<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Terrorism &#8211; Peepal Media</title>
	<atom:link href="https://peepalmedia.com/tag/terrorism/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 31 Jan 2025 08:38:05 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Terrorism &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಜಮ್ಮು ಮತ್ತು ಕಾಶ್ಮೀರ: ಪೂಂಛ್‌ನಲ್ಲಿ ಇಬ್ಬರು ಶಂಕಿತ ಉಗ್ರರ ಹತ್ಯೆ </title>
		<link>https://peepalmedia.com/jammu-and-kashmir-two-suspected-terrorists-killed/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 31 Jan 2025 08:38:05 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[jammu and kashmir]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Military]]></category>
		<category><![CDATA[poonch]]></category>
		<category><![CDATA[Terrorism]]></category>
		<category><![CDATA[Terrorist]]></category>
		<guid isPermaLink="false">https://peepalmedia.com/?p=53181</guid>

					<description><![CDATA[ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಒಳನುಸುಳುವಿಕೆ ಯತ್ನವನ್ನು ಸೇನೆ ವಿಫಲಗೊಳಿಸಿದ ನಂತರ ಗುರುವಾರ ರಾತ್ರಿ&#160;ಇಬ್ಬರು&#160;ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿದೆ. ಸೇನೆಯ ವೈಟ್ ನೈಟ್ ಕಾರ್ಪ್ಸ್ ಅವರು ಶಂಕಿತ ಉಗ್ರರ ಚಲನವಲನವನ್ನು ಪತ್ತೆಹಚ್ಚಿದ್ದಾರೆ ಮತ್ತು ತ್ವರಿತವಾಗಿ ಕ್ರಮ ತೆಗೆದುಕೊಂಡರು. ಆಪಾದಿತ ನುಸುಳುಕೋರರ ಜೊತೆಗೆ ತೀವ್ರ ಮತ್ತು ಭಾರೀ ಗುಂಡಿನ ಚಕಮಕಿ ನಡೆಯಿತು. ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿದಿದ್ದು, ಇಬ್ಬರು ಶಂಕಿತ ಉಗ್ರರು ಹತರಾಗಿದ್ದಾರೆ ಎಂದು ಸೇನೆ ತಿಳಿಸಿದೆ. &#8220;ಇದುವರೆಗೆ ಈ ಪ್ರದೇಶದಲ್ಲಿ ನಡೆಸಿದ ಹುಡುಕಾಟದಿಂದ [&#8230;]]]></description>
										<content:encoded><![CDATA[
<p>ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಒಳನುಸುಳುವಿಕೆ ಯತ್ನವನ್ನು ಸೇನೆ ವಿಫಲಗೊಳಿಸಿದ ನಂತರ ಗುರುವಾರ ರಾತ್ರಿ&nbsp;ಇಬ್ಬರು&nbsp;<a href="https://x.com/Whiteknight_IA/status/1885173554289008964" rel="noreferrer noopener" target="_blank">ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿದೆ.</a></p>



