<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>udupi &#8211; Peepal Media</title>
	<atom:link href="https://peepalmedia.com/tag/udupi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 25 Mar 2025 10:20:16 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>udupi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಉಡುಪಿ: ಪರೀಕ್ಷೆ ಭಯದಿಂದ ಬೊಬ್ಬರ್ಯ ದೈವಕ್ಕೆ ಪತ್ರ ಬರೆದ ವಿದ್ಯಾರ್ಥಿ!</title>
		<link>https://peepalmedia.com/a-student-who-wrote-a-letter-to-bobbarya-god-for-exam-fear/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 25 Mar 2025 10:20:15 +0000</pubDate>
				<category><![CDATA[ಉಡುಪಿ]]></category>
		<category><![CDATA[ರಾಜ್ಯ]]></category>
		<category><![CDATA[academic]]></category>
		<category><![CDATA[bobbarya]]></category>
		<category><![CDATA[exams]]></category>
		<category><![CDATA[Kundapura]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=55730</guid>

					<description><![CDATA[ವಿದ್ಯಾರ್ಥಿಯೊಬ್ಬ ದೈವವೊಂದಕ್ಕೆ ಚೀಟಿಯಲ್ಲಿ ಪತ್ರ ಬರೆದು &#8220;ನನ್ನನ್ನು ಜಸ್ಟ್ ಪಾಸ್ ಮಾಡು ಸಾಕು,&#8221; ಎಂದು ಹರಕೆ ಇಟ್ಟ ಘಟನೆ ಉಡುಪಿಯ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇವಾಲಯದ ಕಾಣಿಕೆ ಹುಂಡಿಯ ಹಣ ಲೆಕ್ಕಾಚಾರ ಮಾಡುವಾಗ ಈ ಪತ್ರ ಪತ್ತೆಯಾಗಿದೆ. ಪರೀಕ್ಷೆಗಳನ್ನು ಎದುರಿಸಲು ಮಾನಸಿಕವಾಗಿ ಭಯವನ್ನು ಹುಟ್ಟುಹಾಕುವ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಯ ಫಲವಾಗಿ ವಿದ್ಯಾರ್ಥಿಗಳು ದೇವರು ದಿಂಡಿರ ಮೊರೆ ಹೋಗುವಂತಾಗಿದೆ. ʼಜಸ್ಟ್ ಪಾಸ್ ಆದ್ರೆ ಸಾಕು,ʼ ಎಂಬ ಕೋರಿಕೆಯೊಂದಿಗೆ ವಿದ್ಯಾರ್ಥಿ ಬೊಬ್ಬರ್ಯ ದೈವಕ್ಕೆ ಹರಕೆ [&#8230;]]]></description>
										<content:encoded><![CDATA[
<p>ವಿದ್ಯಾರ್ಥಿಯೊಬ್ಬ ದೈವವೊಂದಕ್ಕೆ ಚೀಟಿಯಲ್ಲಿ ಪತ್ರ ಬರೆದು &#8220;ನನ್ನನ್ನು ಜಸ್ಟ್ ಪಾಸ್ ಮಾಡು ಸಾಕು,&#8221; ಎಂದು ಹರಕೆ ಇಟ್ಟ ಘಟನೆ ಉಡುಪಿಯ  ಕುಂದಾಪುರದಲ್ಲಿ ನಡೆದಿದೆ. </p>



<p>ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇವಾಲಯದ ಕಾಣಿಕೆ ಹುಂಡಿಯ ಹಣ ಲೆಕ್ಕಾಚಾರ ಮಾಡುವಾಗ ಈ ಪತ್ರ ಪತ್ತೆಯಾಗಿದೆ. </p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="295" height="300" src="https://peepalmedia.com/wp-content/uploads/2025/03/WhatsApp-Image-2025-03-25-at-10.42.22-AM.jpeg" alt="" class="wp-image-55736" style="width:255px;height:auto" srcset="https://peepalmedia.com/wp-content/uploads/2025/03/WhatsApp-Image-2025-03-25-at-10.42.22-AM.jpeg 295w, https://peepalmedia.com/wp-content/uploads/2025/03/WhatsApp-Image-2025-03-25-at-10.42.22-AM-150x153.jpeg 150w" sizes="(max-width: 295px) 100vw, 295px" /></figure></div>


<p>ಪರೀಕ್ಷೆಗಳನ್ನು ಎದುರಿಸಲು ಮಾನಸಿಕವಾಗಿ ಭಯವನ್ನು ಹುಟ್ಟುಹಾಕುವ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಯ ಫಲವಾಗಿ ವಿದ್ಯಾರ್ಥಿಗಳು ದೇವರು ದಿಂಡಿರ ಮೊರೆ ಹೋಗುವಂತಾಗಿದೆ. ʼಜಸ್ಟ್ ಪಾಸ್ ಆದ್ರೆ ಸಾಕು,ʼ ಎಂಬ ಕೋರಿಕೆಯೊಂದಿಗೆ ವಿದ್ಯಾರ್ಥಿ ಬೊಬ್ಬರ್ಯ ದೈವಕ್ಕೆ ಹರಕೆ ಇಟ್ಟಿದ್ದಾನೆ. ಪತ್ರದಲ್ಲಿ ಯಾವ ವಿಷಯದಲ್ಲಿ ಎಷ್ಟು ಅಂಕ ಬರಬೇಕು ಎಂದು ಕೂಡ ಆತ ಬರೆದಿದ್ದಾನೆ. ಇದಕ್ಕಿಂತ ಕಡಿಮೆ ಅಂಕ ಬರುವುದು ಬೇಡವೇ ಬೇಡ ಎಂದು ಮೊರೆ ಇಟ್ಟಿದ್ದಾನೆ. </p>



<p>ತಮಾಷೆಯಾಗಿ ಕಂಡರೂ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಇರುವ ಭಯವನ್ನು ಇದು ತೋರಿಸುತ್ತದೆ. ವಿದ್ಯಾರ್ಥಿಗಳಲ್ಲಿ ಕುಗ್ಗಿಹೋಗುತ್ತಿರುವ ಆತ್ಮವಿಶ್ವಾಸವನ್ನು ಇದು ತೋರಿಸುತ್ತದೆ. </p>
]]></content:encoded>
					
		
		
			</item>
		<item>
		<title>ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ ಎಂಬ ಸುಳ್ಳು!</title>
		<link>https://peepalmedia.com/is-sanskrit-mother-to-all-the-languages/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 02 Sep 2024 10:24:55 +0000</pubDate>
				<category><![CDATA[ಅಂಕಣ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[charan Aivarnad]]></category>
		<category><![CDATA[history]]></category>
		<category><![CDATA[language]]></category>
		<category><![CDATA[languages]]></category>
		<category><![CDATA[lingustics]]></category>
		<category><![CDATA[sanskrit]]></category>
		<category><![CDATA[udpi]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=44798</guid>

					<description><![CDATA[ಉಡುಪಿ ಪುತ್ತಿಗೆ ಮಠದ ಸ್ವಾಮಿಗಳಾದ ಸುಗುಣೇಂದ್ರ ತೀರ್ಥರು ಸಂಸ್ಕೃತ ಮಾತನಾಡಲು ಬಾರದವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ, ಸಂಸ್ಕೃತ ವಿಶ್ವ ಭಾಷೆ, ಎಲ್ಲಾ ಭಾಷೆಗಳ ತಾಯಿ, ತಮಿಳು, ತುಳು, ಕನ್ನಡದಂತಹ ದೇಶದ ಭಾಷೆಗಳಿಗೆ ಮಾತ್ರವಲ್ಲ, ಇಂಗ್ಲೀಷಿನ ಮೂಲವೂ ಸಂಸ್ಕೃತ ಎಂದು ಹೇಳಿದ್ದಾರೆ. ಪುತ್ತಿಗೆ ಮಠದ ಈ ಸ್ವಾಮಿ ಅಷ್ಟ ಮಠಗಳ ಸ್ವಾಮಿಗಳಲ್ಲಿ ವಿಭಿನ್ನವಾಗಿ ನಿಂತವರು. ಸಮುದ್ರ ದಾಟಿ ಬೇರೆ ದೇಶಗಳಿಗೆ ಹೋಗಿ ಬಂದ ಮೇಲೆ ಮಾತ್ರವಲ್ಲ, ತಮ್ಮ ಅನೇಕ ನಡೆಗಳಿಂದಾಗಿ ಉಳಿದ ಸ್ವಾಮಿಗಳಿಂದ ಟೀಕೆಗೆ ಒಳಗಾದವರು. ಈಗ ಸಂಸ್ಕೃತವೇ ಎಲ್ಲಾ [&#8230;]]]></description>
										<content:encoded><![CDATA[
<p>ಉಡುಪಿ ಪುತ್ತಿಗೆ ಮಠದ ಸ್ವಾಮಿಗಳಾದ ಸುಗುಣೇಂದ್ರ ತೀರ್ಥರು ಸಂಸ್ಕೃತ ಮಾತನಾಡಲು ಬಾರದವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ, ಸಂಸ್ಕೃತ ವಿಶ್ವ ಭಾಷೆ, ಎಲ್ಲಾ ಭಾಷೆಗಳ ತಾಯಿ, ತಮಿಳು, ತುಳು, ಕನ್ನಡದಂತಹ ದೇಶದ ಭಾಷೆಗಳಿಗೆ ಮಾತ್ರವಲ್ಲ, ಇಂಗ್ಲೀಷಿನ ಮೂಲವೂ ಸಂಸ್ಕೃತ ಎಂದು ಹೇಳಿದ್ದಾರೆ.</p>



<p>ಪುತ್ತಿಗೆ ಮಠದ ಈ ಸ್ವಾಮಿ ಅಷ್ಟ ಮಠಗಳ ಸ್ವಾಮಿಗಳಲ್ಲಿ ವಿಭಿನ್ನವಾಗಿ ನಿಂತವರು. ಸಮುದ್ರ ದಾಟಿ ಬೇರೆ ದೇಶಗಳಿಗೆ ಹೋಗಿ ಬಂದ ಮೇಲೆ ಮಾತ್ರವಲ್ಲ, ತಮ್ಮ ಅನೇಕ ನಡೆಗಳಿಂದಾಗಿ ಉಳಿದ ಸ್ವಾಮಿಗಳಿಂದ ಟೀಕೆಗೆ ಒಳಗಾದವರು. ಈಗ ಸಂಸ್ಕೃತವೇ ಎಲ್ಲಾ ಭಾಷೆಗಳ ತಾಯಿ ಎಂದಿದ್ದಾರೆ. ಈ ಸುಳ್ಳನ್ನು ಈ ದೇಶದಲ್ಲಿ ಮತ್ತೆ ಮತ್ತೆ ಹರಡಲಾಗುತ್ತಿದೆ. ಈಗ ಸಂಸ್ಕೃತ ಗೊತ್ತಿಲ್ಲದೇ ಇದ್ದರೆ ಸ್ವರ್ಗಕ್ಕೆ ಹೋಗುವುದೂ ಕಷ್ಟವಾಗಿದೆ.&nbsp;</p>



<p>ಸಂಸ್ಕೃತ ಒಂದು ಅಗಾದ ಜ್ಞಾನ ಪರಂಪರೆ ಇರುವ ಭಾಷೆ. ಇದರಲ್ಲಿ ಕೇವಲ ವೈದಿಕರು ಮಾತ್ರವಲ್ಲ, ಅವೈದಿಕ ಪರಂಪರೆಗಳೂ ತಮ್ಮ ಕೃತಿಗಳನ್ನು ಬರೆದಿವೆ. ಮಾಳವಿಕಾಗ್ನಿಮಿತ್ರಂ, ಅಭಿಜ್ಞಾನ ಶಾಕುಂತಲಂ, ವಿಕ್ರಮೋರ್ವಶೀಯಂ ಬರೆದ ಕಾಳಿದಾಸ, ಕಿರತಾರ್ಜುನೀಯ ಬರೆದ ಭಾರವಿ, ಉತ್ತರರಾಮಚರಿತ ಬರೆದ ಎಂಟನೇ ಶತಮಾನದ ಕವಿ &#8211; ನಾಟಕಕಾರ ಭವಭೂತಿ, ಕ್ರಿ.ಪೂ 7 ರಿಂದ 4 ನೇ ಶತಮಾನದ ವರೆಗೆ ಜೀವಿಸಿದ್ದ ಅಷ್ಟಾಧ್ಯಾಯಿ ಬರೆದ ಮಹಾವೈಯಾಕರಣಿ ಪಾಣಿನಿ…ಇವರೆಲ್ಲರೂ ಸಂಸ್ಕೃತದಲ್ಲಿ ಬರೆದರು. ಇವರೆಲ್ಲರ ಬಗ್ಗೆ ಅಪಾರ ಗೌರವವಿದೆ.&nbsp;</p>



