<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Travelogue &#8211; Peepal Media</title>
	<atom:link href="https://peepalmedia.com/tag/travelogue/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 14 Dec 2022 08:17:08 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Travelogue &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಆ ಕಾಲದ ಹೀರೊ ರಾಜೇಶ್‌ ಖನ್ನಾ ರಾಜಸ್ಥಾನದಲ್ಲಿ ಸಿಕ್ಕಾಗ &#8211; ತಿರುಗಾಡಿ ಬಂದೊ-8</title>
		<link>https://peepalmedia.com/tirugadi-bando-8/</link>
		
		<dc:creator><![CDATA[Rohit Agasarahalli]]></dc:creator>
		<pubDate>Wed, 14 Dec 2022 08:17:07 +0000</pubDate>
				<category><![CDATA[ಪ್ರವಾಸ ಕಥನ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rohith agasara halli]]></category>
		<category><![CDATA[tirugaadi bando]]></category>
		<category><![CDATA[Travelogue]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18422</guid>

					<description><![CDATA[ದೆಹಲಿ ಅಗ್ರಾ ಪ್ರಯಾಣದ ನಂತರ ಈ ಬಾರಿ ರೋಹಿತ್‌ ರಾಜಸ್ಥಾನದ ಜೈಪುರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ದೇಶದ ಅತಿ ವಿಸ್ತಾರವುಳ್ಳ ರಾಜ್ಯದ ಕುರಿತಾದ ಪ್ರವಾಸಿ ಅನುಭವಗಳನ್ನು ಈ ಬಾರಿಯ ತಿರುಗಾಡಿ ಬಂದೋ ಅಂಕಣದಲ್ಲಿ ಓದಿ ನಮ್ಮ ಪಯಣ ಕಡೆಯ ಹಂತಕ್ಕೆ ಬಂದಿತ್ತು. ಕಡೆಯ ಊರುಗಳಲ್ಲೊಂದು ಜೈಪುರ. ವಾಸ್ತವದಲ್ಲಿ ಡೆಲ್ಲಿಯಿಂದಲೇ ನೇರ ಅಜ್ಮೇರ್ ಹೋಗಿ ಅಲ್ಲಿಯೇ ತಂಗಿ, ಪುಷ್ಕರ್ ಇತ್ಯಾದಿ ಓಡಿಯಾಡಿ ನಂತರ ಜೈಪುರಕ್ಕೆ ಬರುವ ಆಲೋಚನೆ ಇತ್ತು ಅಷ್ಟೇ ಅಲ್ಲ, ಟ್ರೇನ್ ಮತ್ತು ಗೆಸ್ಟ್ ಹೌಸ್ ಕೂಡ ಬುಕ್ [&#8230;]]]></description>
										<content:encoded><![CDATA[
<p class="has-text-align-center has-very-light-gray-to-cyan-bluish-gray-gradient-background has-background dropcapp1"><strong>ದೆಹಲಿ ಅಗ್ರಾ ಪ್ರಯಾಣದ ನಂತರ ಈ ಬಾರಿ ರೋಹಿತ್‌ ರಾಜಸ್ಥಾನದ ಜೈಪುರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ದೇಶದ ಅತಿ ವಿಸ್ತಾರವುಳ್ಳ ರಾಜ್ಯದ ಕುರಿತಾದ ಪ್ರವಾಸಿ ಅನುಭವಗಳನ್ನು ಈ ಬಾರಿಯ ತಿರುಗಾಡಿ ಬಂದೋ ಅಂಕಣದಲ್ಲಿ ಓದಿ</strong></p>



<p></p>



<p>ನಮ್ಮ ಪಯಣ ಕಡೆಯ ಹಂತಕ್ಕೆ ಬಂದಿತ್ತು. ಕಡೆಯ ಊರುಗಳಲ್ಲೊಂದು ಜೈಪುರ. ವಾಸ್ತವದಲ್ಲಿ ಡೆಲ್ಲಿಯಿಂದಲೇ ನೇರ ಅಜ್ಮೇರ್ ಹೋಗಿ ಅಲ್ಲಿಯೇ ತಂಗಿ, ಪುಷ್ಕರ್ ಇತ್ಯಾದಿ ಓಡಿಯಾಡಿ ನಂತರ ಜೈಪುರಕ್ಕೆ ಬರುವ ಆಲೋಚನೆ ಇತ್ತು ಅಷ್ಟೇ ಅಲ್ಲ, ಟ್ರೇನ್ ಮತ್ತು ಗೆಸ್ಟ್ ಹೌಸ್ ಕೂಡ ಬುಕ್ ಮಾಡಿದ್ದೆವು. ಕಾರಣಾಂತರಗಳಿಂದ ಅವೆಲ್ಲ ರದ್ದಾಗಿ ಸದರಿ ಆಗ್ರಾ- ಜೈಪುರ್ ಯಾತ್ರೆ ಜೀವಪಡೆದಿತ್ತು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img fetchpriority="high" decoding="async" width="1024" height="576" src="https://peepalmedia.com/wp-content/uploads/2022/12/image-30-1024x576.png" alt="" class="wp-image-18424" srcset="https://peepalmedia.com/wp-content/uploads/2022/12/image-30-1024x576.png 1024w, https://peepalmedia.com/wp-content/uploads/2022/12/image-30-300x169.png 300w, https://peepalmedia.com/wp-content/uploads/2022/12/image-30-768x432.png 768w, https://peepalmedia.com/wp-content/uploads/2022/12/image-30-1536x864.png 1536w, https://peepalmedia.com/wp-content/uploads/2022/12/image-30-150x84.png 150w, https://peepalmedia.com/wp-content/uploads/2022/12/image-30-696x392.png 696w, https://peepalmedia.com/wp-content/uploads/2022/12/image-30-1068x601.png 1068w, https://peepalmedia.com/wp-content/uploads/2022/12/image-30.png 1600w" sizes="(max-width: 1024px) 100vw, 1024px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img decoding="async" width="1024" height="576" src="https://peepalmedia.com/wp-content/uploads/2022/12/image-31-1024x576.png" alt="" class="wp-image-18425" srcset="https://peepalmedia.com/wp-content/uploads/2022/12/image-31-1024x576.png 1024w, https://peepalmedia.com/wp-content/uploads/2022/12/image-31-300x169.png 300w, https://peepalmedia.com/wp-content/uploads/2022/12/image-31-768x432.png 768w, https://peepalmedia.com/wp-content/uploads/2022/12/image-31-1536x864.png 1536w, https://peepalmedia.com/wp-content/uploads/2022/12/image-31-150x84.png 150w, https://peepalmedia.com/wp-content/uploads/2022/12/image-31-696x392.png 696w, https://peepalmedia.com/wp-content/uploads/2022/12/image-31-1068x601.png 1068w, https://peepalmedia.com/wp-content/uploads/2022/12/image-31.png 1600w" sizes="(max-width: 1024px) 100vw, 1024px" /></figure>
</div>
</div>



<p>ಟ್ರೇನು ಆಗ್ರಾ ಬಿಟ್ಟಾಗ ಇನ್ನೂ ಬೆಳಕಿತ್ತು. ಬಹುಶಃ ತಾಸರ್ಧ ತಾಸಿನಲ್ಲಿ ಯೂಪಿ ದಾಟಿ ರಾಜಸ್ತಾನ್ ಪ್ರವೇಶ ಮಾಡಿದ್ದೆವು. ನೀರ ಪಸೆ ಆರಿ ಒಣ ಭೂಮಿಯೇ ಕಣ್ಣು ಹಾಯಿಸುವಷ್ಟು ದೂರವೂ ಕಾಣುತ್ತಿತ್ತು. ಅಲ್ಲಲ್ಲೇ ಊರುಗಳು. ಎಲ್ಲ ಊರುಗಳ ಬಳಿಯೂ ಯಾವುದೋ ಬೆಳೆ ಬೆಳೆಯಲು ಉತ್ತು ಬಿತ್ತನೆಗೆ ರೆಡಿಯಾದಂತಿದ್ದ ಚೊಕ್ಕ ಹೊಲಗಳು. ಜೋಳ, ಬಾರ್ಲಿ, ಗೋಧಿ ಹೆಚ್ಚು ಬೆಳೆಯಲಾಗುತ್ತದೆ ಎಂದು ಗೂಗಲ್ ಹೇಳಿತು.</p>



<p></p>



<p>ವರ್ಷಗಳ ಹಿಂದೆ ಓದಿದ್ದ ಇಂದಿರಾ ಕೆನಾಲ್ ನೆನಪಾಯ್ತು. ಪಂಜಾಬಿನ ಬಾಕ್ರಾನಂಗಲ್ ಡ್ಯಾಮಿನಿಂದ 1600 ಕಿ.ಮೀ. ಕೆನಾಲ್ ಅಗೆದು ರಾಜಸ್ತಾನಕ್ಕೆ ನೀರು ತರಲಾಗಿದೆ. ಇದು ಜಗತ್ತಿನ ಅತಿ ಉದ್ದದ ಮಾನವನಿರ್ಮಿತ ಕಾಲುವೆಗಳಲ್ಲಿ ಒಂದಂತೆ. ಅದು ಜೈಪುರದಿಂದ ದೂರವಂತೆ.</p>



<p></p>



<p>ಯೂಪಿ ಮತ್ತು ರಾಜಸ್ತಾನ್ ಎರಡೂ ದೇಶದಲ್ಲಿ ನಂಬರ್ ಒನ್ ರಾಜ್ಯಗಳು. ಒಂದು ಜನಸಂಖ್ಯೆಯಲ್ಲಿ ಮತ್ತೊಂದು ಭೂಪ್ರದೇಶದಲ್ಲಿ. ಯೂಪಿ ಬರೋಬ್ಬರಿ 23 ಕೋಟಿ ಜನರಿಂದ ತುಂಬಿತುಳುಕಿದರೆ, ರಾಜಸ್ತಾನ ಮೂರೂವರೆ ಲಕ್ಷ ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಕರ್ನಾಟಕದ ಒಂದೂಮುಕ್ಕಾಲು ಪಟ್ಟು. ದೇಶದ ಶೇಕಡ 10ರಷ್ಟು ಭೂಪ್ರದೇಶ ಈ ರಾಜ್ಯದ್ದು. ಅದರಲ್ಲಿ ದೇಶದ ಏಕೈಕ ನಿಸರ್ಗ ನಿರ್ಮಿತ ಮರುಭೂಮಿಯೂ ಸೇರಿದೆ ಎನ್ನಿ. (ಮಾನವ ನಿರ್ಮಿತ ಮರುಭೂಮಿ‌ ಕರ್ನಾಟಕದಲ್ಲಿಯೇ ಇದೆಯಂತೆ. ಅಂತರ್ಜಲ ಕಮ್ಮಿಯಾಗಿ, ನೀರ ಬಳಕೆ ಹೆಚ್ಚಾಗಿ ಬೆಳೆ ಬೆಳೆಯಲು ಬಾರದ ಬಂಜರು ನೆಲ ಸೃಷ್ಟಿಯಾಗಿರುವುದು)</p>



<p></p>



<p>ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಇಳಿದಾಗ ಸುಮಾರು ಎಂಟುಗಂಟೆ. ವಸತಿ ವಿಚಾರದಲ್ಲಿ ಬಹಳಷ್ಟು ಆನ್ಲೈನ್ ಸಂಶೋಧನೆ ಟ್ರೇನಿನಲ್ಲೇ ನಡೆಸಿದ್ದರೂ‌ ಬುಕ್ ಮಾಡಿರಲಿಲ್ಲ. ಚಿತ್ರಕಥಾ ಎಂಬ ವಿಚಿತ್ರ ಹೆಸರಿನ ಹೊಟೆಲೊಂದರ ರಿವ್ಯೂಗಳು ಗಮನ ಸೆಳೆಯುವಂತಿದ್ದವು. ಗೆಳೆಯ ಚಿದಂಬರ ಹೋಟೆಲೊಂದರ ಹೆಸರು ಸೂಚಿಸಿದ್ದರೂ‌ ಅದರ ಆನ್ಲೈನ್ ಬುಕಿಂಗ್ ಸಿಗದ ಕಾರಣ ಕೈಬಿಟ್ಟೆವು. ಲಗ್ಗೇಜ್ ಇದ್ದ ಕಾರಣ ಎರಡು ಆಟೋ ಹಿಡಿದು ಹೊರಟೆವು. ಜೈಪುರ ರಾಜ್ಯವೊಂದರ ರಾಜಧಾನಿಯಾದರೂ ಅಷ್ಟೇನೂ ಜನಸಂದಣಿ ನಿಲ್ದಾಣದಲ್ಲಿ ಇರಲಿಲ್ಲ. ಹೊರಗೆ ಕೂಡ. ನನಗೆ ತ್ರಿವೇಂಡ್ರಂ ನೆನಪಾಯ್ತು. ಅದೂ ಕೂಡ ಕೇರಳದ ರಾಜಧಾನಿಯಾಗಿದ್ದರೂ ಅದೇ ರಾಜ್ಯದ ಇತರ ನಗರಗಳಿಗಿಂತ ವಿರಳ ಜನಸಂಖ್ಯೆಯ ನಗರ. ಆಟೋದವರು ಚಿತ್ರಕಥಾಗೆ ಕರೆದೊಯ್ಯುವಾಗ ಅವರ ಬ್ರೋಕರ್ ಗಿರಿಯಿಂದ ಬಚಾವಾಗಲು ಈಗಾಗಲೇ ನಮಗೆ ಹೋಟೆಲ್ ಬುಕಿಂಗ್ ಆಗಿದೆ ಎಂದೆವು. ಎಷ್ಟಕ್ಕೆಂದಾಗ ಆನ್ಲೈನ್ ರೇಟನ್ನೇ ಅರುಹಿದೆವು, ಅದಕ್ಕವರು ಅಷ್ಟೇಕೆ ಕೊಟ್ಟಿರಿ; ಅದಕ್ಕಿಂತ ಕಡಮೆಗೆ ಅದೇ ಹೋಟೆಲ್ ಕೊಡಿಸುತ್ತಿದ್ದೆವು ಎಂದರು! ಅವರಿಗೆ ಮನದಲ್ಲೇ ಥ್ಯಾಂಕ್ಸ್ ಹೇಳಿ ಅದನ್ನೇ ಹಿಡಿದು ದಿನೇಶ್ ಚೌಕಾಸಿ ಮಾಡಿ ಒಂದಷ್ಟು ಉಳಿಸಿದರು. ಮೂರು ದಿನಕ್ಕೆ ಎರಡು ರೂಮು ಹಿಡಿದು ಫ್ರೆಶ್ ಆಗಿ ಊಟಕ್ಕೆ ಹೊರಡೋ ಹೊತ್ತಿಗೆ ಹೊಟೆಲಿನವ ತಮ್ಮದೆ ರೆಸ್ಟುರಾ‌ ಟೆರೇಸಿನಲ್ಲಿರುವುದಾಗಿಯೂ, ಅಲ್ಲಿ ಮೇಕೆ ಬಿರಿಯಾನಿ ಫೇಮಸ್ಸೆಂದು ಆಸೆ ಹುಟ್ಟಿಸಿದ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img decoding="async" width="1024" height="760" src="https://peepalmedia.com/wp-content/uploads/2022/12/image-34-1024x760.png" alt="" class="wp-image-18428" srcset="https://peepalmedia.com/wp-content/uploads/2022/12/image-34-1024x760.png 1024w, https://peepalmedia.com/wp-content/uploads/2022/12/image-34-300x223.png 300w, https://peepalmedia.com/wp-content/uploads/2022/12/image-34-768x570.png 768w, https://peepalmedia.com/wp-content/uploads/2022/12/image-34-1536x1140.png 1536w, https://peepalmedia.com/wp-content/uploads/2022/12/image-34-150x111.png 150w, https://peepalmedia.com/wp-content/uploads/2022/12/image-34-485x360.png 485w, https://peepalmedia.com/wp-content/uploads/2022/12/image-34-696x517.png 696w, https://peepalmedia.com/wp-content/uploads/2022/12/image-34-1068x793.png 1068w, https://peepalmedia.com/wp-content/uploads/2022/12/image-34.png 1599w" sizes="(max-width: 1024px) 100vw, 1024px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-33-1024x576.png" alt="" class="wp-image-18427" srcset="https://peepalmedia.com/wp-content/uploads/2022/12/image-33-1024x576.png 1024w, https://peepalmedia.com/wp-content/uploads/2022/12/image-33-300x169.png 300w, https://peepalmedia.com/wp-content/uploads/2022/12/image-33-768x432.png 768w, https://peepalmedia.com/wp-content/uploads/2022/12/image-33-1536x864.png 1536w, https://peepalmedia.com/wp-content/uploads/2022/12/image-33-150x84.png 150w, https://peepalmedia.com/wp-content/uploads/2022/12/image-33-696x392.png 696w, https://peepalmedia.com/wp-content/uploads/2022/12/image-33-1068x601.png 1068w, https://peepalmedia.com/wp-content/uploads/2022/12/image-33.png 1600w" sizes="auto, (max-width: 1024px) 100vw, 1024px" /></figure>
</div>
</div>



<p>ಟೆರೇಸ್ ರೆಸ್ಟುರಾ ನಿಜವಾಗಿಯೂ ಚೆಂದವಿತ್ತು. ಹೊಟೆಲ್ ಕಟ್ಟಡ ಹಳತಾದರೂ ಚೆನ್ನಾಗಿ ಅಲಂಕರಿಸಿ ನೀಟಾಗಿ ಇಟ್ಟಿದ್ದರು. ಎರಡೂ ರೂಮುಗಳಿಗೂ ಪುಟ್ಟ ಬಾಲ್ಕನಿ ಕೂಡ ಇತ್ತು; ಆದರೆ ಎಸಿಗಳು ಪುರಾತನ ಕಾಲದವು. ಬಳಸದೆ ವಿಧಿ ಇರಲಿಲ್ಲ. ಪ್ರತೀ ಫ್ಲೋರಿನ ಗೋಡೆಗಳು ಮತ್ತು ರೂಮಿನ ಒಳಾವರಣ ಕೂಡ ಸುಂದರ ಚಿತ್ರಗಳು ಇಲ್ಲವೇ ಪೇಂಟಿಂಗ್‌ಗಳಿಂದ ಅಲಂಕೃತಗೊಂಡಿದ್ದವು.</p>



<p></p>



<p>ಮೆನು ಪಡೆದು ಬೆಲೆ ನೋಡಿ ಯಾಕೋ ಎಡವಟ್ಟೆನ್ನಿಸಿತು. ಮೂರು ಪೀಸ್ ಚಿಕನ್ ಇರುವ ಬಿರಿಯಾನಿಗೆ ಕೇವಲ 650!. ಕಾಸು ಉಳಿಸಲು ಒಂದು ಬೇಯಿಸಿದ ಮೊಟ್ಟೆ ಹೇಳಿದರೆ ಅದಕ್ಕೆ ಎಂಬತ್ತಂತೆ. ಬೇರೆಲ್ಲೋ ಹೋಗಿ‌ ಹುಡುಕಿ ತಿನ್ನುವಷ್ಟು ತಾಳ್ಮೆ ಇಲ್ಲದ ಕಾರಣ ಏನೋ ಒಂದಷ್ಟು ತಿಂದು ದಿನ ಮುಗಿಸಿದೆವು. ಮದ್ಯಾಹ್ನ ಆಗ್ರಾ ಬಿಡುವಾಗ ಬೇರೆ ಊಟಕ್ಕೆ&nbsp; ಅವಕಾಶವಾಗಿರಲಿಲ್ಲ.</p>



<p></p>



<p>ಮಾರನೇ ದಿನ ಎಲ್ಲಿಗೆಲ್ಲ ಹೋಗುವುದು ಎಂಬ ಚರ್ಚೆ ಊಟದ ಟೇಬಲ್ಲಿನಲ್ಲೇ ನಡೆಯಲಾಗಿ, ಎರಡೂ ಕುಟುಂಬಗಳು ತಮತಮಗೆ ತೋಚಿದಂತೆ ತೋಚಿದ ರೂಪದಲ್ಲಿ ಸುತ್ತುವುದು ಎಂದು ಅಖೈರು ಮಾಡಿ ವಿಶ್ರಮಿಸಿದೆವು. ಮುಂಜಾನೆ ಹೊತ್ತಿಗೆ ಮತ್ತೆ ಎಲ್ಲರೂ ಕಲೆತೇ ದಿನ ಆರಂಭಿಸಿದೆವೆನ್ನಿ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-35-1024x576.png" alt="" class="wp-image-18429" srcset="https://peepalmedia.com/wp-content/uploads/2022/12/image-35-1024x576.png 1024w, https://peepalmedia.com/wp-content/uploads/2022/12/image-35-300x169.png 300w, https://peepalmedia.com/wp-content/uploads/2022/12/image-35-768x432.png 768w, https://peepalmedia.com/wp-content/uploads/2022/12/image-35-1536x864.png 1536w, https://peepalmedia.com/wp-content/uploads/2022/12/image-35-150x84.png 150w, https://peepalmedia.com/wp-content/uploads/2022/12/image-35-696x392.png 696w, https://peepalmedia.com/wp-content/uploads/2022/12/image-35-1068x601.png 1068w, https://peepalmedia.com/wp-content/uploads/2022/12/image-35.png 1600w" sizes="auto, (max-width: 1024px) 100vw, 1024px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/12/image-37-576x1024.png" alt="" class="wp-image-18431" srcset="https://peepalmedia.com/wp-content/uploads/2022/12/image-37-576x1024.png 576w, https://peepalmedia.com/wp-content/uploads/2022/12/image-37-169x300.png 169w, https://peepalmedia.com/wp-content/uploads/2022/12/image-37-768x1365.png 768w, https://peepalmedia.com/wp-content/uploads/2022/12/image-37-864x1536.png 864w, https://peepalmedia.com/wp-content/uploads/2022/12/image-37-150x267.png 150w, https://peepalmedia.com/wp-content/uploads/2022/12/image-37-300x533.png 300w, https://peepalmedia.com/wp-content/uploads/2022/12/image-37-696x1237.png 696w, https://peepalmedia.com/wp-content/uploads/2022/12/image-37.png 900w" sizes="auto, (max-width: 576px) 100vw, 576px" /></figure>
</div>
</div>



<p><strong>ಈ ನಡುವೆ ನಂಗೆ ಅಂದಕಾಲತ್ತಿಲ್ ಹೀರೋ ರಾಜೇಶ್ ಖನ್ನ ದರ್ಶನವಾಯ್ತು ಸಲೂನೊಂದರಲ್ಲಿ.</strong></p>



