<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>translation day &#8211; Peepal Media</title>
	<atom:link href="https://peepalmedia.com/tag/translation-day/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 30 Sep 2022 06:19:22 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>translation day &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>೧೯೭೨ರ ಘಟಿಕೋತ್ಸವದಲ್ಲಿ ಒಂದು ಭಾಷಣ: ಅಲೀಸ್ ವಾಕರ್</title>
		<link>https://peepalmedia.com/1972ra-ghaticotsavadalli-ondu-bhashana-alice-walker/</link>
		
		<dc:creator><![CDATA[Peepal Media]]></dc:creator>
		<pubDate>Fri, 30 Sep 2022 05:35:30 +0000</pubDate>
				<category><![CDATA[ವಿಶೇಷ]]></category>
		<category><![CDATA[Alice Walker]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[translation day]]></category>
		<category><![CDATA[writing]]></category>
		<guid isPermaLink="false">https://peepalmedia.com/?p=8116</guid>

					<description><![CDATA[ಕನ್ನಡಕ್ಕೆ: ಎಂ.ಆರ್. ಕಮಲ ಪ್ರತಿ ವರ್ಷದ ಸೆಪ್ಟೆಂಬರ್‌ ತಿಂಗಳ ೩೦ನೇ ದಿನವನ್ನು ʼವಿಶ್ವ ಅನುವಾದ ದಿನʼ ವನ್ನಾಗಿ ಆಚರಿಸಲಾಗುತ್ತದೆ. ತಮ್ಮ ಅನುವಾದದ ಮೂಲಕ ದೇಶ, ಭಾಷೆ, ಸಂಸ್ಕೃತಿಗಳನ್ನು ಜೋಡಿಸುವ ಎಲ್ಲಾ ಅನುವಾದಕರಿಗೂ ಪೀಪಲ್‌ ಮೀಡಿಯಾ ಶುಭಾಶಯಗಳನ್ನು ಸಲ್ಲಿಸುತ್ತದೆ. (ಅಲೀಸ್ ವಾಕರ್ ಪ್ರಸಿದ್ಧ &#160;ಆಫ್ರಿಕನ್-ಅಮೇರಿಕನ್ &#160;ಕವಿ, ಕಾದಂಬರಿಕಾರ್ತಿ ಮತ್ತು ಸ್ತ್ರೀವಾದಿ ಚಿಂತಕಿ. ಇವರ `ಕಲರ್ ಪರ್ಪಲ್&#8217; ಕಾದಂಬರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದಿದೆ.&#160;`ಇನ್ ಸರ್ಚ್ ಆಫ್ ಅವರ್‌ ಮದರ್ಸ್ ಗಾರ್ಡನ್ಸ್&#8217; ಅಲೀಸ್ ವಾಕರ್ &#160;ಅವರ ಭಾಷಣ, ಲೇಖನ, ಪ್ರಬಂಧಗಳನ್ನು [&#8230;]]]></description>
										<content:encoded><![CDATA[
<p style="font-size:20px"><strong>ಕನ್ನಡಕ್ಕೆ: ಎಂ.ಆರ್.</strong> <strong>ಕಮಲ</strong></p>



<p style="font-size:20px"><strong>ಪ್ರತಿ ವರ್ಷದ ಸೆಪ್ಟೆಂಬರ್‌ ತಿಂಗಳ ೩೦ನೇ ದಿನವನ್ನು </strong><strong>ʼ</strong><strong>ವಿಶ್ವ ಅನುವಾದ ದಿನ</strong><strong>ʼ </strong><strong>ವನ್ನಾಗಿ ಆಚರಿಸಲಾಗುತ್ತದೆ. ತಮ್ಮ ಅನುವಾದದ ಮೂಲಕ ದೇಶ, ಭಾಷೆ, ಸಂಸ್ಕೃತಿಗಳನ್ನು ಜೋಡಿಸುವ ಎಲ್ಲಾ ಅನುವಾದಕರಿಗೂ ಪೀಪಲ್‌ ಮೀಡಿಯಾ ಶುಭಾಶಯಗಳನ್ನು ಸಲ್ಲಿಸುತ್ತದೆ.</strong></p>


<div class="wp-block-image">
<figure class="alignleft size-full is-resized"><img fetchpriority="high" decoding="async" src="https://peepalmedia.com/wp-content/uploads/2022/09/WhatsApp-Image-2022-09-29-at-7.09.54-PM.jpeg" alt="" class="wp-image-8118" width="261" height="349" srcset="https://peepalmedia.com/wp-content/uploads/2022/09/WhatsApp-Image-2022-09-29-at-7.09.54-PM.jpeg 320w, https://peepalmedia.com/wp-content/uploads/2022/09/WhatsApp-Image-2022-09-29-at-7.09.54-PM-225x300.jpeg 225w, https://peepalmedia.com/wp-content/uploads/2022/09/WhatsApp-Image-2022-09-29-at-7.09.54-PM-150x200.jpeg 150w, https://peepalmedia.com/wp-content/uploads/2022/09/WhatsApp-Image-2022-09-29-at-7.09.54-PM-300x400.jpeg 300w" sizes="(max-width: 261px) 100vw, 261px" /><figcaption><strong>ಅಲೀಸ್ ವಾಕರ್</strong></figcaption></figure></div>


