<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>taroor &#8211; Peepal Media</title>
	<atom:link href="https://peepalmedia.com/tag/taroor/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 19 Oct 2022 09:28:57 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>taroor &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕಾಂಗ್ರೆಸ್‌ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ಸಾವಿರ ಮತಗಳನ್ನಷ್ಟೇ ಪಡೆದ ತರೂರ್‌</title>
		<link>https://peepalmedia.com/kharge-elected-as-a-aicc-president/</link>
		
		<dc:creator><![CDATA[Peepal Media]]></dc:creator>
		<pubDate>Wed, 19 Oct 2022 09:14:34 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[AICC]]></category>
		<category><![CDATA[congress]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[president]]></category>
		<category><![CDATA[taroor]]></category>
		<guid isPermaLink="false">https://peepalmedia.com/?p=11914</guid>

					<description><![CDATA[ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷ ಪದವಿಗಾಗಿ ನಡೆದಿದ್ದ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಎದುರಾಳಿ ಶಶಿ ತರೂರ್‌ ಅವರನ್ನು 6,897 ಮತಗಳ ಬಹಳ ದೊಡ್ಡ ಅಂತರದಿಂದ ಸೋಲಿಸಿ ಅಧ್ಯಕ್ಷ ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೋಮವಾರ (ಅ:17)ದಂದು ಅಧ್ಯಕ್ಷ ಗಾದಿಗಾಗಿ ನಡೆದ ಚುನಾವಣೆಯಲ್ಲಿ ಖರ್ಗೆಯವರು ಒಟ್ಟು 7,897 ಮತಗಳನ್ನು ಪಡೆದಿದ್ದರೆ, ತರೂರ್‌ ಕೇವಲ 1,000 ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು ಚಲಾವಣೆಯಾದ 9,385 ಮತಗಳಲ್ಲಿ 416 ಮತಗಳು ಅಸಿಂಧುವಾಗಿದ್ದವು. ಇಂದು ಬೆಳಗ್ಗೆಯಷ್ಟೇ ಕಾಂಗ್ರೆಸ್ಸಿನ ಚುನಾವಣಾ ಅಧಿಕಾರಿಗಳಿಗೆ [&#8230;]]]></description>
										<content:encoded><![CDATA[
<p>ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷ ಪದವಿಗಾಗಿ ನಡೆದಿದ್ದ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಎದುರಾಳಿ ಶಶಿ ತರೂರ್‌ ಅವರನ್ನು 6,897 ಮತಗಳ ಬಹಳ ದೊಡ್ಡ ಅಂತರದಿಂದ ಸೋಲಿಸಿ ಅಧ್ಯಕ್ಷ ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.</p>



<p>ಸೋಮವಾರ (ಅ:17)ದಂದು ಅಧ್ಯಕ್ಷ ಗಾದಿಗಾಗಿ ನಡೆದ ಚುನಾವಣೆಯಲ್ಲಿ ಖರ್ಗೆಯವರು ಒಟ್ಟು 7,897 ಮತಗಳನ್ನು ಪಡೆದಿದ್ದರೆ, ತರೂರ್‌ ಕೇವಲ 1,000 ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು ಚಲಾವಣೆಯಾದ 9,385 ಮತಗಳಲ್ಲಿ 416 ಮತಗಳು ಅಸಿಂಧುವಾಗಿದ್ದವು.</p>