<p></p>



<p>ರಾತ್ರಿ ಊಟ ಮುಗಿಸಿ ನಾನು ಎಟಿಮ್ ಹುಡುಕಿ, ದಿನೇಶ್ ಅವರ ಶ್ರೀಮತಿಯವರಿಗೆ ಮಾತ್ರೆ ಹುಡುಕಿ ಹೊರಬಿದ್ದೆವು. ನಂಗೆ ಎಟಿಎಮ್ ಸಿಗದಿದ್ದರೂ ಸಲೂನೊಂದು ಕಣ್ಣಿಗೆ ಬಿತ್ತು. ಇರೋ ಲಗ್ಗೇಜಿಗೆ ಹಡಪದ ಪೆಟ್ಟಿಗೆ ಕೂಡ ಏಕೆ ಸೇರಬೇಕು ಎಲ್ಲ ಊರಲ್ಲೂ ಸಲೂನು ಇರುತ್ತವೆಂದು ಹಾಗೇ ಬಂದಿದ್ದೆ. ಆಗ್ರಾದಲ್ಲಿ ಸಲೂನ್ ಸಂಶೋಧನೆ ಮಾಡಿ ಗೆಲ್ಲಲಾರದೆ ಕೈಚೆಲ್ಲಿದ್ದೆ. ಇಲ್ಲಿ ಸಲೂನು ಸಿಕ್ಕಿತು ಆದರೆ ಪರ್ಸಿನಲ್ಲಿ ನಯಾಪೈಸೆ ಕ್ಯಾಶ್ ಇಲ್ಲ. ಸಲೂನ್ ಅಜ್ಜನಿಗೆ ಕ್ಯಾಶ್ ಇಲ್ಲ ಫೋನ್ ಮೂಲಕ ಪೇ ಮಾಡುವೆ ಆಗಬಹುದೆ ಎಂದೆ. ಆಗಲಿ ಅನ್ತು. ಇನ್ಯಾರೋ ಗಿರಾಕಿ ಇದ್ದರು. ಅದೊಂದು ಹಳೇ ಕಟ್ಟಡ, ಅದರಲ್ಲೂ ಮೂಲೆ ಅರ್ಧಚಂದ್ರಾಕೃತಿಯ ಒಂದೇ ಸೀಟಿನ ಇಕ್ಕಟ್ಟಿನ ಸ್ಥಳ. ಗೋಡೆಯ ಮೇಲೆ ಹಳೇ ಕಾಲದ ಸಿನೆಮಾ ಹೀರೋ ಅವತಾರದ ಸ್ಮಾರ್ಟ್ ಹುಡುಗನ ಹಳೆಯ ಫೋಟೋ ಫ್ರೇಮುಗಳು. ಮತ್ತೆ ಮತ್ತೆ ನೋಡಿದ ಮೇಲೆ ಗುರುತಾಯ್ತು. ಅವೆಲ್ಲ ಅದೇ ತಾತನ ಯೌವನದ ಫೋಟೋಗಳು. ಅವಕ್ಕೆ ಕನಿಷ್ಟ ಅರ್ಧ ಶತಮಾನ ವಯಸ್ಸಾಗಿತ್ತು. ತಾತ ಏನೇನೊ ಹೇಳಲು ಯತ್ನಿಸಿದರೂ ನಾನು ಅರ್ಥ ಮಾಡಿಕೊಂಡು ಹ್ಞೂಂಗುಡುತ್ತಿದ್ದೆ. ಆಮೇಲೆ ಮಾತಿನ ನಡುವೆ ನಾನು ಕರ್ನಾಟಕದಿಂದ ಪ್ರವಾಸಕ್ಕೆ ಬಂದವನೆಂದು ಹೇಳಿದ ಮೇಲೆ ಇವನೊಂದಿಗೆ ಮಾತಾಡಿ ಪ್ರಯೋಜನವಿಲ್ಲವೆನಿಸಿ ಮಾತು ನಿಲುಗಡೆಗೆ ಬಂದವು ಅಷ್ಟು ಹೊತ್ತಿಗೆ ದಾಡಿ ಕೆಲಸವೂ ಪೂರೈಸಿತ್ತು. ಪೇಮೆಂಟ್ ಪಡೆಯಲು ತಾತ ಪಕ್ಕದ ಅಂಗಡಿಯವನಿಗೆ ಕೇಳಿದರೆ ಅವನು ಕೈಜಾಡಿಸಿಬಿಟ್ಟ. ಆಮೇಲೆ ಅಲ್ಲೇ ಪಾನೀಪೂರಿ ಮಾರುತ್ತಿದ್ದವ ಒಪ್ಪಿ ಹಣ ಪಡೆದ.</p>



<p></p>



<p>ಬೆಳಗ್ಗೆ ಹೊತ್ತಿಗೆ ಎರಡೂ ಕುಟುಂಬದವರೂ ತಾವು ನೋಡಬೇಕು ಎಂದುಕೊಂಡಿದ್ದ, ನೋಡಬಹುದಾದ ಸ್ಥಳಗಳ ಪಟ್ಟಿ ಮಾಡಿಕೊಂಡಿದ್ದೆವು; ಎರಡೂ ಸೇಮ್ ಟು ಸೇಮ್! ಒಟ್ಟಿಗೇ ತಿಂಡಿ ತಿಂದು ಅಲ್ಲಿಂದ ಆರಂಭಿಸುವುದೆಂದು ತೀರ್ಮಾನಿಸಿ ಸೌತ್ ರೆಸ್ಟುರಾವೊಂದಕ್ಕೆ ತಲುಪಿದೆವು. ದಿನೇಶ್ ಮಾತ್ರ ತಾವು ಲೋಕಲ್ ಫುಡ್&nbsp; ಸವಿಯುವುದಾಗಿ‌ ಹೋದರು, ಉಳಿದೈವರು ಸೌತ್ ಪ್ರೀತಿಯ ಭಾರವನ್ನು ಹೊರಲಾರದೆ ಹೊತ್ತೆವು. ನಮ್ಮ ಯೋಜನೆ ಪ್ರಕಾರ ಮೊದಲು ಅಂಬರ್ (ಅಮೆರ್) ಫೋರ್ಟ್ ನಂತರ ಉಳಿದವೆಲ್ಲ. ಆನ್ಲೈನಲ್ಲಿ ಎರಡೆರಡು ಸಾರ್ತಿ ಟ್ಯಾಕ್ಸಿ ಬುಕ್ ಮಾಡಿದರೂ ಬರಲು ನಿರಾಕರಿಸಿದರು; ಕಾರಣ ನಾವು ಡ್ರಾಪ್‌ ಮಾತ್ರ ಬೇಕೆಂದು‌ ಕೇಳಿದೆವು. ಕೇವಲ ಡ್ರಾಪಿಗೆ ಬಂದರೆ ಲಾಸ್ ಆಗುವುದೆಂಬುದು ಅವರ‌ ದೂರು. ವಾತಾವರಣ ಹಿತವಾಗಿತ್ತು, ಮಳೆ ಮೋಡವಿದ್ದರೂ ಮಳೆ ಇಲ್ಲ, ಬಿಸಿಲಿನ ಹವಾ ಕೂಡ ಇಲ್ಲ. ಬಿಸಿಲ ನಾಡಿನಲ್ಲಿ ಗಿರಿಧಾಮದ ಅನುಭವ ಯಾರಿಗುಂಟು ಯಾರಿಗಿಲ್ಲ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-32-1024x576.png" alt="" class="wp-image-18426" srcset="https://peepalmedia.com/wp-content/uploads/2022/12/image-32-1024x576.png 1024w, https://peepalmedia.com/wp-content/uploads/2022/12/image-32-300x169.png 300w, https://peepalmedia.com/wp-content/uploads/2022/12/image-32-768x432.png 768w, https://peepalmedia.com/wp-content/uploads/2022/12/image-32-1536x864.png 1536w, https://peepalmedia.com/wp-content/uploads/2022/12/image-32-150x84.png 150w, https://peepalmedia.com/wp-content/uploads/2022/12/image-32-696x392.png 696w, https://peepalmedia.com/wp-content/uploads/2022/12/image-32-1068x601.png 1068w, https://peepalmedia.com/wp-content/uploads/2022/12/image-32.png 1600w" sizes="auto, (max-width: 1024px) 100vw, 1024px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="768" height="1024" src="https://peepalmedia.com/wp-content/uploads/2022/12/image-39-768x1024.png" alt="" class="wp-image-18433" srcset="https://peepalmedia.com/wp-content/uploads/2022/12/image-39-768x1024.png 768w, https://peepalmedia.com/wp-content/uploads/2022/12/image-39-225x300.png 225w, https://peepalmedia.com/wp-content/uploads/2022/12/image-39-1152x1536.png 1152w, https://peepalmedia.com/wp-content/uploads/2022/12/image-39-150x200.png 150w, https://peepalmedia.com/wp-content/uploads/2022/12/image-39-300x400.png 300w, https://peepalmedia.com/wp-content/uploads/2022/12/image-39-696x928.png 696w, https://peepalmedia.com/wp-content/uploads/2022/12/image-39-1068x1424.png 1068w, https://peepalmedia.com/wp-content/uploads/2022/12/image-39.png 1200w" sizes="auto, (max-width: 768px) 100vw, 768px" /></figure>
</div>
</div>



<p>ಅರ್ಧ ತಾಸು ಸಮಯ ವ್ಯರ್ಥ ಮಾಡುವ ಹೊತ್ತಿಗೆ ನಮಗೆ ಅರ್ಥವಾದ ಸಂಗತಿ‌, ದಿನದ ಲೆಕ್ಕದ ಟ್ಯಾಕ್ಸಿ ಹಿಡಿದರಷ್ಟೇ ನಾವು ಅಂಬರ್ ಫೋರ್ಟ್ ತನಕ ಹೋಗಲು ಸಾಧ್ಯವೆಂಬುದು. ಕಡೆಗೆ ಒಬ್ಬ ಆಟೋವಾಲಾ ಟ್ರಾವೆಲ್ ಏಜೆಂಟನ ಬಳಿ ಕರೆದೊಯ್ದ. ಅಲ್ಲಿ ಒಂದು ಇನ್ನೋವಾವನ್ನು ದಿನದ ಓಡಾಟಕ್ಕೆ ಬುಕ್ ಮಾಡಿದೆವು. ಅವನೊಂದು ಬ್ರೋಷರ್ ಕೊಟ್ಟ. ಅದರಲ್ಲಿ ಎಂಟು ಜಾಗ ಗುರುತು‌ ಮಾಡಿದ್ದ. ವರ್ತ್ ಅನ್ನಿಸಿತು. ಈ ಎಂಟರ ಬಂಡವಾಳ&nbsp; ಮದ್ಯಾಹ್ನದ ಹೊತ್ರಿಗೆ‌ ಅರ್ಥವಾಯ್ತು. ಡ್ರೈವರ್ ಹೊಂಟವನೇ ಅಲ್ಲಿ ಬೇಡ ಇಲ್ಲಿ ಹೋಗೋಣ ಎಂದು ಕ್ಯಾತೆ ಶುರು ಮಾಡಿದ; ನಾನು ನಂಗೆ ಗೊತ್ತಿರುವ ಸಮಸ್ತ ಹಿಂದಿಯನ್ನೂ ಬಳಸಿ &#8220;ನೋಡಣ್ಣ ನಾವು ಹೇಳಿದಲ್ಲಿ ಕರೆದೊಯ್ಯಿ, ಇಲ್ಲವೇ ಈಗಲೇ ಇಳಿಸಿಬಿಡು ಒಪ್ಪಂದ ರದ್ದು ಮಾಡುವ&#8221; ಎಂದೆ. ಅದೇ‌ ಕೊನೆ. ಮುಂದಿನ ಮೂರು ದಿನ ಅವ ನಮ್ಮೊಂದಿಗೇ ಅಂಟಿಕೊಂಡು ಕಳೆದ ದೂಸರಾ ಮಾತನಾಡದೆ.</p>



<p></p>



<p>ದಾರಿಯಲ್ಲೇ ಹವಾಮಹಲ್ ನೋಡಿಕೊಂಡುಬಿಡಿ ಎಂದ, ನಿರಾಕರಿಸಿ ಅಂಬರ್ ಕೋಟೆಗೆ ದೌಡಾಯಿಸಲು ಹೇಳಿದೆವು. ನಡುವೆ ಜಲ್ ಮಹಲ್ ಸಿಕ್ಕರೂ‌ ನಿಲ್ಲಲಿಲ್ಲ. ಅಂಬರ್ ಕೋಟೆ ಬೆಟ್ಟದ ಮೇಲಿದೆ. ಜೈಪುರ್ ದಾಟುತ್ತಿದ್ದಂತೇ ಬೆಟ್ಟ ಸಾಲಿನ ಕಡೆ ಪಯಣ. ಆಗ ಶುರುವಾದ ಮಳೆ ಅಂದು ಇಡೀ ದಿನ ಬಿಡದೆ ತೊಟ್ಟಿಕ್ಕುತ್ತಲೇ ಇತ್ತು. ಆ ಮಳೆಯ ರೌದ್ರಾವತಾರ ನೋಡಿ , ಟುಕ್ ಟುಕ್ (ಅಲ್ಲಿ ಆಟೋಗಳಿಗೆ ಹಾಗಂತಾರೆ) ಹಿಡಿದು ಎಲ್ಲ ಎಕ್ಸ್‌ಪ್ಲೋರ್‌ಮಾಡುವ ಉತ್ಸಾಹದಲ್ಲಿದ್ದ ದಿನೇಶ್ ಇದೇ ಸರಿಹೋಯ್ತು. ಹಾಗೆ ಬಂದಿದ್ದರೆ ಮಳೆ ಹೊಡೆತಕ್ಕೆ ಸಿದ್ಧತೆ ಇಲ್ಲದ ನಾವು ತೋಯ್ದು ತೊಪ್ಪೆಯಾಗಬೇಕಿತ್ತು‌ ಅಂದರು.</p>



<p></p>



<p>ಅಂಬರ್ ಕೋಟೆಯ ಕೆಳಗೇ ಒಂದು ಸರೋವರವಿದೆ. ಮೆಟ್ಟಿಲ ದಾರಿ ದೂರವಿಲ್ಲದಿದ್ದರೂ ಮೇಲೆ ಕೋಟೆಯ ಬಳಿ ಪಾರ್ಕಿಂಗ್ ಜಾಗಕ್ಕೆ ಹೋಗಲು ಮುಂದೆ ಹೋಗಿ ಸುತ್ತಿ ಬರಬೇಕು. ಕಲ್ಲುಗಳನ್ನು ನೆಲಕ್ಕೆ ಸಮನಾಗಿ ಹೂತು ಮಾಡಿದ ಅಚ್ಚುಕಟ್ಟಾದ ರಸ್ತೆ. ಮಳೆ‌ನೀರು ಇಡಿ ರಸ್ತೆ ತುಂಬ ಹರಿಯುತ್ತಿತ್ತು. ತುದಿ ಮುಟ್ಟುವ ಹೊತ್ತಿಗೆ ಮಳೆ ಕೊಂಚ ನಿಲುಗಡೆಗೆ ಬಂದಂತೆ‌ ಕಂಡಿತು.</p>



<p>ಜೈಪುರದ ಸ್ಮಾರಕಗಳ ಟಿಕೆಟ್ ಬಿಡಿಬಿಡಿಯಾಗಿ ಕೊಂಡರೆ ಕೊಂಚ ಜೇಬಿಗೆ ಭಾರ ಎನಿಸಿದರೂ ಕಾಂಬೊ ಟಿಕೆಟ್ ಲಭ್ಯವಿವೆ. ಅದರಂತೆ ನಾವು ಐದಾರು ಸ್ಥಳಗಳ ಪ್ರವೇಶಕ್ಕೆ ಒಮ್ಮೆಗೇ ಮತ್ತು ಒಂದೇ ಟಿಕೆಟ್ ಖರೀದಿಸಿದ್ದೆವು. ಗಣೇಶ ಗೇಟ್ ಮೂಲಕ ಪ್ರವೇಶ ಪಡೆದು ಒಳಹೊಕ್ಕೆವು. ನಿರ್ವಹಣೆ ಚೆನ್ನಾಗಿದೆ. ಅಮೆರ್ ಊರ ಬಳಿ ಇರುವ ಕಾರಣ ಅದೇ ಹೆಸರಿನಿಂದಲೂ ಅಂಬಾ (ದುರ್ಗಾ) ದೇವಿಯ ಕಾರಣಕ್ಕೆ ಅಂಬರ್ ಎಂತಲೂ ಕರೆಯಲಾಗುವುದಂತೆ. ಮೂಟ ಸರೋವರ ಒಂದೆಡೆಗಿದೆ. ಆ ಸರೋವರ ಅರಮನೆ ಬಳಿಯ ಬಾಲ್ಕನಿಯಿಂದ ಸುಂದರವಾಗಿ ಕಾಣುತ್ತದೆ. ಸರೋವರದ ನಡುವಿನ ತೋಟದ ಪ್ರಯೋಗ ಮುಘಲ್ ಹೂದೋಟದ ನಕಲೆಂದೂ, ಅಯಶಸ್ವಿಯೆಂದೂ ಗೈಡ್ ಒಬ್ಬ ಯಾರಿಗೊ ಹೇಳುತ್ತಿದ್ದುದು ಆಯಾಚಿತವಾಗಿ ಕಿವಿಗೆ ಬಿತ್ತು. ಅದೇ ಬಾಲ್ಕನಿಯಲ್ಲಿ ಇಣುಕಿ ಕೋಟೆಯ ಕೆಳಗಿನ ದಾರಿ ನೋಡುವಾಗ ಸಾಲಾಗಿ ಆನೆಗಳು ತೆರಳುತ್ತಿದ್ದುದು ಕಂಡಿತು. ಪ್ರವಾಸೋದ್ಯಮ ರಾಜಸ್ತಾನದ ಆದಾಯದ ಮುಖ್ಯ ಮೂಲಗಳಲ್ಲೊಂದು ಎಂದು ಕಾಣುತ್ತದೆ. ಆನೆ ಸವಾರಿ ಮತ್ತು ಅವುಗಳ ಸಾಕಾಣಿಕೆಯ ಏರುಪೇರಿನ ಬಗ್ಗೆ ಹಲವು ದೂರುಗಳಿವೆಯಂತೆ.‌ ಮಳೆಯ ಕಾರಣ ಅರಮನೆ ಅಷ್ಟೇನೂ ಝಗಮಗಿಸಿದಂತೆ ಕಾಣುತ್ತಿರಲಿಲ್ಲ. ಬಿಸಿಲಲ್ಲೇ ಹೆಚ್ಚು ಹೊಳಪೆಂದು ಕಾಣುತ್ತದೆ. ಅರಮನೆ ಒಳಹೊಕ್ಕರೆ ಎಡಕ್ಕೆ ಶೀಶ್ ಮಹಲ್ ಇದೆ. ಬಹುತೇಕ ಗಾಜಿನ ಚೂರು (ಕನ್ನಡಿ)ಗಳಿಂದ ಅಲಂಕೃತವಾದ ಅದು ಆಕರ್ಷಕವಾಗಿದೆ. ಗಾಜಿನ ಚೂರುಗಳಲ್ಲಿ ಕಾಣುವ ತಮ್ಮ ಸೆಲ್ಫಿ ಬಿಂಬವನ್ನು ಹಲವು ಪ್ರವಾಸಿಗರು ಸೆರೆಹಿಡಿದುಕೊಳ್ಳುತ್ತಿದ್ದರು.</p>



<p>ಇಲ್ಲಿನ ಬಹುತೇಕ ರಚನೆಗಳ ಮೇಲೆ ಮುಘಲ್ ವಾಸ್ತುಶಿಲ್ಪದ ಪ್ರಭಾವವಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಅದೂ ಅಲ್ಲದೆ ಇಲ್ಲಿನ ದಿವಾನ್ ಇ ಆಮ್ ಮತ್ತು ದಿವಾನ್ ಇ ಖಾಸ್ ಕೂಡ ಇದನ್ನೇ ಪುಷ್ಠೀಕರಿಸುತ್ತವೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/12/image-40-768x1024.png" alt="" class="wp-image-18434" width="366" height="488" srcset="https://peepalmedia.com/wp-content/uploads/2022/12/image-40-768x1024.png 768w, https://peepalmedia.com/wp-content/uploads/2022/12/image-40-225x300.png 225w, https://peepalmedia.com/wp-content/uploads/2022/12/image-40-1152x1536.png 1152w, https://peepalmedia.com/wp-content/uploads/2022/12/image-40-150x200.png 150w, https://peepalmedia.com/wp-content/uploads/2022/12/image-40-300x400.png 300w, https://peepalmedia.com/wp-content/uploads/2022/12/image-40-696x928.png 696w, https://peepalmedia.com/wp-content/uploads/2022/12/image-40-1068x1424.png 1068w, https://peepalmedia.com/wp-content/uploads/2022/12/image-40.png 1200w" sizes="auto, (max-width: 366px) 100vw, 366px" /></figure></div>


<p>ಜೈಗಡ್ ಕೋಟೆ ಕೂಡ ಇದೇ ಕೋಟೆಗೆ ಹೊಂದಿಕೊಂಡಂತಿದೆ. ಎರಡೂ ಸೇರಿ ಕಿ.ಮೀ. ಗಟ್ಟಲೆ ಕೋಟೆ ಅರಾವಳಿ ಬೆಟ್ಟಸಾಲನ್ನು ಅಲಂಕರಿಸಿವೆ. ಜೈಗಡ್ ಕೋಟೆಯನ್ನು ಒಂದುವೇಳೆ ಶತ್ರುಗಳಿಂದ ರಾಜಪರಿವಾರ ಪಾರಾಗುವ ಸಂದರ್ಭಕ್ಕೆಂದು ಇದಕ್ಕೆ ಸೇರಿಸಲಾಗಿತ್ತು ಎನ್ನಲಾಗುತ್ತದೆ. 1727ರಲ್ಲಿ ಎರಡನೇ ಸವಾಯಿ ಜೈಸಿಂಗ್ ರಾಜಧಾನಿಯನ್ನು ಜೈಪುರಕ್ಕೆ ವರ್ಗಾಯಿಸುವವರೆಗೆ ಇದುವೇ ರಾಜಧಾನಿಯಂತೆ. ಕೋಟೆ ಮೊದಲು ನಿರ್ಮಾಣವಾದ್ದು ರಾಜಾ ಮಾನ್ ಸಿಂಗ್ ಕಾಲದಲ್ಲಂತೆ. ಸುಖ್ ನಿವಾಸ್ ಎಂಬ ಮತ್ತೊಂದು ರಚನೆ ಇದ್ದು ಅಲ್ಲಿ ಬಿರುಬಿಸಿಲಲ್ಲೂ ತಂಪಾದ ಗಾಳಿ ಬೀಸುವ ವ್ಯವಸ್ಥೆ ಮಾಡಿದ್ದರಂತೆ. ಎಲ್ಲವನ್ನೂ ಸುತ್ತಾಡಿ ಒಂದೆರಡು ಟನೆಲ್ ಮಾದರಿಯ ದಾರಿಗಳಲ್ಲಿ ಕೂಡ ಸಾಗಿ‌ ಬರುವ ದಾರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಒಂದಷ್ಟು ಅಂಗಡಿಗಳೂ ಸಿಕ್ಕವು.</p>



<p></p>



<p>ರಾಜಸ್ತಾನದ ಎಲ್ಲ ಕಡೆಯೂ ಕಾಣುವ ಒಂದು ಸಾಮನ್ಯ ಸಂಗತಿ ಸಂಗೀತ‌,ನೃತ್ಯ ಮತ್ತು ಬೊಂಬೆ ನಾಟಕ ಕಲೆಗಳದ್ದು. ಅಂಬರ್ ಕೋಟೆಯ ಹೊರಬರುವ ಮೆಟ್ಟಿಲ ಮೇಲೆ ಜೋರು ಮಳೆಯ ನಡುವೆಯೂ ಹಲವು‌ ಕಲಾವಿದರು ತಮ್ಮ ಪಾಡಿಗೆ ತನ್ಮಯರಾಗಿ ತಮ್ಮ ಸಂಗೀತ ವಾದ್ಯ ನುಡಿಸುತ್ತಿದ್ದರು. ಇಂಥದೇ ದೃಶ್ಯವನ್ನು ಇನ್ನೂ ಹಲವೆಡೆ ಕಂಡೆವು.</p>



