಆದೇಶವನ್ನು ನೀಡಿದೆ.</p>



<p>ಕ್ವೀರ್ ಸಮುದಾಯವನ್ನು ಕೇವಲ ಅವರ ಲೈಂಗಿಕ ಗುರುತಿನ ಬಗ್ಗೆ ವಿಚಾರಿಸಲು ಪೊಲೀಸ್ ಠಾಣೆಗಳಿಗೆ ಕರೆಸಿಕೊಳ್ಳುವ ಮೂಲಕ ಕಿರುಕುಳ ನೀಡದಂತೆ ಪೊಲೀಸರಿಗೆ ಸುಪ್ರೀಂ ನಿರ್ದೇಶನ ನೀಡಿದೆ.</p>



<p>&#8220;ಪೊಲೀಸರು LGBTQ+ ವ್ಯಕ್ತಿಗಳನ್ನು ಅವರ ಜನ್ಮಸ್ಥಳಕ್ಕೆ ಮರಳಲು ಒತ್ತಾಯಿಸಬಾರದು. ಅವರ ಸಂಬಂಧದ ಬಗ್ಗೆ ಅವರ ವಿರುದ್ಧ ಎಫ್ಐಆರ್ ದಾಖಲಿಸುವ ಮೊದಲು ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಬೇಕು,&#8221; ಎಂದು ಪೀಠ ಹೇಳಿದೆ.</p>



<p>ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು ತನ್ನ ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸುತ್ತಿದೆ.</p>



<p>ಇಂದು ಮುಂಜಾನೆ, ಕ್ವೀರ್ ಮತ್ತು ಅವಿವಾಹಿತ ದಂಪತಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ನಿರ್ಬಂಧಿಸುವ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ (CARA) ಅಧಿಕಾರವನ್ನು ನ್ಯಾಯಾಲಯವು ರದ್ದುಗೊಳಿಸಿತು. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು &#8220;ವಿಭಿನ್ನಲಿಂಗಿ ದಂಪತಿಗಳು ಮಾತ್ರ ಉತ್ತಮ ಪೋಷಕರಾಗಬಹುದು ಎನ್ನಲು ಸಾಧ್ಯವಿಲ್ಲ&#8221; ಎಂದು ಹೇಳಿದ್ದಾರೆ.</p>



<p>ಮೇ 11 ರಂದು, ಐದು ನ್ಯಾಯಾಧೀಶರ ಪೀಠವು 10 ದಿನಗಳ ಮ್ಯಾರಥಾನ್ ವಿಚಾರಣೆಯ ನಂತರ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿತ್ತು. ಮುಕುಲ್ ರೋಹಟಗಿ, ಅಭಿಷೇಕ್ ಮನು ಸಿಂಘ್ವಿ, ರಾಜು ರಾಮಚಂದ್ರನ್, ಆನಂದ್ ಗ್ರೋವರ್, ಗೀತಾ ಲೂತ್ರಾ, ಕೆವಿ ವಿಶ್ವನಾಥನ್, ಸೌರಭ್ ಕಿರ್ಪಾಲ್ ಮತ್ತು ಮೇನಕಾ ಗುರುಸ್ವಾಮಿ ಸೇರಿದಂತೆ ಹಿರಿಯ ವಕೀಲರ ಮೂಲಕ ಅರ್ಜಿದಾರರು LGBTQIA + ಸಮುದಾಯದ ಸಮಾನತೆಯ ಹಕ್ಕುಗಳಿಗೆ ಒತ್ತು ನೀಡಿದರು. LGBTQIA ಭಿನ್ನಲಿಂಗೀಯರಂತೆ &#8220;ಗೌರವಯುತ&#8221; ಜೀವನವನ್ನು ನಡೆಸುತ್ತಾರೆ.</p>



<p>ಮೇ 3 ರಂದು, ತಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸುವ ವಿಷಯಕ್ಕೆ ಹೋಗದೆ ಸಲಿಂಗ ದಂಪತಿಗಳ &#8220;ನಿಜವಾದ ಕಾಳಜಿ&#8221; ಯನ್ನು ಪರಿಹರಿಸಲು ತೆಗೆದುಕೊಳ್ಳಬಹುದಾದ ಆಡಳಿತಾತ್ಮಕ ಕ್ರಮಗಳನ್ನು ಪರಿಶೀಲಿಸಲು ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸುವುದಾಗಿ ಕೇಂದ್ರವು ಉಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.</p>
]]></content:encoded>
					