<p>ಸೇನೆಯ ವೈಟ್ ನೈಟ್ ಕಾರ್ಪ್ಸ್ ಅವರು ಶಂಕಿತ ಉಗ್ರರ ಚಲನವಲನವನ್ನು ಪತ್ತೆಹಚ್ಚಿದ್ದಾರೆ ಮತ್ತು ತ್ವರಿತವಾಗಿ ಕ್ರಮ ತೆಗೆದುಕೊಂಡರು. ಆಪಾದಿತ ನುಸುಳುಕೋರರ ಜೊತೆಗೆ ತೀವ್ರ ಮತ್ತು ಭಾರೀ ಗುಂಡಿನ ಚಕಮಕಿ ನಡೆಯಿತು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Terrorist movement was detected last night at the <a href="https://twitter.com/hashtag/LineofControl?src=hash&amp;ref_src=twsrc%5Etfw">#LineofControl</a> in <a href="https://twitter.com/hashtag/Poonch?src=hash&amp;ref_src=twsrc%5Etfw">#Poonch</a> sector. Alert troops swiftly engaged the infiltrating <a href="https://twitter.com/hashtag/terrorists?src=hash&amp;ref_src=twsrc%5Etfw">#terrorists</a>, triggering an intense &amp; heavy firefight. The <a href="https://twitter.com/hashtag/operation?src=hash&amp;ref_src=twsrc%5Etfw">#operation</a> continued through the night, leading to the neutralization of two terrorists .…</p>&mdash; White Knight Corps (@Whiteknight_IA) <a href="https://twitter.com/Whiteknight_IA/status/1885173554289008964?ref_src=twsrc%5Etfw">January 31, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿದಿದ್ದು, ಇಬ್ಬರು ಶಂಕಿತ ಉಗ್ರರು ಹತರಾಗಿದ್ದಾರೆ ಎಂದು ಸೇನೆ ತಿಳಿಸಿದೆ. &#8220;ಇದುವರೆಗೆ ಈ ಪ್ರದೇಶದಲ್ಲಿ ನಡೆಸಿದ ಹುಡುಕಾಟದಿಂದ ಹಲವಾರು ಶಸ್ತ್ರಾಸ್ತ್ರಗಳು ಮತ್ತು ಯುದ್ಧ ಸಾಮಗ್ರಿಗಳನ್ನು ವಶ ಮಾಡಿಕೊಳ್ಳಲಾಗಿದೆ,&#8221; ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. </p>



<p>ಗುರುವಾರ ಮುಂಜಾನೆ, ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ದೋಡಾ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ <a href="https://www.thehindu.com/news/national/search-operation-underway-in-jks-doda/article69157880.ece" target="_blank" rel="noreferrer noopener">ಶೋಧ ಕಾರ್ಯಾಚರಣೆಗಳನ್ನು</a> ನಡೆಸಿದ್ದವು ಎಂದು <em>ದಿ ಹಿಂದೂ</em> ವರದಿ ಮಾಡಿದೆ. ಸ್ಥಳೀಯ ಪೊಲೀಸ್ ತಂಡಗಳು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ, ಉಗ್ರಗಾಮಿಗಳು ಎಂದು ನಂಬಲಾದ ಅಪರಿಚಿತ ವ್ಯಕ್ತಿಗಳ ಅನುಮಾನಾಸ್ಪದ ಚಲನವಲನದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ನಂತರ ಪ್ರಾರಂಭವಾಯಿತು. </p>



<p></p>



<p></p>
]]></content:encoded>
					
		
		
			</item>
		<item>
		<title>ವಿವಿಧ ದೇಶಗಳ ಸರ್ಕಾರದ ನಡುವೆ ಆಳವಾದ ತಿಳುವಳಿಕೆ ಮತ್ತು ಸಹಕಾರ ಅಗತ್ಯವಿದೆ : ಮೋದಿ</title>
		<link>https://peepalmedia.com/deeper-understanding-and-cooperation-between-governments-of-different-countries-is-needed-modi/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 18 Nov 2022 05:50:56 +0000</pubDate>
				<category><![CDATA[ದೇಶ]]></category>
		<category><![CDATA[ವಿದೇಶ]]></category>
		<category><![CDATA[bengalure]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[no money for terror]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pmime misister]]></category>
		<category><![CDATA[Terrorism]]></category>
		<category><![CDATA[writing]]></category>
		<guid isPermaLink="false">https://peepalmedia.com/?p=15795</guid>