<p></p>



<p><strong>ಮಿಸ್ ಆದ ಪನ್ನಾ ಮೀನಾ ಕ ಕುಂಡ್.</strong></p>



<p></p>



<p>ಜೋರು ಮಳೆಯ ಅವಸರದಲ್ಲಿ ಪನ್ನಾ ಮೀನಾ ಕಾ ಕುಂಡ್ ಬಳಿಯೇ ಮುಂದೆ ಹೋದೆವು. ನಂತರ ಡ್ರೈವರಣ್ಣ ಈಗ ಅಲ್ಲಿಗೆ ಹೋಗಬೇಕೆಂದರೆ ಮತ್ತೆ ಹತ್ತನ್ನೆರಡು ಕಿ.ಮೀ. ಹಿಂದೆ ಹೋಗಬೇಕು ಎಂದ. ನಮಗೆ ಒಂದೇ ದಿನದಲ್ಲಿ ಜೈಪುರದ ಇನ್ನೂ ಹಲವು ಜಾಗಗಳ ದರ್ಶನ ಆಗಬೇಕಿದ್ದರಿಂದ ಒತ್ತಾಯಿಸದೆ ಸುಮ್ಮನಾದೆವು. ಈ ಕುಂಡ ನಮ್ಮ ಹಂಪಿಯ ಕಲ್ಲು ಬಾವಿಯಂತಿದೆ (ಗೂಗಲಲ್ಲಿ ಕಂಡದ್ದು)</p>



<p></p>



<p>ಅಂಬರ್ ಕೋಟೆಯಿಂದ ತಿರುಗಿ ಬರುವ ದಾರಿಯಲ್ಲಿ ಜಲ್ ಮಹಲ್ ಬಳಿ ನಿಂತೆವು. ಆ ಹೊತ್ತಿಗೆ ಮಳೆಯೂ ನಿಲುಗಡೆಗೆ ಬಂದಿತ್ತು. ಮನ್ ಸಾಗರ್ ಸರೋವರದ ನಡುವೆ ತೇಲುತ್ತಿರುವಂತೆ ಕಾಣುವ ಇದು ನಿರ್ಮಾಣವಾದ್ದು 1699ರಲ್ಲಿಯಂತೆ. ನಂತರ ಹಲವು ಸಾರ್ತಿ ಪುನರುಜ್ಜೀವನಗೊಂಡಿದೆಯಂತೆ. ಒಟ್ಟು ಐದು ಮಹಡಿಗಳ ಕಟ್ಟಡದಲ್ಲಿ ಸಧ್ಯ ಕಾಣುವುದು ಒಂದು/ ಇಲ್ಲವೆ ಎರಡು ಮಹಡಿಗಳು ಮಾತ್ರ. ಇದರ ಒಳಾಂಗಣ ಮತ್ತು ಸಮೀಪ ದರ್ಶನಕ್ಕೆ ದೋಣಿ ವ್ಯವಸ್ಥೆ ಇದೆಯಂತೆ. ಸಧ್ಯ ನಾವು ಹೋದಾಗ ಅಂತ ವ್ಯವಸ್ಥೆ‌ ಇದ್ದಂತೇನೂ ಕಾಣಲಿಲ್ಲ‌. ಜಲ್ ಮಹಲ್ ನ ಒಳಂಗಣ‌‌ ಮತ್ತು ಮೇಲ್ಚಾವಣಿಯ ತೋಟದ ಇಮೇಜುಗಳು ಅಂತರ್ಜಾಲದಲ್ಲಿ ಕಾಣಸಿಗುತ್ತವೆ.</p>



<p></p>



<p>ಜಲ್ ಮಹಲ್ ಅನ್ನು ಹಿನ್ನೆಲೆಯಾಗಿರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಅಭಿಮಾನಿಗಳ ನೂಕುನುಗ್ಗಲೇ ಇತ್ತು‌. ಜೊತೆಗೆ ಸಾಂಪ್ರದಾಯಿಕ ರಾಜಸ್ಥಾನಿ ವೇಷಭೂಷಣ ಬೇರೆ ಬಾಡಿಗೆಗೆ ಲಭ್ಯ. ಅಂತೂ ಇಲ್ಲಿ ನಮ್ಮ ತಂಡದ ಭಾರೀ ಫೋಟೋ ಸೆಷನ್ ಜರುಗಿತು.</p>



<p></p>



<p><strong>ರೋಹಿತ್‌ ಅಗಸರಹಳ್ಳಿ</strong></p>



<p>ಹಾಸನದ ನಿವಾಸಿಯಾದ ಇವರು ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.</p>
]]></content:encoded>
					
		
		
			</item>
		<item>
		<title>ಕೆಂಪು ಕೋಟೆಗೊಂದು ಸುಸ್ತಿನ ಸುತ್ತು</title>
		<link>https://peepalmedia.com/tirugadi-bando-by-rohith-agasarahalli-redport/</link>
		
		<dc:creator><![CDATA[Rohit Agasarahalli]]></dc:creator>
		<pubDate>Wed, 16 Nov 2022 09:16:01 +0000</pubDate>
				<category><![CDATA[ಪ್ರವಾಸ ಕಥನ]]></category>
		<category><![CDATA[Delhi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[redfort]]></category>
		<category><![CDATA[rohith agasara halli]]></category>
		<category><![CDATA[travel]]></category>
		<category><![CDATA[Travelogue]]></category>
		<guid isPermaLink="false">https://peepalmedia.com/?p=15659</guid>

					<description><![CDATA[ʼನೀವು ಹಾಕಿರೋ ಚಾಂದಿನಿ ಚೌಕ್ ಡೆಸ್ಟಿನೇಶನ್ ಗೆ ಈ ಟ್ರಾಫಿಕ್ಕಲ್ಲಿ ತಲುಪೋದು ಕಷ್ಟʼ ಎಂದು ಹೇಳಿದ ಟ್ಯಾಕ್ಸಿವಾಲಾ ಪರಿಹಾರವನ್ನೂ ಅವನೇ ಸೂಚಿಸಿದ. ಆ ಪರಿಹಾರ ಏನಾಗಿತ್ತು? ಓದಿ.. ರೋಹಿತ್‌ ಅಗಸರಹಳ್ಳಿಯವರ ತಿರುಗಾಡಿ ಬಂದೋ ಅಂಕಣ-೪ ಅಕ್ಷರಧಾಮದ ನಿರಾಶೆಯನ್ನು ಇಲ್ಲವಾಗಿಸಲು ಕೆಂಪು ಕೋಟೆ ಕಡೆಗೆ ಧಾಳಿ ಮಾಡಿದೆವು. ಅದು ಸಂಜೆ ಟ್ರಾಫಿಕಿನ ಪೀಕ್ ಸಮಯ. ಟ್ಯಾಕ್ಸಿವಾಲಾ ಮೊದಲೇ ಹೇಳಿಬಿಟ್ಟ. ನೀವು ಹಾಕಿರೋ ಚಾಂದಿನಿ ಚೌಕ್ ಡೆಸ್ಟಿನೇಶನ್ ಗೆ ಈ ಟ್ರಾಫಿಕ್ಕಲ್ಲಿ ತಲುಪೋದು ಕಷ್ಟ ಎಂದು. ಪರಿಹಾರವನ್ನೂ ಅವನೇ ಸೂಚಿಸಿದ. [&#8230;]]]></description>
										<content:encoded><![CDATA[
<h5 class="has-text-align-center wp-block-heading"><strong>ʼ</strong><strong>ನೀವು ಹಾಕಿರೋ ಚಾಂದಿನಿ ಚೌಕ್ ಡೆಸ್ಟಿನೇಶನ್ ಗೆ ಈ ಟ್ರಾಫಿಕ್ಕಲ್ಲಿ ತಲುಪೋದು ಕಷ್ಟ</strong><strong>ʼ</strong><strong> ಎಂದು ಹೇಳಿದ ಟ್ಯಾಕ್ಸಿವಾಲಾ ಪರಿಹಾರವನ್ನೂ ಅವನೇ ಸೂಚಿಸಿದ. ಆ ಪರಿಹಾರ ಏನಾಗಿತ್ತು? ಓದಿ.. ರೋಹಿತ್‌ ಅಗಸರಹಳ್ಳಿಯವರ ತಿರುಗಾಡಿ ಬಂದೋ ಅಂಕಣ-೪</strong></h5>



<p>ಅಕ್ಷರಧಾಮದ ನಿರಾಶೆಯನ್ನು ಇಲ್ಲವಾಗಿಸಲು ಕೆಂಪು ಕೋಟೆ ಕಡೆಗೆ ಧಾಳಿ ಮಾಡಿದೆವು. ಅದು ಸಂಜೆ ಟ್ರಾಫಿಕಿನ ಪೀಕ್ ಸಮಯ. ಟ್ಯಾಕ್ಸಿವಾಲಾ ಮೊದಲೇ ಹೇಳಿಬಿಟ್ಟ. ನೀವು ಹಾಕಿರೋ ಚಾಂದಿನಿ ಚೌಕ್ ಡೆಸ್ಟಿನೇಶನ್ ಗೆ ಈ ಟ್ರಾಫಿಕ್ಕಲ್ಲಿ ತಲುಪೋದು ಕಷ್ಟ ಎಂದು. ಪರಿಹಾರವನ್ನೂ ಅವನೇ ಸೂಚಿಸಿದ. ಕೆಂಪು ಕೋಟೆಯ ಗೇಟಿನ ಬಳಿ ಬಿಡ್ತೀನಿ, ಅದರ ಎದುರೇ ಚಾಂದಿನಿ ಚೌಕ್ ಮತ್ತು ಜಾಮಾ ಮಸ್ಜಿದ್ ಎಂದು ಟಿಕೆಟ್ ಕೌಂಟರೊಂದರ ಬಳಿ ವಿಲೇವಾರಿ ಮಾಡಿ ಪರಾರಿಯಾದ. ಕೋಟೆ ಪ್ರವೇಶದ ಟಿಕೇಟ್ ಖರೀದಿಸಿ ಪ್ರವೇಶಕ್ಕೆ ಜಾಗ ಹುಡುಕಿದಾಗ ತಿಳಿಯಿತು ಅವನ ಚಾಲಾಕಿತನ. ಬೃಹತ್ ವ್ಯಾಪ್ತಿಯ ಆ ಕೋಟೆಗೆ ಒಂದಕ್ಕಿಂತ ಹೆಚ್ಚು ಕೌಂಟರುಗಳಿದ್ದರೂ ಪ್ರವೇಶ ಒಂದೇ ಇದ್ದಂಗಿತ್ತು. ನಾವು ಟಿಕೆಟ್ ಖರೀದಿಸಿದ‌ ಜಾಗದಿಂದ ಕಿ.ಮಿ. ದೂರದಲ್ಲಿತ್ತು ಎಂಟ್ರಿ ಗೇಟು. ಅದೂ ಕ್ಲೋಸಿಂಗ್ ಸಮಯ ಬೇರೆ. ಆರು ಮಂದಿ ಮೂರು ಗುಂಪಾಗಿ‌ ನಡೆದು ಒಳಹೋಗುವ ಹೊತ್ತಿಗೆ ಸೂರ್ಯ ಬಾಯ್ ಹೇಳಿ ಚಂದ್ರನಿಗೆ ಚಾರ್ಜು ಕೊಡುವ ಹೊತ್ತಾಗಿತ್ತು.</p>



<p><br>ಈ ಹಿಂದೆ ದೆಹಲಿಗೆ ಬಂದಿದ್ದರೂ ಕೆಂಪು ಕೋಟೆ ನೋಡಿರಲಿಲ್ಲ. ಬಹುಶಃ ಟಿವಿಯಲ್ಲಿ ಬಿಟ್ಟ ಕಣ್ಣು ಬಿಟ್ಟ ಹಾಗೇ ಕೆಂಪು ಕೋಟೆ ನೋಡಿದ್ದು ದೇವೇಗೌಡರು ಅಲ್ಲಿಂದ ಒಮ್ಮೆ ಸ್ವಾತಂತ್ರ್ಯೊತ್ಸವದ ಭಾಷಣ ಮಾಡಿದಾಗ ಅಂತ ಕಾಣ್ತದೆ. ಆಗಿನ್ನೂ ಖಾಸಗಿ ಚಾನೆಲುಗಳ ಭರಾಟೆ ಕೂಡ ಅಷ್ಟಿರಲಿಲ್ಲ. ಇದ್ದವೆರಡೇ ಚಾನೆಲು. ಡಿಡಿ -೧ ಮತ್ತು ಡಿ.ಡಿ.-೯. ಇತ್ತೀಚೆಗೆ ಪಂಜಾಬ್ ರೈತ‌ಹೋರಾಟದ ಸಂದರ್ಭದಲ್ಲಿ ಕೂಡ ಕೆಂಪುಕೋಟೆ ಬಹಳ ಸದ್ದು ಮಾಡಿತ್ತು. ಅಲ್ಲಿದ್ದ ರಾಷ್ಟ್ರಧ್ವಜದ ಪಕ್ಕದಲ್ಲಿ ಮತ್ಯಾರೊ ಜೆಂಡಾ ಏರಿಸಿದ್ದರೆಂದು.</p>


<div class="wp-block-image">
<figure class="aligncenter size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/11/tirugadi-2-576x1024.webp" alt="" class="wp-image-15662" srcset="https://peepalmedia.com/wp-content/uploads/2022/11/tirugadi-2-576x1024.webp 576w, https://peepalmedia.com/wp-content/uploads/2022/11/tirugadi-2-169x300.webp 169w, https://peepalmedia.com/wp-content/uploads/2022/11/tirugadi-2-150x267.webp 150w, https://peepalmedia.com/wp-content/uploads/2022/11/tirugadi-2-300x533.webp 300w, https://peepalmedia.com/wp-content/uploads/2022/11/tirugadi-2-696x1237.webp 696w, https://peepalmedia.com/wp-content/uploads/2022/11/tirugadi-2.webp 720w" sizes="auto, (max-width: 576px) 100vw, 576px" /></figure></div>


<p>ದಿಲ್ಲಿ ಕೋಟೆಯ ನಮ್ಮ ಭೆಟ್ಟಿ ತೀರ ಅವಸರದ್ದಾಗಿತ್ತು. ಅದೂ ಅಲ್ಲದೆ ಮುಂಜಾನೆಯಿಂದ ಸುತ್ತಾಡಿ ಏನನ್ನಾದರೂ ಕುತೂಹಲದಿಂದ ನೋಡಿ ತಣಿಯುವ ತಾಳ್ಮೆಯೂ ಉಳಿದಿರಲಿಲ್ಲ. ಆದರೂ ನಾನು, ದಿನೇಶ್, ರೋಹಿಣಿ ಮೇಡಂ ಮತ್ತು ಆರುಷ ಒಂದು ಸುತ್ತು ಬಂದೆವು; ಸುಜಾತಾ‌ ಮತ್ತು ಪ್ರಣತಿ ಒಳಾವರಣದ ಪಾರ್ಕಿನಲ್ಲಿ ನಮಗಾಗಿ ಕಾಯುತ್ತಿದ್ದರು.</p>



<p><br>ದಿಲ್ಲಿ ಕೆಂಪು ಕೋಟೆಯ ಚರಿತ್ರೆಯೇ ರೋಚಕ. ಷಹಜಹಾನ್ ಆಗ್ರಾದಿಂದ ದಿಲ್ಲಿಗೆ ತನ್ನ ರಾಜಧಾನಿ ವರ್ಗಾಯಿಸಿದಾಗ ಕಟ್ಟಿಸಿದ್ದೇ ಈ ಕೋಟೆ. ಶಿಲ್ಪಿ ತಾಜ್ ಮಹಲ್ ನಿರ್ಮಿಸಿದ್ದ ಉಸ್ತಾದ್ ಅಹಮದ್ ಲಾಹೋರಿ. ಕೋಟೆ ನಿರ್ಮಾಣವಾದಾಗ ಪೂರ್ಣ ಕಂದಕದಲ್ಲಿ ಯಮುನಾ ನದಿ ನೀರು ಹರಿಯುವಂತೆ ನಿರ್ಮಿಸಲಾಗಿತ್ತಂತೆ. ಆಗಿನ ಷಹಜಹಾನಾಬಾದ್‌ನಲ್ಲಿ ಅಂದರೆ ಇಂದಿನ ಪುರಾನಿ ದಿಲ್ಲಿಯಲ್ಲಿ ಕಟ್ಟಲ್ಪಟ್ಟ ಮುಘಲ್ ಕಾಲದ ಅತ್ಯುಚ್ಚ ಕಟ್ಟೋಣಿಕೆ ಇದು. ೧೬೩೮ ರಲ್ಲಿ ಆರಂಭವಾಗಿ ೧೬೪೮ ರಲ್ಲಿ ಮುಗಿಯಿತು. ಮೋತಿ ಮಸೀದಿ ಔರಂಗಝೇಬ್ ನ ಕಾಲದಲ್ಲಿ ಸೇರ್ಪಡೆಯಾಯ್ತು. ಔರಂಗಝೇಬ್ ನಂತರ ದಿಲ್ಲಿ ಮತ್ತು ಕೋಟೆ ಎರಡೂ ಪತನದತ್ತ ಸಾಗಿದವು.</p>


<div class="wp-block-image">
<figure class="aligncenter size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/11/tirugadi-3-1024x576.webp" alt="" class="wp-image-15663" srcset="https://peepalmedia.com/wp-content/uploads/2022/11/tirugadi-3-1024x576.webp 1024w, https://peepalmedia.com/wp-content/uploads/2022/11/tirugadi-3-300x169.webp 300w, https://peepalmedia.com/wp-content/uploads/2022/11/tirugadi-3-768x432.webp 768w, https://peepalmedia.com/wp-content/uploads/2022/11/tirugadi-3-150x84.webp 150w, https://peepalmedia.com/wp-content/uploads/2022/11/tirugadi-3-696x392.webp 696w, https://peepalmedia.com/wp-content/uploads/2022/11/tirugadi-3-1068x601.webp 1068w, https://peepalmedia.com/wp-content/uploads/2022/11/tirugadi-3.webp 1280w" sizes="auto, (max-width: 1024px) 100vw, 1024px" /></figure></div>


<p>ಫರುಕ್ಷಿಯಾರ್ ಕಾಲದಲ್ಲಿ ಧಾಳಿ ಮಾಡಿದ ನಾದಿರ್ ಶಾ ಸುಲಭಕ್ಕೆ ದಿಲ್ಲಿಯನ್ನು ಗೆದ್ದು ಲೂಟಿ ಮಾಡಿದ್ದೂ ಅಲ್ಲದೆ ಮಯೂರ ಸಿಂಹಾಸನವನ್ನೂ ಹೊತ್ತೊಯ್ದ. (ನಾದಿರ್ ಶಾ ನ ವಿಕ್ಷಿಪ್ತ ವ್ಯಕ್ತಿತ್ವದ ಬಗ್ಗೆ ನಮ್ಮ ಲಂಕೇಶ್ ಅವರು ಗುಣಮುಖ ಎಂಬ ಅದ್ಭುತ ನಾಟಕ ಬರೆದಿದ್ದಾರೆ. ನಾಟಕ ಚರಿತ್ರೆಯ ಯಾಂತ್ರಿಕ ವಿವರಗಳಿಗೆ ಮಾತ್ರ ಕಟ್ಟುಬೀಳದೆ ಹಲವು ಸಂಕೀರ್ಣ ಸಂಗತಿಗಳನ್ನು ಅಭಿವ್ಯಕ್ತಿಸುತ್ತದೆ ಎನ್ನುವುದು ಬೇರೆ ಮಾತು; ಆದರೆ ನಾಟಕದಲ್ಲಿ ದುರ್ಬಲ ಮುಘಲ್ ದೊರೆಯ ಚಿತ್ರಣ ಸಮರ್ಥವಾಗಿ ಬಂದಿದೆ)</p>



<p><br> ೧೭೫೨ ರ ರಾಜಕೀಯ ಬೆಳವಣಿಗೆಗಳಂತೆ ಮರಾಠರು ದೆಹಲಿ ಸಿಂಹಾಸನದ ರಕ್ಷಣೆಗೆ ನಿಂತರು. ೧೭೬೦ ರಲ್ಲಿ ಕೆಂಪುಕೋಟೆಯೊಳಗಿನ ದಿವಾನ್ ಇ ಖಾಸ್ ( ಮಂತ್ರಿ ಪರಿಷತ್ ಸಭೆ ಸೇರುತ್ತಿದ್ದ ಸ್ಥಳವಂತೆ) ಮೇಲ್ಛಾವಣಿಗೆ ಹೊದಿಸಿದ್ದ ಬೆಳ್ಳಿಯನ್ನು ದುರ್ರಾನಿಯಿಂದ ದಿಲ್ಲಿ ಉಳಿಸಲು ಖರ್ಚಿಗೆ ಕಾಸಿಲ್ಲದೆ ಕರಗಿಸಿದರಂತೆ. ಆದರೆ ದುರ್ರಾನಿ ಎದುರಿನ ಮೂರನೇ ಪಾಣಿಪಟ್ ಯುದ್ಧದಲ್ಲಿ ಮರಾಠರಿಗೆ ಸೋಲಾಯ್ತು. ಮತ್ತೆ ಷಾ ಆಲಂ ಕಾಲಕ್ಕೆ ಮಹದಾಜಿ‌ ಸಿಂಧ್ಯ ದಿಲ್ಲಿಯ ಸಿಂಹಾಸನಕ್ಕೆ ಬೆಂಬಲವಾಗಿ ನಿಂತ.<br> ೧೭೬೦ ರಲ್ಲಿ ಜಾಟ್ ದೊರೆ ಜವಾಹರ್ ಸಿಂಗ್ ದೆಹಲಿ ಮೇಲೆ ಧಾಳಿ ಮಾಡಿ ಕೆಂಪು ಕೋಟೆ ಹಿಡಿದನಂತೆ. ನಂತರದ ಎರಡೇ ದಿನಗಳಲ್ಲಿ  ಕೋಟೆ ಬಾಗಿಲುಗಳನ್ನು ಕಿತ್ತು ಅವನು ತನ್ನ ಗೆಲುವಿನ ಗೌರವಾರ್ಥ ಭರತ್ಪುರದ ಲೋಹಗಡ ಕೋಟೆಗೆ ಹೊತ್ತೊಯ್ದ. (ಅವು ಈಗಲೂ ಅಲ್ಲಿಯೇ ಇವೆಯಂತೆ)</p>



<p>ನಂತರದ ಧಾಳಿಯ ಸರದಿ ಸಿಕ್ಖ್ ಅರಸರದು. ೧೭೮೩ ರ ಈ ದಾಳಿಯ ಗುರಿ ಕೂಡ ದಿಲ್ಲಿ ಹಾಗು ಕೆಂಪುಕೋಟೆ. ಈ ಲೂಟಿ ಆವಧ್ ನಿಂದ ಜೋಧಪುರದ ವರೆಗೆ ವಿಸ್ತರಿಸಿತ್ತಂತೆ. ದಿಲ್ಲಿಯಲ್ಲಿ ಏಳು ಗುರುದ್ವಾರಗಳನ್ನು ಸ್ಥಾಪಿಸುವ ಒಪ್ಪಂದದೊಂದಿಗೆ ಮತ್ತೆ ದಿಲ್ಲಿಗೆ ಮುಕ್ತಿ. ಅವುಗಳಲ್ಲಿ ಒಂದು ಕೆಂಪು ಕೋಟೆ ಎದುರಿನ ಚಾಂದನಿ ಚೌಕದಲ್ಲಿದೆ. ೧೭೮೮ ರಲ್ಲಿ ಮತ್ತೆ ಮರಾಠರ ಹಿಡಿತಕ್ಕೆ ಬಂದ ಕೋಟೆ ಅಂತಿಮವಾಗಿ ೧೮೦೩ ಎರಡನೇ ಆಂಗ್ಲೋ ಮರಾಠ ಯುದ್ಧದ ಸೋಲಿನಿಂದ ಈಸ್ಟ್ ಇಂಡಿಯಾ ಕಂಪೆನಿಯ ಹಿಡಿತಕ್ಕೆ ಬಂತು. ಇದರ ಬಳಿಕ ಕೆಂಪುಕೋಟೆ ಬ್ರಿಟಿಷರ ಕೈತಪ್ಪಿದ್ದು ೧೮೫೭ ರ ದಂಗೆಯ ಸಂದರ್ಭದಲ್ಲಿ ಮುಘಲ್ ವಂಶದ ಕಡೆಯ ಕುಡಿ ಬಹುದ್ದೂರ್ ಶಾ ಜಫರ್ ನ ಕಾರಣದಿಂದ ಮಾತ್ರ. ದಂಗೆಯನ್ನು ಅಡಗಿಸಿದ ನಂತರ ಪ್ರತಿರೋಧದ ರೂಪಕದಂತಿದ್ದ ದಿಲ್ಲಿಯ ಕೆಂಪು ಕೋಟೆಯನ್ನು ಬ್ರಿಟಿಷರು ಯೋಜನಾ ಬದ್ಧವಾಗಿ ಹಾಳುಗೆಡವಿದರು. ಆಗ ಕೋಟೆಯ ಒಳಾವರಣದ ಶೇಕಡ ೮೦ ರಷ್ಟು ರಚನೆಗಳನ್ನು ಕೆಡವಿ ಹಾಕಲಾಯ್ತಂತೆ. ಈಗ ಉಳಿದಿರುವುದು ಕೋಟೆಯ ಸುತ್ತಿನ ಕೇವಲ ಅಸ್ಥಿಪಂಜರದಂಥ ರಚನೆ ಮಾತ್ರ. ನಂತರ ಕರ್ಜನ್ನನ ಅವಧಿಯಲ್ಲಿ ಒಂದಷ್ಟು ಪುನರುಜ್ಜೀವನ ನಡೆಯಿತಂತೆ.</p>