<p style="font-size:20px"><strong>(ಅಲೀಸ್ ವಾಕರ್ ಪ್ರಸಿದ್ಧ &nbsp;ಆಫ್ರಿಕನ್-ಅಮೇರಿಕನ್ &nbsp;ಕವಿ, ಕಾದಂಬರಿಕಾರ್ತಿ ಮತ್ತು ಸ್ತ್ರೀವಾದಿ ಚಿಂತಕಿ. ಇವರ `ಕಲರ್ ಪರ್ಪಲ್&#8217; ಕಾದಂಬರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದಿದೆ.&nbsp;`ಇನ್ ಸರ್ಚ್ ಆಫ್ ಅವರ್‌ ಮದರ್ಸ್ ಗಾರ್ಡನ್ಸ್&#8217; ಅಲೀಸ್ ವಾಕರ್ &nbsp;ಅವರ ಭಾಷಣ, ಲೇಖನ, ಪ್ರಬಂಧಗಳನ್ನು ಒಳಗೊಂಡಿರುವ ಪುಸ್ತಕ. ಆಫ್ರಿಕನ್-ಅಮೇರಿಕನ್ ಸಮಾಜದ ಬದುಕಿನ ಕಷ್ಟಸುಖ, ಏಳುಬೀಳುಗಳನ್ನು ಅತ್ಯಂತ ಸೂಕ್ಷ್ಮಸಂವೇದನೆ, ಅಂತಃಕರಣ ಮತ್ತು ನಿರುದ್ವಿಗ್ನತೆಯಿಂದ ಅಲೀಸ್ ಚಿತ್ರಿಸಿದ್ದಾರೆ. ಈ ಪುಸ್ತಕದಿಂದ ಕೆಲವು ಭಾಗಗಳನ್ನು ಎಂ.ಆರ್. ಕಮಲ ಅವರು ಅನುವಾದಿಸಿದ್ದಾರೆ. ಈ ಅನುವಾದದ &nbsp;`ಕೆನ್ನೀಲಿ&#8217; ಮುಂದಿನ ತಿಂಗಳ ಮೊದಲ ವಾರದಲ್ಲಿ ಪ್ರಕಟವಾಗುತ್ತಿದೆ. ವಿಶ್ವ ಅನುವಾದ ದಿನದ ವಿಶೇಷವಾಗಿ ಅದರ ಒಂದು ಭಾಗ ಇಲ್ಲಿದೆ</strong>.)&nbsp; </p>



<p></p>



<p style="font-size:20px">ನಿಮ್ಮನ್ನು ಉದ್ದೇಶಿಸಿ ಭಾಷಣ ಮಾಡಬೇಕೆಂದು&nbsp; ಚಾರ್ಲ್ಸ್ ಡಿಕಾರ್ಲೊ ಹೇಳಿದಾಗ ಇಂತಹ ಸಭೆಗಳಲ್ಲಿ&nbsp; ಯಾವುದರ ಬಗ್ಗೆ ಮಾತನಾಡಬೇಕೆಂಬ ವಿಚಾರವೇ&nbsp; ನನಗೆ ತಿಳಿದಿರಲಿಲ್ಲ. ವಿಧಿಯುಕ್ತವಾದ `ಪದವಿ-ಪೂರ್ವ&#8217; ಶಿಷ್ಟಾಚಾರಗಳಲ್ಲಿ ನಾನೆಂದೂ ಭಾಗಿಯಾಗಿರಲಿಲ್ಲ. ಶ್ರೀಮತಿ ರೋಶೆನ್ ಬುಷ್ ಅವರ ಮನೆಯ ಬೆಂಕಿ ಗೂಡಿನ ಬದಿಯಿಂದ, ಸಣ್ಣ ಲೋಟವೊಂದರಲ್ಲಿ&nbsp; ಶಾಂಪೈನ್ ಪಡೆದು, ಮುದಗೊಳಿಸುವ ಒಂದೆರಡು ಮಾತಿನಿಂದ ಹೊರ ಜಗತ್ತಿಗೆ ದೂಡಲ್ಪಟ್ಟವಳು.</p>



