<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Supreme Court of India &#8211; Peepal Media</title>
	<atom:link href="https://peepalmedia.com/tag/supreme-court-of-india/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 28 Mar 2024 06:20:03 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Supreme Court of India &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನ್ಯಾಯಾಂಗಕ್ಕೆ ಬೆದರಿಕೆ:  ಹರೀಶ್ ಸಾಳ್ವೆ, ಪಿಂಕಿ ಆನಂದ್ ಸೇರಿ 600ಕ್ಕೂ ಹೆಚ್ಚು ವಕೀಲರಿಂದ ಸಿಜೆಐಗೆ ಪತ್ರ</title>
		<link>https://peepalmedia.com/judiciary-under-threat-letter-from-lawyers-to-cji/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 28 Mar 2024 06:19:26 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[CJI]]></category>
		<category><![CDATA[Judiciary]]></category>
		<category><![CDATA[Supreme Court]]></category>
		<category><![CDATA[Supreme Court of India]]></category>
		<guid isPermaLink="false">https://peepalmedia.com/?p=37633</guid>

					<description><![CDATA[ಬೆಂಗಳೂರು: ಭಾರತ ನ್ಯಾಯಾಂಗದ ಸಮಗ್ರತೆಯನ್ನು ದುರ್ಬಲಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಹರೀಶ್ ಸಾಳ್ವೆ, ಮನನ್ ಕುಮಾರ್ ಮಿಶ್ರಾ, ಆದೀಶ್ ಅಗರ್‌ವಾಲಾ, ಚೇತನ್ ಮಿತ್ತಲ್, ಪಿಂಕಿ ಆನಂದ್, ಹಿತೇಶ್ ಜೈನ್, ಉಜ್ವಲಾ ಪವಾರ್, ಉದಯ್ ಹೊಳ್ಳ, ಸ್ವರೂಪಮಾ ಚತುರ್ವೇದಿ ಸೇರಿದಂತೆ 600ಕ್ಕೂ ಹೆಚ್ಚು ವಕೀಲರು ಒಟ್ಟಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ನಿರ್ದಿಷ್ಟ ಹಿತಾಸಕ್ತಿಯನ್ನು ಹೊಂದಿರುವ ಗುಂಪೊಂದು ನ್ಯಾಯಾಂಗದ ತೀರ್ಪುಗಳ ಮೇಲೆ ಪ್ರಭಾವ ಬೀರಲು ಒತ್ತಡ ಹಾಕುವ ತಂತ್ರಗಳನ್ನು ಬಳಸುತ್ತಿದೆ. ವಿಶೇಷವಾಗಿ ರಾಜಕೀಯ ವ್ಯಕ್ತಿಗಳಿಗೆ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಭಾರತ ನ್ಯಾಯಾಂಗದ ಸಮಗ್ರತೆಯನ್ನು ದುರ್ಬಲಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಹರೀಶ್ ಸಾಳ್ವೆ, ಮನನ್ ಕುಮಾರ್ ಮಿಶ್ರಾ, ಆದೀಶ್ ಅಗರ್‌ವಾಲಾ, ಚೇತನ್ ಮಿತ್ತಲ್, ಪಿಂಕಿ ಆನಂದ್, ಹಿತೇಶ್ ಜೈನ್, ಉಜ್ವಲಾ ಪವಾರ್, ಉದಯ್ ಹೊಳ್ಳ, ಸ್ವರೂಪಮಾ ಚತುರ್ವೇದಿ ಸೇರಿದಂತೆ 600ಕ್ಕೂ ಹೆಚ್ಚು ವಕೀಲರು ಒಟ್ಟಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.</p>



<p>ನಿರ್ದಿಷ್ಟ ಹಿತಾಸಕ್ತಿಯನ್ನು ಹೊಂದಿರುವ ಗುಂಪೊಂದು ನ್ಯಾಯಾಂಗದ ತೀರ್ಪುಗಳ ಮೇಲೆ ಪ್ರಭಾವ ಬೀರಲು ಒತ್ತಡ ಹಾಕುವ ತಂತ್ರಗಳನ್ನು ಬಳಸುತ್ತಿದೆ. ವಿಶೇಷವಾಗಿ ರಾಜಕೀಯ ವ್ಯಕ್ತಿಗಳಿಗೆ ಮತ್ತು ಭ್ರಷ್ಟಾಚಾರ ಆರೋಪಗಳಂತ ಪ್ರಕರಣಗಳಲ್ಲಿ ಇದು ನಡೆಯುತ್ತಿದೆ. ಇದರಿಂದಾಗಿ ಭಾರತದ ಪ್ರಜಾಸತ್ತಾತ್ಮಕ ಸಂರಚನೆ ಮತ್ತು ನ್ಯಾಯಾಂಗದ ಪ್ರಕ್ರಿಯೆಗಳಲ್ಲಿ ಇರಿಸಲಾಗಿರುವ ನಂಬಿಕೆಗೆ ಗಮನಾರ್ಹ ಅಪಾಯ ಎದುರಾಗುತ್ತದೆ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.</p>



<p>ನ್ಯಾಯಾಂಗದ &#8216;ಸುವರ್ಣ ಯುಗ&#8217; ಎಂಬ ಸುಳ್ಳು ನಿರೂಪಣೆಗಳನ್ನು ಪ್ರಚಾರ ಮಾಡುವ, ಪ್ರಸ್ತುತ ನ್ಯಾಯಾಂಗ ಪ್ರಕ್ರಿಯೆಗಳನ್ನು ಅಪಖ್ಯಾತಿಗೊಳಿಸುವ ಮತ್ತು ನ್ಯಾಯಾಲಯಗಳಲ್ಲಿ ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸುವ &nbsp;ಗುರಿಯನ್ನು ಹೊಂದಿರುವ ಹಲವಾರು ತಂತ್ರಗಳನ್ನು ವಕೀಲರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.</p>



<p style="font-size:18px"><strong>ಪತ್ರದಲ್ಲಿ ಏನಿದೆ?</strong></p>



<p>ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಮತ್ತು ನ್ಯಾಯಾಲಯಗಳನ್ನು ದೂಷಿಸಲು ಪಟ್ಟಭದ್ರ ಹಿತಾಸಕ್ತಿ ಗುಂಪೊಂದು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ವಕೀಲರ ಗುಂಪು ಕಳವಳ ವ್ಯಕ್ತಪಡಿಸುತ್ತದೆ, ವಿಶೇಷವಾಗಿ ಭ್ರಷ್ಟಾಚಾರವನ್ನು ಒಳಗೊಂಡಂತೆ ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳಲ್ಲಿ.</p>



<p>ಈ ಗುಂಪು ಪ್ರಸ್ತುತ ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ಸಾರ್ವಜನಿಕ ನಂಬಿಕೆಯನ್ನು ಹಾಳುಮಾಡಲು ನ್ಯಾಯಾಂಗದ ಬಗ್ಗೆ ಸುಳ್ಳು ನಿರೂಪಣೆಗಳನ್ನು ರಚಿಸಿದ್ದಾರೆ.</p>



<p>ವಕೀಲರು ಮಾಡಿರುವ ಆರೋಪಗಳಲ್ಲಿ ‘ಬೆಂಚ್ ಫಿಕ್ಸಿಂಗ್ʼ, ದೇಶೀಯ ನ್ಯಾಯಾಲಯಗಳನ್ನು ಕಾನೂನುಬಾಹಿರ ಆಡಳಿತದಲ್ಲಿರುವವರಿಗೆ ಅಗೌರವಪೂರ್ವಕವಾಗಿ ಹೋಲಿಕೆ ಮಾಡುವುದು ಮತ್ತು ನ್ಯಾಯಾಧೀಶರ ಗೌರವದ ಮೇಲೆ ನೇರ ದಾಳಿಗಳ ಬಗ್ಗೆ ಉಲ್ಲೇಖಿಸಲಾಗಿದೆ.</p>



<p>ಈ ಪಟ್ಟಭದ್ರ ಹಿತಾಸಕ್ತ ಗುಂಪು ಬಳಸುವ ತಂತ್ರಗಳಲ್ಲಿ ಅವರ ರಾಜಕೀಯ ಕಾರ್ಯಸೂಚಿಯ ಆಧಾರದ ಮೇಲೆ ನ್ಯಾಯಾಲಯದ ನಿರ್ಧಾರಗಳ ಬಗ್ಗೆ ಸೆಲೆಕ್ಟಿವ್‌ ಟೀಕೆ ಮಾಡುವುದು ಅಥವಾ ಪ್ರಶಂಸಿಸುವದೂ ಸೇರಿದೆ. ಇದನ್ನು &#8221; “My way or the highway”&#8221; ವಿಧಾನ ಎಂದು ವಿವರಿಸಲಾಗಿದೆ.</p>



<p style="font-size:18px"><strong>ಕಳವಳಗಳೇನು?</strong></p>



<ul class="wp-block-list">
<li>ರಾಜಕೀಯ ಫ್ಲಿಪ್-ಫ್ಲಾಪಿಂಗ್, ಅಲ್ಲಿ ರಾಜಕಾರಣಿಗಳು ನ್ಯಾಯಾಲಯದಲ್ಲಿ ತಮ್ಮನ್ನು ರಕ್ಷಿಸಲು ಪರ್ಯಾಯ ತಂತ್ರಗಳನ್ನು ಮಾಡುತ್ತಾರೆ.</li>



<li>ನ್ಯಾಯಾಂಗ ನೇಮಕಾತಿಗಳು ಮತ್ತು ತೀರ್ಪುಗಳ ಮೇಲೆ ಪ್ರಭಾವ ಬೀರಲು ಅಂಡರ್‌ಹ್ಯಾಂಡ್ ತಂತ್ರಗಳ ಬಳಕೆ ಮತ್ತು ಸುಳ್ಳು ಮಾಹಿತಿಯ ಪ್ರಸಾರ.</li>



<li>2018-2019ರಲ್ಲಿ ಇದೇ ರೀತಿಯ ಚಟುವಟಿಕೆಗಳಿಗೆ ಸಮಾನಾಂತರವಾಗಿ ಚುನಾವಣಾ ಅವಧಿಗಳ ಸುತ್ತ ನಡೆದ ಈ ತಂತ್ರಗಳನ್ನು ವಕೀಲರು ಗಮನಿಸಿದ್ದಾರೆ.</li>



<li>ನ್ಯಾಯಾಂಗದ ಸಮಗ್ರತೆಯನ್ನು ಕಾಪಾಡಲು ಈ ರೀತಿಯ ದಾಳಿಗಳ ವಿರುದ್ಧ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬಾರ್‌ನ ಹಿರಿಯ ಸದಸ್ಯರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.</li>