<p>ಬೌದ್ಧರು ಜನಸಾಮಾನ್ಯನನ್ನು ತಲುಪಲು, ವರ್ಣಾಶ್ರಮವನ್ನು ಪ್ರತಿಪಾದಿಸಲು ಬಳಸಲ್ಪಟ್ಟ ಸಂಸ್ಕೃತವನ್ನು ಬಿಟ್ಟು ಪ್ರಾಕೃತವನ್ನು ಬಳಸಿದರು. ದೇವನಾಂಪಿಯ ಪಿಯದಸಿ ಅಸೋಕ ಸೇರಿದಂತೆ ಮೌರ್ಯರೂ, ಶಾತವಾಹನರು ಪ್ರಾಕೃತದಲ್ಲಿಯೇ ಶಾಸನಗಳನ್ನು ಬರೆದರು. ಆ ನಂತರ ಬಂದ ಕದಂಬರು ಬ್ರಾಹ್ಮಣರಿಗೆ ಹೇರಳವಾಗಿ ಊರುಗಳನ್ನು, ಭೂಮಿಯನ್ನು ದಾನ ಕೊಡುತ್ತಾ, ದಕ್ಷಿಣ ಭಾರತದಲ್ಲಿ ಅವರನ್ನು ನೆಲೆಯೂರಿಸುವಾಗ ತಮ್ಮ ಆರಂಭಿಕ ಶಾಸನಗಳನ್ನು ಸಂಸ್ಕೃತದಲ್ಲಿ ಹಾಕಿಸಿದರು.&nbsp;</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ಸಂಸ್ಕೃತ ಎಲ್ಲಾ ಭಾಷೆಗಳ ತಾಯಿಯೇ? | SANSKRIT | CHARAN AIVARNAD" width="696" height="392" src="https://www.youtube.com/embed/1faJR9AUS40?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe>
</div></figure>



<p>ಸಂಸ್ಕೃತದ ಬಗ್ಗೆ ವೈಯಕ್ತಿಕವಾಗಿ ಕನ್ನಡ, ತುಳು, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್‌ ಭಾಷೆಗಳನ್ನು ಮಾತನಾಡಲು ಬರುವ ನಂಗೆ ಆ ಭಾಷೆಗಳಿಗೆ ಕೊಡುವಷ್ಟೇ ಗೌರವವವನ್ನು, ಎಲ್ಲಾ ಭಾಷೆಗಳಿಗೆ ಕೊಡುವ ಗೌರವವನ್ನು ಸಂಸ್ಕೃತಕ್ಕೂ ಕೊಡುತ್ತೇನೆ. ನನಗೆ ಇಲ್ಲಿ ಯಾವ ಭಾಷೆಯೂ ಮೇಲಲ್ಲ, ಕೀಳಲ್ಲ. ಯಾವದೇ ಭಾಷೆಯನ್ನು ಮಾತನಾಡಿದರೂ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯೂ ಇಲ್ಲ. ಬದಲಾಗಿ, ಯಾವುದೇ ಭಾಷೆಯನ್ನು ಮಾತನಾಡಲು ಕಲಿತರೆ ಅದರಲ್ಲಿ ಇರುವ ಜ್ಞಾನ ಸಂಪತ್ತನ್ನು ದಕ್ಕಿಸಿಕೊಳ್ಳುವುದೇ ಒಂದು ಸ್ವರ್ಗ. ಕನ್ನಡದಲ್ಲಿ ಪಂಪನ ಆದಿಪುರಾಣ, ರನ್ನನ ಗದಾಯುದ್ಧ ಮೊದಲಾದ ಕಾವ್ಯಗಳೂ, ಮಂಟೇಸ್ವಾಮಿ ಕಾವ್ಯ ಮೊದಲಾದ ಹೇರಳವಾದ ಜಾನಪದ ಪರಂಪರೆಯಿದೆ. ತುಳುನಾಡಿನಲ್ಲಿ ತುಳು ಪಾಡ್ದನ ಹಾಡುವ ಕನಿಷ್ಟ ಒಬ್ಬ ಕವಿಯಾದರೂ ಸಿಗುತ್ತಾನೆ. ತಮಿಳಿನಲ್ಲಿ ತಮಿಳಕಂನ ಇತಿಹಾಸವನ್ನು ಬಿಚ್ಚಿಡುವ ಅಗನಾನೂರು, ಪುರನಾನೂರು, ಕುರುತ್ತೊಕೈ, ಮಣಿಮೇಖಲೈ ಮೊದಲಾದ ಸಂಗಂ ಸಾಹಿತ್ಯವಿದೆ, ತೋಳ್ಕಾಪ್ಪಿಯಂನಂತಹ ವ್ಯಾಕರಣವಿದೆ. ಎಲ್ಲದರ ಮೇಲೂ ಗೌರವ, ಆಸಕ್ತಿ ನನಗಿದೆ.</p>



<p>ಆದರೆ ಸಂಸ್ಕೃತ ಮಾತನಾಡಿದರೆ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ನಾನು ಸ್ವರ್ಗದ ಮೇಲೆ ನಂಬಿಕೆಯಿಲ್ಲದ ಸಮುದಾಯದಿಂದ ಬಂದವನು. ನಮ್ಮ ಮನೆಯಲ್ಲಿ ಯಾರಾದರು ಸತ್ತರೆ ಅವರು ಹಿಂದೆ ಸಂದಿಹೋಗಿರುವ ಹದಿನಾರು ಮಂದಿ ಹಿರಿಯರ ಜೊತೆಗೆ ಸೇರುತ್ತಾನೆ ಎಂದು ನಂಬಿದ್ದೇವೆಯೇ ಹೊರತು, ಸ್ವರ್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆ ನಮ್ಮಲ್ಲಿ ಇಲ್ಲ. ಬಹುತೇಕ ಭಾರತೀಯ ಸಮುದಾಯಗಳಲ್ಲಿ ಸ್ವರ್ಗದ ಪರಿಕಲ್ಪನೆಯೇ ಇಲ್ಲ.</p>



<p>ಇರುವುದು ಒಂದೇ ಸ್ವರ್ಗ, ಅದು ಕಾಸರಗೋಡಿನಿಂದ ಸುಮಾರು ಮೂಮತ್ತಮೂರು ಕಿಲೋಮೀಟರ್‌ ದೂರದಲ್ಲಿ ಇರುವ ಸ್ವರ್ಗವೆಂಬ ಊರು. ಅದೂ ಎಂಡೋಸಲ್ಫಾನ್‌ ಬಾಧೆಗೆ ತುತ್ತಾಗಿ ನರಕವಾಗಿದೆ! ಅಲ್ಲಿಗೆ ಹೋಗುವವರಿಗೆ ಸಂಸ್ಕೃತ ಬರಬೇಕಾಗಿಲ್ಲ, ಕನ್ನಡ, ತುಳು, ಮಲಯಾಳಂ ಮಾತನಾಡಲು ಬಂದರೆ ಸಾಕು.&nbsp;</p>



<p class="has-regular-font-size"><strong>ಸಂಸ್ಕೃತ ಎಲ್ಲಾ ಭಾಷೆಗಳ ತಾಯಿಯೇ?</strong></p>



<p>ಸಂಸ್ಕೃತ ಇಂಡೀ-ಯುರೋಪಿಯನ್‌ ಭಾಷಾವರ್ಗಕ್ಕೆ ಸೇರಿದ ಭಾಷೆ. ಭಾರತದಲ್ಲಿ ಸಂಸ್ಕೃತ ಹೇಗೋ, ಯುರೋಪಿನಲ್ಲಿ ಗ್ರೀಕ್‌, ಲ್ಯಾಟಿನ್‌ ಭಾಷೆಗಳೂ ಅದೇ ಸ್ಥಾನವನ್ನು ಹೊಂದಿವೆ. ಋಗ್ವೇದದಲ್ಲಿ ಇರುವ ಸಂಸ್ಕೃತವೇ ಬೇರೆ, ಈಗ ಬಳಕೆಯಲ್ಲಿ ಇರುವ ಸಂಸ್ಕೃತವೇ ಬೇರೆ ಎಂಬಂತೆ ಬದಲಾವಣೆಗಳಾಗಿವೆ. ಋಗ್ವೇದದ ಭಾಷೆಯನ್ನು “ಋಗ್ವೇದಿಕ್‌ ಸಂಸ್ಕೃತ” ಅಥವಾ “ಹಳೆಯ ಇಂಡಿಕ್‌ ಭಾಷೆ” ಎಂದು ಕರೆಯುತ್ತೇವೆ. ಈ&nbsp; ಋಗ್ವೇದಿಕ್‌ ಸಂಸ್ಕೃತದ ಮೊದಲ ಶಾಸನ ಪತ್ತೆಯಾಗಿದ್ದು ಭಾರತದಲ್ಲಿ ಅಲ್ಲ, ಉತ್ತರ ಸಿರಿಯಾದಲ್ಲಿ.&nbsp;</p>



<p>ಪ್ರಾಚೀನ ಕಾಲದಲ್ಲಿ ಧಾರ್ಮಿಕ ಜಿಜ್ಞಾಸೆಗಳಿಗೆ ಬಳಸಲಾಗುತ್ತಿದ್ದ ಸಂಸ್ಕೃತಕ್ಕೂ ಆಗ ಮಾತನಾಡಲು ಬಳಸುತ್ತಿದ್ದ ಬೇರೆ ಬೇರೆ ಸಂಸ್ಕೃತಗಳಿಗೂ ವ್ಯತ್ಯಾಸವಿತ್ತು. ನಮಗೆ ಸದ್ಯ ಲಭ್ಯವಿರುವ ಸಂಸ್ಕೃತದ ಅತ್ಯಂತ ಹಳೆಯ ವ್ಯಾಕರಣವೆಂದರೆ ಕ್ರಿ.ಪೂ ಐದನೇ ಶತಮಾನದಲ್ಲಿ ಪಾಣಿನಿ ಬರೆದ ಅಷ್ಟಾಧ್ಯಾಯಿ. ವೇದಗಳ ಕಾಲದ ನಂತರ ಸಂಸ್ಕೃತವನ್ನು ಧಾರ್ಮಿಕ ಗ್ರಂಥಗಳನ್ನು ಬರೆಯಲು ಮಾತ್ರವಲ್ಲದೆ, ಸ್ವತಂತ್ರ ಸಾಹಿತ್ಯ ರಚನೆಗೂ ಬಳಸಲಾಯಿತು, ನಾಟಕ, ಕಾವ್ಯಗಳು ಬಂದವು.&nbsp;</p>