<p style="font-size:20px">`ಯಾವುದರ ಬಗ್ಗೆ ಮಾತಾಡಲಿ?&#8217; ಕೇಳಿದೆ. `ನೋಡೋಣ..ಯುದ್ಧ, ಬಡತನ, ಹೆಣ್ಣು ಮಕ್ಕಳ ಸ್ಸ್ಥಿತಿಗತಿ, ನಿಮ್ಮ ಬರವಣಿಗೆ, ಜೀವನ .. ಸಾರಾ ಲಾರೆನ್ಸ್ ನಲ್ಲಿದ್ದಾಗಿನ ನಿಮ್ಮ ಬದುಕು. ..ಹೀಗೆ ಯಾವುದಾದರೂ ಸರಿ &#8216; ಎಂದು ಚಾರ್ಲ್ಸ್ ಉತ್ತರಿಸಿದ.</p>



<p style="font-size:20px">ಕೆಲ ಕ್ಷಣಗಳ ಕಾಲ ಸುಮ್ಮನಿದ್ದು `ಅದೇನು ಕಲ್ಪನೆಯಾಗಿರಬೇಕಿಲ್ಲ, ದೀರ್ಘವಾಗಿಯೂ ಇರಬೇಕಿಲ್ಲ.&nbsp; ಅದನ್ನು&nbsp; ಎಲ್ಲೂ ಪ್ರಕಟಿಸುವುದಿಲ್ಲ. ಹೃದಯದಿಂದ ಮಾತನಾಡಿದರೆ ಆಯಿತು&#8217; ಎಂದ.</p>



<p style="font-size:20px">`ಎಲ್ಲದರ ಬಗ್ಗೆ ಸಂಕ್ಷಿಪ್ತವಾಗಿ, ಹೃದಯಪೂರ್ವಕವಾಗಿ ಮಾತನಾಡುವುದು ಹೇಗೆ?&#8217; ಎಂದು ಈ ಭಾಷಣವನ್ನು ಕರೆಯಬಹುದು ಎಂದೆ.</p>



<p style="font-size:20px">ಕಳೆದ ಬಾರಿ ನಾನಿಲ್ಲಿ ಮಾತನಾಡಿದಾಗ ಕಪ್ಪು ಬರಹಗಾರ್ತಿಯರ ಅಧ್ಯಯನದಲ್ಲಿ&nbsp; ತೊಡಗಿಕೊಂಡಿದ್ದೆ. ಅದು ನನ್ನ ಬದುಕಿನ ಕೆಲವು ವರ್ಷಗಳನ್ನು ಸಿರಿವಂತಗೊಳಿಸಿತ್ತು.. ನಾನು ಮತ್ತು ನನ್ನ ಗಂಡ ಮಿಸ್ಸಿಸ್ಸಿಪ್ಪಿಯಲ್ಲಿ ವಾಸ ಮಾಡಲು ಹೋದ ತಕ್ಷಣ ಈ ಅಧ್ಯಯನ ಆರಂಭವಾಗಿತ್ತು. ಅಷ್ಟು ಹೊತ್ತಿಗೆ ನಮ್ಮನ್ನು ಹೊಡೆಯುತ್ತಾರೆ, ಗುಂಪುಗಟ್ಟುತ್ತಾರೆ, ನಮ್ಮ ಮೇಲೆ ಬಾಂಬ್ ಎಸೆಯುತ್ತಾರೆ ಇತ್ಯಾದಿ ಆತಂಕಗಳೆಲ್ಲ ಮರೆಯಾಗಿದ್ದವು. ಐದು ವರ್ಷಗಳ ಕಾಲ ಗ್ರಾಮರ್ ಶಾಲೆಯಲ್ಲಿ ಕಲಿತ&nbsp; ಐವತ್ತೈದರಿಂದ ಅರವತ್ತರ ಒಳಗಿನ ಪ್ರಬುದ್ಧವಾದ ಹೆಣ್ಣುಮಕ್ಕಳಿಗೆ ಇತಿಹಾಸವನ್ನು ಬೋಧಿಸುವುದರ ಬಗ್ಗೆ ನನ್ನ ಆಸಕ್ತಿ ಕುದುರಿತ್ತು. ಅವರ ಬಳಿ ಆತ್ಮಕತೆಗಳನ್ನು ಬರೆಸುವುದು. ಅದನ್ನು ಓದುತ್ತಲೇ, ರಾಜಕೀಯ, ಸಾಮಾಜಿಕ ಚಳುವಳಿಗಳೊಂದಿಗೆ ಅವರ ಅನುಭವದ ತುಣುಕುಗಳನ್ನು&nbsp; ಸೇರಿಸಿ ವಿಷಯವನ್ನು&nbsp; ಅರ್ಥಮಾಡಿಸಬಹುದು ಎಂಬ ಉದ್ದೇಶವಿತ್ತು.</p>