<li>ಈ ಸವಾಲುಗಳನ್ನು ಎದುರಿಸಲು ಒತ್ತಾಯಿಸಿ, ಪ್ರಜಾಪ್ರಭುತ್ವದ ಪ್ರಬಲ ಸ್ತಂಭವಾಗಿ ನ್ಯಾಯಾಂಗವನ್ನು ಉಳಿಸಲು ಒಗ್ಗಟ್ಟಾಗಲು ಈ ಪತ್ರದಲ್ಲಿ ಕರೆ ನೀಡಲಾಗಿದೆ.</li>
</ul>
]]></content:encoded>
					
		
		
			</item>
		<item>
		<title>ಸಭಾಧ್ಯಕ್ಷರ ಕ್ಷಮೆ ಯಾಚಿಸಲು ರಾಘವ್‌ ಚಡ್ಡಾ ಸಿದ್ದ</title>
		<link>https://peepalmedia.com/raghav-chadha-agrees-to-apologize-to-rajya-sabha/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 03 Nov 2023 11:24:06 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[Aam Aadmi Party]]></category>
		<category><![CDATA[AAP]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[constitution]]></category>
		<category><![CDATA[india]]></category>
		<category><![CDATA[judgement]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[law]]></category>
		<category><![CDATA[legal]]></category>
		<category><![CDATA[member of parliment]]></category>
		<category><![CDATA[MP]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[raghav chadda]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[trending news]]></category>
		<category><![CDATA[verdict]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=31112</guid>

					<description><![CDATA[ಬೆಂಗಳೂರು,ನವೆಂಬರ್.‌03: ಆಮ್ ಆದ್ಮಿ ಪಾರ್ಟಿ ಸಂಸದ ರಾಘವ್ ಚಡ್ಡಾ ಅವರ ಅಮಾನತು ವಿಚಾರದಲ್ಲಿ &#8216;ಮುಂದಕ್ಕೆ ತೆಗೆದುಕೊಂಡು ಹೋಗುವ &#8211; way forward&#8217; ನಿರ್ಧಾರವನ್ನು ಮಾಡಿರುವ ಸುಪ್ರೀಂ ಕೋರ್ಟ್ ಇಂದು ರಾಜ್ಯಸಭೆಯ ಅಧ್ಯಕ್ಷರ ಬಳಿ ಬೇಷರತ್ ಕ್ಷಮೆಯಾಚಿಸಲು ಒಪ್ಪಿಗೆ ಸೂಚಿಸಿದ ಚಡ್ಡಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಮತ್ತು ಅದನ್ನು ಇದನ್ನು ಪರಿಗಣಿಸಿ ʼಸಹಾನುಭೂತಿʼ ತೋರುವಂತೆ ಸಭಾಧ್ಯಕ್ಷರನ್ನು ಒತ್ತಾಯಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ನವೆಂಬರ್.‌03: </strong>ಆಮ್ ಆದ್ಮಿ ಪಾರ್ಟಿ ಸಂಸದ ರಾಘವ್ ಚಡ್ಡಾ ಅವರ ಅಮಾನತು ವಿಚಾರದಲ್ಲಿ &#8216;ಮುಂದಕ್ಕೆ ತೆಗೆದುಕೊಂಡು ಹೋಗುವ &#8211; way forward&#8217; ನಿರ್ಧಾರವನ್ನು ಮಾಡಿರುವ ಸುಪ್ರೀಂ ಕೋರ್ಟ್ ಇಂದು ರಾಜ್ಯಸಭೆಯ ಅಧ್ಯಕ್ಷರ ಬಳಿ ಬೇಷರತ್ ಕ್ಷಮೆಯಾಚಿಸಲು ಒಪ್ಪಿಗೆ ಸೂಚಿಸಿದ ಚಡ್ಡಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಮತ್ತು ಅದನ್ನು ಇದನ್ನು ಪರಿಗಣಿಸಿ ʼಸಹಾನುಭೂತಿʼ ತೋರುವಂತೆ ಸಭಾಧ್ಯಕ್ಷರನ್ನು ಒತ್ತಾಯಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ.</p>



<p>ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ  ಅವರನ್ನೊಳಗೊಂಡ ಪೀಠವು ಚಡ್ಡಾ ಸಂಸತ್ತಿನ ಅತ್ಯಂತ ಕಿರಿಯ ಮತ್ತು ಮೊದಲ ಬಾರಿಗೆ ಸಂಸದರಾದವರು. ಸಭಾಧ್ಯಕ್ಷರು ಈ ವಿಷಯದಲ್ಲಿ ವಸ್ತುನಿಷ್ಠ ದೃಷ್ಟಿಕೋನದಿಂದ ಪರಿಗಣಿಸಬೇಕು ಎಂದಿದೆ. ಕಳೆದ ವಿಚಾರಣೆಯಲ್ಲಿ ಪೀಠವು ಚಡ್ಡಾ ಅವರ ಅನಿರ್ದಿಷ್ಟ ಅವಧಿಯ ಅಮಾನತಿನ ಬಗ್ಗೆ ಕಳವಳ ವ್ಯಕ್ತಪಡಿಸಿ, ವಿರೋಧ ಪಕ್ಷದ ಧ್ವನಿಯನ್ನು ಹೊರಗಿಡುವುದು ಗಂಭೀರ ವಿಷಯ ಎಂದು ಟೀಕೆ ಮಾಡಿತ್ತು. ಸಿಜೆಐ &#8220;ನಾವು ಸಂಸತ್ತಿನಿಂದ ಆ ಧ್ವನಿಗಳನ್ನು ಹೊರಗಿಡದಂತೆ ಬಹಳ ಜಾಗರೂಕರಾಗಿರಬೇಕು,&#8221; ಎಂದು ಎಚ್ಚರಿಸಿದ್ದರು.</p>



<p><strong>ಕೇಸ್‌:</strong> <a href="https://indiankanoon.org/doc/185605658/" data-type="link" data-id="https://indiankanoon.org/doc/185605658/">Raghav Chadha v. Rajya Sabha Secretariat And Ors. W.P.(C) No. 1155/2023</a></p>



<p>&#8220;ಕಳೆದ ಬಾರಿ ಅವರು ಕ್ಷಮೆಯಾಚಿಸುತ್ತಿದ್ದರೆ, ಅತ್ಯಂತ ಪ್ರತಿಷ್ಠಿತ ವ್ಯಕ್ತಿ ಮತ್ತು ಸಂವಿಧಾನದ ಮಹಾನ್ ಸ್ಥಾನದಲ್ಲಿರುವ  ಸಭಾಧ್ಯಕ್ಷರು, ಬಹುಶಃ ವಸ್ತುನಿಷ್ಠ ದೃಷ್ಟಿಕೋನದಿಂದ ಅದನ್ನು ಸ್ವೀಕರಿಸುತ್ತಿದ್ದರೋ ಏನೋ,” ಎಂದು ಸಿಜೆಐ ಹೇಳಿದ್ದಾರೆ.</p>



<p>ಅಟಾರ್ನಿ ಜನರಲ್ ಹಾಗೂ ಸಾಲಿಸಿಟರ್ ಜನರಲ್ ಇದಕ್ಕೆ ಒಪ್ಪಿಗೆ ಸೂಚಿಸಿದ ನಂತರ ಸಿಜೆಐ ಅವರು ಕ್ಷಮೆ ಯಾಚಿಸಲು ಸಿದ್ಧರಿದ್ದಾರೆಯೇ ಎಂದು ಚಡ್ಡಾ ಪರವಾಗಿ ಹಾಜರಾದ ವಕೀಲ ಶಾದನ್ ಫರಾಸತ್ ಅವರನ್ನು ಕೇಳಿದ್ದಾರೆ.</p>



<p>ಸಿಜೆಐ, &#8220;ಮಿಸ್ಟರ್ ಫರಾಸತ್, ನೀವು ಈಗಾಗಲೇ ಆರು ಬಾರಿ ಕ್ಷಮೆಯಾಚಿಸಿದ್ದೀರಿ. ಆದರೆ ನೀವು ಗೌರವಾನ್ವಿತ ಸಭಾಧ್ಯಕ್ಷರೊಂದಿಗೆ ಅಪಾಯಿಂಟ್‌ಮೆಂಟ್ ಪಡೆಯಲು ಮತ್ತು ಅಧ್ಯಕ್ಷರನ್ನು ಭೇಟಿ ಮಾಡಲು ಸಿದ್ಧರಿದ್ದೀರಾ, ಕ್ಷಮೆಯಾಚಿಸಲು ಬಯಸುತ್ತೀರಾ?&#8221; ಎಂದು ಕೇಳಿದ್ದಾರೆ.</p>



<p>ಫರಸತ್ ಅವರು ಇದಕ್ಕೆ ಒಪ್ಪಿಕೊಂಡಿದ್ದು, &#8220;ಅವರು ಹಿರಿಯರ ಮನೆಯಲ್ಲಿ ಅತ್ಯಂತ ಕಿರಿಯ ಸದಸ್ಯ. ಅವರಿಗೆ ಕ್ಷಮೆಯಾಚಿಸಲು ಮನಸ್ಸಿಲ್ಲ. ವಿಶೇಷಾಧಿಕಾರ ಸಮಿತಿಗೆ ನಾನು ಬರೆದ ಪತ್ರದಲ್ಲಿಯೂ ನಾನು ಸಭಾಧ್ಯಕ್ಷರಿಗೆ ನನ್ನ ವೈಯಕ್ತಿಕ ಕ್ಷಮೆಯಾಚನೆಯನ್ನು ಹೇಳಿದ್ದೇನೆ&#8230;&#8221; ಅಮಾನತಿನ ವಿರುದ್ಧ ಎದ್ದಿರುವ ಕಾನೂನು ವಿವಾದಗಳಿಗೆ ಕ್ಷಮೆಯಾಚನೆಯು ಪೂರ್ವಾಗ್ರಹವಾಗುವುದಿಲ್ಲ ಎಂದು ಫರಾಸತ್ ಹೇಳಿದ್ದಾರೆ.</p>



<p>ಪೀಠವು &#8220;ರಾಜ್ಯಸಭೆಯಲ್ಲಿ ತಾನು ಅತ್ಯಂತ ಕಿರಿಯ ಸದಸ್ಯ ಎಂದು ಶ್ರೀ ಫರಸತ್ ಹೇಳುತ್ತಾರೆ. ಅವರು ಸದಸ್ಯರಾಗಿರುವ ಮನೆಯ ಘನತೆಗೆ ಧಕ್ಕೆ ತರುವ ಉದ್ದೇಶವಿಲ್ಲ ಎಂದು ಮನಸ್ಸಿನಲ್ಲಿಟ್ಟುಕೊಂಡು, ಅರ್ಜಿದಾರರು ಸಭಾಧ್ಯಕ್ಷರೊಂದಿಗೆ ಅಪಾಯಿಂಟ್ಮೆಂಟ್ ಕೇಳುತ್ತಾರೆ ಎಂದು ಶ್ರೀ ಫರಸತ್ ಹೇಳಿಕೆ ಸಲ್ಲಿಸಿದ್ದಾರೆ. ಅವರು ಕೇಳಬಹುದಾದ ಬೇಷರತ್ತಾದ ಕ್ಷಮೆಯನ್ನು ಸಹಾನುಭೂತಿಯಿಂದ ಪರಿಗಣಿಸಿ,” ಎಂದು ಹೇಳಿದೆ.</p>



