<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>transgender &#8211; Peepal Media</title>
	<atom:link href="https://peepalmedia.com/tag/transgender/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 19 Dec 2024 05:41:37 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>transgender &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>LGBTQIA+ ಮಕ್ಕಳ ಪೋಷಕರ ಜವಾಬ್ದಾರಿಗಳು</title>
		<link>https://peepalmedia.com/responsibilities-of-parents-of-lgbtqia-children/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 19 Dec 2024 05:36:23 +0000</pubDate>
				<category><![CDATA[LGBTQ+]]></category>
		<category><![CDATA[acceptance]]></category>
		<category><![CDATA[adult]]></category>
		<category><![CDATA[bengaluru]]></category>
		<category><![CDATA[fundumental rights]]></category>
		<category><![CDATA[gay]]></category>
		<category><![CDATA[Human rights]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[mental health]]></category>
		<category><![CDATA[Namma Pride]]></category>
		<category><![CDATA[parents]]></category>
		<category><![CDATA[Pride March]]></category>
		<category><![CDATA[sex education]]></category>
		<category><![CDATA[sexual minorities]]></category>
		<category><![CDATA[transgender]]></category>
		<guid isPermaLink="false">https://peepalmedia.com/?p=50912</guid>

					<description><![CDATA[LGBTQIA+ ಸಮುದಾಯದ ಮಕ್ಕಳ ಪೋಷಕರು ಕೂಡ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಮಗೆ ಹುಟ್ಟಿದ ಮಗು ಗಂಡು ಅಥವಾ ಹೆಣ್ಣು ಎನ್ನುವುದನ್ನು ಮಗುವಿನ ಜನ್ಮ ಸಮಯದಲ್ಲಿ ಪೋಷಕರು ಅರಿತಿರುತ್ತಾರೆ. ತಮ್ಮ ಬಯಕೆಯಂತೆ ಮಗು ಹುಟ್ಟಿದಾಗ ಸಂಭ್ರಮಿಸುತ್ತಾರೆ. ಮಗುವಿನ ಆಗಮನದಿಂದ ಮನೆಯು ನಂದಗೋಕುಲವಾಗುತ್ತದೆ. ತಮ್ಮ ಮಗುವಿನ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಮಾತಾಪಿತರು ಕಂಡಿರುತ್ತಾರೆ. ಅದಕ್ಕಾಗಿ ಎಲ್ಲ ರೀತಿಯ ಪರಿಶ್ರಮಗಳನ್ನು ಪಡುತ್ತಾರೆ. ಮಗುವಿನ ಮುಂದಿನ ಜೀವನವು ಹಸನಾಗಿರಲೆಂದು ಹಗಲಿರುಳೂ ದೇವರನ್ನು ಪ್ರಾರ್ಥಿಸುತ್ತಾರೆ. ತಮ್ಮ ಸುಖ ಸಂತೋಷಗಳನ್ನು ಮಗುವಿನ ಯೋಗಕ್ಷೇಮಕ್ಕಾಗಿ ತ್ಯಾಗ [&#8230;]]]></description>
										<content:encoded><![CDATA[
<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow" style="flex-basis:100%">
<pre class="wp-block-code"><code>ಮಾನಸಿಕವಾಗಿ ಖಿನ್ನತೆಯನ್ನು ಅನುಭವಿಸುತ್ತಾ, ಒಳಗೊಳಗೆ ತಮ್ಮ ಲಿಂಗತ್ವವನ್ನು ಬಚ್ಚಿಟ್ಟುಕೊಂಡು ಬದುಕುವ LGBTQ+ ಮಕ್ಕಳಿಗೆ ದೊಡ್ಡ ಧೈರ್ಯವೆಂದರೆ ಅವರ ಹೆತ್ತವರು. ಆದರೆ, ಹೆತ್ತವರೇ ತಮ್ಮ ಮಗುವಿನ ಲೈಂಗಿಕ ಭಿನ್ನತೆಯನ್ನು ಒಪ್ಪದೆ, ಆ ಮಗುವಿಗೆ ಹಿಂಸೆ ನೀಡಿದರೆ ಅದರ ಕೈ ಹಿಡಿಯುವವರು ಯಾರು? ಜಗತ್ತಿನಲ್ಲಿ ಕೋಟ್ಯಾಂತರ ಮಂದಿ LGBTQ+ ಮಕ್ಕಳು ತಮ್ಮ ಮನೆಯನ್ನು ತೊರೆದು, ಕುಟುಂಬದಿಂದ ದೂರವಾಗಿ ಬದುಕುತ್ತಾರೆ. ಮಕ್ಕಳ ಪೋಷಕರು ತಮ್ಮ ಮಗು ಗೇ, ಲೆಸ್ಬಿಯನ್‌, ಟ್ರಾನ್ಸ್‌ಜೆಂಡರ್‌ ಇತ್ಯಾದಿಗಳಲ್ಲಿ ಒಂದು ಎಂದು ಅರಿತೂ, ಅವರನ್ನು ಒಪ್ಪದೆ, ತಮಗೆ ಬೇಕಾದಂತೆ ಅವರು ಬದುಕಲು ಒತ್ತಡ ಹೇರುತ್ತಾರೆ. ಹೀಗಾಗಿ, ಮಾನಸಿಕ ಖಿನ್ನತೆಯಿಂದ ಈ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ, ಮನೆ ಬಿಟ್ಟು ಹೋಗುತ್ತಾರೆ. LGBTQ+ ಮಕ್ಕಳ ತಂದೆ ತಾಯಿಯ ಜವಾಬ್ದಾರಿಗಳ ಬಗ್ಗೆ ಬರೆಯುತ್ತಾರೆ ಲೇಖಕಿ <strong><a href="https://peepalmedia.com/namma-pride-bengaluru-rukmini-s-nair/">ರುಕ್ಮಿಣಿ ಎಸ್ ನಾಯರ್</a></strong></code></pre>
</div>
</div>



<p>LGBTQIA+ ಸಮುದಾಯದ ಮಕ್ಕಳ ಪೋಷಕರು ಕೂಡ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಮಗೆ ಹುಟ್ಟಿದ ಮಗು ಗಂಡು ಅಥವಾ ಹೆಣ್ಣು ಎನ್ನುವುದನ್ನು ಮಗುವಿನ ಜನ್ಮ ಸಮಯದಲ್ಲಿ ಪೋಷಕರು ಅರಿತಿರುತ್ತಾರೆ.</p>



<p>ತಮ್ಮ ಬಯಕೆಯಂತೆ ಮಗು ಹುಟ್ಟಿದಾಗ ಸಂಭ್ರಮಿಸುತ್ತಾರೆ. ಮಗುವಿನ ಆಗಮನದಿಂದ ಮನೆಯು ನಂದಗೋಕುಲವಾಗುತ್ತದೆ. ತಮ್ಮ ಮಗುವಿನ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಮಾತಾಪಿತರು ಕಂಡಿರುತ್ತಾರೆ. ಅದಕ್ಕಾಗಿ ಎಲ್ಲ ರೀತಿಯ ಪರಿಶ್ರಮಗಳನ್ನು ಪಡುತ್ತಾರೆ. ಮಗುವಿನ ಮುಂದಿನ ಜೀವನವು ಹಸನಾಗಿರಲೆಂದು ಹಗಲಿರುಳೂ ದೇವರನ್ನು ಪ್ರಾರ್ಥಿಸುತ್ತಾರೆ. ತಮ್ಮ ಸುಖ ಸಂತೋಷಗಳನ್ನು ಮಗುವಿನ ಯೋಗಕ್ಷೇಮಕ್ಕಾಗಿ ತ್ಯಾಗ ಮಾಡುತ್ತಾರೆ. ಸಣ್ಣ ಪುಟ್ಟ ಆಸೆಗಳನ್ನು ಕೂಡಾ ಬದಿಗೊತ್ತಿ ಮಕ್ಕಳಿಗಾಗಿ ಉತ್ತಮ ಜೀವನವನ್ನು ರೂಪಿಸುವತ್ತ ಗಮನ ಹರಿಸುತ್ತಾರೆ. ಹಗಲಿರುಳು ಮಕ್ಕಳಿಗಾಗಿ ದುಡಿಯುತ್ತಾರೆ ಅವರ ಉಡುಗೆ ತೊಡುಗೆ, ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ರೀತಿಯ ಖರ್ಚು ವೆಚ್ಚಕ್ಕಾಗಿ ಒಂದೊಂದು ರೂಪಾಯಿಯನ್ನು ಶೇಖರಿಸಿ ಇಡುತ್ತಾರೆ. ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸಲೆಂದು ಪ್ರತಿಷ್ಠಿತ ಶಾಲೆಗಳನ್ನು ಹುಡುಕಿ ತಮ್ಮ ವರಮಾನಕ್ಕೂ ಮೀರಿದ ಖರ್ಚು ವೆಚ್ಚಗಳನ್ನು ಭರಿಸಿ ಸೇರಿಸುತ್ತಾರೆ. ಮಕ್ಕಳು ಬೆಳೆದು ಮುಂದೊಂದು ದಿನ ಶ್ರೇಷ್ಠ ವ್ಯಕ್ತಿಯಾಗಲೆಂದು ಬಯಸುತ್ತಾರೆ. ತಮಗೆಷ್ಟೇ ನೋವುಗಳು ತೊಂದರೆಗಳು ಇದ್ದರೂ ಮಕ್ಕಳ ಮೊಗದಲ್ಲಿ ಕಿರುನಗೆಯನ್ನು ಕಾಣಲು ಬಯಸುತ್ತಾರೆ.&nbsp;</p>


<div class="wp-block-image">
<figure class="aligncenter size-large is-resized"><img fetchpriority="high" decoding="async" width="1024" height="677" src="https://peepalmedia.com/wp-content/uploads/2024/12/Screenshot-2024-12-19-105636-1024x677.jpg" alt="" class="wp-image-50913" style="width:866px;height:auto" srcset="https://peepalmedia.com/wp-content/uploads/2024/12/Screenshot-2024-12-19-105636-1024x677.jpg 1024w, https://peepalmedia.com/wp-content/uploads/2024/12/Screenshot-2024-12-19-105636-300x198.jpg 300w, https://peepalmedia.com/wp-content/uploads/2024/12/Screenshot-2024-12-19-105636-768x508.jpg 768w, https://peepalmedia.com/wp-content/uploads/2024/12/Screenshot-2024-12-19-105636-150x99.jpg 150w, https://peepalmedia.com/wp-content/uploads/2024/12/Screenshot-2024-12-19-105636-696x460.jpg 696w, https://peepalmedia.com/wp-content/uploads/2024/12/Screenshot-2024-12-19-105636-1068x706.jpg 1068w, https://peepalmedia.com/wp-content/uploads/2024/12/Screenshot-2024-12-19-105636.jpg 1254w" sizes="(max-width: 1024px) 100vw, 1024px" /><figcaption class="wp-element-caption">image: VectorStock.com/46119393</figcaption></figure></div>


<p>ಮಕ್ಕಳ ಬಾಲಲೀಲೆಗಳನ್ನು ನೋಡುತ್ತಾ ಅವರ ಆಟ ಪಾಠಗಳ ಜೊತೆಗೂಡುತ್ತಾರೆ. ಮಗುವು ಹೊರಳಿ, ತೆವಳಿ, ಅಂಬೆಗಾಲಿಟ್ಟು, ಬಿದ್ದು ಎದ್ದು ನಿಂತು ತಡವರಿಸಿ ಹೆಜ್ಜೆ ಇಟ್ಟು ನಡೆವಾಗ ತಮ್ಮ ಮಗು ಏನೋ ಸಾಧಿಸಿದ ಹೆಮ್ಮೆ ಮಾತಾಪಿತರಿಗೆ. ಮಗುವಿನ ಕಿಲಕಿಲ ನಗು ಮನೆಯ ತುಂಬಾ ಮಾರ್ದನಿಸುವಾಗ ಅಪ್ಪ ಅಮ್ಮನ ಮನದಲ್ಲಿಯೂ ಆ ನಗುವಿನ ಅಲೆಗಳು ಸಂತೋಷವನ್ನು ತುಂಬುತ್ತದೆ. ಮನೆಯ ಮೂಲೆ ಮೂಲೆಯಲ್ಲೂ ಮಗುವಿನ ಹೆಜ್ಜೆಯ ಗೆಜ್ಜೆ ಸದ್ದು ತುಂಬಿದಾಗ ಹಿರಿಹಿರಿ ಹಿಗ್ಗಿ ಮನೆಮಂದಿಯೆಲ್ಲಾ ಸಂತಸದಿಂದ ಉಬ್ಬಿ ಹೋಗುತ್ತಾರೆ. ಅಜ್ಜಿ ತಾತರಿಗಂತೂ ತಮ್ಮ ಮೊಮ್ಮಕ್ಕಳಿಗೆ ದೃಷ್ಟಿ ತೆಗೆದು ಎಷ್ಟು ನಿವಾಳಿಸಿದರೂ ಸಾಲದು. ಮಗುವಿನ ತಲೆಗೂದಲನ್ನು ಬಾಚಿ ಜುಟ್ಟು, ಜಡೆ ಕಟ್ಟಿ, ಪುಟ್ಟ ಫ್ರಾಕ್, ಲಂಗ ರವಿಕೆ,ಅಂಗಿ ಚಡ್ಡಿ, ದೋತಿ ತೊಡಿಸಿ ಕಣ್ಣಿಗೆ ಹುಬ್ಬಿಗೆ ಕಾಡಿಗೆ ಹಚ್ಚಿ, ಕೆನ್ನೆಗೆ ಗಲ್ಲಕ್ಕೆ ಕಪ್ಪಾದ ದೃಷ್ಟಿ ಬೊಟ್ಟು ಇಟ್ಟು, ಮುದ್ದಾಗಿ ಕಾಣುವ ಮಗುವನ್ನು ಮುದ್ದಿಸಿ, ಲಾಲಿಸಿ ಸಂಭ್ರಮಿಸುವರು ಮನೆ ಮಂದಿಯೆಲ್ಲಾ. ಸಣ್ಣ ಮಗುವಾಗಿದ್ದಾಗ ಹೆಣ್ಣು ಗಂಡು ಎಂಬ ಬೇಧ ಭಾವ ತೋರದೇ ಎಲ್ಲಾ ರೀತಿಯ ಬಟ್ಟೆಗಳನ್ನು ತೊಡಿಸಿ ಸಿಂಗರಿಸಿ ಖುಷಿಪಡುವ ಮನೆ ಮಂದಿ ಮಗು ದೊಡ್ಡದಾಗುತ್ತಾ ಬಂದಂತೆ ಹೆಣ್ಣು ಅಥವಾ ಗಂಡು ಎನ್ನುವ ವ್ಯತ್ಯಾಸಕ್ಕೆ ಅನುಗುಣವಾಗಿ ವಸ್ತ್ರಗಳನ್ನು ತೊಡಿಸಲು ಪ್ರಾರಂಭಿಸುತ್ತಾರೆ. ಆಗಿನಿಂದಲೇ ತಾನು ನಿರ್ದಿಷ್ಟ ಲಿಂಗಕ್ಕೆ ಸೇರಿದವನು/ವಳು ಎಂದು ಮಗುವಿನ ಮನಸ್ಸಿಗೆ ಮನದಟ್ಟು ಆಗುವಂತೆ ನಡೆದುಕೊಳ್ಳುತ್ತಾರೆ.&nbsp;</p>



