<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>university &#8211; Peepal Media</title>
	<atom:link href="https://peepalmedia.com/tag/university/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 11 Dec 2023 06:45:55 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>university &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>2018 ರಿಂದ ವಿದೇಶದಲ್ಲಿರುವ 403 ಭಾರತೀಯ ವಿದ್ಯಾರ್ಥಿಗಳ ಸಾವು, ಕೆನಡಾದಲ್ಲೇ ಅತಿ ಹೆಚ್ಚು: ಸಚಿವ ಮುರಳೀಧರನ್</title>
		<link>https://peepalmedia.com/indian-students-died-in-abroad/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 11 Dec 2023 06:45:55 +0000</pubDate>
				<category><![CDATA[ದೇಶ]]></category>
		<category><![CDATA[abroad]]></category>
		<category><![CDATA[America]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[canada]]></category>
		<category><![CDATA[education]]></category>
		<category><![CDATA[india]]></category>
		<category><![CDATA[indian]]></category>
		<category><![CDATA[indian government]]></category>
		<category><![CDATA[indian student]]></category>
		<category><![CDATA[italy]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[student]]></category>
		<category><![CDATA[trending news]]></category>
		<category><![CDATA[UDS]]></category>
		<category><![CDATA[universities]]></category>
		<category><![CDATA[university]]></category>
		<category><![CDATA[us]]></category>
		<category><![CDATA[viral news]]></category>
		<guid isPermaLink="false">https://peepalmedia.com/?p=33542</guid>

					<description><![CDATA[ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ರಾಜ್ಯಸಭೆಗೆ ನೀಡಿರುವ ಅಂಕಿ ಅಂಶಗಳ ಪ್ರಕಾರ, 2018 ರಿಂದ ಕನಿಷ್ಠ 403 ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ನೈಸರ್ಗಿಕ ಅವಘಡಗಳು ಸೇರಿದಂತೆ ಅಪಘಾತ, ಹಿಂಸಾಚಾರದಂತಹ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಇಂತಹ ಅತಿ ಹೆಚ್ಚು ಸಾವುಗಳು ಕೆನಡಾದಲ್ಲಿ ನಡೆದಿವೆ. ಇಲ್ಲಿ 2018 ರಿಂದ 91 ಭಾರತೀಯ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ. ಕೆನಡಾದ ನಂತರ ಯುನೈಟೆಡ್ ಕಿಂಗ್‌ಡಮ್‌ನಲ್ಲಿ 48, ರಷ್ಯಾದಲ್ಲಿ 40, ಅಮೇರಿಕಾದಲ್ಲಿ 36, ಆಸ್ಟ್ರೇಲಿಯಾದಲ್ಲಿ 35, ಉಕ್ರೇನ್‌ನಲ್ಲಿ [&#8230;]]]></description>
										<content:encoded><![CDATA[
<p>ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ರಾಜ್ಯಸಭೆಗೆ ನೀಡಿರುವ ಅಂಕಿ ಅಂಶಗಳ ಪ್ರಕಾರ, 2018 ರಿಂದ ಕನಿಷ್ಠ 403 ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ನೈಸರ್ಗಿಕ ಅವಘಡಗಳು ಸೇರಿದಂತೆ ಅಪಘಾತ, ಹಿಂಸಾಚಾರದಂತಹ ಕಾರಣಗಳಿಂದ ಸಾವನ್ನಪ್ಪಿದ್ದಾರೆ.</p>



<p>ಇಂತಹ ಅತಿ ಹೆಚ್ಚು ಸಾವುಗಳು ಕೆನಡಾದಲ್ಲಿ ನಡೆದಿವೆ. ಇಲ್ಲಿ 2018 ರಿಂದ 91 ಭಾರತೀಯ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ. ಕೆನಡಾದ ನಂತರ ಯುನೈಟೆಡ್ ಕಿಂಗ್‌ಡಮ್‌ನಲ್ಲಿ 48, ರಷ್ಯಾದಲ್ಲಿ 40, ಅಮೇರಿಕಾದಲ್ಲಿ 36, ಆಸ್ಟ್ರೇಲಿಯಾದಲ್ಲಿ 35, ಉಕ್ರೇನ್‌ನಲ್ಲಿ 21, ಜರ್ಮನಿಯಲ್ಲಿ 20, ಸೈಪ್ರಸ್‌ನಲ್ಲಿ 14, ಇಟಲಿಯಲ್ಲಿ 10 ಮತ್ತು ಫಿಲಿಪೈನ್ಸ್‌ನಲ್ಲಿ 10 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.</p>