<p>GNCTD (ತಿದ್ದುಪಡಿ) ಮಸೂದೆ 2023 ರ ಆಯ್ಕೆ ಸಮಿತಿಯ ಸದಸ್ಯರಾಗಿ ಒಪ್ಪಿಗೆ ಇಲ್ಲದೆ ನಾಲ್ವರು ಎಂಪಿಗಳ ಹೆಸರನ್ನು ಪ್ರಸ್ತಾಪಿಸಿದ (breach of privilege)&nbsp; ಕಾರಣಕ್ಕೆ ಅಗಸ್ಟ್‌ 1ರಂದು ಚಡ್ಡಾರವರನ್ನು ಅಮಾನತು ಮಾಡಲಾಗಿತ್ತು. &nbsp;</p>



<p><br><br></p>
]]></content:encoded>
					
		
		
			</item>
		<item>
		<title>UAPA ವಿರುದ್ಧ ಉಮರ್‌ ಖಾಲಿದ್‌ ಸುಪ್ರೀಂ ಕೋರ್ಟ್‌ಗೆ</title>
		<link>https://peepalmedia.com/umar-khalid-to-supreme-court-against-uapa/</link>
		
		<dc:creator><![CDATA[Charan Aivarnad]]></dc:creator>
		<pubDate>Sat, 21 Oct 2023 09:56:07 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[act]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[Delhi]]></category>
		<category><![CDATA[india]]></category>
		<category><![CDATA[jnu]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[law]]></category>
		<category><![CDATA[legal]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[UAPA]]></category>
		<category><![CDATA[Umar Khalid]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=30326</guid>

					<description><![CDATA[ಬೆಂಗಳೂರು,ಅಕ್ಟೋಬರ್.‌21: ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರು ತಮ್ಮ ಮೇಲಿನ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿರುವ ಪ್ರಕರಣಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ. 2020 ರ ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಖಾಲಿದ್ ಸೆಪ್ಟೆಂಬರ್ 2020 ರಿಂದ ಬಂಧನದಲ್ಲಿದ್ದಾರೆ. ಫೆಬ್ರವರಿ 23 ರಿಂದ ಫೆಬ್ರವರಿ 26, 2020 ರವರೆಗೆ ಈಶಾನ್ಯ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ &#160;ಸಂಘರ್ಷದಲ್ಲಿ 53 ಮಂದಿ ಹತರಾಗಿ, ನೂರಾರು ಮಂದಿ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್.‌21:</strong> ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರು ತಮ್ಮ ಮೇಲಿನ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿರುವ ಪ್ರಕರಣಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ.</p>



<p>2020 ರ ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಖಾಲಿದ್ ಸೆಪ್ಟೆಂಬರ್ 2020 ರಿಂದ ಬಂಧನದಲ್ಲಿದ್ದಾರೆ.</p>



<p>ಫೆಬ್ರವರಿ 23 ರಿಂದ ಫೆಬ್ರವರಿ 26, 2020 ರವರೆಗೆ ಈಶಾನ್ಯ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ &nbsp;ಸಂಘರ್ಷದಲ್ಲಿ 53 ಮಂದಿ ಹತರಾಗಿ, ನೂರಾರು ಮಂದಿ ಗಾಯಗೊಂಡಿದ್ದರು. ಇವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು.</p>



<p>ಈ ಹಿಂಸಾಚಾರವು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಮಾನಹಾನಿ ಮಾಡುವ ದೊಡ್ಡ ಪಿತೂರಿಯ ಭಾಗ ಎಂದು ದೆಹಲಿ ಪೊಲೀಸರು ಹೇಳಿದ್ದರು.</p>



<p>ಶುಕ್ರವಾರ, ವಿಭಾಗೀಯ ಪೀಠವು ಯುಎಪಿಎ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಇತರ ಅರ್ಜಿಗಳೊಂದಿಗೆ ಖಾಲಿದ್ ಅವರ ಅರ್ಜಿಯನ್ನು ಕೂಡ ಟ್ಯಾಗ್ ಮಾಡಿದೆ.</p>



<p>ಸೆಪ್ಟೆಂಬರ್ 13, 2020 ರಂದು ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಖಾಲಿದ್ ಅವರು ಈ ಹಿಂಸಾಚಾರದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಅಥವಾ ಪ್ರಕರಣದ ಇತರ ಆರೋಪಿಗಳೊಂದಿಗೆ ಯಾವುದೇ &nbsp;ಸಂಬಂಧವನ್ನು ಹೊಂದಿಲ್ಲ&#8221; ಎಂದು ವಾದಿಸಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.</p>



<p>ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಉಮರ್ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು.</p>



<p>ಖಾಲಿದ್ ಪ್ರಕರಣವು ಮೊದಲ ಬಾರಿಗೆ ಮೇ 18 ರಂದು ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಬಂತು. ನಂತರ ಆರು ಬಾರಿ ಮುಂದೂಡಲ್ಪಟ್ಟ ಕಾರಣ ಪೊಲೀಸರು ಕೌಂಟರ್‌ ಅಫಿಡವಿಟ್ ಸಲ್ಲಿಸಲು ಹೆಚ್ಚಿನ ಸಮಯ ಕೋರಿದರು. ಓರ್ವ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯುತ್ತಾರೆ. &nbsp;ಖಾಲಿದ್ ಅವರ ವಕೀಲರ ಅಲಭ್ಯತೆಯಿಂದಾಗಿ ಪ್ರಕರಣವನ್ನು ಬೇರೆ ಬೇರೆ ದಿನಗಳಿಗೆ ಪಟ್ಟಿ ಮಾಡಲಾಗಿತ್ತು.</p>



<p>ನಾಗರಿಕರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯಾಲಯಗಳು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಪದೇ ಪದೇ ಈ ಪ್ರಕರಣವನ್ನು ಮುಂದೂಡಲಾಗಿದೆ.</p>
]]></content:encoded>
					
		
		
			</item>
		<item>
		<title>ಸಮಲಿಂಗಿ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ!- ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಏನಿದೆ?</title>
		<link>https://peepalmedia.com/supreme-court-refuses-to-same-sex-marriages/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Oct 2023 08:35:22 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[gay]]></category>
		<category><![CDATA[gay love]]></category>
		<category><![CDATA[gay marriage]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[LGBTQ+]]></category>
		<category><![CDATA[LGBTQIA]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[trending news]]></category>
		<category><![CDATA[verdict]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29979</guid>

					<description><![CDATA[ಬೆಂಗಳೂರು,ಅಕ್ಟೋಬರ್‌.17: ಇಂದು ಸುಪ್ರೀಂ ಕೋರ್ಟ್ ಭಾರತದಲ್ಲಿ ಕ್ವೀರ್ (ಸಮಲಿಂಗಿ) ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದೆ. ಆದಾಗ್ಯೂ, ಪೀಠದ ಎಲ್ಲಾ ನ್ಯಾಯಾಧೀಶರು ಕ್ವೀರ್ &#160;ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಈ ಸಂಬಂಧವನ್ನು &#8220;ಮದುವೆ&#8221; ಎಂದು ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್‌.17:</strong> ಇಂದು ಸುಪ್ರೀಂ ಕೋರ್ಟ್ ಭಾರತದಲ್ಲಿ ಕ್ವೀರ್ (ಸಮಲಿಂಗಿ) ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದೆ. ಆದಾಗ್ಯೂ, ಪೀಠದ ಎಲ್ಲಾ ನ್ಯಾಯಾಧೀಶರು ಕ್ವೀರ್ &nbsp;ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಈ ಸಂಬಂಧವನ್ನು &#8220;ಮದುವೆ&#8221; ಎಂದು ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ</p>



<p>ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು ಏಪ್ರಿಲ್ 18, 2023 ರಂದು ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿತ್ತು. ಚರ್ಚೆಯ ನಂತರ, ಪೀಠವು ಮೇ 11, 2023 ರಂದು ತೀರ್ಪನ್ನು&nbsp; ಕಾದಿರಿಸಿತ್ತು.</p>



<p>ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ನಾಲ್ಕು ತೀರ್ಪುಗಳನ್ನು ಪ್ರಕಟಿಸಿತು- ಕ್ರಮವಾಗಿ ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಎಸ್‌ಕೆ ಕೌಲ್, ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ತೀರ್ಪನ್ನು ಬರೆದಿದ್ದಾರೆ.</p>



<p>ಕೆಲವು ಅಂಶಗಳಲ್ಲಿ ಈ ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯಗಳಿವೆ. </p>



<p>ಕೇಸ್‌ ಮಾಹಿತಿ: Supriyo v. Union of India | Writ Petition (Civil) No. 1011 of 2022 + connected matters</p>