<p>ತಾನು ಸಣ್ಣ ಮಗುವಿದ್ದಾಗ ಯಾವ ರೀತಿಯ ಉಡುಗೆ ತೊಡುಗೆ ತೊಡಿಸಿ ಪಾಲಕರು, ಪೋಷಕರು ತನ್ನನ್ನು ಅಲಂಕರಿಸಿದ್ದರು ಎನ್ನುವುದು ಕೂಡಾ ಆ ಕಂದನ ನೆನಪಿನಲ್ಲಿ ಉಳಿದಿರುವುದಿಲ್ಲ. ಆದರೂ ಬೆಳೆದಂತೆ ಕಾಲಕ್ರಮೇಣ ತನ್ನ ಇಷ್ಟದ ಅನುಸಾರವಾಗಿ ಆರಾಮದಾಯಕ ಎನಿಸುವ ಬಟ್ಟೆಯನ್ನು ತೊಡಲು ಬಯಸುತ್ತದೆ. ಆಗ ಪೋಷಕರಲ್ಲಿ ಗೊಂದಲ ಉಂಟಾಗುತ್ತದೆ. ತನ್ನ ಇಷ್ಟದ ಆಭರಣಗಳನ್ನು ಧರಿಸಲು ಬಯಸುತ್ತದೆ. ತನಗೆ ಪ್ರಿಯವೆನಿಸುವ ರೀತಿಯಲ್ಲಿ ಅಲಂಕರಿಸಿಕೊಳ್ಳಲು ಆಸೆಪಡುತ್ತದೆ. ಇದೆಲ್ಲವೂ ಪೋಷಕರ ಗಮನಕ್ಕೆ ಬಂದಾಗ ಹೌಹಾರಿ ಹೋಗುತ್ತಾರೆ. </p>



<p>ತಮ್ಮ ಮಗುವಿನಲ್ಲಿ ಏಕೆ ಇಂತಹ ತದ್ವಿರುದ್ಧ ಬಯಕೆಗಳು ಎಂದು ಚಿಂತಾಕ್ರಾಂತರಾಗುತ್ತಾರೆ. ಕುಟುಂಬದ ಇತರ ಸದಸ್ಯರು ಹಾಗೂ ನೆರೆಹೊರೆಯವರು ಏನೆಂದುಕೊಳ್ಳುತ್ತಾರೆ ಎನ್ನುವ ಅಂಜಿಕೆ ಪೋಷಕರ ಮನದಲ್ಲಿ ಮೂಡುತ್ತದೆ. ತಮ್ಮ ಮಗುವಿನಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ಭಾವನೆಗಳ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುವ ಇವರು ಮಗುವನ್ನು ಗದರಿಸಿ ಮಗುವು ತನ್ನ ಇಷ್ಟದ ಹಾಗೆ ನಡೆದುಕೊಳ್ಳುವುದನ್ನು ವಿರೋಧಿಸುತ್ತಾರೆ. ಇದರಿಂದ ಆ ಪುಟ್ಟ ಮನಸ್ಸಿಗೆ ಎಷ್ಟು ಆಘಾತವಾಗುತ್ತದೆ ಎನ್ನುವುದನ್ನು ಮನಗಾಣದಾಗುತ್ತಾರೆ.&nbsp;</p>



<p><strong>ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ:</strong> <a href="https://peepalmedia.com/namma-pride-bengaluru-rukmini-s-nair/">ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ</a></p>



<p>ಬಲವಂತವಾಗಿ ಮಗುವನ್ನು ಅದರ ಇಚ್ಚೆಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ನಿರ್ಬಂಧವನ್ನು ಹೇರುತ್ತಾರೆ. ಮಗುವಿಗೆ ತನ್ನ ತಪ್ಪು ಏನೆಂದು ಕೂಡಾ ಇಲ್ಲಿ ತಿಳಿದಿರುವುದಿಲ್ಲ. ತನಗೇನು ಅನಿಸುತ್ತದೆ ಅದನ್ನೇ ಮಾಡಲು ಹಾಗೂ ಹಾಗೆ ನಡೆದುಕೊಳ್ಳಲು ಮಗುವು ಇಚ್ಚಿಸುತ್ತದೆ. ಆದರೆ ತನ್ನ ಇಷ್ಟಾನಿಷ್ಟಗಳಿಗೆ ಅಪ್ಪ ಅಮ್ಮನ ವಿರೋಧ ಕಂಡಾಗ ಮಗು ಒಳಗೊಳಗೇ ಕೊರಗಲು ಪ್ರಾರಂಭಿಸುತ್ತದೆ. ಮಗುವಲ್ಲವೇ ಅದಕ್ಕೇನು ತಿಳಿಯುತ್ತದೆ? ತಿಳಿಯದೇ ಮಾಡಿದ್ದನ್ನು ನಾವು ಸರಿಪಡಿಸಿದರೆ ಆಯಿತು ಎಂದುಕೊಳ್ಳುವ ಪೋಷಕರು ಆ ಪುಟ್ಟ ಮನಸ್ಸಿಗೆ ಆಗುವ ಆಘಾತವನ್ನು ಊಹಿಸದಾಗುತ್ತಾರೆ.&nbsp;</p>



<p>ಬಾಲ್ಯದಿಂದ ಹದಿಹರೆಯಕ್ಕೆ ಕಾಲಿಟ್ಟಾಗ ಅವರಲ್ಲಿ ಆಗುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು ಮಕ್ಕಳನ್ನು ಕುತೂಹಲಕ್ಕೆ ಹಾಗೂ ಮುಜುಗರಕ್ಕೆ ಒಳಪಡಿಸುತ್ತದೆ. ಅಂತಹಾ ಸಮಯದಲ್ಲಿ ಮಕ್ಕಳು ಕೇಳುವ ಸಂಶಯಭರಿತ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಹೇಳಲು ಪೋಷಕರು ಅಸಮರ್ಥರಾಗುತ್ತಾರೆ. ಈ ವಯಸ್ಸಿನಲ್ಲಿ ಮಕ್ಕಳು ಮನೆಗಿಂತ ಹೆಚ್ಚಾಗಿ ಹೊರಗೆ ಅಂದರೆ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಾರೆ ಹಾಗಾಗಿ ಇವರ ಮೇಲೆ ಹೆಚ್ಚು ಗಮನ ಕೊಡಲು ಕೂಡಾ ಪೋಷಕರಿಗೆ ಅಸಾಧ್ಯವಾಗುತ್ತದೆ. </p>



<p>ಜೊತೆಗೆ ಇಬ್ಬರೂ ಹೊರಗೆ ದುಡಿಯಲು ತೆರಳುವುದರಿಂದ ಮಕ್ಕಳೊಂದಿಗೆ ಕಳೆಯುವ ಸಮಯವೂ ಕಡಿಮೆ ಇರುತ್ತದೆ. ಹಲವಾರು ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗಿ ಮಕ್ಕಳು ತಮ್ಮ ಜೊತೆ ಮಾತನಾಡಲು ಬಯಸಿದಾಗ ಕೆಲವೊಮ್ಮೆ ಅವರ ಮೇಲೆ ಸಿಡಿಮಿಡಿಗೊಳ್ಳುತ್ತಾರೆ. ಹೀಗಾದಾಗ ತಮ್ಮ ಜಿಜ್ಞಾಸೆಗಳಿಗೆ ಸರಿಯಾದ ಪರಿಹಾರ ದೊರೆಯದೇ ಮಕ್ಕಳು ಪೋಷಕರಿಂದ ದೂರವೇ ಉಳಿದುಬಿಡುತ್ತಾರೆ. ಕೆಲವೊಮ್ಮೆ ತಮ್ಮ ಮಕ್ಕಳು ಏನು ಮಾಡುತ್ತಾರೆ? ಶಾಲೆಗೆ ಹೋದಾಗ ಹೊರಗೆ ಹಾಗೂ ಮನೆಯಲ್ಲಿ ಒಬ್ಬರೇ ಇದ್ದಾಗ ಹೇಗೆ ಇರುತ್ತಾರೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ತಮಗೆ ತಿಳಿದಂತೆ, ತಮ್ಮ ಅನುಭವದ ಮೇರೆಗೆ ಮಕ್ಕಳಿಗೆ ತಿಳಿಹೇಳಿ ತಮ್ಮ ಮಕ್ಕಳು ಸರಿಯಾದ ರೀತಿಯಲ್ಲಿಯೇ ಬೆಳೆಯುತ್ತಿದ್ದಾರೆ ಎಂದು ತಮ್ಮಲ್ಲಿಯೇ ಅಂದುಕೊಳ್ಳುತ್ತಾರೆ. ಇತ್ತ ಮಾತಾಪಿತರ ಬಳಿ ಮಾತನಾಡಲು ಅವಕಾಶ ಸಿಗದೇ ಗೊಂದಲಕ್ಕೆ ಒಳಗಾದ ಮಕ್ಕಳು ತಮ್ಮ ಮನಸ್ಸಲ್ಲಿ ಮೂಡುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಇತರೇ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.&nbsp;</p>


<div class="wp-block-image">
<figure class="aligncenter size-large is-resized"><img decoding="async" width="1024" height="748" src="https://peepalmedia.com/wp-content/uploads/2024/12/Screenshot-2024-12-19-105949-1024x748.jpg" alt="" class="wp-image-50914" style="width:744px;height:auto" srcset="https://peepalmedia.com/wp-content/uploads/2024/12/Screenshot-2024-12-19-105949-1024x748.jpg 1024w, https://peepalmedia.com/wp-content/uploads/2024/12/Screenshot-2024-12-19-105949-300x219.jpg 300w, https://peepalmedia.com/wp-content/uploads/2024/12/Screenshot-2024-12-19-105949-768x561.jpg 768w, https://peepalmedia.com/wp-content/uploads/2024/12/Screenshot-2024-12-19-105949-150x110.jpg 150w, https://peepalmedia.com/wp-content/uploads/2024/12/Screenshot-2024-12-19-105949-696x508.jpg 696w, https://peepalmedia.com/wp-content/uploads/2024/12/Screenshot-2024-12-19-105949-1068x780.jpg 1068w, https://peepalmedia.com/wp-content/uploads/2024/12/Screenshot-2024-12-19-105949.jpg 1152w" sizes="(max-width: 1024px) 100vw, 1024px" /><figcaption class="wp-element-caption">image: VectorStock.com/50881516</figcaption></figure></div>


<p>ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವ ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೆರೆಹೊರೆಯವರಿಂದ, ಪರಿಚಿತರಿಂದ, ಸಂಬಂಧಿಕರಿಂದ ಲೈಂಗಿಕ ಶೋಷಣೆಗೂ ಒಳಗಾಗುತ್ತಾರೆ. ಇದನ್ನು ಪೋಷಕರಲ್ಲಿ ಹೇಳಲು ಅಂಜುತ್ತಾರೆ. ಕೆಲವು ಮನೆಗಳಲ್ಲಿ ಮಕ್ಕಳಿಗೆ ಮುಕ್ತವಾಗಿ ಮಾತನಾಡುವ ಅವಕಾಶಗಳೂ ಇರುವುದಿಲ್ಲ. ಶಾಲೆಯ ಚಟುವಟಿಕೆ ಹಾಗೂ ಇನ್ನಿತರೇ ವಿಷಯಗಳ ಬಗ್ಗೆ ಮಾತನಾಡುವ ಪೋಷಕರು ಮಕ್ಕಳಿಗೆ ಆಗುವ ಇಂತಹಾ ಅಹಿತಕರ ಅನುಭವಗಳ ಬಗ್ಗೆ ಚಿಂತಿಸಿಯೇ ಇರುವುದಿಲ್ಲ. ತಾವು ತಮ್ಮ ಮಕ್ಕಳಿಗೆ ಸಂಪೂರ್ಣ ಸುರಕ್ಷತೆಯನ್ನು ಕೊಟ್ಟಿದ್ದೇವೆ ಎನ್ನುವ ಭ್ರಮೆಯಲ್ಲಿ ಉಳಿದುಬಿಡುತ್ತಾರೆ. ಹಾಗಾಗಿ ಮಕ್ಕಳು ಏನಾದರೂ ಹೇಳಲು ಹತ್ತಿರ ಬಂದರೆ ನಿರ್ಲಕ್ಷ್ಯವನ್ನು ತೋರುತ್ತಾರೆ. ತಮ್ಮ ಓರಗೆಯವರಿಗಿಂತ ತಮ್ಮ ಮಕ್ಕಳು ಭಿನ್ನರು ಎನ್ನುವುದು ಎಷ್ಟೋ ಪಾಲಕರ ಗಮನಕ್ಕೆ ಬಾರದೇ ಹೋಗುತ್ತದೆ. ಹದಿ ಹರೆಯದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ ನಡೆದುಕೊಳ್ಳದೆ ಇರುವುದು ಕೂಡಾ ಇದಕ್ಕೆ ಕಾರಣ. ತಾವು ಹೇಳಿದಂತೆ ಮಕ್ಕಳು ಕೇಳಬೇಕು, ಅವರಿಗೆ ಪ್ರಪಂಚ ಜ್ಞಾನವಿಲ್ಲವೆಂದು ತಿಳಿದು ಮಕ್ಕಳು ಏನಾದರೂ ಸಂಶಯವನ್ನು ಕೇಳಿ ಬಳಿ ಬಂದಾಗ ತಮ್ಮ ಅನುಭವಕ್ಕೆ ಅನುಗುಣವಾಗಿ ಬೋಧಿಸಲು ಪ್ರಾರಂಭಿಸುತ್ತಾರೆ. ತಮ್ಮ ಮಗುವಿನ ಅನುಭವ ತಮಗಿಂತಲೂ ಭಿನ್ನ ಎನ್ನುವುದನ್ನು ಒಪ್ಪಿಕೊಳ್ಳಲು ಪೋಷಕರು ತಯಾರಾಗುವುದೇ ಇಲ್ಲ. ಹೀಗಾದಾಗ ಮಕ್ಕಳು ಪೋಷಕರ ಜೊತೆ ಮಾತನಾಡುವುದನ್ನೇ ಕಡಿಮೆ ಮಾಡಿ ಅಂತರ್ಮುಖಿಯಾಗುತ್ತಾರೆ.</p>



<p><strong>ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ:</strong> <a href="https://peepalmedia.com/confusions-in-lgbtq-childrens-life/">LGBTQ+ ಮಕ್ಕಳ ತೊಳಲಾಟಗಳು!</a></p>