<p>ಜುಲೈ 2023, 24 ವರ್ಷದ ಗುರ್ವಿಂದರ್ ನಾಥ್ ಮತ್ತು 23 ವರ್ಷದ ಪೊಲುಕೊಂಡ ಲೆನಿನ್ ನಾಗ ಕುಮಾರ್ ಎಂಬ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಕೆನಡಾದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಸಾವನ್ನಪ್ಪಿದರು. 2022 ರಲ್ಲಿ 21 ವರ್ಷದ ಕಾರ್ತಿಕ್ ವಾಸುದೇವ್ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.</p>



<p>ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ನೀಡಬೇಕಾದ ಸುರಕ್ಷತೆಯ ಬಗ್ಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಸಚಿವ ಮುರಳೀಧರನ್ ಒತ್ತಿ ಹೇಳಿದ್ದು, ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳ ಮುಖ್ಯಸ್ಥರು ಮತ್ತು ಇತರ ಹಿರಿಯ ಅಧಿಕಾರಿಗಳು ಕಾಲೇಜು ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ನಿರಂತರ ಮಾತುಕತೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.</p>



<p>&#8220;ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ರಕ್ಷಣೆ ಭಾರತ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ&#8230; ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಘಟನೆಯನ್ನು ಖಚಿತಪಡಿಸಿಕೊಳ್ಳಲು ಆತಿಥೇಯ ದೇಶದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಕ್ಷಣವೇ ಮಾತುಕತೆ ನಡೆಸಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ,” ಎಂದು ಸಚಿವರು ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚುತ್ತಿರುವ &#8216;ಹಿಂದೂ&#8217; ಕೋರ್ಸ್‌ಗಳು</title>
		<link>https://peepalmedia.com/in-varsities-raising-in-number-of-hindu-courses/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 10 Oct 2023 06:02:10 +0000</pubDate>
				<category><![CDATA[ದೇಶ]]></category>
		<category><![CDATA[hindu course]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[university]]></category>
		<guid isPermaLink="false">https://peepalmedia.com/?p=29511</guid>

					<description><![CDATA[ಹೊಸದೆಹಲಿ: ಬಿಜೆಪಿ ಆಡಳಿತದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ಅಧ್ಯಯನ ಮತ್ತು ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಉದಾಹರಣೆಗೆ, ಕಾನ್ಪುರದ ಛತ್ರಪತಿ ಸಾಹುಜಿ ಮಹಾರಾಜ್ ವಿಶ್ವವಿದ್ಯಾಲಯವು ಇತ್ತೀಚೆಗೆ ಮೂರು ಕೋರ್ಸ್‌ಗಳನ್ನು ಪರಿಚಯಿಸಿತು. ವಿಶ್ವವಿದ್ಯಾನಿಲಯವು &#8216;ಕರ್ಮಕಾಂಡ&#8217; ಕುರಿತ ಸರ್ಟಿಫಿಕೇಟ್‌, ಮತ್ತು ಡಿಪ್ಲೊಮಾ ಕೋರ್ಸ್‌ಗಳ ಜೊತೆಗೆ ಮತ್ತು &#8216;ಜ್ಯೋತಿಷ್ಯ ವಿಜ್ಞಾನ&#8217; ಕುರಿತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶವನ್ನು ಪ್ರಾರಂಭಿಸಿದೆ. ಕರ್ಮಕಾಂಡ ಆಚರಣೆಯು ವೈದಿಕರಿಗೆ ಸಂಬಂಧಿಸಿದ್ದು ಇದು ವೇದಗಳಲ್ಲಿ ಕಂಡುಬರುತ್ತದೆ. ಸತ್ತ [&#8230;]]]></description>
										<content:encoded><![CDATA[
<p>ಹೊಸದೆಹಲಿ: ಬಿಜೆಪಿ ಆಡಳಿತದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ಅಧ್ಯಯನ ಮತ್ತು ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್‌ಗಳ ಸಂಖ್ಯೆ ಹೆಚ್ಚುತ್ತಿದೆ.</p>



<p>ಉದಾಹರಣೆಗೆ, ಕಾನ್ಪುರದ ಛತ್ರಪತಿ ಸಾಹುಜಿ ಮಹಾರಾಜ್ ವಿಶ್ವವಿದ್ಯಾಲಯವು ಇತ್ತೀಚೆಗೆ ಮೂರು ಕೋರ್ಸ್‌ಗಳನ್ನು ಪರಿಚಯಿಸಿತು. ವಿಶ್ವವಿದ್ಯಾನಿಲಯವು &#8216;ಕರ್ಮಕಾಂಡ&#8217; ಕುರಿತ ಸರ್ಟಿಫಿಕೇಟ್‌, ಮತ್ತು ಡಿಪ್ಲೊಮಾ ಕೋರ್ಸ್‌ಗಳ ಜೊತೆಗೆ ಮತ್ತು &#8216;ಜ್ಯೋತಿಷ್ಯ ವಿಜ್ಞಾನ&#8217; ಕುರಿತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶವನ್ನು ಪ್ರಾರಂಭಿಸಿದೆ. ಕರ್ಮಕಾಂಡ ಆಚರಣೆಯು ವೈದಿಕರಿಗೆ ಸಂಬಂಧಿಸಿದ್ದು ಇದು ವೇದಗಳಲ್ಲಿ ಕಂಡುಬರುತ್ತದೆ.</p>