<p><strong>ನ್ಯಾಯಾದೀಶರ ಆಭಿಪ್ರಾಯಗಳೇನು?</strong></p>



<p>ಸಿಜೆಐ ಡಿವೈ ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ, &#8220;ಸಾಂಸ್ಥಿಕ ಮಿತಿಗಳ&#8221; ಕಾರಣದಿಂದಾಗಿ ವಿಶೇಷ ವಿವಾಹ ಕಾಯ್ದೆಯ ನಿಬಂಧನೆಗಳನ್ನು ನ್ಯಾಯಾಲಯವು ರದ್ದುಗೊಳಿಸಲು ಅಥವಾ ರೀಡ್‌ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಅದು ಸಂಸತ್ತು ಮತ್ತು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ. ಆದಾಗ್ಯೂ, ಕ್ವಿಯರ್ &nbsp;ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ನಿರ್ಧರಿಸಲು ಕೇಂದ್ರ ಸರ್ಕಾರವು ಸಮಿತಿಯನ್ನು ರಚಿಸಬೇಕು ಎಂದು ಒಕ್ಕೂಟದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ದಾಖಲಿಸಿದ್ದಾರೆ. ತಮ್ಮ ತೀರ್ಪಿನಲ್ಲಿ, ಸಿಜೆಐ ಭಿನ್ನಲಿಂಗೀಯ ಸಂಬಂಧದಲ್ಲಿರುವ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು (ಉದಾ.ಟ್ರಾನ್ಸ್‌ಜೆಂಡರ್‌ ಹೆಣ್ಣು- ಪುರುಷ) ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ, ಕ್ವೀರ್ ದಂಪತಿಗಳು ಸೇರಿದಂತೆ ಅವಿವಾಹಿತ ದಂಪತಿಗಳು ಜಂಟಿಯಾಗಿ ಮಗುವನ್ನು ದತ್ತು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ, ಸಿಜೆಐ ಸಿಎಆರ್‌ಎ ನಿಯಮಾವಳಿಗಳ 5(3) ನಿಬಂಧನೆಯು (Regulation 5(3) of the CARA Regulations), ಅವಿವಾಹಿತರು ಮತ್ತು LGBTQ+ ಜೋಡಿಗಳು ದತ್ತು ತೆಗೆದುಕೊಳ್ಳುವುದನ್ನು ನಿಷೇಧಿಸುವುದು, ಸಂವಿಧಾನದ 15 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ನ್ಯಾಯಮೂರ್ತಿ ಎಸ್‌ಕೆ ಕೌಲ್ ಅವರು ಸಿಜೆಐ ಅವರ ತೀರ್ಪಿಗೆ ಸಮ್ಮತಿಸಿ, ಕ್ವೀರ್ ಸಂಬಂಧಗಳನ್ನು &#8220;ಸಂಗಾತಿಗಾಗಿ ಮತ್ತು ಪ್ರೀತಿಗಾಗಿ ಒಂದಾಗಿರುವುದು &#8211; Are to be recognised as a union to give partnership and love&#8221; ಎಂದು ಪರಿಗಣಿಸುತ್ತಾ, ವಿಶೇಷ ವಿವಾಹ ಕಾಯಿದೆಯು (Special marriage act) ಸಂವಿಧಾನದ ಆರ್ಟಿಕಲ್ 14 ಅನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಸಂಬಂಧವನ್ನು ವಿಶೇಷ ವಿವಾಹ ಕಾಯಿದೆಯ ಅಡಿಯಲ್ಲಿ ತರಲು ನ್ಯಾಯಾಲಕ್ಕೆ ಮಿತಿಗಳಿವೆ ಎಂದು ನ್ಯಾಯಮೂರ್ತಿ ಕೌಲ್ ಕೂಡ ಅಭಿಪ್ರಾಯ ತಿಳಿಸಿದ್ದಾರೆ. ಸಂಸತ್ತಿನ ಅಭಿಪ್ರಾಯವೂ ಇದೇ ಆಗಿದೆ.</p>



<p>ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರು ಸಿಜೆಐ ತೀರ್ಪನ್ನು ವಿರೋಧಿಸಿ, ವಿವಾಹದ ಕಾನೂನಾತ್ಮಕ ಅರ್ಹತೆಯು ಜಾರಿಯಲ್ಲಿ ಇರುವ ಕಾನೂನಿನ ಮೂಲಕ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಸಾಲಿಸಿಟರ್ ಜನರಲ್ ಅವರು</p>



<p>ನ್ಯಾಯಾಲಯಕ್ಕೆ ನೀಡಿದ ಹೇಳಿಕೆಗೆ ಅನುಗುಣವಾಗಿ, ಜಸ್ಟೀಸ್ ಭಟ್ ಕೂಡ ಒಕ್ಕೂಟವು LGBTQ+ ದಂಪತಿಗಳಿಗೆ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪರಿಶೀಲಿಸಲು ಉನ್ನತ ಅಧಿಕಾರದ ಸಮಿತಿಯನ್ನು ಸ್ಥಾಪಿಸಬೇಕು ಎಂದು ತೀರ್ಮಾನಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಕಾನೂನು &nbsp;ರಚಿಸುವ ಅಗತ್ಯವಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಕ್ವೀರ್ ಹಕ್ಕುಗಳಿಗೆ ಸಂಬಂಧಿಸಿದ ಹಿಂದಿನ ಪ್ರಕರಣಗಳಿಂದ ಪ್ರಸ್ತುತ ಪ್ರಕರಣವನ್ನು ಪ್ರತ್ಯೇಕಿಸಿದ ಅವರು, ನಾಗರಿಕರ ಹಕ್ಕನ್ನು ರಕ್ಷಿಸುವ ಸರ್ಕಾರದ ಕರ್ತವ್ಯದ ಆಧಾರದ ಮೇಲೆ ನ್ಯಾಯಾಲಯವು ಕ್ವಿಯರ್ ವ್ಯಕ್ತಿಗಳನ್ನು ಹಿಂಸಾಚಾರ ಅಥವಾ ಅಪರಾಧಿಗಳನ್ನಾಗಿ ಮಾಡುವುದರಿಂದ ರಕ್ಷಿಸಿದ ನಿದರ್ಶನಗಳಲ್ಲಿ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಿತ್ತು ಎಂದು ಹೇಳಿದ್ದಾರೆ. ಆದರೂ, ಈ ಪ್ರಕರಣ ಆ ರೀತಿ ಇಲ್ಲ. ವಿವಾಹವು &#8220;ಸಾಮಾಜಿಕ ಸಂಸ್ಥೆ&#8221;ಯಾಗಿದೆ ಎಂದು ಅವರು ಪ್ರತಿಪಾದಿಸಿ &#8220;ಮದುವೆ ಒಂದು ಸಾಮಾಜಿಕ ಸಂಸ್ಥೆ (Social institute) ಎಂದು ಒಪ್ಪಿಕೊಂಡರೆ, ಅಂತಹ ಸಂಸ್ಥೆಯನ್ನು ರಚಿಸಲು ಬಯಸುವ ಸಮಾಜದ ಯಾವುದೇ ವರ್ಗವು ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಪರಿಹಾರವನ್ನು ಪಡೆಯಬಹುದೇ?&#8221; ಎಂದು ಅವರು ಹೇಳಿದ್ದಾರೆ.</p>



<p>ಜಸ್ಟಿಸ್ ಎಸ್ ರವೀಂದ್ರ ಭಟ್ ಅವರು ಕ್ವಿರ್ ದಂಪತಿಗಳಿಗೆ ನ್ಯಾಯಾಲಯವು ಕಾನೂನನ್ನು ರಚಿಸಲು ಸಾಧ್ಯವಿಲ್ಲ ಮತ್ತು ನೀತಿಗೆ ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಅದನ್ನು ಶಾಸಕಾಂಗ ಮಾಡಬೇಕೆಂದು ಹೇಳಿದ್ದಾರೆ. ಆದರೂ, ಗೇ-ಲೆಸ್ಬಿಯನ್ ದಂಪತಿಗಳು ಸಂಬಂಧಗಳ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ಪುನರುಚ್ಚರಿಸಿದರು. ನ್ಯಾಯಮೂರ್ತಿ ಭಟ್ ತಮ್ಮ ತೀರ್ಪಿನಲ್ಲಿ, &#8220;ಪ್ರತಿಯೊಬ್ಬ ಕ್ವೀಯರ್ ವ್ಯಕ್ತಿಗೂ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ. ಆದರೆ ಅಂತಹ ಸಂಬಂಧವನ್ನು ಕಡಿದುಕೊಳ್ಳುವ ಹಕ್ಕುಗಳನ್ನು ಗುರುತಿಸುವುದಲ್ಲಿ ಸರ್ಕಾರದ ಪಾತ್ರವಿರುವುದಿಲ್ಲ. ಈ ಅಂಶದಲ್ಲಿ ನಾವು ಸಿಜೆಐ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದೇವೆ,&#8221; ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ, ವಿಶೇಷ ವಿವಾಹ ಕಾಯಿದೆಯ ಜೆಂಡರ್‌ ನ್ಯೂಟ್ರಲ್ ವ್ಯಾಖ್ಯಾನವು ಎಲ್ಲರಿಗೂ ಸಮಾನವಾಗಿರುವುದಿಲ್ಲ, ಮಹಿಳೆಯರು ಉದ್ದೇಶಪೂರ್ವಕವಲ್ಲದೆಯೂ &nbsp;ದುರ್ಬಲತೆಗೆ ಒಡ್ಡಿಕೊಳ್ಳಬಹುದಾದ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ. ಕ್ವೀಯರ್ ಜೋಡಿಗೆ ಪಿಎಫ್, ಇಎಸ್‌ಐ, ಪಿಂಚಣಿ ಮುಂತಾದ ಪ್ರಯೋಜನಗಳ ನಿರಾಕರಣೆ ತಾರತಮ್ಯವಾಗಿದೆ ಎಂದು ಗುರುತಿಸಿದ ನ್ಯಾಯಮೂರ್ತಿ ಭಟ್, ಈ ಸಮಸ್ಯೆಗಳನ್ನು ಪರಿಹರಿಸುವುದು ಹಲವಾರು ಕಾನೂನುಗಳನ್ನು ಜಾರಿಗೊಳಿಸಬೇಕು ಮತ್ತು ಉನ್ನತ ಸಮಿತಿಯನ್ನು ರಚಿಸಬೇಕೆಂದು ಹೇಳಿದ್ದಾರೆ. &nbsp;</p>



<p>ಇದಲ್ಲದೇ, ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಮದುವೆಯಾಗಲು ತೃತೀಯಲಿಂಗಿಗಳಿಗೆ ಇರುವ ಹಕ್ಕುಗಳ ಬಗ್ಗೆ &nbsp;ನ್ಯಾಯಮೂರ್ತಿ ಭಟ್ ಅವರು ಸಿಜೆಐ ಜೊತೆ ಒಪ್ಪಿಗೆ ಸೂಚಿಸಿದ್ದಾರೆ. ಅವರು ಕ್ವಿಯರ್ ದಂಪತಿಗಳ ದತ್ತು ಪಡೆಯುವ ಹಕ್ಕಿನ ಬಗ್ಗೆ ಸಿಜೆಐ ಜೊತೆಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. CARA ನಿಯಂತ್ರಣದ 5 (3) ನಿಯಮವನ್ನು ಅಸಂವಿಧಾನಿಕವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜಸ್ಟಿಸ್ ಹಿಮಾ ಕೊಹ್ಲಿ ಅವರು ಜಸ್ಟೀಸ್ ಭಟ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.</p>



<p>ಜಸ್ಟಿಸ್ ಭಟ್ ಅವರ ಮಾತಿಗೆ ಸಮ್ಮತಿಸಿದ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ಮದುವೆಯಾಗಲು ಯಾವುದೇ ಅನರ್ಹ ಹಕ್ಕು ಇಲ್ಲ ಮತ್ತು ವಿವಾಹದ ಹಕ್ಕು ಶಾಸನಬದ್ಧ ಹಕ್ಕು, ಇಲ್ಲವೇ ಅದೊಂದು ಸಂಪ್ರದಾಯಿಕವಾಗಿ ಬಂದ ರಿವಾಜು ಎಂದು ಹೇಳಿದ್ದಾರೆ. CARA ನಿಯಮಗಳು ಮತ್ತು ಕ್ವಿರ್ ದಂಪತಿಗಳ ದತ್ತು ಪಡೆಯುವ ಹಕ್ಕಿನ ವಿಚಾರದಲ್ಲಿ ನ್ಯಾಯಮೂರ್ತಿ ಭಟ್ ಅವರ ಅಭಿಪ್ರಾಯವನ್ನು ಅವರು ಒಪ್ಪಿಕೊಂಡಿದ್ದಾರೆ. CARA ನಿಯಮಾವಳಿಗಳನ್ನು ಅಸಾಂವಿಧಾನಿಕವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಪಿಂಚಣಿ, ಪಿಎಫ್, ಗ್ರಾಚ್ಯುಟಿ, ವಿಮೆ ಇತ್ಯಾದಿಗಳಿಂದ ಕ್ವೀಯರ್ ದಂಪತಿಗಳನ್ನು ಹೊರಗಿಡುವ ಶಾಸಕಾಂಗದ ಯೋಜನೆಗಳ ಪರಿಶೀಲನೆಯನ್ನು ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ನರಸಿಂಹ ಹೇಳಿದ್ದಾರೆ.</p>