<p>ತಮ್ಮ ಲಿಂಗತ್ವಕ್ಕೆ ವಿಭಿನ್ನವಾದ ನಡವಳಿಕೆ ಮಕ್ಕಳಲ್ಲಿ ಕಂಡುಬಂದರೆ ಅವರನ್ನು ಟೀಕೆಮಾಡಿ, ನಿಂದಿಸಿ, ಗದರಿ ಹಾಗೆಲ್ಲಾ ನಡೆಕೊಳ್ಳದ ಹಾಗೆ ತಾಕೀತು ಮಾಡುತ್ತಾರೆ. ಮನೆಯ ಹೊರಗಿನಿಂದಲೂ ಮಕ್ಕಳು ಅವಹೇಳನಕ್ಕೆ ಒಳಗಾಗುತ್ತಾರೆ. ಹೀಗೆ ಅಪಹಾಸ್ಯಕ್ಕೆ ಒಳಗಾದ ಮಕ್ಕಳು ತಾವು ಏನೋ ದೊಡ್ಡ ತಪ್ಪು ಮಾಡುತ್ತಿದ್ದೇವೆ ಎನ್ನುವ ಕೀಳರಿಮೆಗೆ ಒಳಗಾಗಿ ಖಿನ್ನತೆಗೆ ಜಾರುತ್ತಾರೆ. ತಮ್ಮ ಘನತೆ ಗೌರವ ಮನೆತನದ ಮರ್ಯಾದೆ ಹಾಳಾಗುತ್ತದೆ ಎಂದೆಲ್ಲಾ ಹೆದರುವ ಪಾಲಕರು ತಮ್ಮ ಮಕ್ಕಳ ನಡತೆಯಲ್ಲಿ ಬದಲಾವಣೆ ತರಲು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುತ್ತಾರೆ. ಸಮಾಜದ ಕುಹಕಕ್ಕೆ ಹೆದರಿ ತಮ್ಮ ಮಕ್ಕಳಲ್ಲಿ ಸಹಜವಾಗಿ ಉಂಟಾಗುವ ವಿಭಿನ್ನ ರೀತಿಯ ಬದಲಾವಣೆಯನ್ನು ಪ್ರಾರಂಭದಲ್ಲೇ ಚಿವುಟಿ ಹಾಕುವ ವ್ಯರ್ಥ ಪ್ರಯತ್ನಗಳು ಅವಿರತವಾಗಿ ಪೋಷಕರಿಂದ ನಡೆಯುತ್ತವೆ. ಆಗೆಲ್ಲಾ ಮಕ್ಕಳು ಮಾನಸಿಕವಾಗಿ ಜರ್ಜರಿತರಾಗುವುದನ್ನು ಅರ್ಥಮಾಡಿಕೊಳ್ಳದೇ ಕಾಲಕ್ರಮೇಣ ಸರಿಹೋಗುವರು ಎಂದು ಪೋಷಕರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ಪೋಷಕರ ಕಾಳಜಿ ಅತ್ಯಗತ್ಯ. ತಾವು ಸದಾ ಜೊತೆಗಿದ್ದೇವೆ ಎನ್ನುವ ಭರವಸೆ ಮಕ್ಕಳ ಮನಸ್ಸಲ್ಲಿ ಸುರಕ್ಷಿತ ಭಾವನೆ ಮೂಡಿಸುತ್ತದೆ. ಸಣ್ಣ ಮಗುವಾಗಿದ್ದಾಗ ನಾವು ತೋರುವ ಕಾಳಜಿ, ಪ್ರೀತಿ, ಸಹಕಾರ, ಎಲ್ಲವೂ ಸದಾ ಕಾಲವಿರಬೇಕು ಎಂದು ಮಕ್ಕಳು ಬಯಸುತ್ತಾರೆ. ಶಿಸ್ತಿನಿಂದ ಪಾಲನೆ ಪೋಷಣೆ ಮಾಡದಿದ್ದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚು ಆದರೂ ಅವರಿಗೆ ಅಗತ್ಯವಿದ್ದಾಗ ಏನೇ ಆದರೂ ನಾವು ಜೊತೆಗಿದ್ದೇವೆ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಬೇಕು. ಹಾಗಾಗಬೇಕಾದರೆ ನಾವು ಸ್ನೇಹಿತರಂತೆ ಅವರ ಜೊತೆ ನಡೆದುಕೊಳ್ಳಬೇಕು.&nbsp;</p>



<p><strong>ಲೇಖನ: ರುಕ್ಮಿಣಿ ಎಸ್ ನಾಯರ್</strong></p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="ujGhMUTni3"><a href="https://peepalmedia.com/confusions-in-lgbtq-childrens-life/">LGBTQ+ ಮಕ್ಕಳ ತೊಳಲಾಟಗಳು!</a></blockquote><iframe class="wp-embedded-content" sandbox="allow-scripts" security="restricted"  title="&#8220;LGBTQ+ ಮಕ್ಕಳ ತೊಳಲಾಟಗಳು!&#8221; &#8212; Peepal Media" src="https://peepalmedia.com/confusions-in-lgbtq-childrens-life/embed/#?secret=wCGb7dptOt#?secret=ujGhMUTni3" data-secret="ujGhMUTni3" width="600" height="338" frameborder="0" marginwidth="0" marginheight="0" scrolling="no"></iframe>
</div></figure>
]]></content:encoded>
					
		
		
			</item>
		<item>
		<title>LGBTQ+ ಮಕ್ಕಳ ತೊಳಲಾಟಗಳು!</title>
		<link>https://peepalmedia.com/confusions-in-lgbtq-childrens-life/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 05 Dec 2024 07:04:19 +0000</pubDate>
				<category><![CDATA[LGBTQ+]]></category>
		<category><![CDATA[ಅಂಕಣ]]></category>
		<category><![CDATA[adult]]></category>
		<category><![CDATA[bengaluru]]></category>
		<category><![CDATA[fundumental rights]]></category>
		<category><![CDATA[gay]]></category>
		<category><![CDATA[Human rights]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[mental health]]></category>
		<category><![CDATA[Namma Pride]]></category>
		<category><![CDATA[Pride March]]></category>
		<category><![CDATA[sex education]]></category>
		<category><![CDATA[sexual minorities]]></category>
		<category><![CDATA[transgender]]></category>
		<guid isPermaLink="false">https://peepalmedia.com/?p=50216</guid>

					<description><![CDATA[ಲೇಖನ: ರುಕ್ಮಿಣಿ ಎಸ್ ನಾಯರ್ LGBTQIA+ ಮಕ್ಕಳು ಹುಟ್ಟುವಾಗ ಸಾಮಾನ್ಯವಾಗಿ ಎಲ್ಲಾ ಮಕ್ಕಳಂತೆಯೇ ಇರುತ್ತಾರೆ. ಆದರೆ ಕೆಲವು ಮಕ್ಕಳು ಮಾತ್ರ ಅಪರೂಪಕ್ಕೆ ಭಿನ್ನವಾಗಿ ಹುಟ್ಟುತ್ತಾರೆ. ಆದರೆ ಸಾಮಾನ್ಯವಾಗಿ ನೋಡುವಾಗ ಹೊರನೋಟಕ್ಕೆ ಈ ಮಕ್ಕಳು ಎಲ್ಲರಂತೆ ಇರುತ್ತಾರೆ. ನಮಗೆ ಇವರಲ್ಲಿ ಯಾವ ಬದಲಾವಣೆಯೂ ಕಾಣುವುದಿಲ್ಲ. ಪುಟ್ಟ ಮಗುವಾಗಿರುವಾಗ ನಾವು ನಮ್ಮ ಇಷ್ಟಕ್ಕೆ ಅನುಗುಣವಾಗಿ ಬಟ್ಟೆಗಳನ್ನು ತೊಡಿಸುತ್ತೇವೆ. ಸಿಂಗರಿಸುತ್ತೇವೆ, ಅದನ್ನು ನೋಡಿ ಖುಷಿಯಿಂದ ಸಂಭ್ರಮಿಸುತ್ತೇವೆ. ಮಕ್ಕಳು ಸ್ವಲ್ಪ ಬೆಳೆದಾಗ ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸುತ್ತಾರೆ. ತಮ್ಮನ್ನು ತಾವು ಅರಿಯಲು ಪ್ರಾರಂಭಿಸುತ್ತಾರೆ. [&#8230;]]]></description>
										<content:encoded><![CDATA[
<pre class="wp-block-code"><code><strong>LGBTQIA+</strong> ಮಕ್ಕಳು ತಮ್ಮ ಲೈಂಗಿಕ ಭಾವನೆಗಳಿಗೆ ವಿರುದ್ಧವಾಗಿ ಮದುವೆಯಾಗಿ ತಾವು ಸಹಜವಾಗಿ ಇದ್ದೇವೆ ಎಂದು ಸಮಾಜಕ್ಕೆ ತೋರಿಸಿಕೊಳ್ಳಲು ಒತ್ತಡಕ್ಕೆ ಒಳಗಾಗಿ ಇಂತಹ ಬದುಕನ್ನು ಸ್ವೀಕರಿಸುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ. ಗೇ ಹುಡುಗನೊಬ್ಬ ಕುಟುಂಬದ ಮತ್ತು ಸಮಾಜದ ಒತ್ತಡಕ್ಕೆ ಒಳಗಾಗಿ ಹೆಣ್ಣನ್ನು ಮದುವೆಯಾದರೆ, ಇದರಿಂದ ಅವನ ಬದುಕು ಮಾತ್ರವಲ್ಲ, ಆ ಹುಡುಗಿಯ ಬದುಕೂ ನಾಶವಾಗುತ್ತದೆ. ಇದಕ್ಕೆ <strong><a href="https://en.wikipedia.org/wiki/Lavender_marriage">ಲ್ಯಾವೆಂಡರ್‌ ಮ್ಯಾರೆಜ್‌ </a></strong>ಎಂದು ಕರೆಯುತ್ತಾರೆ.</code></pre>



<p><strong>ಲೇಖನ:</strong> ರುಕ್ಮಿಣಿ ಎಸ್ ನಾಯರ್ </p>



<p><strong>LGBTQIA+ </strong>ಮಕ್ಕಳು ಹುಟ್ಟುವಾಗ ಸಾಮಾನ್ಯವಾಗಿ ಎಲ್ಲಾ ಮಕ್ಕಳಂತೆಯೇ ಇರುತ್ತಾರೆ. ಆದರೆ ಕೆಲವು ಮಕ್ಕಳು ಮಾತ್ರ ಅಪರೂಪಕ್ಕೆ ಭಿನ್ನವಾಗಿ ಹುಟ್ಟುತ್ತಾರೆ. ಆದರೆ ಸಾಮಾನ್ಯವಾಗಿ ನೋಡುವಾಗ ಹೊರನೋಟಕ್ಕೆ ಈ ಮಕ್ಕಳು ಎಲ್ಲರಂತೆ ಇರುತ್ತಾರೆ. ನಮಗೆ ಇವರಲ್ಲಿ ಯಾವ ಬದಲಾವಣೆಯೂ ಕಾಣುವುದಿಲ್ಲ. ಪುಟ್ಟ ಮಗುವಾಗಿರುವಾಗ ನಾವು ನಮ್ಮ ಇಷ್ಟಕ್ಕೆ ಅನುಗುಣವಾಗಿ ಬಟ್ಟೆಗಳನ್ನು ತೊಡಿಸುತ್ತೇವೆ. ಸಿಂಗರಿಸುತ್ತೇವೆ, ಅದನ್ನು ನೋಡಿ ಖುಷಿಯಿಂದ ಸಂಭ್ರಮಿಸುತ್ತೇವೆ. ಮಕ್ಕಳು ಸ್ವಲ್ಪ ಬೆಳೆದಾಗ ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸುತ್ತಾರೆ.</p>



<p><br>ತಮ್ಮನ್ನು ತಾವು ಅರಿಯಲು ಪ್ರಾರಂಭಿಸುತ್ತಾರೆ. ತಮ್ಮ ದೇಹದ ಅಂಗಾಂಗಗಳನ್ನು ಕೌತುಕದಿಂದ ಮುಟ್ಟಿ ನೋಡಿಕೊಳ್ಳುತ್ತಾರೆ. ತಾವು ಕೂಡಾ ಇತರರಂತೆಯೇ ಎನ್ನುವುದನ್ನು ಕೂಡಾ ಗಮನಿಸಲು ಪ್ರಾರಂಭಿಸುತ್ತಾರೆ.</p>



<p>ತಮ್ಮ ಲಿಂಗತ್ವದ ಬಗ್ಗೆ ಸಣ್ಣ ವಯಸ್ಸಿನಿಂದಲೇ ಭಾವನಾತ್ಮಕವಾಗಿ ಪೋಷಕರ ಗಮನಕ್ಕೆ ಬಂದೂ ಬಾರದಂತಹ, ಕಣ್ಣಿಗೆ ಕಂಡೂ ಕಾಣದಂತಹ ಹಲವಾರು ಸೂಚನೆಗಳನ್ನು ನೀಡುತ್ತಾರೆ. ಸ್ವತಃ ಆ ಮಕ್ಕಳಿಗೂ ಕೂಡಾ ತಮ್ಮ ಹಾವಭಾವದಲ್ಲಿ ಉಂಟಾಗುವ ವ್ಯತ್ಯಾಸ ತಿಳಿದಿರುವುದಿಲ್ಲ. ಸಹಜವಾಗಿ ತಮಗೆ ಅನಿಸಿದಂತೆ, ತಮ್ಮ ಇಷ್ಟಕ್ಕೆ ಅನುಗುಣವಾಗಿ ಆಟವಾಡುವ ರೀತಿಯಿಂದ, ವಸ್ತ್ರಗಳನ್ನು ತೊಡುವಾಗ ತೋರುವ ಆಸಕ್ತಿಯಿಂದ, ಅವರ ನಡೆನುಡಿ, ಹಾವಭಾವಗಳಿಂದ ತಮ್ಮಲ್ಲಿನ ನಿಜವಾದ ಆಸಕ್ತಿಯನ್ನು ಹೊರಹಾಕುತ್ತಾರೆ. ನಾವು ಪೋಷಕರು ವಯೋಸಹಜವಾಗಿ ಅವರಲ್ಲಿ ಉಂಟಾಗುವ ಬದಲಾವಣೆಗಳನ್ನು ಅಷ್ಟು ಸೂಕ್ಷ್ಮವಾಗಿ ಗಮನಿಸುವುದಿಲ್ಲ. ಆದರೆ ನಮ್ಮ ಮಕ್ಕಳು ಇತರರಂತೆ ಅಲ್ಲ ಎನ್ನುವುದು ಕಾಲಕ್ರಮೇಣ ನಮ್ಮ ಅರಿವಿಗೆ ಬಂದಂತೆ ನಾವು ಅಧೀರಾಗುತ್ತೇವೆ. ಸಾಮಾನ್ಯ ಮಕ್ಕಳಿಗಿಂತ ವಿಭಿನ್ನವಾಗಿ ವರ್ತಿಸುವುದು ನಿಧಾನವಾಗಿ ಪೋಷಕರ ಗಮನಕ್ಕೆ ಬರುತ್ತದೆ. ಆಗ ಆ ಮಕ್ಕಳನ್ನು ಗದರಿ, ಮೂದಲಿಸಿ ʼನೀನು ಹೀಗೆ ಆಡಬೇಡ, ಮಾತನಾಡಬೇಡ, ವರ್ತಿಸಬೇಡ,ʼ ಎಂದೆಲ್ಲಾ ಹೇಳಿ ಮಕ್ಕಳ ಗುಣದಲ್ಲಿ, ನಡತೆಯಲ್ಲಿ ವ್ಯತ್ಯಾಸವನ್ನು ತರಲು ಪೋಷಕರು ಪ್ರಯತ್ನಿಸುತ್ತಾರೆ. ಮಕ್ಕಳ ಮೇಲೆ ಮಾನಸಿಕವಾಗಿ ಒತ್ತಡ ಹೇರುತ್ತೇವೆ.</p>