		
		
			</item>
		<item>
		<title>ಇತರ ದಂಪತಿಗಳಿಗೆ ಸಿಗುವ ಸೌಲಭ್ಯಗಳು ಗೇ &#8211; ಸಮಲಿಂಗೀ ಜೋಡಿಗಳಿಗೂ ಸಿಗಬೇಕು: ಸುಪ್ರೀಂ ಕೋರ್ಟ್</title>
		<link>https://peepalmedia.com/supreme-court-verdict-on-gay-marriage/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Oct 2023 07:04:57 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[gay]]></category>
		<category><![CDATA[india]]></category>
		<category><![CDATA[judgement]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[LGBTQ+]]></category>
		<category><![CDATA[love]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[sex]]></category>
		<category><![CDATA[state politics]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[verdict]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29961</guid>

					<description><![CDATA[ಬೆಂಗಳೂರು,ಅಕ್ಟೋಬರ್.‌17: ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. [&#8230;]]]></description>
										<content:encoded><![CDATA[
<p>ಬೆಂಗಳೂರು,ಅಕ್ಟೋಬರ್.‌17: ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. ಇದು ಹಿಂದೂ ವಿವಾಹ ಕಾಯ್ದೆ ಅಥವಾ ವೈಯಕ್ತಿಕ ಕಾನೂನುಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.‌</p>



<p style="font-size:20px"><strong>ಹೆಟರೋ (ಗಂಡು-ಹೆಣ್ಣು) ದಂಪತಿಗಳಿಗೆ ಸಿಗುವ ಯಾವುದೇ ಸೌಲಭ್ಯ &#8211; ಸೇವೆಗಳನ್ನು ಗೇ/ಲೆಸ್ಬಿಯನ್‌ ಹಾಗೂ ಇತರ ಭಿನ್ನ ಲಿಂಗೀಯ ದಂಪತಿಗಳಿಗೆ ನಿರಾಕರಿಸುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ</strong> &#8211; ಸುಪ್ರೀಂ ಕೋರ್ಟ್ </p>
]]></content:encoded>
					
		
		
			</item>
		<item>
		<title>ಹಿಜಾಬ್‌ ಪ್ರಕರಣ: ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಹೇಳಿರುವುದೇನು?</title>
		<link>https://peepalmedia.com/hijab-prakarana-theerpinalli-nyayamurthigalu-heliruvudenu/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 13 Oct 2022 13:47:46 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[hijab]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sudhamshu dhulia]]></category>
		<category><![CDATA[supreme court judgement]]></category>
		<category><![CDATA[writing]]></category>
		<guid isPermaLink="false">https://peepalmedia.com/?p=10539</guid>

					<description><![CDATA[ದೆಹಲಿ : ರಾಜ್ಯ ಮತ್ತು ದೇಶದಲ್ಲಿ ತಿಂಗಳುಗಳ ಕಾಲ ವಿವಾದ ಎಬ್ಬಿಸಿದ್ದ ಹಿಜಾಬ್‌ ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ನೀಡಿದೆ. ಅರ್ಜಿದಾರರ ಪರ-ವಿರೋಧ ವಾದಗಳನ್ನು ಆಲಿಸಿದ ನಂತರ ಈ ತೀರ್ಪು ಹೊರಬಿದ್ದಿದೆ. ಆದರೆ ಈಗ ಬಂದಿರುವ ತೀರ್ಪು ಒಮ್ಮತವಿಲ್ಲದ ತೀರ್ಪಾಗಿದ್ದು ನ್ಯಾಯಾಧೀಶರಾದ ಹೇಮಂತ್‌ ಗುಪ್ತಾ ಹಾಗೂ ನ್ಯಾ. ಸುಧಾಂಶು ಧುಲಿಯಾ ತದ್ವಿರುದ್ಧ ತೀರ್ಪು ನೀಡಿದ್ದಾರೆ.   ಐಶಾತ್‌ ಶಿಫಾ ವಿರುದ್ಧ ಸ್ಟೇಟ್‌ ಆಫ್‌ ಕರ್ನಾಟಕ ಪ್ರಕರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಹೋಗುವಂತಿಲ್ಲ [&#8230;]]]></description>
										<content:encoded><![CDATA[
<p style="font-size:20px">ದೆಹಲಿ : ರಾಜ್ಯ ಮತ್ತು ದೇಶದಲ್ಲಿ ತಿಂಗಳುಗಳ ಕಾಲ ವಿವಾದ ಎಬ್ಬಿಸಿದ್ದ ಹಿಜಾಬ್‌ ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ನೀಡಿದೆ. ಅರ್ಜಿದಾರರ ಪರ-ವಿರೋಧ ವಾದಗಳನ್ನು ಆಲಿಸಿದ ನಂತರ ಈ ತೀರ್ಪು ಹೊರಬಿದ್ದಿದೆ. ಆದರೆ ಈಗ ಬಂದಿರುವ ತೀರ್ಪು ಒಮ್ಮತವಿಲ್ಲದ ತೀರ್ಪಾಗಿದ್ದು ನ್ಯಾಯಾಧೀಶರಾದ ಹೇಮಂತ್‌ ಗುಪ್ತಾ ಹಾಗೂ ನ್ಯಾ. ಸುಧಾಂಶು ಧುಲಿಯಾ ತದ್ವಿರುದ್ಧ ತೀರ್ಪು ನೀಡಿದ್ದಾರೆ.  </p>