<p><br> ಕೆಂಪುಕೋಟೆಯಲ್ಲಿದ್ದ ಮಹತ್ವದ ವಸ್ತುಗಳಲ್ಲಿ ಹಲವು ೧೭೪೭ ರಲ್ಲಿ ನಾದಿರ್ ಶಾ ನೊಂದಿಗೆ ಪರ್ಶಿಯಾಗೆ ಪಯಣಿಸಿದರೆ; ಉಳಿದವು ೧೮೫೭ ರಲ್ಲಿ ಬ್ರಿಟಿಷರಿಂದ ಇಂಗ್ಲೆಂಡಿಗೆ ಮತ್ತು ಖಾಸಗಿ ಮ್ಯೂಸಿಯಂಗಳಿಗೆ ಬಿಕರಿಯಾದವಂತೆ. ೧೯೧೧ ರಲ್ಲಿ ಇಂಗ್ಲೆಂಡಿನ ರಾಜ-ರಾಣಿಯರ ಭೇಟಿಯ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸುವ ಕಾರಣಕ್ಕೆ ಕೋಟೆಯೊಳಗಿನ ಕೆಲ ರಚನೆಗಳನ್ನು ಪುನ ಸ್ಥಾಪಿಸಲಾಯ್ತೆಂದು ಹೇಳಲಾಗಿದೆ.</p>


<div class="wp-block-image">
<figure class="aligncenter size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/11/tirugadi-4-1-1024x576.webp" alt="" class="wp-image-15664" srcset="https://peepalmedia.com/wp-content/uploads/2022/11/tirugadi-4-1-1024x576.webp 1024w, https://peepalmedia.com/wp-content/uploads/2022/11/tirugadi-4-1-300x169.webp 300w, https://peepalmedia.com/wp-content/uploads/2022/11/tirugadi-4-1-768x432.webp 768w, https://peepalmedia.com/wp-content/uploads/2022/11/tirugadi-4-1-150x84.webp 150w, https://peepalmedia.com/wp-content/uploads/2022/11/tirugadi-4-1-696x392.webp 696w, https://peepalmedia.com/wp-content/uploads/2022/11/tirugadi-4-1-1068x601.webp 1068w, https://peepalmedia.com/wp-content/uploads/2022/11/tirugadi-4-1.webp 1280w" sizes="auto, (max-width: 1024px) 100vw, 1024px" /></figure></div>


<p>೧೯೪೫ ರಲ್ಲಿ ಎರಡನೇ ಜಾಗತಿಕ ಯುದ್ಧ ಮುಗಿದಾಗ ತಾತ್ವಿಕವಾಗಿ ಮಿತ್ರರಾಷ್ಟ್ರಗಳ ವಿರೋಧ ಪಾಳೆಯದಲ್ಲಿದ್ದ ಐ ಎನ್ ಎ ಸೈನಿಕರ ವಿಚಾರಣೆ ನಡೆಸುವ ಯತ್ನ ನಡೆದದ್ದು ಇದೇ ಕೆಂಪು ಕೋಟೆಯಲ್ಲಿ. ಆಗ ಐ ಎನ್ ಎ ಸೈನಿಕರ ಪರ ವಕಾಲತ್ತು ಹಾಕಿದ ವಕೀಲ ಪಂಡಿತ್ ನೆಹರೂ. ಹಾಗೇ ೧೯೪೭ ರಲ್ಲಿ ಇದೇ ‌ಕೋಟೆಯ ಮೇಲೆ ಮೊದಲ ಸ್ವತಂತ್ರ ‌ಭಾರತದ ಧ್ವಜ ಹಾರಿಸಿದ್ದೂ ಕೂಡ ಅದೇ ನೆಹರೂ. ಈ ಧ್ವಜಾರೋಹಣ ಸಂಪ್ರದಾಯ ಯಾಕೋ ರಾಜಪ್ರಭುತ್ವದ ಪಳೆಯುಳಿಕೆಯಂತೆ ಕಂಡರೂ ಅದಕ್ಕೊಂದು ಚಾರಿತ್ರಿಕ ಮಹತ್ವ ಪ್ರಾಪ್ತವಾಗಿಬಿಟ್ಟಿದೆ. ಕೋಟೆಯ ಶಿಲ್ಪಿ ಲಾಹೋರಿಯ ಹೆಸರನ್ನು ಈಗ ಒಂದು ಪ್ರವೇಶ ದ್ವಾರಕ್ಕೆ ಇರಿಸಲಾಗಿದೆ. ಬ್ರಿಟಿಷರು ಕೋಟೆಯೊಳಗಿನ ಮೂರನೇ ಎರಡರಷ್ಟು ರಚನೆಗಳನ್ನು ನೆಲಸಮ ಮಾಡಿದ ಮೇಲೆಯೂ ಈಗಲೂ ಕೂಡ ಚಚ್ಚಾ ಚೌಕ್, ನೌಬತ್ ಖಾನ, ದಿವಾನ್ ಇ ಖಾಸ್, ದಿವಾನ್ ಇ ಆಮ್, ಮುಮ್ತಾಜ್ ಮಹಲ್, ರಂಗ್ ಮಹಲ್, ಖಾಸ್ ಮಹಲ್, ಬಾವ್ಡಿ, ಮೋತಿ ಮಸೀದಿ, ಹೀರಾ‌ಮಹಲ್ ಉಳಿದಿವೆ. ಈ ಸ್ಮಾರಕಗಳ ಸಂರಕ್ಷಣೆ‌ ತಕ್ಕ ಮಟ್ಟಿಗೆ ನಡೆದಿದ್ದರೂ ಭೆಟ್ಟಿ ನೀಡುವ ಅಧಿಕ ಪ್ರವಾಸಿಗಳ ಕಾರಣಕ್ಕೋ, ಕೋಟೆಯ ಒಳಾವರಣವನ್ನೂ ಸಹ ಹಲವು ವಾಣಿಜ್ಯ ಚಟುವಟಿಕೆಗಳಿಗೆ ಮುಕ್ತ ಮಾಡಿರುವ ಕಾರಣಕ್ಕೋ ಸ್ಮಾರಕಗಳ ಸಂರಕ್ಷಣೆ ಉಳಿದ ಹಲವೆಡೆಯಷ್ಟು ವ್ಯವಸ್ಥಿತವಾಗಿ ಇದ್ದಂತೆ ಎನಿಸಲಿಲ್ಲ. ಮೇಲೆ ಪಟ್ಟಿ ಮಾಡಿದವುಗಳಲ್ಲಿ ಮೂರ್ನಾಲ್ಕನ್ನು ಮಾತ್ರ ನಮಗೆ ಕ್ವಚಿತ್ತಾಗಿ ನೋಡಲು ಅವಕಾಶವಾಯ್ತು. ಉಳಿದವನ್ನು ಮುಂದೆಂದಾದರೂ ಮತ್ತೆ‌ ದೆಹಲಿಗೆ ಹೋಗುವ ಅವಕಾಶ ಸಿಕ್ಕಾಗ ಸಾವಕಾಶವಾಗಿ ನೋಡಬೇಕಿದೆ.</p>



<p></p>



<p><strong>ರೋಹಿತ್‌ ಅಗಸರಹಳ್ಳಿ</strong></p>



<p><strong><em>ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.</em></strong></p>
]]></content:encoded>
					
		
		
			</item>
		<item>
		<title>ದೆಹಲಿಯಲ್ಲಿ ಸಿಕ್ಕ ʼಅಕ್ಕಲಕೋಟೆ ಸ್ವಾಮಿಗಳುʼ</title>
		<link>https://peepalmedia.com/tirugadi-bando-rohitg-agasarahalli-article-3/</link>
		
		<dc:creator><![CDATA[Rohit Agasarahalli]]></dc:creator>
		<pubDate>Wed, 09 Nov 2022 10:51:13 +0000</pubDate>
				<category><![CDATA[ಪ್ರವಾಸ ಕಥನ]]></category>
		<category><![CDATA[hassan]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rohith agasara halli]]></category>
		<category><![CDATA[tour guide]]></category>
		<category><![CDATA[Travelogue]]></category>
		<category><![CDATA[writing]]></category>
		<guid isPermaLink="false">https://peepalmedia.com/?p=14981</guid>

					<description><![CDATA[ಅಕ್ಷರಧಾಮಕ್ಕೆ ಮಿಸ್ ಮಾಡದೆ ಹೋಗಿ ಬನ್ನಿ ಅಂದ ಪರಿಚಯಸ್ಥರ ಸಲಹೆಯಂತೆ ಮಿಸ್‌ ಮಾಡದೆ ಅಲ್ಲಿಗೆ ಹೋದ ರೋಹಿತ್‌ ಅಗಸರಹಳ್ಳಿಯವರ ತಿರುಗಾಟದ ತಂಡ ಅಲ್ಲಿ ನೋಡಿದ್ದಾದರೂ ಏನನ್ನು? ಓದಿ&#8230; ಇಂಡಿಯಾ ಗೇಟ್ ಬಳಿ ತಿರುಗಾಡಿ ಮುಗಿಸೋ ಹೊತ್ತಿಗೆ ಬಿಸಿಲು‌ ನೆತ್ತಿಗೇರತೊಡಗಿತ್ತು; ಬೆನ್ನಿಗೆ ನಿನ್ನಿನ ಬಿಸಿಲ ಝಳದ ಹಳವಂಡದ ನೆನಪಿತ್ತು! ಹೀಗಾಗಿ ಉಳಿದೆರಡು ಮೂರು ಸ್ಥಳಗಳಲ್ಲಿ ಇನ್ ಡೋರ್ ಎಂಬ ಕಾರಣವೂ ಸೇರಿ NGMA ಆಯ್ಕೆ ಮಾಡಿದೆವು. ಹಿಂದಿನ ಸ್ವರೂಪದಲ್ಲಾಗಿದ್ದರೆ‌ ಇಂಡಿಯಾ ಗೇಟ್ ಹಾಯ್ದು ಬರುವ ರಸ್ತೆಯ ತುದಿಗೇ National [&#8230;]]]></description>
										<content:encoded><![CDATA[
<p class="has-text-align-center"><strong>ಅಕ್ಷರಧಾಮಕ್ಕೆ ಮಿಸ್ ಮಾಡದೆ ಹೋಗಿ ಬನ್ನಿ ಅಂದ ಪರಿಚಯಸ್ಥರ ಸಲಹೆಯಂತೆ ಮಿಸ್‌ ಮಾಡದೆ ಅಲ್ಲಿಗೆ ಹೋದ ರೋಹಿತ್‌ ಅಗಸರಹಳ್ಳಿಯವರ ತಿರುಗಾಟದ ತಂಡ ಅಲ್ಲಿ ನೋಡಿದ್ದಾದರೂ ಏನನ್ನು? ಓದಿ&#8230;</strong></p>



<p>ಇಂಡಿಯಾ ಗೇಟ್ ಬಳಿ ತಿರುಗಾಡಿ ಮುಗಿಸೋ ಹೊತ್ತಿಗೆ ಬಿಸಿಲು‌ ನೆತ್ತಿಗೇರತೊಡಗಿತ್ತು; ಬೆನ್ನಿಗೆ ನಿನ್ನಿನ ಬಿಸಿಲ ಝಳದ ಹಳವಂಡದ ನೆನಪಿತ್ತು! ಹೀಗಾಗಿ ಉಳಿದೆರಡು ಮೂರು ಸ್ಥಳಗಳಲ್ಲಿ ಇನ್ ಡೋರ್ ಎಂಬ ಕಾರಣವೂ ಸೇರಿ NGMA ಆಯ್ಕೆ ಮಾಡಿದೆವು. ಹಿಂದಿನ ಸ್ವರೂಪದಲ್ಲಾಗಿದ್ದರೆ‌ ಇಂಡಿಯಾ ಗೇಟ್ ಹಾಯ್ದು ಬರುವ ರಸ್ತೆಯ ತುದಿಗೇ National gallery of modern art ಇದೆ. ಆದರೀಗ ಹೆಸರು ಬದಲಿಸಿಕೊಂಡ ರಾಜಪಥದಿಂದ ಒಂದು ರೌಂಡು ಹೊಡಕೊಂಡು NGMA ತಲುಪಿದೆವು. ದಿನೇಶ್ ತಮ್ಮ ಫೋನಿನಲ್ಲಿ ಕೇವಲ ಆರ್ಟ್ ಗ್ಯಾಲರಿ ಎಂದು ಹುಡುಕಿದ್ದರಿಂದ ಬೇರೆಲ್ಲೋ ತೋರಿಸಿತಂತೆ, ನಂತರ ಸರಿಯಾದ ವಿಳಾಸಕ್ಕೆ ತಲುಪಿದರು.</p>



<p><br>ಈ ಆರ್ಟ್ ಗ್ಯಾಲರಿ ಜೈಪುರ್ ಹೌಸ್ ಎಂದು ಕರೆಯಲ್ಪಡುವ ಕಟ್ಟಡ ಸಂಕೀರ್ಣದಲ್ಲಿ ದೆಹಲಿಯ ಹೃದಯ ಭಾಗದಲ್ಲಿದೆ. ಹಿಂದಿನ ದಿನದ ಓಡಾಟದ ಹಾದಿಯಲ್ಲೇ ಕಣ್ಣಿಗೆ ಬಿದ್ದ ಕಾರಣಕ್ಕೆ ನಮ್ಮ ಆಯ್ಕೆ ಪಟ್ಟಿಗೆ ಇದು ಸೇರ್ಪಡೆಯಾಗಿತ್ತು. ಇದರ ಸ್ಥಾಪನೆಯ ಕತೆ ಕಳೆದ ಶತಮಾನದ ಮೂವತ್ತರ‌ ದಶಕದವರೆಗೆ ಚಾಚಿಕೊಳ್ಳುತ್ತದೆ. ೧೯೨೯ ರಲ್ಲಿ ಅಬನೀಂದ್ರನಾಥ ಟಾಕೂರ್ ಅವರ ಶಿಷ್ಯರಿಬ್ಬರಿಂದ ಬೇರೊಂದು ಹೆಸರಿನಿಂದ ಆರಂಭವಾದ ಆಧುನಿಕ ಕಲಾಕೃತಿಗಳ ಎಕ್ಸಿಬಿಷನ್  ಸಾಂಸ್ಥಿಕ ರೂಪ ಧರಿಸಿ ಅಂದಿನ ರಾಷ್ಟ್ರಪತಿ ರಾಧಾಕೃಷ್ಣನ್ ಅವರಿಂದ, ನೆಹರೂ ಅವರ ಸಾಕ್ಷ್ಯದೊಟ್ಟಿಗೆ ಉದ್ಘಾಟನೆಗೊಂಡದ್ದು ೧೯೫೪ ರಲ್ಲಿ. ದೇಶದಲ್ಲಿ ಇದರ ಇನ್ನೆರಡು ಬ್ರಾಂಚುಗಳಿವೆ. ಅವೆರಡರಲ್ಲಿ ಒಂದು ನಮ್ಮ ಬೆಂಗಳೂರಿನಲ್ಲಿದೆ. ವಿಧಾನಸೌಧ, ರೇಸ್ ಕೋರ್ಸಿನಿಂದ ಕೂಗಳತೆ ದೂರದಲ್ಲಿ ಕಾರ್ಮೆಲ್ ಕಾಲೇಜಿನ ಪಕ್ಕದಲ್ಲಿದೆ. ಬಹಳ ವರ್ಷಗಳ ಹಿಂದೆ ಬೆಂಗಳೂರಿನ NGMA ಒಮ್ಮೆ  ನೋಡಿದ್ದೆ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/11/tirugadi1-576x1024.webp" alt="" class="wp-image-14990" srcset="https://peepalmedia.com/wp-content/uploads/2022/11/tirugadi1-576x1024.webp 576w, https://peepalmedia.com/wp-content/uploads/2022/11/tirugadi1-169x300.webp 169w, https://peepalmedia.com/wp-content/uploads/2022/11/tirugadi1-150x267.webp 150w, https://peepalmedia.com/wp-content/uploads/2022/11/tirugadi1-300x533.webp 300w, https://peepalmedia.com/wp-content/uploads/2022/11/tirugadi1-696x1237.webp 696w, https://peepalmedia.com/wp-content/uploads/2022/11/tirugadi1.webp 720w" sizes="auto, (max-width: 576px) 100vw, 576px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/11/tg02-576x1024.webp" alt="" class="wp-image-14993" srcset="https://peepalmedia.com/wp-content/uploads/2022/11/tg02-576x1024.webp 576w, https://peepalmedia.com/wp-content/uploads/2022/11/tg02-169x300.webp 169w, https://peepalmedia.com/wp-content/uploads/2022/11/tg02-150x267.webp 150w, https://peepalmedia.com/wp-content/uploads/2022/11/tg02-300x533.webp 300w, https://peepalmedia.com/wp-content/uploads/2022/11/tg02-696x1237.webp 696w, https://peepalmedia.com/wp-content/uploads/2022/11/tg02.webp 720w" sizes="auto, (max-width: 576px) 100vw, 576px" /></figure>
</div>
</div>



<p><br>ಒಟ್ಟು ಇದರ ಸಂಕೀರ್ಣದಲ್ಲಿ ನಾಕಾರು ಕಟ್ಟಡಗಳಿದ್ದು ಪ್ರವೇಶ ದ್ವಾರದ ಹಿಂಭಾಗದಲ್ಲಿರುವ ನಾಕು ಅಂತಸ್ತಿನ ಕಟ್ಟಡದಲ್ಲಿ ಕಲಾಕೃತಿಗಳ ವ್ಯವಸ್ಥಿತ ಪ್ರದರ್ಶನ ಇದೆ. ಕಳೆದ ೧೫೦-೨೦೦ ವರ್ಷಗಳ ಹಿಂದಿನ ರಚನೆಗಳಿಂದ ನಿನ್ನೆ ಮೊನ್ನೆವರೆಗಿನ ಕಲಾಕೃತಿಗಳು, ಕಲಾವಿದರ ಮಾಹಿತಿ ಇಲ್ಲಿ ಪ್ರದರ್ಶಿಸಲ್ಪಟ್ಟಿವೆ. ಆರಂಭದಲ್ಲಿಯೇ ಮೈಸೂರು ಶೈಲಿಯ ಪೇಂಟಿಂಗ್ ಮತ್ತು ಟೀಪು ಸುಲ್ತಾನನ ಸುಂದರ ಚಿತ್ರ ಗಮನ ಸೆಳೆಯಿತು. ಯಾವುದೋ ಸ್ವಾಮಿಗಳೊಬ್ಬರ ಚಿತ್ರ ನೋಡಿ ನನ್ನಾಕೆ &#8220;ಓ ಅಕ್ಕಲಕೋಟೆ ಸ್ವಾಮಿಗಳು&#8221; ಅಂದಳು.‌ ಈ ಅಕ್ಕಲಕೋಟೆ, ಜತ್ತ, ಸೊಲ್ಲಾಪುರ ಎಲ್ಲವೂ ಅಚ್ಚಗನ್ನಡದ ಪ್ರದೇಶಗಳಾಗಿದ್ದರೂ ಮಹಾರಾಷ್ಟ್ರದಲ್ಲಿಯೇ ಉಳಿದುಬಿಟ್ಟ ಊರುಗಳಲ್ಲಿ ಕೆಲವು. ಉತ್ತರ ಕರ್ನಾಟಕದಲ್ಲಿ ಭಕ್ತಾದಿಗಳನ್ನು ಹೊಂದಿರುವ ಸ್ವಾಮಿ ಸಮರ್ಥರು ಉರುಫ್ ಅಕ್ಕಲಕೋಟೆ ಸ್ವಾಮಿಗಳ ಚಿತ್ರವೊಂದು (ಬಹುಶಃ ವಾಟರ್ ಕಲರ್) ಅಲ್ಲಿತ್ತು.</p>



<p><br> ಕಳೆದ ಒಂದೂವರೆ ಶತಮಾನದಲ್ಲಿ ಭಾರತೀಯ ವರ್ಣಚಿತ್ರಕಲಾ ಕ್ಷೇತ್ರದಲ್ಲಿ ನಡೆದಿರಬಹುದಾದ ಎಲ್ಲ ರೀತಿಯ ಪ್ರಯೋಗಗಳು, ದೇಶದ ಬೇರೆ ಬೇರೆ ಭಾಗಗಳಿಗೆ ಸೇರಿದ ಕಲಾವಿದರ ಪ್ರಾತಿನಿಧಿಕ ಕಲಾಕೃತಿಗಳ ಮೇಳವೇ ಅಲ್ಲಿತ್ತು. ಹೆಚ್ಚಿನ ಪಾಲು ಚಿತ್ರಗಳು. ಅಲ್ಲಲ್ಲಿ ಇತರೆ ಮಾದರಿಯ ಕಲಾಕೃತಿಗಳನ್ನೂ ಪ್ರದರ್ಶಿಸಿದ್ದರು. ಇಲ್ಲಿನ ಸಂಪೂರ್ಣ ಓಡಾಟದಲ್ಲಿ ನನ್ನ ಜತೆಗಿದ್ದವ ಗೆಳೆಯ ದಿನೇಶ್ ಅವರ ೧೨ ರ ಪೋರ ಆರುಷ. ಒಂದೊಂದೂ ಪೇಟಿಂಗ್ ನೋಡುತ್ತಾ ತನಗನಿಸಿದ್ದನ್ನು ಹೇಳುತ್ತಿದ್ದ‌. ಒಂದು ಕಡೆಯಂತೂ ಕೇವಲ ಗೆರೆಗಳನ್ನೇ ಬಳಸಿ ಏನೋ ಸಂಕೀರ್ಣ ಭಾವ ಹೊಮ್ಮಿಸಲು ಪ್ರಯತ್ನಿಸಿರಬಹುದಾದ ಚಿತ್ರವೊಂದನ್ನು ನೋಡಿ<br>&#8221; ಇದೇನಂಕಲ್ ಸಣ್ಣ ಮಕ್ಳು ಬರ್ದಿರೋಂಗಿದೆ ಇದು&#8221; ಅಂದ!  ಅವನಿಗೆ ಏನು ಸಮಜಾಯಿಷಿ ಕೊಟ್ಟೆನೊ ಕಾಣೆ; ಆದರೆ ಕೆಲವರ್ಷಗಳ ಹಿಂದೆ ಆಧುನಿಕ ಕಲಾಕೃತಿಗಳನ್ನು ಅರ್ಥೈಸುವುದರ ಕುರಿತು ಮಯೂರದಲ್ಲಿ  ಪ್ರಕಟವಾಗುತ್ತಿದ್ದ ಕಲಾವಿದ ರವಿಕುಮಾರ್ ಕಾಶಿ ಅವರ ಬರೆಹಗಳೂ ಮತ್ತು ಆಗಾಗ ಫೇಸ್ಬುಕ್ಕಿನ ತಮ್ಮ ಪೇಜಿನಲ್ಲಿ ರಾಜಾರಾಂ ತಲ್ಲೂರ್ ಅವರು ಛಾಪಿಸುವ ಅವರ ಸೋದರರ ಕಲಾಕೃತಿಗಳೆಲ್ಲ ಕಣ್ಮುಂದೆ ಸುಳಿದು ಹೋದವು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/11/tg3-576x1024.webp" alt="" class="wp-image-14995" srcset="https://peepalmedia.com/wp-content/uploads/2022/11/tg3-576x1024.webp 576w, https://peepalmedia.com/wp-content/uploads/2022/11/tg3-169x300.webp 169w, https://peepalmedia.com/wp-content/uploads/2022/11/tg3-150x267.webp 150w, https://peepalmedia.com/wp-content/uploads/2022/11/tg3-300x533.webp 300w, https://peepalmedia.com/wp-content/uploads/2022/11/tg3-696x1237.webp 696w, https://peepalmedia.com/wp-content/uploads/2022/11/tg3.webp 720w" sizes="auto, (max-width: 576px) 100vw, 576px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-576x1024.jpeg" alt="" class="wp-image-14996" srcset="https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-576x1024.jpeg 576w, https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-169x300.jpeg 169w, https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-150x267.jpeg 150w, https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-300x533.jpeg 300w, https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-696x1237.jpeg 696w, https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM.jpeg 720w" sizes="auto, (max-width: 576px) 100vw, 576px" /></figure>
</div>
</div>