<p>ಶಾತವಾಹನರ ಕಾಲದಲ್ಲಿ ಸಂಸ್ಕೃತ ಮೆಲ್ಲನೆ ದಕ್ಷಿಣ ಭಾರತವನ್ನು ಹರಡಲು ಆರಂಭಿಸಿತು. ಕರ್ನಾಟಕದಲ್ಲಿ ಲಭ್ಯವಿರುವ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನವೆಂದರೆ ಕದಂಬ ದೊರೆ ಕಾಕುಸ್ಥವರ್ಮನ ಐದನೇ ಶತಮಾನದ ತಾಳೆಗುಂದ ಸ್ಥಂಭ ಶಾಸನ. ಕದಂಬರು ಬ್ರಾಹ್ಮಣರಿಗೆ ಊರು, ಹಳ್ಳಿಗಳನ್ನು ದತ್ತಿಕೊಡುತ್ತಿದ್ದರು. ಕೇರಳ, ತುಳುನಾಡಿಗೆ ಇವರು ಬ್ರಾಹ್ಮಣರನ್ನು ಕರೆತಂದರು. ಐದನೇ ಶತಮಾನದಲ್ಲಿ ಕದಂಬ ದೊರೆ ರವಿವರ್ಮ ಬ್ರಾಹ್ಮಣರಿಗೆ ಊರನ್ನು ದತ್ತಿಕೊಟ್ಟ ಉಲ್ಲೇಖ ಕೇರಳದ ನಿಲಂಬೂರು ತಾಮ್ರಶಾಸನದಲ್ಲಿ ಬರುತ್ತದೆ. ತುಳುನಾಡಿನ ಮತ್ತು ಕೇರಳದ ಬ್ರಾಹ್ಮಣರು ತಮ್ಮನ್ನು ಅಹಿಚ್ಛತ್ರಕ್ಷೇತ್ರದಿಂದ ಕದಂಬ ದೊರೆ ಮಯೂರವರ್ಮ ಕರೆತಂದ ಎಂದು ಈಗಲೂ ಹೇಳಿಕೊಳ್ಳುತ್ತಾರೆ. ಇದೇ ಕಥೆಯನ್ನು ಕೇರಳೋತ್ಪತ್ತಿ, ಗ್ರಾಮಪದ್ಧತಿ, ಸ್ಕಂದಪುರಾಣದ ಸಹ್ಯಾದ್ರಿಖಂಡ ಕೂಡ ಹೇಳುತ್ತದೆ. ಹೀಗೆ ಸಂಸ್ಕೃತ ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟಿತು.&nbsp;</p>



<p>ಮೌರ್ಯರ ಕಾಲದಿಂದ ಶಾತವಾಹನರ ಕಾಲದ ವರೆಗೆ ಪ್ರಚಾರದಲ್ಲಿದ್ದ ಬೌದ್ಧರು ನಿಧಾನವಾಗಿ ಕಣ್ಮರೆಯಾಗುತ್ತಾ ಬಂದರು. ಕದ್ರಿ ಮೊದಲಾದ ಬೌದ್ಧ ವಿಹಾರಗಳು (ಹತ್ತನೇ ಶತಮಾನದ ಆಲೂಪ ದೊರೆ ಕುಂದವರ್ಮ ಸ್ಥಾಪಿಸಿದ ಕದರಿಯ ಅವಲೋಕಿತೇಶ್ವರ ಪ್ರತಿಮೆಯಲ್ಲಿರುವ ಗ್ರಂಥ ಲಿಪಿಯ ಶಾಸನದಲ್ಲಿ ಇದು ಕದರಿಕಾ ವಿಹಾರ) ದೇವಾಲಯಗಳಾಗಿ ಬದಲಾದವು. ಜನರನ್ನು ಬೆಸೆಯಲು ಪ್ರಯತ್ನಿಸಿದ ಪ್ರಾಕೃತ ಕೂಡ ವಿಫಲವಾಗಿ ದಕ್ಷಿಣ ಭಾರತದಿಂದ ಇಲ್ಲವಾಯಿತು.</p>



<p>ಸಾಮಾನ್ಯವಾಗಿ ಎಲ್ಲಾ ಭಾಷೆಗಳೂ ಸಂಸ್ಕೃತದಿಂದ ಹುಟ್ಟಿದವು ಎಂಬ ವಾದವನ್ನು ಮಾಡುವವರು ಕನ್ನಡ, ತುಳು ಮೊದಲಾದ ಭಾಷೆಗಳಲ್ಲಿ ಇರುವ ಪದಗಳ ಎಟಿಮೊಲಾಜಿಕಲ್‌ ಮೂಲವನ್ನು ಸಂಸ್ಕೃತಕ್ಕೆ ಜೋಡಿಸಿ ಹೇಳುತ್ತಾರೆ.</p>



<p>ಉದಾಹರಣೆಗೆ: ಕನ್ನಡ-ತುಳುವಿನ ಸಕ್ಕರೆ ಸಂಸ್ಕೃತದ ಶರ್ಕರದಿಂದ ಬಂದಿದೆ ಎಂದು. ಇದು ಸಂಸ್ಕೃತದಿಂದಲೇ ಬಂದಿದ್ದು ಎಂದು ಹೇಗೆ ಹೇಳುವುದು? ಇದು ಪ್ರಾಕೃತ ಭಾಷೆಯ ಸಕ್ಕರ ಅಥವಾ ಸುಕ್ಕರ ಎಂಬ ಪದದಿಂದಲೂ ಬಂದಿರಬಹುದು. ತುಳುವರು ಸತ್ತವರನ್ನು ಹೂಳುವ ಅಥವಾ ಸುಟ್ಟ ನಂತರ ಆ ಜಾಗದಲ್ಲಿ ಕಟ್ಟುವ ಸಮಾಧಿಗೆ “ದೂಪೆ” ಎಂದು ಕರೆಯುತ್ತಾರೆ, ಇದು ಬೌದ್ಧರು ಬುದ್ಧನ ಅವಶೇಷಗಳನ್ನು ಇಟ್ಟಿರುವ “ಸ್ತೂಪ” ಎಂಬ ಪದದಿಂದ ಬಂದಿದೆ. ತುಳುವರು ಹೆಣ ಸುಡುವ ಕಟ್ಟಿಗೆಯ ರಾಶಿಗೆ “ಕಾಟ” ಎಂದು ಕರೆಯುತ್ತಾರೆ. ಪ್ರಾಕೃತದಲ್ಲಿಯೂ ಕಾಟ ಎಂದೇ ಕರೆಯುತ್ತಾರೆ.</p>



<p>ಕನ್ನಡ, ತುಳು, ಮಲಯಾಳಂ, ತಮಿಳು, ತೆಲುಗು ಮೊದಲಾದ ದಕ್ಷಿಣ ಭಾರತದ ಭಾಷೆಗಳೂ, ಪಾಕಿಸ್ತಾನದಲ್ಲಿ ಮಾತನಾಡುವ ಬ್ರಾಹುಯಿ, ಉತ್ತರ ಭಾರತದದಲ್ಲಿ ಮಾತನಾಡುವ ಮಾಲ್ಟೋ, ಕುರುಕ್‌, ಮಧ್ಯಭಾರತದಲ್ಲಿ ಮಾತನಾಡುವ ಕೊಲಮಿ, ನೈಕಿ, ಪರ್ಜಿ, ಒಲ್ಲಾರಿ, ಗಡಬ, ಗೊಂಡ, ಮಂಡ, ಕುಯ್‌, ಪೆಂಗೋ ಮೊದಲಾದ ಭಾಷೆಗಳು ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆಗಳು.&nbsp;</p>



<p>ಹಿಂದಿ, ಸಂಸ್ಕೃತ, ಅವಧಿ, ಭೋಜ್‌ಪುರಿ, ಪ್ರಾಕೃತ, ಲ್ಯಾಟಿನ್‌, ಗ್ರೀಕ್‌, ಇಂಗ್ಲೀಷ್ ಮೊದಲಾದವು‌ ಯುರೋಪಿಯನ್‌ ಭಾಷೆಗಳು ಇಂಡೋ ಆರ್ಯನ್‌ ಭಾಷಾವರ್ಗಕ್ಕೆ ಸೇರಿದವರು.&nbsp;</p>



<p>ಆಗಲೇ ಹೇಳಿದಂತೆ, ಇಂದು ಬಳಕೆಯಲ್ಲಿ ಇಲ್ಲದ ಋಗ್ವೇದದ ಸಂಸ್ಕೃತದ ಮೊದಲ ಶಾಸನ ಸಿಕ್ಕಿದ್ದು ಉತ್ತರ ಸಿರಿಯಾದಲ್ಲಿ . ಇದು 1500 ಮತ್ತು 1350 BC ನಡುವೆ, ಅಪ್ಪರ್‌ ಯೂಫ್ರಟಿಸ್-ಟೈಗ್ರಿಸ್ ಜಲಾನಯನ ಪ್ರದೇಶವನ್ನು ಆಳಿದ ಮಿಟಾನಿ ಎಂಬ ರಾಜವಂಶದ ಶಾಸನ. ಇವರ ಸಾಮ್ರಾಜ್ಯ ಈಗಿನ ಸಿರಿಯಾ, ಇರಾಕ್ ಮತ್ತು ಟರ್ಕಿ ದೇಶಗಳಿಗೆ ಹರಡಿಕೊಂಡಿತ್ತು. ಮಿಟಾನಿಗಳು ಸಂಸ್ಕೃತಕ್ಕೆ ಸಂವಾದಿಯಾದ ಹುರಿಯನ್ ಎಂಬ ಭಾಷೆಯನ್ನು ಮಾತನಾಡುತ್ತಿದ್ದರು. ಮಿಟಾನಿ ರಾಜರು ತಮಗೆ <a href="https://global.oup.com/academic/product/the-quest-for-the-origins-of-vedic-culture-9780195169478">ಸಂಸ್ಕೃತದ ಹೆಸರನ್ನು </a>ಇಟ್ಟುಕೊಂಡಿದ್ದರು. ಉದಾಹರಣೆಗೆ ಪುರುಷ, ತುಸ್ರತ್ತಾ, ಸುವರ್ದತ, ಸುಬಂಧು, ಇಂದ್ರೊತ ಇತ್ಯಾದಿ. ಸಂಖ್ಯೆಗಳು ಕೂಡ&nbsp; ಐಕ ಅಂದ್ರೆ ಏಕ, ತೇರಾ ಅಂದ್ರೆ ಮೂರು, ಸತ್ತಾ ಎಂದರೆ ಸಪ್ತ.&nbsp; ಸಂಸ್ಕೃತಗಳನ್ನು ಮಾತನಾಡುವ ಆರ್ಯನ್‌ ಬುಡಕಟ್ಟಿನಂತೆ ಇವರಲ್ಲೂ ಕುದುರೆಗಳಿಗೆ ಅಸುವಾ ಎಂದು ಕರೆಯುತ್ತಾರೆ.&nbsp;</p>



<p>ಕ್ರಿ.ಪೂ 1380 ರಲ್ಲಿ ಪ್ರತಿಸ್ಪರ್ಧಿ ರಾಜನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವಾಗ ಮಿಟಾನಿ ರಾಜನೊಬ್ಬ <a href="https://www.azargoshnasp.net/history/Aryan/mitanniaryanpantheons.pdf">ಇಂದ್ರ, ವರುಣ, ಮಿತ್ರ </a>ಮತ್ತು ನಾಸತ್ಯರನ್ನು (ಅಶ್ವಿನಿ ದೇವತೆಗಳು) ದೈವಸಾಕ್ಷಿಗಳಾಗಿ <a href="https://www.heritageinstitute.com/zoroastrianism/ranghaya/suppiluliuma_shattiwaza_treaty.htm">ಶಾಸನದಲ್ಲಿ </a>ಹೆಸರಿಸುತ್ತಾನೆ .ಇವರೆಲ್ಲಾ ಋಗ್ವೇದದ ಪ್ರಮುಖ ದೇವರುಗಳು.</p>


<div class="wp-block-image">
<figure class="aligncenter size-full is-resized"><img decoding="async" width="728" height="414" src="https://peepalmedia.com/wp-content/uploads/2024/09/Captureಜ.jpg" alt="" class="wp-image-44799" style="width:468px;height:auto" srcset="https://peepalmedia.com/wp-content/uploads/2024/09/Captureಜ.jpg 728w, https://peepalmedia.com/wp-content/uploads/2024/09/Captureಜ-300x171.jpg 300w, https://peepalmedia.com/wp-content/uploads/2024/09/Captureಜ-150x85.jpg 150w, https://peepalmedia.com/wp-content/uploads/2024/09/Captureಜ-696x396.jpg 696w" sizes="(max-width: 728px) 100vw, 728px" /></figure></div>