<p style="font-size:20px">ಐಶಾತ್‌ ಶಿಫಾ ವಿರುದ್ಧ ಸ್ಟೇಟ್‌ ಆಫ್‌ ಕರ್ನಾಟಕ ಪ್ರಕರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಹೋಗುವಂತಿಲ್ಲ ಎಂಬ ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪ್ರಕರಣ ಇದಾಗಿದೆ.</p>



<p style="font-size:20px">ಇಂದಿನ ತೀರ್ಪಿನಲ್ಲಿ ಪೀಠದ ಮುಖ್ಯಸ್ಥ ನ್ಯಾ.ಹೇಮಂತ್‌ ಗುಪ್ತಾ ಅವರು ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದರೆ ನ್ಯಾ.ಸುಧಾಂಶು ಧುಲಿಯಾ ಕರ್ನಾಟಕ ಸರ್ಕಾರದ ಆದೇಶವನ್ನು ತಳ್ಳಿ ಹಾಕಿದರು. ಹೀಗೆ ತದ್ವಿರುದ್ಧ ತೀರ್ಪು ಬಂದ ಕಾರಣ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸುವ ಸಾಧ್ಯತೆ ಎದುರಾಗಿದೆ.</p>



<p style="font-size:20px">ನ್ಯಾ.ಸುಧಾಂಶು ಧುಲಿಯಾರವರು ತಮ್ಮ ತೀರ್ಪಿನಲ್ಲಿ, “ಹೆಣ್ಣು ಮಕ್ಕಳು ಶಾಲೆಯ ಬಾಗಿಲುಗಳನ್ನು ತೆರೆದು ಒಳಹೋಗುವ ಮೊದಲು ಹಿಜಾಬ್‌ ತೆಗೆಯುವಂತೆ&nbsp; ಹೇಳುವುದು ಅವರ ಖಾಸಗಿತನದ ಮೇಲಿನ ಆಕ್ರಮಣವಾಗಿದೆ; ಅವರ ಗೌರವ ಘನತೆಯ ಮೇಲಿನ ದಾಳಿಯಾಗಿದೆ; ಅಂತಿಮವಾಗಿ ಅವರಿಗೆ ಜಾತ್ಯತೀತ ಶಿಕ್ಷಣದ ನಿರಾಕರಣೆಯಾಗಿದೆ; ಅಷ್ಟಲ್ಲದೆ ಸಂವಿಧಾನದ 19(1)(A̧) 21 ಮತ್ತು 25(1) ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ”ಎಂದು ಹೇಳಿದ್ದಾರೆ.</p>



<p style="font-size:20px">ನಮ್ಮ ಸಾಂವಿಧಾನಿಕ ಯೋಜನೆಯಲ್ಲಿ, ಹಿಜಾಬ್‌ಅನ್ನು ಧರಿಸುವುದು ಕೇವಲ ಆಯ್ಕೆಯ ವಿಷಯವಾಗಿರಬೇಕು. ಇದು ಅತ್ಯಗತ್ಯ ಧಾರ್ಮಿಕ ಆಚರಣೆಯ ವಿಷಯವಾಗಿರಬಹುದು ಅಥವಾ ಅಲ್ಲದಿರಬಹುದು ಆದರೆ ಇದು ಆತ್ಮಸಾಕ್ಷಿ, ನಂಬಿಕೆ ಮತ್ತು ಅಭಿವ್ಯಕ್ತಿಯ ವಿಷಯವಾಗಿದೆ&#8221; ಎಂದು ತಿಳಿಸಿದ್ದಾರೆ. ಕರ್ನಾಟಕದ ಹೈ ಕೋರ್ಟು ಈ ವಿಷಯದಲ್ಲಿ ಹಿಜಾಬ್‌ ನ ಧಾರ್ಮಿಕ ಅಗತ್ಯತೆಯ ಕುರಿತು ಪರಿಶೀಲನೆಗೆ ತೊಡಗಿದ್ದು ಪ್ರಕರಣವನ್ನು ತಪ್ಪು ದಾರಿಗೆ ಎಳೆದಿದೆ’ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.</p>