<p><br> ಒಬ್ಬ ಮುಸ್ಲಿಂ ಕಲಾವಿದ ಬರೆದ ರಾಧಾಕೃಷ್ಣರ ಅದ್ಭುತ‌ ರೇಖಾಚಿತ್ರವೂ, ಪ್ರವಾದಿಗಳ ಬಗ್ಗೆ ಮುಸ್ಲಿಮೇತರ ಕಲಾವಿದನೊಬ್ಬ ಚಿತ್ರಿಸಿದ ಸಂಕೀರ್ಣ ಮಾದರಿಯ ಉಬ್ಬುಚಿತ್ರವೂ ಗಮನ ಸೆಳೆದವು. ಆಗ ಕೂಡಲೆ ನೆನಪಾದದ್ದು ಕಡೆಗಾಲದಲ್ಲಿ ದೇಶಭ್ರಷ್ಟನಾಗಿ ಓಮನ್ ನಲ್ಲಿಯೋ, ಕತಾರ್ ನಲ್ಲಿಯೋ ಜೀವ ತೊರೆದ ಎಂ.ಎಫ್. ಹುಸೇನ್. ಎಂ.ಎಫ್. ಹುಸೇನ್ ಬಗ್ಗೆ ಅವರ ಜೀವನಪ್ರೀತಿ ಮತ್ತು ವಿಚಿತ್ರ ಪ್ರಯೋಗಶೀಲತೆ ಕುರಿತು ಕರ್ನಾಟಕದವರೊಬ್ಬರು ಪುಟ್ಟದಾದರೂ ಒಳ್ಳೆಯ ಕೃತಿಯೊಂದನ್ನು ರಚಿಸಿದ್ದಾರೆ. ಅದರಲ್ಲಿ ಹುಸೇನ್ ಅವರ ಬೆಂಗಳೂರಿನ / ಕನ್ನಡದ ನಂಟೂ ಇದೆ. ಅವರೊಮ್ಮೆ ಬೆಂಗಳೂರಿನಲ್ಲಿದ್ದಾಗ ರಚಿಸಿದ ತಮ್ಮ ಪೇಂಟಿಂಗಿಗೆ ಕನ್ನಡದಲ್ಲಿ ಸಹಿ ಮಾಡಿದ್ದಾರೆ. ಕಲಾವಿದನ ಮನೋಲೋಕವನ್ನು ಅವನ ಸೃಜನಶೀಲತೆಯ ಆಳ ಅಗಲಗಳನ್ನು ಕಲಾರಸಿಕರು ಜನ ಅರ್ಥ ಮಾಡಿಕೊಳ್ಳದೇ ಹೋದರೆ ಆತನನ್ನು ಲೌಕಿಕ ಜಾತಿ ಧರ್ಮಗಳ ಹುದಲಲ್ಲಿ ಸಿಕ್ಕಿಸಿ ನೋಡಲೆಳಸಿದರೆ ಅವನೆಂದಿಗೂ ನಿಜಾರ್ಥದಲ್ಲಿ ದಕ್ಕಲಾರ ಎಂದು ಯೋಚಿಸುವ ಹೊತ್ತಿಗೆ ಸಾಕ್ಷಾತ್ ಹುಸೇನರ ಚಿತ್ರಗಳೇ ನೋಡಲು ಸಿಕ್ಕವು.</p>



<p><br>ಅಚ್ಚಕನ್ನಡದ ಹೆಮ್ಮೆಯ ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರರ ಹಲವು ಪೇಂಟಿಂಗ್ ಗಳು ಗಮನ ಸೆಳೆದವು. ನಾನು ಪ್ರೈಮರಿ ಓದುವಾಗ ಕೆ.ಕೆ. ಹೆಬ್ಬಾರರ ಬಗ್ಗೆ ಪಾಠವಿತ್ತು. ಬಹುಶಃ ಆಗ ಅದು ಬೋರ್ ಹೊಡೆಸಿರಬಹುದು. ಈಗ ಸುಮ್ಮನೆ ಗೆರೆ ಎಳೆದಂತೆ‌ ಮೇಲ್ನೋಟಕ್ಕೆ ಕಾಣುವ ಹೆಬ್ಬಾರರ ಕಲಾಕೃತಿಗಳು ನೋಡುಗರನ್ನು ಹಿಡಿದು ನಿಲ್ಲಿಸುತ್ತವೆ. NGMA ದಲ್ಲಿ ಕಲಾಕೃತಿಗಳ ಫೋಟೋ ಸೆರೆಹಿಡಿಯಲು‌‌ ನಿರ್ಬಂಧವಿದೆ. ಆದರೂ ಒಂದು ನಾಕೈದು ಚಿತ್ರಗಳನ್ನು ಕದ್ದು ಮುಚ್ಚಿ ಮೊಬೈಲಲ್ಲಿ ಬಂಧಿಸಿದೆ.<br>ಎಂಟ್ರೀ ಪಾಯಿಂಟ್ ಪಕ್ಕದಲ್ಲಿಯೇ ವ್ಯವಸ್ಥಿತವಾದ ಪುಸ್ತಕದ‌ ಮಳಿಗೆ, ಕಲಾಕೃತಿಗಳ ಫೋಟೋ ಗ್ರೀಟಿಂಗ್ ಮಾರಾಟ ಎಲ್ಲವಕ್ಕೂ ಅವಕಾಶವಿತ್ತು. ಅಲ್ಲಿಯೂ ಒಂದು ಸುತ್ತು ಹಾಕಿ ಹೊರಬರೋ ಹೊತ್ತಿಗೆ ಹೊಟ್ಟೆ ಚುರುಗುಟ್ಟುತ್ತಿತ್ತು.</p>


<div class="wp-block-image">
<figure class="aligncenter size-full"><img loading="lazy" decoding="async" width="850" height="586" src="https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM.jpeg" alt="" class="wp-image-14997" srcset="https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM.jpeg 850w, https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM-300x207.jpeg 300w, https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM-768x529.jpeg 768w, https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM-150x103.jpeg 150w, https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM-218x150.jpeg 218w, https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM-696x480.jpeg 696w" sizes="auto, (max-width: 850px) 100vw, 850px" /></figure></div>


<p><br><strong>ಜೀವಂತಿಕೆ ಇಲ್ಲದ ಧಾಮದ ಹೆಸರಿನ ವ್ಯಾಪಾರ ಕೇಂದ್ರವೂ&#8230; ಯಾಂತ್ರಿಕ ವ್ಯಾಪಾರದ ಸುಲಿಗೆಯ ಹೋಟೆಲೂ&#8230;.<br></strong>ಕಲಾಗ್ಯಾಲರಿಯಿಂದ ಹೊರಬಂದವರೇ ಊಟ ಮತ್ತು ಮುಂದಿನ ಜಾಗ ಯಾವುದೆಂದು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದೆವು. ಟ್ಯಾಕ್ಸಿ ಬುಕ್ ಮಾಡಿಕೊಂಡು ಅಕ್ಷರ‌ಧಾಮಕ್ಕೆ ಹೋಗುವ ದಾರಿಯಲ್ಲಿ ಎಲ್ಲಾದರೂ ಹೊಟ್ಟೆಪಾಡು ನೋಡಿಕೊಳ್ಳುವುದೆಂದು ಡ್ರೈವರಣ್ಣನಿಗೆ ಕೇಳಿದ್ದಕ್ಕೆ; ಅಕ್ಷರಧಾಮದ ಎಂಟ್ರೆನ್ಸ್ ಪಕ್ಕದಲ್ಲಿಯೇ ಹಳ್ದಿರಾಮ್ ಹೋಟೆಲ್ ಇದೆ ಎಂದು ಹೇಳಿದ. ಸರಿ ಎಂದು ಅಲ್ಲಿಗೆ ಡ್ರಾಪ್ ಪಡೆದೆವು. ಅಕ್ಷರಧಾಮ ಮೆಟ್ರೋ ಸ್ಟೇಷನ್ನಿನ ಕೆಳಗಿನ ಫ್ಲೋರೇ ಹಳ್ದೀ ರಾಮ್ ಹೋಟೆಲು. ನಿಮಿಷಕ್ಕೊಮ್ಮೆ ರೈಲಿನ ಜೂಂಯ್ ಶಬ್ದ ಕೇಳುತ್ತಿತ್ತು. ಅಲ್ಲೋ ವಿಚಿತ್ರ ವ್ಯಾಪಾರೀ ಪದ್ಧತಿ. ಪ್ರತೀ ಟೇಬಲಿನ ಮೂಲೆಯಲ್ಲಿ ಒಂದು ಕ್ಯೂ ಆರ್‌ ಕೋಡ್ ಅಂಟಿಸಿದ್ದಾರೆ. ಅದನ್ನು ನಮ್ಮ ನಮ್ಮ ಮೊಬೈಲಿನಲ್ಲಿ ಸ್ಕ್ಯಾನ್ ಮಾಡಿದರೆ ಅಲ್ಲಿಯೇ ಮೆನು ತೆರೆದುಕೊಳ್ಳುತ್ತದೆ. ಅಲ್ಲಿಯೇ ಆರ್ಡರ್‌ ಮಾಡುವುದಂತೆ, ಅದೂ ಮೊದಲೇ ಹಣ ಪೀಕಿ. ಆಮೇಲೆ ಅವರು ಯಾವ ಕೌಂಟರಿನಲ್ಲಿ ನೀವು ಕೇಳಿದ್ದ ಐಟಮ್ ಲಭ್ಯವೆಂದು ವಾಟ್ಸಾಪ್‌ ಮೆಸೇಜು ಕಳಿಸುತ್ತಾನೆ. ಅದನ್ನು ಹುಡುಕಿ ಗ್ರಾಹಕರೇ ಭಿಕ್ಷುಕರಂತೆ ತಟ್ಟೆ ಹಿಡ್ಕಂಡು ಸಾಲಿನಲ್ಲಿ ನಿಂತು ಪಡೆದು ಬೇಕಿದ್ದರೆ ತಿನ್ನಬಹುದು, ಇಲ್ಲವೇ ಹಾಗೇ ಬಿಡಬಹುದು! ಇಂಥದೊಂದು ವಿಚಿತ್ರ ಪದ್ಧತಿಯನ್ನು ನಾವಂತೂ ಯಾರೂ ಎಲ್ಲೂ ಕಂಡಿರಲಿಲ್ಲ. ಏನೊ ಏನಾದರೂ ತಿಂದು ಬದುಕಬೇಕಿತ್ತು. ಅಷ್ಟು ಪೂರೈಸಿದೆವು. ಇರಲಿ, ನಾವಲ್ಲಿ ಹೋಗಿದ್ದು ಅಕ್ಷರ‌ಧಾಮ ನೋಡಲು. ಈ ಐಟಮ್ಮು ನಮ್ಮ ನೋಡುವ ಲಿಸ್ಟಿಗೆ ಸೇರ್ಪಡೆಯಾಗಿರಲಿಲ್ಲ.</p>



<p>ಹಾಸನದಿಂದ ನಾವು ಹೊರಡೋ ಹಿಂದಿನ ದಿನ ಶಿವಮೊಗ್ಗದ ಗೆಳೆಯರೊಬ್ಬರು ಫೋನು ಮಾಡಿ, ತಾವು ಮೈಸೂರು ಕಡೆ ಹೊರಟಿರುವುದಾಗಿಯೂ ರಸ್ತೆ ಚೆನ್ನಾಗಿಲ್ಲವಂತೆ ಏನು ಮಾಡುವುದು ಅಂದರು. ಬಾಣಾವರದಿಂದ ಹಳೇಬೀಡು ಹಾಸನ ಹೊಳೆನರಸೀಪುರ ಮಾರ್ಗವಾಗಿ ಹೋಗಿ ಚೆನ್ನಾಗಿದೆ ಎಂದು ಹೇಳಿ, ಹಾಗೇ ಬರೋ ದಾರಿಯಲ್ಲೇ ನಮ್ಮ ಮನೆ ಬನ್ನಿ ಎಂದೆ. ಗೆಳೆಯರು ಅವರ ಸ್ನೇಹಿತರೊಟ್ಟಿಗೆ ಬಂದರು. ನಾವೂ ಹೊರಡೋ ತಯಾರಿಯಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಲಿಲ್ಲ, ಚಾ, ಹಣ್ಣು ಕೊಟ್ಟು ಅಥಿತಿ ಸತ್ಕಾರವನ್ನು ಪೂರೈಸಿದೆವು. ನಮ್ಮ ಡೆಲ್ಲಿ ಟೂರಿನ ವಿಷಯ ಕೇಳಿ, ಹಾಗಿದ್ದರೆ ಅಕ್ಷರಧಾಮಕ್ಕೆ ಮಿಸ್ ಮಾಡದೆ ಹೋಗಿ ಬನ್ನಿ, ಅಲ್ಲಿ ಒಂದು ಲೇಸರ್ ಶೋ ಇರ್ತದೆ. ಮಕ್ಕಳು ಖುಶಿ ಪಡ್ತಾರೆ ಅಂದರು‌‌. ಅವರು ಬಹಳ ಗಂಭೀರವಾಗಿಯೇ ಈ ಸಲಹೆ ಇತ್ತ ಕಾರಣಕ್ಕೆ ನಾನೂ ದಿನೇಶ್ ಅವರಿಗೆ ಈ ಧಾಮವನ್ನು ನೆನಪಿಸುತ್ತಲೇ ಇದ್ದೆ. ಈಗ ಅದರ ಗೇಟಿಗೆ ಬಂದು ನಿಂತಿದ್ದೆವು. ಪರ್ಸು, ನೀರಿನ ಬಾಟಲು ಬಿಟ್ಟು ಏನೂ ಒಳ ಒಯ್ಯುವಂತಿಲ್ಲ. ಬೆಲ್ಟ್ ಕೂಡ ಬಿಚ್ಚಿ ಕೊಟ್ಟು ನಂತರ ಪಡೆಯೋ ಸೆಕ್ಯುರಿಟಿ ವ್ಯವಸ್ಥೆಯೇ ಕಿರಿಕಿರಿ ಎನಿಸಿತು. ಒಳ ಹೋದರೆ ಭವ್ಯವಾದ ಶಾಪಿಂಗ್ ಕಾಂಪ್ಲೆಕ್ಸ್ ಮಾದರಿಯ ಏನೇನೊ‌ ಕಟ್ಟಡಗಳು, ಕಾರಂಜಿಗಳು, ಕೌಂಟರುಗಳು, ಆದರೆ ನೋಡಬಹುದಾದುದು ಏನೂ ಇಲ್ಲ ಅಂತ ತಿಳಿಯಲು ಬಹಳ ಹೊತ್ತೇನೂ ಹಿಡಿಯಲಿಲ್ಲ. ಆದರೂ ನನಗೆ ಲೇಸರ್ ಶೋ ಆಕರ್ಷಣೆ. ಗುಂಪಿನ ಬಹುಮತ ಕೂಡಲೆ ಹೊರ ಹೊರಡುವುದರಲ್ಲಿತ್ತು. ವಾಪಾಸು ಹೊರಟೆವು. ಬರೋ ದಾರಿಯಲ್ಲಿ ಹೋಟೆಲು, ಶಾಪಿಂಗು, ಅಮ್ಯೂಸ್ ಮೆಂಟ್ ಪಾರ್ಕು, ಎಲ್ಲಕ್ಕೂ ಟಿಕೇಟು, ಲೇಸರ್ ಶೋದ ಕಂಟೆಂಟು ನೋಡಿದ ಮೇಲೆ ಅದನ್ನೂ ನೋಡಬೇಕು ಅನ್ನೋ ಕುತೂಹಲ ಉಳಿಯಲಿಲ್ಲ. ವಾಸ್ತವ ಎಂದರೆ ಅಕ್ಷರಧಾಮ ಎಂದರೆ ದೇವಾಲಯ ಅಂತ ನಮಗಾರಿಗೂ ಕಲ್ಪನೆ ಇರಲಿಲ್ಲ. ನಾನೆಲ್ಲೋ ಥೀಮ್ ಪಾರ್ಕ್ ಎಂದು ಓದಿದ್ದ ನೆನಪಿತ್ತು. ಅಕ್ಷರ ಧಾಮಕ್ಕೆ ಹೋಗೋ ದಾರಿಯಲ್ಲಿ ಜಮುನಾ ನದಿಯನ್ನು ಕಂಡು ಪುಣ್ಯ ಕಟ್ಟಿಕೊಂಡೆವು ಅಷ್ಟೇ. ಇದೆಲ್ಲ ಆದ ಮೇಲೆ ಇನ್ನು ಮನೆಗೆ ಬರುವ ಅತಿಥಿಗಳಿಗೆ ಸರಿಯಾದ ಸತ್ಕಾರ ಮಾಡದಿದ್ದರೆ ಹೀಗೂ ಸೇಡು ತೀರಿಸಿಕೊಳ್ಳುತ್ತಾರೆ! ಎಂದುಕೊಂಡೆ.</p>



<p></p>



<p></p>



<p><strong>ರೋಹಿತ್‌ ಅಗಸರಹಳ್ಳಿ</strong></p>



<p><em>ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.</em></p>
]]></content:encoded>
					
		
		
			</item>
		<item>
		<title>ಆರರಲ್ಲಿ ಐದು ವಿಕೆಟ್ ರಿಟೈರ್ಡ್ ಹರ್ಟ್&#8230;.</title>
		<link>https://peepalmedia.com/travel-story-by-rohith-agasara-halli-2/</link>
		
		<dc:creator><![CDATA[Rohit Agasarahalli]]></dc:creator>
		<pubDate>Wed, 02 Nov 2022 10:34:39 +0000</pubDate>
				<category><![CDATA[ಪ್ರವಾಸ ಕಥನ]]></category>
		<category><![CDATA[Delhi]]></category>
		<category><![CDATA[delhi tour]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Travelogue]]></category>
		<guid isPermaLink="false">https://peepalmedia.com/?p=13733</guid>

					<description><![CDATA[ನಾಕು ಹೆಜ್ಜೆ ಹಾಕೋ ಹೊತ್ತಿಗೆ ನನ್ನ ಶ್ರೀಮತಿ ತೇಲುಗಣ್ಣು ಮೇಲುಗಣ್ಣು ಮಾಡಿ ಸಿಕ್ಕ ನೆಲ ಹಿಡಿದು ಕುಳಿತೇ ಬಿಡೋದೆ.ಅಪಾಯ ಅರಿತ ನಾನು ಸ್ನೇಹಿತರಿಗೆ ಟ್ಯಾಕ್ಸಿ ಬುಕ್ ಮಾಡಲು ಹೇಳಿ, ಪರಿಚಯದ ಡಾಕ್ಟರಿಗೆ ಫೋನ್ ಹಚ್ಚಿದೆ&#8230;ಮುಂದೇನಾಯ್ತು ಓದಿ-ಲೇಖಕ ರೋಹಿತ್‌ ಅಗಸರಹಳ್ಳಿಯವರ ಪ್ರವಾಸ ಕಥನ. ರಾಜಘಾಟ್ ನೋಡಲು ನಾವು ಹೋದ ಸಮಯದಲ್ಲಿ ಉಷ್ಣಾಂಶದ ಮುಳ್ಳು ಮೂವತ್ತಾರು ಮುಟ್ಟಿತ್ತು. ಕಳೆದ ಏಪ್ರಿಲ್ ತಿಂಗಳಿನಿಂದ ನಮ್ಮೂರಲ್ಲಿ ಇದು ೨೪ ದಾಟಿರಲಿಲ್ಲ. ಒಂದೂವರೆ ದಿನಗಳ ಎಸಿ ಪ್ರಯಾಣ, ದೇಹಕ್ಕೆ ಒಗ್ಗದ ಊಟ ಎಲ್ಲವೂ ಸೇರಿ [&#8230;]]]></description>
										<content:encoded><![CDATA[
<h5 class="has-text-align-center wp-block-heading"><strong>ನಾಕು ಹೆಜ್ಜೆ ಹಾಕೋ ಹೊತ್ತಿಗೆ ನನ್ನ ಶ್ರೀಮತಿ ತೇಲುಗಣ್ಣು ಮೇಲುಗಣ್ಣು ಮಾಡಿ ಸಿಕ್ಕ ನೆಲ ಹಿಡಿದು ಕುಳಿತೇ ಬಿಡೋದೆ.ಅಪಾಯ ಅರಿತ ನಾನು ಸ್ನೇಹಿತರಿಗೆ ಟ್ಯಾಕ್ಸಿ ಬುಕ್ ಮಾಡಲು ಹೇಳಿ, ಪರಿಚಯದ ಡಾಕ್ಟರಿಗೆ ಫೋನ್ ಹಚ್ಚಿದೆ&#8230;ಮುಂದೇನಾಯ್ತು ಓದಿ-ಲೇಖಕ ರೋಹಿತ್‌ ಅಗಸರಹಳ್ಳಿಯವರ ಪ್ರವಾಸ ಕಥನ.</strong></h5>



<p>ರಾಜಘಾಟ್ ನೋಡಲು ನಾವು ಹೋದ ಸಮಯದಲ್ಲಿ ಉಷ್ಣಾಂಶದ ಮುಳ್ಳು ಮೂವತ್ತಾರು ಮುಟ್ಟಿತ್ತು. ಕಳೆದ ಏಪ್ರಿಲ್ ತಿಂಗಳಿನಿಂದ ನಮ್ಮೂರಲ್ಲಿ ಇದು ೨೪ ದಾಟಿರಲಿಲ್ಲ. ಒಂದೂವರೆ ದಿನಗಳ ಎಸಿ ಪ್ರಯಾಣ, ದೇಹಕ್ಕೆ ಒಗ್ಗದ ಊಟ ಎಲ್ಲವೂ ಸೇರಿ ಗುಂಪಿನ ಇಬ್ಬರೂ ಹೆಣ್ಣು ಮಕ್ಕಳು ಹೈರಾಣು. ಮಕ್ಕಳೂ ಸಹ ಲವಲವಿಕೆ ನಟಿಸುತ್ತಿದ್ದರು. ಮೊದಲು ಒಬ್ಬರು ಉಲ್ಟೀ ಹೊಡೆದರಂತೆ.( ವಾಂತಿ) ಅದು ಲಾನಿಗೆ ನೀರು ಚಿಮ್ಮಿಸುವ ಸ್ಪ್ರಿಂಕ್ಲರಿನಂತೆ ಭಾಸವಾಯ್ತೆಂದೂ, ಅಕ್ಕಪಕ್ಕ ಇದ್ದವರೂ ಕೊಂಚ ದೂರ ಓಡಿದರೆಂದೂ ಅವರೇ ಅರುಹಿದರು. </p>