<p>ಈ ಲ್ಯಾಟಿನ್‌, ಸಂಸ್ಕತ, ಗ್ರೀಕ್‌ ಮೊದಲಾದ ಭಾಷೆಗಳ ಮೂಲ ಭಾಷೆಯನ್ನು ಪ್ರೋಟೋ ಇಂಡೋ ಯುರೋಪಿಯನ್ ಭಾಷೆ ಎಂದು ಕರೆಯಲಾಗುತ್ತದೆ. ತಮಿಳು, ಕನ್ನಡ, ತುಳು, ತೆಲುಗು, ಕೊರಗ ಮೊದಲಾದ ಭಾಷೆಗಳ ಮೂಲ ಭಾಷೆಯನ್ನು ಪ್ರೋಟೋ ದ್ರಾವಿಡಿಯನ್‌ ಭಾಷೆ ಎಂದು ಕರೆಯಲಾಗುತ್ತದೆ. ಇವೆರಡೂ ಬೇರೆ ಬೇರೆ ಭಾಷಾ ಕುಟುಂಬಗಳು.&nbsp;</p>



<p>ಈ “ಪ್ರೋಟೋ ಇಂಡೋ ಯುರೋಪಿಯನ್ ಭಾಷೆಯ” ಮಗಳನ್ನು ಅಂದರೆ, ಒಂದು ಕವಲನ್ನು ಭಾಷಾಶಾಸ್ತ್ರದಲ್ಲಿ “ಪ್ರೋಟೋ-ಇಂಡೋ-ಇರಾನಿಯನ್‌” ಎಂದು ಕರೆಯಲಾಗುತ್ತದೆ. ಇದರಿಂದಲೇ ಸಂಸ್ಕೃತ, ಹಿಂದಿ ಮೊದಲಾದ ಉತ್ತರ ಭಾರತದ ಭಾಷೆಗಳೂ, ಇರಾನಿನ ಭಾಷೆಗಳೂ ಹುಟ್ಟಿದ್ದು.&nbsp;</p>



<p>ಜೆಪಿ ಮಲ್ಲೋರಿ ಮತ್ತು ಡಿಕ್ಯೂ ಆಡಮ್ಸ್‌ ಸಂಪಾದನೆ ಮಾಡಿರುವ “<a href="https://www.jstor.org/stable/417487?seq=1#page_scan_tab_contents" data-type="link" data-id="https://www.jstor.org/stable/417487?seq=1#page_scan_tab_contents">ಎನ್‌ಸೈಕ್ಲೋಪಿಡಿಯಾ ಆಫ್‌ ಇಂಡೋ-ಯುರೋಪಿಯನ್‌ ಕಲ್ಚರ್‌</a>ನಲ್ಲಿ” ಈ ಪ್ರೋಟೋ-ಇಂಡೋ-ಇರಾನಿಯನ್‌ ಭಾಷಿಕರು ಮೊದಲು ಉರಾಲ್ ಶ್ರೇಣಿಗಳ ದಕ್ಷಿಣದಲ್ಲಿ ಮತ್ತು ಕಝಕಿಸ್ತಾನ್‌ನಲ್ಲಿ ಕಾಣಿಸಿಕೊಂಡರು ಎಂದು ಹೇಳಲಾಗಿದೆ. ಕ್ರಿ.ಪೂ 2000 ರ ಮೊದಲು ಜೀವಿಸಿದ್ದ ಈ ಸ್ಟೆಪ್ಪಿ ಜನರು <a href="https://en.wikipedia.org/wiki/Andronovo_culture">ಆಂಡ್ರೋನೊವೊ</a> ಸಂಸ್ಕೃತಿಯವರು.</p>



<p>ಇವರಿಂದ ಬೇರೆಯಾದ ಒಂದು ಗುಂಪು&nbsp; ಪ್ರೋಟೋ-ಇಂಡೋ-ಇರಾನಿಯನ್‌ ಭಾಷೆಯನ್ನು ಬಿಟ್ಟು, ತಮ್ಮ ತಾಯ್ನೆಲವಾದ ಮಧ್ಯ ಏಷ್ಯಾವನ್ನು ತೊರೆದು ಸಂಸ್ಕೃತದ ಮೂಲ ಭಾಷೆಯನ್ನು ಮಾತನಾಡಲು ಶುರು ಮಾಡಿದರು. ಇವರ ಒಂದು ಗುಂಪು ಪಶ್ಚಿಮಕ್ಕೆ ನಡೆದು ಸಿರಿಯಾ ಸೇರಿದರೆ, ಇನ್ನೊಂದು ಗುಂಪು ಪೂರ್ವಕ್ಕೆ ನಡೆದು ಭಾರತದ ಪಂಜಾಬ್‌ ಪ್ರದೇಶಕ್ಕೆ ಬಂತು.</p>



<p>The Horse, the Wheel, and Language: How Bronze-Age Riders from the Eurasian Steppes Shaped the Modern World ಯಲ್ಲಿ <a href="https://press.princeton.edu/books/paperback/9780691148182/the-horse-the-wheel-and-language">ಡೇವಿಡ್ ಆಂಥೋನಿ </a>ಹೇಳುವಂತೆ ಪಶ್ಚಿಮದ ಕಡೆಗೆ ಹೋದ ಜನರ ಗುಂಪು ಬಹುಶಃ ಸಿರಿಯಾದ ಹುರಿಯನ್ ರಾಜರಿಂದ ಸಾರಥಿಗಳಾಗಿ ನೇಮಕಗೊಂಡರು. ಈ ಸಾರಥಿಗಳು ಅವರದೇ ಭಾಷೆಯಲ್ಲಿ ಮಾತನಾಡುತ್ತಿದ್ದರು. ಪೂರ್ವಕ್ಕೆ ಬಂದ ಅವರದೇ ಜನರಿಂದ ಋಗ್ವೇದ ರಚನೆಯಾಯಿತು. ಈ ಎರಡೂ ಪಂಗಡಗಳೂ ಋಗ್ವೇದಿಕ್‌ ಸಂಸ್ಕೃತ ಮಾತನಾಡುತ್ತಿದ್ದರು.</p>



<p>ಈ ಋಗ್ವೇದ ಸಂಸ್ಕೃತ ಭಾಷೆಯನ್ನು ಮಾತನಾಡುವ ಜನರು ಸಿರಿಯಾಗೆ ಹೋಗಿ ಅಲ್ಲಿನ ಮೂಲ ರಾಜರನ್ನು ಪತನ ಮಾಡಿ ಅವರ ಸಿಂಹಾಸನದಲ್ಲಿ ಮಿಟಾನಿ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಕ್ರಮೇಣ ತಮ್ಮ ಮೂಲ ಸಂಸ್ಕೃತಿಯನ್ನು ಕಳೆದುಕೊಂಡರು. ಸ್ಥಳೀಯ ಹುರಿಯನ್ ಭಾಷೆ ಮತ್ತು ಧರ್ಮವನ್ನು ಅಳವಡಿಸಿಕೊಂಡರು. ಆದರೂ ರಾಜಮನೆತನದ ಹೆಸರುಗಳು, ರಥಕ್ಕೆ ಸಂಬಂಧಿಸಿದ ಕೆಲವು ತಾಂತ್ರಿಕ ಪದಗಳು ಮತ್ತು ಸಹಜವಾಗಿಯೇ ಅವರ ಮೂಲದೇವತೆಗಳಾದ ಇಂದ್ರ, ವರುಣ, ಮಿತ್ರ ಮತ್ತು ನಾಸತ್ಯರ ಹೆಸರುಗಳನ್ನು ಹಾಗೆಯೇ ಉಳಿಸಿಕೊಂಡರು.&nbsp;</p>



<p>ಪೂರ್ವದ ಕಡೆಗೆ ನಡೆದ ಗುಂಪು ಋಗ್ವೇದವನ್ನು ರಚಿಸಿತು. ಅವರು ತಮ್ಮ ಸಂಸ್ಕೃತಿಯನ್ನು ರಕ್ಷಿಸಲು ಮತ್ತು ತಮ್ಮ ಭಾಷೆಯನ್ನು ಹರಡಲು ಸಶಕ್ತರಾದರು. ಅವರ ಭಾಷೆ ಮತ್ತು ಸಂಸ್ಕೃತಿ ಭಾರತದಲ್ಲಿ ಬೇರೂರಿತು.&nbsp;</p>



<p>ಸುಮಾರು 1500 ವರ್ಷಗಳ ಹಿಂದೆ ದಕ್ಷಿಣ ಭಾರತವನ್ನು ಸಂಸ್ಕೃತ ಪ್ರವೇಶಿಸಿತು. ಇಲ್ಲಿನ ಬ್ರಾಹ್ಮಣರು ತಮ್ಮ ಸಾಹಿತ್ಯಗಳಲ್ಲಿಯೇ ತಮ್ಮನ್ನು ವಲಸೆ ಬಂದವರು ಎಂದು ಕರೆಸಿಕೊಂಡಿದ್ದಾರೆ. ತುಳುವ ಬ್ರಾಹ್ಮಣರೂ ತಮ್ಮನ್ನು ಅಹಿಚ್ಛತ್ರ ಕ್ಷೇತ್ರದಿಂದ ಕದಂಬರ ಅರಸ&nbsp; ಮಯೂರವರ್ಮನೇ ಕರೆತಂದು ಘಟ್ಟದ ಕೆಳಗಿನ ದೇಶವನ್ನು ಅರವತ್ನಾಲ್ಕು ಭಾಗಗಳಾಗಿ ಹಂಚಿಕೊಟ್ಟಿದ್ದಾಗಿ ನಂಬುತ್ತಾರೆ.</p>



<p>ಕೇರಳ ನಂಬೂದಿರಿ ಬ್ರಾಹ್ಮಣರೂ ಕೇರಳೋತ್ಪತಿ ಮತ್ತು ಕೇರಳಮಾಹಾತ್ಮ್ಯ ವೃತ್ತಾಂತಗಳನ್ನು ಆಧರಿಸಿ ತಮ್ಮದೇ ಆದ ಕಥನವನ್ನು ಹೊಂದಿದ್ದಾರೆ. ಕೇರಳೋತ್ಪತಿಯ ಪ್ರಕಾರ ಪೌರಾಣಿಕ ವೀರನಾದ ಪರಶುರಾಮನು ಪಶ್ಚಿಮ ಕರಾವಳಿಯಲ್ಲಿ ಬ್ರಾಹ್ಮಣರಿಗಾಗಿ ಗ್ರಾಮಗಳನ್ನು ಸ್ಥಾಪಿಸಿದನು, ಅದರಲ್ಲಿ 32 ತುಳು ದೇಶದಲ್ಲಿಯೂ ಮತ್ತು ಉಳಿದವು ಕೇರಳದಲ್ಲಿಯೂ ಇದ್ದವು. ಅಯ್ಯಪುರಂ ಅಥವಾ ಅಹಿಚ್ಛತ್ರವು ಅವರ ಪೂರ್ವಜರ ಮನೆಯಾಗಿತ್ತು ಎಂದು ಅವರು ನಂಬುತ್ತಾರೆ.&nbsp;</p>