<div class="wp-block-image">
<figure class="aligncenter size-large"><img loading="lazy" decoding="async" width="1024" height="536" src="https://peepalmedia.com/wp-content/uploads/2024/12/LGBTQ-1697545194-1024x536.jpg" alt="" class="wp-image-50218" srcset="https://peepalmedia.com/wp-content/uploads/2024/12/LGBTQ-1697545194-1024x536.jpg 1024w, https://peepalmedia.com/wp-content/uploads/2024/12/LGBTQ-1697545194-300x157.jpg 300w, https://peepalmedia.com/wp-content/uploads/2024/12/LGBTQ-1697545194-768x402.jpg 768w, https://peepalmedia.com/wp-content/uploads/2024/12/LGBTQ-1697545194-150x79.jpg 150w, https://peepalmedia.com/wp-content/uploads/2024/12/LGBTQ-1697545194-696x364.jpg 696w, https://peepalmedia.com/wp-content/uploads/2024/12/LGBTQ-1697545194-1068x559.jpg 1068w, https://peepalmedia.com/wp-content/uploads/2024/12/LGBTQ-1697545194.jpg 1200w" sizes="auto, (max-width: 1024px) 100vw, 1024px" /></figure></div>


<p>ಆದರೆ ಆ ಮಕ್ಕಳು ತಾವು ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ಗೊಂದಲಕ್ಕೆ ಒಳಗಾಗಿ ಮಂಕಾಗುತ್ತಾರೆ. ಆದರೆ ಎಷ್ಟು ಪ್ರಯತ್ನ ಪಟ್ಟರೂ ತಮ್ಮಲ್ಲಿ ಅಡಗಿರುವ ಸಹಜ ಭಾವನೆಯನ್ನು, ಗುಣವನ್ನು ಆ ಮಕ್ಕಳು ತೋರಿಸುತ್ತಾರೆ. ಮತ್ತೂ ಪೋಷಕರು ಗದರಿ ನಿಂದಿಸಿದಾಗ ಪೋಷಕರ ಮುಂದೆ ನಟಿಸಲು ಅಭ್ಯಾಸ ಮಾಡಿಕೊಳ್ಳುತ್ತಾರೆ. ತಮ್ಮ ಸಹಜ ನಡವಳಿಕೆಯನ್ನು ಬಚ್ಚಿಡಲು ಕಲಿಯುತ್ತಾರೆ. ಹಾಗೂ ಮಾನಸಿಕವಾಗಿ ಒಳಗೊಳಗೇ ಕೊರಗಲು ಪ್ರಾರಂಭಿಸುತ್ತಾರೆ. ತಾನು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಗೊಂದಲದ ನಡುವೆ ಸಿಲುಕಿ ತೊಳಲಾಡುತ್ತಾರೆ. ಆದರೂ ತನ್ನಲ್ಲಿ ಅಡಗಿರುವ ಸಹಜ ಗುಣಗಳನ್ನು ಭಾವಗಳನ್ನು ಭಾವನೆಗಳನ್ನು ಬಚ್ಚಿಡಲು ವಿಫಲ ಪ್ರಯತ್ನ ಮಾಡಿ ಸೋಲುತ್ತಾರೆ. ತಾವು ಒಂಟಿಯಾಗಿರುವಾಗ, ಪೋಷಕರು ಜೊತೆ ಇಲ್ಲದ ಸಮಯದಲ್ಲಿ ಯಾರಿಗೂ ತಿಳಿಯದಂತೆ ತನ್ನಿಷ್ಟದಂತೆ ಇದ್ದು ಖುಷಿ ಪಡುತ್ತಾರೆ. ಕೃತಕವಾಗಿ ನಡವಳಿಕೆಯನ್ನು, ಗುಣವನ್ನು ಪೋಷಕರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ. ತನ್ನ ಸಹಜ ನಡವಳಿಕೆಯನ್ನು, ಗುಣವನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರೆ.</p>



<p>ಇದರಿಂದ ಮಕ್ಕಳು ಮಾನಸಿಕವಾಗಿ ಬಲಹೀನವಾಗುತ್ತಾ ಹೋಗುತ್ತಾರೆ. ಆಟ ಪಾಠಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾ ಮೌನಕ್ಕೆ ಶರಣಾಗುತ್ತಾರೆ. ಪೋಷಕರು ಇತರೇ ಮಕ್ಕಳಿಗೆ ತಮ್ಮ ಮಕ್ಕಳನ್ನು ಹೋಲಿಸುತ್ತಾ ಹೋದಂತೆ ಈ ಮಕ್ಕಳು ಇತರ ಮಕ್ಕಳಿಂದಲೂ ದೂರವಿರಲು ಪ್ರಯತ್ನಿಸುತ್ತಾರೆ. ಬೆಳೆದಂತೆ ಅವರಲ್ಲಿ ಮೌನವೂ ಹೆಚ್ಚಾಗುತ್ತಾ ಹೋಗುತ್ತದೆ. ಆದಷ್ಟೂ ತಮ್ಮಷ್ಟಕ್ಕೆ ತಾನು ಇರಲು ಬಯಸುತ್ತಾರೆ. ಕಾಲಕ್ರಮೇಣ ಹದಿ ಹರೆಯವನ್ನು ತಲುಪಿದಾಗ ಆ ಮಕ್ಕಳ ಸಂಕಷ್ಟ ಇನ್ನೂ ಹೆಚ್ಚಾಗುತ್ತದೆ. ಹದಿ ಹರೆಯದಲ್ಲಿ ತಮ್ಮ ದೇಹದಲ್ಲಿ ಆಗುವ ಮಾರ್ಪಾಡಿನಿಂದಾಗಿ ಗಲಿಬಿಲಿಗೆ ಒಳಗಾಗುತ್ತಾರೆ. ತಮ್ಮ ಓರಗೆಯ ಮಕ್ಕಳ ಜೊತೆ ಬೆರೆತರೂ ತಾವು ಅವರಂತೆ ಇಲ್ಲ ತಾವು ಇವರೆಲ್ಲರಿಗಿಂತ ಭಿನ್ನ ಎನ್ನುವುದನ್ನು ಅರಿತುಕೊಳ್ಳುತ್ತಾರೆ. ಕೆಲವು ಮಕ್ಕಳು ಪೋಷಕರನ್ನು ಕೇಳಿ ತಿಳಿದುಕೊಳ್ಳಲು ಧೈರ್ಯ ಮಾಡುತ್ತಾರೆ. ಆಗ ಪೋಷಕರು ಕೂಡಾ ಅದನ್ನು ಅಷ್ಟು ಮುಖ್ಯ ವಿಷಯವಾಗಿ ತೆಗೆದುಕೊಳ್ಳದೇ, ಆ ಮಕ್ಕಳಿಗೆ ಸಮರ್ಪಕವಾದ ಉತ್ತರ ದೊರೆಯದೇ ತೊಳಲಾಡುತ್ತಾರೆ.</p>



<p>ತಮ್ಮ ಓರಗೆಯವರೊಂದಿಗೆ ಮುಜುಗರದಿಂದ ತಮ್ಮ ಮನಸ್ಸಿನ ಸಂದೇಹವನ್ನು ಹಂಚಿಕೊಂಡಾಗ ನಗೆಪಾಟಲಿಗೆ ಗುರಿಯಾಗುತ್ತಾರೆ. ಶಾಲೆಯಲ್ಲಿ ಶಿಕ್ಷಕರೊಂದಿಗೆ ಕೇಳಿ ತಿಳಿದುಕೊಳ್ಳಲು ಅಂಜಿಕೆಯಾದ ಕಾರಣ ಅವರೊಂದಿಗೂ ಕೇಳಿ ತಿಳಿದುಕೊಳ್ಳಲು ಈ ಮಕ್ಕಳು ಹಿಂಜರಿಯುತ್ತಾರೆ. ತಾವು ನಿಜಕ್ಕೂ ಏನು? ಹೆಣ್ಣೇ, ಗಂಡೇ ಅಥವಾ ಎರಡೂ ಅಲ್ಲವೇ ಎನ್ನುವ ಸಂಶಯ LGBTQIA+ ಮಕ್ಕಳಲ್ಲಿ ತಲೆದೋರುತ್ತದೆ. ತಮ್ಮ ದೈಹಿಕ ಬದಲಾವಣೆಗೂ ಮಾನಸಿಕ ಬದಲಾವಣೆಗೂ, ತಮ್ಮಲ್ಲಿ ಉದ್ಭವಿಸುವ ಭಾವನೆಗಳ ಬದಲಾವಣೆಗೂ ತಾಳೆಯಾಗದೇ ಇರುವುದನ್ನು ಅರಿತ ಮಕ್ಕಳು ತಮಗೇನೋ ಆಗಿದೆ ಎಂದು ಹೆದರುತ್ತಾರೆ. ತಮ್ಮ ಲೈಂಗಿಕತೆಯ ಬಗೆಗಿನ ಗೊಂದಲ ಹೆಚ್ಚಾಗಿ ಅವರಿಗೇ ಅರಿವಿಲ್ಲದಂತೆ ಖಿನ್ನತೆಗೆ ಒಳಗಾಗುತ್ತಾರೆ. ಈ ಸಮಾಜದಲ್ಲಿ ತಾವು ಹೇಗೆ ಬದುಕಿದರೆ ಸರಿ ಮತ್ತು ತಾವು ಹೇಗೆ ಬದುಕಿದರೆ ತೊಂದರೆಗೆ ಒಳಗಾಗುತ್ತೇವೆ ಎನ್ನುವ ಪ್ರಶ್ನೆ ಮನಸ್ಸಲ್ಲಿ ಮೂಡಿ, ಆತಂಕಕ್ಕೆ ಒಳಗಾಗುತ್ತಾರೆ. ಅವರು ತಮ್ಮ ಭಾವನೆಗಳನ್ನು ಹೊರಗೆ ತೋರಿಸಿಕೊಳ್ಳಲಾರದೇ ತಮ್ಮಲ್ಲಿಯೇ  ಹತ್ತಿಕ್ಕಿಕೊಳ್ಳುತ್ತಾರೆ.</p>


<div class="wp-block-image">
<figure class="aligncenter size-full"><img loading="lazy" decoding="async" width="759" height="500" src="https://peepalmedia.com/wp-content/uploads/2024/12/DSCN0116-759x500-1.jpg" alt="" class="wp-image-50220" srcset="https://peepalmedia.com/wp-content/uploads/2024/12/DSCN0116-759x500-1.jpg 759w, https://peepalmedia.com/wp-content/uploads/2024/12/DSCN0116-759x500-1-300x198.jpg 300w, https://peepalmedia.com/wp-content/uploads/2024/12/DSCN0116-759x500-1-150x99.jpg 150w, https://peepalmedia.com/wp-content/uploads/2024/12/DSCN0116-759x500-1-696x458.jpg 696w" sizes="auto, (max-width: 759px) 100vw, 759px" /></figure></div>


<p>ಪೋಷಕರಿಗೆ ತಮ್ಮಲ್ಲಿ ಉಂಟಾಗುವ ವಿಭಿನ್ನ ಭಾವನೆಗಳ ಬಗ್ಗೆ ಹೇಳಿಕೊಂಡರೆ ಎಲ್ಲಿ ನಿಂದನೆಗೆ ಒಳಗಾಗುತ್ತೇವೆಯೋ ಎಂದು ಹೆದರಿ ತಮ್ಮಲ್ಲಿ ಉಂಟಾಗುವ ಭಾವನಾತ್ಮಕ ಬದಲಾವಣೆಗಳನ್ನು ಹೇಳದೆ ಮನಸ್ಸಿನಲ್ಲಿಟ್ಟು ಕೊರಗುತ್ತಾರೆ. ಕೆಲವು ಮಕ್ಕಳು ಸಹಜವಾಗಿ ತಮ್ಮ ವಿರುದ್ಧ ಲಿಂಗಿಗಳ ಕಡೆಗೆ ಆಕರ್ಷಿತರಾಗದೆ, ತಮ್ಮದೇ ಲಿಂಗದವರ ಕಡೆಗೆ ಆಕರ್ಷಿತರಾಗುತ್ತಾರೆ ( ಗೇ ಮತ್ತು ಲೆಸ್ಬಿಯನ್‌) . ಕೆಲವು ಮಕ್ಕಳು ಗಂಡು ಮತ್ತು ಹೆಣ್ಣು ಇಬ್ಬರ ಕಡೆಗೂ ಲೈಂಗಿಕವಾಗಿ ಆಕರ್ಷಿತರಾಗುತ್ತಾರೆ (ಬೈ-ಸೆಕ್ಷಿವಲ್). ಇನ್ನು ಕೆಲವರು ತಾವು ಹೆಣ್ಣೋ ಅಥವಾ ಗಂಡೋ ಎಂದು ಅರ್ಥ ಆಗದೇ ಸಂದೇಹಕ್ಕೆ ಒಳಗಾಗುತ್ತಾರೆ‌ (ಟ್ರಾನ್ಸ್‌ಜೆಂಡರ್). ಅಪರೂಪಕ್ಕೆ ಕೆಲವು ಮಕ್ಕಳಲ್ಲಿ ಲೈಂಗಿಕ ಭಾವನೆಗಳು ಉಂಟಾಗುವುದೇ ಇಲ್ಲ‌ (ಅಸೆಕ್ಷುವಲ್). ಹೊರಗಿನ ಸಮಾಜದಲ್ಲಿ ಕಂಡು ಬರುವ ಸಹಜವಾದ ಲೈಂಗಿಕ ಜೀವನ ಹಾಗೂ ತಮ್ಮಲ್ಲಿ ಉದ್ಭವವಾಗಿರುವ ಭಾವನೆಗಳು ಅಸಹಜವಾಗಿ ಕಂಡಾಗ ಅಧೀರರಾಗುತ್ತಾರೆ. ಇದಕ್ಕೆಲ್ಲಾ ಕಾರಣ ಲೈಂಗಿಕತೆಯ ಬಗ್ಗೆ ತಿಳುವಳಿಕೆ ಇಲ್ಲದೇ ಇರುವುದೇ ಆಗಿದೆ. ‌</p>



