<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>tiruvanantapuram &#8211; Peepal Media</title>
	<atom:link href="https://peepalmedia.com/tag/tiruvanantapuram/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 15 Nov 2022 13:56:49 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>tiruvanantapuram &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಡೆಂಗ್ಯೂ ಪ್ರಕರಣಗಳು ಹೆಚ್ಚಳ: 7 ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಿದ ಕೇರಳ ಸರ್ಕಾರ</title>
		<link>https://peepalmedia.com/dengue-cases-kerala-govt-declares-state-of-emergency-in-7-districts/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 15 Nov 2022 13:56:49 +0000</pubDate>
				<category><![CDATA[ದೇಶ]]></category>
		<category><![CDATA[Dengue cases]]></category>
		<category><![CDATA[Health Minister Veena George]]></category>
		<category><![CDATA[india]]></category>
		<category><![CDATA[kerala govt]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[tiruvanantapuram]]></category>
		<guid isPermaLink="false">https://peepalmedia.com/?p=15635</guid>

					<description><![CDATA[ತಿರುವನಂತಪುರಂ: ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗಿರುವ ಕಾರಣ, ಕೇರಳ ಸರ್ಕಾರ ಇಂದು ರಾಜ್ಯದ ಏಳು ಜಿಲ್ಲೆಗಳಿಗೆ ಕಟ್ಟೆಚ್ಚರ ವಹಿಸಿದೆ. ಈ ಕುರಿತು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದು, ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ಪಾಲಕ್ಕಾಡ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳು, ಮನೆಗಳನ್ನು ಸ್ವಚ್ಛಗೊಳಿಸುವ ಮೂಲಕ ಮತ್ತು ನಿಂತ ನೀರನ್ನು ತೆಗೆದುಹಾಕುವ ಮೂಲಕ ಪ್ರತಿ ವಾರ ಒಣ ದಿನ ಅಭಿಯಾನವನ್ನು ಆಚರಿಸಲು ಸರ್ಕಾರ [&#8230;]]]></description>
										<content:encoded><![CDATA[
<p><strong>ತಿರುವನಂತಪುರಂ:</strong> ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗಿರುವ ಕಾರಣ, ಕೇರಳ ಸರ್ಕಾರ ಇಂದು ರಾಜ್ಯದ ಏಳು ಜಿಲ್ಲೆಗಳಿಗೆ ಕಟ್ಟೆಚ್ಚರ ವಹಿಸಿದೆ.</p>



<p>ಈ ಕುರಿತು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದು, ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ಪಾಲಕ್ಕಾಡ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.</p>



<p>ಸಾರ್ವಜನಿಕ ಸ್ಥಳಗಳು, ಮನೆಗಳನ್ನು ಸ್ವಚ್ಛಗೊಳಿಸುವ ಮೂಲಕ ಮತ್ತು ನಿಂತ ನೀರನ್ನು ತೆಗೆದುಹಾಕುವ ಮೂಲಕ ಪ್ರತಿ ವಾರ ಒಣ ದಿನ ಅಭಿಯಾನವನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಜಾರ್ಜ್ ಹೇಳಿದರು.</p>



<p>ಈ ಹಿನ್ನಲೆಯಲ್ಲಿ, ʼಇತರ ಜಿಲ್ಲೆಗಳು ಸಹ ಜಾಗರೂಕರಾಗಿರಬೇಕು ಮತ್ತು ಸೊಳ್ಳೆ ಸಂತಾನೋತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವಲ್ಲಿ ತೊಡಗಿಸಿಕೊಳ್ಳಬೇಕುʼ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>



<p>ರಾಜ್ಯದಲ್ಲಿ ಮುಂಗಾರು ಮಳೆಯಾಗುತ್ತಿದ್ದು, ಹಲವೆಡೆ ಜಲಾವೃತವಾಗುವ ಸಾಧ್ಯತೆ ಇದೆ. ಹೀಗಾಗಿ ಡೆಂಗ್ಯೂ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಎಲ್ಲಾ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ವಿವಿಧ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.</p>