					<description><![CDATA[ಹೊಸದಿಲ್ಲಿ: ಇಂದು ಹೊಸದಿಲ್ಲಿ ಆಯೋಜಿಸಿದ್ದ ನೋ ಮನಿ ಫಾರ್‌ ಟೆರರ್‌(NMFT) ಸಮಾವೇಶ ಆರಂಭವಾಗಿದ್ದು, ಭಯೋತ್ಪಾದಾನೆಯ ಬಗ್ಗೆ ಮಾತನಾಡಲಾರಂಭಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತೀ ದೇಶಗಳಲ್ಲಿ ಅದರದ್ದೇ ಆದ ಕಾನೂನುಗಳಿದ್ದು ಸರ್ಕಾರದ ನಡುವೆ ಆಳವಾದ ತಿಳುವಳಿಕೆ ಮತ್ತು ಸಹಕಾರ ಅಗತ್ಯವಿದೆ ಎಂದು ಮಾತನಾಡಲಾರಂಭಿದ್ದಾರೆ. ಹೇಳಿದರು. ನವೆಂಬರ್‌ 18 ಮತ್ತು 19 ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ನೋ ಮನಿ ಫಾರ್‌ ಟೆರರ್‌ (NMFT) ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ 75 ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, [&#8230;]]]></description>
										<content:encoded><![CDATA[
<p><strong>ಹೊಸದಿಲ್ಲಿ</strong>: ಇಂದು ಹೊಸದಿಲ್ಲಿ ಆಯೋಜಿಸಿದ್ದ ನೋ ಮನಿ ಫಾರ್‌ ಟೆರರ್‌(NMFT) ಸಮಾವೇಶ ಆರಂಭವಾಗಿದ್ದು, ಭಯೋತ್ಪಾದಾನೆಯ ಬಗ್ಗೆ ಮಾತನಾಡಲಾರಂಭಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತೀ ದೇಶಗಳಲ್ಲಿ ಅದರದ್ದೇ ಆದ ಕಾನೂನುಗಳಿದ್ದು ಸರ್ಕಾರದ ನಡುವೆ ಆಳವಾದ ತಿಳುವಳಿಕೆ ಮತ್ತು ಸಹಕಾರ ಅಗತ್ಯವಿದೆ ಎಂದು ಮಾತನಾಡಲಾರಂಭಿದ್ದಾರೆ. ಹೇಳಿದರು.</p>



<p>ನವೆಂಬರ್‌ 18 ಮತ್ತು 19 ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ನೋ ಮನಿ ಫಾರ್‌ ಟೆರರ್‌ (NMFT) ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ 75 ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಪ್ಯಾರೀಸ್‌(2018) ಮತ್ತು ಮೆಲ್ಬೋರ್ನ್‌(2019) ನಲ್ಲಿ ನಡೆದ ಹಿಂದಿನ ಎರಡು ಸಮ್ಮೇಳನಗಳಲ್ಲಿ ಅಂತರರಾಷ್ಟ್ರೀಯ ಸಮುದಾಯವು ನಡೆಸಿದ ಭಯೋತ್ಪಾಧಕ ಹಣಕಾಸು ವಿರುದ್ಧ ಹೋರಾಡುವ ಚರ್ಚೆಗಳನ್ನು ಮತ್ತಷ್ಟು ಪ್ರಗತಿಗೊಳಿಸುವ ಉದ್ಧೇಶದಿಂದ ಸಮಾವೇಶ ನಡೆಸಲಿದ್ದಾರೆ.</p>



<p>ಸಮಾವೇಶದಲ್ಲಿ ಈಗಾಗಲೇ ಮಾತು ಆರಂಭಿಸಿರುವ ಪ್ರಧಾನಿ&nbsp; ನರೇಂದ್ರ ಮೋದಿಯವರು, ʼಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳ ಮೇಲೆ ವೆಚ್ಚವನ್ನು ವಿಧಿಸಬೇಕು, ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಮೂಡಿಸಲು ಪ್ರಯತ್ನಿಸುವ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಸಹ ಪ್ರತ್ಯೇಕಿಸಬೇಕುʼ ಎಂದು ಹೇಳಿದರು.</p>