<p>ಲೈಂಗಿಕತೆಯ ಬಗ್ಗೆ ತೆರೆದು ಮಾತನಾಡುವುದನ್ನು ಕೆಟ್ಟದಾಗಿ ಹಾಗೂ ತಪ್ಪಾಗಿ ಅಶ್ಲೀಲವಾಗಿ ತಿಳಿಯುವುದೇ ಇದಕ್ಕೆ ಕಾರಣವಾಗಿದೆ. ಮಕ್ಕಳಲ್ಲಿ ಉದ್ಭವವಾಗುವ ಲೈಂಗಿಕತೆಯ ಬಗೆಗಿನ ಸಂದೇಹಗಳನ್ನು ಅಳುಕಿಲ್ಲದೆ ಪರಿಹರಿಸುವ ಮಾರ್ಗವು ದೊರೆಯದೇ ಹೋದಾಗ ಮಕ್ಕಳು ಸಾಮಾಜಿಕ ಜಾಲತಾಣಗಳ ಕಡೆಗೆ ತೆರಳುತ್ತಾರೆ ಅಥವಾ ತಮ್ಮ ಇತರ ಕೆಲವು ಸ್ನೇಹಿತರಲ್ಲಿ ಸಂದೇಹಗಳ ಪರಿಹಾರಕ್ಕೆ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಅವರಿಗೆ ಅಲ್ಲಿ ಸರಿಯಾದ ಮಾಹಿತಿ ದೊರೆಯುವ ಬದಲು ಅವರನ್ನು ಇನ್ನೂ ಗೊಂದಲಕ್ಕೆ ಒಳಪಡಿಸುವ ಮಾಹಿತಿ ಸಿಗುತ್ತದೆ. ಇದರಿಂದ ಮಕ್ಕಳು ಅಡ್ಡದಾರಿಗಳನ್ನು ಹಿಡಿಯುವ ಸಾಧ್ಯತೆಯೂ ಇರುತ್ತದೆ. ಅನಿವಾರ್ಯವಾಗಿ ನೋವನ್ನು ಮರೆಯಲು ಕೆಲವರು ಮಾದಕವಸ್ತು, ಧೂಮಪಾನ, ಮದ್ಯಪಾನ ಇಂಥಹಾ ಅನೇಕ ದುಚ್ಚಟಗಳ ವ್ಯಸನಗಳಿಗೆ ದಾಸರಾಗುತ್ತಾರೆ.</p>



<p>ತಮ್ಮಲ್ಲಿ ಉದ್ಭವಿಸುತ್ತಿರುವ ಭಾವನೆಗಳು ತಪ್ಪು ಹಾಗೂ ತಮಗೇನೋ ಮಾನಸಿಕ ಅಥವಾ ದೈಹಿಕ ಖಾಯಿಲೆ ಬಂದಿದೆ ಎಂಬ ತಪ್ಪು ಕಲ್ಪನೆಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ತಮ್ಮನ್ನು ಸಮಾಜದಿಂದ, ಹೊರಲೋಕದಿಂದ, ಅಪ್ಪ ಅಮ್ಮನಿಂದ, ಹಾಗೂ ಇತರೇ ಸ್ನೇಹಿತರಿಂದ ಪ್ರತ್ಯೇಕಿಸಿಕೊಂಡು ಒಂಟಿಯಾಗಿ ಇದ್ದು ಬಿಡುತ್ತಾರೆ. ತಾವೇನೋ ತಪ್ಪು ಮಾಡುತ್ತಿದ್ದೇವೆ, ತಮ್ಮ ಲೈಂಗಿಕತೆಯ ಬಗ್ಗೆ ಹೊರಲೋಕ ಅರಿತರೆ ಎಲ್ಲಿ ತಮ್ಮನ್ನು ದೂರ ಮಾಡುವರೋ ಎಂಬ ಭಯಕ್ಕೆ ಒಳಗಾಗುತ್ತಾರೆ. ಇದಕ್ಕೆಲ್ಲಾ ಕಾರಣ ಪೋಷಕರು ಹಾಗೂ ಹೊರ ಪ್ರಪಂಚ ಈ ಮಕ್ಕಳನ್ನು ಅಸಹಜ ಗುಣದವರೆಂದು ಹೀಯಾಳಿಸುವುದರಿಂದ, ನಿಂದಿಸುವುದರಿಂದ, ಇವರೊಂದಿಗೆ ಬೆರೆಯದೇ ಇರುವುದರಿಂದ ಹಾಗೂ ಅವರನ್ನು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳದೇ ಇರುವುದರಿಂದ. ಮಕ್ಕಳೊಂದಿಗೆ ಪೋಷಕರು ಸ್ನೇಹಿತರಂತೆ ನಡೆದುಕೊಳ್ಳದೇ ಮಕ್ಕಳು ತಮ್ಮ ಅಧಿಕಾರ ಎಂದು ತಿಳಿದು ತಮ್ಮ ಇಷ್ಟಾನಿಷ್ಟಗಳನ್ನು ಮಕ್ಕಳ ಮೇಲೆ ಹೇರುವುದರಿಂದ, ಹೆದರುವ ಮಕ್ಕಳು ಎಲ್ಲಿ ತಮ್ಮನ್ನು ಮನೆಯಿಂದ ಆಚೆ ತಳ್ಳುವರೋ ಎಂಬ ಭಯದಿಂದ ತಮ್ಮ ಲಿಂಗತ್ವ ಹಾಗೂ ಲೈಂಗಿಕತೆಯನ್ನು ಬಹಿರಂಗ ಪಡಿಸಲು ಅಥವಾ ತಮ್ಮ ಮಾನಸಿಕ ತುಮುಲಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಆಗದೇ ತಮ್ಮಲ್ಲೇ ತಾವು ಕೊರಗುತ್ತಾ ಖಿನ್ನತೆಗೆ ಒಳಗಾಗಿ ಅದು ಕೆಲವೊಮ್ಮೆ ತೀವ್ರವಾದಾಗ ಆತ್ಮಹತ್ಯೆಗೆ ಶರಣಾಗುತ್ತಾರೆ.</p>



<p><strong>ಲೇಖಕರ ಹಿಂದಿನ ಲೇಖನ:</strong> <a href="https://peepalmedia.com/namma-pride-bengaluru-rukmini-s-nair/">ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ</a></p>



<p>ಮನೆಗೆ ನೆಂಟರು, ಅತಿಥಿಗಳು ಬರುವಾಗಲೂ ತಾವು ಏನೆಂದು ಅರಿಯಬಾರದು ಎನ್ನುವುದನ್ನು ಮನಗಂಡ ಮಕ್ಕಳು ಅವರು ಉಪಯೋಗಿಸುವಂತಹ ವಸ್ತುಗಳನ್ನು ಬಚ್ಚಿಡುತ್ತಾರೆ. ಪೋಷಕರಿಗಾಗಿ ಮತ್ತು ಸಮಾಜಕ್ಕಾಗಿ ಈ ಮಕ್ಕಳು ತಮ್ಮ ಇಚ್ಚೆ, ಆಸೆ, ಕಾಮನೆ, ಆಕಾಂಕ್ಷೆಗಳನ್ನು ತ್ಯಜಿಸಿ ಬಾಳುವೆ ನಡೆಸುವಂತಹ ಸಂದರ್ಭಗಳೇ ಹೆಚ್ಚು. ತಾವು ಯಾರು ಎಂದು ಸಮಾಜಕ್ಕೆ ಗೊತ್ತಾಗದೇ ಇರುವಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಈ ಮಕ್ಕಳು ಹರಸಾಹಸ ಪಡಬೇಕಾಗುತ್ತದೆ. ಹೊರಜಗತ್ತಿಗೆ ಗೊತ್ತಾದರೆ ಕಲಿಯುವ ಶಾಲೆಯಲ್ಲಿ ಇತರೇ ಮಕ್ಕಳಿಂದ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಸಮಾಜದ ಜನ ಇವರನ್ನು ಕಂಡು ನಗುತ್ತಾರೆ. ಈ ಮಕ್ಕಳು ಮಾಡಿದಂತಹ ತಪ್ಪಾದರೂ ಏನು? ಎಲ್ಲಾ ಜೀವಿಗಳಂತೆ ಈ ಪ್ರಪಂಚದಲ್ಲಿ ಜನ್ಮ ತಾಳಿದ್ದು ಇವರ ತಪ್ಪೇ? ತಮಗೆ ಜನ್ಮ ಕೊಡು ಎಂದು ಈ ಮಕ್ಕಳು ಮಾತಾಪಿತರನ್ನು ಕೇಳಿದರೇ? ತಾವು ಲೈಂಗಿಕ ಅಲ್ಪಸಂಖ್ಯಾತರಾಗಿ ಹುಟ್ಟಬೇಕು ಎಂದು ಇವರು ಬಯಸಿದ್ದರೆ?</p>



<p><br>ಯಾವ ತಪ್ಪಿಗೆ ಸಮಾಜದಲ್ಲಿ ಕುಟುಂಬದಲ್ಲಿ ಬದುಕಲು ಈ ಮಕ್ಕಳು ಅನರ್ಹರಾಗುತ್ತಾರೆ? ಈ ಲೋಕದಲ್ಲಿ ಬದುಕಲು ಇವರಿಗೂ ಹಕ್ಕಿಲ್ಲವೇ? ತಮ್ಮದಲ್ಲದ ತಪ್ಪಿಗೆ ಈ ಮಕ್ಕಳನ್ನು ಏಕೆ ಅಸಹ್ಯ ಭಾವನೆಯಿಂದ ಕಾಣುವುದು? ಈ ಮಕ್ಕಳು ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ಸಹಜವಾಗಿ ಇರುವಂತೆ ನಟಿಸಬೇಕಾಗುತ್ತದೆ. ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳ ಭಿನ್ನ ಲೈಂಗಿಕ ಅಭಿವ್ಯಕ್ತಿ ತಿಳಿದಿರುವುದಿಲ್ಲ. ಲಿಂಗತ್ವ ಹಾಗೂ ಲೈಂಗಿಕ ಮನೋಭಾವಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ ಎನ್ನುವ ಬಗ್ಗೆ ಅರಿವು ಮೂಡಿಸಿ ಈ ಮಕ್ಕಳು ನೆಮ್ಮದಿಯ ಬದುಕನ್ನು ಬಾಳಲು ಅನುವು ಮಾಡಿಕೊಡಬೇಕು.</p>



<p>ಯುವಾವಸ್ಥೆಗೆ ಬಂದಾಗ ಈ ಮಕ್ಕಳು ಅನುಭವಿಸುವ ಸಂಕಷ್ಟ ಇಮ್ಮಡಿಯಾಗುತ್ತದೆ. ಪ್ರಾಥಮಿಕ ಹಾಗೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಲವಾರು ತ್ಯಾಗಗಳನ್ನು ಮಾಡಿ ಪಡೆದುಕೊಂಡಿರುತ್ತಾರೆ. ಉದ್ಯೋಗ ಗಳಿಸಿ ತಾವು ಸ್ವತಂತ್ರವಾಗಿ ಬದುಕಲು ಕೂಡಾ ಇವರು ತಮ್ಮ ಲೈಂಗಿಕತೆಯನ್ನು ಮರೆಮಾಚಿಕೊಳ್ಳಬೇಕಾಗುತ್ತದೆ. <strong>ಇನ್ನು ವೈವಾಹಿಕ ಜೀವನವಂತೂ ದುಸ್ತರವೇ ಸರಿ. ತಮ್ಮ ಲೈಂಗಿಕ ಭಾವನೆಗಳಿಗೆ ವಿರುದ್ಧವಾಗಿ ಮದುವೆಯಾಗಿ ತಾವು ಸಹಜವಾಗಿ ಇದ್ದೇವೆ ಎಂದು ಸಮಾಜಕ್ಕೆ ತೋರಿಸಿಕೊಳ್ಳಲು ಒತ್ತಡಕ್ಕೆ ಒಳಗಾಗಿ ಇಂತಹ ಬದುಕನ್ನು ಸ್ವೀಕರಿಸುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ.</strong> <strong>ಗೇ ಹುಡುಗನೊಬ್ಬ ಕುಟುಂಬದ ಮತ್ತು ಸಮಾಜದ ಒತ್ತಡಕ್ಕೆ ಒಳಗಾಗಿ ಹೆಣ್ಣನ್ನು ಮದುವೆಯಾದರೆ, ಇದರಿಂದ ಅವನ ಬದುಕು ಮಾತ್ರವಲ್ಲ, ಆ ಹುಡುಗಿಯ ಬದುಕೂ ನಾಶವಾಗುತ್ತದೆ. </strong>ಇದಕ್ಕೆ <strong><a href="https://en.wikipedia.org/wiki/Lavender_marriage">ಲ್ಯಾವೆಂಡರ್‌ ಮ್ಯಾರೆಜ್‌</a></strong> ಎಂದು ಕರೆಯುತ್ತಾರೆ. <strong> </strong>ಹೊರನೋಟಕ್ಕೆ ಏನೇ ಬದಲಾವಣೆ ಮಾಡಿಕೊಂಡರೂ ಮನೋಸಹಜ ಭಾವನೆಗಳನ್ನು ಮೆಟ್ಟಿನಿಂತು ಬದುಕುವುದು ದುಸ್ತರವಾಗುತ್ತದೆ. ಆಗ ವೈವಾಹಿಕ ಜೀವನದಲ್ಲಿ ಕೂಡಾ ಬಿರುಕು ಮೂಡುತ್ತದೆ. ಒಬ್ಬರ ಲೈಂಗಿಕತೆಯನ್ನು ಮರೆಮಾಚಲು ಹೋಗಿ ಇಬ್ಬರ ಜೀವನವೂ ಹಾಳಾಗುತ್ತದೆ.</p>



<p><br>ಈ ಮಕ್ಕಳು ಅನುಭವಿಸುವ ನೋವು ಸಂಕಟಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಒಂದು ಉತ್ತಮ ಪರಿಹಾರ. ಎಲ್ಲರಂತೆ ಈ ಮಕ್ಕಳು ಕೂಡಾ ಉತ್ತಮ ರೀತಿಯಲ್ಲಿ ಬದುಕುವ ಅವಕಾಶ, ಹಕ್ಕು ಇವರಿಗೂ ಇದೆ ಎನ್ನುವುದರ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಪ್ರಕೃತಿಯಲ್ಲಿ ಇವೆಲ್ಲವೂ ಸಹಜವೇ ಎನ್ನುವ ಅರಿವು ಜಾಗೃತವಾಗಬೇಕು. ಆಗಲೇ ಈ ಮಕ್ಕಳು ತಮ್ಮತನವನ್ನು ತ್ಯಾಗ ಮಾಡದೇ, ಮುಜುಗರ, ಅವಮಾನ, ಅವಹೇಳನ, ತಿರಸ್ಕಾರಗಳನ್ನು ಸಹಿಸಿಕೊಂಡು ಒಳಗೊಳಗೇ ನೊಂದು ಬದುಕುವುದನ್ನು ತಡೆಗಟ್ಟಿ, ಅವರು ಕೂಡಾ ಎಲ್ಲರಂತೆ ನಗು ನಗುತ್ತಾ ಬಾಳುವೆ ನಡೆಸಲು ಸಾಧ್ಯವಾಗುತ್ತದೆ.</p>



<p><strong>ರುಕ್ಮಿಣಿ ಎಸ್ ನಾಯರ್</strong> <br>ಬೆಂಗಳೂರು.</p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="CKPLO96AV0"><a href="https://peepalmedia.com/namma-pride-bengaluru-rukmini-s-nair/">ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ</a></blockquote><iframe loading="lazy" class="wp-embedded-content" sandbox="allow-scripts" security="restricted"  title="&#8220;ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ&#8221; &#8212; Peepal Media" src="https://peepalmedia.com/namma-pride-bengaluru-rukmini-s-nair/embed/#?secret=MYV7UvpRpP#?secret=CKPLO96AV0" data-secret="CKPLO96AV0" width="600" height="338" frameborder="0" marginwidth="0" marginheight="0" scrolling="no"></iframe>
</div></figure>
]]></content:encoded>
					
		
		