<p>ಸಭಯಲ್ಲಿ, ನಿರ್ಮಾಣ ಸ್ಥಳಗಳು, ಒಳಚರಂಡಿ ಮತ್ತು ಇತರ ಸಂಭಾವ್ಯ ಸ್ಥಳಗಳನ್ನು ನೀರು ಶೇಖರಣೆಗಾಗಿ ಪರಿಶೀಲಿಸಲು ಮತ್ತು ಸೊಳ್ಳೆ ಸಂತಾನೋತ್ಪತ್ತಿ ಮೂಲಗಳನ್ನು ನಾಶಪಡಿಸಲು ಸ್ಥಳೀಯ ಸ್ವಯಂ ಆಡಳಿತ &nbsp;ಸಂಸ್ಥೆಗಳಿಗೆ ನಿರ್ದೇಶನಗಳನ್ನು ನೀಡಲಾಯಿತು.</p>
]]></content:encoded>
					
		
		
			</item>
		<item>
		<title>ಹೆರುವ, ಹೆರದೇ ಇರುವ ಹಕ್ಕು ಮಹಿಳೆಗೆ ಸೇರಿದ್ದು: ಕೇರಳ ಹೈಕೋರ್ಟ್‌</title>
		<link>https://peepalmedia.com/womans-right-to-give-birth-not-to-give-birth-kerala-high-court-says/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 04 Nov 2022 11:15:51 +0000</pubDate>
				<category><![CDATA[ದೇಶ]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[kerala HIGH COURT]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[tiruvanantapuram]]></category>
		<category><![CDATA[Woman&#039;s right]]></category>
		<guid isPermaLink="false">https://peepalmedia.com/?p=14184</guid>

					<description><![CDATA[ತಿರುವನಂತಪುರಂ: ಮಕ್ಕಳನ್ನು ಹೆರುವ ಅಥವಾ ಹೆರದೇ ಇರುವ ಮಹಿಳೆಯ ಹಕ್ಕಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಕೇರಳ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ವಿ.ಜಿ.ಅರುಣ್ ಅವರ ಏಕಸದಸ್ಯ ಪೀಠ, ಭಾರತ ಸಂವಿಧಾನದ 21 ನೇ ವಿಧಿಯ ಪ್ರಕಾರ, ಮಹಿಳೆಗೆ ಸಂತಾನೋತ್ಪತ್ತಿ ಆಯ್ಕೆ ಮಾಡುವ ಹಕ್ಕಿದೆ. ಅದು ಆಕೆಯ ವೈಯಕ್ತಿಕ ಸ್ವಾತಂತ್ರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ. 23 ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಯೊಂದಿಗಿನ ಸಮ್ಮತಿಯ ಲೈಂಗಿಕ ಸಂಬಂಧದಿಂದ ತನ್ನ ಗರ್ಭಾವಸ್ಥೆಯನ್ನು ಕೊನೆಗೊಳಿಸುವಂತೆ ಕೋರಿ ಸಲ್ಲಿಸಿದ್ದಾರೆ. ಗರ್ಭನಿರೋಧಕ ವೈಫಲ್ಯದಿಂದ&#160; ಗರ್ಭಿಣಿಯಾಗಿದ್ದು, ಅಲ್ಟ್ರಾ ಸೌಂಡ್ [&#8230;]]]></description>
										<content:encoded><![CDATA[
<p style="font-size:20px"><strong>ತಿರುವನಂತಪುರಂ:</strong> ಮಕ್ಕಳನ್ನು ಹೆರುವ ಅಥವಾ ಹೆರದೇ ಇರುವ ಮಹಿಳೆಯ ಹಕ್ಕಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಕೇರಳ ಹೈಕೋರ್ಟ್‌ ಸ್ಪಷ್ಟಪಡಿಸಿದೆ.</p>



<p style="font-size:20px">ನ್ಯಾಯಮೂರ್ತಿ ವಿ.ಜಿ.ಅರುಣ್ ಅವರ ಏಕಸದಸ್ಯ ಪೀಠ, ಭಾರತ ಸಂವಿಧಾನದ 21 ನೇ ವಿಧಿಯ ಪ್ರಕಾರ, ಮಹಿಳೆಗೆ ಸಂತಾನೋತ್ಪತ್ತಿ ಆಯ್ಕೆ ಮಾಡುವ ಹಕ್ಕಿದೆ. ಅದು ಆಕೆಯ ವೈಯಕ್ತಿಕ ಸ್ವಾತಂತ್ರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.</p>