<p>ಈ&nbsp; ತೀರ್ಪಿನ ವಿಚಾರಣೆಯ ಬ್ಯಾಚ್ ಸಲಿಂಗ ದಂಪತಿಗಳು, ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮತ್ತು LGBTQIA+ ಕಾರ್ಯಕರ್ತರು ಸಲ್ಲಿಸಿದ ಇಪ್ಪತ್ತು ಅರ್ಜಿಗಳಿದ್ದವು. ಈ ಅರ್ಜಿಗಳು ಸಾಮೂಹಿಕವಾಗಿ ವಿಶೇಷ ವಿವಾಹ ಕಾಯಿದೆ 1954, ಹಿಂದೂ ವಿವಾಹ ಕಾಯಿದೆ 1955, ಮತ್ತು ವಿದೇಶಿ ವಿವಾಹ ಕಾಯಿದೆ 1969 ಗಳು ಮಾಡುವ ನಿಯಂತ್ರಣಗಳನ್ನು ಪ್ರಶ್ನಿಸಿವೆ. ನಿರ್ದಿಷ್ಟವಾಗಿ, ಈ ಶಾಸನಗಳು ಸದ್ಯ ಭಿನ್ನಲಿಂಗೀಯವಲ್ಲದ ವಿವಾಹಗಳನ್ನು ಪರಿಗಣಿಸುವುದಿಲ್ಲ. ಹೀಗಾಗಿ LGBTQIA+ ಸಮುದಾಯದ ವಿರುದ್ದದ ತಾರತಮ್ಯ ಎಂದೆಂದಿಗೂ ಇರುತ್ತದೆ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ, ಪೀಠವು ಸವಾಲನ್ನು ವಿಶೇಷ ವಿವಾಹ ಕಾಯ್ದೆಗೆ ಮಾತ್ರ ಸೀಮಿತಗೊಳಿಸುತ್ತದೆ ಮತ್ತು ವೈಯಕ್ತಿಕ ಕಾನೂನುಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. &nbsp;ಹೀಗಾಗಿ, ಹಿಂದೂ ವಿವಾಹ ಕಾಯ್ದೆಗೆ ಸಂಬಂಧಿಸಿದ ಸವಾಲನ್ನು ಸ್ವೀಕರಿಸಲಿಲ್ಲ.</p>



<p>ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಈ ಸಂಬಂಧವನ್ನು &#8220;ಮದುವೆ&#8221; ಎಂದು ಕಾನೂನಾತ್ಮಕವಾಗಿ ಮಾನ್ಯ ಮಾಡದೆ ಸಮಲಿಂಗ ಮತ್ತು ಕ್ವಿಯರ್ ದಂಪತಿಗಳಿಗೆ ಕೆಲವು ಕಾನೂನು ಹಕ್ಕುಗಳನ್ನು ನೀಡಬಹುದೇ ಎಂಬುದನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಸಲಿಂಗ ಮತ್ತು ಕ್ವೀಯರ್ ದಂಪತಿಗಳು ಸರ್ಕಾರದ ಯೋಜನೆಗಳನ್ನು ಮತ್ತು ಸಾಮಾಜಿಕ ಭದ್ರತೆಯನ್ನು‌, ಜಂಟಿ ಬ್ಯಾಂಕ್ ಖಾತೆ, ಜೀವ ವಿಮಾ ಪಾಲಿಸಿಗಳು, ಪಿಎಫ್, ಪಿಂಚಣಿ ಇತ್ಯಾದಿಗಳಲ್ಲಿ ನಾಮಿನಿ ಹೊಂದಲು ಸಾಧ್ಯವಾಗುವಂತೆ ಕ್ರಮಗಳನ್ನು ತರಲು ಸೂಚನೆ ನೀಡಲಾಗಿದೆ.</p>



<p>ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಡಾ.ಅಭಿಷೇಕ್ ಮನು ಸಿಂಘ್ವಿ, ರಾಜು ರಾಮಚಂದ್ರನ್ ಕೆ.ವಿ.ವಿಶ್ವನಾಥನ್, ಡಾ.ಮೇನಕಾ ಗುರುಸ್ವಾಮಿ, ಜಯನಾ ಕೊಠಾರಿ, ಸೌರಭ್ ಕಿರ್ಪಾಲ್, ಆನಂದ್ ಗ್ರೋವರ್, ಗೀತಾ ಲೂತ್ರಾ, ವಕೀಲರಾದ ಅರುಂಧತಿ ಕಟ್ಜು, ವೃಂದಾ ಗ್ರೋವರ್, ಕರುಣಾ ನಂದಿ ಮುಂತಾದವರು ಅರ್ಜಿ ಸಲ್ಲಿಸಿದ್ದರು. . ಕೇಂದ್ರ ಸರ್ಕಾರದ ಪರವಾಗಿಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಅರ್ಜಿಗಳನ್ನು ವಿರೋಧಿಸಿ ಮಧ್ಯಪ್ರದೇಶ ರಾಜ್ಯದ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ ವಾದ ಮಂಡಿಸಿದರು. ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅರವಿಂದ್ ದಾತಾರ್ ಕೂಡ ಅರ್ಜಿಗಳನ್ನು ವಿರೋಧಿಸಿ ವಾದ ಮಂಡಿಸಿದರು.</p>
]]></content:encoded>
					
		
		
			</item>
		<item>
		<title>ಗೇ ಸೇರಿದಂತೆ ಪ್ರತಿಯೊಬ್ಬರಿಗೂ ನೈತಿಕವಾಗಿ ಬದುಕುವ ಹಕ್ಕಿದೆ &#8211; ಸುಪ್ರೀಂ ಕೋರ್ಟ್</title>
		<link>https://peepalmedia.com/same-sex-marriage-verdict-sc/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Oct 2023 07:50:29 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[gay]]></category>
		<category><![CDATA[gay love]]></category>
		<category><![CDATA[gay marriage]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[love]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29975</guid>

					<description><![CDATA[ಬೆಂಗಳೂರು,ಅಕ್ಟೋಬರ್.‌17: ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್.‌17: </strong>ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. ಇದು ಹಿಂದೂ ವಿವಾಹ ಕಾಯ್ದೆ ಅಥವಾ ವೈಯಕ್ತಿಕ ಕಾನೂನುಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.</p>



<p style="font-size:18px"><strong>ಕ್ವೀರ್‌ (ಗೇ-ಲೆಸ್ಬಿಯನ್….)‌ ಎಂಬುದು ನಗರ ಕೇಂದ್ರಿತ ಇಲೀಟ್‌ನೆಸ್‌ ಅಲ್ಲ. ಸಲಿಂಗಕಾಮ ಅಥವಾ ಕ್ವೆರ್ನೆಸ್ ನಗರ ಪರಿಕಲ್ಪನೆಯಲ್ಲ ಅಥವಾ ಸಮಾಜದ ಉನ್ನತ ವರ್ಗಗಳಿಗೆ ಸೀಮಿತವಾಗಿಲ್ಲ</strong> – ಸುಪ್ರೀಂ ಕೋರ್ಟ್‌</p>



<p style="font-size:18px">ಗೇ – ಕ್ವೀರ್‌ ವ್ಯಕ್ತಿ ಸೇರಿದಂತೆ ಪ್ರತಿಯೊಬ್ಬನಿಗೂ ತನ್ನ ಜೀವನದ ನೈತಿಕ ಗುಣಮಟ್ಟವನ್ನು ಪ್ರಶ್ನಿಸುವ ಹಕ್ಕಿದೆ &#8211; ಸಿಜೆಐ ಡಿವೈ ಚಂದ್ರಚೂಡ್</p>



<p style="font-size:18px">ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಬ್ಬರ ಜೀವನ ಕ್ರಮದ ಅವಿಭಾಜ್ಯ ಅಂಗವಾಗಿದೆ. ಕೆಲವರು ಇದನ್ನು ತಮ್ಮ ಜೀವನದ ಪ್ರಮುಖ ನಿರ್ಧಾರವೆಂದು ಪರಿಗಣಿಸಬಹುದು. ಈ ಹಕ್ಕು ಆರ್ಟಿಕಲ್ 21 ರ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಬರುತ್ತದೆ &#8211; ಸರ್ವೋಚ್ಚ ನ್ಯಾಯಾಲಯ</p>
]]></content:encoded>
					
		
		
			</item>
		<item>
		<title>ಸಮಲಿಂಗೀ ವಿವಾಹದ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ಏನು?</title>
		<link>https://peepalmedia.com/supreme-court-verdict-on-same-sex-marriage/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Oct 2023 07:44:16 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[gay]]></category>
		<category><![CDATA[gay love]]></category>
		<category><![CDATA[gay marriage]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[LGBTQ+]]></category>
		<category><![CDATA[love]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[sex]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29972</guid>

					<description><![CDATA[ಬೆಂಗಳೂರು,ಅಕ್ಟೋಬರ್‌.17: ಸಮಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಇಂದು ತನ್ನ ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸುತ್ತಿದೆ. ಕ್ವೀರ್ ಸಮುದಾಯದ ವಿರುದ್ಧದ ತಾರತಮ್ಯ ತಡೆಯುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ಸೌಲಭ್ಯ ಮತ್ತು ಸೇವೆಗಳನ್ನು ಕ್ವೀರ್ ಸಮುದಾಯವು ಯಾವುದೇ ತಾರತಮ್ಯವನ್ನು ಎದುರಿಸಿದರೆ ಪಡೆಯುವುದನ್ನು ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್‌.17: </strong>ಸಮಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಇಂದು ತನ್ನ ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸುತ್ತಿದೆ.</p>



<p>ಕ್ವೀರ್ ಸಮುದಾಯದ ವಿರುದ್ಧದ ತಾರತಮ್ಯ ತಡೆಯುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.</p>



<p>ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ಸೌಲಭ್ಯ ಮತ್ತು ಸೇವೆಗಳನ್ನು ಕ್ವೀರ್ ಸಮುದಾಯವು ಯಾವುದೇ ತಾರತಮ್ಯವನ್ನು ಎದುರಿಸಿದರೆ ಪಡೆಯುವುದನ್ನು ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.</p>