<p style="font-size:20px">ಹಾಗೆಂದ ಮಾತ್ರಕ್ಕೆ ನನ್ನ ಸುತ್ತಲಿದ್ದ ಎಲ್ಲ ಹೆಂಗಸರು ತಮ್ಮ ತಮ್ಮ ಬಗ್ಗೆ ಬರೆಯಬೇಕೆಂದು&nbsp; ಕಾದು&nbsp; ಕುಳಿತವರಲ್ಲ.&nbsp; ಶ್ರೀಮತಿ ವಿನ್ಸನ್&nbsp; ಹಡ್ಸನ್ ಅವರ ಮನೆಯ ಮೇಲೆ&nbsp; ಒಂದಕ್ಕಿಂತ ಹೆಚ್ಚು ಬಾರಿ ಕ್ಯೂ ಕ್ಲಕ್ಸ್&nbsp; ಕ್ಲಾನ್ ಗುಂಪು&nbsp; ಬಾಂಬನ್ನು&nbsp; ಎಸೆದಿತ್ತು.&nbsp; ಮಿಸ್ಸಿಸಿಪ್ಪಿಯಲ್ಲಿ ಸೌಹಾರ್ದವಾಗಿ ಬದುಕುತ್ತಿದ್ದ ವಿಶಿಷ್ಟ ಹೆಣ್ಣುಮಗಳು ಹಡ್ಸನ್. ಇತಿಹಾಸ ಮಾತ್ರವಲ್ಲ ಕ್ರಾಂತಿಕಾರಿ ನೇತಾರಳಾಗಿ ಬದಲಾವಣೆ ತರಲು ತನ್ನ ಕರ್ತವ್ಯಗಳೇನು ಎಂಬ ಅರಿವಿದ್ದವಳು. ಈ ಗುಂಪನ್ನು ಎದುರಿಸಲು ಒಂದು ಜರ್ಮನ್ ಶೆಫರ್ಡ್ ನಾಯಿಯನ್ನು ಸಾಕಿಕೊಂಡಿದ್ದಳು. ಬಾಂಬರ್ ಗಳು ಬರುತ್ತಿದ್ದಾರೆಂದು ತಿಳಿದ&nbsp; ತಕ್ಷಣ ಅದು ಜೋರಾಗಿ ಬೊಗಳಲು ಆರಂಭಿಸುತ್ತಿತ್ತು. ಅವಳ ಬಳಿಯಿದ್ದ ಎರಡು ಶಾಟ್ ಗನ್ನುಗಳನ್ನು&nbsp; ಉಪಯೋಗಿಸಲು ಹಿಂಜರಿಯುತ್ತಿರಲಿಲ್ಲ.&nbsp; ಕೆರಳಿಸುವವರು, ಕೊಲೆಗಾರರ ವಿರುದ್ಧ ಏಕಾಂಗಿ ಹೋರಾಟ ಮಾಡುವುದು ಹೇಗೆ ಎನ್ನುವುದನ್ನು&nbsp; ಉಳಿದವರಿಗೂ&nbsp; ಅರ್ಥ ಮಾಡಿಸಲು&nbsp; ಅದೆಲ್ಲವನ್ನು ಆಕೆ ಬರೆಯಲು ಶುರು ಮಾಡಿದ್ದರು.</p>



<p style="font-size:20px">ಶ್ರೀಮತಿ ಹಡ್ಸನ್ ಅವರಿಂದ ಹೆಣ್ಣು ಮಕ್ಕಳ ಬಗ್ಗೆ&nbsp; ಗೌರವ&nbsp; ಭಾವನೆ ಮೂಡಿ ಬೇರೆ ಬೇರೆ ಹೆಣ್ಣುಮಕ್ಕಳ ಕೃತಿಗಳನ್ನು&nbsp; ಹುಡುಕಲು ಆರಂಭಿಸಿದೆ. ಬರವಣಿಗೆಯಲ್ಲಿ ತೊಡಗಿಕೊಂಡ ಹೆಣ್ಣುಮಕ್ಕಳನ್ನು ಕಂಡು ಅಪಹಾಸ್ಯ ಮಾಡುವುದು, ತುಚ್ಛೀಕರಿಸುವುದು&nbsp; ಸಾಧ್ಯವಾದರೆ&nbsp; ವಿಮರ್ಶಕರು ಅವರನ್ನು&nbsp; ಅಳಿಸಿ&nbsp; ಹಾಕುವುದು&nbsp; ಸಾಮಾನ್ಯವಾಗಿತ್ತು. ತಮ್ಮನ್ನು ತಾವು ಬರವಣಿಗೆಯಲ್ಲಿ ಅಭಿವ್ಯಕ್ತಿಸಿದ ಹೆಚ್ಚಿನ ಹೆಣ್ಣುಮಕ್ಕಳು, ಬದುಕುವುದಕ್ಕೆ ಹೋರಾಡುತ್ತ, ಬಡತನದಲ್ಲಿ ಮರೆಯಾಗಿ, ಅವಧಿಗಿಂತ ಮೊದಲೇ ಕತ್ತಲಲ್ಲಿ ಕಳೆದುಹೋಗಿದ್ದೇ ಹೆಚ್ಚು.</p>



