<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Tumakuru University &#8211; Peepal Media</title>
	<atom:link href="https://peepalmedia.com/tag/tumakuru-university/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 10 Dec 2022 05:03:02 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Tumakuru University &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ತುಮಕೂರು ವಿವಿ ಕುಲಸಚಿವರ ರಾಜೀನಾಮೆ ; ರಾಜೀನಾಮೆಗೆ ಕಾರಣವಾಯ್ತಾ ಆ ಒಂದು ವರದಿ?</title>
		<link>https://peepalmedia.com/resignation-of-tumkur-university-chancellor-will-that-one-report-lead-to-resignation/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 09 Dec 2022 17:29:47 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Tumakuru University]]></category>
		<guid isPermaLink="false">https://peepalmedia.com/?p=18097</guid>

					<description><![CDATA[ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಕೆ.ಶಿವಚಿತ್ತಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದರೂ ವಿಶ್ವವಿದ್ಯಾಲಯದ ಅಡಿಯಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದ ಕೆಲವು ಅಸಹಜ ಬೆಳವಣಿಗೆಯಿಂದ ಮನನೊಂದು ಈ ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಕೆಲವರು ಮಾತನಾಡಿಕೊಂಡಿದ್ದಾರೆ. ಗುರುವಾರದ ದಿನ ತುಮಕೂರು ವಿವಿ ಮತ್ತು ಮಾನವ ಕಳ್ಳಸಾಗಣೆ ವಿರೋಧಿ ಸಂಘ (Anti Human trafficking Club) ಆಯೋಜಿಸಿದ್ದ &#8216;ನನ್ನ ಸಾಹಿತ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಜಿಜ್ಞಾಸೆ&#8217; ವಿಷಯದ ಅಡಿಯಲ್ಲಿ ಉಪನ್ಯಾಸ [&#8230;]]]></description>
										<content:encoded><![CDATA[
<p style="font-size:20px">ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಕೆ.ಶಿವಚಿತ್ತಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದರೂ ವಿಶ್ವವಿದ್ಯಾಲಯದ ಅಡಿಯಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದ ಕೆಲವು ಅಸಹಜ ಬೆಳವಣಿಗೆಯಿಂದ ಮನನೊಂದು ಈ ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಕೆಲವರು ಮಾತನಾಡಿಕೊಂಡಿದ್ದಾರೆ<font style="vertical-align: inherit;"><font style="vertical-align: inherit;">.</font></font></p>



<p style="font-size:20px">ಗುರುವಾರದ ದಿನ ತುಮಕೂರು ವಿವಿ ಮತ್ತು ಮಾನವ ಕಳ್ಳಸಾಗಣೆ ವಿರೋಧಿ ಸಂಘ (Anti Human trafficking Club) ಆಯೋಜಿಸಿದ್ದ &#8216;ನನ್ನ ಸಾಹಿತ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಜಿಜ್ಞಾಸೆ&#8217; ವಿಷಯದ ಅಡಿಯಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ.ಕೆ.ಶಿವಚಿತ್ತಪ್ಪರವರು ಮಾತನಾಡಿದ್ದಾರೆ ಎನ್ನಲಾದ ಕೆಲವು ವಾಕ್ಯಗಳು ಶುಕ್ರವಾರ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಹೆಚ್ಚು ಚರ್ಚಿತ ವಿಚಾರವಾಗಿದೆ.</p>



<p style="font-size:20px">ಸರ್ಕಾರದ ಅಡಿಯಲ್ಲಿ ಮುಂದಿನ ಕುಲಸಚಿವರ ಆಯ್ಕೆ ನಡೆದಿದ್ದು, ಆ ಹಿನ್ನೆಲೆಯಲ್ಲಿ ಇದು ನನ್ನ ಕೊನೆಯ ಉಪನ್ಯಾಸ ಭಾಷಣ ಎಂಬುದನ್ನು ಹೇಳಿದ ಕುಲಸಚಿವರು ನಂತರ ವಿಷಯದ ಅಡಿಯಲ್ಲಿ ಒಂದಷ್ಟು ಮಾತನಾಡಿದ್ದರು. ಉಪನ್ಯಾಸದ ಸಂದರ್ಭದಲ್ಲಿ ಪ್ಯೊ.ಕೆ.ಶಿವಚಿತ್ತಪ್ಪನವರು ಆ ಮಾತುಗಳ ಕೆಲವು ಅಂಶಗಳು ಕನ್ನಡ ದಿನಪತ್ರಿಕೆಯೊಂದರಲ್ಲಿ &#8216;ಕಾಲಂ ಸುದ್ದಿ&#8217;ಯಾಗಿತ್ತು. ಅದರಲ್ಲಿ ಪ್ರಮುಖವಾಗಿ ಲಿಂಗ ತಾರತಮ್ಯದ ಅಡಿಯಲ್ಲಿ ಆಡಿದ ಮಾತು ಸಧ್ಯ ಚರ್ಚಿತ ವಿಚಾರವಾಗಿದೆ.</p>



