<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>SURYA KUMAR YADAV &#8211; Peepal Media</title>
	<atom:link href="https://peepalmedia.com/tag/surya-kumar-yadav/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 09 Nov 2022 05:30:52 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>SURYA KUMAR YADAV &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಟಿ-20 ವಿಶ್ವಕಪ್‌: ಭಾರತಕ್ಕೆ ಪಾಕಿಸ್ತಾನದೆದುರು ಫೈನಲ್‌ ಆಡಲು ನಾವು ಬಿಡುವುದಿಲ್ಲ</title>
		<link>https://peepalmedia.com/t-20-world-cup-we-will-not-let-india-play-the-final-against-pakistan/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 09 Nov 2022 05:30:04 +0000</pubDate>
				<category><![CDATA[ಆಟೋಟ]]></category>
		<category><![CDATA[BHUVANESHVAR KUMAR]]></category>
		<category><![CDATA[IND VS ENG]]></category>
		<category><![CDATA[ind vs pak]]></category>
		<category><![CDATA[india]]></category>
		<category><![CDATA[JOS BUTTLER]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[ROHITH SHARMA]]></category>
		<category><![CDATA[sports news]]></category>
		<category><![CDATA[SURYA KUMAR YADAV]]></category>
		<category><![CDATA[T-20 WORLD CUP]]></category>
		<category><![CDATA[Virat Kohli]]></category>
		<guid isPermaLink="false">https://peepalmedia.com/?p=14925</guid>

					<description><![CDATA[ಅಡಿಲೇಡ್ ಓವಲ್ (ಆಸ್ಟ್ರೇಲಿಯಾ):‌ ಟಿ-20 ವಿಶ್ವಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಕಣಕ್ಕಿಳಿಯಲು ನಾವು ಬಿಡುವುದಿಲ್ಲ ಎಂದು ಇಂಗ್ಲೇಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಹೇಳಿದ್ದಾರೆ. ʼಅಡಿಲೇಡ್ ಓವಲ್‌ʼನಲ್ಲಿ ಗುರುವಾರ ನಡೆಯಲಿರುವ ಟಿ 20 ವಿಶ್ವಕಪ್‌ ಎರಡನೇ ಸೆಮಿಫೈನಲ್‌ನಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಭಾರತ ತಂಡವನ್ನುಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರವರು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್‌ನಲ್ಲಿ ಯಾವ ತಂಡ ಜಯಗಳಿಸುವುದೊ, ಆ ತಂಡದ ವಿರುದ್ಧ ಪೈನಲ್‌ನಲ್ಲಿ ಆಡಲಿದೆ. &#160;ಭಾರತದ [&#8230;]]]></description>
										<content:encoded><![CDATA[
<p><strong>ಅಡಿಲೇಡ್ ಓವಲ್ (ಆಸ್ಟ್ರೇಲಿಯಾ):‌ </strong>ಟಿ-20 ವಿಶ್ವಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಕಣಕ್ಕಿಳಿಯಲು ನಾವು ಬಿಡುವುದಿಲ್ಲ ಎಂದು ಇಂಗ್ಲೇಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಹೇಳಿದ್ದಾರೆ.</p>



<p>ʼಅಡಿಲೇಡ್ ಓವಲ್‌ʼನಲ್ಲಿ ಗುರುವಾರ ನಡೆಯಲಿರುವ ಟಿ 20 ವಿಶ್ವಕಪ್‌ ಎರಡನೇ ಸೆಮಿಫೈನಲ್‌ನಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಭಾರತ ತಂಡವನ್ನುಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರವರು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್‌ನಲ್ಲಿ ಯಾವ ತಂಡ ಜಯಗಳಿಸುವುದೊ, ಆ ತಂಡದ ವಿರುದ್ಧ ಪೈನಲ್‌ನಲ್ಲಿ ಆಡಲಿದೆ.</p>



<p>&nbsp;ಭಾರತದ ವಿರುದ್ಧದ ಪಂದ್ಯದ ಮೊದಲು, ನಾಯಕ ಜೋಸ್ ಬಟ್ಲರ್ ಅವರು ತಮ್ಮ ತಂಡದ ಸಿದ್ಧತೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಡೇವಿಡ್ ಮಲಾನ್ ಮತ್ತು ಮಾರ್ಕ್ ವುಡ್‌ಗೆ ಗಾಯದ ಭಯ ಕಾಡುತ್ತಿರುವುದಾಗಿ ತಿಳಿಸಿದರು. ನಂತರ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೆಚ್ಚು ರನ್‌ಗಳಿಸದಂತೆ ಕಟ್ಟಿಹಾಕುತ್ತೇವೆ ಎಂದು ಸಹ ಹೇಳಿದ್ದಾರೆ.</p>



<p>ಈ ವೇಳೆ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ಫರ್ಧಿಸಲು ನಾವು ಬಿಡುವುದಿಲ್ಲ, ಏಕೆಂದರೆ ನಮ್ಮ ತಂಡ ಭಾರತ ತಂಡವನ್ನು ಸೋಲಿಸುವ ಎಲ್ಲಾ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.</p>



