<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>unacademy &#8211; Peepal Media</title>
	<atom:link href="https://peepalmedia.com/tag/unacademy/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 18 Aug 2023 03:37:30 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>unacademy &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಅನಕ್ಷರಸ್ಥರಿಗೆ ಮತ ನೀಡಬೇಡಿ ಎಂದ ಉಪನ್ಯಾಸಕನಿಗೆ ಬೆಂಬಲ &#124; ಅನಕ್ಷರಸ್ಥರು ಪ್ರತಿನಿಧಿಗಳಾದರೆ ದೇಶದ ಪ್ರಗತಿ ಅಸಾಧ್ಯ &#8211; ಅರವಿಂದ್ ಕೇಜ್ರಿವಾಲ್</title>
		<link>https://peepalmedia.com/unejucateds-cant-run-nation-kejrival/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 18 Aug 2023 03:15:43 +0000</pubDate>
				<category><![CDATA[ದೇಶ]]></category>
		<category><![CDATA[kejrival]]></category>
		<category><![CDATA[modi]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[unacademy]]></category>
		<guid isPermaLink="false">https://peepalmedia.com/?p=25758</guid>

					<description><![CDATA[ಹೊಸದಿಲ್ಲಿ: ಮುಂಬರುವ ಚುನಾವಣೆಯಲ್ಲಿ ವಿದ್ಯಾವಂತರಿಗೆ ಮತದಾನ ಮಾಡುವಂತೆ ಅನ್‌ ಅಕಾಡೆಮಿ ಎನ್ನುವ ಸಂಸ್ಥೆಯ ಉಪನ್ಯಾಸಕರೊಬ್ಬರು ತಮ್ಮ ಯೂಟ್ಯೂಬ್ ಚಾನೆಲ್‌ ಮೂಲಕ ಕರೆ ಕೊಟ್ಟಿದ್ದರು. ಉಪನ್ಯಾಸಕರು ಯಾವುದೇ ಹೆಸರನ್ನು ಉಲ್ಲೇಖಿಸಿ ಈ ಹೇಳಿಕೆಯನ್ನು ನೀಡಿರಲಿಲ್ಲವಾದರೂ, ಮೋದಿಯವರ ಅಭಿಮಾನಿಗಳು ಅವರ ವಿರುದ್ಧ ಕೆರಳಿ ಸೋಷಿಯಲ್‌ ಮೀಡಿಯಾದಲ್ಲಿ ಕ್ಯಾಂಪೇನ್‌ ನಡೆಸಿದ್ದರು. ಇದರೊಂದಿಗೆ, ತರಗತಿಯು ವೈಯಕ್ತಿಕ ಅಭಿಪ್ರಾಯಗಳು ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆಯಲ್ಲ ಎಂದು ಸಂಘಟನೆಯು ಅವರ ಮೇಲೆ ದಾಳಿ ಮಾಡಿತ್ತು. ಈಗ ಇದಕ್ಕೆ ಅರವಿಂದ್ ಕೇಜ್ರಿವಾಲ್ ಕೂಡ ಪ್ರತಿಕ್ರಿಯಿಸಿದ್ದು, ಉಪನ್ಯಾಸಕರು ಹೇಳಿದ್ದರಲ್ಲಿ [&#8230;]]]></description>
										<content:encoded><![CDATA[
<p>ಹೊಸದಿಲ್ಲಿ: ಮುಂಬರುವ ಚುನಾವಣೆಯಲ್ಲಿ ವಿದ್ಯಾವಂತರಿಗೆ ಮತದಾನ ಮಾಡುವಂತೆ ಅನ್‌ ಅಕಾಡೆಮಿ ಎನ್ನುವ ಸಂಸ್ಥೆಯ ಉಪನ್ಯಾಸಕರೊಬ್ಬರು ತಮ್ಮ ಯೂಟ್ಯೂಬ್ ಚಾನೆಲ್‌ ಮೂಲಕ ಕರೆ ಕೊಟ್ಟಿದ್ದರು.</p>



<p>ಉಪನ್ಯಾಸಕರು ಯಾವುದೇ ಹೆಸರನ್ನು ಉಲ್ಲೇಖಿಸಿ ಈ ಹೇಳಿಕೆಯನ್ನು ನೀಡಿರಲಿಲ್ಲವಾದರೂ, ಮೋದಿಯವರ ಅಭಿಮಾನಿಗಳು ಅವರ ವಿರುದ್ಧ ಕೆರಳಿ ಸೋಷಿಯಲ್‌ ಮೀಡಿಯಾದಲ್ಲಿ ಕ್ಯಾಂಪೇನ್‌ ನಡೆಸಿದ್ದರು.</p>



<p>ಇದರೊಂದಿಗೆ, ತರಗತಿಯು ವೈಯಕ್ತಿಕ ಅಭಿಪ್ರಾಯಗಳು ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆಯಲ್ಲ ಎಂದು ಸಂಘಟನೆಯು ಅವರ ಮೇಲೆ ದಾಳಿ ಮಾಡಿತ್ತು.</p>