<p style="font-size:20px">ಲೂಸಿ ಟೆರ್ರಿ ಬದುಕಿದ್ದಾರೋ, ಸತ್ತಿದ್ದಾರೋ ನಮಗೆ ತಿಳಿಯದು.&nbsp; ಫಿಲಿಸ್&nbsp; ವೀಟ್ಲಿ&nbsp; ಸಣ್ಣ ಮನೆಯೊಂದರಲ್ಲಿ&nbsp; ಮೂವರು ಮಕ್ಕಳೊಂದಿಗೆ ವಾಸಿಸುತ್ತ, ಸೇವಕಿಯಾಗಿ ಕೆಲಸ ಮಾಡಿ, ಪೌಷ್ಟಿಕಾಂಶದ ಕೊರತೆಯಿಂದ ಸತ್ತಿದ್ದು ತಿಳಿದಿತ್ತು. ನೆಲ್ಲಾ ಲಾರೆನ್ಸ್, ಎರಡು ಹೊತ್ತು ಊಟ, ಮಲಗಲೊಂದು ಜಾಗ ಸಿಗುತ್ತದೆ ಎನ್ನುವ ಕಾರಣಕ್ಕೆ ಬರವಣಿಗೆಯನ್ನು ತೊರೆದು&nbsp; ನರ್ಸ್ ಕೆಲಸಕ್ಕೆ ಸೇರಿ ಕಣ್ಮರೆಯಾದಳು. ಅದುವರೆಗೂ ಪ್ರಕಟವಾಗಿದ್ದರಲ್ಲಿಯೇ ಅತ್ಯಂತ ಅಧಿಕೃತವಾದ ಕಪ್ಪು ಪ್ರೇಮದ ಕತೆಯನ್ನು ಬರೆದಿದ್ದ&nbsp; ಜೋರ ನಿಯೋ ಹರ್ಟ್ ಸನ್&nbsp; ಫ್ಲೋರಿಡಾದ ಜವುಳು ನೆಲದಲ್ಲಿ&nbsp; ಮನೆಗೆಲಸದವಳಾಗಿ, ಬಡತನದಲ್ಲಿಯೇ ಸಾವನ್ನಪ್ಪಿದಳು. ಅವಳು&nbsp; ಸಾಯುವ ಹೊತ್ತಿಗೆ ಆರು ಪುಸ್ತಕಗಳನ್ನು ಬರೆದಿದ್ದಳು. ಬಹಳ ಆಸಕ್ತಿದಾಯಕ ವಿಷಯವೆಂದರೆ ಕಪ್ಪು ವಿಮರ್ಶಕರು ಮತ್ತು ಬಿಳಿಯ ವಿಮರ್ಶಕರು ಅವಳ ಅಭಿಜಾತ ಕೃತಿ `ದೆರ್ ಐಸ್ ವರ್ ವಾಚಿಂಗ್ ಗಾಡ್&#8217; ಅನ್ನು ಅವಳ ಸಮಕಾಲೀನನಾದ ರಿಚರ್ಡ್ ರೈಟ್ ಅವರ `ನೇಟಿವ್ ಸನ್&#8217; ಕೃತಿಯ ನಂತರದ ಕೃತಿಯೆಂದು ಪರಿಗಣಿಸಿದ್ದರು. ಇವೆರಡನ್ನೂ ಒಂದೇ ಅವಧಿಯಲ್ಲಿ ಬರೆಯಲಾಗಿತ್ತು. ಜೀವನದ ಹದಿನೆಂಟರಲ್ಲಿ ಒಂದು ಭಾಗವನ್ನು ಬಿಳಿಯರ ಬಗ್ಗೆ ಚಿಂತಿಸುತ್ತ ಕಳೆದ ಕಪ್ಪು ಹುಡುಗ ಮತ್ತು&nbsp; ಕಪ್ಪು ಹುಡುಗಿಯ ಪ್ರೇಮ ಕತೆಯದು. ಆದರೆ ಅದು&nbsp; ಬಿಳಿಯ ಜನರನ್ನೇ ತಲೆಯಲ್ಲಿಟ್ಟುಕೊಂಡಿದ್ದ ಪ್ರಮುಖ ಪಾತ್ರವೊಂದರ ಕಾದಂಬರಿಯಷ್ಟು ಯಾಕೋ ಮುಖ್ಯವೆನಿಸಲಿಲ್ಲ. ವಿದೇಶಿ ಭೂಮಿಯಲ್ಲಿ ರೈಟ್&nbsp; ಘನತೆಯಿಂದಲೇ&nbsp; ಸತ್ತರೆ, ಹರ್ಸ್ಟನ್&nbsp; ತನ್ನದೇ ಜಾಗದಲ್ಲಿ ಬಹಿಷ್ಕೃತೆಯಾಗಿ, ಹಣವಿಲ್ಲದೆ ಸತ್ತಳು.</p>