<p>ಈ ಸಂದರ್ಭದಲ್ಲಿ ಮುಂದುವರೆದು ಮಾತನಾಡಿದ ಅವರು, ʼನೋಡಿ, ನಾವು ಖಂಡಿತವಾಗಿಯೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಆಟವಾಡುವುದನ್ನು ನಾವು ನೋಡಲು ಬಯಸುವುದಿಲ್ಲ. ಆದ್ದರಿಂದ ಈ ರೀತಿ ನಡೆಯದಂತೆ ನಾವು ನಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ನಾವು ಮಾಡುತ್ತೇವೆʼ ಎಂದು ಬಟ್ಲರ್ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>



<p>ʼಭಾರತವು ಕ್ರಿಕೆಟ್‌ ಜಗತ್ತಿನಲ್ಲಿ ಬಹಳ ಬಲಿಷ್ಠ ತಂಡ. ಅದನ್ನ ಅವರು ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾರೆ. ಸ್ವಾಭಾವಿಕವಾಗಿ ಭಾರತ ತಂಡದ ಆಟಗಾರರು ಒಳ್ಳೆಯ ಪ್ರತಿಭೆಯುಳ್ಳಂತವರು, ಹಾಗಾಗಿಯೇ ಅವರ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರಿದ್ದಾರೆʼ ಎಂದು ಬಟ್ಲರ್ ಹೇಳಿದರು.</p>



<p>ಬಲಗೈ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಬಗ್ಗೆ ಮಾತನಾಡಿದ ಬಟ್ಲರ್, ಅವರು ಪ್ರಸಕ್ತ ಟೂರ್ನಿಯಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ, ಏಕೆಂದರೆ ಅವರು ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ ಮೂರು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಅವರ ಆಟ ನೋಡುವುದೆ ಒಂದು ಅದ್ಭುತ. ಅವರು ಇಲ್ಲಿಯವರಗೆ ಆಟವಾಡಿರುವ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.</p>



<p>ಸೂರ್ಯಕುಮಾರ್‌ ಕಣಕ್ಕೆ ಇಳಿದಾಗ ಹೆಚ್ಚು ರನ್‌ಗಳಿಸಲು ನೋಡುತ್ತಾರೆ. ಅದಲ್ಲದೇ ಅವರು ಹೊಡೆಯುವ ಎಲ್ಲಾ ಹೊಡೆತಗಳನ್ನು ಅತ್ಮವಿಶ್ವಾಸದಿಂದ ಹೊಡೆಯುತ್ತಾರೆ. ಹಾಗಾಗಿಯೇ ಅವರು ಮೈದಾನದ ಎಲ್ಲಾ ಕಡೆಗೂ ಚೆಂಡನ್ನು ಕಳಿಸುತ್ತಾರೆ ಎಂದು ಹೇಳಿದರು. ಹೀಗಾಗಿ ಇಂತಹ ಒಳ್ಳೆಯ ಆಟಗಾರನ ವಿಕೆಟ್‌ ಪಡೆಯಲು ನಮ್ಮ ತಂಡದ ಬೌಲರ್‌ಗಳು ಹಲವಾರು ಸಿದ್ದತೆಗಳನ್ನು ನಡೆಸಿದ್ದಾರೆ ಎಂದರು.</p>



<p>&nbsp;ಯಜುವೇಂದ್ರ ಚಹಲ್ ವಿಶ್ವಕಪ್ನಲ್ಲಿ ಯಾವುದೇ ಪಂದ್ಯದಲ್ಲಿ ಆಡದಿರುವುದು ನಿಮಗೆ ಆಶ್ಚರ್ಯ ತಂದಿದೆಯೇ ಎಂದು ಕೇಳಿದಾಗ, ಬಟ್ಲರ್ ಪ್ರತಿಕ್ರಯಿಸಿ, ಯೂಜಿ ಒಬ್ಬ ಶ್ರೇಷ್ಠ ಬೌಲರ್, ನಾನು ʼಐಪಿಎಲ್‌ʼನಲ್ಲಿ ಅವರೊಂದಿಗೆ ಆಡುವುದನ್ನು ನಿಜವಾಗಿಯೂ ಆನಂದಿಸಿದ್ದೇನೆ. ಅವರು ಉತ್ತಮ ಬೌಲರ್, ಅವರು ಯಾವಾಗಲೂ ವಿಕೆಟ್ ಪಡೆಯಲು ತುಂಬಾ ಉತ್ಸುಕರಾಗಿರುತ್ತಾರೆ. ಹಾಗಾಗಿ ಅವರು ಶ್ರೇಷ್ಠ ಬೌಲರ್ ಎಂದು ನನಗೆ ಖಾತ್ರಿಯಿದೆ,&#8221; ಎಂದು ಹೇಳಿದರು.</p>



<p>ಮಲಾನ್ ಮತ್ತು ವುಡ್‌ಗೆ ಆದ ಗಾಯಗಳ ಬಗ್ಗೆ ಮಾತನಾಡಿದ ಬಟ್ಲರ್, ನಾವು ವೈದ್ಯಕೀಯ ತಂಡವನ್ನು ನಂಬುತ್ತೇವೆ. ಜೊತೆಗೆ ಆ ಇಬ್ಬರು ಆಟಗಾರರನ್ನು ಸಹ. ಅವರು ಸದ್ಯಕ್ಕೆ ಗಾಯದಿಂದ ಸುಧಾರಿಸಿಕೊಂಡಿದ್ದು, ಸಮಿಫೈನಲ್‌ನಲ್ಲಿ ಆಡಲಿದ್ದಾರೆ ಎಂದು ತಿಳಿಸಿದರು.</p>