<p>ನಂಬೂದಿರಿ ಬ್ರಾಹ್ಮಣರು ಪರಶುರಾಮನ ನಂತರ ಮಯೂರವರ್ಮನ್&nbsp; ತಮಗೆ ಆಶ್ರಯ ನೀಡಿದವನು ಎಂದು ಹೇಳುತ್ತಾರೆ. ಕೇರಳದಲ್ಲಿ ಕದಂಬರು ಬ್ರಾಹ್ಮಣರನ್ನು ನೆಲೆಗೊಳಿಸಿದ್ದಕ್ಕೆ ಪೂರಕವಾದ ಮಾಹಿತಿಯನ್ನು ಐದನೇ ಶತಮಾನದ ಕದಂಬ ದೊರೆ ರವಿಮರ್ಮನ ನಿಲಂಬೂರಿನ ತಾಮ್ರಶಾಸನ ನೀಡುತ್ತದೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="715" height="494" src="https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM.jpeg" alt="" class="wp-image-44802" style="width:599px;height:auto" srcset="https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM.jpeg 715w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-300x207.jpeg 300w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-150x104.jpeg 150w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-218x150.jpeg 218w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-696x481.jpeg 696w" sizes="auto, (max-width: 715px) 100vw, 715px" /></figure></div>


<p>ಹೀಗಿರುವಾಗ ಪುತ್ತಿಗೆ ಸ್ವಾಮಿಗಳು ಮಾತ್ರವಲ್ಲ, ಹಿಂದುತ್ವ ಕಟ್ಟುವ ಸುಳ್ಳು ಚರಿತ್ರೆಗಳು ಯಾವ ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ ಎಂದು ಹೇಳುತ್ತಿವೆ? ತುಳುವಿನ ಮದಿಮೆ, ಹೆಣ್ಣು, ಗಂಡು, ಅಣ್ಣ, ಅಕ್ಕ ಮೊದಲಾದ ಪದಗಳ ಸಂಸ್ಕೃತ ಮೂಲ ಏನು? ಎಲ್ಲಾ ಭಾಷೆಗಳೂ ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆದು ಬೆಳೆಯುತ್ತವೆ. ಇಡೀ ಜಗತ್ತೇ ಬಳಸುವ ರಿಕ್ಷಾ ಎಂಬ ಪದ ಜಪಾನಿ ಭಾಷೆಯ ಜಿನ್‌ರಿಕಿಶಾ (Jinrikisha) ಎಂಬ ಪದದಿಂದ ಬಂದಿದೆ. ಜಿನ್‌ ಅಂದ್ರೆ ಮನುಷ್ಯ, ರಿಕಿ ಅಂದ್ರೆ ಶಕ್ತಿ, ಶಾ ಅಂದ್ರೆ ಗಾಡಿ.</p>



<p>ಮಲಯಾಳಂ, ತುಳು, ಕನ್ನಡ ಭಾಷೆಗಳ ಅಡಕೆ, ಅರಕ್ಕವನ್ನು ಇಂಗ್ಲೀಷ್‌ ಅರೇಕಾ ಮಾಡಿಕೊಂಡಿದೆ. ತಮಿಳು, ಮಲಯಾಳಂನ ವೆತ್ತಲೈ, ವೆತ್ತಲೆ ಎಂಬ ವೀಳ್ಯದೆಲೆಯನ್ನು ಇಂಗ್ಲೀಷರು ಮತ್ತು ಪೋರ್ಜುಗೀಸರು ಬೀಟೆಲ್‌ ಎಂದು ಬಳಸಿದರು. ತಮಿಳಿನಿ ಅರ್ಸಿ, ತುಳುವಿನ ಅರಿ ಇಂಗ್ಲೀಷಿನ ರೈಸ್‌ ಆಗಿದೆ. ನಾವು ಬಳಸುವ ತಾಂಬೂಲ ಎಂಬ ಪದವೇ ಫರ್ಷಿಯನ್‌ ಪದ. ಈ ರೀತಿ ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ. ಎಲ್ಲಾ ಭಾಷೆಗಳೂ ಅದರಿಂದಲೇ ಹುಟ್ಟಿದ್ದು ಎನ್ನುವುದು ಅಪ್ಪಟ ಸುಳ್ಳು. ಅದು ಸಂಸ್ಕೃತಕ್ಕೆ ಮಾಡಿದ ಅವಮಾನ.</p>



<p></p>



<p><strong>ಚರಣ್‌ ಐವರ್ನಾಡು,</strong> ಬೆಂಗಳೂರು</p>
]]></content:encoded>
					
		
		
			</item>
		<item>
		<title>ಆರೋಪಿ ಪ್ರವೀಣ್ ಅರುಣ್ ಚೌಗಲೆಯ ವಿಚಾರಣೆ ನಡೆಸುತ್ತಿದ್ದೇವೆ &#8211; ಎಸ್ಪಿ ಡಾ. ಅರುಣ್</title>
		<link>https://peepalmedia.com/we-are-interrogating-praveen-arun-chowgale/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 15 Nov 2023 06:26:34 +0000</pubDate>
				<category><![CDATA[ಉಡುಪಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[nejaru]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=32189</guid>

					<description><![CDATA[ಉಡುಪಿ: “ಉಡುಪಿ ಜಿಲ್ಲೆಯ ನೇಜಾರು ಎಂಬಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಬಂಧಿತ ಆರೋಪಿ ಪ್ರವೀಣ್ ಅರುಣ್ ಚೌಗಲೆ (39) ಎಂಬಾತನನ್ನು ಜಿಲ್ಲಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ” ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ಅರುಣ್ ತಿಳಿಸಿದ್ದಾರೆ. 15ರಂದು ಉಡುಪಿ ಎಸ್ಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೊಲೆ ಪ್ರಕರಣದಲ್ಲಿ ಆತನ ಪಾತ್ರ ಸಾಬೀತಾದರೆ ಕಾನೂನು ಪ್ರಕಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ [&#8230;]]]></description>
										<content:encoded><![CDATA[
<p>ಉಡುಪಿ: “ಉಡುಪಿ ಜಿಲ್ಲೆಯ ನೇಜಾರು ಎಂಬಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಬಂಧಿತ ಆರೋಪಿ ಪ್ರವೀಣ್ ಅರುಣ್ ಚೌಗಲೆ (39) ಎಂಬಾತನನ್ನು ಜಿಲ್ಲಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ” ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ಅರುಣ್ ತಿಳಿಸಿದ್ದಾರೆ.</p>



<p>15ರಂದು ಉಡುಪಿ ಎಸ್ಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೊಲೆ ಪ್ರಕರಣದಲ್ಲಿ ಆತನ ಪಾತ್ರ ಸಾಬೀತಾದರೆ ಕಾನೂನು ಪ್ರಕಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು.</p>



<p>ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕುಡುಚಿ ಪೊಲೀಸ್ ಠಾಣೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಉಡುಪಿಗೆ ಕರೆತರಲಾಗಿದೆ. ಇದೀಗ ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಹೆಚ್ಚಿನ ಮಾಹಿತಿ ಪಡೆಯಲಾಗುವುದು ಎಂದರು.</p>



<p>ಕೆಲವು ತಾಂತ್ರಿಕ ಮತ್ತು ಗುಪ್ತಚರ ಮಾಹಿತಿಯ ಪ್ರಕಾರ ಪ್ರವೀಣನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಚಾರಣೆ ಬಳಿಕ ಕೊಲೆಗೆ ಕಾರಣ ಸೇರಿದಂತೆ ಹಲವು ಮಾಹಿತಿ ಹೊರಬೀಳಲಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.</p>



<p>ಸಮಗ್ರ ತನಿಖೆಯ ನಂತರ ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಲಾಗುವುದು. ಪ್ರಸ್ತುತ, ಆತ ಸಿಐಎಸ್‌ಎಫ್ ಅಥವಾ ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿದ್ದಾನೆಯೇ ಎನ್ನುವುದನ್ನು ನಾವು ಖಚಿತಪಡಿಸಲು ಸಾಧ್ಯವಿಲ್ಲ. ಅವರು ಸಿವಿಲ್ ಪೊಲೀಸ್ ಆಗಿ ಕೆಲಸ ಮಾಡಿರಬಹುದು ಆದರೆ ಇನ್ನೂ ದೃಢಪಟ್ಟಿಲ್ಲ ಎಂದು ಅವರು ಹೇಳಿದರು.</p>



<p>ಈ ವೇಳೆ 15-20 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಅದೇ ರೀತಿ ಪ್ರವೀಣ್ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಡಾ.ಅರುಣ್ ಮಾಹಿತಿ ನೀಡಿದ್ದಾರೆ.</p>
]]></content:encoded>
					
		
		
			</item>
		<item>
		<title>ಉಡುಪಿ: ಒಂದೇ ಮನೆಯ ನಾಲ್ವರ ಕಗ್ಗೊಲೆ</title>
		<link>https://peepalmedia.com/four-murdered-in-udupi-malpe-nejaru/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 12 Nov 2023 08:32:23 +0000</pubDate>
				<category><![CDATA[ಉಡುಪಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=31936</guid>

					<description><![CDATA[ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ಮನೆಗೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಕೊಲೆಯಾದವರನ್ನು ತಾಯಿ ಹಸೀನಾ, ಅವರ ಮಕ್ಕಳಾದ ಅಫ್ನಾನ್(23), ಅಯ್ನಾಝ್ (21), ಅಸೀಮ್(14) ಎಂದು ಗುರುತಿಸಲಾಗಿದೆ. ಇದಲ್ಲದೆ ಚೂರಿ ಇರಿತದಿಂದ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗಿನ ಜಾವ ಘಟನೆ ನಡೆದಿದ್ದು. ದೀಪಾವಳಿ ದಿನದಂದೇ ಉಡುಪಿ ಜಿಲ್ಲೆ ಭೀಕರ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದೆ. ಕೊಲೆಗಾರನು ಬಿಳಿ ಬಣ್ಣದ ಶರ್ಟ್, [&#8230;]]]></description>
										<content:encoded><![CDATA[
<p>ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ಮನೆಗೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.</p>



<p>ಕೊಲೆಯಾದವರನ್ನು ತಾಯಿ ಹಸೀನಾ, ಅವರ ಮಕ್ಕಳಾದ ಅಫ್ನಾನ್(23), ಅಯ್ನಾಝ್ (21), ಅಸೀಮ್(14) ಎಂದು ಗುರುತಿಸಲಾಗಿದೆ. ಇದಲ್ಲದೆ ಚೂರಿ ಇರಿತದಿಂದ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗಿನ ಜಾವ ಘಟನೆ ನಡೆದಿದ್ದು. ದೀಪಾವಳಿ ದಿನದಂದೇ ಉಡುಪಿ ಜಿಲ್ಲೆ ಭೀಕರ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದೆ.</p>



<p>ಕೊಲೆಗಾರನು ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿ ಬಂದಿದ್ದ ಎನ್ನಲಾಗಿದ್ದು, ಬೋಳು ತಲೆಯವನಾಗಿದ್ದ ಎಂದು ತಿಳಿದು ಬಂದಿದೆ.</p>



<p>ಈಗಾಗಲೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಡಿವೈಎಸ್ಪಿ ದಿನಕರ ಅವರು ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲಿಸುತ್ತಿದ್ದಾರೆ.</p>



<p>ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ತಾಯಿ ಹಾಗೂ ಮೂವರು ಮಕ್ಕಳ ಕೊಲೆ ಕೃತ್ಯವು ಕಳ್ಳತನದ ಉದ್ದೇಶದಿಂದ ನಡೆದಂತೆ ಕಾಣುತ್ತಿಲ್ಲ. ಮನೆಯಿಂದ ಚಿನ್ನಾಭರಣ ಕಳವಾಗಿಲ್ಲ ಎಂದು ತಿಳಿಸಿದ್ದಾರೆ.</p>



<p>ಹಸೀನಾ ಮತ್ತು ಅವರ ಮಕ್ಕಳಾದ ಅಫ್ನಾನ್, ಅಯ್ನಾಝ್ ಮತ್ತು ಅಸೀಮ್ ಎಂಬವರನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿದೆ. ಹಸೀನಾರ ಅತ್ತೆ ಕೂಡಾ ದುಷ್ಕರ್ಮಿಯಿಂದ ಇರಿತಕ್ಕೊಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ತನಿಖೆಗೆ ಆದೇಶೀಸಲಾಗಿದ್ದು, ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಹಿರಿಯ ಪತ್ರಕರ್ತ ಶಶಿಧರ ಹೆಮ್ಮಣ್ಣ ನಿಧನ</title>
		<link>https://peepalmedia.com/senior-journo-shashidhar-hemmanna-passes-away/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 10 Nov 2023 01:53:40 +0000</pubDate>
				<category><![CDATA[ಉಡುಪಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=31757</guid>