<p>ಬಿಸಿಲು, ಶೆಖೆ ಸೋಲಿಸಲು ಎಲ್ಲರೂ ನಿಂಬೂ ಪಾನಿ, ನೀರು, ಐಸ್ಕ್ರೀಮು, ಉಪ್ಪಿನ ನೀರು, ಸಕ್ಕರೆ ನೀರು ಅಂತ ಹುಯ್ಕೊಂಡು ಅಂತೂ ಕೊಂಚ ಹೊತ್ತಿನಲ್ಲಿ ಒಂದಷ್ಟು ಶಕ್ತಿಯನ್ನು ಸೋಸಿ ಪೇರಿಸಿ ಆಟೋ ಹತ್ತೋ ಹೊತ್ತಿಗೆ ಎರಡನೇ ಕ್ಯಾಂಡಿಡೇಟು ಕಿವಿಯ ಬಳಿ ಮೆಲ್ಲನುಸಿರಿತು. “ಯಾಕೋ ಆಗ್ತಾ ಇಲ್ಲ &#8220;. ಅಪಾಯದ ವಾಸನೆ ಬಂದರೂ ಎಲ್ಲ ಸರಿಹೋಗುವುದೆಂದೆ. ಗೆಳೆಯ ದಿನೇಶ್ ಅಂತೂ ಚಾಂದಿನಿ ಚೌಕ, ಜುಮ್ಮಾ ಮಸ್ಜಿದ್ ಬಳಿಯ ರೋಡ್ ಸೈಡ್ ಡಿಶ್ಗಳನ್ನೆಲ್ಲಾ ವಿಧವಿಧವಾಗಿ ವರ್ಣಿಸುತ್ತಿದ್ದರು. ಕೆಂಪು ಕೋಟೆ, ಜುಮ್ಮಾ ಮಸೀದಿ ಸಂಧಿಸುವ ಜನಜಂಗುಳಿಯ ಸ್ಥಳ ಬಂತು. ಇಳಿದು ನಾಕು ಹೆಜ್ಜೆ ಹಾಕೋ ಹೊತ್ತಿಗೆ ನನ್ನ ಶ್ರೀಮತಿ ತೇಲುಗಣ್ಣು ಮೇಲುಗಣ್ಣು ಮಾಡಿ ಸಿಕ್ಕ ನೆಲ ಹಿಡಿದು ಕುಳಿತೇಬಿಡೋದೆ. ಅಪಾಯ ಅರಿತ ನಾನು ಸ್ನೇಹಿತರಿಗೆ ಟ್ಯಾಕ್ಸಿ ಬುಕ್ ಮಾಡಲು ಹೇಳಿ, ಪರಿಚಯದ ಡಾಕ್ಟರಿಗೆ ಫೋನ್ ಹಚ್ಚಿದೆ. ಅವರೂ ಧೈರ್ಯದ ಮಾತು ಹೇಳಿ ಮುಗಿಸೋ ಹೊತ್ತಿಗೆ ಟ್ಯಾಕ್ಸಿ ಬಂತು. ದಿನೇಶ್ ಒಬ್ಬರನ್ನುಳಿದು ಉಳಿದ ಐವರೂ ಕಾರು ಏರಿದೆವು. ತಿರುಗಾಟಕ್ಕೆ ಒಂದೇ ಮತವೂ, ರೆಸ್ಟಿಗೆ ಐದು ಮತವೂ ಬಿದ್ದವು!</p>



<p><br>ಟ್ಯಾಕ್ಸಿ ಕಿಲೋಮೀಟರ್ ಮುಂದೋಗೋ ಹೊತ್ತಿಗೆ ಮೊದಲು ಮುಂದಿನ ಸೀಟಿನಲ್ಲಿ ವ್ಯಾಕ್ ಸದ್ದು ಹೊರಟಿತು. ಅವರದಾಗಲೇ ಎರಡನೇ ಇನ್ನಿಂಗ್ಸ್ ಆದ್ದರಿಂದ ಕೇವಲ ನಿಂಬೂ ಪಾನಿ. ಅದಾದ ಮೂರೇ ಕ್ಷಣಕ್ಕೆ ಹಿಂದಿನ ಸೀಟಿನಲ್ಲಿ ಕೂಡ ಅದೇ ಶಬ್ದದ ಅನುರಣನ. ಇಲ್ಲಿ ಮಾತ್ರ ಆಲೂ, ಮೈದಾ, ಬಾಳೆಹಣ್ಣು, ನೀರು, ನಿಂಬೂ, ಉಪ್ಪು, ಸಕ್ಕರೆ ಇತ್ಯಾದಿ ಇತ್ಯಾದಿ. ಟ್ಯಾಕ್ಸಿಯ ಅಣ್ಣ ತಲ್ಲಣಿಸಿ ಹೋದ. ಕಾರು ಕ್ಲೀನ್ ಮಾಡಿಸಲು ರೊಕ್ಕ ಪೀಕುವೆನು ಎಂದ ಮೇಲೆ ಸಮಾಧಾನಿಯಾದ. ಅಂತೂ ವಸತಿ ತಲುಪಿ ಟ್ಯಾಕ್ಸಿ ಬಾಡಿಗೆಯ ಎರಡು ಪಟ್ಟು ಕ್ಲೀನಿಂಗ್ ಚಾರ್ಜು ಕೊಟ್ಟು ಕಳುಹಿಸಿದೆವು. ಅಲ್ಲಿಗೆ ಮೊದಲ ದಿನದ ಎಕ್ಸಪ್ಲೋರಿಂಗ್ ಐದು ಪ್ಲೇಯರ್ ಗಳ ರಿಟೈರ್ಡ್ ಹರ್ಟ್ ನೊಂದಿಗೆ ಸಂಪನ್ನವಾಗಿತ್ತು.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/11/1666893719180-763x1024.jpg" alt="" class="wp-image-13742" width="441" height="587"/><figcaption class="wp-element-caption">ಬಾರ್ಬರ್ ಟಾಂಬ್</figcaption></figure></div>


<div class="wp-block-group"><div class="wp-block-group__inner-container is-layout-constrained wp-block-group-is-layout-constrained">
<figure class="wp-block-image size-full"><img loading="lazy" decoding="async" width="700" height="394" src="https://peepalmedia.com/wp-content/uploads/2022/11/images-88.jpeg" alt="" class="wp-image-13773" srcset="https://peepalmedia.com/wp-content/uploads/2022/11/images-88.jpeg 700w, https://peepalmedia.com/wp-content/uploads/2022/11/images-88-300x169.jpeg 300w, https://peepalmedia.com/wp-content/uploads/2022/11/images-88-150x84.jpeg 150w, https://peepalmedia.com/wp-content/uploads/2022/11/images-88-696x392.jpeg 696w" sizes="auto, (max-width: 700px) 100vw, 700px" /><figcaption class="wp-element-caption"><em>ಹುಮಾಯೂನ್ ಟಾಂಬ್ ನ ಪಕ್ಷಿನೋಟ ( ಏರಿಯಲ್ ಶಾಟ್- ಕೃಪೆ ಗೂಗಲ್)</em></figcaption></figure>
</div></div>



<p>ಪ್ರಥಮ ಚುಂಬನವಂತೂ ದಂತ ಭಗ್ನವಾಗುವುದರೊಂದಿಗೆ ಮುಗಿದಿತ್ತು. ಸ್ನೇಹಿತರ ಮಗ ಆರುಶ್ ಮತ್ತು ನಮ್ಮ ಮಗಳು ಪ್ರಣತಿ‌ ಇಬ್ಬರೂ ಬಿಸಿಲಿನ ಹೊಡೆತಕ್ಕೆ ಹೈರಾಣಾಗಿದ್ದರು. ತಂದಿದ್ದ ಬಿರಿಯಾನಿ ಖರ್ಚಾಗದೆ; ಎಸೆಯಲೂ ಮನಸಾಗದೆ ದಿನೇಶ್ ಮೈಲು ದೂರ ನಡೆದು ಹೋಗಿ ಫಲಾನುಭವಿಯೊಬ್ಬರಿಗೆ ಮುಟ್ಟಿಸುವ ಹೊತ್ತಿಗೆ ಊರೆಲ್ಲ ಮಲಗಿತ್ತು. ಅಲ್ಲಿಗೆ ದಿನೇಶ್ ಅವರ ಎಕ್ಸಪ್ಲೋರಿಂಗ್ ವೇಗಕ್ಕೆ ನಾವು ಉಳಿದೈವರೂ ಒಗ್ಗುವುದಿಲ್ಲ ಎನ್ನುವುದು ಖಾತ್ರಿಯಾಗಿ ಅವರೇ ವೇಗ ತಗ್ಗಿಸಿಕೊಂಡು ನಮ್ಮೆಲ್ಲರಿಗೆ ಒಗ್ಗಿಕೊಂಡರು.<br>ಎರಡನೇ ದಿನ ಮುಂಜಾನೆಯೇ ಗೆಸ್ಟ್ ಹೌಸು ಬಿಟ್ಟು ಹನ್ನೊಂದರ ಹೊತ್ತಿಗೆ ವಾಪಾಸು ಬರುವುದೂ ಮತ್ತೆ ಸಂಜೆ ನಾಕಕ್ಕೆ ತಿರುಗಾಟಕ್ಕೆ ಹೋಗುವುದು ಎಂದು ನಿಶ್ಚಿಯಿಸಿದೆವು. ಬೆಳಗ್ಗೆ ಎಬ್ಬಿಸಲು ಅಲಾರ್ಮ್ ಅಗತ್ಯವಿರಲಿಲ್ಲ. ಏಕೆಂದರೆ ಆ ಡ್ಯೂಟಿಗೆ ಮಚ್ಚರ್ ಗಳು ಮಚ್ಚನ್ನೂ ನಾಚಿಸುವ ಮೂತಿಯೊಂದಿಗೆ ತಯಾರಾಗಿಯೇ ಇದ್ದವು. ರಾಜಘಾಟ್ ಬಿಟ್ಟು ಬೇರೇನೂ ನೋಡದ ಕಾರಣ ಜಾಗಗಳು ದಂಡಿಯಾಗಿದ್ದವು.&nbsp;&nbsp;ಫೇಸ್ಬುಕ್ಕಲ್ಲಿ ಪಯಣದ ಬಗೆಗಿನ ನನ್ನ ಕಿರುಟಿಪ್ಪಣಿ ನೋಡಿದ್ದ&nbsp; ಇತಿಹಾಸದ ಪ್ರೊಫೆಸರ್ ಗೆಳೆಯ ಸ್ವಾಮಿ ಬೆಳ್ತಂಗಡಿಯಿಂದ ಮೆಸೇಜು ಮಾಡಿದ್ದರು. ಹುಮಾಯೂನ್ ಟಾಂಬ್ ಮಿಸ್ ಮಾಡದೆ ನೋಡಿ ಎಂದು. ಬಹುತೇಕ ಪ್ರವಾಸಿ ಸ್ಥಳಗಳು ಮುಂಜಾನೆ ಆರಕ್ಕೇ ತೆರೆಯುವುದರಿಂದ ಅಲ್ಲಿಗೇ ಹೊರಟೆವು. ಹುಮಾಯೂನ್ ಟಾಂಬ್ ನಿಜವಾಗಿಯೂ ತುಂಬಾ ಸುಂದರವಾದ ರಚನೆ. ಕೆಂಪು ಕೋಟೆ, ಜಾಮಾ ಮಸೀದಿ, ಇಂಡಿಯಾ ಗೇಟ್ ಗಳಿಗೆ ಹೋಲಿಸಿದರೆ ಕೊಂಚ ದೂರವೇನೊ. ಅಥವಾ ಬೆಳ್ಳಂಬೆಳಗ್ಗೆ ಹೋಗಿದ್ದ ಕಾರಣಕ್ಕೋ ಏನೊ ಜನ ವಿರಳವಾಗಿದ್ದರು. ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಈ ಆವರಣದಲ್ಲಿ ಮೂರ್ನಾಕು ಸ್ಮಾರಕಗಳಿವೆ. ಮೊದಲೇ ಸಿಗೋದು ಇಸಾಖಾನ್ ಟಾಂಬ್. ಈತ&nbsp; ದೆಹಲಿಯಿಂದ ಆಳಿದ ಸೂರ್ ಮನೆತನದ ಶೇರ್ ಸಹ ಸೂರ್ ನ‌ ಬಳಿ ಅಧಿಕಾರಿಯಾಗಿದ್ದನಂತೆ. ಈ ಇಸಾಖಾನ್ ಸ್ಮಾರಕ ಸಣ್ಣಗಾತ್ರದ್ದಾದರೂ ಬಹಳ ಕಲಾತ್ಮಕವಾಗಿದೆ. ಸದ್ಯ ಅದರ ಪುನರುಜ್ಜೀವನದ ಕೆಲಸ ಕೂಡ ಪ್ರಗತಿಯಲ್ಲಿತ್ತು. ಅದು ಸಂಪೂರ್ಣಗೊಂಡಮೇಲೆ ಈಗಿರುವುದಕ್ಕಿಂತ ಚೆಂದ ಕಾಣುತ್ತದೆಂದು ಕೊಂಡೆವು.</p>



<p>&nbsp;ಮೇನ್ ಗೇಟಿನಿಂದ ಸುಮಾರು ನೂರೈವತ್ತು ಮೀಟರ್ ನಂತರ ಟಾಂಬ್ ನ ಮುಖ್ಯ ಪ್ರವೇಶ ದ್ವಾರವಿದೆ. ಇದು ಕೆಂಪು ಮರಳು ಶಿಲೆ ಮತ್ತು ಬಿಳಿ ಅಮೃತ ಶಿಲೆಗಳಿಂದ ನಿರ್ಮಿತವಾದ ಮೊದಲ ಸ್ಮಾರಕವೆಂತಲೂ ಹೇಳಲಾಗುತ್ತದೆ. ಕಟ್ಟಡದ ಸುತ್ತ ಚಚ್ಚೌಕವಾಗಿ ನಿರ್ಮಿತವಾದ ನೀರ ದಾರಿಯೂ ಮತ್ತು ಕಾರಂಜಿಗಳೂ ಇವೆ.( ಬಹುತೇಕ ಕಡೆ ನೀರು ಹರಿಯುತ್ತಿರಲಿಲ್ಲ!) ಈ ನಾಲ್ಕೂ ದಿಕ್ಕಿನ ನೀರ ದಾರಿ ಇಸ್ಲಾಮಿಕ್ ಮೈಥಾಲಜಿಯಲ್ಲಿ ಬರುವ ಜನ್ನತ್ ಯಾನೆ ಸ್ವರ್ಗದ ಚಿತ್ರಣವಂತೆ. ಬಹುಶಃ ತಾಜ್ ಮಹಲ್ ಹೊರತುಪಡಿಸಿ ತುಂಬಾ ಕಡೆ ಇದೇ ಮಾದರಿಯ ಕಟ್ಟೋಣಿಕೆ ಇವೆ.&nbsp; ಕಟ್ಟಡ ಎತ್ತರದ ಜಗತಿಯ ಮೇಲಿದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕಡಿದಾದ ಮೆಟ್ಟಿಲೇರಿದ ಮೇಲೆ&nbsp; ಕಟ್ಟಡವಿದೆ. ಮೆಟ್ಟಿಲುಗಳೂ ಸಹ ನಾಕೂ ಬದಿಯಲ್ಲಿವೆ.</p>



<p>ಹುಮಾಯೂನ್ ಟಾಂಬ್ ಆವರಣದ ಒಳಗೇ ಒಂದು ಪ್ರತ್ಯೇಕ ಆದರೂ ವಿಶೇಷ ರಚನೆ ಇದೆ. ಇದನ್ನು ಬಾರ್ಬರ್ ಟಾಂಬ್ ಎಂದು ಕರೆಯಲಾಗುತ್ತದೆ. ಈತ ಹುಮಾಯೂನನಿಗೆ ಮೆಚ್ಚಿನ ಕ್ಷೌರಿಕನಂತೆ. ಅವನಿಗೆ ರಾಜಪರಿವಾರಕ್ಕೆ ಇಲ್ಲದ ವಿಶೇಷ ಅವಕಾಶ ಸಿಕ್ಕಿದೆ. ಈ ರಚನೆ ಅಕ್ಬರನ ಕಾಲದಲ್ಲಿ ಆಗಿದ್ದೆಂದೂ ಹೇಳಲಾಗುತ್ತದೆ. ಅಂದ ಹಾಗೆ ಮುಘಲರಲ್ಲಿ ಹುಮಾಯೂನ್ ಅಷ್ಟೇನೂ ಜನಪ್ರಿಯ ದೊರೆಯಲ್ಲ; ಆದರೆ ಆತ ಜೊತೆಯಲ್ಲಿ ಒಂದು ಗ್ರಂಥಾಲಯವನ್ನೇ ಹೊತ್ತೊಯ್ಯುವಷ್ಟು ಪುಸ್ತಕ ಪ್ರೇಮಿಯಾಗಿದ್ದನಂತೆ.</p>



<p>ಹಿಂದಿನ ದಿನದ ಅಸೌಖ್ಯದ ಕಾರಣಕ್ಕೋ ಏನೊ ದಿನೇಶ್ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲರೂ ರಾತ್ರಿ ಸರಿಯಾಗಿ ಊಟ ಮಾಡದ ಕಾರಣ ನಾನು, ದಿನೇಶ್ ಮತ್ತು ಆರುಶ್ ಮಾತ್ರ ಕೊಂಚ ಸುತ್ತಾಡಿ ನೋಡಿದೆವು. ಉಳಿದವರು ತಿಂಡಿ ಏನು ತಿನ್ನೋದು, ಎಲ್ಲಿ ಹೋಗೋದು ಅನ್ನೋದರ ಬಗ್ಗೆಯೇ ತಲೆ ಕೆಡಿಸಿಕೊಂಡಂತಿತ್ತು.&nbsp;</p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/11/Humayuns_Tomb_with_the_Barbers_Tomb_in_the_foreground_Delhi_1858_photograph-1024x773.jpg" alt="" class="wp-image-13744" width="696" height="525" srcset="https://peepalmedia.com/wp-content/uploads/2022/11/Humayuns_Tomb_with_the_Barbers_Tomb_in_the_foreground_Delhi_1858_photograph-1024x773.jpg 1024w, https://peepalmedia.com/wp-content/uploads/2022/11/Humayuns_Tomb_with_the_Barbers_Tomb_in_the_foreground_Delhi_1858_photograph-300x226.jpg 300w, https://peepalmedia.com/wp-content/uploads/2022/11/Humayuns_Tomb_with_the_Barbers_Tomb_in_the_foreground_Delhi_1858_photograph-768x579.jpg 768w, https://peepalmedia.com/wp-content/uploads/2022/11/Humayuns_Tomb_with_the_Barbers_Tomb_in_the_foreground_Delhi_1858_photograph-1536x1159.jpg 1536w, https://peepalmedia.com/wp-content/uploads/2022/11/Humayuns_Tomb_with_the_Barbers_Tomb_in_the_foreground_Delhi_1858_photograph-2048x1545.jpg 2048w, https://peepalmedia.com/wp-content/uploads/2022/11/Humayuns_Tomb_with_the_Barbers_Tomb_in_the_foreground_Delhi_1858_photograph-150x113.jpg 150w, https://peepalmedia.com/wp-content/uploads/2022/11/Humayuns_Tomb_with_the_Barbers_Tomb_in_the_foreground_Delhi_1858_photograph-696x525.jpg 696w, https://peepalmedia.com/wp-content/uploads/2022/11/Humayuns_Tomb_with_the_Barbers_Tomb_in_the_foreground_Delhi_1858_photograph-1068x806.jpg 1068w, https://peepalmedia.com/wp-content/uploads/2022/11/Humayuns_Tomb_with_the_Barbers_Tomb_in_the_foreground_Delhi_1858_photograph-1920x1449.jpg 1920w" sizes="auto, (max-width: 696px) 100vw, 696px" /><figcaption class="wp-element-caption">ಹುಮಾಯೂನ್ ಟಾಂಬ್ ಮತ್ತು ಬಾರ್ಬರ್ ಸ್ಮಾರಕದ ಹಳೆಯ ಚಿತ್ರ- ಕೃಪೆ ಗೂಗಲ್</figcaption></figure>



<p>&nbsp;ಹೊರಡೋ ಹವಣಿಕೆಯಲ್ಲಿದ್ದ ನನಗೆ ಯಾರೋ ಕನ್ನಡದಲ್ಲಿ ಮಾತಾಡುತ್ತಿರುವಂತೆ ಕೇಳಿತು. ಕನ್ನಡ ಕನ್ನಡ ಹಾ ಸವಿಗನ್ನಡ&#8230; ಗಮನವಿಟ್ಟು‌ ಕೇಳಿದರೆ ಅದು ಕನ್ನಡವಾಗಿರಲಿಲ್ಲ; ತುಳು. ಮಾತಿನ ನಡುವೆ ಆಪ್ತಮಿತ್ರ ಸಿನೆಮಾ ಹೆಸರು ಪ್ರಸ್ತಾಪಿಸಿದ ಕೂಡಲೆ ಕನ್ನಡದವರಾ ಎಂದು ಕೇಳಿಯೇ ಬಿಟ್ಟೆ. ಅದು ಮಂಗಳೂರಿನ ಒಂದು ಗುಂಪಾಗಿತ್ತು. ಅವರಿಗೂ ಖುಶಿ. ನಾಕಾರು ಫೋಟೋ ಸೆರೆಹಿಡಿಯೋ ಹೊತ್ತಿಗೆ ಎಲ್ಲರೂ ಹಸಿವಿನಿಂದ ಕಂಗಾಲಾಗಿದ್ದರು. ಹತ್ತಿರದಲ್ಲಿಯೇ ಇದ್ದ ನಿಜಾಮುದ್ದೀನ್ ದರ್ಗಾದ ಬಳಿ ಹೋಗಿ ಅಲ್ಲಿಯೇ ಉಪಹಾರಕ್ಕೆ ಏನಾದರೂ ಹುಡುಕುವುದು ಎಂದುಕೊಂಡರೂ ನಮಗೆ ಸಿಕ್ಕಿದ ಟ್ಯಾಕ್ಸಿಯವ ಇಲ್ಲಿಂದ ಮೂರು ಕಿ.ಮೀ. ದೂರದಲ್ಲಿ ಸೌತ್ ಇಂಡಿಯನ್ ರೆಸ್ಟುರಾ ಸಿಗುವುದೆಂದು ಆಸೆ ಹುಟ್ಟಿಸಿದ. ನಮ್ಮಿಡೀ ಪ್ರವಾಸವನ್ನು ಸಹ್ಯಗೊಳಿಸಿದ ಪುಣ್ಯಾತ್ಮರು ಯಾರಾದರೂ ಇದ್ದರೆಂದರೆ ಅವರು ಆಟೋ ಮತ್ತು ಟ್ಯಾಕ್ಸಿ ಡ್ರೈವರುಗಳು. ಸೌತ್ ಮೀಲ್ ಅನ್ನೋ ಪದಪುಂಜವೇ ನಾಲಗೆಯಲ್ಲಿ ನೀರೂರಲು ಇನ್ನೂ ಒಂದು ಕಾರಣ ಹಿಂದಿನ ರಾತ್ರಿ ಹೋಲ್ ಸೇಲ್ ಆಗಿ ಎಲ್ಲರಿಂದ ಬಹಿಷ್ಕೃತವಾಗಿದ್ದ ನಾರ್ತ್ ಬಿರಿಯಾನಿ.</p>