<p>ಭುವನೇಶ್ವರ್ ಕುಮಾರ್ ಅವರನ್ನು ಎದುರಿಸುವ ತಮ್ಮ ಸಿದ್ಧತೆಯ ಬಗ್ಗೆ ಮಾತನಾಡಿದ ಬಟ್ಲರ್, ʼನನ್ನ ಸ್ವಂತ ಆಟದ ಬಗ್ಗೆ ನನಗೆ ಯಾವಾಗಲೂ ವಿಶ್ವಾಸವಿದೆ. ಭಾರತದಂತಹ ನಂಬರ್‌ ಒನ್‌ ತಂಡದಲ್ಲಿ, ಇತರ ತಂಡಗಳಿಗಿಂತ ಕಷ್ಟವೆನಿಸುವ ಬೌಲರ್‌ಗಳು ಇರುತ್ತಾರೆ. ಆ ಪಟ್ಟಿಯಲ್ಲಿ ಭುವನೇಶ್ವರ್‌ ಕೂಡ ಒಬ್ಬರು. ನಾನು ಯಾವಾಗಲೂ ಚೆನ್ನಾಗಿ ತಯಾರಿ ನಡೆಸುತ್ತೇನೆ, ಹಾಗಾಗಿ ನಾನು ಯಾರಿಗೂ ಹೆದರುವುದಿಲ್ಲ. ಏಕೆಂದರೆ ನಾನು ಆಟವಾಡುವ ಸಂದರ್ಭದಲ್ಲಿ ನನ್ನ ಮುಂದೆ ಬರುವ ಚೆಂಡನ್ನು ನೋಡುತ್ತೇನೆಯೇ ಹೊರತು ಎಸೆತಗಾರನನ್ನಲ್ಲ ಎಂದು ಹೇಳಿದರು.</p>
]]></content:encoded>
					
		
		
			</item>
		<item>
		<title>ಟಿ-20 ವಿಶ್ವಕಪ್‌: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 71 ರನ್‌ಗಳ ಭರ್ಜರಿ ಜಯ</title>
		<link>https://peepalmedia.com/t-20-world-cup-india-beat-zimbabwe-by-71-runs/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 06 Nov 2022 12:06:36 +0000</pubDate>
				<category><![CDATA[ಆಟೋಟ]]></category>
		<category><![CDATA[ind vs zim]]></category>
		<category><![CDATA[india]]></category>
		<category><![CDATA[k l rahul]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[ravichandran ashwin]]></category>
		<category><![CDATA[sports news]]></category>
		<category><![CDATA[SURYA KUMAR YADAV]]></category>
		<category><![CDATA[t20 world cup]]></category>
		<guid isPermaLink="false">https://peepalmedia.com/?p=14472</guid>

					<description><![CDATA[ಮೆಲ್ಬೋರ್ನ್: ಇಂದು ನಡೆದ ಟಿ-20 ವಿಶ್ವಕಪ್‌ ಪಂದ್ಯದಲ್ಲಿ ಭಾರತವು ಜಿಂಬಾಬ್ವೆ ವಿರುದ್ಧ 71 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡ, 3ನೇ ಓವರ್‌ನಲ್ಲಿ ನಾಯಕ ರೋಹಿತ್‌ ಶರ್ಮಾ ವಿಕೆಟ್‌ ಕಳೆದುಕೊಂಡು ʼಪವರ್‌ ಫ್ಲೇʼ ಹಂತದಲ್ಲಿ ನಿಧಾನಗತಿಯಲ್ಲಿ ಆಟ ಪ್ರಾಂರಂಭಿಸಿತು. ನಂತರ ಕೆ.ಎಲ್‌. ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಜೊತೆಯಾಟದಿಂದ 10 ಓವರ್‌ಗಳಿಗೆ 80ರನ್‌ಗಳ ಗಡಿ ದಾಟಿತು. ಈ ವೇಳೆ ವಿರಾಟ್‌ ಕೊಹ್ಲಿ, ಅರ್ಧಶತಕಗಳಿಸಿದ್ದ ರಾಹುಲ್‌ ಇಬ್ಬರು ಸರದಿಯಾಗಿ [&#8230;]]]></description>
										<content:encoded><![CDATA[
<p style="font-size:20px"><strong>ಮೆಲ್ಬೋರ್ನ್:</strong> ಇಂದು ನಡೆದ ಟಿ-20 ವಿಶ್ವಕಪ್‌ ಪಂದ್ಯದಲ್ಲಿ ಭಾರತವು ಜಿಂಬಾಬ್ವೆ ವಿರುದ್ಧ 71 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.</p>



<p style="font-size:20px">ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡ, 3ನೇ ಓವರ್‌ನಲ್ಲಿ ನಾಯಕ ರೋಹಿತ್‌ ಶರ್ಮಾ ವಿಕೆಟ್‌ ಕಳೆದುಕೊಂಡು ʼಪವರ್‌ ಫ್ಲೇʼ ಹಂತದಲ್ಲಿ ನಿಧಾನಗತಿಯಲ್ಲಿ ಆಟ ಪ್ರಾಂರಂಭಿಸಿತು. ನಂತರ ಕೆ.ಎಲ್‌. ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಜೊತೆಯಾಟದಿಂದ 10 ಓವರ್‌ಗಳಿಗೆ 80ರನ್‌ಗಳ ಗಡಿ ದಾಟಿತು. ಈ ವೇಳೆ ವಿರಾಟ್‌ ಕೊಹ್ಲಿ, ಅರ್ಧಶತಕಗಳಿಸಿದ್ದ ರಾಹುಲ್‌ ಇಬ್ಬರು ಸರದಿಯಾಗಿ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು.</p>