<p>ಸತ್ತ ಪೋಷಕರು ಮತ್ತು ಇತರ ಸಂಬಂಧಿಕರಿಗೆ ಶಾಂತಿ ನೀಡಲುಲು ಈ ಆಚರಣೆಗಳನ್ನು ನಡೆಸಲಾಗುತ್ತದೆ. ಇವು ಬ್ರಾಹ್ಮಣರ ಆಶ್ರಯದಲ್ಲಿ ನಡೆಯುತ್ತವೆ. ಆಚರಣೆಗಳನ್ನು ನಿರ್ವಹಿಸುವುದಕ್ಕೆ ಪ್ರತಿಯಾಗಿ, ಅವರಿಗೆ ದಕ್ಷಿಣೆಯ ರೂಪದಲ್ಲಿ ನಗದು ಮತ್ತು ಇತರ ಕಾಣಿಕೆಗಳನ್ನು ನೀಡಲಾಗುತ್ತದೆ. ಆರಂಭದಲ್ಲಿ ಕೇವಲ 29 ವಿದ್ಯಾರ್ಥಿಗಳು ಮಾತ್ರ ಕೋರ್ಸ್‌ಗೆ ದಾಖಲಾಗಿದ್ದರು, ಆದರೆ ಜನಪ್ರಿಯತೆಯಿಂದಾಗಿ ಸಂಖ್ಯೆ ಹೆಚ್ಚಾಗಿದೆ ಎಂದು ವಿಶ್ವವಿದ್ಯಾಲಯದ ಮಾಧ್ಯಮ ಪ್ರಭಾರಿ ವಿಶಾಲ್ ಶರ್ಮಾ ಹೇಳಿದರು.</p>



<p>ಈ ವಿಷಯವನ್ನು ಅಧ್ಯಯನ ಮಾಡಲು ಉತ್ಸುಕರಾಗಿದ್ದೇವೆ ಎಂದು ವಿದ್ಯಾರ್ಥಿ ಪುನಿತ್ ತಿವಾರಿ ಹೇಳುತ್ತಾರೆ. ಅವರು ಕಾನ್ಪುರದಲ್ಲಿ ಸಿಸಿ ಟಿವಿ ಹೊರಗುತ್ತಿಗೆ ವ್ಯವಹಾರ ಮಾಡುತ್ತಿದ್ದಾರೆ. ಕೋರ್ಸ್ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಲ್ಲಿ OBCಗಳ ಜೊತೆಗೆ ವಿವಿಧ ಹಿನ್ನೆಲೆಗಳಿಂದ ನಿವೃತ್ತ ಉದ್ಯೋಗಿಗಳು ಸಹ ಸೇರಿದ್ದಾರೆ. ಅನೇಕ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ, ಇನ್ನೂ ಕೆಲವರು ವೈಯಕ್ತಿಕ ಆಸಕ್ತಿಗಾಗಿ ಈ ಕೋರ್ಸ್ ಅನ್ನು ಕಲಿಯುತ್ತಿದ್ದಾರೆ ಎಂದು ತಿವಾರಿ ಹೇಳಿದರು.</p>



<p>ಹೊಸ ಶಿಕ್ಷಣ ವ್ಯವಸ್ಥೆ-2020ರ ಭಾಗವಾಗಿ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. &#8216;ಪ್ರಾಚೀನ ಮತ್ತು ಸನಾತನ ಭಾರತೀಯ ವಿಜ್ಞಾನ&#8217;ವನ್ನು ಮುಂದಕ್ಕೆ ಕೊಂಡೊಯ್ಯುವ ಹೆಸರಿನಲ್ಲಿ ಈ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ ಎಂದು ವಾರ್ಸಿಟಿ ಅಧಿಕಾರಿಗಳು ಹೇಳುತ್ತಾರೆ. ಈ ಕೋರ್ಸ್‌ಗಳನ್ನು ಸಂಸ್ಕೃತ ಶಿಕ್ಷಣ ಪಂಡಿತರ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಸರ್ಟಿಫಿಕೇಟ್ ಕೋರ್ಸ್‌ನಲ್ಲಿ ಪ್ರಾರ್ಥನೆಗಳು ಮತ್ತು ಪಂಚಾಂಗ ಬರೆಯುವ ತಂತ್ರಗಳಂತಹ ವಿಷಯಗಳನ್ನು ಕಲಿಸಲಾಗುತ್ತದೆ.</p>