<p>ಅದೊಂದು ತಮಿಳುನಾಡಿನ ಮೂಲದವರ ರೆಸ್ಟುರಾ. ಹೆಸರು ಹೋಟೆಲ್ ಚಿದಂಬರಂ. ತಟ್ಟೆ ಇಡ್ಲಿ, ದೋಸೆ, ವಡೆ, ಫಿಲ್ಟರ್ ಕಾಫಿ ಎಲ್ಲವೂ ಹೊಟ್ಟೆ ಸೇರಿದ ಮೇಲೆ ಸಮಾಧಾನವಾಗಿದ್ದೂ ಅಲ್ಲದೆ; ಹನ್ನೊಂದು ಗಂಟೆಗೆ ರೂಮು ಸೇರಿ ನಿದ್ರಿಸುವ ಪ್ರತಿಜ್ಞೆ ಕೂಡ ಮರವೆಗೆ ಸಂದು ಓಡಾಟ ಮುಂದುವರಿಸಿದೆವು.</p>



<p>&nbsp;ಮುಂದಿನ ಸ್ಥಳ ಕರ್ತವ್ಯಪಥ. ಹಿಂದೆ ರಾಜಪಥವಾಗಿತ್ತು. ಈಗ ಪಥವೇ ಮಾಯವಾಗಿ ಕೇವಲ ಪಾರ್ಕ್ ಆಗಿದೆ‌. ದಶಕದ ಹಿಂದೆ ವಿಶಾಲವಾಗಿದ್ದರೂ ವಿರಳ ವಾಹನಗಳಿಂದ ಕೂಡಿದ್ದ ಈ ರಸ್ತೆಗುಂಟ ನಡೆದು ಜಂತರ್ ಮಂತರ್, ಪಾಲಿಕಾ ಬಝಾರ್, ಸಂಸದ್ ಭವನ, ಸೆಂಟ್ರಲ್ ಸೆಕ್ರೆಟ್ರಿಯೇಟ್ ಮತ್ತು ರಾಷ್ಟ್ರಪತಿ ಭವನದ ಗೇಟ್ವರೆಗೆ ಕಾಲ್ನಡಿಗೆಯಲ್ಲಿ ನಾನು- ಸುಜಾತ&nbsp; ಸುತ್ತಾಡಿದ್ದೆವು. ಸದ್ಯ ರಸ್ತೆಯ ಹೆಸರು ಮಾತ್ರವಲ್ಲದೆ ಅದರ ಸ್ವರೂಪವನ್ನೂ ಸಹ ಬದಲಿಸಿರುವ ಸರ್ಕಾರ ಸೆಂಟ್ರಲ್ ವಿಸ್ತಾದ ನಿರ್ಮಾಣದಲ್ಲಿ ನಿರತವಾಗಿದೆ. ಇಂಡಿಯಾ ಗೇಟಿನ ಒಂದು ಬದಿಯಲ್ಲಿ ಸುಭಾಶ್ಚಂದ್ರ ಬೋಸ್ ಅವರ ಪ್ರತಿಮೆ ಅನಾವರಣಗೊಂಡಿದೆ.&nbsp;<br></p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/11/1666893719107-576x1024.jpg" alt="" class="wp-image-13751" width="416" height="740" srcset="https://peepalmedia.com/wp-content/uploads/2022/11/1666893719107-576x1024.jpg 576w, https://peepalmedia.com/wp-content/uploads/2022/11/1666893719107-169x300.jpg 169w, https://peepalmedia.com/wp-content/uploads/2022/11/1666893719107-768x1365.jpg 768w, https://peepalmedia.com/wp-content/uploads/2022/11/1666893719107-864x1536.jpg 864w, https://peepalmedia.com/wp-content/uploads/2022/11/1666893719107-1152x2048.jpg 1152w, https://peepalmedia.com/wp-content/uploads/2022/11/1666893719107-150x267.jpg 150w, https://peepalmedia.com/wp-content/uploads/2022/11/1666893719107-300x533.jpg 300w, https://peepalmedia.com/wp-content/uploads/2022/11/1666893719107-696x1237.jpg 696w, https://peepalmedia.com/wp-content/uploads/2022/11/1666893719107-1068x1899.jpg 1068w, https://peepalmedia.com/wp-content/uploads/2022/11/1666893719107-1920x3413.jpg 1920w, https://peepalmedia.com/wp-content/uploads/2022/11/1666893719107-scaled.jpg 1440w" sizes="auto, (max-width: 416px) 100vw, 416px" /><figcaption class="wp-element-caption">ಇಸಾಖಾನ್ ಟಾಂಬ್ ಬಳಿ- ಆರುಶ್, ರೋಹಿಣಿ ಮತ್ತು ಸುಜಾತ.</figcaption></figure></div>


<p>ಇನ್ನಷ್ಟು ವರ್ಷಗಳು ಹೋದರೆ ಇನ್ನೂ ಏನೆನರ ಹೆಸರುಗಳು ಬದಲಿಯಾಗುತ್ತವೋ ಕಾಣೆ. ಹೊಸದೆಹಲಿ ನಿರ್ಮಿಸಿದ ಬ್ರಿಟಿಷರು ವಿಶಾಲವಾದ ರಸ್ತೆಗಳನ್ನು ನಿರ್ಮಿಸಿ ದೆಹಲಿ‌ ಮೂಲಕ ದೇಶ ಆಳಿದ ಬಹುತೇಕ ಎಲ್ಲ ಅರಸರ ಹೆಸರುಗಳನ್ನು ಇರಿಸಿದ್ದಾರೆ. ರಾಜಪಥದಂತೆ ಈ ಹೆಸರುಗಳೂ ಮುಸುಳಿಸಬಹುದು. ರಾತ್ರೋರಾತ್ರಿ ರೈಲಿನ ಹೆಸರು ಟೀಪು ಬದಲಿಗೆ ಒಡೆಯರ್ ಆಗೋದಾದ್ರೆ ಏನೂ ಅಗಬಹುದು.&nbsp;</p>



<p>ದೋಸೆ ಇಡ್ಲಿ ತಿಂದ ಖುಶಿಯಲ್ಲಿ ಎರಡು ಆಟೋ ಬುಕ್ ಮಾಡಿಕೊಂಡು ಇಂಡಿಯಾ ಗೇಟ್ ಕಡೆ ಹೊರಟೆವು. ಒಬ್ಬೊಬ್ಬ ಆಟೋಕಾರನೂ ಬೇರೆ ಬೇರೆ ಗೇಟ್ ಕಡೆ ಡ್ರಾಪಿಸಿದ್ದರಿಂದ ಮತ್ತೆ ನಾವೆಲ್ಲ ಒಟ್ಟು ಸೇರಲು ಅರ್ಧ ತಾಸೇ ಹಿಡಿಯಿತು.&nbsp;</p>



<p>&nbsp;ದೆಹಲಿ ಪ್ರವಾಸಕ್ಕೆ ಬರುವ ಬಹುತೇಕರು ನೋಡಿಯೇ ತೀರುವ ಸ್ಮಾರಕವೆಂದರೆ ಇಂಡಿಯಾ ಗೇಟ್. ೪೨ ಮೀಟರ್ ಎತ್ತರದ ಈ ಸ್ಮಾರಕ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದದ್ದು. ಹಲವರು ಬಾಂಬೆಯ ಗೇಟ್ ವೇ ಆಫ್ ಇಂಡಿಯಾ ಮತ್ತು ದೆಹಲಿಯ ಇಂಡಿಯಾ ಗೇಟ್ ಗಳನ್ನು ಅದಲಿ ಬದಲಿ ಮಾಡಿ ಹೇಳುವುದಿದೆ. ೧೯೧೪ ರ ಮೊದಲ ಜಾಗತಿಕ ಯುದ್ಧ ಮತ್ತು ೧೯೧೯ ರ ಆಫಘನ್ ಯುದ್ಧದಲ್ಲಿ ಮಡಿದ ಸುಮಾರು ೭೦ ಸಾವಿರ ಬ್ರಿಟಿಷ್ ಮತ್ತು ಭಾರತೀಯ ಸೈನಿಕರ ನೆನಪಿನ ಸ್ಮಾರಕವೇ ಇಂಡಿಯಾ ಗೇಟ್. ನೋಡಲು ಬಹಳ ಸರಳವಿದ್ದರೂ‌ ತನ್ನ ಬೃಹತ್ ಗಾತ್ರ ಮತ್ತು ಕಲಾತ್ಮಕತೆಯಿಂದ ಗಮನ ಸೆಳೆಯುತ್ತದೆ. ಕಳೆದ ಶತಮಾನದ ಆರಂಭಕ್ಕೆ ೭೦ ಸಾವಿರ ಅಂದರೆ ಕಡಮೆ ಸಂಖ್ಯೆಯಲ್ಲ. ಇಡಿಯಾಗಿ ಜಗತ್ತು ಸಾವಿರಾರು ವರ್ಷಗಳಿಂದ ನಡೆದಿರುವ ನಿರಂತರ ಯುದ್ಧಗಳಲ್ಲಿ ಎಷ್ಟು ಸೈನಿಕರು, ಮಂದಿ ಮಡಿರಬಹುದು ಎಂಬುದು ಊಹೆಗೂ ನಿಲುಕದ ಸಂಗತಿ. ಲೇಖಕ ನಾಗೇಶ ಹೆಗಡೆಯವರು ತಮ್ಮ ʼಗಗನಸಖಿಯರ ಸೆರಗು ಹಿಡಿದುʼ ಕೃತಿಯಲ್ಲಿ ಅಮೇರಿಕಾದಲ್ಲಿ ವಿಯೆಟ್ನಾಂ ಯುದ್ಧದಲ್ಲಿ ಪ್ರಾಣತೆತ್ತ ೫೨ ಸಾವಿರ ಸೈನಿಕರ ಸ್ಮಾರಕವನ್ನು ಕಂಡು ಈ ಸ್ಮಾರಕದಲ್ಲಿ ನಮ್ಮ ಚಾಮರಾಜನಗರದ ಕೆಲವು ಹೆಸರು ಬಿಟ್ಟು ಹೋಗಿವೆ ಎನ್ನುತ್ತಾರೆ! ಅವು ಯಾರ ಹೆಸರೆಂದರೆ; ಆ ಸ್ಮಾರಕಕ್ಕೆ ಬಳಸಿದ ನುಣುಪು ಶಿಲೆ ನಮ್ಮ ಚಾಮರಾಜನಗರದ ಬಳಿ ಮೈನಿಂಗ್ ಮಾಡಿ ರಫ್ತು ಮಾಡಿದ್ದಂತೆ. ಮೈನಿಂಗ್ ಮದ್ದಿನ ಸಿಡಿತಕ್ಕೆ ಸಿಕ್ಕಿ ಸತ್ತ‌ ಕಾರ್ಮಿಕರ ಹೆಸರೂ ಸ್ಮಾರಕದ ಮೇಲೆ ಕೆತ್ತಲ್ಪಡಬೇಕಿತ್ತಲ್ಲವೆ?</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/11/IMG_20221004_085000-1-760x1024.jpg" alt="" class="wp-image-13752" width="585" height="784" srcset="https://peepalmedia.com/wp-content/uploads/2022/11/IMG_20221004_085000-1-223x300.jpg 223w, https://peepalmedia.com/wp-content/uploads/2022/11/IMG_20221004_085000-1-150x202.jpg 150w" sizes="auto, (max-width: 585px) 100vw, 585px" /><figcaption class="wp-element-caption">ಹುಮಾಯೂನ್ ಟಾಂಬ್ ಮುಂದೊಂದು ಸೆಲ್ಫಿ.<br></figcaption></figure></div>


<p>ಬಹುತೇಕ ಪ್ರವಾಸಿ ಸ್ಥಳಗಳಲ್ಲಿ ಇತ್ತೀಚಿನ ಬೆಳವಣಿಗೆ (ಅನಪೇಕ್ಷಿತವೆನ್ನಿ) ಒಂದೋ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುತ್ತಿರುವ ಜೋಡಿಗಳು ಇಲ್ಲವೇ ಟಿಕ್ ಟಾಕ್ ಮಾದರಿಯ ವಿಡಿಯೋ ಶೂಟ್ ಮಾಡುವ ಯುವಸಮೂಹ ಕಣ್ಣಿಗೆ ಬಿದ್ದೇ ತೀರುತ್ತದೆ. ಇಂಡಿಯಾ ಗೇಟ್ ಬಳಿಯೂ ಇಂಥವರು ಠಳಾಯಿಸಿದ್ದರೆನ್ನಿ. ಇತ್ತೀಚೆಗೆ ಇಂಡಿಯಾ ಗೇಟಿಗೆ ಕೇವಲ ೫೦ ಮೀಟರ್ ಅಂತರದಲ್ಲಿ ಸುಭಾಶ್ ಚಂದ್ರ ಬೋಸರ ಪ್ರತಿಮೆ ಅನಾವರಣವಾಗಿದೆ. ಸರ್ದಾರ್ ಪಟೇಲ್ ಮತ್ತು ಸುಭಾಶ್ಚಂದ್ರ ಬೋಸರನ್ನು ಗಾಂಧಿ &#8211; ನೆಹರೂಗೆ ಪ್ರತಿಸ್ಫರ್ಧಿಗಳಂತೆ ಬಿಂಬಿಸುವ ಕೆಲಸ ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಚರಿತ್ರೆ ಹೇಳುವ ಸತ್ಯವೆಂದರೆ ಸುಭಾಶರ ನಂತರ ಬ್ರಿಟಿಷ್ ಸರ್ಕಾರ ಐ ಎನ್ ಎ ಸೈನಿಕರನ್ನು ಶಿಕ್ಷೆಗೆ ಗುರಿಮಾಡಲು ಹೊರಟಾಗ ಅವರ ಪರ ವಕಾಲತ್ತು ಹಾಕಿದ ವಕೀಲ ಪಂಡಿತ್ ನೆಹರೂ. ಹಾಗೇ ಪಟ್ಟಾಭಿ‌ಸೀತಾರಾಮಯ್ಯ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿ ನಂತರ ವಿಚಾರ ಭಿನ್ನತೆಯಿಂದ ಸ್ಥಾನ ತೊರೆದು ಹೋರಾಟದ ಹಾದಿ ಬದಲಿಸಿದ ಸುಭಾಶರು ಜಪಾನ್ ಜರ್ಮನಿ ಗಳ ಸಹಾಯದಿಂದ ಕಟ್ಟಿದ ಸೈನ್ಯದ ರೆಜಿಮೆಂಟಿಗೆ ಗಾಂಧಿಯ ಹೆಸರಿಟ್ಟಿದ್ದರು ಎಂಬುದು ಈ ವ್ಯಕ್ತಿತ್ವಗಳನ್ನು ಎದುರಾ ಬದುರಾ ನಿಲ್ಲಿಸುವವರಿಗೆ ಕಾಣುವುದಿಲ್ಲ.</p>



<p></p>



<p><strong>ರೋಹಿತ್‌ ಅಗಸರಹಳ್ಳಿ</strong></p>



<p><strong><em>ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.</em></strong></p>
]]></content:encoded>
					
		
		
			</item>
		<item>
		<title>ಲೆಕ್ಕಾಚಾರ ತಪ್ಪೋಯ್ತು..</title>
		<link>https://peepalmedia.com/lekkachara-tappaytu/</link>
		
		<dc:creator><![CDATA[Rohit Agasarahalli]]></dc:creator>
		<pubDate>Wed, 26 Oct 2022 10:13:24 +0000</pubDate>
				<category><![CDATA[ಪ್ರವಾಸ ಕಥನ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Travelogue]]></category>
		<category><![CDATA[writing]]></category>
		<guid isPermaLink="false">https://peepalmedia.com/?p=13002</guid>

					<description><![CDATA[ತೆಗೆದಿದ್ದ ಟಿಕೇಟು ಜನರಲ್ ಕಂಪಾರ್ಟ್ ಮೆಂಟು, ಏರಿದ್ದು ಮಾತ್ರ ಎಸಿ ಚೇರ್ ಕಾರು! ಮಕ್ಕಳು ಮರಿ ಹೊತ್ಕೊಂಡು ಜನರಲ್ ಬೋಗಿಯ ರಶ್ಶಿನಲ್ಲಿ ಹೋಗೋದ್ಯಾಕೆ‌ ಎಂದು ಅಲ್ಲಿಯೇ ತಂಗಿದೆವು. ಮುಂದೇನಾಯ್ತು ಓದಿ&#8230; ಇದು ಲೇಖಕ &#8216;ರೋಹಿತ್‌ ಅಗಸರಹಳ್ಳಿ&#8217;ಯವರು ಪ್ರತಿ ಬುಧವಾರ ಬರೆಯಲಿರುವ ಅವರ ತಿರುಗಾಟದ ಅನುಭವದ ಮೊದಲ ಕಂತು. ಗೆಳೆಯ ದಿನೇಶ್ ಅವರು ಒಮ್ಮೆ ನಾರ್ತ್ ಇಂಡಿಯಾ ಟೂರ್ ಹೋಗೋಣ ಎಂದು ಆಸೆ ಹುಟ್ಟಿಸಿದ್ದರು. ಸಮಾನ ಮನಸ್ಕರು ಸಿಕ್ಕಾಗೊಮ್ಮೆ ಇಂಥ ಹತ್ತಾರು ಆಲೋಚನೆಗಳು ಹುಟ್ಟಿ, ಮುರುಟಿ ಹೋಗುವುದು ಸಹಜವೇ [&#8230;]]]></description>
										<content:encoded><![CDATA[
<p><strong>ತೆಗೆದಿದ್ದ ಟಿಕೇಟು ಜನರಲ್ ಕಂಪಾರ್ಟ್ ಮೆಂಟು, ಏರಿದ್ದು ಮಾತ್ರ ಎಸಿ ಚೇರ್ ಕಾರು! ಮಕ್ಕಳು ಮರಿ ಹೊತ್ಕೊಂಡು ಜನರಲ್ ಬೋಗಿಯ ರಶ್ಶಿನಲ್ಲಿ ಹೋಗೋದ್ಯಾಕೆ‌ ಎಂದು ಅಲ್ಲಿಯೇ ತಂಗಿದೆವು. ಮುಂದೇನಾಯ್ತು ಓದಿ&#8230;</strong></p>



<p><strong>ಇದು ಲೇಖಕ &#8216;ರೋಹಿತ್‌ ಅಗಸರಹಳ್ಳಿ&#8217;ಯವರು ಪ್ರತಿ ಬುಧವಾರ ಬರೆಯಲಿರುವ ಅವರ ತಿರುಗಾಟದ ಅನುಭವದ ಮೊದಲ ಕಂತು.</strong></p>



<p>ಗೆಳೆಯ ದಿನೇಶ್ ಅವರು ಒಮ್ಮೆ ನಾರ್ತ್ ಇಂಡಿಯಾ ಟೂರ್ ಹೋಗೋಣ ಎಂದು ಆಸೆ ಹುಟ್ಟಿಸಿದ್ದರು. ಸಮಾನ ಮನಸ್ಕರು ಸಿಕ್ಕಾಗೊಮ್ಮೆ ಇಂಥ ಹತ್ತಾರು ಆಲೋಚನೆಗಳು ಹುಟ್ಟಿ, ಮುರುಟಿ ಹೋಗುವುದು ಸಹಜವೇ ಆದ್ದರಿಂದ ಹ್ಞೂಂಗುಟ್ಟಿ ಸುಮ್ಮನಾಗಿದ್ದೆವು. ಡ್ರೈವಿಂಗ್ ಮತ್ತು ಓಡಾಟದ ಕ್ರೇಝ್ ಇರುವ ಅವರು ಗಂಭೀರವಾಗಿಯೇ ಹೇಳಿದ್ದರೆನ್ನೋದು ವಾರೊಪ್ಪೊತ್ತಿನಲ್ಲಿ ಅರ್ಥವಾಗಿತ್ತು.</p>



<p>ಎಲ್ಲಿ, ಹೇಗೆ, ಇತ್ಯಾದಿ ಸಂಗತಿಗಳನ್ನು ಅವರಿಗೇ ಬಿಟ್ಟೆವು. ಉತ್ತರ ಭಾರತ ಅಂದ ಕೂಡಲೆ ಡೆಲ್ಲಿ &#8211; ಆಗ್ರಾ ಅನ್ನೋದು ಸ್ಟೀರಿಯೋಟೈಪ್ ಆಗ್ಬಿಟ್ಟಿದೆ. ನಾವು ಕೂಡ(ನಾನು  ಮತ್ತು ಸಹಧರ್ಮಿಣಿ ಸುಜಾತ ತಳವಾರ್) ೨೦೧೦ ರಲ್ಲಿ ಹೀಗೆ ಪ್ರವಾಸ ಹೋದಾಗ ಡೆಲ್ಲಿ &#8211; ಆಗ್ರಾ ಜೊತೆಗೆ ಶಿಮ್ಲಾ ಕುಲು ಮನಾಲಿ ಕೂಡ ಯೋಜಿಸಿದ್ದೆವು. ಶಿಮ್ಲಾ ನೋಡಿದರೂ ಕುಲು ಮತ್ತು ಮನಾಲಿ ಕಣಿವೆಗಳು ಮಿಸ್ ಆದವು.</p>



<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/10/WhatsApp-Image-2022-10-26-at-3.55.35-PM-1024x576.jpeg" alt="" class="wp-image-13025" srcset="https://peepalmedia.com/wp-content/uploads/2022/10/WhatsApp-Image-2022-10-26-at-3.55.35-PM-1024x576.jpeg 1024w, https://peepalmedia.com/wp-content/uploads/2022/10/WhatsApp-Image-2022-10-26-at-3.55.35-PM-300x169.jpeg 300w, https://peepalmedia.com/wp-content/uploads/2022/10/WhatsApp-Image-2022-10-26-at-3.55.35-PM-768x432.jpeg 768w, https://peepalmedia.com/wp-content/uploads/2022/10/WhatsApp-Image-2022-10-26-at-3.55.35-PM-150x84.jpeg 150w, https://peepalmedia.com/wp-content/uploads/2022/10/WhatsApp-Image-2022-10-26-at-3.55.35-PM-696x392.jpeg 696w, https://peepalmedia.com/wp-content/uploads/2022/10/WhatsApp-Image-2022-10-26-at-3.55.35-PM-1068x601.jpeg 1068w, https://peepalmedia.com/wp-content/uploads/2022/10/WhatsApp-Image-2022-10-26-at-3.55.35-PM.jpeg 1152w" sizes="auto, (max-width: 1024px) 100vw, 1024px" /><figcaption>ಬೆಂಗಳೂರಿನ ಯಶವಂತಪುರ ನಿಲ್ದಾಣ( ಫೋಟೋ ಸೆಷನ್ ಉದ್ಘಾಟನೆ!)</figcaption></figure>



<p>ರೋಹಿಣಿ- ದಿನೇಶ್ ಅವರ ಮನೆಯಲ್ಲಿಯೇ ಕೂತು ರಜೆ ಹೊಂದಾಣಿಕೆ ಮಾಡಿಕೊಂಡು ರೈಲೋ ವಿಮಾನವೋ ಎಂದು ಚರ್ಚಿಸಿ ಹವಾಯಿ ಜಹಾಜ್ ಎಟುಕಲಾರದೆಂದು ಟ್ರೈನ್ ಬುಕ್ ಮಾಡಿದೆವು. ಎಲ್ಲರೂ ಡೆಲ್ಲಿಗೆ ಹೋಗ್ತಾರೆ ನಾವ್ಯಾಕೆ ಡೆಲ್ಲಿಯನ್ನು ಅವಾಯ್ಡ್ ಮಾಡಬಾರದೆಂದೆಣಿಸಿ ನೇರ ಜೈಪುರಕ್ಕೆ‌ ಬುಕ್ ಮಾಡಿದೆವು. ತಿರುಗಿ ಬರೋದು ಕೂಡ ಆಗ್ರಾ ಟು ಬೆಂಗಳೂರಿಗೆ ಬುಕ್ ಮಾಡಿ ರಿಸರ್ವೇಶನ್ ಕನ್ಫರ್ಮ್ ಆಗಲೆಂದು ಕಾಯ್ದಿದ್ದೇ ಬಂತು. ವೇಟಿಂಗ್ ಲಿಸ್ಟಲ್ಲಿ ನಮ್ಮ ನಂಬರ್ ಏರುಪೇರಾಗದೆ ಸ್ಥಿರವಾಗಿ ಉಳಿದು ಆತಂಕಕ್ಕೆ ದೂಡಿತು. ಈ ರಿಸರ್ವೇಶನ್ ಸೆಷನ್ಗೋಸುಗವೇ ಚಿಕನ್ ಬಿರಿಯಾನಿ ತಿಂದಿದ್ದಷ್ಟೇ ಫಾಯ್ದೆ!</p>