<p style="font-size:20px">ನಂತರ ಬಂದ ಸೂರ್ಯಕುಮಾರ್‌ ಯಾದವ್‌ ರಭಸದ ಆಟವಾಡಿ 25 ಎಸೆತಗಳಿಗೆ 61 ರನ್‌ಗಳಿಸದರು, ಈ ಮೂಲಕ ಹಾರ್ದಿಕ್‌ ಪಾಂಡ್ಯ ಮತ್ತು ಸೂರ್ಯ ಕುಮಾರ್‌ ಯಾದವ್‌ ಜೊತೆಯಾಟದಿಂದ ಭಾರತ 5 ವಿಕೆಟ್‌ ನೀಡಿ 186 ರನ್‌ ಗಳಿಸಿತು.<br>ನಂತರ ಸವಾಲಿನ ಮೊತ್ತ ಬೆನ್ನತ್ತಿದ ಜಿಂಬಾಬ್ವೆ ತಂಡದ ಆಟಗಾರರು, ಭಾರತೀಯ ಬೌಲರ್‌ಗಳ ದಾಳಿಗೆ ನಲುಗಿದರು. ಹೀಗಾಗಿ ಸಿಖಂದರ್‌ ರಾಜಾ, ವೆಲ್ಲಿಂಗ್ಟನ್‌ ಮಸಕಡ್ಜಾ ಹೊರತುಪಡಿಸಿ ಯಾವೊಬ್ಬ ಆಟಗಾರನು ಕೂಡ ಹೆಚ್ಚು ರನ್‌ಗಳಿಸದೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು.</p>



<p style="font-size:20px">ಜಿಂಬಾಬ್ವೆ ತಂಡಕ 20 ಓವರ್‌ಗಳಿಗೆ ತನ್ನ ಎಲ್ಲಾ ವಿಕೆಟ್‌ ಒಪ್ಪಿಸಿದ್ದರಿಂದ ಕೇವಲ 115 ರನ್‌ ಮಾತ್ರ ಗಳಿಸಲು ಸಾಧ್ಯವಾಯಿತು.</p>



<p style="font-size:20px"><strong>ಸ್ಕೋರ್ ಕಾರ್ಡ್ </strong><strong></strong></p>



<p style="font-size:20px"><strong>ಭಾರತ : 186/5(20)</strong></p>



<p style="font-size:20px">ಕೆ.ಎಲ್ ರಾಹುಲ್ : 521(35), ರೋಹಿತ್ ಶರ್ಮಾ : 15(13), ವಿರಾಟ್ ಕೊಹ್ಲಿ : 26(25), ಸೂರ್ಯಕುಮರ್ ಯಾದವ್ (ನಾಟ್ ಔಟ್ ) : 61(25), ರಿಷಬ್ ಪಂತ್ : 3(5), ಹಾರ್ದಿಕ್ ಪಾಂಡ್ಯ : 18(18), ಅಕ್ಸರ್ ಪಟೇಲ್ : 0(0), ಇತರೆ : 12</p>



<p style="font-size:20px"><strong>ಬೌಲಿಂಗ್ </strong><strong></strong></p>



<p style="font-size:20px">ರಿಚರ್ಡ್ ಎನ್‌ಗರವ : 4-1-44-1, ಟರಂಡೈ ಚಾತರ : 4-0-34-0, ಬ್ಲೆಸಿಂಗ್ ಮುಜ಼ಾರಾಬನಿ : 4-0-50-1, ವೆಲ್ಲಿಂಗ್ಟನ್ ಮಸಕಡ್ಜಾ : 2-0-12-0, ರ್ಯಾನ್‌ ಬರ್ಲ್: 1-0-14-0, ಸಿಖಂದರ್ ರಾಜಾ಼ : 3-0-18-1, ಸೀನ್ ವಿಲಿಮ್ಸ್ : 2-0-9-2,</p>



<p style="font-size:20px"><strong>ಜಿಂಬಾಬ್ವೆ : 115(17.2)</strong></p>



<p style="font-size:20px">ವೆಸ್ಲೆ ಮದೆವೆರೆ : 0(1), ಕ್ರೈಗ್ ಎರ್ವಿನ್ : 13(15), ರೇಗಿಸ್ ಚಕಬ್ವಾ : 0(6), ಸೀನ್ ವಿಲಿಯಮ್ಸ್ : 11(18), ಸಿಖಂದರ್ ರಾಜಾ಼ : 34(24), ಟೋನಿ‌ ಮುನ್ಯೊಂಗಾ : 5(4), ರ್ಯಾನ್‌ ಬರ್ಲ್ : 35(22), ವೆಲ್ಲಿಂಗ್ಟನ್ ಮಸಕಡ್ಜಾ : 1(7), ರಿಚರ್ಡ್ ಎನ್‌ಗವರ : 1(2), ಟೆಂಡೈ ಚತಾರ : 4(4), ಬ್ಲೆಸ್ಸಿಂಗ್ ಮುಸಾರಬನಿ : 0(2), ಇತರೆ: 11</p>