<p>ʼಎಲ್ಲಾ ದೇಶಗಳು ಅದರದ್ದೇ ಆದ ವಿಭಿನ್ನ ಕಾನೂನುಗಳನ್ನು ಹೊಂದಿವೆ. ಆದ್ಧರಿಂದ ಸರ್ಕಾರಗಳ ನಡುವೆ ಆಳವಾದ ತಿಳುವಳಿಕೆ ಮತ್ತು ಸಹಕಾರ ಅಗತ್ಯವಿದೆ. ನಾವೆಲ್ಲಾ ಜೊತೆಗೂಡಿ ಮೂಲಭೂತವಾದ ಮತ್ತು ಉಗ್ರವಾದದ ಸಮಸ್ಯೆಯನ್ನು ಪರಿಹರಿಸಬೇಕು. ಯಾವುದೇ ದೇಶದಲ್ಲಿಯೂ ಸಹ ಮೂಲಭೂತವಾದವನ್ನು ಬೆಂಬಲಿಸುವವರನ್ನು ಸಹಿಸುವುದಿಲ್ಲʼ ಎಂದು ಮಾತನಾಡಿದರು.</p>



<p>ʼಅದು ಪ್ರವಾಸೋದ್ಯಮವಾಗಿರಲಿ ಅಥವಾ ವ್ಯಾಪಾರವಾಗಿರಲಿ, ನಿರಂತರವಾಗಿ ಅಪಾಯದಲ್ಲಿರುವ ಪ್ರದೇಶವನ್ನು ಯಾರೂ ಇಷ್ಟಪಡುವುದಿಲ್ಲ. ಇದು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವ ಮಾರ್ಗವನ್ನು ಹೊಡೆಯಲು ಇದು ಕಾರಣವಾಗಿದೆʼ ಎಂದು ತಿಳಿಸಿದರು.</p>



<p>ʼನಾವು ಭಯೋತ್ಪಾದನೆಯ ವಿರುದ್ಧ ಧೈರ್ಯದಿಂದ ಹೋರಾಡಿದ್ದೇವೆ ಆದರೂ ಸಾವಿರಾರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ನಾವು ದೃಢವಾಗಿದ್ದೇವೆʼ ಎಂದು ಹೇಳಿದರು.</p>
]]></content:encoded>
					
		
		
			</item>
		<item>
		<title>ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯಕ್ಕೆ ಭಯೋತ್ಪಾದನೆ ಬಹುದೊಡ್ಡ ಅಪಾಯ: ಡಾ.ಎಸ್. ಜೈಶಂಕರ್</title>
		<link>https://peepalmedia.com/terrorism-is-a-big-threat-to-international-peace-and-harmony-dr-s-jaishankar/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 28 Oct 2022 10:22:00 +0000</pubDate>
				<category><![CDATA[ದೇಶ]]></category>
		<category><![CDATA[Dr.S. Jaishankar]]></category>
		<category><![CDATA[india]]></category>
		<category><![CDATA[international peace and harmony]]></category>
		<category><![CDATA[kannada]]></category>
		<category><![CDATA[New Delhi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Terrorism]]></category>
		<guid isPermaLink="false">https://peepalmedia.com/?p=13265</guid>

					<description><![CDATA[ಹೊಸದಿಲ್ಲಿ: ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯಕ್ಕೆ ಭಯೋತ್ಪಾದನೆ ಬಹುದೊಡ್ಡ ಅಪಾಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯ ವಿಶೇಷ ಸಭೆ ಇಂದಿನಿಂದ ಎರಡು ದಿನಗಳ ಕಾಲ ಮುಂಬೈ ಮತ್ತು ದೆಹಲಿಯಲ್ಲಿ ನಡೆಯಲಿದೆ. ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ದಿನದ ಸಭೆಯಲ್ಲಿ 26/11ರ ಭಯೋತ್ಪಾದನೆ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಸಚಿವ ಡಾ. ಎಸ್. ಜೈಶಂಕರ್‌ರವರು, [&#8230;]]]></description>
										<content:encoded><![CDATA[
<p style="font-size:20px"><strong>ಹೊಸದಿಲ್ಲಿ:</strong> ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯಕ್ಕೆ ಭಯೋತ್ಪಾದನೆ ಬಹುದೊಡ್ಡ ಅಪಾಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಹೇಳಿದರು.</p>



<p style="font-size:20px">ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯ ವಿಶೇಷ ಸಭೆ ಇಂದಿನಿಂದ ಎರಡು ದಿನಗಳ ಕಾಲ ಮುಂಬೈ ಮತ್ತು ದೆಹಲಿಯಲ್ಲಿ ನಡೆಯಲಿದೆ.</p>