			</item>
		<item>
		<title>ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ</title>
		<link>https://peepalmedia.com/namma-pride-bengaluru-rukmini-s-nair/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 28 Nov 2024 07:14:29 +0000</pubDate>
				<category><![CDATA[LGBTQ+]]></category>
		<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[fundumental rights]]></category>
		<category><![CDATA[gay]]></category>
		<category><![CDATA[Human rights]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[Namma Pride]]></category>
		<category><![CDATA[Pride March]]></category>
		<category><![CDATA[sexual minorities]]></category>
		<category><![CDATA[transgender]]></category>
		<guid isPermaLink="false">https://peepalmedia.com/?p=49742</guid>

					<description><![CDATA[&#8220;ನಮ್ಮ ಪ್ರೈಡ್&#8221; ಎಂದರೆ ನಮ್ಮ ಹೆಮ್ಮೆ, ನಮ್ಮ ಆತ್ಮಗೌರವ 2024 ರ ನವಂಬರ್24, ಭಾನುವಾರದಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಆವರಣದಿಂದ ಸಾವಿರಾರು ಲೈಂಗಿಕ ಅಲ್ಪಸಂಖ್ಯಾತರು ಕುಣಿಯುತ್ತಾ, ಹಾಡುತ್ತಾ ಮೆರವಣಿಗೆ ಹೊರಟಿದ್ದರು.&#160; ಈ ಮೆರವಣಿಗೆಯನ್ನು ಬೆಂಗಳೂರಿನ &#8220;ಸಿಎಸ್‌ಎಮ್‌ಆರ್&#8221; (Coalition for Sex Workers and Sexuality Minority Rights) ಎನ್ನುವ ಸರ್ಕಾರೇತರ ಸಂಸ್ಥೆಯೊಂದು ಆಯೋಜಿಸಿತ್ತು. &#8220;LGBTQIA+&#8221; &#8230;.ನ ಸಮುದಾಯದ ಸಾವಿರಾರು ಜನ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಮುದಾಯವನ್ನು ಬೆಂಬಲಿಸುವ ಇತರರೂ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಿಎಸ್‌ಎಮ್‌ಆರ್ ಸಂಸ್ಥೆಯು [&#8230;]]]></description>
										<content:encoded><![CDATA[
<pre class="wp-block-code"><code>LGBTQIA+ ಸಮುದಾಯದ ಮಕ್ಕಳು ಕುಟುಂಬ ವ್ಯವಸ್ಥೆಯಲ್ಲಿ ಅನುಭವಿಸುವ ನೋವು, ತೊಳಲಾಟಗಳು ಅವರ ಮಾನಸಿಕ ಆರೋಗ್ಯದ ಮೇಲೆ ಗಾಢ ಪರಿಣಾಮವನ್ನು ಬೀಡುತ್ತವೆ. ಹೆತ್ತವರಿಗೆ ತಮ್ಮ ಮಗು ಗೇ, ಲೆಸ್ಟಬಿಯನ್‌, ಟ್ರಾನ್ಸ್‌ ಜೆಂಡರ್‌, ಬೈಸೆಕ್ಷುವಲ್, ಇಂಟರ್‌ಸೆಕ್ಷುವಲ್‌ ಮುಂತಾದ ಪ್ರಕೃತಿ ಸಹಜ ಲೈಂಗಿಕತೆಯ ಜೀವವೆಂದು ತಿಳಿದ ಮೇಲೆ ಅವರಿಗೆ ನೀಡಬೇಕಾದ ಪ್ರೀತಿ-ಅಕ್ಕರೆ, ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯಗಳ ಬಗ್ಗೆ, ಮುಖ್ಯವಾಗಿ ಮಗುವಿನ ಗೊಂದಲ, ತೊಳಲಾಟಗಳಿಗೆ, ಭಯಕ್ಕೆ ಧೈರ್ಯವಾಗುವ ಬಗ್ಗೆ ತಾಯಿ ಪ್ರೀತಿಯಲ್ಲಿ ಸರಣಿ ಲೇಖನಗಳನ್ನು ಬರೆಯುತ್ತಾರೆ <strong>ರುಕ್ಮಿಣಿ ಎಸ್.ನಾಯರ್</strong></code></pre>



<p><strong>&#8220;ನಮ್ಮ ಪ್ರೈಡ್&#8221; ಎಂದರೆ ನಮ್ಮ ಹೆಮ್ಮೆ, ನಮ್ಮ ಆತ್ಮಗೌರವ</strong></p>



<p>2024 ರ ನವಂಬರ್24, ಭಾನುವಾರದಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಆವರಣದಿಂದ ಸಾವಿರಾರು ಲೈಂಗಿಕ ಅಲ್ಪಸಂಖ್ಯಾತರು ಕುಣಿಯುತ್ತಾ, ಹಾಡುತ್ತಾ ಮೆರವಣಿಗೆ ಹೊರಟಿದ್ದರು.&nbsp;</p>



<p>ಈ ಮೆರವಣಿಗೆಯನ್ನು ಬೆಂಗಳೂರಿನ &#8220;ಸಿಎಸ್‌ಎಮ್‌ಆರ್&#8221; (Coalition for Sex Workers and Sexuality Minority Rights) ಎನ್ನುವ ಸರ್ಕಾರೇತರ ಸಂಸ್ಥೆಯೊಂದು ಆಯೋಜಿಸಿತ್ತು. &#8220;LGBTQIA+&#8221; &#8230;.ನ ಸಮುದಾಯದ ಸಾವಿರಾರು ಜನ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಮುದಾಯವನ್ನು ಬೆಂಬಲಿಸುವ ಇತರರೂ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಿಎಸ್‌ಎಮ್‌ಆರ್ ಸಂಸ್ಥೆಯು ನೀಡಿದ ಬ್ಯಾನರ್, ಪ್ರಕಟಣಾ ಪತ್ರ ಹಾಗೂ ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ನಡೆದರು.&nbsp; ಪ್ರತಿಯೊಬ್ಬರಲ್ಲೂ ಶಿಸ್ತು, ಬದ್ಧತೆ ಮನೆಮಾಡಿತ್ತು. ತಮ್ಮ ಮನಸ್ಸಿಗೆ ಹಿಡಿಸಿದ, ತಮ್ಮ ಇಷ್ಟದ ಉಡುಗೆ ತೊಡುಗೆಗಳನ್ನು ಯಾವುದೇ ಅಳುಕಿಲ್ಲದೆ ತೊಟ್ಟಿದ್ದರು. ಎಲ್ಲರೂ ಸುಂದರವಾಗಿ ಹಾಗೂ ಆಕರ್ಷಕವಾಗಿ ಕಾಣುತ್ತಿದ್ದರು. ತಾವು ಯಾವುದೋ ಒಂದು ಹೊಸ ಲೋಕದಲ್ಲಿ ವಿಹರಿಸುತ್ತಿದ್ದಂತೆ ಸಂಭ್ರಮಿಸಿದರು.</p>



<p>ಇಲ್ಲಿ ಯಾರೂ ಒಬ್ಬರನ್ನೊಬ್ಬರು ಅವಹೇಳನ ಮಾಡುತ್ತಿರಲಿಲ್ಲ ಹಾಗೂ ಕೆಟ್ಟ ದೃಷ್ಟಿಯಿಂದ ನೋಡುತ್ತಿರಲಿಲ್ಲ. ಅಲ್ಲಿ ಬಂದಿದ್ದ ಅಷ್ಟೂ ಜನರೂ ಇತರರನ್ನು ಗೌರವಿಸುತ್ತಿದ್ದರು. ತಮ್ಮ ಲೈಂಗಿಕತೆಯ ಅಭಿವ್ಯಕ್ತಿಯ&nbsp; ಬಗ್ಗೆ ಯಾರಿಗೂ ಯಾವುದೇ ಹಿಂಜರಿಕೆ ಇರಲಿಲ್ಲ. ತಮ್ಮ ಸ್ನೇಹಿತರಗಳ ಜೊತೆ ಹಾಗೂ ಇತರರ ಜೊತೆ ಸಭ್ಯತೆಯಿಂದ ನಡೆದುಕೊಳ್ಳುತ್ತಿದ್ದರು. ಎಲ್ಲರೂ ನಿರ್ಭೆಡೆಯಿಂದ ಹಾಗೂ ನಿರ್ಭೀತಿಯಿಂದ ಸಂತೋಷವಾಗಿದ್ದರು. ವಾದ್ಯಘೋಷಗಳ ಜೊತೆ ಹೆಜ್ಜೆ ಹಾಕುತ್ತಾ ಕುಣಿಯುತ್ತ ತಮ್ಮ ಪ್ರೈಡ್ ಮೆರವಣಿಗೆಯ ಬಗ್ಗೆ ಹೆಮ್ಮೆಯಿಂದ ತಲೆಯೆತ್ತಿ ನಡೆಯುತ್ತಿದ್ದರು. ಕಂಠೀರವ ಕ್ರೀಡಾಂಗಣದಿಂದ ಸಹಸ್ರಾರು ಜನರು ಸುಮಾರು ಎರಡು ಕಿಲೋಮೀಟರ್ಗಳಷ್ಟು ದೂರ ಕಾಲ್ನಡಿಗೆಯಲ್ಲೇ ಕ್ರಮಿಸಿದರು. ಪರಸ್ಪರ ಖುಷಿಯಿಂದ ಮಾತನಾಡುತ್ತಾ, ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ರಸ್ತೆಯ ಸುತ್ತಮುತ್ತಲಿನ ಜನರಿಗೆ, ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರರಿಗೆ ಯಾವುದೇ ಅಡೆತಡೆಗಳನ್ನು ಮಾಡದೆ ಶಿಸ್ತು ಬದ್ಧವಾಗಿ ನಡೆದುಕೊಂಡರು.&nbsp;</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="576" src="https://peepalmedia.com/wp-content/uploads/2024/11/KMK6652-1024x576.jpg" alt="" class="wp-image-49747" style="width:585px;height:auto" srcset="https://peepalmedia.com/wp-content/uploads/2024/11/KMK6652-1024x576.jpg 1024w, https://peepalmedia.com/wp-content/uploads/2024/11/KMK6652-300x169.jpg 300w, https://peepalmedia.com/wp-content/uploads/2024/11/KMK6652-768x432.jpg 768w, https://peepalmedia.com/wp-content/uploads/2024/11/KMK6652-150x84.jpg 150w, https://peepalmedia.com/wp-content/uploads/2024/11/KMK6652-696x392.jpg 696w, https://peepalmedia.com/wp-content/uploads/2024/11/KMK6652-1068x601.jpg 1068w, https://peepalmedia.com/wp-content/uploads/2024/11/KMK6652.jpg 1200w" sizes="auto, (max-width: 1024px) 100vw, 1024px" /></figure></div>


<p>ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ರಾಜ್ಯದ ಪೊಲೀಸ್ ಪಡೆ ಇವರಿಗೆ ರಕ್ಷಣೆ ನೀಡಿತು. ಈ ಮೆರವಣಿಗೆಯಲ್ಲಿ ದೇಶದ ಹಲವು ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಲೈಂಗಿಕ ಅಲ್ಪಸಂಖ್ಯಾತರು ಪಾಲ್ಗೊಂಡಿದ್ದರು. ಇಲ್ಲಿ ಮೊದಲು ಗಮನಿಸಬೇಕಾದ ಅಂಶವೆಂದರೆ ತಾವು ಒಂಟಿಯಲ್ಲ, ತಮ್ಮಂತೆ ಈ ಸೃಷ್ಟಿಯಲ್ಲಿ, ಈ ಲೋಕದಲ್ಲಿ ಹಲವರು ಇದ್ದಾರೆ ಎನ್ನುವ ಅರಿವು ಈ ಮೆರವಣಿಗೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಲ್ಲೂ ಮೂಡಿತ್ತು. ಹಾಗಾಗಿ ಎಲ್ಲರ ಮುಖದಲ್ಲೂ ಅಂಜಿಕೆ, ಹೆದರಿಕೆಯ ಬದಲು ಮಂದಹಾಸ ಮೂಡಿತ್ತು. ಕೆಲವರಂತೂ ತುಂಬಾ ಭಾವುಕರಾದರು. ಮನಬಿಚ್ಚಿ ನಕ್ಕರು ಪರಸ್ಪರ ಹಸ್ತಲಾಘವವನ್ನು ಕೊಡುತ್ತಾ ಹೆಮ್ಮೆಯಿಂದ ಒಬ್ಬರ ಬೆನ್ನು ಇನ್ನೊಬ್ಬರು ತಟ್ಟಿದರು. ಮೆರವಣಿಗೆಯು ರಸ್ತೆಯಲ್ಲಿ ಸಾಗುತ್ತಿದ್ದಾಗ ಅಲ್ಲಲ್ಲಿ ರಸ್ತೆ ದಾಟುವುದಿದ್ದರೂ ಕೂಡ ಯಾವುದೇ ತೊಂದರೆಗಳನ್ನು ಕೊಡದೇ ಸಂಸ್ಥೆಯ ಸ್ವಯಂಸೇವಕರುಗಳು ಎಲ್ಲರನ್ನೂ ಮುನ್ನಡೆಸುತ್ತಿದ್ದರು.&nbsp;</p>



<p>ಈ ಮೆರವಣಿಗೆಯು &#8220;ಶ್ರೀ ಪುಟ್ಟಣ್ಣ ಚೆಟ್ಟಿ ಪುರಭವನದ&#8221; ವರೆಗೆ ಕೊನೆಗೊಂಡಿತು. ಈ ಸಮುದಾಯಕ್ಕೆ ಸಂಬಂಧಪಟ್ಟ ಸದಸ್ಯರುಗಳು ಪುರಭವನದ ಮುಂದಿನ ಮೆಟ್ಟಿಲುಗಳ ಮೇಲೆ ಕುಳಿತು ತಮ್ಮ ಸಮುದಾಯದ ಧ್ವಜಗಳನ್ನು ಹಿಡಿದು ಕೆಲವು ನಿಮಿಷಗಳ ಕಾಲ&nbsp; ಘೋಷಣೆಗಳನ್ನು ಕೂಗುತ್ತಾ&nbsp; ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಿತು. ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡವರೆಲ್ಲರೂ ರವೀಂದ್ರ ಕಲಾಕ್ಷೇತ್ರದ ಆವರಣದ &#8220;ಸಂಸ ಬಯಲು ರಂಗ ಮಂದಿರ&#8221;ದಲ್ಲಿ ಸೇರಿದರು. ಸಂಸ ಬಯಲು ರಂಗಮಂದಿರದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಂಸ ಬಯಲು ರಂಗ ಮಂದಿರದಲ್ಲಿ &#8220;ಸಿಎಸ್‌ಎಮ್‌ಆರ್&#8221; ಸಂಸ್ಥೆಯ ಸಿಬ್ಬಂದಿಗಳು ತಮ್ಮ ಸಂಸ್ಥೆ ಪ್ರಾರಂಭವಾದ ದಿನದಿಂದ ಹಿಡಿದು ಇಲ್ಲಿಯವರೆಗೂ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿದರು.</p>