<p style="font-size:20px"><strong>ಬೌಲಿಂಗ್</strong></p>



<p style="font-size:20px">ಭುವನೇಶ್ವರ್ ಕುಮಾರ್ : 3-1-11-1, ಅರ್ಶದೀಪ್ ಸಿಂಗ್ : 2-0-9-1, ಮೊಹಮ್ಮದ್ ಶಮಿ : 2-0-14-2, ಹಾರ್ದಿಕ್ ಪಾಂಡ್ಯ : 3-0-16-2, ರವಿಚಂದ್ರನ್ ಅಶ್ವಿನ್ : 4-0-22-3, ಅಕ್ಸರ್ ಪಟೇಲ್ : 3-0-40-1</p>
]]></content:encoded>
					
		
		
			</item>
		<item>
		<title>ಟಿ-20 ವಿಶ್ವಕಪ್‌: ಜಿಂಬಾಬ್ವೆಗೆ 187 ಗುರಿ ನೀಡಿದ ಭಾರತ</title>
		<link>https://peepalmedia.com/t20-world-cup-india-set-a-target-of-187-to-zimbabwe/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 06 Nov 2022 10:01:23 +0000</pubDate>
				<category><![CDATA[ಆಟೋಟ]]></category>
		<category><![CDATA[india]]></category>
		<category><![CDATA[k l rahul]]></category>
		<category><![CDATA[kannada]]></category>
		<category><![CDATA[NID VS ZIM]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sports news]]></category>
		<category><![CDATA[SURYA KUMAR YADAV]]></category>
		<category><![CDATA[t20 world cup]]></category>
		<guid isPermaLink="false">https://peepalmedia.com/?p=14434</guid>

					<description><![CDATA[ಮೆಲ್ಬೋರ್ನ್: 2022ರ ಟಿ-20 ವಿಶ್ವಕಪ್‌ ಟೂರ್ನಿಯ ಇಂದಿನ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ, ಭಾರತವು ಕೆ.ಎಲ್‌.ರಾಹುಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ಉತ್ತಮ ಪ್ರದರ್ಶನದೊಂದಿಗೆ, ಎದುರಾಳಿ ಜಿಂಬಾಬ್ವೆ ತಂಡಕ್ಕೆ &#160;187 ರನ್‌ ಗುರಿ ನೀಡಿದೆ. ಟಾಸ್‌ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆಮಾಡಿಕೊಂಡಿತು. ನಂತರ ಮೈದಾನಕ್ಕಿಳಿದ ಭಾರತದ ಆರಂಭಿಕ ಆಟಗಾರರು, ಮೊದಲ ಎರಡು ಓವರ್‌ಗಳಲ್ಲಿ ರಭಸದ ಆಟವಾಡಲು ಪ್ರಾರಂಭಿಸಿತು. ಅದೇ ರೀತಿ ಆಟ ಮುಂದುವರೆಸಲು ಹೋದ ನಾಯಕ ರೋಹಿತ್‌ ಶರ್ಮಾ, 4ನೇ ಓವರ್‌ನಲ್ಲಿ ಬ್ಲೆಸ್ಸಿಂಗ್‌ [&#8230;]]]></description>
										<content:encoded><![CDATA[
<p style="font-size:20px"><strong>ಮೆಲ್ಬೋರ್ನ್:</strong> 2022ರ ಟಿ-20 ವಿಶ್ವಕಪ್‌ ಟೂರ್ನಿಯ ಇಂದಿನ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ, ಭಾರತವು ಕೆ.ಎಲ್‌.ರಾಹುಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ಉತ್ತಮ ಪ್ರದರ್ಶನದೊಂದಿಗೆ, ಎದುರಾಳಿ ಜಿಂಬಾಬ್ವೆ ತಂಡಕ್ಕೆ &nbsp;187 ರನ್‌ ಗುರಿ ನೀಡಿದೆ.</p>



<p style="font-size:20px">ಟಾಸ್‌ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆಮಾಡಿಕೊಂಡಿತು. ನಂತರ ಮೈದಾನಕ್ಕಿಳಿದ ಭಾರತದ ಆರಂಭಿಕ ಆಟಗಾರರು, ಮೊದಲ ಎರಡು ಓವರ್‌ಗಳಲ್ಲಿ ರಭಸದ ಆಟವಾಡಲು ಪ್ರಾರಂಭಿಸಿತು. ಅದೇ ರೀತಿ ಆಟ ಮುಂದುವರೆಸಲು ಹೋದ ನಾಯಕ ರೋಹಿತ್‌ ಶರ್ಮಾ, 4ನೇ ಓವರ್‌ನಲ್ಲಿ ಬ್ಲೆಸ್ಸಿಂಗ್‌ ಮುಜರಬಾನಿ ಬೌಲಿಂಗ್‌ ವೇಳೆ ಕ್ಯಾಚ್‌ ನೀಡಿದರು. ನಂತರ ಬಂದ ವಿರಾಟ್‌ ಕೊಹ್ಲಿ ಕೂಡ ತನ್ನ ಸಾಮರ್ಥ ಪ್ರದರ್ಶಿಸದೆ 25 ಎಸೆತಗಳಲ್ಲಿ 26 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.</p>