<p style="font-size:20px">ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ದಿನದ ಸಭೆಯಲ್ಲಿ 26/11ರ ಭಯೋತ್ಪಾದನೆ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>



<p style="font-size:20px">ಈ ಸಂದರ್ಭ ಮಾತನಾಡಿದ ಸಚಿವ ಡಾ. ಎಸ್. ಜೈಶಂಕರ್‌ರವರು, ಮುಂಬೈ ದುರ್ಘಟನೆಗೆ 14 ವರ್ಷಗಳಾಗುತ್ತಿವೆ. ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯಕ್ಕೆ ಭಯೋತ್ಪಾದನೆ ಬಹುದೊಡ್ಡ ಅಪಾಯವಾಗಿದೆ. ಭಯೋತ್ಪಾದನಾ ಘಟನೆಗಳ ಸಂತ್ರಸ್ತರ ನೋವನ್ನು ಕೇಳಬೇಕಾಗಿದೆ. ಆದರೆ ಅವರಿಗಾದ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುಂಬೈ ಘಟನೆಯಲ್ಲಿ ಒಬ್ಬ ಭಯೋತ್ಪಾದಕನನ್ನು ಸೆರೆ ಹಿಡಿದು ಶಿಕ್ಷೆಗೆ ಒಳಪಡಿಸಲಾಗಿದೆ. ಆದರೆ, ರೂವಾರಿಯನ್ನು ಕರೆತರಲು ಇನ್ನೂ ಸಾಧ್ಯವಾಗಿಲ್ಲ, ಮತ್ತು ಸಂಪೂರ್ಣ ನ್ಯಾಯ ಇನ್ನೂ ದೊರೆತಿಲ್ಲ ಎಂದು ತಿಳಿಸಿದರು.</p>



<p style="font-size:20px">ಭಯೋತ್ಪಾದನಾ ಸಂಘಟನೆಗಳಿಗೆ ಹಣ ಹಾಗೂ ಸಂಪನ್ಮೂಲ ಅಗತ್ಯವಾಗಿದ್ದು, ಅದಕ್ಕಾಗಿ ಅವು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸಿವೆ. ಅಗತ್ಯ ಹಣಸಂಗ್ರಹಕ್ಕಾಗಿ ವಿಭಿನ್ನ ಧೋರಣೆಗಳೊಂದಿಗೆ ಕೆಲಸ ಮಾಡುತ್ತಿವೆ. ಅಂತಾರಾಷ್ಟ್ರೀಯ ಸಮುದಾಯ ಈ ಸಂಗತಿಗಳ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಭಯೋತ್ಪಾದನೆಗೆ ಸಂಪನ್ಮೂಲ ಸಂಗ್ರಹ ಸ್ಥಗಿತಗೊಳಿಸಲು ಪರಿಣಾಮಕಾರಿ ಸಹಯೋಗ ಅಗತ್ಯವಾಗಿದೆ ಎಂದು ಹೇಳಿದರು.</p>



<p style="font-size:20px">ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಭಯೋತ್ಪಾದಕ ಸಂಘಟನೆ, ವ್ಯಕ್ತಿಗಳನ್ನು ಗುರುತಿಸುವುದು ಅಗತ್ಯ. ಭಯೋತ್ಪಾದಕ ನೆಲೆಗಳನ್ನು ಗುರುತಿಸುವುದು, ತರಬೇತಿ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು. ಇದಕ್ಕೆ ಸಹಕಾರ ನೀಡುವ ರಾಜಕೀಯ ಶಕ್ತಿಗಳನ್ನು ಸಹ ಗುರುತಿಸಬೇಕಾಗಿದೆ. ಭಯೋತ್ಪಾದಕ ಕೃತ್ಯಗಳು ಇಂದು ಬಹುಆಯಾಮ ಪಡೆದುಕೊಂಡಿವೆ. ಹೀಗಾಗಿ ಅವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.</p>
]]></content:encoded>
					
		
		
			</item>
	</channel>
</rss>