					<description><![CDATA[ಉಡುಪಿ: ಪತ್ರಕರ್ತ ಶಶಿಧರ ಹೆಮ್ಮಣ್ಣ ಅವರು ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ. ನಿನ್ನೆ ಬೆಳಗ್ಗೆ (ಗುರುವಾರ) ಅವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಉಡುಪಿಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಅಲ್ಲಿ ಹೃದಾಯಾಘಾತವಾಗಿರುವುದು ದೃಢಪಟ್ಟ ನಂತರ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಶಶಿಧರ ಅವರನ್ನು ಕರೆದುಕೊಂಡು ಹೋಗಲಾಯಿತು. ಮಣಿಪಾಲದಲ್ಲಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಂಬುಲೆನ್ಸ್‌ ಮೂಲಕ ಮಣಿಪಾಲಕ್ಕೆ ಹೋಗುವಾಗಲೇ ಬಹಳಷ್ಟು ಅಸ್ವಸ್ಥಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಪತ್ರಕರ್ತನಾಗಿ ಕುಂದಪ್ರಭ ಪತ್ರಿಕೆಗೆ ದುಡಿದಿದ್ದ ಅವರು ನಂತರ ದಿನಗಳಲ್ಲಿ ಈಟಿವಿ [&#8230;]]]></description>
										<content:encoded><![CDATA[
<p>ಉಡುಪಿ: ಪತ್ರಕರ್ತ ಶಶಿಧರ ಹೆಮ್ಮಣ್ಣ ಅವರು ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ.</p>


<div class="wp-block-image">
<figure class="aligncenter size-full"><img loading="lazy" decoding="async" width="300" height="379" src="https://peepalmedia.com/wp-content/uploads/2023/11/image-35.png" alt="" class="wp-image-31760" srcset="https://peepalmedia.com/wp-content/uploads/2023/11/image-35.png 300w, https://peepalmedia.com/wp-content/uploads/2023/11/image-35-237x300.png 237w, https://peepalmedia.com/wp-content/uploads/2023/11/image-35-150x190.png 150w" sizes="auto, (max-width: 300px) 100vw, 300px" /></figure></div>


<p>ನಿನ್ನೆ ಬೆಳಗ್ಗೆ (ಗುರುವಾರ) ಅವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಉಡುಪಿಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಅಲ್ಲಿ ಹೃದಾಯಾಘಾತವಾಗಿರುವುದು ದೃಢಪಟ್ಟ ನಂತರ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಶಶಿಧರ ಅವರನ್ನು ಕರೆದುಕೊಂಡು ಹೋಗಲಾಯಿತು. ಮಣಿಪಾಲದಲ್ಲಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಂಬುಲೆನ್ಸ್‌ ಮೂಲಕ ಮಣಿಪಾಲಕ್ಕೆ ಹೋಗುವಾಗಲೇ ಬಹಳಷ್ಟು ಅಸ್ವಸ್ಥಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.</p>



<p>ಪತ್ರಕರ್ತನಾಗಿ ಕುಂದಪ್ರಭ ಪತ್ರಿಕೆಗೆ ದುಡಿದಿದ್ದ ಅವರು ನಂತರ ದಿನಗಳಲ್ಲಿ ಈಟಿವಿ ಕನ್ನಡ, ಡಿಡಿ ಕನ್ನಡ ವಾಹಿನಿಗೆ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ್ದರು. ನಾಡಿನ ಪ್ರಮುಖ ಪತ್ರಿಕೆಗಳಿಗೆ ಹಲವು ಲೇಖನಗಳನ್ನು ಕೂಡಾ ಬರೆದಿದ್ದಾರೆ. </p>



<p>ಪರಿಸರ ಪ್ರೇಮಿಯಾಗಿದ್ದ ಶಶಿಧರ ಹೆಮ್ಮಣ್ಣ ಅವರು ಕರಾವಳಿಗೆ ಕಾಂಡ್ಲಾ ಯೋಜನೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀರ ಸಮೀಕ್ಷೆಗಳಲ್ಲೂ ಅವರದು ಎತ್ತಿದ ಕೈ.</p>



<p>ಮೃತರು ಅಪ್ಪ, ಅಮ್ಮ, ಮಗ, ಮಗಳು ಸೇರಿದಂತೆ ಹಲವು ಬಂಧು-ಮಿತ್ರರನ್ನು ಅಗಲಿದ್ದಾರೆ.</p>
]]></content:encoded>
					
		
		
			</item>
		<item>
		<title>ಉಡುಪಿ: ಬೆದರಿಕೆ,ನಿಷೇಧಗಳನ್ನು ಮೀರಿ ಶಾಂತಿಯುತ ಮಹಿಷ ದಸರಾ ಮೆರವಣಿಗೆ</title>
		<link>https://peepalmedia.com/succesful-mahisha-dasara-at-udupi/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 16 Oct 2023 03:31:42 +0000</pubDate>
				<category><![CDATA[ಉಡುಪಿ]]></category>
		<category><![CDATA[dasara]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mahisha]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=29889</guid>

					<description><![CDATA[ಅಂಬೇಡ್ಕರ್ ಯುವ ಸೇನೆ ಮತ್ತು ದಲಿತ ಸಂಘರ್ಷ ಸಮಿತಿ (ಭೀಮವಾದ) ಉಡುಪಿಯಲ್ಲಿ ಆಯೋಜಿಸಿದ್ದ ಮೊದಲ ‘ಮಹಿಷ ದಸರಾ’ ಭಾನುವಾರ ಅಕ್ಟೋಬರ್ 15ರಂದು ಶಾಂತಿಯುತವಾಗಿ ಜರುಗಿತು. ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ಹಾಗೂ ಬೈರಂಪಳ್ಳಿಯಲ್ಲಿ ‘ಮಹಿಷ ದಸರಾ’ ಶೀರ್ಷಿಕೆಯನ್ನು ‘ಮಹಿಷೋತ್ಸವ’ ಎಂದು ಬದಲಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಹಿಷ ದಸರಾದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಕ್ಟೋಬರ್ 14 ಮತ್ತು ಅಕ್ಟೋಬರ್ 15ರಂದು ಉಡುಪಿ ಜಿಲ್ಲೆಯಾದ್ಯಂತ ಮೆರವಣಿಗೆ ನಡೆಸುವುದನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ನಿಷೇಧಾಜ್ಞೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಅಂಬೇಡ್ಕರ್ [&#8230;]]]></description>
										<content:encoded><![CDATA[
<p>ಅಂಬೇಡ್ಕರ್ ಯುವ ಸೇನೆ ಮತ್ತು ದಲಿತ ಸಂಘರ್ಷ ಸಮಿತಿ (ಭೀಮವಾದ) ಉಡುಪಿಯಲ್ಲಿ ಆಯೋಜಿಸಿದ್ದ ಮೊದಲ ‘ಮಹಿಷ ದಸರಾ’ ಭಾನುವಾರ ಅಕ್ಟೋಬರ್ 15ರಂದು ಶಾಂತಿಯುತವಾಗಿ ಜರುಗಿತು.</p>



<p>ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ಹಾಗೂ ಬೈರಂಪಳ್ಳಿಯಲ್ಲಿ ‘ಮಹಿಷ ದಸರಾ’ ಶೀರ್ಷಿಕೆಯನ್ನು ‘ಮಹಿಷೋತ್ಸವ’ ಎಂದು ಬದಲಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.</p>



<p>ಮಹಿಷ ದಸರಾದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಕ್ಟೋಬರ್ 14 ಮತ್ತು ಅಕ್ಟೋಬರ್ 15ರಂದು ಉಡುಪಿ ಜಿಲ್ಲೆಯಾದ್ಯಂತ ಮೆರವಣಿಗೆ ನಡೆಸುವುದನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ನಿಷೇಧಾಜ್ಞೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಯುವಸೇನೆ ಜೋಡುಕಟ್ಟೆಯಿಂದ ಅಂಬೇಡ್ಕರ್ ಭವನದವರೆಗೆ ನಡೆಯಬೇಕಿದ್ದ ಮೆರವಣಿಗೆಯನ್ನು ಕೈಬಿಟ್ಟಿತ್ತಯ.</p>



<p>ಹಿಂದಿನ ದಿನ ಆದಿ ಉಡುಪಿಯಲ್ಲಿ. ಮಹಿಷಾ ದಸರಾವನ್ನು ಬೆಂಬಲಿಸುವ ಅಥವಾ ಅದರ ವಿರುದ್ಧ ಬ್ಯಾನರ್ ಮತ್ತು ಪೋಸ್ಟರ್‌ಗಳ ಪ್ರದರ್ಶನವನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರು.</p>



<p>ಆದಾಗ್ಯೂ, ಅಂಬೇಡ್ಕರ್ ಯುವ ಸೇನೆಯ ಕೆಲವು ಕಾಂಗ್ರೆಸ್ ಮುಖಂಡರು ಮತ್ತು ಇತರ ಕಾರ್ಯಕರ್ತರು ಆದಿ ಉಡುಪಿಯ ಅಂಬೇಡ್ಕರ್ ಭವನದ ಆವರಣದಲ್ಲಿ ಸಾಂಕೇತಿಕವಾಗಿ ಅಲ್ಪ ದೂರದ ಮೆರವಣಿಗೆ ನಡೆಸಿದರು. ನಂತರ ಸ್ಥಳದಲ್ಲಿ ಅಂಬೇಡ್ಕರ್ ಯುವ ಸೇನೆಯ ಆಶ್ರಯದಲ್ಲಿ ವಿಚಾರ ಸಂಕಿರಣ ನಡೆಯಿತು.</p>



<p>‘ಯಾರು ಮಹಿಷ ಸುರ’ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿದ ಕಲಬುರಗಿಯ ಸಂಶೋಧಕ ಹಾಗೂ ಸಾಹಿತಿ ವಿಠಲ್ ವಗ್ಗನ್ ಅವರು ಬಿ.ಆರ್. ಅಂಬೇಡ್ಕರ್ ಅವರು ದಲಿತರ ಸಬಲೀಕರಣಕ್ಕಾಗಿ ಸಂವಿಧಾನವನ್ನು ನೀಡಿದರು ಮತ್ತು ಸಮಾಜದಲ್ಲಿನ ಅಸಂಗತತೆಗಳ ವಿರುದ್ಧ ಹೋರಾಡಲು ಅವರು ಯಾವುದೇ ಅಸ್ತ್ರಗಳನ್ನು ನೀಡಲಿಲ್ಲ. ವರ್ಗ, ಜಾತಿ ಮತ್ತು ಧರ್ಮದ ಆಧಾರದ ಮೇಲೆ ನಡೆಯುತ್ತಿರುವ ತಾರತಮ್ಯದ ವಿರುದ್ಧ ಹೋರಾಡುವ ಮಹತ್ತರ ಜವಾಬ್ದಾರಿ ದಲಿತರ ಮೇಲಿದೆ ಎಂದರು.</p>



<p>ಶ್ರೀ ವಗ್ಗನ್ ಅವರು ಮಹಿಷ ಚಕ್ರವರ್ತಿ ಮತ್ತು ಐತಿಹಾಸಿಕ ವ್ಯಕ್ತಿ ಮತ್ತು ಅವನು ಭಾರತದಾದ್ಯಂತ ಹರಡಿರುವ ಹಿಂದಿನ ‘ಮಹಿಷ ಮಂಡಲ’ ಸಾಮ್ರಾಜ್ಯದಲ್ಲಿ ವಾಸಿಸುತ್ತಿದ್ದ ಬಹುಸಂಖ್ಯಾತ ಜನರ ರಕ್ಷಕರಾಗಿದ್ದ ಎಂದು ಹೇಳಿದರು.</p>