<p style="font-size:20px">ಆದರೂ ನಾನು ಅವಳ ಬಗ್ಗೆ, ಅವಳಂಥವರ ಬಗ್ಗೆ&nbsp; ನಿರಾಶಾವಾದಿಯಾಗಿಲ್ಲ. ಅಂತಹ ಸಂಕಟದ ಸ್ಥಿತಿಯಲ್ಲೂ ಅವರು ಅದ್ಭುತವಾದ ಕೃತಿಗಳನ್ನು ನೀಡಿದರು. ತಮ್ಮ ತುಂಬು&nbsp; ಜೀವನವನ್ನು ಉಪಯೋಗಕಾರಿಯಾಗಿಯೇ&nbsp; ಕಳೆದರು. ಹೆಚ್ಚಿನವರು ಈವತ್ತಿಗೆ ಇಲ್ಲವಾದರೂ ಯುವ ಸಮುದಾಯ ಧನ್ಯತಾಭಾವದಿಂದ&nbsp; ಅವರ ಕೃತಿಗಳನ್ನು ಓದುತ್ತಿದೆ.</p>



<p style="font-size:20px">ಕಾಲೇಜನ್ನು ತೊರೆದು ಹೋಗುತ್ತಿರುವ ನಿಮ್ಮಂಥ ಯುವ ಸಮುದಾಯ, ಅದರಲ್ಲೂ ಹೆಣ್ಣುಮಕ್ಕಳು ಸಮಾಜಕ್ಕೆ&nbsp; ನೀಡಬೇಕಾಗಿರುವ ಉತ್ತಮವಾದ ಕೊಡುಗೆ ಮತ್ತದರ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು. ಗಂಡಸರ ಪಾಲಿಗೆ ಅವು&nbsp; ಉಪದ್ರವಗಳು ಎನಿಸಬಹುದು. ಈ ವಿಷಯವನ್ನು ಮನದಟ್ಟು ಮಾಡಿಕೊಂಡರೆ ಹೆಣ್ಣುಮಕ್ಕಳ ಬೆಳವಣಿಗೆಯನ್ನು ನಿಗ್ರಹಿಸಲು ಯತ್ನಿಸುವ ಎಲ್ಲರ ವಿರುದ್ಧ&nbsp; ಹೋರಾಟ ಮಾಡುವ ಮನಃಸ್ಥಿತಿ ಒದಗುತ್ತದೆ. ಕಪ್ಪು ಹೆಣ್ಣು ಮಗಳು ಇಂತಹ ಜಗತ್ತಿಗೆ ಕಾಲಿಡಬೇಕಾದರೆ ಉಳಿದವರಿಗಿಂತ ದುಪ್ಪಟ್ಟು ಸಿದ್ಧತೆಗಳನ್ನು ಮಾಡಿಕೊಂಡಿರಬೇಕಾಗುತ್ತದೆ. ಹೊಸ ಪ್ರಪಂಚದಲ್ಲಿ ಮಾತ್ರ&nbsp; ಹಕ್ಕುಗಳನ್ನು ಸಾಧಿಸುವುದಲ್ಲ, ಹಳೆಯ ಪ್ರಪಂಚದಲ್ಲಿ ಕೂಡ. ಮಾತನಾಡಬೇಕಾಗಿದ್ದ ಲೆಕ್ಕವಿರದಷ್ಟು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದಾರೆ, ಮರೆತುಹೋಗಿದ್ದಾರೆ. ಅವರನ್ನು&nbsp; ಕಂಡು ಹಿಡಿಯುವ ಕೆಲಸವನ್ನು&nbsp; ಮಾಡಬೇಕು. ಕಪ್ಪು ಹೆಣ್ಣುಮಕ್ಕಳು ಎನ್ನುವ ಒಂದೇ&nbsp; ಕಾರಣಕ್ಕೆ&nbsp; ಒತ್ತಾಯ ಪೂರ್ವಕವಾಗಿ&nbsp; ಹೇರಿದ&nbsp; ಮೌನದಿಂದ,&nbsp; ಔದಾಸೀನ್ಯದಿಂದ ಅವರನ್ನು&nbsp; ಬಿಡುಗಡೆ ಮಾಡಬೇಕು.</p>