<p>ಇಂದು ಬೆಳಗ್ಗೆಯಷ್ಟೇ ಕಾಂಗ್ರೆಸ್ಸಿನ ಚುನಾವಣಾ ಅಧಿಕಾರಿಗಳಿಗೆ ಚುನಾವಣೆಯಲ್ಲಿ ಅಕ್ರಮ ನಡೆದಿದೆಯೆಂದು ಪತ್ರ ಬರೆದು ಕಿಡಿಕಾರಿದ್ದ ತರೂರ್‌ ಫಲಿತಾಂಶ ಘೋಷಣೆಯಾದ ನಂತರ, &#8220;ಕಾಂಗ್ರೆಸ್‌ ಅಧ್ಯಕ್ಷ ಪದವಿಯೆನ್ನುವುದು ಬಹಳ ಜವಬ್ದಾರಿಯುತ ಮತ್ತು ಗೌರವಾನ್ವಿತ ಹುದ್ದೆಯಾಗಿದ್ದು, ಆ ಹುದ್ದೆಗೆ ಆಯ್ಕೆಯಾಗಿರುವ ಖರ್ಗೆಯವರನ್ನು ಅಭಿನಂದಿಸುತ್ತೇನೆ,&#8221; ಎಂದಿದ್ದಾರೆ. ಇನ್ನೊಂದು ಹೇಳಿಕೆಯಲ್ಲಿ ತರೂರ್‌ ಅವರು &#8220;ನೆಹರೂ-ಗಾಂಧಿ ಕುಟುಂಬಕ್ಕೆ ಕಾಂಗ್ರೆಸಿಗರ ಹೃದಯಲ್ಲಿ ಉನ್ನತವಾದ ಸ್ಥಾನವಿತ್ತು, ಮುಂದೆಯೂ ಅವರು ಕಾಂಗ್ರೆಸಿನ ಹೃದಯವಾಗಿರಲಿದ್ದಾರೆ,&#8221; ಎಂದು ಹೇಳಿದ್ದಾರೆ. ನಿಕಟಪೂರ್ವ ಅಧ್ಯಕ್ಷರಿಗೆ ಕಾಂಗ್ರೆಸ್‌ ಸದಾ ಆಭಾರಿಯಾಗಿರಲಿದೆ ಎಂದು ಅವರು ಹೇಳಿದರು.</p>



<p>ಅಧ್ಯಕ್ಷರಾಗಿ ಆಯ್ಕೆಯಾದ ಖರ್ಗೆಯವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಕರ್ನಾಟಕ ವಿಧಾನ ಸಭೆಯ ನಾಯಕರಾದ ಸಿದ್ಧರಾಮಯ್ಯನವರು ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ. </p>



<p>ಭಾರತ್‌ ಜೋಡೋ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಇಂದು ಬೆಳಿಗ್ಗೆ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ಕುರಿತ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ, &#8220;ಕಾಂಗ್ರೆಸಿನಲ್ಲಿ ಅಧ್ಯಕ್ಷ ಪದವಿಯೆನ್ನುವುದು ಪರಮೋಚ್ಛವಾಗಿದ್ದು, ಮುಂದೆ ಯಾರೇ ಆಯ್ಕೆಯಾದರು ಅವರು ಪಕ್ಷವನ್ನು ಮುನ್ನಡೆಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದರು.</p>



<p>ಈ ಅಧ್ಯಕ್ಷೀಯ ಚುನಾವಣೆಯತ್ತ ಕಾಂಗ್ರೆಸ್‌ ಪಕ್ಷದ ಸದಸ್ಯರಲ್ಲದೆ ಬಲಪಂಥೀಯ ಪಕ್ಷಗಳ ಸಮರ್ಥಕರು ಮತ್ತು ಕಾರ್ಯಕರ್ತರೂ ಕುತೂಹಲದ ಕಣ್ಣಿಟ್ಟಿದ್ದರು. ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಕರ್ನಾಟಕದ ಮೇಲೆ ಖರ್ಗೆಯವರ ಆಯ್ಕೆ ಯಾವ ರೀತಿ ಪರಿಣಾಮ ಬೀರಬಲ್ಲದು ಎನ್ನುವ ಕುತೂಹಲ ಜನರಲ್ಲಿ ಮನೆಮಾಡಿದೆ.</p>
]]></content:encoded>
					
		
		
			</item>
	</channel>
</rss>