<p style="font-size:20px">ನಂತರ ಅರ್ಧಶತಕಗಳಿಸಿ ಸ್ಕ್ರೀಜ್‌ ನಲ್ಲಿ ಉತ್ತಮವಾಗಿ ಆಟವಾಡುತ್ತಿದ್ದ ಕೆ.ಎಲ್‌. ರಾಹುಲ್‌ ಕೂಡ ಸಿಕಂದರ್ ರಜಾ ಬೌಲಿಂಗ್‌ ವೇಳೆ ರಭಸವಾಗಿ ಹೊಡೆಯಲು ಹೋಗಿ ಕ್ಯಾಚ್‌ ನೀಡಿದರು. ಹೊಡಿ-ಬಡಿ ಆಟಗಾರನಾದ ರಿಷಬ್‌ ಪಂತ್‌ ಸಿಕ್ಸ್‌ ಹೊಡೆಯಲು ಮುಂದಾಗಿ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು.</p>



<p style="font-size:20px">ಆದರೆ ಸೂರ್ಯಕುಮಾರ್‌ ಯಾದವ್‌ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸ್‌ ಬಾರಿಸುವ ಮೂಲಕ 25 ಎಸೆತಗಳಲ್ಲಿ 61 ರನ್‌ ಗಳಿಸಿದರು. ಈ ಮೂಲಕ ಭಾರತ ತಂಡ 20‌ ಓವರ್‌ಗಳಲ್ಲಿ 5 ವಿಕೆಟ್‌ ನೀಡಿ 186 ರನ್‌ ಕಲೆಹಾಕಿತು.</p>



<p style="font-size:20px">ಜಿಂಬಾಬ್ಬೆ ತಂಡ ಬೌಲರ್‌ಗಳಾದ ಸೀನ್ ವಿಲಿಯಮ್ಸ್ 2 ವಿಕೆಟ್‌, ಸಿಕಂದರ್‌ ರಜಾ, ಬ್ಲೆಸ್ಸಿಂಗ್‌ ಮುಜರಬಾನಿ, ರಿಚರ್ಡ್ ನಾಗರವ ತಲಾ ಒಂದೊಂದು ವಿಕೆಟ್‌ ಪಡೆಯುವುದರ ಮೂಲಕ ಭಾರತ ತಂಡದ 5 ಮುಖ್ಯ ಆಟಗಾರರನ್ನು ಪೆವಿಲಿಯನ್‌ ಸೇರಿಸಿದರು.</p>
]]></content:encoded>
					
		
		
			</item>
		<item>
		<title>ICC T20-ವರ್ಲ್ಡ್ ಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಜಯ</title>
		<link>https://peepalmedia.com/icc-t20-world-cup-thrilling-win-for-india-against-bangladesh/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 02 Nov 2022 12:57:48 +0000</pubDate>
				<category><![CDATA[ಆಟೋಟ]]></category>
		<category><![CDATA[ದೇಶ]]></category>
		<category><![CDATA[IND VS BAN]]></category>
		<category><![CDATA[india]]></category>
		<category><![CDATA[k l rahul]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sports news]]></category>
		<category><![CDATA[SURYA KUMAR YADAV]]></category>
		<category><![CDATA[T-20 CRICKET]]></category>
		<category><![CDATA[T-20 WORLD CUP]]></category>
		<category><![CDATA[Virat Kohli]]></category>
		<guid isPermaLink="false">https://peepalmedia.com/?p=13822</guid>

					<description><![CDATA[ಅಡಿಲೈಡ್ ಓವಲ್: ವಿಶ್ವಕಪ್ T20 ಟೂರ್ನಿಯ ಇಂದಿನ ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದಲ್ಲಿ ಭಾರತ ಐದು ರನ್‌ಗಳ ರೋಚಕ ಜಯ ಸಾಧಿಸಿದೆ. ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶವು, ಮೊದ-ಮೊದಲು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಪ್ರಯತ್ನಿಸಿತು. ಈ ವೇಳೆ ರನ್‌ ಗಳಿಸಲು ಪರದಾಡಿದ ರೋಹಿತ್‌ ಶರ್ಮಾ 2 ರನ್‌ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಬಂದ ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌ ಜೊತೆಗೂಡಿ ತಮ್ಮ ಉತ್ತಮ ಪ್ರದರ್ಶನ ನೀಡುವುದರ ಮೂಲಕ, ಇಬ್ಬರು ಆಟಗಾರರು ಅರ್ಧ ಶತಕಗಳಿಸಿ, [&#8230;]]]></description>
										<content:encoded><![CDATA[
<p style="font-size:20px"><strong>ಅಡಿಲೈಡ್ ಓವಲ್:</strong> ವಿಶ್ವಕಪ್ T20 ಟೂರ್ನಿಯ ಇಂದಿನ ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದಲ್ಲಿ ಭಾರತ ಐದು ರನ್‌ಗಳ ರೋಚಕ ಜಯ ಸಾಧಿಸಿದೆ.</p>