<p>&#8220;ಈ ಹಕ್ಕುಗಳ ಬಗ್ಗೆ ಸಾರ್ವಜನಿಕರನ್ನು ಜಾಗೃತಗೊಳಿಸಿ&#8221; ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದು, “ಕ್ವೀರ್ ಸಮುದಾಯಕ್ಕಾಗಿ ಹಾಟ್‌ಲೈನ್ ರಚಿಸಿ. ದಂಪತಿಗಳಿಗೆ ಸುರಕ್ಷಿತೆಯನ್ನು ನೀಡಿ” ಎಂದು ನಿರ್ದೇಶನ ನೀಡಿದೆ.</p>



<p>ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠ, ಇಂಟರ್‌ ಸೆಕ್ಸ್ ಮಕ್ಕಳನ್ನು ಬಲವಂತವಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸುವಂತಿಲ್ಲ ಎಂದು ಆದೇಶಿಸಿದೆ.</p>



<p>&#8220;ಯಾವುದೇ ವ್ಯಕ್ತಿಯನ್ನು ಯಾವುದೇ ಹಾರ್ಮೋನ್ ಥೆರಪಿಗೆ ಒಳಗಾಗುವಂತೆ ಒತ್ತಾಯಿಸಬಾರದು&#8221; ಎಂದು ಆದೇಶವನ್ನು ನೀಡಿದೆ.</p>



<p>ಕ್ವೀರ್ ಸಮುದಾಯವನ್ನು ಕೇವಲ ಅವರ ಲೈಂಗಿಕ ಗುರುತಿನ ಬಗ್ಗೆ ವಿಚಾರಿಸಲು ಪೊಲೀಸ್ ಠಾಣೆಗಳಿಗೆ ಕರೆಸಿಕೊಳ್ಳುವ ಮೂಲಕ ಕಿರುಕುಳ ನೀಡದಂತೆ ಪೊಲೀಸರಿಗೆ ಸುಪ್ರೀಂ ನಿರ್ದೇಶನ ನೀಡಿದೆ.</p>



<p>&#8220;ಪೊಲೀಸರು LGBTQ+ ವ್ಯಕ್ತಿಗಳನ್ನು ಅವರ ಜನ್ಮಸ್ಥಳಕ್ಕೆ ಮರಳಲು ಒತ್ತಾಯಿಸಬಾರದು. ಅವರ ಸಂಬಂಧದ ಬಗ್ಗೆ ಅವರ ವಿರುದ್ಧ ಎಫ್ಐಆರ್ ದಾಖಲಿಸುವ ಮೊದಲು ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಬೇಕು,&#8221; ಎಂದು ಪೀಠ ಹೇಳಿದೆ.</p>



<p>ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು ತನ್ನ ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸುತ್ತಿದೆ.</p>



<p>ಇಂದು ಮುಂಜಾನೆ, ಕ್ವೀರ್ ಮತ್ತು ಅವಿವಾಹಿತ ದಂಪತಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ನಿರ್ಬಂಧಿಸುವ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ (CARA) ಅಧಿಕಾರವನ್ನು ನ್ಯಾಯಾಲಯವು ರದ್ದುಗೊಳಿಸಿತು. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು &#8220;ವಿಭಿನ್ನಲಿಂಗಿ ದಂಪತಿಗಳು ಮಾತ್ರ ಉತ್ತಮ ಪೋಷಕರಾಗಬಹುದು ಎನ್ನಲು ಸಾಧ್ಯವಿಲ್ಲ&#8221; ಎಂದು ಹೇಳಿದ್ದಾರೆ.</p>



<p>ಮೇ 11 ರಂದು, ಐದು ನ್ಯಾಯಾಧೀಶರ ಪೀಠವು 10 ದಿನಗಳ ಮ್ಯಾರಥಾನ್ ವಿಚಾರಣೆಯ ನಂತರ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿತ್ತು. ಮುಕುಲ್ ರೋಹಟಗಿ, ಅಭಿಷೇಕ್ ಮನು ಸಿಂಘ್ವಿ, ರಾಜು ರಾಮಚಂದ್ರನ್, ಆನಂದ್ ಗ್ರೋವರ್, ಗೀತಾ ಲೂತ್ರಾ, ಕೆವಿ ವಿಶ್ವನಾಥನ್, ಸೌರಭ್ ಕಿರ್ಪಾಲ್ ಮತ್ತು ಮೇನಕಾ ಗುರುಸ್ವಾಮಿ ಸೇರಿದಂತೆ ಹಿರಿಯ ವಕೀಲರ ಮೂಲಕ ಅರ್ಜಿದಾರರು LGBTQIA + ಸಮುದಾಯದ ಸಮಾನತೆಯ ಹಕ್ಕುಗಳಿಗೆ ಒತ್ತು ನೀಡಿದರು. LGBTQIA ಭಿನ್ನಲಿಂಗೀಯರಂತೆ &#8220;ಗೌರವಯುತ&#8221; ಜೀವನವನ್ನು ನಡೆಸುತ್ತಾರೆ.</p>



<p>ಮೇ 3 ರಂದು, ತಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸುವ ವಿಷಯಕ್ಕೆ ಹೋಗದೆ ಸಲಿಂಗ ದಂಪತಿಗಳ &#8220;ನಿಜವಾದ ಕಾಳಜಿ&#8221; ಯನ್ನು ಪರಿಹರಿಸಲು ತೆಗೆದುಕೊಳ್ಳಬಹುದಾದ ಆಡಳಿತಾತ್ಮಕ ಕ್ರಮಗಳನ್ನು ಪರಿಶೀಲಿಸಲು ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸುವುದಾಗಿ ಕೇಂದ್ರವು ಉಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.</p>
]]></content:encoded>
					
		
		
			</item>
		<item>
		<title>ನ್ಯಾಯಾಂಗದ ಸಂವೇದನಾಶೀಲ ಮುಖ CJI ಡಿ.ವೈ ಚಂದ್ರಚೂಡ್</title>
		<link>https://peepalmedia.com/the-sensible-face-of-law-is-cji-dy-chandrachud/</link>
		
		<dc:creator><![CDATA[Peepal Media]]></dc:creator>
		<pubDate>Thu, 10 Nov 2022 11:54:01 +0000</pubDate>
				<category><![CDATA[ವಿಶೇಷ]]></category>
		<category><![CDATA[bengalure]]></category>
		<category><![CDATA[Chief Justice of India]]></category>
		<category><![CDATA[india]]></category>
		<category><![CDATA[Justice DY Chandrachud]]></category>
		<category><![CDATA[Justice Uday Umesh Lalit]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Supreme Court of India]]></category>
		<category><![CDATA[writing]]></category>
		<guid isPermaLink="false">https://peepalmedia.com/?p=15166</guid>

					<description><![CDATA[ಜನ ಸಾಮಾನ್ಯರ ಕುರಿತು ಅಪಾರ ಕಳಕಳಿ ಹೊಂದಿರುವ ನ್ಯಾ. ಡಿ ವೈ ಚಂದ್ರಚೂಡ್‌ ಅವರು (ನ.೯ ರಂದು) ಮುಖ್ಯ ನ್ಯಾಯ ಮೂರ್ತಿ ಹುದ್ದೆಗೆ ಏರಿರುವುದು ಭವಿಷ್ಯದಲ್ಲಿ ನ್ಯಾಯಕ್ಕಾಗಿ ಹೋರಾಡುವವರಿಗೆ ಭರವಸೆ ನೀಡಿದೆ. ಅವರು ನಡೆದು ಬಂದ ಹಾದಿ, ನೀಡಿರುವ ತೀರ್ಪುಗಳು ಈ ನಿರೀಕ್ಷೆಗೆ ಖಂಡಿತವಾಗಿಯೂ ಸಾಕ್ಷಿಯಾಗುತ್ತವೆ. ಹೈಕೋರ್ಟ್‌ ವಕೀಲರಾಗಿರುವ ಪ್ರವೀಣ ಕಟ್ಟೆಯವರು ಸಿಜೆಐ ಯವರ ನ್ಯಾಯ ನಿಷ್ಠೆ ಹಾಗೂ ಕರ್ತವ್ಯ ಪರತೆಯನ್ನು ಪೀಪಲ್‌ ಮೀಡಿಯಾ ಕನ್ನಡ ಜಾಲತಾಣಕ್ಕಾಗಿ ಕಟ್ಟಿಕೊಟ್ಟಿದ್ದಾರೆ. &#8216;ಧನಂಜಯ ಯಶ್ವಂತ್ ಚಂದ್ರಚೂಡ&#8217;&#160; ಭಾರತದ ಸರ್ವೋಚ್ಚ ನ್ಯಾಯಾಲಯದ [&#8230;]]]></description>
										<content:encoded><![CDATA[
<p><strong>ಜನ ಸಾಮಾನ್ಯರ ಕುರಿತು ಅಪಾರ ಕಳಕಳಿ ಹೊಂದಿರುವ ನ್ಯಾ. ಡಿ ವೈ ಚಂದ್ರಚೂಡ್‌ ಅವರು (ನ.೯ ರಂದು) ಮುಖ್ಯ ನ್ಯಾಯ ಮೂರ್ತಿ ಹುದ್ದೆಗೆ ಏರಿರುವುದು ಭವಿಷ್ಯದಲ್ಲಿ ನ್ಯಾಯಕ್ಕಾಗಿ ಹೋರಾಡುವವರಿಗೆ ಭರವಸೆ ನೀಡಿದೆ. ಅವರು ನಡೆದು ಬಂದ ಹಾದಿ, ನೀಡಿರುವ ತೀರ್ಪುಗಳು ಈ ನಿರೀಕ್ಷೆಗೆ ಖಂಡಿತವಾಗಿಯೂ ಸಾಕ್ಷಿಯಾಗುತ್ತವೆ. ಹೈಕೋರ್ಟ್‌ ವಕೀಲರಾಗಿರುವ ಪ್ರವೀಣ ಕಟ್ಟೆಯವರು ಸಿಜೆಐ ಯವರ ನ್ಯಾಯ ನಿಷ್ಠೆ ಹಾಗೂ ಕರ್ತವ್ಯ ಪರತೆಯನ್ನು ಪೀಪಲ್‌ ಮೀಡಿಯಾ ಕನ್ನಡ ಜಾಲತಾಣಕ್ಕಾಗಿ ಕಟ್ಟಿಕೊಟ್ಟಿದ್ದಾರೆ.</strong></p>