<p>ಬೆಂಗಳೂರು ನಮ್ಮ ಪ್ರೈಡ್ ಮೆರವಣಿಗೆಯು 2008 ರಲ್ಲಿ ಪ್ರಾರಂಭವಾಯಿತು. 16 ವರ್ಷಗಳಿಂದ ಪ್ರತಿ ವರ್ಷದ ಜೂನ್ ತಿಂಗಳನ್ನು ಪ್ರೈಡ್ ತಿಂಗಳಾಗಿ ಪರಿಗಣಿಸಲಾಗಿದೆ. ಆದರೆ ನವೆಂಬರ್ ತಿಂಗಳ ಕೊನೆಯ ವಾರದಂದು ಫ್ರೈಡ್ ಮೆರವಣಿಗೆಯನ್ನು ನಡೆಸಲಾಗುತ್ತಿದೆ.&nbsp;</p>


<div class="wp-block-image">
<figure class="aligncenter size-full is-resized"><img loading="lazy" decoding="async" width="800" height="533" src="https://peepalmedia.com/wp-content/uploads/2024/11/deccanherald_import_sites_dh_files_articleimages_2022_11_23_file7dt72ouakib12dtnn4ia-1164873-1669144455.avif" alt="" class="wp-image-49748" style="width:508px;height:auto" srcset="https://peepalmedia.com/wp-content/uploads/2024/11/deccanherald_import_sites_dh_files_articleimages_2022_11_23_file7dt72ouakib12dtnn4ia-1164873-1669144455.avif 800w, https://peepalmedia.com/wp-content/uploads/2024/11/deccanherald_import_sites_dh_files_articleimages_2022_11_23_file7dt72ouakib12dtnn4ia-1164873-1669144455-300x200.jpg 300w, https://peepalmedia.com/wp-content/uploads/2024/11/deccanherald_import_sites_dh_files_articleimages_2022_11_23_file7dt72ouakib12dtnn4ia-1164873-1669144455-768x512.jpg 768w, https://peepalmedia.com/wp-content/uploads/2024/11/deccanherald_import_sites_dh_files_articleimages_2022_11_23_file7dt72ouakib12dtnn4ia-1164873-1669144455-150x100.jpg 150w, https://peepalmedia.com/wp-content/uploads/2024/11/deccanherald_import_sites_dh_files_articleimages_2022_11_23_file7dt72ouakib12dtnn4ia-1164873-1669144455-696x464.jpg 696w" sizes="auto, (max-width: 800px) 100vw, 800px" /></figure></div>


<p>&#8220;ಸಿಎಸ್‌ಎಮ್‌ಆರ್&#8221; ಸಂಸ್ಥೆಯ ಪ್ರಮುಖ ಉದ್ದೇಶವೇನೆಂದರೆ, ಭಾಷೆ, ಸಾಮಾಜಿಕ ಆರ್ಥಿಕ ಹಿನ್ನೆಲೆ, ಲಿಂಗತ್ವ ಗುರುತಿಸುವಿಕೆಯ ದೃಷ್ಟಿಕೋನಗಳನ್ನು ಲೆಕ್ಕಿಸದೆ ಎಲ್ಲಾ ಧ್ವನಿಗಳನ್ನು ಗೌರವಿಸುವುದು.  LGBTQIA+ ಸಮುದಾಯದ ಎಲ್ಲಾ ಸದಸ್ಯರನ್ನು ಬೆಂಬಲಿಸುವ ಏಕೀಕೃತ ಪ್ರೈಡ್ ನಡೆಸುವುದು ಇವರ ಬದ್ಧತೆಯಾಗಿದೆ. ಪ್ರತಿಯೊಂದು ಪ್ರಶ್ನೆಗಳನ್ನು, ಧ್ವನಿಗಳನ್ನು ಚಿಂತನಾಶೀಲವಾಗಿ ಪರಿಗಣಿಸಲು, ಪರಸ್ಪರ ಗೌರವಿಸಲು, ತಿಳುವಳಿಕೆ ಮೂಡಿಸಲು ಒಗ್ಗಟ್ಟಿನ ಮೇಲೆ ನಿರ್ಮಿಸಲಾದ ಚಳುವಳಿಯ ಕಡೆಗೆ ತಮ್ಮೊಂದಿಗೆ ಕೆಲಸ ಮಾಡಲು ಈ ಸಮುದಾಯವು ಕೇಳಿಕೊಳ್ಳುತ್ತದೆ.</p>



<p>ಅಂದಿನ ಸಂಜೆ ಸಿ ಎಸ್ ಎಂ ಆರ್ ಸಂಸ್ಥೆಯು ಆಯೋಜಿಸಿದ್ದ ಹೆಮ್ಮೆಯ ಸಂಜೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾಮನಬಿಲ್ಲಿನಂತೆ ಒಬ್ಬೊಬ್ಬರ ಪ್ರತಿಭೆಯೂ ಅಷ್ಟೇ ಕಲರ್‌ಫುಲ್!</p>



<p>&#8220;LGBTQIA+ &#8221; ಸಮುದಾಯದವರಿಂದ ಮೊದಲಿಗೆ ಒಂದು ಸೊಗಸಾದ ಶಿವನ ನೃತ್ಯದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ನಡೆದ ತಾಯಿ-ಮಗನ ನಡುವಿನ ಸಂಬಂಧದ ಗಾಢತೆಯನ್ನು ತೋರಿಸುವ ನೃತ್ಯವಂತೂ ಅಲ್ಲಿ ನೆರೆದಿದ್ದ ವೀಕ್ಷಕರ ಕಣ್ಣಂಚಲ್ಲಿ ಕಂಬನಿ ತರಿಸಿತು. ಕೆಲವರಂತೂ ಭಾವಕತೆಯಿಂದ ಗದ್ಗದಿತರಾದರು. ಈ ನೃತ್ಯ ರೂಪಕವು ತಾಯಿ ಹಾಗೂ &#8220;LGBTQIA+&#8221;&nbsp; ಸಂತಾನದ ಮಾನಸಿಕ ತೊಳಲಾಟವನ್ನು ಪ್ರತಿಬಿಂಬಿಸಿ, ಅಂತ್ಯದಲ್ಲಿ ತಾಯಿ ಹಾಗೂ ಸಂತಾನದ ಸಮ್ಮಿಲನವನ್ನು ಮನಮುಟ್ಟುವಂತೆ ಅಭಿನಯಿಸಿದ್ದು ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಕಣ್ಣುಗಳನ್ನೂ ಒದ್ದೆ ಮಾಡಿತ್ತು. ನಂತರ ಹಲವಾರು ಕಲಾಕಾರರು ತಮ್ಮ ಪ್ರತಿಭೆಗಳ ಅನಾವರಣ ಮಾಡಿದರು. ಪ್ರತಿಯೊಂದು ನೃತ್ಯ ರೂಪಕವೂ ಒಂದು ಸಂದೇಶವನ್ನು ಒಳಗೊಂಡಿತ್ತು. ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಸಮುದಾಯದ ಜನರು ಯಾವುದೇ ಅಂಜಿಕೆ ಇಲ್ಲದೆ ಹಾಡಿನ ತಾಳಕ್ಕೆ ತಕ್ಕಂತೆ ಮನ ಬಿಚ್ಚಿ ಸಂತೋಷದಿಂದ ಕುಣಿದು ಕುಪ್ಪಳಿಸಿದರು. ತಮ್ಮ ಮನದಾಳದಲ್ಲಿ ಅಡಗಿಸಿಟ್ಟಿದ್ದ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಖುಷಿಯಿಂದ ಕೇಕೆ ಹಾಕಿದರು. ಮನಸ್ಪೂರ್ತಿಯಾಗಿ ಒಬ್ಬರನ್ನು ಒಬ್ಬರು ಅಭಿನಂದಿಸಿದರು. &#8220;<strong>ತಮ್ಮ ಜನ್ಮ ಒಂದು ಶಾಪವಲ್ಲ. ನಮಗೂ ಎಲ್ಲರಂತೆ ಬದುಕುವ ಆಸೆ ಹಾಗೂ ಹಕ್ಕು ಇದೆ</strong>&#8221; ಎಂಬ ನಂಬಿಕೆಯನ್ನು ಮತ್ತೆ ಮತ್ತೆ ಗಟ್ಟಿಗೊಳಿಸಿಕೊಂಡರು.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="819" height="1024" src="https://peepalmedia.com/wp-content/uploads/2024/11/406019977_18398904322044982_1283927149738337247_n-819x1024.jpg" alt="" class="wp-image-49749" style="width:485px;height:auto" srcset="https://peepalmedia.com/wp-content/uploads/2024/11/406019977_18398904322044982_1283927149738337247_n-819x1024.jpg 819w, https://peepalmedia.com/wp-content/uploads/2024/11/406019977_18398904322044982_1283927149738337247_n-240x300.jpg 240w, https://peepalmedia.com/wp-content/uploads/2024/11/406019977_18398904322044982_1283927149738337247_n-768x960.jpg 768w, https://peepalmedia.com/wp-content/uploads/2024/11/406019977_18398904322044982_1283927149738337247_n-150x188.jpg 150w, https://peepalmedia.com/wp-content/uploads/2024/11/406019977_18398904322044982_1283927149738337247_n-300x375.jpg 300w, https://peepalmedia.com/wp-content/uploads/2024/11/406019977_18398904322044982_1283927149738337247_n-696x870.jpg 696w, https://peepalmedia.com/wp-content/uploads/2024/11/406019977_18398904322044982_1283927149738337247_n-1068x1335.jpg 1068w, https://peepalmedia.com/wp-content/uploads/2024/11/406019977_18398904322044982_1283927149738337247_n.jpg 1080w" sizes="auto, (max-width: 819px) 100vw, 819px" /></figure></div>


<p>ಈ ಪ್ರಕೃತಿಯಲ್ಲಿ ಜೀವಿಸುವಂತಹ ಎಲ್ಲಾ ಜೀವಸಂಕುಲಗಳೂ ಸ್ವಾಭಿಮಾನದಿಂದ ಗೌರವಪೂರ್ವಕವಾಗಿ ಬದುಕುವ ಹಕ್ಕು ಇದೆ . ಮಾನವರಲ್ಲಿ ಮಾನವತೆ ಇರಬೇಕು. ಎಲ್ಲರನ್ನೂ ಗೌರವಪೂರ್ವಕವಾಗಿ ಕಾಣಬೇಕು ಹಾಗೂ ಬೇಧಭಾವಗಳು ಸಲ್ಲದು. ಎಲ್ಲರೂ ಒಂದೇ ಎನ್ನುವ ಮನೋಭಾವವಿರಬೇಕು. ಮಾನವ ಹಕ್ಕುಗಳ ಮೇಲೆ ಬೆಳಕು ಚೆಲ್ಲಿ, ಎಲ್ಲರಿಗೂ ಸಮಾಧಾನಕರವಾದ ಜೀವನ ನಡೆಸುವ ಹಕ್ಕು ಇದೆ ಎನ್ನುವ ಅರಿವನ್ನು ಎಲ್ಲರಲ್ಲೂ ಮೂಡಿಸಲು ಪ್ರತೀ ವರ್ಷವೂ ಈ ಹೆಮ್ಮೆಯ ಮೆರವಣಿಗೆಯನ್ನು ಏರ್ಪಡಿಸಿ&nbsp;ಆಚರಿಸಿಕೊಂಡು ಬರಲಾಗಿದೆ.</p>



<p><strong>&#8220;LGBTQIA+&#8221; ಎಂದರೆ ಏನು?&nbsp;</strong></p>



<p>ಪ್ರತಿಯೊಂದು ಜೀವಿಗೂ ತನ್ನದಾದ ರೀತಿಯಲ್ಲಿ ಬದುಕುವ ಹಕ್ಕನ್ನು ಈ ಪ್ರಕೃತಿಯು ನೀಡಿದೆ. ಇಲ್ಲದಿದ್ದರೆ ವೈವಿಧ್ಯಮಯ ವಿಭಿನ್ನ ಜೀವರಾಶಿಗಳು, ಕ್ರಿಮಿಕೀಟಗಳು, ಕಣ್ಣಿಗೆ ಕಾಣದಂತಹ ಸೂಕ್ಷ್ಮಾಣು ಜೀವಿಗಳು, ಸಸ್ಯರಾಶಿಗಳು, ಜಲಚರಗಳು, ಬಾನಾಡಿಗಳು, ಇತ್ತ ಪ್ರಾಣಿಯೂ ಪಕ್ಷಿಯೂ ಅಲ್ಲದ ಅನೇಕ ಜೀವಿಗಳು, ಭೂಚರ, ಜಲಚರ, ಎರಡೂ ಅಲ್ಲದ ಉಭಯವಾಸಿಗಳು ಹೀಗೆ ಅನೇಕ ಜೀವಸಂಕುಲಗಳು ಈ ಪ್ರಕೃತಿಯಲ್ಲಿ ವೈವಿಧ್ಯಮಯವಾಗಿ ಜೀವಿಸುತ್ತಿರಲಿಲ್ಲ. ಪ್ರಕೃತಿಯೇ ಕೊಟ್ಟ ಜೀವವನ್ನು ಹಾಗೂ ಆ ಜೀವಿ ಬದುಕುತ್ತಿರುವ ರೀತಿಯು ಪ್ರಕೃತಿಗೆ ಇಷ್ಟವಾಗದಿದ್ದಲ್ಲಿ ಅದುವೇ ಅದನ್ನು ನಾಶಪಡಿಸುವತ್ತ ಹೆಜ್ಜೆ ಇಡುತ್ತಿತ್ತು. ನಾವು ಮಾನವರು ಸಂಘ ಜೀವಿಗಳು, ಸಾಮಾಜ ಜೀವಿಗಳು. ಇಡೀ ಭೂಮಂಡಲದಲ್ಲಿ ಇನ್ನಿತರ ಜೀವಿಗಳ ಜೊತೆಗೆ ಈ ಭೂಮಿಯನ್ನು ಹಂಚಿಕೊಂಡು ನಮ್ಮ ಪ್ರಭುತ್ವವನ್ನು ಈ ಭೂಮಿಯ ಮೇಲೆ ಸ್ಥಾಪಿಸಲು ಹವಣಿಸುವ ಏಕೈಕ ಜೀವಿ ಎಂದರೆ ಅದು ಮಾನವ ಮಾತ್ರ.&nbsp;</p>