<p style="font-size:20px">ಒಂದನ್ನು ನೆನಪಿಡಿ, ಈ ಸಮೂಹ ಸನ್ನಿಯ, ಕುರಿ ಮಂದೆಯ&nbsp; ದಿನಗಳಲ್ಲಿ&nbsp; ನೀವು ಮೌನವಾಗಿರುವಂತೆ&nbsp; ಒತ್ತಾಯಿಸುವ, ಬೆಳವಣಿಗೆಗೆ ಕಡಿವಾಣ ಹಾಕುವ, ಬಯಸಿದಂತೆ ಅರಳಿಕೊಳ್ಳಲು ಬಿಡದ. ಕಷ್ಟಪಟ್ಟು ನೀವು ನೀಡಿದ ಕೊಡುಗೆಗಳನ್ನು ನಿಕೃಷ್ಟವಾಗಿ ಕಾಣುವ ಯಾವುದೇ ವ್ಯಕ್ತಿಯಿರಲಿ, ಅವನು ನಿಮ್ಮ ಗೆಳೆಯನಲ್ಲ, ಬಂಧುವೂ ಅಲ್ಲ. ಈ ಕಾರಣದಿಂದಲೇ ಸಾಮಾನ್ಯವಾಗಿ ಚರಿತ್ರಕಾರರು ಹೆಣ್ಣುಗಳಿಗೆ ಶತ್ರುಗಳಾಗಿರುತ್ತಾರೆ, ಅದರಲ್ಲೂ ಕಪ್ಪು ಹೆಣ್ಣುಮಕ್ಕಳಿಗೆ. ಇವರಷ್ಟೇ ಅಲ್ಲ, ಯಾರ ಬಳಿ ನಾವು ಕಲಿಯಲು ಹೋಗುತ್ತಿದ್ದೆವೋ ಅವರು ಕೂಡ. ಅಜ್ಞಾನ, ದುರಹಂಕಾರ, ಜನಾಂಗವಾದ ಅನೇಕ ವಿಶ್ವವಿದ್ಯಾಲಯಗಳಲ್ಲಿ&nbsp; ಉನ್ನತ&nbsp; ಜ್ಞಾನವೆಂಬಂತೆ ಅರಳಿಕೊಳ್ಳುತ್ತಿದೆ.</p>



<p style="font-size:20px">ಇಲ್ಲಿಂದ ತೆರಳಿದ&nbsp; ಮೇಲೆ ನಿಮ್ಮ ಕೆಲಸವೆಂದರೆ ಹಿಂದೆ ಶಿಕ್ಷಣ ಪಡೆದ ಮಹಿಳೆಯರಂತೆ- ಜಗತ್ತನ್ನು ಬದಲಿಸುವುದು. ಅದಕ್ಕಿಂತ ಕಡಿಮೆ ಅಥವಾ ಸುಲಭದ್ದನ್ನು ಮಾಡಬಾರದು. ನೀವು ಇತ್ತೀಚಿನ ಹೆಣ್ಣುಮಕ್ಕಳ `ವಿಮೋಚನೆಯ&nbsp; ಸಾಹಿತ್ಯ&#8217;ವನ್ನು ಓದುತ್ತಿರಬಹುದು. ಅದರಲ್ಲಿ ಕೆಲವು ವಿಷಯಗಳನ್ನು ನೀವು&nbsp; ಒಪ್ಪದೆಯೂ ಇರಬಹುದು. ಶತಮಾನಗಳಿಂದ ಹೆಣ್ಣುಮಕ್ಕಳು ಕಂಡುಕೊಂಡಿರುವುದೇನೆಂದರೆ ಜಗತ್ತನ್ನು ಬದಲಿಸಲು ಸಾಕಷ್ಟು&nbsp; ಸಮಯ ಹಿಡಿಯುತ್ತದೆ. ಅದು ಚಲನಶೀಲತೆಯ ಜೊತೆಗೆ ಹಣವನ್ನೂ ಬಯಸುತ್ತದೆ. ವರ್ಜಿನಿಯಾ ವುಲ್ಫ್&nbsp; ಹೇಳುವಂತೆ&nbsp; `ತನ್ನದೇ ಆದ ಸ್ವಂತ ಕೋಣೆ&#8217; ಮತ್ತು ಅದಕ್ಕೊಂದು&nbsp; `ಬೀಗ ಮತ್ತು ಬೀಗದ ಕೈ&#8217; ಇರಬೇಕು. ಹೆಣ್ಣುಮಕ್ಕಳು ಮುಖ್ಯವಾಗಿ ತಮ್ಮ ಬಗ್ಗೆ ಮತ್ತು ಗೆಳೆಯರು, ಪ್ರೇಮಿ, ಗಂಡನ ಕಷ್ಟಗಳು, ಎಲ್ಲ ಎದೆ ಬಿರಿತಗಳು, ನೋವುಗಳ ಬಗ್ಗೆ&nbsp; ಯೋಚಿಸುವ ಸಾಧ್ಯತೆಯಿರಬೇಕು.. ಆಗ&nbsp; ಆಲೋಚನೆಯ ಸ್ವಾತಂತ್ರ್ಯ ಅಥವಾ ನಿಮ್ಮ&nbsp; ಕೆಲಸಗಳಿಗೆ ಬೆಲೆಯಿದೆಯೇ&nbsp; ಎಂದು ನೀವು ಅಚ್ಚರಿ ಪಡುತ್ತೀರ.</p>