<p>&#8216;ಧನಂಜಯ ಯಶ್ವಂತ್ ಚಂದ್ರಚೂಡ&#8217;&nbsp; ಭಾರತದ ಸರ್ವೋಚ್ಚ ನ್ಯಾಯಾಲಯದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ&nbsp; ಇದೀಗ&nbsp; ಅಧಿಕಾರ ಸ್ವೀಕರಿಸಿದ್ದಾರೆ. ಇವರು ಇನ್ನೂ ಎರಡು ವರ್ಷಗಳ ಕಾಲ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುವವರಿದ್ದಾರೆ.</p>



<p> ಇವರು ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದ  ಹದಿನಾರನೆಯ ಮುಖ್ಯ ನ್ಯಾಯಮೂರ್ತಿ &#8220;ಶ್ರೀ ಯಶವಂತ ವಿಷ್ಣು ಚಂದ್ರಚೂಡ&#8221; ಹಾಗೂ ಶಾಸ್ತ್ರೀಯ ಸಂಗೀತ ವಿದ್ವಾಂಸೆ ʼಶ್ರೀಮತಿ ಪ್ರಭಾʼ&#8221; ಅವರ ಪುತ್ರ. </p>



<p><strong>ವಿದ್ಯಾಭ್ಯಾಸ</strong></p>



<p>ನವೆಂಬರ್ 11,&nbsp; 1959 ರಲ್ಲಿ ಜನಿಸಿದ ಇವರು ಮುಂಬೈನ ಕೆತಾಡ್ರಾಲ್ ಮತ್ತು ಜಾನ್ ಕೆನ್ನೆನ್ ಶಾಲೆ ಹಾಗೂ ದೆಹಲಿಯ ಸೈಂಟ್ ಕೊಲಂಬಿಯಾ ಶಾಲೆಯಲ್ಲಿ ವಿದ್ಯಾಭ್ಯಾಸ&nbsp; ಮುಗಿಸಿ &nbsp;ತನ್ನ ಕಾನೂನು&nbsp;ಪದವಿಯನ್ನು 1982 ರಲ್ಲಿ ದೆಹಲಿ ಯೂನಿವರ್ಸಿಟಿಯಿಂದ ಪಡೆದು ಕೊಂಡಿದ್ದಾರೆ.&nbsp; 1983 ರಲ್ಲಿ ಹಾರ್ವರ್ಡ್ ಲಾ ಕಾಲೇಜಿನಿಂದ &#8220;ಮಾಸ್ಟರ್ ಆಫ್ ಲಾ&#8221; ಪದವಿಯನ್ನು ಪಡೆದುಕೊಂಡು ಇದೇ ಹಾರ್ವರ್ಡ್ ನಲ್ಲಿ 1986ರಲ್ಲಿ ನ್ಯಾಯಾಂಗ ವಿಜ್ಞಾನದಲ್ಲಿ (ಡಾಕ್ಟರೇಟ್‌ ಆಫ್‌ ಜ್ಯೂರಿಡಿಕಲ್‌ ಸೈನ್ಸ್)ಡಾಕ್ಟರೇಟ್ ಪಡೆದಿದ್ದಾರೆ.</p>



<p><strong>ವೃತ್ತಿ ಬದುಕು</strong></p>



<p>ಖ್ಯಾತ&nbsp; ವಕೀಲ ʼಪಾಲಿ ನಾರಿಮನ್ʼ ಅವರೊಂದಿಗೆ ಕೆಲವು ಕಾಲ ಕಿರಿಯ ವಕೀಲರಾಗಿ ಕೆಲಸ ಮಾಡಿದ ಇವರು, ಬಾಂಬೆ ಹೈಕೋರ್ಟ್ ನ ಹಿರಿಯ ವಕೀಲರಾಗಿ 1998ರಲ್ಲಿ&nbsp; ನಿಯುಕ್ತಿಗೊಂಡರು. ತದನಂತರ&nbsp; ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯ ನಿರ್ವಹಿಸಿ 29 ನೇ ಮಾರ್ಚ್ 2000 ಇಸವಿಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕವಾದರು.&nbsp;2013 ರಲ್ಲಿ ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಶ್ರೀ ಚಂದ್ರಚೂಡ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಮೇ 13, 2018 ರಲ್ಲಿ ನೇಮಕಗೊಂಡರು. ʼರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರʼ ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಇದೀಗ ದಿನಾಂಕ 9 ನವೆಂಬರ್ 2022 ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.</p>



<p></p>



<figure class="wp-block-image size-full is-resized"><img fetchpriority="high" decoding="async" src="https://peepalmedia.com/wp-content/uploads/2022/11/1434890-dy-chandrachud.jpg" alt="" class="wp-image-15167" width="696" height="416" srcset="https://peepalmedia.com/wp-content/uploads/2022/11/1434890-dy-chandrachud.jpg 1000w, https://peepalmedia.com/wp-content/uploads/2022/11/1434890-dy-chandrachud-300x180.jpg 300w, https://peepalmedia.com/wp-content/uploads/2022/11/1434890-dy-chandrachud-768x460.jpg 768w, https://peepalmedia.com/wp-content/uploads/2022/11/1434890-dy-chandrachud-150x90.jpg 150w, https://peepalmedia.com/wp-content/uploads/2022/11/1434890-dy-chandrachud-696x417.jpg 696w" sizes="(max-width: 696px) 100vw, 696px" /></figure>



<p><strong>ದೂರಗಾಮಿ ಪರಿಣಾಮದ ತೀರ್ಪುಗಳು</strong></p>



<p>ʼನ್ಯಾಯಮೂರ್ತಿʼ ಯಾಗಿ ಅತೀ ಹೆಚ್ಚು&nbsp; ಸಾಂವಿಧಾನಿಕ ಪೀಠ (ಐವರು ಮತ್ತು ಹೆಚ್ಚು ನ್ಯಾಯಮೂರ್ತಿಗಳ ಪೀಠ) ಪ್ರಕರಣಗಳಲ್ಲಿ&nbsp; ಬಹುತೇಕ&nbsp;&nbsp;ಸಾಂವಿಧಾನಿಕ ಪ್ರಶ್ನೆಗಳಿಗೆ ಉನ್ನತ&nbsp; ಹಾಗೂ&nbsp; ಸುಂದರವಾದ&nbsp; ತೀರ್ಪುಗಳನ್ನು ನೀಡಿರುವ ಹಿರಿಮೆ ಇವರದ್ದು.&nbsp;&nbsp;ಇದರಲ್ಲಿ ಮುಖ್ಯವಾದವು ಅಂದರೆ ಸಂವಿಧಾನ ವಿಷಯ ಸಂಬಂಧಿ,&nbsp; ಮಾನವ ಹಕ್ಕು, ಲಿಂಗ ಸಮಾನತೆ, ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳು, ವಾಣಿಜ್ಯ ಪ್ರಕರಣಗಳು ಮತ್ತು&nbsp; ದಂಡ ಸಂಹಿತೆಗೆ ಸಂಬಂಧಿಸಿದ&nbsp; ಪ್ರಕರಣಗಳೂ ಸೇರಿವೆ.&nbsp;</p>



<p>&nbsp;ಜಸ್ಟೀಸ್ ಕೆ.&nbsp; ಎಸ್.&nbsp; ಪುಟ್ಟ&nbsp; ಸ್ವಾಮಿ&nbsp; ವರ್ಸಸ್ ಯೂನಿಯನ್ ಆಫ್ ಇಂಡಿಯಾ&nbsp; ಪ್ರಕರಣದಲ್ಲಿ 9 ಮಂದಿ ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠದ &#8216;ಗೌಪ್ಯತೆ ವ್ಯಕ್ತಿಯ&nbsp; ಒಂದು ಸಾಂವಿಧಾನಿಕ ಹಕ್ಕುʼ&nbsp;ಎಂಬ ಮಹತ್ತರ ತೀರ್ಪಿನಲ್ಲೂ ಇವರು ಭಾಗಿಯಾಗಿದ್ದರು.&nbsp;&nbsp;ಈ ಪ್ರಕರಣದಲ್ಲಿ ತನ್ನ ತೀರ್ಪನ್ನು ಬರೆಯುತ್ತಾ ʼಗೌಪ್ಯತೆ&nbsp; ಇಲ್ಲದಿದ್ದರೆ ವ್ಯಕ್ತಿಗೆ ಘನತೆ ಅನ್ನುವಂತಹ ಪ್ರಶ್ನೆಯೇ ಇರಲಾರದು. ಒಬ್ಬ ವ್ಯಕ್ತಿಯ ಪರಮೋಚ್ಚ ವಿಷಯ ಎಂದರೆ ಅವನ ಗೌಪ್ಯತೆಯ ಹಕ್ಕುʼ ಎಂದು ತಮ್ಮ&nbsp; ಮಹತ್ತರ&nbsp; ತೀರ್ಪನ್ನು ದಾಖಲಿಸಿದ್ದಾರೆ.</p>



<p>ನ್ಯಾಯಮೂರ್ತಿ ಚಂದ್ರಚೂಡ್&nbsp; ಅವರು&nbsp; &#8220;ಅಭಿವ್ಯಕ್ತಿ ಸ್ವಾತಂತ್ರ್ಯ&#8221; ದ ಬಗ್ಗೆ ಕೂಡಾ&nbsp; ಸುಂದರವಾದ ಹಲವು ತೀರ್ಪನ್ನು ನೀಡಿದ್ದಾರೆ.&nbsp; ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ &#8220;ವಿರೋಧ&#8221;&nbsp; ಅನ್ನುವಂತದ್ದು ಕೂಡ ಅತ್ಯಂತ&nbsp; ಮೌಲ್ಯಯುತವಾದ ಆಯುಧ ಎಂಬ ಪ್ರತಿಪಾದನಾ ಅಭಿಪ್ರಾಯವನ್ನು ವ್ಯಕ್ತಪಡಿಸಿರುವಂಥದ್ದನ್ನು ನಾವು ಕಾಣಬಹುದಾಗಿದೆ.</p>



<p>2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಐವರು ಮಾನವ ಹಕ್ಕುಗಳ ಹೋರಾಟಗಾರರ ಬಂಧನವನ್ನು ಅವರು ವಿರೋಧಿಸಿದ್ದರು. &nbsp;ಹಿಂಸಾ ಪ್ರಕರಣ&nbsp; &#8220;ರೋಮಿಲಾ ತಾಪರ್ ಮತ್ತು ಇತರರು ವರ್ಸಸ್ ಯೂನಿಯನ್&nbsp; ಆಫ್ ಇಂಡಿಯಾ&#8221; ಪ್ರಕರಣವೊಂದರಲ್ಲಿ ಬಹುಮತದ ನ್ಯಾಯಮೂರ್ತಿಗಳು ವಿಶೇಷ ತನಿಖಾ ತಂಡವನ್ನು ರಚಿಸುವಲ್ಲಿ ವಿರೋಧ ವ್ಯಕ್ತಪಡಿಸಿದಾಗ ʼಇಂತಹ ವಿಶೇಷ ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕಾದ ಅಗತ್ಯ ಇದೆʼ ಎಂದು ತಮ್ಮ ವ್ಯತಿರಿಕ್ತ&nbsp; ತೀರ್ಪನ್ನು ಪ್ರಕಟಿಸಿದ್ದರು.</p>