<p>ದಲಿತ ಸಂಘರ್ಷ ಸಮಿತಿ (ಭೀಮವಾದ) ಕೂಡ ಇದೇ ಸಂದರ್ಭದಲ್ಲಿ ಬೈರಂಪಳ್ಳಿಯ ಅಂಬೇಡ್ಕರ್ ಭವನದಲ್ಲಿ ‘ರಾಜ ಮಹಿಷಾಸುರ ಹಬ್ಬ’ ಎಂಬ ಶೀರ್ಷಿಕೆಯಡಿ ಆಯೋಜಿಸಿತ್ತು.</p>



<p>ಈ ಹಿಂದೆ ಉಡುಪಿಯಲ್ಲಿ ಮಹಿಷ ದಸರಾ ನಡೆಸಲು ಬಿಡುವುದಿಲ್ಲ ಎಂದು ವಿಎಚ್‌ಪಿ, ಬಜರಂಗದಳ ಮುಖಂಡರು ಬೆದರಿಕೆ ಹಾಕಿದ್ದರು.</p>
]]></content:encoded>
					
		
		
			</item>
		<item>
		<title>ಮಹಿಷ ದಸರಾ: ಉಡುಪಿಯಲ್ಲಿ ಮೆರವಣಿಗೆ ನಿಷೇಧಿಸಿ ಆಜ್ಞೆ ಹೊರಡಿಸಿದ ಜಿಲ್ಲಾಧಿಕಾರಿ</title>
		<link>https://peepalmedia.com/udupi-mahisha-dasara-programs-banned/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 14 Oct 2023 03:43:18 +0000</pubDate>
				<category><![CDATA[ಉಡುಪಿ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=29804</guid>

					<description><![CDATA[ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರು ಶನಿವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಸಂಜೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ‘ಮಹಿಷ ದಸರಾ’ದ ಪರವಾಗಿ ಹಾಗೂ ವಿರುದ್ಧವಾಗಿ ಮೆರವಣಿಗೆ, ಭಾಷಣ ಹಾಗೂ ಬ್ಯಾನರ್, ಬಂಟಿಂಗ್ಸ್ ಬಳಕೆಯನ್ನು ನಿಷೇಧಿಸಿದ್ದಾರೆ. ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 35ರ ಅಡಿಯಲ್ಲಿ ಶುಕ್ರವಾರ ಅವರು ಅಂಗೀಕರಿಸಿದ ಆದೇಶದಲ್ಲಿ, ಉಡುಪಿ ಜಿಲ್ಲೆಯಾದ್ಯಂತ ದಸರಾ ಉತ್ಸವದ ಸಂದರ್ಭದಲ್ಲಿ ಸಮಸ್ಯೆಗಳು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಟ್ರಾಫಿಕ್ ಸಂದಣಿ ತಡೆಯಲು ಎರಡು ದಿನಗಳ ಕಾಲ ಮಹಿಷ ದಸರಾ ಪರ [&#8230;]]]></description>
										<content:encoded><![CDATA[
<p>ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರು ಶನಿವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಸಂಜೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ‘ಮಹಿಷ ದಸರಾ’ದ ಪರವಾಗಿ ಹಾಗೂ ವಿರುದ್ಧವಾಗಿ ಮೆರವಣಿಗೆ, ಭಾಷಣ ಹಾಗೂ ಬ್ಯಾನರ್, ಬಂಟಿಂಗ್ಸ್ ಬಳಕೆಯನ್ನು ನಿಷೇಧಿಸಿದ್ದಾರೆ.</p>



<p>ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 35ರ ಅಡಿಯಲ್ಲಿ ಶುಕ್ರವಾರ ಅವರು ಅಂಗೀಕರಿಸಿದ ಆದೇಶದಲ್ಲಿ, ಉಡುಪಿ ಜಿಲ್ಲೆಯಾದ್ಯಂತ ದಸರಾ ಉತ್ಸವದ ಸಂದರ್ಭದಲ್ಲಿ ಸಮಸ್ಯೆಗಳು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಟ್ರಾಫಿಕ್ ಸಂದಣಿ ತಡೆಯಲು ಎರಡು ದಿನಗಳ ಕಾಲ ಮಹಿಷ ದಸರಾ ಪರ ಮತ್ತು ವಿರುದ್ಧ ಚಟುವಟಿಕೆಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.</p>



<p>ಮಹಿಷ ದಸರಾ ಪರ ಮತ್ತು ವಿರುದ್ಧ ಘೋಷಣೆಗಳನ್ನು ಕೂಗುವುದು, ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಮತ್ತು ಪ್ರಚೋದನಕಾರಿ ಭಾಷಣ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.</p>



<p>ಜನರಿಗೆ ಹಾನಿ ಮಾಡುವ ಆಯುಧಗಳನ್ನು ಕೊಂಡೊಯ್ಯಲು ಯಾವುದೇ ವ್ಯಕ್ತಿಗೆ ಅನುಮತಿಯಿರುವುದಿಲ್ಲ. ಈ ದಿನಗಳಲ್ಲಿ ಪಟಾಕಿಗಳನ್ನು ಸಿಡಿಸುವುದು ಮತ್ತು ಸ್ಫೋಟಕ ವಸ್ತುಗಳನ್ನು ಸಾಗಿಸುವುದನ್ನು ಸಹ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಉಡುಪಿ &#124; ಹಿಂದೂ ಸಮಾಜೋತ್ಸವದಲ್ಲಿ ಶರಣ್ ಪಂಪ್ವೆಲ್ ಭಾಗವಹಿಸದಂತೆ ಜಿಲ್ಲಾಡಳಿತದಿಂದ ತಡೆ</title>
		<link>https://peepalmedia.com/sharan-pumpwell-stopped-from-udupi-police/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 10 Oct 2023 11:32:39 +0000</pubDate>
				<category><![CDATA[ಉಡುಪಿ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[sharan pumpwell]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=29546</guid>

					<description><![CDATA[ಉಡುಪಿ: ನಗರದಲ್ಲಿ ನಡೆಯಲಿರುವ ಶೌರ್ಯ ಜಾಗರಣಾ ಯಾತ್ರೆಯಲ್ಲಿ ಭಾಗವಹಿಸದಂತೆ ಶರಣ್ ಪಂಪ್ವೆಲ್ ಅವರಿಗೆ ಉಡುಪಿ ಜಿಲ್ಲಾ ಪೊಲೀಸ್ ನಿಷೇಧ ಹೇರಿದೆ. ಇತ್ತೀಚೆಗೆ ಕಾಲೇಜೊಂದರಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಶರಣ್ ಪಂಪ್ ವೆಲ್‌ ಉಡುಪಿಯಲ್ಲಿ ಕೋಮು ಸೌಹಾರ್ದತೆ ಕದಡುವಂತೆ ಉದ್ರೇಕಕಾರಿ ಭಾಷಣ ಮಾಡಿದ್ದರು. ಈ ಕುರಿತು ಉಡುಪಿ ಜಿಲ್ಲಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ಶರಣ್ ವಿರುದ್ದ ದಾಖಲಿಸಿದ್ದರು. ಅನಂತರ ನ್ಯಾಯಾಲಯವು ಅವರಿಗೆ ಶರತ್ತು ಬದ್ಧ ಜಾಮೀನನ್ನು ಅಂಗೀಕರಿಸಿತ್ತು. ಪ್ರಸ್ತುತ ಜಾಮೀನು ನಿಯಮ ಉಲ್ಲಂಘನೆ ಆರೋಪದಡಿ ಶರಣ್‌ ಅವರಿಗೆ ಉಡುಪಿ [&#8230;]]]></description>
										<content:encoded><![CDATA[
<p>ಉಡುಪಿ: ನಗರದಲ್ಲಿ ನಡೆಯಲಿರುವ ಶೌರ್ಯ ಜಾಗರಣಾ ಯಾತ್ರೆಯಲ್ಲಿ ಭಾಗವಹಿಸದಂತೆ ಶರಣ್ ಪಂಪ್ವೆಲ್ ಅವರಿಗೆ ಉಡುಪಿ ಜಿಲ್ಲಾ ಪೊಲೀಸ್ ನಿಷೇಧ ಹೇರಿದೆ.</p>



<p>ಇತ್ತೀಚೆಗೆ ಕಾಲೇಜೊಂದರಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಶರಣ್ ಪಂಪ್ ವೆಲ್‌ ಉಡುಪಿಯಲ್ಲಿ ಕೋಮು ಸೌಹಾರ್ದತೆ ಕದಡುವಂತೆ ಉದ್ರೇಕಕಾರಿ ಭಾಷಣ ಮಾಡಿದ್ದರು. ಈ ಕುರಿತು ಉಡುಪಿ ಜಿಲ್ಲಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ಶರಣ್ ವಿರುದ್ದ ದಾಖಲಿಸಿದ್ದರು. ಅನಂತರ ನ್ಯಾಯಾಲಯವು ಅವರಿಗೆ ಶರತ್ತು ಬದ್ಧ ಜಾಮೀನನ್ನು ಅಂಗೀಕರಿಸಿತ್ತು. ಪ್ರಸ್ತುತ ಜಾಮೀನು ನಿಯಮ ಉಲ್ಲಂಘನೆ ಆರೋಪದಡಿ ಶರಣ್‌ ಅವರಿಗೆ ಉಡುಪಿ ಪ್ರವೇಶಿಸದಂತೆ ಪೊಲೀಸರಿಂದ ತಡೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಡಾ| ಅರುಣ್ ಕೆ. ಮಾಹಿತಿ ನೀಡಿದ್ದಾರೆ.</p>



<p>ವಿಶ್ವ ಹಿಂದೂ ಪರಿಷತ್‌ ಸಂಘಟನೆಗೆ 60 ವರ್ಷ ಪೂರ್ತಿಯಾಗುತ್ತಿರುವ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಂಚರಿಸಿದ ಶೌರ್ಯ ಜಾಗರಣ ಯಾತ್ರೆ ಉಡುಪಿಯಲ್ಲಿ ಸಮಾರೋಪಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗಿತ್ತು. ಸದರಿ ಸಂಘಟನೆಯ ಸದಸ್ಯನಾಗಿರುವ ಶರಣ್‌ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ಈಗ ಪೊಲೀಸರು ಅವರನ್ನು ತಡೆದಿದ್ದಾರೆ.</p>
]]></content:encoded>
					
		
		
			</item>
		<item>
		<title>ಉಡುಪಿ: ವೀಡಿಯೋ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ</title>
		<link>https://peepalmedia.com/udupi-video-cid-to-invastigate/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 07 Aug 2023 12:56:54 +0000</pubDate>
				<category><![CDATA[ಉಡುಪಿ]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=25045</guid>

					<description><![CDATA[ಉಡುಪಿ, ಆ 07 : ಉಡುಪಿಯ ನೇತ್ರ ಜ್ಯೋತಿ ಕಾಲೇಜಿನ ವಿಡಿಯೋ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದೆ. ಉಡುಪಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ವೇಳೆ ಮೂವರು ವಿದ್ಯಾರ್ಥಿನಿಯರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಾವು ತಮಾಷೆಗಾಗಿ ಮಿಡಿಯೋ ಮಾಡಿದ್ದೇವೆ ನಂತರ ವಿಡಿಯೊ ಡಿಲೀಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಬೇರೊಬ್ಬ ವಿದ್ಯಾರ್ಥಿನಿಯ ವಿಡಿಯೋ ಮಾಡಲು ಹೋಗಿ ಮತ್ತೊಬ್ಬ ವಿದ್ಯಾರ್ಥಿನಿಯ ವಿಡಿಯೋ ಮಾಡಿದ್ದೇವೆ. ಅದನ್ನು ಕೂಡಲೇ ಡಿಲೀಟ್ ಮಾಡಿದ್ದೇವ ಎಂದು ಹೇಳಿದ್ದಾರೆ. ನಾವು [&#8230;]]]></description>
										<content:encoded><![CDATA[
<p><strong>ಉಡುಪಿ, ಆ 07 :</strong> ಉಡುಪಿಯ ನೇತ್ರ ಜ್ಯೋತಿ ಕಾಲೇಜಿನ ವಿಡಿಯೋ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದೆ.</p>