<p style="font-size:20px">23 ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಯೊಂದಿಗಿನ ಸಮ್ಮತಿಯ ಲೈಂಗಿಕ ಸಂಬಂಧದಿಂದ ತನ್ನ ಗರ್ಭಾವಸ್ಥೆಯನ್ನು ಕೊನೆಗೊಳಿಸುವಂತೆ ಕೋರಿ ಸಲ್ಲಿಸಿದ್ದಾರೆ.</p>



<p style="font-size:20px">ಗರ್ಭನಿರೋಧಕ ವೈಫಲ್ಯದಿಂದ&nbsp; ಗರ್ಭಿಣಿಯಾಗಿದ್ದು, ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿದಾಗಲೇ ಗರ್ಭ ಧರಿಸಿರುವ ವಿಷಯ ತಿಳಿಯಿತು. ಅನಿಯಮಿತ ಮುಟ್ಟಿನ ಅವಧಿಗಳು ಮತ್ತು ಇತರ ದೈಹಿಕ ಅಸ್ವಸ್ಥತೆಗಳ ಬಗ್ಗೆ ವೈದ್ಯರ ಸಲಹೆಯ ಆಧಾರದ ಮೇಲೆ ಸ್ಕ್ಯಾನ್ ಮಾಡಿಸಿದಾಗ ಗರ್ಭ ಧರಿಸಿದ್ದು ಗೊತ್ತಾಯಿತು. ಆದರೆ ಮಗುವನ್ನು ಹೆರಲು ಇಷ್ಟವಿಲ್ಲದ ಕಾರಣ ಗರ್ಭಪಾತಕ್ಕೆ ಮನವಿ ಮಾಡಿದಾಗ ಯಾವುದೇ ಆಸ್ಪತ್ರೆ ಗರ್ಭಪಾತಕ್ಕೆ ಒಪ್ಪಲಿಲ್ಲ ಎಂದು ಮಹಿಳೆ ದೂರಿದ್ದರು.</p>



<p style="font-size:20px">20 ವಾರಗಳಿಗೂ ಮೀರಿದ ಗರ್ಭವಾದ್ದರಿಂದ, ಗರ್ಭಪಾತ ಮಾಡಲು ಆಸ್ಪತ್ರೆಗಳು ನಿರಾಕರಿಸಿದ್ದವು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, &#8220;ಮಕ್ಕಳನ್ನು ಹೆರುವ ಅಥವಾ ಹೆರದೇ ಇರುವ ಮಹಿಳೆಯ ಆಯ್ಕೆಯನ್ನು ನಿರ್ಬಂಧಿಸಲಾಗದು. ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಅರ್ಥೈಸಿಕೊಂಡಂತೆ ಸಂತಾನೋತ್ಪತ್ತಿ ಆಯ್ಕೆಯನ್ನು ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನಾಗಿ ನೋಡಬೇಕು ಎಂದು ಹೇಳಿದೆ.</p>



<p style="font-size:20px">ಈ ಸಂಬಂಧ 2009ರ ಸುಚಿತಾ ಶ್ರೀವಾಸ್ತವ v/s ಚಂಡೀಗಢ (ಅಡ್ಮಿನಿಸ್ಟ್ರೇಷನ್)‌&nbsp; ಪ್ರಕರಣದ ಸುಪ್ರೀಂ ಕೋರ್ಟ್‌ ತೀರ್ಪನ್ನು&nbsp; ಉಲ್ಲೇಖಿಸಿರುವ ನ್ಯಾಯಾಧೀಶರು, 20 ವಾರಗಳಿಗೂ ಮೀರಿದ ಗರ್ಭಾವಸ್ಥೆಯನ್ನು ಅಂತ್ಯಗೊಳಿಸುವುದರಿಂದ ಅವಿವಾಹಿತ ಮಹಿಳೆಯರನ್ನು ಹೊರತುಪಡಿಸುವುದು ವೈಯಕ್ತಿಕ ಸ್ವಾತಂತ್ರ್ಯದ&nbsp; ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.</p>
]]></content:encoded>
					
		
		
			</item>
	</channel>
</rss>