<p style="font-size:20px">‘ಒಬ್ಬ ಹೆಣ್ಣು ಮಗಳು ತನ್ನ ಆಯ್ಕೆಯಿಂದ ತರಗತಿಯ ಒಳಗೂ ಹಿಜಾಬ್ ಧರಿಸಲು ಬಯಸಿದರೆ, ಅವಳನ್ನು ನಿಲ್ಲಿಸಲಾಗುವುದಿಲ್ಲ. ಏಕೆಂದರೆ ಆಕೆಯ ಸಂಪ್ರದಾಯವಾದಿ ಕುಟುಂಬವು ಅವಳನ್ನು ಶಾಲೆಗೆ ಹೋಗಲು ಅನುಮತಿ ನೀಡಬೇಕಾದರೆ ಹಿಜಾಬ್‌ ಧರಿಸುವುದೇ ಅವಳ ಏಕೈಕ ಮಾರ್ಗವಾಗಿರುತ್ತದೆ. ಶಿಕ್ಷಣದಲ್ಲಿ ಹಿಜಾಬ್‌ ಅನ್ನುವ ವಿಷಯ ಅವಳ ಆಯ್ಕೆಯ ವಿಷಯವಾಗಿರುತ್ತದೆ’ ಎಂದು ನ್ಯಾ.ಸುಧಾಂಶುರವರು ಹೆಣ್ಣು ಮಕ್ಕಳ ಪರಿಸ್ಥಿತಿಗಳನ್ನು ಮುಂದಿಟ್ಟು ತಮ್ಮ ನಿಲುವು ದಾಖಲಿಸಿದ್ದಾರೆ.</p>



<p style="font-size:20px">&#8220;ನನ್ನ ದೃಷ್ಟಿಯಲ್ಲಿ ಅತ್ಯಂತ ಮುಖ್ಯವಾದ ವಿಷಯ ಏನಾಗಿತ್ತೆಂದರೆ ಒಬ್ಬ ಹೆಣ್ಣು ಮಗುವಿನ ಶಿಕ್ಷಣ. ಒಬ್ಬ ಹೆಣ್ಣು ಮಗಳು ಅನೇಕ ಕಡೆಗಳಲ್ಲಿ ಅದರಲ್ಲೂ ಹಳ್ಳಿ ಮತ್ತು ಸಣ್ಣ ಪಟ್ಟಣಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾಳೆ. ಆಕೆ ಶಾಲೆಗೆ ಹೋಗುವ ಮೊದಲು ಪಾತ್ರೆ ತೊಳೆದು ಬಟ್ಟೆ ಒಗೆದು ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಬೇಕೀರುತ್ತದೆ. ಹೀಗಿರುವಾಗ ಹಿಜಾಬ್‌ ನಿಷೇಧಿಸಿ ನಾವು ಆಕೆಯ ಜೀವನವನ್ನು ಉತ್ತಮಗೊಳಿಸುತ್ತಿದ್ದೇವೆಯೇ?” ಎಂಬ ಪ್ರಶ್ನೆಯನ್ನು ನ್ಯಾ. ಧುಲಿಯಾ ಅವರು ತಮಗೆ ತಾವೇ ಕೇಳಿಕೊಂಡಿದ್ದಾಗಿ ತಿಳಿಸಿದ್ದಾರೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ತುಳುನಾಡ ಮುಸ್ಲಿಂ ದೈವಗಳ ಬಗ್ಗೆ ನಿಮಗೆ ಗೊತ್ತಾ? || MUSLIM GODS IN TULUNAADU ||" width="696" height="392" src="https://www.youtube.com/embed/La0VmNet_tw?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>
]]></content:encoded>
					
		
		
			</item>
	</channel>
</rss>