<p>ಉಡುಪಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ವೇಳೆ ಮೂವರು ವಿದ್ಯಾರ್ಥಿನಿಯರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಾವು ತಮಾಷೆಗಾಗಿ ಮಿಡಿಯೋ ಮಾಡಿದ್ದೇವೆ ನಂತರ ವಿಡಿಯೊ ಡಿಲೀಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಬೇರೊಬ್ಬ ವಿದ್ಯಾರ್ಥಿನಿಯ ವಿಡಿಯೋ ಮಾಡಲು ಹೋಗಿ ಮತ್ತೊಬ್ಬ ವಿದ್ಯಾರ್ಥಿನಿಯ ವಿಡಿಯೋ ಮಾಡಿದ್ದೇವೆ. ಅದನ್ನು ಕೂಡಲೇ ಡಿಲೀಟ್ ಮಾಡಿದ್ದೇವ ಎಂದು ಹೇಳಿದ್ದಾರೆ. ನಾವು ವಿಡಿಯೋ ಮಾಡಿದ್ದು, ನಿಜ, ಆದರೆ ಉದ್ದೇಶರ್ವಕವಾಗಿ ಮಾಡಿಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.</p>



<p>ಜುಲೈ 18ರಂದು ಘಟನೆ ನಡೆದಿದ್ದು, ಘಟನೆ ಬೆಳಕಿಗೆ ಬಂದ ತಕ್ಷಣ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಚಾರ್ಯರು ಅಮಾನತು ಮಾಡಿದ್ದರು. ಪ್ರಕರಣ ಭಾರೀ ಸದ್ದು ಮಾಡಿದ್ದರಿಂದ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪೊಲೀಸರು ಜುಲೈ 26ರಂದು ಸುಮೊಟೋ ಪ್ರಕರಣವನ್ನು ದಾಖಲಿಸಿದ್ದರು. ಅದಾದ ಬಳಿಕ ತನಿಖಾಧಿಕಾರಿಯನ್ನು ಕೂಡ ಬದಲಾಯಿಸಿ, ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.</p>



<p>ಸದ್ಯ ಪೊಲೀಸರು ಮೊಬೈಲ್ ನ್ನು ಎಸ್ ಎಸ್ ಎಲ್ ತನಿಖೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆ ಚುರುಕಾಗಿದ್ದು, ಗೌಪ್ಯ ಸ್ಥಳದಲ್ಲಿ ಪೊಲೀಸರು ವಿದ್ಯಾರ್ಥಿನಿಯರ ವಿಚಾರಣೆ ನಡೆಸಿದ್ದಾರೆ. ಪೊಲೀಸರು ಕರೆದಾಗ ತನಿಖೆಗೆ ಹುದು ಹಾಜರಾಗಬೇಕು ಎಂದು ಉಡುಪಿ JMFC ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಈ ನಡುವೆ ಎರಡು ಬಾರಿ ಭೇಟಿಯಾಗಿ ಸಂತ್ರಸ್ತ್ರ ವಿದ್ಯಾರ್ಥಿನಿಯ ಹೇಳಿಕೆಯನ್ನೂ, ಪೊಲೀಸರು ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ವಿದ್ಯಾರ್ಥಿನಿಯರ ವಿಚಾರಣೆ ನಡೆಸಿ ಪ್ರಕರಣದ ಸಂಬಂಧ ಹಲವು ವಿಚಾರಗಳನ್ನು ಕಲೆ ಹಾಕಿದ್ದಾರೆ, ಈಗ ಪ್ರಕರಣ ಸಂಬಂಧ ವಿಚಾರಣಾಧಿಕಾರಿ ಕುಂದಾಪುರ ಡಿವೈಎಸ್ ಪಿ ಬೆಳ್ಳಿಯಪ್ಪ ಅವರ ಬದಲು ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.</p>
]]></content:encoded>
					
		
		
			</item>
		<item>
		<title>ನಾನು ಬಿಜೆಪಿಯ ಪ್ರಬಲ ಲೋಕಸಭಾ ಟಿಕೆಟ್ ಆಕಾಂಕ್ಷಿ &#8211; ಪ್ರಮೋದ್ ಮಧ್ವರಾಜ್</title>
		<link>https://peepalmedia.com/i-am-bjp-tickets-strongest-aspirant-pramod/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 05 Aug 2023 06:35:35 +0000</pubDate>
				<category><![CDATA[ಉಡುಪಿ]]></category>
		<category><![CDATA[ರಾಜ್ಯ]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[pramod madhwaraj]]></category>
		<category><![CDATA[state politics]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=24951</guid>

					<description><![CDATA[ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಾಮಾಜಿಕ ನ್ಯಾಯದಡಿ ನಾನು ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅವರು ಆಗಸ್ಟ್ 4ರ ಸಂಜೆ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. &#8220;ನಾನು ಬಿಜೆಪಿಯನ್ನು ತೊರೆಯುತ್ತಿದ್ದೇನೆ ಎನ್ನುವ ಅನೇಕ ವದಂತಿಗಳು ಹರಡುತ್ತಿವೆ ಆದರೆ ನಾನು ಒಂದೋ ರಾಜಕೀಯದಿಂದ ನಿವೃತ್ತನಾಗುತ್ತೇನೆ ಅಥವಾ ನನ್ನ ಜೀವನದ ಕೊನೆಯವರೆಗೂ ಬಿಜೆಪಿ ಕಾರ್ಯಕರ್ತನಾಗಿ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಯಾವಾಗಲೂ ಬಿಜೆಪಿಯಲ್ಲೇ ಇರುತ್ತೇನೆ” ಎಂದು ಮಧ್ವರಾಜ್ [&#8230;]]]></description>
										<content:encoded><![CDATA[
<p><strong>ಉಡುಪಿ:</strong> ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಾಮಾಜಿಕ ನ್ಯಾಯದಡಿ ನಾನು ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅವರು ಆಗಸ್ಟ್ 4ರ ಸಂಜೆ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.</p>



<p>&#8220;ನಾನು ಬಿಜೆಪಿಯನ್ನು ತೊರೆಯುತ್ತಿದ್ದೇನೆ ಎನ್ನುವ ಅನೇಕ ವದಂತಿಗಳು ಹರಡುತ್ತಿವೆ ಆದರೆ ನಾನು ಒಂದೋ ರಾಜಕೀಯದಿಂದ ನಿವೃತ್ತನಾಗುತ್ತೇನೆ ಅಥವಾ ನನ್ನ ಜೀವನದ ಕೊನೆಯವರೆಗೂ ಬಿಜೆಪಿ ಕಾರ್ಯಕರ್ತನಾಗಿ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಯಾವಾಗಲೂ ಬಿಜೆಪಿಯಲ್ಲೇ ಇರುತ್ತೇನೆ” ಎಂದು ಮಧ್ವರಾಜ್ ಹೇಳಿದ್ದಾರೆ.</p>



<p>ಈ ಬಗ್ಗೆ ಮಾತನಾಡಿದ ಮಧ್ವರಾಜ್, &#8220;ನನ್ನನ್ನು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ನಂಬಿಕೆ ನನಗಿದೆ. ಆದರೆ ನಾನು ಅಭ್ಯರ್ಥಿ ಎಂಬುದು ಸ್ಪಷ್ಟವಾಗಿಲ್ಲ. ಪಕ್ಷ ಟಿಕೆಟ್ ನೀಡಿದರೆ ಮತದಾರರ ಸಹಕಾರ ಪಡೆದು ಎಲ್ಲ ಹಿರಿಯ ನಾಯಕರ ಆಶೀರ್ವಾದ ಪಡೆದು ಸ್ಪರ್ಧಿಸಲು ಸಿದ್ಧನಿದ್ದೇನೆ. ಟಿಕೆಟ್ ನೀಡದಿದ್ದರೆ ಬಿಜೆಪಿಯಿಂದ ಯಾರು ನಿಂತರೂ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.</p>



<p>&#8220;ಇದುವರೆಗೆ ಯಾವುದೇ ಪಕ್ಷವು ನನಗೆ ಯಾವುದೇ ಪ್ರಮುಖ ಜವಾಬ್ದಾರಿಯನ್ನು ನೀಡಿಲ್ಲ. ಆದಾಗ್ಯೂ, ಪಕ್ಷವು ಕಾಲಕಾಲಕ್ಕೆ ಕೆಲವು ಜವಾಬ್ದಾರಿಗಳನ್ನು ನೀಡಿದೆ. ಕಾರವಾರ, ಭಟ್ಕಳ, ಹಾನಗಲ್, ಮಧುಗಿರಿ, ಶೃಂಗೇರಿ, ಉಡುಪಿ, ಕಾಪು, ಕಾರ್ಕಳ, ಕುಂದಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಕೆಲಸ ಮಾಡಿದ್ದೇನೆ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸಲು ನಾನು ಸಿದ್ಧನಿದ್ದೇನೆ. ಆದ್ದರಿಂದ, ನಾನು ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಮತ್ತು ಪಕ್ಷವು ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ನಾನು ಸ್ವೀಕರಿಸಲಿದ್ದೇನೆ. ಶಾಸಕನಾಗಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇನೆ.” ಎಂದು ಅವರ ಹೇಳಿದ್ದಾರೆ.</p>



<p>ಈ ನಡುವೆ ಉಡುಪಿ ಲೋಕಸಭಾ ಟಿಕೆಟ್ಟಿನ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾರಣ ಪ್ರಮೋದ್‌ ಡಿಫೆನ್ಸ್‌ ಆಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿಯ ಲೋಕಸಭಾ ಟಿಕೆಟ್‌ ಸಿಗದಿದ್ದರೆ ಅವರು ಪಕ್ಷವನ್ನು ಬಿಡುವ ಸಾಧ್ಯತೆ ಹೆಚ್ಚಿದೆಯೆಂದು ಮೂಲಗಳು ಹೇಳುತ್ತಿವೆ. ಇತ್ತ ಜಯಪ್ರಕಾಶ್‌ ಹೆಗ್ಡೆ ಕೂಡಾ ತಮ್ಮ ಒಂದು ಕಾಲನ್ನು ಈಗಾಗಲೇ ಕಾಂಗ್ರೆಸ್ಸಿನಲ್ಲಿಟ್ಟಿದ್ದು ಅವರು ಉಡುಪಿ-ಚಿಕ್ಕಮಗಳೂರು ಟಿಕೆಟ್‌ ಆಕಾಂಕ್ಷಿ ಎನ್ನಲಾಗುತ್ತಿದೆ. ಹೀಗಾಗಿ ಪ್ರಮೋದ್‌ ಮದ್ವರಾಜ್‌ ಕಾಂಗ್ರೆಸ್ಸಿಗೆ ಬಂದರೂ ಟಿಕೆಟ್‌ ದುರ್ಲಭ ಎನ್ನಲಾಗುತ್ತಿದೆ.</p>



<p>ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಬಣದಿಂದ ಟಿಕೆಟ್‌ ಕಳೆದುಕೊಳ್ಳಲಿರುವವರಲ್ಲಿ ಶೋಭಾ ಕರಂದ್ಲಾಜೆ ಒಬ್ಬರು ಎನ್ನಲಾಗುತ್ತಿದ್ದು. ಇದರಿಂದಾಗಿ ಉಡುಪಿ ರಾಜಕೀಯ ರಂಗಕ್ಕೆ ರಂಗೇರಿದೆ.</p>
]]></content:encoded>
					
		
		
			</item>
	</channel>
</rss>