<p style="font-size:20px"><font style="vertical-align: inherit;"><font style="vertical-align: inherit;">ತಮ್ಮ ಉಪನ್ಯಾಸದ ಸಂದರ್ಭದಲ್ಲಿ ಪ್ರೊ.ಶಿವಚಿತ್ತಪ್ಪನವರು &#8216;ಹೆಣ್ಣಿಗೆ ಹೆಣ್ಣೇ ಶತ್ರು.. ಋಷಿ ಮೂಲ ನದಿ ಮೂಲ ಹುಡುಕಬಹುದು&#8230; ಹೆಣ್ಣಿನ ಮೂಲ ಹುಡುಕೋದು ಕಷ್ಟ..&#8217; ಎಂಬಂತಹ ಮಾತುಗಳನ್ನು ಆಡಿದ್ದರು. </font><font style="vertical-align: inherit;">ಇಂತಹ ಅಸೂಕ್ಷ್ಮ ವಿಚಾರಗಳು ಎಲ್ಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಎದುರೇ ಪ್ರಸ್ತಾಪಿಸಿದ್ದು ಎಷ್ಟರ ಮಟ್ಟಿಗೆ ಸರಿ? </font><font style="vertical-align: inherit;">ಮುಂದಿನ ಪ್ರಜೆಗಳನ್ನು ರೂಪಿಸುವ ವಿಶ್ವವಿದ್ಯಾಲಯದ ಉಪನ್ಯಾಸ ಭಾಷಣದಲ್ಲಿಯೇ ಇಂತಹ ಮಾತುಗಳು ಬಂದರೆ ಅದ್ಯಾವ ನೈತಿಕ ಮೌಲ್ಯಗಳನ್ನು ಯೂನಿವರ್ಸಿಟಿ ದರ್ಜೆಯ ಪ್ರೊಫೆಸರ್ ಗಳು ಕೊಡುವುದು ಎಂಬುದು ಪ್ರಮುಖ ವಿಚಾರ.</font></font></p>



<p style="font-size:20px">ಇದರ ಜೊತೆಗೆ ಪ್ರೊ.ಶಿವಚಿತ್ತಪ್ಪನವರು ಮುಂದಿನ ಕುಲಸಚಿವರ ಬಗ್ಗೆ ಮತ್ತು ವಿಷಯದ ಅಡಿಯಲ್ಲಿ ಹೆಣ್ಣಿನ ಬಗ್ಗೆ ಆಡಿದ್ದಾರೆ ಎನ್ನಲಾದ ಕೆಲವು ಮಾತುಗಳ ಬಗ್ಗೆ ದಿನಪತ್ರಿಕೆ ವರದಿ ಹಿನ್ನೆಲೆಯಲ್ಲಿ ಶುಕ್ರವಾರ ವಿವಿ ಆಡಳಿತ ಮಂಡಳಿ ವ್ಯಾಪ್ತಿಯಲ್ಲಿ ಹೆಚ್ಚು ಚರ್ಚೆಗೆ ಬಂದಿತ್ತು.</p>