<p style="font-size:20px">ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶವು, ಮೊದ-ಮೊದಲು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಪ್ರಯತ್ನಿಸಿತು. ಈ ವೇಳೆ ರನ್‌ ಗಳಿಸಲು ಪರದಾಡಿದ ರೋಹಿತ್‌ ಶರ್ಮಾ 2 ರನ್‌ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಬಂದ ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌ ಜೊತೆಗೂಡಿ ತಮ್ಮ ಉತ್ತಮ ಪ್ರದರ್ಶನ ನೀಡುವುದರ ಮೂಲಕ, ಇಬ್ಬರು ಆಟಗಾರರು ಅರ್ಧ ಶತಕಗಳಿಸಿ, ಬಾಂಗ್ಲಾದೇಶದ ಬೌಲರ್‌ಗಳಿಗೆ ನೀರು ಕುಡಿಸಿದರು.</p>



<p style="font-size:20px">ನಂತರ ಬಂದ ಸೂರ್ಯ ಕುಮಾರ್‌ ಯಾದವ್‌ ರಭಸದ ಆಟವಾಡುವ ಮೂಲಕ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನೀಡಿ 184 ರನ್‌ಗಳಿಸಿತು.</p>



<p style="font-size:20px">ನಂತರ ಮಳೆಯ ಕಾರಣದಿಂದಾಗಿ ಮೊಟಕುಗೊಂಡ ಪಂದ್ಯ 16 ಓವರ್ ಗಳಿಗೆ ಸೀಮಿತಗೊಂಡಿತ್ತು. ಈ ಹಿನ್ನಲೆಯಲ್ಲಿ ಬಾಂಗ್ಲಾದೇಶವು 16 ಓವರ್‌ಗಳಿಗೆ 151 ರನ್‌ ಗಳಿಸಬೇಕಾಗಿತ್ತು. ಈ ವೇಳೆ ಭಾರತೀಯ ಬೌಲರ್‌ಗಳ ದಾಳಿಗೆ ರನ್‌ ಗಳಿಸಲು ಪರದಾಡಿದ ಬಾಂಗ್ಲಾ ಆಟಗಾರರು, 16 ಓವರ್‌ಗಳಿಗೆ 6 ವಿಕೆಟ್‌ ನೀಡಿ 145 ರನ್‌ ಗಳಿಸಿದರು. ಈ ಮೂಲಕ ಭಾರತ ತಂಡವು 5 ರನ್‌ಗಳ ಜಯ ಸಾಧಿಸಿ, ಸೆಮಿಪೈನಲ್‌ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಸಫಲವಾಯಿತು.</p>
]]></content:encoded>
					
		
		
			</item>
		<item>
		<title>ಟಿ-20 ವಿಶ್ವಕಪ್‌ ಅಭ್ಯಾಸ ಪಂದ್ಯ: ಪಶ್ಚಿಮ ಆಸ್ಟ್ರೇಲಿಯಾಕ್ಕೆ 159 ರನ್‌ ಗುರಿ ನೀಡಿದ ಭಾರತ</title>
		<link>https://peepalmedia.com/t-20-world-cup-practice-match-india-set-western-australia-a-target-of-159-runs/</link>
		
		<dc:creator><![CDATA[Peepal Media]]></dc:creator>
		<pubDate>Mon, 10 Oct 2022 08:47:20 +0000</pubDate>
				<category><![CDATA[ಆಟೋಟ]]></category>
		<category><![CDATA[cricket]]></category>
		<category><![CDATA[IND VS WAUS]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sports news]]></category>
		<category><![CDATA[SURYA KUMAR YADAV]]></category>
		<category><![CDATA[T-20 World Cup practice match]]></category>
		<guid isPermaLink="false">https://peepalmedia.com/?p=9870</guid>

					<description><![CDATA[ಪರ್ತ್‌/ಆಸ್ಟ್ರೇಲಿಯಾ: ಅಕ್ಟೋಬರ್‌ 16 ರಿಂದ ಟಿ-20 ವಿಶ್ವಕಪ್‌ ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ, ಸೋಮವಾರ ಪರ್ತ್‌ನ WACA ನಲ್ಲಿ (ಪಶ್ಚಿಮ ಆಸ್ಟ್ರೇಲಿಯನ್ ಕ್ರಿಕೆಟ್ ಸಂಸ್ಥೆ) ಭಾರತ ತಂಡವು ಪಶ್ಷಿಮ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 158 ರನ್‌ಗಳ ಗಳಿಸಿದೆ. ಟಾಸ್‌ ಗೆದ್ದ ನಾಯಕ ರೋಹಿತ್‌ ಶರ್ಮಾ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ನಂತರ ಮೊದಲು ಓಪನರ್‌ಗಳಾಗಿ &#160;ರೋಹಿತ್‌ ಶರ್ಮಾ ಮತ್ತು ರಿಷಬ್‌ ಪಂತ್‌ ಕಣಕ್ಕಿಳಿದರು. ಈ ವೇಳೆ ಮೊದ-ಮೊದಲು ರನ್‌ ಗಳಿಸುವಲ್ಲಿ ರೋಹಿತ್‌ ಶರ್ಮ ಪರಡಾಡುತ್ತಿದ್ದು, ಬೆಹೆರೆಂಡೋಫ್‌ ಬೌಲಿಂಗ್‌ ವೇಳೆ [&#8230;]]]></description>
										<content:encoded><![CDATA[
<p style="font-size:20px"><strong>ಪರ್ತ್‌/ಆಸ್ಟ್ರೇಲಿಯಾ:</strong> ಅಕ್ಟೋಬರ್‌ 16 ರಿಂದ ಟಿ-20 ವಿಶ್ವಕಪ್‌ ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ, ಸೋಮವಾರ ಪರ್ತ್‌ನ WACA ನಲ್ಲಿ (ಪಶ್ಚಿಮ ಆಸ್ಟ್ರೇಲಿಯನ್ ಕ್ರಿಕೆಟ್ ಸಂಸ್ಥೆ) ಭಾರತ ತಂಡವು ಪಶ್ಷಿಮ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 158 ರನ್‌ಗಳ ಗಳಿಸಿದೆ.</p>