<p>ಮುಖ್ಯ ಚುನಾವಣಾ ಅಧಿಕಾರಿ ವರ್ಸಸ್ ಎಮ್ ಆರ್ ವಿಜಯಭಾಸ್ಕರ್ ಪ್ರಕರಣದಲ್ಲಿ ʼನ್ಯಾಂಗದ ಪ್ರಕರಣಗಳನ್ನು ವರದಿ ಮಾಡುವ ಹಕ್ಕು ಮಾಧ್ಯಮಗಳಿಗೆ ಇದೆʼ ಎಂದು ತೀರ್ಪು ನೀಡಿ&nbsp;ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದರು.</p>



<p>ಮುಖ್ಯ ಚುನಾವಣಾ ಅಧಿಕಾರಿ, ನ್ಯಾಯಾಲಯದ ತೀರ್ಪನ್ನು ಮಾಧ್ಯಮಗಳು ಪ್ರಕಟಿಸುವುದನ್ನು ತಡೆಹಿಡಿಯಬೇಕೆಂದು ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಾಲಯದ ಪ್ರಕರಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಬಗ್ಗೆ “ಈ&nbsp; ಮಾಧ್ಯಮಗಳಿಗೂ ಕೂಡ, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆʼ ಎಂದೇ ತೀರ್ಪು ನೀಡಿದ್ದರು.</p>



<p>&nbsp;ದೇಶವನ್ನು ನಲುಗಿಸಿದ ಕೋವಿಡ್ 19 ದುರಂತ ಪ್ರಕರಣದ ಸಂದರ್ಭ ಸ್ವ ಇಚ್ಛೆಯಿಂದ ಪ್ರಕರಣ ದಾಖಲಿಸಿ ರಾಜ್ಯ ಸರ್ಕಾರಗಳ ಕಾರ್ಯ ವೈಖರಿಯನ್ನು ಟೀಕಿಸಿದ್ದಲ್ಲದೇ,&nbsp; ಜನರ ಅಭಿವೃದ್ಧಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಇವರ ಕೆಲಸಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಮ್ಮ ತೀರ್ಪಿನಲ್ಲಿ ದಾಖಲಿಸಿದ್ದನ್ನು ನಾವಿಲ್ಲಿ ಸ್ಮರಿಸ ಬಹುದಾಗಿದೆ.&nbsp;</p>



<p></p>



<figure class="wp-block-image size-large"><img decoding="async" width="1024" height="576" src="https://peepalmedia.com/wp-content/uploads/2022/11/Chandrachud1665478658010-1024x576.jpg" alt="" class="wp-image-15168" srcset="https://peepalmedia.com/wp-content/uploads/2022/11/Chandrachud1665478658010-1024x576.jpg 1024w, https://peepalmedia.com/wp-content/uploads/2022/11/Chandrachud1665478658010-300x169.jpg 300w, https://peepalmedia.com/wp-content/uploads/2022/11/Chandrachud1665478658010-768x432.jpg 768w, https://peepalmedia.com/wp-content/uploads/2022/11/Chandrachud1665478658010-150x84.jpg 150w, https://peepalmedia.com/wp-content/uploads/2022/11/Chandrachud1665478658010-696x392.jpg 696w, https://peepalmedia.com/wp-content/uploads/2022/11/Chandrachud1665478658010-1068x601.jpg 1068w, https://peepalmedia.com/wp-content/uploads/2022/11/Chandrachud1665478658010.jpg 1200w" sizes="(max-width: 1024px) 100vw, 1024px" /><figcaption class="wp-element-caption">Former Chief Justice of India (CJI) Justice Uday Umesh Lalit, Supreme Court of India Judges, Justice DY Chandrachud, and Justice Sanjay Kishan Kaul inaugurate the Centre for Citizen Services of the National Legal Service Authority, at Jaisalmer House, in New Delhi on Tuesday. (ANI Photo)</figcaption></figure>



<p></p>



<p>ಚಂದ್ರಚೂಡ್ ಅವರು ʼಶಬರಿ ಮಲೆʼ ಪ್ರಕರಣದಲ್ಲಿ ʼನಮ್ಮೆಲ್ಲರ&nbsp; ಯೋಚನಾ ಶಕ್ತಿ ಬದಲಾಗಬೇಕುʼ&nbsp; ಎಂದು ತೀರ್ಪು ನೀಡುತ್ತಾ ʼಮಹಿಳೆಯರು ಸೇರಿ ಪ್ರತಿಯೊಬ್ಬರಿಗೂ ಈ ದೇಶದಲ್ಲಿ ಸಮಾನತೆಯ ಹಕ್ಕಿದೆʼ ಎಂದು&nbsp;ತೀರ್ಮಾನ ನೀಡಿದ್ದರು. ಸದರಿ ಪ್ರಕರಣದಲ್ಲಿ&nbsp; &#8220;ಇಂಡಿಯನ್ ಯಂಗ್ ಲಾಯರ್ಸ್ ಎಸೋಸಿಯೇಷನ್ ವರ್ಸಸ್ ಸ್ಟೇಟ್ ಆಫ್ ಕೇರಳ&#8221; ದಲ್ಲಿ,&nbsp; ʼಮುಟ್ಟಾಗುವ ವಯಸ್ಸಿನಲ್ಲಿ&nbsp; ಮಹಿಳೆಯರು ದೇವಸ್ಥಾನ ಪ್ರವೇಶಿಸಬಾರದುʼ ಎಂಬ ನಿಯಮ ಸಂವಿಧಾನ ವಿರೋಧಿಯಾಗಿದ್ದು ʼನಮ್ಮ&nbsp; ಸಂವಿಧಾನ ಮಹಿಳೆಯರಿಗೂ ಸಮಾನ ಹಕ್ಕು ಮತ್ತು ಘನತೆಯನ್ನು ನೀಡಿದೆʼ ಎಂಬ ಅಭಿಪ್ರಾಯವನ್ನು ತೀರ್ಪಿನಲ್ಲಿ &nbsp;ವ್ಯಕ್ತಪಡಿಸಿದ್ದರು.</p>



<p>ಹೌದು. ಹೀಗೆ ಬರೆಯುತ್ತಾ ಹೋದರೆ ನ್ಯಾಯಮೂರ್ತಿ ಚಂದ್ರಚೂಡ್ ಅವರು ನೀಡಿರುವ ಇಂತಹಾ ಸಂವೇದನಾಶೀಲ ತೀರ್ಪುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ತೀರ್ಪುಗಳ ಮೂಲಕ ಸಮಾಜದ ವಾಸ್ತವಗಳಿಗೆ ಕಾನೂನನ್ನು ಇವರು ಅನ್ವಯಿಸಿದ ರೀತಿ ಜನತೆಯಲ್ಲೂ, ನ್ಯಾಯಾಂಗ ವ್ಯವಸ್ಥೆಯಲ್ಲೂ &nbsp;ಒಂದು ವಿಭಿನ್ನ ಸಂಚಲನವನ್ನೇ ಸೃಷ್ಟಿಸಿದೆ ಎನ್ನುವುದು ಬರೇ ಹೊಗಳಿಕೆಯಲ್ಲ!</p>



<p>ಇದೀಗ ಸರ್ವ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಪದವಿಯನ್ನು ಅಲಂಕರಿಸಿರುವ ಮುಖ್ಯ ನ್ಯಾಯಮೂರ್ತಿ ಶ್ರೀ ಧನಂಜಯ ಯಶ್ವಂತ್ ಚಂದ್ರಚೂಡ ರ ಮೇಲೆ&nbsp; ದೇಶದ ಜನತೆ ಅಪಾರ ವಿಶ್ವಾಸ ಇರಿಸಿದೆ&nbsp;ಎಂಬುದು ಮಾತ್ರ&nbsp; &nbsp;ಖಂಡಿತ ಸುಳ್ಳಲ್ಲ.&nbsp;</p>



<p><strong>ಸುತ್ತಲೂ ಹಬ್ಬಿರುವ ಕಪ್ಪು ಕಾರ್ಮೋಡಗಳು ಕರಗಿ ಮಳೆ ನೀರು ಸುರಿದಾವೋ?</strong><strong>&nbsp;</strong></p>



<p>ಇಂದಿನ ಸುಡು ಬಿಸಿಲ ಮರುಭೂಮಿಯಲ್ಲಿ ತಂಪಿನ ಸಿಂಚನ ನೀಡುವ ಕಾರಂಜಿಯೊಂದು ಖಂಡಿತವಾಗಿಯೂ&nbsp;&nbsp;ಹರಿವ ಲಕ್ಷಣ ಗೋಚರಿಸಿದೆ. ಕಾರಂಜಿ ತಂಪೆರೆಯುತ್ತದೋ? ಅಥವಾ ಸುಡು ಬಿಸಿಲಿಗೆ ಮತ್ತೆ&nbsp; ಮರೆಯಾಗುತ್ತದೋ?&nbsp; ಕಾಲವೇ ಉತ್ತರಿಸ ಬೇಕಷ್ಟೆ. &nbsp;ಕರಿ ಕತ್ತಲಲ್ಲಿ ಬೆಳಕು ಹರಿದ ಸೂಚನೆಯಂತೂ ದಟ್ಟವಾಗಿದೆ.&nbsp;&nbsp;</p>



<p></p>



<figure class="wp-block-image size-full is-resized"><img decoding="async" src="https://peepalmedia.com/wp-content/uploads/2022/11/WhatsApp-Image-2022-11-10-at-5.25.01-PM.jpeg" alt="" class="wp-image-15171" width="215" height="215" srcset="https://peepalmedia.com/wp-content/uploads/2022/11/WhatsApp-Image-2022-11-10-at-5.25.01-PM.jpeg 436w, https://peepalmedia.com/wp-content/uploads/2022/11/WhatsApp-Image-2022-11-10-at-5.25.01-PM-300x300.jpeg 300w, https://peepalmedia.com/wp-content/uploads/2022/11/WhatsApp-Image-2022-11-10-at-5.25.01-PM-150x150.jpeg 150w" sizes="(max-width: 215px) 100vw, 215px" /><figcaption class="wp-element-caption"><strong>ಪ್ರವೀಣ ಕಟ್ಟೆ</strong><br>ಕರ್ನಾಟಕ ಹೈ ಕೋರ್ಟ್‌ ನಲ್ಲಿ ವಕೀಲರಾಗಿರುವ ಇವರು ಹವ್ಯಾಸಿ ಬರಹಗಾರರೂ ಆಗಿದ್ದಾರೆ.</figcaption></figure>



<p></p>
]]></content:encoded>
					
		
		
			</item>
	</channel>
</rss>