<p style="font-size:20px"><font style="vertical-align: inherit;"><font style="vertical-align: inherit;">ಕೆಲವು ಮಹಿಳಾ ಸಹೋದ್ಯೋಗಿಗಳು ಮತ್ತು ವಿಶೇಷ ಉಪನ್ಯಾಸದ ಸಂಪನ್ಮೂಲ ವ್ಯಕ್ತಿ ಅವರ ಅಭಿಪ್ರಾಯದಂತೆ ಪ್ರೊ.ಶಿವಚಿತ್ತಪ್ಪನವರ ಮಾತುಗಳು ಪತ್ರಿಕೆಯಲ್ಲಿ ಬಂದಷ್ಟು ಅಸೂಕ್ಷ್ಮವಾಗಿ ಇರಲಿಲ್ಲ. ಪತ್ರಿಕೆ ಇದನ್ನು ತಿರುಚಿ ವರದಿ ಮಾಡಿದೆ. ವಿಷಯದ ಅಡಿಯಲ್ಲಿ ಅವರು ಆಡಿದ ಮಾತುಗಳು ತಿರುಚಲ್ಪಟ್ಟಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.</font></font></p>



<p style="font-size:20px">ಇವರೆಲ್ಲ ಶಿವಚಿತ್ತಪ್ಪನವರ ಮಾತುಗಳು ಅ-ಸೂಕ್ಷ್ಮವಾಗಿಲ್ಲ ಎಂದು ಹೇಳಿದ್ದರೂ, ಸರಕಾರವೇ ಕೆಎಎಸ್ /ಐಎಎಸ್ ಅಧಿಕಾರಿಗಳನ್ನು&nbsp;&nbsp;ವಿವಿ ಕುಲಸಚಿವರನ್ನಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡಿರುವಾಗ ಸರಕಾರದಿಂದ ನಿಯೋಜಿತರಾದ ಒಬ್ಬ ಅಧಿಕಾರಿ ಸರಕಾರದ ತೀರ್ಮಾನವನ್ನು ವ್ಯಂಗ್ಯ ಮಾಡಿದ್ದು ಅನುಚಿತವಾದುದಾಗಿತ್ತು ಎಂಬ ಮಾತುಗಳು ಕೆಲ ಪ್ರತ್ಯಕ್ಷದರ್ಶಿಗಳಿಂದ ಕೇಳಿ ಬರುತ್ತಿವೆ.</p>



<p style="font-size:20px">ಸರಕಾರ ಕೊರಟಗೆರೆ ತಹಸೀಲ್ದಾರ್ ನಾಹಿದಾ ಜಮ್ ಜಮ್ ಅವರನ್ನು ಪದೋನ್ನತಿಗೊಳಿಸಿ ತುಮಕೂರು ವಿವಿ ಆಡಳಿತ ಕ್ಕೆ ವರ್ಗಾವಣೆ ಮಾಡಿದೆ.‌ ಅವರು ಬಂದು ಕುಲಪತಿ ಮತ್ತು ಕುಲಸಚಿವ ರನ್ನು ಭೇಟಿ ಮಾಡಿ ಜನವರಿಯಲ್ಲಿ ಅಧಿಕಾರ ಸ್ವೀಕರಿಸುವುದಾಗಿಯೂ ಹೇಳಿದ್ದರು. ಇಷ್ಟಾಗಿಯೂ ಶಿವಚಿತ್ತಪ್ಪ ಅವರು&nbsp;ತಹಸೀಲ್ದಾರ್ ಒಬ್ಬರನ್ನು ಸರಕಾರ ನೇಮಕಮಾಡಿದೆ. ಇನ್ನು ಅವರು ಬಂದು ಇಲ್ಲಿ ಪಹಣಿ ಪಟ್ಟೆ ಮಾಡಿಕೊಡುತ್ತಾರೋ ಎಂದು ಅವರ ಹೆಸರನ್ನು ಉಲ್ಲೇಖಿಸದೇ&nbsp; ಹೇಳಿದ್ದರೆಂಬುದಾಗಿ ತಿಳಿದು ಬರುತ್ತದೆ.</p>



<p style="font-size:20px">ಆದರೆ ಕನ್ನಡದ ದಿನಪತ್ರಿಕೆಯಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ಬೇಸತ್ತು ಪ್ರೊ.ಶಿವಚಿತ್ತಪ್ಪನವರು ರಾಜೀನಾಮೆ ನೀಡಿದ್ದಾರೆ ಎಂಬುದು ಸಧ್ಯ ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಹೆಚ್ಚು ಚರ್ಚೆಯ ವಿಚಾರವಾಗಿದೆ.</p>
]]></content:encoded>
					
		
		
			</item>
	</channel>
</rss>