<p>ಈಗ ಇದಕ್ಕೆ ಅರವಿಂದ್ ಕೇಜ್ರಿವಾಲ್ ಕೂಡ ಪ್ರತಿಕ್ರಿಯಿಸಿದ್ದು, ಉಪನ್ಯಾಸಕರು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.</p>



<p>ಕರಣ್ ಸಾಂಗ್ವಾನ್ ಅನ್‌ ಅಕಾಡೆಮಿಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಆ ಚಾನೆಲ್ ಮೂಲಕ ಅವರು ತಮ್ಮ ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ವಿದ್ಯಾವಂತ ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕುವಂತೆ ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಕಂಪನಿಯ ಸಹ-ಮಾಲೀಕ ರೋಮನ್ ಸೈನಿ ಅವರು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಟ್ವೀಟ್ ಮಾಡಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಘೋಷಿಸಿದರು.</p>



<p>ಇದಕ್ಕೆ ಸಂಗ್ವಾನ್ ಪ್ರತಿಕ್ರಿಯಿಸಿ, &#8220;ಕಳೆದ ಕೆಲವು ದಿನಗಳಿಂದ ನನಗೆ ಸಂಬಂಧಿಸಿದ ವಿಡಿಯೋವೊಂದು ವಿವಾದಕ್ಕೀಡಾಗಿದೆ. ನನ್ನ ಜೊತೆಗೆ ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ನನ್ನ ವಿದ್ಯಾರ್ಥಿಗಳು ಕೂಡ ಆ ವಿಡಿಯೋದಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಇದೇ ತಿಂಗಳ 19ರಂದು ವಿವರಣೆ ನೀಡಲಿದ್ದೇನೆ&#8221; ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">क्या पढ़े लिखे लोगों को वोट देने की अपील करना अपराध है? यदि कोई अनपढ़ है, व्यक्तिगत तौर पर मैं उसका सम्मान करता हूँ। लेकिन जनप्रतिनिधि अनपढ़ नहीं हो सकते। ये साइंस और टेक्नोलॉजी का ज़माना है। 21वीं सदी के आधुनिक भारत का निर्माण अनपढ़ जनप्रतिनिधि कभी नहीं कर सकते। <a href="https://t.co/YPX4OCoRoZ">https://t.co/YPX4OCoRoZ</a></p>&mdash; Arvind Kejriwal (@ArvindKejriwal) <a href="https://twitter.com/ArvindKejriwal/status/1692156877206086067?ref_src=twsrc%5Etfw">August 17, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಕಂಪನಿಯ ಸಹ-ಮಾಲೀಕರಾದ ರೋಮಾ ಸೈನಿ ಅವರು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹೀಗೆ ಬರೆದಿದ್ದಾರೆ: &#8220;ನಮ್ಮ ಕಂಪನಿಯು ತುಂಬಾ ಕಟ್ಟುನಿಟ್ಟಾದ ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿದೆ. ಇವಿದ್ಯಾರ್ಥಿಗಳಿಗೆ ವಸ್ತುನಿಷ್ಠ ಜ್ಞಾನವನ್ನು ನೀಡುವುದು ನಮ್ಮ ಕರ್ತವ್ಯ. ತರಗತಿಯು ವೈಯಕ್ತಿಕ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವ ವೇದಿಕೆಯಲ್ಲ. ಅವು ವಿದ್ಯಾರ್ಥಿಗಳ ಮೇಲೆ ತಪ್ಪು ಪರಿಣಾಮ ಬೀರುತ್ತವೆ. ಸಂಘಟನೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕರಮ್ ಸಾಂಗ್ವಾನ್ ಅವರನ್ನು ವಜಾಗೊಳಿಸಲಾಗಿದೆ.&#8221;</p>



<p>ಈ ಘಟನೆ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಪ್ರತಿಕ್ರಿಯಿಸಿ, &#8220;ವಿದ್ಯಾವಂತರಿಗೆ ಮತ ಕೇಳುವುದು ತಪ್ಪೇ? ಅನಕ್ಷರಸ್ಥರನ್ನು ನಾನು ವೈಯಕ್ತಿಕವಾಗಿ ಗೌರವಿಸುತ್ತೇನೆ. ಆದರೆ ಸಾರ್ವಜನಿಕ ಪ್ರತಿನಿಧಿಗಳು ಅನಕ್ಷರಸ್ಥರಾಗಿರಬಾರದು. ಇದು ವಿಜ್ಞಾನ ಮತ್ತು ತಂತ್ರಜ್ಞಾನವು ಬೆಳೆಯುತ್ತಿರುವ ಯುಗವಾಗಿದೆ. ಅವಿದ್ಯಾವಂತರಿಂದ ಆಧುನಿಕ ಭಾರತ ನಿರ್ಮಾಣ ಸಾಧ್ಯವಿಲ್ಲ&#8221; ಎಂದು ಅವರು ಉಪನ್ಯಾಸಕರ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.</p>
]]></content:encoded>
					
		
		
			</item>
	</channel>
</rss>