<p style="font-size:20px">ಹೆಣ್ಣುಮಗಳಾಗಿ ಹುಟ್ಟಿರುವುದೇ ಒಂದು ಸಂತಸದ ವಿಷಯ. ಅದರಲ್ಲೂ ಕಪ್ಪು ಹೆಂಗಸಾಗಿ. ನಮ್ಮ ದೈನಂದಿನ ಸಂಗತಿಗಳಿಂದ ಶ್ರೀಮಂತವಾಗಿ ಹೊಸ ಸಾಧ್ಯತೆಗಳನ್ನು ಅದು ತೆರೆಯುತ್ತದೆ ಎನ್ನುವ ಕಾರಣಕ್ಕಲ್ಲ. ಅದರ ಭೂತಕಾಲ ಚಿನ್ನದಂತೆ ಆ&nbsp; ಕಾಲದಲ್ಲಿ&nbsp; ಹೊಳೆದ&nbsp; ನಮ್ಮ ಸೋದರಿಯರೊಂದಿಗೆ ಅಂಟಿಕೊಂಡಿದೆ. ಅವರು ನಮಗೆ ಭರವಸೆಯನ್ನು ನೀಡಿದ್ದಾರೆ. ಗತದ ಉಜ್ವಲತೆಯನ್ನು ನಿರೂಪಿಸಿದ್ದಾರೆ, ಅದು ನಮ್ಮನ್ನು ಬಿಡುಗಡೆಗೊಳಿಸಿ ಭವಿಷ್ಯದ ಹಕ್ಕುಗಳನ್ನು ಸಂಪೂರ್ಣವಾಗಿ&nbsp; ಪಡೆಯುವುದಕ್ಕೆ ದಾರಿಯಾಗಬೇಕು.</p>



<p style="font-size:20px">ಇದೆಲ್ಲವನ್ನು ಸಂಕ್ಷಿಪ್ತವಾಗಿ, ಹೃದಯದಿಂದಲೇ ಹೇಳಿದ್ದೇನೆ.</p>



<p class="has-text-align-center" style="font-size:20px"><strong>***</strong></p>



<p class="has-text-align-right" style="font-size:20px">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</p>



<figure class="wp-block-image size-full is-resized"><img decoding="async" src="https://peepalmedia.com/wp-content/uploads/2022/09/WhatsApp-Image-2022-09-29-at-7.13.05-PM.jpeg" alt="" class="wp-image-8117" width="176" height="229"/></figure>



<p class="has-regular-font-size"><strong>ಎಂ ಆರ್‌ ಕಮಲ</strong><br>ಕವಯಿತ್ರಿಯಾಗಿ, ಅನುವಾದಕಿಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು</p>



<p></p>



<p style="font-size:20px">🔸<strong>ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ</strong><br><a href="https://chat.whatsapp.com/G94DLKaJrsBH07M7DvkqRo">https://chat.whatsapp.com/G94DLKaJrsBH07M7DvkqRo</a></p>



<p style="font-size:20px"><strong><mark style="background-color:rgba(0, 0, 0, 0)" class="has-inline-color has-vivid-red-color">ಇದನ್ನೂ ನೋಡಿ: </mark></strong><mark style="background-color:rgba(0, 0, 0, 0)" class="has-inline-color has-vivid-purple-color">ದೈವಾರಾದನೆ ಅಂದ್ರೆ ಸಮಾಜದ ಸಮಾನತೆ ಕಾಪಾಡುವ ವಿಚಾರ : ಕಾಂತಾರ ಕುರಿತು ರಿಷಬ್ ಹೇಳಿದ್ದು ಹೀಗೆ!</mark></p>



<p><mark style="background-color:rgba(0, 0, 0, 0)" class="has-inline-color has-vivid-purple-color">Reviews KANTARA After Watching Celebrity Show</mark></p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ದೈವಾರಾದನೆ ಅಂದ್ರೆ ಸಮಾಜದ ಸಮಾನತೆ ಕಾಪಾಡುವ ವಿಚಾರ : ಕಾಂತಾರ ಕುರಿತು ರಿಷಬ್ ಹೇಳಿದ್ದು ಹೀಗೆ!  | Kantara" width="696" height="392" src="https://www.youtube.com/embed/iWsr2qQQDBM?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>



<p><a href="https://fb.watch/fRPSMXFqJD/">https://fb.watch/fRPSMXFqJD/</a></p>
]]></content:encoded>
					
		
		
			</item>
	</channel>
</rss>