<p>ಮತ್ತೆ ಆನ್ಲೈನ್ ಸಭೆ ಸೇರಿ ಕಾರಣಗಳನ್ನು ಹುಡುಕಲಾಗಿ‌ ತಿಳಿದು ಬಂದ ಸಂಗತಿ; ಜೈಪುರ‌ ಮತ್ತು ಆಗ್ರಾಗಳು ರೈಲು ಹೊರಡುವ ಸ್ಥಳಗಳಾಗಿರದ ಕಾರಣ, ಅಲ್ಲಿಗೆ ಕಡಿಮೆ ಸೀಟುಗಳನ್ನು ಕಾಯ್ದಿರಿಸಲಾಗುವುದೆಂದೂ ಆ ಕಾರಣಕ್ಕೆ ಬುಕ್ಕಿಂಗ್ ಕನ್ಪರ್ಮ್ ಆಗುತ್ತಿಲ್ಲವೆಂದು ನಮಗೆ ಕನ್ಫರ್ಮ್ ‌ಆಯ್ತು. ಮತ್ತೆ ಹೊಸ ಬುಕ್ಕಿಂಗ್. ಬೆಂಗಳೂರಿಂದ ಡೆಲ್ಲಿ- ಡೆಲ್ಲಿಯಿಂದ ಬೆಂಗಳೂರು. ಕಳೆದ ಹತ್ತು ವರ್ಷಗಳಲ್ಲಿ ರೈಲು ಚಾರ್ಜು ಮೂರು ಪಟ್ಟು ಏರಿದೆ ಎಂದು ತಿಳಿಯಿತು.</p>



<p>ಸ್ನೇಹಿತರು ಅಂತರ್ಜಾಲದ ಬಲೆಯಲ್ಲಿ ಮಿಂದೆದ್ದು ಎಲ್ಲವನ್ನೂ ಅಳೆದು ತೂಗಿ ಡೆಲ್ಲಿಗೆ ಒಂದೂ ಮುಕ್ಕಾಲು ದಿನ, ಅಲ್ಲಿಂದ ಜೈಪುರದಲ್ಲಿ ಒಂದು ದಿನ, ಅಜ್ಮೇರ್ ನಲ್ಲಿ ಎರಡು ದಿನ. ನಂತರ ಆಗ್ರಾದಲ್ಲಿ ಒಂದು ದಿನ ಉಳಿದು ತಾಜಮಹಲು, ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿ ನೋಡಿ ಡೆಲ್ಲಿಯಿಂದ ಹೊರಡೋ ರೈಲನ್ನು ಆಗ್ರಾದಲ್ಲಿಯೇ ಏರುವುದು ಎಂದು ಯೋಜಿಸಿಟ್ಟರು. ಅವರ ಕರಾರುವಾಕ್ ಲೆಕ್ಕಾಚಾರಕ್ಕೆ ಬೆರಗಾದೆ. ವಾಸ್ತವ ನಮ್ಮ ಲೆಕ್ಕಾಚಾರಗಳನ್ನು ಮೀರಿರುತ್ತವೆ‌ ಎಂಬುದು ಬೇಗ ಅರ್ಥವಾಯ್ತು ಹೊರಟ ಮೇಲೆ!</p>



<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/10/WhatsApp-Image-2022-10-26-at-3.58.54-PM-1024x576.jpeg" alt="" class="wp-image-13028" srcset="https://peepalmedia.com/wp-content/uploads/2022/10/WhatsApp-Image-2022-10-26-at-3.58.54-PM-1024x576.jpeg 1024w, https://peepalmedia.com/wp-content/uploads/2022/10/WhatsApp-Image-2022-10-26-at-3.58.54-PM-300x169.jpeg 300w, https://peepalmedia.com/wp-content/uploads/2022/10/WhatsApp-Image-2022-10-26-at-3.58.54-PM-768x432.jpeg 768w, https://peepalmedia.com/wp-content/uploads/2022/10/WhatsApp-Image-2022-10-26-at-3.58.54-PM-150x84.jpeg 150w, https://peepalmedia.com/wp-content/uploads/2022/10/WhatsApp-Image-2022-10-26-at-3.58.54-PM-696x392.jpeg 696w, https://peepalmedia.com/wp-content/uploads/2022/10/WhatsApp-Image-2022-10-26-at-3.58.54-PM-1068x601.jpeg 1068w, https://peepalmedia.com/wp-content/uploads/2022/10/WhatsApp-Image-2022-10-26-at-3.58.54-PM.jpeg 1280w" sizes="auto, (max-width: 1024px) 100vw, 1024px" /><figcaption>ತುರಂತೋ ಎಕ್ಸೆಪ್ರೆಸ್ ನಲ್ಲಿ ಸುಜಾತಾ- ರೋಹಿತ್</figcaption></figure>



<p>&nbsp;ಹತ್ತು ದಿನಕ್ಕೆಂದು ಲಗ್ಗೇಜ್ ಕೊಂಚ ಹೆಚ್ಚೇ ಇದ್ದ ಕಾರಣಕ್ಕೆ&nbsp; ಹಾಸನದಿಂದ ಬೆಂಗಳೂರಿಗೆ ಟ್ರೇನಿನಲ್ಲೆ ಹೋಗುವುದೊಳಿತೆಂದು ತೀರ್ಮಾನಿಸಿದೆವು. ತೆಗೆದಿದ್ದ ಟಿಕೇಟು ಜನರಲ್ ಕಂಪಾರ್ಟ್ ಮೆಂಟು, ಏರಿದ್ದು ಮಾತ್ರ ಎಸಿ ಚೇರ್ ಕಾರು! ಮಕ್ಕಳು ಮರಿ ಹೊತ್ಕೊಂಡು ಜೆನರಲ್ ಬೋಗಿಯ ರಶ್ಶಿನಲ್ಲಿ ಹೋಗೋದ್ಯಾಕೆ‌ ಎಂದು ಅಲ್ಲಿಯೇ ತಂಗಿದೆವು. ಡಿಫರೆನ್ಸ್ ಹಣ ತುಂಬೋಕೆ ಹೋದಾಗ ತಿಳಿದದ್ದು, ಚೇರ್ ಕಾರಿಗೆ ಜೆನರಲ್ ಟಿಕೇಟಿನ ಎಂಟು ಪಟ್ಟು ಇದೆ ಅಂತ. ರಾತ್ರಿ ಎಂಟಕ್ಕೆ ತಲುಪಬೇಕಿದ್ದ ರೈಲು ಯಶವಂತಪುರ ತಲುಪಿದ್ದು ಹತ್ತೂವರೆಗೆ.&nbsp;</p>



<p>ರಾತ್ರಿ ಊಟ ಮುಗಿಸಿ ತುರಂತೋ ಎಕ್ಸ್‌ ಪ್ರೆಸ್ಸಿಗೆ ಕೂತರೆ ಆರಾಮವಾಗಿ‌ ಡೆಲ್ಲಿಯಲ್ಲಿ ಇಳಿಯುತ್ತೇವೆ ಎಂದು ಹೋಟೆಲು ಹುಡುಕಿದರೆ ಸಿಕ್ಕದ್ದು ಪ್ಲಾಟ್ ಫಾರ್ಮಿನಲ್ಲೇ ಇದ್ದ irctc ಯ ಹೋಟೆಲು ಮಾತ್ರ. ಸೌತ್ ಇಂಡಿಯನ್ ಥಾಲಿ ಹೆಸರಲ್ಲಿ ಅವ ಕೊಟ್ಟದ್ದರಲ್ಲಿ ಥಾಲಿಯಷ್ಟೇ ಸತ್ಯ ಉಳಿದದ್ದೆಲ್ಲ ಮಿಥ್ಯ.</p>



<p>&nbsp;ಈ ತುರಂತೋ ಎಕ್ಸ್ ಪ್ರೆಸ್ ಸೂಪರ್ ಫಾಸ್ಟ್ ಅಂತೆ. ಉಳಿದೆಲ್ಲವೂ ಡೆಲ್ಲಿ ತಲುಪೋಕೆ ೩೮ ಗಂಟೆ ತೊಗೊಂಡ್ರೆ ಇದು ಕೇವಲ ೩೨ ಗಂಟೆಗಳಲ್ಲಿ ತಲುಪುತ್ತೆ. ಮಮತಾ ಬ್ಯಾನರ್ಜಿ ರೇಲ್ವೇ ಮಂತ್ರಿಯಾಗಿದ್ದ ಕಾಲದಲ್ಲಿ ಆರಂಭವಾಗಿದ್ದು ಇದು. ಟ್ರೇನಲ್ಲಿ ಕುಳಿತ ಕೆಲವೇ ಗಂಟೆಗಳಲ್ಲಿ ಸ್ಟೇಟಸ್ ನೋಡಿಯೋ ಏನೊ ಊರುದಿರುಗ ಗೆಳೆಯ ಮೆಸೇಜು ಮಾಡಿ ತುರಂತೋ ದಲ್ಲಿ ಎಸಿ ಅಧಿಕವೂ ಮತ್ತು ಊಟ ಅಧಮವೂ ಎಂದು ದೂರಿದರು. ಅವರ ಮಾತನ್ನು ರೇಲ್ವೇಯವರು ಹುಸಿಗೊಳಿಸಲಿಲ್ಲ. ಎರಡೆರಡು ಕಂಬಳಿ ಹೊದ್ದು ಮಲಗಿದೆವು. ಮೂಗಿನೆರಡೂ ಹೊರಳೆ ಮುಚ್ಚಿಯೇ ಟಾಯ್ಲೆಟ್ ಬಳಸಬೇಕಾಯ್ತು.</p>



<p>&nbsp;ಡೆಲ್ಲಿಯಲ್ಲಿ ಹಲವು ರೇಲ್ವೇ ಸ್ಟೇಷನ್ ಗಳಿವೆ. ಅದರಲ್ಲಿ ನಾವು ಇಳಿದದ್ದು ಸರಾಯಿ ರೋಹಿಲ್ಲಾ. ನಿಗದಿತ ಸಮಯಕ್ಕೆ ಹೆಚ್ಚೂ ಕಡಮೆ ಇಳಿಸಿದ. ದೆಹಲಿ ಔಟ್ ಸ್ಕರ್ಟ್ ತಲುಪುತ್ತಿದ್ದಂತೆಯೇ ಅಲ್ಲಿನ ಕಸದ ದರ್ಶನವೂ ಆಯ್ತು. ಹಾಸನದಲ್ಲಿ ಬಿಜಿವಿಎಸ್ ಮತ್ತು ಹಲವು‌ ಪರಿಸರಾಸಕ್ತರು ನಡೆಸುತ್ತಿರುವ &#8220;ಪ್ಲಾಸ್ಟಿಕ್ ಬಂಧನ, ಪರಿಸರ ಸ್ಪಂದನ&#8221; ಮೂಮೆಂಟ್ ನೆನಪಾಗಿ ಇಲ್ಲಿರೋ ಪ್ಲಾಸ್ಟಿಕ್ ಬಂಧಿಸಲು ಮುಂದಿನ ನೂರು ವರ್ಷವಾದರೂ ಬೇಕೇನೊ‌ ಎಂದುಕೊಂಡೆ.</p>



<p>ವಾಸ್ತವ್ಯಕ್ಕೆ ಆ ಮೊದಲೇ ಒಂದು ಗೆಸ್ಟ್ ಹೌಸ್ ಬುಕ್ ಆಗಿತ್ತು. ಅದೊಂದು ಸರ್ಕಾರಿ ಸಂಸ್ಥೆಯ ಗೆಸ್ಟ್ ಹೌಸ್. ಅದಿದ್ದುದು ಪುರಾನಿ ದಿಲ್ಲಿಯಲ್ಲಿ. ಹೀಗಾಗಿ ಚೆಕಿನ್ ಮಾಡಲು ತಾಸುಗಟ್ಟಲೆ ಹಿಡಿಯಿತು; ಆದರೆ ಖರ್ಚು ಸಸ್ತಾ. ತುರಂತೋದಲ್ಲಿಯೇ ಆರಂಭವಾಗಿದ್ದ ನಮ್ಮ ಊಟದ ಒಡಬಾಳು ಇಲ್ಲಿ ಮುಂದುವರೆಯಿತು. ಊಟ ಒದಗಿಸೋವ್ರಿಗೆ ಫೋನಿಸಿ ಆಲೂ ಪರೋಟ ತರಿಸಿ ತಿಂದೆವು. ಇಷ್ಟಾಗೋ ಹೊತ್ತಿಗೆ ಗಂಟೆ ಹನ್ನೊಂದು. ಜೊತೆಯಲ್ಲಿದ್ದ ಗೆಳೆಯ ಡೆಲ್ಲಿ ಎಕ್ಸಪ್ಲೋರ್ ಮಾಡುವುದು ಹೇಗೆ ಎಂದು ಎರಡು ದಿನ ಟ್ರೇನಿನಲ್ಲಿ ವಿವರಿಸಿದ್ದವರು ಸ್ನಾನ ಮುಗಿಸಿ ಬಟ್ಟೆ ತೊಳೆಯಲು ನಿಂತರು! ಸುತ್ತಾಟಕ್ಕೆ ಹೊರಡೋ ಹೊತ್ತಿಗೆ ನಡು ಮಧ್ಯಾಹ್ನ ಒಂದೂವರೆ. ಮೊದಲೇ ತೀರ್ಮಾನಿಸಿದಂತೆ <a>ರಾಜಘಾಟ್</a> ಮೊದಲ ಆದ್ಯತೆಯಾಗಿತ್ತು. </p>


<div class="wp-block-image">
<figure class="aligncenter size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/10/WhatsApp-Image-2022-10-26-at-3.56.44-PM-576x1024.jpeg" alt="" class="wp-image-13026" srcset="https://peepalmedia.com/wp-content/uploads/2022/10/WhatsApp-Image-2022-10-26-at-3.56.44-PM-576x1024.jpeg 576w, https://peepalmedia.com/wp-content/uploads/2022/10/WhatsApp-Image-2022-10-26-at-3.56.44-PM-169x300.jpeg 169w, https://peepalmedia.com/wp-content/uploads/2022/10/WhatsApp-Image-2022-10-26-at-3.56.44-PM-768x1365.jpeg 768w, https://peepalmedia.com/wp-content/uploads/2022/10/WhatsApp-Image-2022-10-26-at-3.56.44-PM-864x1536.jpeg 864w, https://peepalmedia.com/wp-content/uploads/2022/10/WhatsApp-Image-2022-10-26-at-3.56.44-PM-150x267.jpeg 150w, https://peepalmedia.com/wp-content/uploads/2022/10/WhatsApp-Image-2022-10-26-at-3.56.44-PM-300x533.jpeg 300w, https://peepalmedia.com/wp-content/uploads/2022/10/WhatsApp-Image-2022-10-26-at-3.56.44-PM-696x1237.jpeg 696w, https://peepalmedia.com/wp-content/uploads/2022/10/WhatsApp-Image-2022-10-26-at-3.56.44-PM.jpeg 900w" sizes="auto, (max-width: 576px) 100vw, 576px" /><figcaption>ಮಹಾತ್ಮರಿಲ್ಲಿ ಮಲಗಿದ್ದಾರೆ</figcaption></figure></div>


<p>ರಾಜಘಾಟ್ ತಲುಪೋ ಹೊತ್ತಿಗೆ ಬಿಸಿಲು ತನ್ನ ಉಚ್ಛ್ರಾಯ ಸ್ಥಿತಿ ತಲುಪಿತ್ತು. ಗಾಂಧಿ ವಿಶ್ರಮಿಸಿರುವ ಅಲ್ಲಿ ನೆರಳಿಗೇ ಬರ. ಎಲ್ಲಾ ಲಾನ್ ಮಯ. ದಶಕದ ಹಿಂದೆ ಡೆಲ್ಲಿಗೆ ಹೋದಾಗ ಮಿಸ್ ಆಗಿದ್ದ ಗಾಂಧಿ ದರ್ಶನ ಈ ಬಾರಿ ನೆರವೇರಿತ್ತು. ಗಾಂಧಿ ಸಮಾಧಿಯಿಂದ ಹೊರಟಾಗ ಇನ್ನೂ ಹಲವು ಗಣ್ಯರ ಸ್ಮಾರಕಗಳೂ ಅದೇ ಆಸುಪಾಸಿನಲ್ಲಿರುವುದು ಕಾಣುತ್ತದೆ. ಆದರೆ ಅಲ್ಲಿಗೆ ಯಾರೂ ಸುಳಿದಂತೆ ಕಾಣಲಿಲ್ಲ. ಎಲ್ಲವುಗಳ ಗೇಟಿನ ಬಳಿಯೂ ಒಬ್ಬೊಬ್ಬ ಸಿಆರ್ಪಿಎಫ್ ಜವಾನ್ ಕಾವಲು ಕಾಯುತ್ತಿದ್ದುದಷ್ಟೇ ಕಾಣುತ್ತಿತ್ತು. ಎಲ್ಲರಿಗೂ‌ ಅಲ್ಲಿ ಸ್ಮಾರಕ ನಿರ್ಮಿಸಿದ ಔಚಿತ್ಯವೇನೊ‌ ನನಗೆ ಅರ್ಥವಾಗಲಿಲ್ಲ. ಕುವೆಂಪು ಅವರು ಭೌತಿಕವಾಗಿ ತೀರಿಕೊಂಡಾಗ ಅವರನ್ನು ಮೈಸೂರು ವಿಶ್ವವಿದ್ಯಾನಿಲಯದ ಕಾಂಪೌಂಡಿನಲ್ಲಿ ಸಂಸ್ಕಾರ ಮಾಡಲು ಕೆಲವರು ಹವಣಿಸಿದ್ದು ಕಂಡು ತೇಜಸ್ವಿ‌ ಬೈದು  ಅದನ್ನು ತಪ್ಪಿಸಿ ಕುಪ್ಪಳ್ಳಿಯಲ್ಲಿ ಜರುಗುವಂತೆ ಮಾಡಿದರಂತೆ. ಮೈಸೂರು ವಿ.ವಿ.ಗೆ ಗುರುತು ಮನ್ನಣೆ‌ ತಂದುಕೊಟ್ಟ ಕುವೆಂಪು ಅವರಿಗೆ ಇಂಥ ಗೌರವ ಸಿಗಬೇಕಿತ್ತು, ಏಕೆ ಬೇಡವೆಂದಿರಿ ಎಂದಾಗ; ಅಲ್ರೀ ಅದು ಯೂನಿವರ್ಸಿಟಿಯೇ ಹೊರತು ಸ್ಮಶಾನ ಅಲ್ಲ. ಅದೂ ಅಲ್ಲದೆ ಇದೇ ಪರಂಪರೆ ಹಿಡ್ಕೊಂಡು ಎಲ್ಲ ಮಾಜಿ ವಿ.ಸಿ.ಗಳೂ ಕ್ರಾಫರ್ಡ್ ಹಾಲಿನ ಕಾಂಪೌಂಡಲ್ಲಿ ಗೋರಿ ಕಟ್ಟುಸ್ಕೋತಿದ್ರು ಅಂದ್ರಂತೆ. </p>



<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/10/WhatsApp-Image-2022-10-26-at-3.58.14-PM-1024x576.jpeg" alt="" class="wp-image-13027" srcset="https://peepalmedia.com/wp-content/uploads/2022/10/WhatsApp-Image-2022-10-26-at-3.58.14-PM-1024x576.jpeg 1024w, https://peepalmedia.com/wp-content/uploads/2022/10/WhatsApp-Image-2022-10-26-at-3.58.14-PM-300x169.jpeg 300w, https://peepalmedia.com/wp-content/uploads/2022/10/WhatsApp-Image-2022-10-26-at-3.58.14-PM-768x432.jpeg 768w, https://peepalmedia.com/wp-content/uploads/2022/10/WhatsApp-Image-2022-10-26-at-3.58.14-PM-1536x864.jpeg 1536w, https://peepalmedia.com/wp-content/uploads/2022/10/WhatsApp-Image-2022-10-26-at-3.58.14-PM-150x84.jpeg 150w, https://peepalmedia.com/wp-content/uploads/2022/10/WhatsApp-Image-2022-10-26-at-3.58.14-PM-696x392.jpeg 696w, https://peepalmedia.com/wp-content/uploads/2022/10/WhatsApp-Image-2022-10-26-at-3.58.14-PM-1068x601.jpeg 1068w, https://peepalmedia.com/wp-content/uploads/2022/10/WhatsApp-Image-2022-10-26-at-3.58.14-PM.jpeg 1600w" sizes="auto, (max-width: 1024px) 100vw, 1024px" /><figcaption>ಗಾಂಧಿ ಉಲಿದ ಮಾತು</figcaption></figure>



<p>ಗಾಂಧಿ ಸಮಾಧಿಯ ಬಳಿ ನನಗೆ ಕೊರತೆಯಾಗಿ‌ ಕಂಡದ್ದು ಗಾಂಧಿ ಬರೆದ ಮತ್ತು ಗಾಂಧಿ ಬಗ್ಗೆ ಬರೆಯಲ್ಪಟ್ಟ ಪುಸ್ತಕದಂಗಡಿ ಇಲ್ಲದೇ ಹೋದದ್ದು. ಗಾಂಧಿ ಬಗ್ಗೆ ಜಗತ್ತಿನ ಎಲ್ಲ ಭಾಷೆಗಳೂ‌ ಸೇರಿದಂತೆ‌ ಪ್ರತೀ ದಿನ ಒಂದಾದರೂ ಹೊಸ ಕೃತಿ ಪ್ರಕಟವಾಗುವುದಂತೆ. ಎಲ್ಲ ಭಾರತೀಯ ಭಾಷೆಗಳಲ್ಲಿ ಗಾಂಧಿಯವರ ಸಮಗ್ರ ಬರೆಹಗಳನ್ನ ಮುದ್ರಿಸಿ, ಇಲ್ಲವೇ ಮುದ್ರಣಗೊಂಡವನ್ನು ಕೊಂಡು ಆಸಕ್ತರಿಗೆ ತಲುಪಿಸುವ ಕೆಲಸ ಅವಶ್ಯವಾಗಿ ಆಗಬೇಕು. ಇಲ್ಲದಿದ್ದರೆ‌ ಭಕ್ತರ ವಾಟ್ಸಾಪ್ ಯೂನಿವರ್ಸಿಟಿಯ ಫೇಕ್ ಪಠ್ಯವೇ ನಿಜವೆಂದು ಹಲವರು ತಿಳಿಯಬಹುದೇನೊ.</p>



<p>(ಮುಂದಿನ ಸಂಚಿಕೆಯಲ್ಲಿ ಆರರಲ್ಲಿ ಐದು ವಿಕೆಟ್ ರಿಟೈರ್ಡ್ ಹರ್ಟ್&#8230;)</p>



<p><strong>ರೋಹಿತ್‌ ಅಗಸರಹಳ್ಳಿ</strong><br>ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.</p>
]]></content:encoded>
					
		
		
			</item>
	</channel>
</rss>