<p>ಪ್ರತಿಯೊಂದು&nbsp; ಕಡೆಯೂ ತನ್ನ ಹಕ್ಕು ಸ್ವಾಮ್ಯತೆಯನ್ನು ಸಾಧಿಸುತ್ತಾ, ತನ್ನಿಷ್ಟದಂತೆಯೇ ಇತರ ಜೀವಿಯು ಜೀವಿಸಬೇಕೆಂದು ಬಯಸುವುದು ಮಾನವ ಮಾತ್ರ. ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನು ಬಳಸುತ್ತಾ ಬದುಕುತ್ತಿರುವುದು ಕೂಡ ಮಾನವನೇ. ಪ್ರಕೃತಿಯಲ್ಲಿ ಜೀವಿಸುವ ಇತರ ಜೀವರಾಶಿಗಳಲ್ಲಿ ಐಕ್ಯತೆಯನ್ನು ಕಾಣುತ್ತೇವೆ. ಪ್ರಾಣಿ ಪಕ್ಷಿಗಳಲ್ಲೂ ವಿಭಿನ್ನ ರೀತಿಯ ಲೈಂಗಿಕತೆಯನ್ನು ಕಾಣುತ್ತೇವೆ. ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಮಾತ್ರ ಇತರೆ ಜೀವಿಗಳನ್ನು ಕೊಲ್ಲುತ್ತದೆ. ಸಸ್ಯಗಳನ್ನು ತಿನ್ನುತ್ತವೆ. ಹಾಗೆಯೇ ತಮ್ಮ ಸಂತಾನಗಳು ಹೇಗೇ ಇದ್ದರೂ ಏನೇ ಆಗಿದ್ದರೂ, ಅವುಗಳನ್ನು ಒಂದು ಹಂತದ ವರೆಗೆ ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲಹಿ ಆರೈಕೆ ಮಾಡಿ, ಅವು ಸ್ವತಃ ತನ್ನ ಆಹಾರ, ವಸತಿ, ಹಾಗೂ ಜೀವನವನ್ನು ರೂಪಿಸಿಕೊಳ್ಳಲು ಸದೃಢರಾದ ಕೂಡಲೇ ಅವುಗಳನ್ನು ಸ್ವತಂತ್ರವಾಗಿ ಬದುಕಲು ಬಿಡುತ್ತವೆ.&nbsp;</p>



<p>ನಾವು ಮಾನವರು ಕೂಡಾ ನಮ್ಮಿಷ್ಟದಂತೆ ಸಂತಾನಗಳನ್ನು ಪಡೆಯುತ್ತೇವೆ. ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲುಹುತ್ತೇವೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="819" height="1024" src="https://peepalmedia.com/wp-content/uploads/2024/11/406068236_18398904304044982_2854410074518661921_n-819x1024.jpg" alt="" class="wp-image-49750" style="width:483px;height:auto" srcset="https://peepalmedia.com/wp-content/uploads/2024/11/406068236_18398904304044982_2854410074518661921_n-819x1024.jpg 819w, https://peepalmedia.com/wp-content/uploads/2024/11/406068236_18398904304044982_2854410074518661921_n-240x300.jpg 240w, https://peepalmedia.com/wp-content/uploads/2024/11/406068236_18398904304044982_2854410074518661921_n-768x960.jpg 768w, https://peepalmedia.com/wp-content/uploads/2024/11/406068236_18398904304044982_2854410074518661921_n-150x188.jpg 150w, https://peepalmedia.com/wp-content/uploads/2024/11/406068236_18398904304044982_2854410074518661921_n-300x375.jpg 300w, https://peepalmedia.com/wp-content/uploads/2024/11/406068236_18398904304044982_2854410074518661921_n-696x870.jpg 696w, https://peepalmedia.com/wp-content/uploads/2024/11/406068236_18398904304044982_2854410074518661921_n-1068x1335.jpg 1068w, https://peepalmedia.com/wp-content/uploads/2024/11/406068236_18398904304044982_2854410074518661921_n.jpg 1080w" sizes="auto, (max-width: 819px) 100vw, 819px" /></figure></div>


<p>ಆಹಾರ, ಉಡುಗೆ ತೊಡುಗೆ ವಸತಿ ವಿಧ್ಯಾಭ್ಯಾಸ, ಐಷಾರಾಮವಾಗಿ ಬದುಕಲು ಬೇಕಾದ ಸಕಲ ಸೌಲಭ್ಯಗಳನ್ನೂ ಮಾಡಿಕೊಡುತ್ತೇವೆ. ಒಳ್ಳೆಯ ಗುಣ ನಡತೆಗಳನ್ನು ಕೂಡಾ ಕಲಿಸುತ್ತೇವೆ. ಆದರೆ ಸಣ್ಣವಯಸ್ಸಿನಿಂದಲೇ ಅವರಲ್ಲಿ ಉಂಟಾಗುವ ಭಾವನಾತ್ಮಕ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಲವರು ಸೋತು ಹೋಗುತ್ತೇವೆ. ನಮ್ಮ ಸಂತಾನಗಳು ಹದಿಹರೆಯಕ್ಕೆ ಬಂದಾಗ ಅವರಲ್ಲಿ ಉಂಟಾಗುವ ದೈಹಿಕ, ಮಾನಸಿಕ, ಭಾವನಾತ್ಮಕವಾಗಿ ಬದಲಾವಣೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುವುದರಲ್ಲಿ ಸೋತು ಹೋಗುತ್ತೇವೆ. ಸಹಜವೆನಿಸುವ ಅರಿವನ್ನು ಮಾತ್ರ ಕೊಡುತ್ತೇವೆ. ಅಸಹಜವೆನಿಸುವ ಎಷ್ಟೋ ಸಂಗತಿಗಳು ನಮಗೂ ತಿಳಿದಿರುವುದಿಲ್ಲ ಹಾಗಾಗಿ ನಮ್ಮ ಸಂತಾನಗಳಿಗೆ ಅರಿವನ್ನು ಮೂಡಿಸುವುದು ನಮ್ಮಿಂದ ಸಾಧ್ಯವಾಗುವುದಿಲ್ಲ.&nbsp;</p>



<p>ಹದಿಹರೆಯಕ್ಕೆ ಬಂದಾಗ ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ. ಪ್ರಪಂಚದ ಪ್ರತೀ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಕೌತುಕವಿರುತ್ತದೆ. ತನ್ನ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವ ಕುತೂಹಲವಿರುತ್ತದೆ. ಭಾವನಾತ್ಮಕವಾಗಿ ಗೊಂದಲಕ್ಕೆ ಒಳಗಾಗುತ್ತಾರೆ. ಹಾಗೂ ತಮ್ಮದೇ ಓರಗೆಯ ಮಕ್ಕಳೊಂದಿಗೆ ತಮ್ಮನ್ನು ಹೋಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಮ್ಮ ಗುಣದಲ್ಲಿ, ರೂಪದಲ್ಲಿ, ದೇಹಾಕೃತಿಯಲ್ಲಿ, ಭಾವನೆಗಳಲ್ಲಿ ವ್ಯತ್ಯಾಸಗಳನ್ನು ಕಂಡರೆ ಆ ಮಕ್ಕಳು ಕುಗ್ಗಿ ಹೋಗುತ್ತಾರೆ. ತಮಗೇನೋ ಆಗಿದೆ. ತಾವು ಎಲ್ಲರಂತೆ ಇಲ್ಲ ಎಂಬ ಕೊರಗು ಅವರನ್ನು ಕಾಡುತ್ತದೆ. ಇತ್ತ ತನ್ನ ಓರಗೆಯವರ ಜೊತೆ ಅಥವಾ ತಮ್ಮ ಪೋಷಕರ ಜೊತೆ ಈ ವಿಷಯಗಳನ್ನು ಹಂಚಿಕೊಳ್ಳಲು ಹೆದರಿ ಹಿಂಜರಿಯುತ್ತಾರೆ. ಇವೆಲ್ಲವೂ ತಮ್ಮ ದೇಹದಲ್ಲಿ ಉಂಟಾಗುವ ರಸದೂತಗಳ ಬದಲಾವಣೆಗಳಿಂದ ಎನ್ನುವುದು ಅವರಿಗೆ ತಿಳಿಯದಾಗುತ್ತದೆ.&nbsp;</p>



<p>ಈ ಪ್ರಾಯದಲ್ಲಿ ಇದ್ದಕ್ಕಿದ್ದಂತೆ ಆಗುವ ಬದಲಾವಣೆಗಳಿಂದ ಮಕ್ಕಳು ಕಂಗೆಡುತ್ತಾರೆ. ತಮ್ಮ ದೇಹಾಕೃತಿಗೆ ಹೊಂದದಂತಹ ಭಾವನೆಗಳು ತಮ್ಮಲ್ಲಿ ಉತ್ಪತ್ತಿಯಾಗುತ್ತಿರುವುದನ್ನು ಅರಿತ ಮಕ್ಕಳು ಗೊಂದಲದಿಂದ ಯೋಚನೆಗೆ ಒಳಗಾಗುತ್ತಾರೆ. ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಉಂಟಾಗುವ ಬದಲಾವಣೆಗಳನ್ನು ಅರಿಯದೇ ಪೋಷಕರಲ್ಲಿ ಹಾಗೂ ಸ್ನೇಹಿತ/&nbsp; ಸ್ನೇಹಿತೆಯರಲ್ಲಿ ಹೇಳಿಕೊಂಡು ತಮ್ಮ ಸಂದೇಹವನ್ನು ಪರಿಹರಿಸಿಕೊಳ್ಳಲು ಸಂಕೋಚಪಡುತ್ತಾರೆ. ಎಲ್ಲರಂತೆ ನಾನು ಅಲ್ಲ. ನಾನೇಕೆ ವಿಭಿನ್ನವಾಗಿದ್ದೇನೆ ಎನ್ನುವ ಪ್ರಶ್ನೆ ಮನಸ್ಸಲ್ಲಿ ಕಾಡತೊಡಗಿದಾಗ ಆದಷ್ಟೂ ಒಂಟಿಯಾಗಿರಲು ಪ್ರಯತ್ನಿಸುತ್ತಾರೆ. ಯಾರಲ್ಲೂ ಹೆಚ್ಚು ಮಾತನಾಡದೇ ಯಾರೊಂದಿಗೂ ಬೆರೆಯದೇ ಆದಷ್ಟೂ ಮೌನವಾಗಿ ಇರಲು ಪ್ರಯತ್ನಿಸುತ್ತಾರೆ.&nbsp;</p>



<p>ಮುಂದುವರಿಯುತ್ತದೆ&#8230;</p>



<p><strong>ಲೇಖನ:</strong> <strong>ರುಕ್ಮಿಣಿ ಎಸ್.ನಾಯರ್</strong></p>



<p></p>
]]></content:encoded>
					
		
		
			</item>
		<item>
		<title>ಅನುಸೂಯಾ ಹೋಗಿ ಅನುಕಾಂತಿರ್ ಆಗಿ ಲಿಂಗ ಬದಲಿಸಿಕೊಂಡ IRS ಅಧಿಕಾರಿ</title>
		<link>https://peepalmedia.com/anusuya-is-an-irs-officer-who-changed-her-gender-to-anukanthir/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 10 Jul 2024 08:12:27 +0000</pubDate>
				<category><![CDATA[ವಿಶೇಷ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lgbtqi]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[transgender]]></category>
		<category><![CDATA[writing]]></category>
		<guid isPermaLink="false">https://peepalmedia.com/?p=42034</guid>

					<description><![CDATA[ಹೊಸದಿಲ್ಲಿ: ಮಹಿಳಾ IRS ಅಧಿಕಾರಿಯಯೊಬ್ಬರು ಪುರುಷರಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದು, ಭಾರತದ ನಾಗರಿಕ ಸೇವೆಗಳ ಇತಿಹಾಸದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ಮೊದಲ ಅಧಿಕಾರಿ ಎನಿಸಿಕೊಂಡಿದ್ದಾರೆ. ಹೈದರಾಬಾದ್ ನ ಕೇಂದ್ರೀಯ ಎಕ್ಸೈಸ್ ಕಸ್ಟಮ್ಸ್ ಎಕ್ಸೈಸ್ ಮತ್ತು ಸೇವಾ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಪ್ರಾದೇಶಿಕ ಪೀಠದಲ್ಲಿ ಜಂಟಿ ಆಯುಕ್ತರಾಗಿ ಸೇವೆ ಅನಸೂಯಾ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳವಾರದಿಂದ ಅವರು ತನ್ನ ಸರ್ಕಾರಿ ದಾಖಲೆಗಳಲ್ಲಿ ತಮ್ಮ ಹೆಸರನ್ನು ಎಂ ಅನುಕಾಂತಿರ್‌ ಎಂದು ಲಿಂಗವನ್ನು ಪುರುಷ ಎಂದು ತಿದ್ದುಪಡಿಗಳನ್ನು ಮಾಡಿಕೊಂಡಿದ್ದಾರೆ. ಈಗ ಅವರು [&#8230;]]]></description>
										<content:encoded><![CDATA[
<p><strong>ಹೊಸದಿಲ್ಲಿ:</strong> ಮಹಿಳಾ IRS ಅಧಿಕಾರಿಯಯೊಬ್ಬರು ಪುರುಷರಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದು, ಭಾರತದ ನಾಗರಿಕ ಸೇವೆಗಳ ಇತಿಹಾಸದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ಮೊದಲ ಅಧಿಕಾರಿ ಎನಿಸಿಕೊಂಡಿದ್ದಾರೆ.</p>



<p>ಹೈದರಾಬಾದ್ ನ ಕೇಂದ್ರೀಯ ಎಕ್ಸೈಸ್ ಕಸ್ಟಮ್ಸ್ ಎಕ್ಸೈಸ್ ಮತ್ತು ಸೇವಾ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಪ್ರಾದೇಶಿಕ ಪೀಠದಲ್ಲಿ ಜಂಟಿ ಆಯುಕ್ತರಾಗಿ ಸೇವೆ ಅನಸೂಯಾ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳವಾರದಿಂದ ಅವರು ತನ್ನ ಸರ್ಕಾರಿ ದಾಖಲೆಗಳಲ್ಲಿ ತಮ್ಮ ಹೆಸರನ್ನು ಎಂ ಅನುಕಾಂತಿರ್‌ ಎಂದು ಲಿಂಗವನ್ನು ಪುರುಷ ಎಂದು ತಿದ್ದುಪಡಿಗಳನ್ನು ಮಾಡಿಕೊಂಡಿದ್ದಾರೆ.  ಈಗ ಅವರು ಪುರುಷ ನಾಗರಿಕ ಸೇವಾ ಅಧಿಕಾರಿಯಾಗಿದ್ದಾರೆ.</p>



<p>&#8220;2013ನೇ ಬ್ಯಾಚ್ ನ ಐಆರ್ಎಸ್ ಅಧಿಕಾರಿಯಾಗಿರುವ ಎಂ.ಅನುಸೂಯ ಪ್ರಸ್ತುತ ಹೈದರಾಬಾದ್ ನ ಸಿಇಎಸ್ ಟಿಎಟಿಯಲ್ಲಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರು ಪುರುಷರಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡು  ತಮ್ಮ ಹೆಸರನ್ನು ಕುಮಾರಿ ಎಂ.ಅನಸೂಯಾ ಬದಲಾಗಿ ಶ್ರೀ ಎಂ.ಅನುಕಾಂತಿರ್ ಸೂರ್ಯ ಎಂದು ಬದಲಿಸಿಕೊಂಡಿದ್ದಾರೆ. ಅವರನ್ನು ಇನ್ನು ಮೇಲೆ ಪುರುಷ ಅಧಿಕಾರಿ ಎಂದೇ ಸಂಬೋಧಿಸಬೇಕುʼ ಎಂದು ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ. </p>



<p>ಇನ್ನು ಮುಂದೆ ಎಲ್ಲ ದಾಖಲೆಗಳಲ್ಲಿ ಅವರ ಹೆಸರನ್ನು ಎಂ.ಅನುಕಾಂತಿರ್ ಸೂರ್ಯ ಎಂದು ಬದಲಿಸಲಾಗುತ್ತಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ತನ್ನ ಅಧಿನ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. </p>
]]></content:encoded>
					
		
		
			</item>
	</channel>
</rss>