<p style="font-size:20px">ಟಾಸ್‌ ಗೆದ್ದ ನಾಯಕ ರೋಹಿತ್‌ ಶರ್ಮಾ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ನಂತರ ಮೊದಲು ಓಪನರ್‌ಗಳಾಗಿ &nbsp;ರೋಹಿತ್‌ ಶರ್ಮಾ ಮತ್ತು ರಿಷಬ್‌ ಪಂತ್‌ ಕಣಕ್ಕಿಳಿದರು. ಈ ವೇಳೆ ಮೊದ-ಮೊದಲು ರನ್‌ ಗಳಿಸುವಲ್ಲಿ ರೋಹಿತ್‌ ಶರ್ಮ ಪರಡಾಡುತ್ತಿದ್ದು, ಬೆಹೆರೆಂಡೋಫ್‌ ಬೌಲಿಂಗ್‌ ವೇಳೆ ವೇಗವಾಗಿ ರನ್‌ಗಳಿಸಲು ಹೋಗಿ ಔಟ್‌ ಆಗಿ ಪೆವಿಲಿಯನ್‌ ಸೇರಿದರು.</p>



<p style="font-size:20px">ರೋಹಿತ್‌ ನಿರ್ಗಮನದ ನಂತರ ಮೂರನೇ ಕ್ರಮಾಂಕದಲ್ಲಿ ಸ್ಕ್ರೀಜ್‌ಗೆ ಇಳಿದ ದೀಪಕ್‌ ಹೂಡಾ ಬೆಹೆರೆಂಡೋಫ್‌ ಅವರ ಎರಡನೇ ಎಸೆತದಲ್ಲಿ ಸಿಕ್ಸರ್‌ ಹೊಡೆದು ತಂಡಕ್ಕೆ ಉತ್ತಮ ರನ್‌ ಕಲೆಹಾಕುವ ಭರವಸೆ ನೀಡಿದರು. ಆದರೆ ಭರವಸೆಯನ್ನು ಬಹಳ ಸಮಯ ಉಳಿಸಿಕೊಳ್ಳದೆ ಬೆಹೆರೆಂಡೋಫ್‌ ಬೌಲಿಂಗ್‌ ದಾಳಿಗೆ ವಿಕೆಟ್‌ ಒಪ್ಪಿಸಿದರು. ಈ ಮೂಲಕ ಭಾರತ ತಂಡ 5 ಓವರ್‌ಗಳಿಗೆ 29 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿತು.</p>



<p style="font-size:20px">ತದನಂತರ ಬಂದ ಸುರ್ಯಕುಮಾರ್‌ ಯಾದವ್‌ ಬಿರುಸಿನ ಆಟ ವಾಡುವ ಮೂಲಕ ತಂಡಕ್ಕೆ ರನ್‌ ಸೇರಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಜೊತೆಯಾಗಿ ಸಾಥ್‌ ನೀಡುತ್ತಿದ್ದ ಪಂತ್‌ ಔಟ್‌ ಆಗಿ ಪೆವಿಲಿಯನ್‌ ಸೇರಿದರು. ನಂತರ ಜೊತೆಗೂಡಿದ ಹಾರ್ದಿಕ್‌ ಪಾಂಡ್ಯ ಮತ್ತು ಸುರ್ಯಕುಮಾರ್‌ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಹೊಸ ಭರವಸೆ ಮೂಡಿಸಿದರು.</p>



<p style="font-size:20px">ಭರವಸೆ ಆಟವಾಡುತ್ತಿದ್ದ ಹಾರ್ದಿಕ್‌ ಪಾಂಡ್ಯ 27 ರನ್‌ ಗಳಿಸಿ ತಂಡಕ್ಕೆ ಮರಳಿದರು. ಈ ವೇಳೆ ಉತ್ತಮ ಪ್ರದರ್ಶನ ನೀಡುತ್ತಿದ್ದ ಸೂರ್ಯಕುಮಾರ್‌ ಯಾದವ್‌ 35 ಎಸೆತಗಳಿಗೆ 52 ರನ್‌ಗಳಿಸಿ ಅರ್ಧಶತಕ ದಾಖಲಿಸಿಕೊಂಡರು.</p>



<p style="font-size:20px">ಅರ್ಧಶತಕ ಸಿಡಿಸಿ ಪೆವಿಲಿಯನ್‌ ಸೇರಿದ ಯಾದವ್‌ ನಂತರ ಬಂದ ಬ್ಯಾಟ್ಸ್‌ಮನ್‌ಗಳು ಬಿರುಸಿನ ಆಟವಾಡದ ಕಾರಣ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 158 ಗಳಿಸಿತು. ಈ ಮೂಲಕ ಎದುರಾಳಿ ತಂಡಕ್ಕೆ 159 ರನ್‌ ಗುರಿ ನೀಡಲು ಸಾಧ್ಯಾವಾಯಿತು.</p>
]]></content:encoded>
					
		
		
			</item>
	</channel>
</rss>