<p>ಪ್ರಾಚೀನ ವೈದಿಕ ಜ್ಯೋತಿಷ್ಯ ಮತ್ತು ಆ ಶಾಸ್ತ್ರದ ಆಧುನಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಬಹುದು. ಗೋರಖ್‌ಪುರ-ಲಖನೌ ವಿಶ್ವವಿದ್ಯಾನಿಲಯದಲ್ಲಿ ಇದೇ ರೀತಿಯ ಧಾರ್ಮಿಕ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಇನ್ನು ಕೆಲವು ವಿಶ್ವವಿದ್ಯಾಲಯಗಳು ಇಂತಹ ಕೋರ್ಸ್‌ಗಳನ್ನು ಆರಂಭಿಸಲು ಮುಂದಾಗಿವೆ. ದೆಹಲಿ ವಿಶ್ವವಿದ್ಯಾನಿಲಯವು &#8216;ಹಿಂದೂ ಅಧ್ಯಯನಗಳು&#8217; ಎಂಬ ಹೊಸ ಕೋರ್ಸ್ ಅನ್ನು ಪ್ರಾರಂಭಿಸಿದೆ. ಇದನ್ನು ಹೊಸದಾಗಿ ಸ್ಥಾಪಿಸಲಾದ ಹಿಂದೂ ಅಧ್ಯಯನ ಕೇಂದ್ರದ ಅಡಿಯಲ್ಲಿ ಪ್ರಾರಂಭಿಸಲಾಯಿತು. ಮುಂಬರುವ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಹಂತದ ಕೋರ್ಸ್‌ಗಳು ಸಹ ಪ್ರಾರಂಭವಾಗಲಿವೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕೂಡ ಇದೇ ರೀತಿಯ ಕೋರ್ಸ್‌ಗಳನ್ನು ನೀಡುತ್ತದೆ.</p>
]]></content:encoded>
					
		
		
			</item>
		<item>
		<title>ಹೆಸರಿಗೆ ಮಾತ್ರ ವಿಶ್ವವಿದ್ಯಾಲಯಗಳು: ಉತ್ತರ ಕರ್ನಾಟಕಕ್ಕೆ ಘೋರ ಅನ್ಯಾಯ</title>
		<link>https://peepalmedia.com/universities-only-for-the-name-sake-injustice-to-north-karnataka/</link>
		
		<dc:creator><![CDATA[Peepal Media]]></dc:creator>
		<pubDate>Mon, 07 Nov 2022 17:04:19 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bjp]]></category>
		<category><![CDATA[bommai]]></category>
		<category><![CDATA[GO]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[karnataka govt]]></category>
		<category><![CDATA[north karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state politics]]></category>
		<category><![CDATA[university]]></category>
		<guid isPermaLink="false">https://peepalmedia.com/?p=14681</guid>

					<description><![CDATA[ಕಳೆದ ಬಜೆಟ್ಟಿನಲ್ಲಿ ಏಳು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದ ಸರಕಾರವು ಈಗ ವಿಚಿತ್ರ ಷರತ್ತುಗಳನ್ನು ಹಾಕುವ ಮೂಲಕ ಈ ಜಿಲ್ಲೆಗಳ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಈ ವಿವಿಗಳಿಗೆ ಯಾವುದೇ ಹೊಸ ಜಮೀನು ಮಂಜೂರು ಮಾಡದೆ, ಯಾವುದೇ ಹೊಸ ಸಿಬ್ಬಂದಿ ನೇಮಿಸದಂತೆ ಷರತ್ತಿನಲ್ಲಿ ತಿಳಿಸುವ ಮೂಲಕ ಉತ್ತರ ಕರ್ನಾಟಕ ಮತ್ತು ಕರ್ನಾಟಕ ಇತರ ಜಿಲ್ಲೆಗಳಿಗೆ ಘೋರ ಅನ್ಯಾಯವನ್ನು ಎಸಗಿದೆ. ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಸಹಿ ಮಾಡಿರುವ ಕರ್ನಾಟಕ ಸರ್ಕಾರದ ನಡಾವಳಿಗಳ ಅಧಿಕೃತ [&#8230;]]]></description>
										<content:encoded><![CDATA[
<p>ಕಳೆದ ಬಜೆಟ್ಟಿನಲ್ಲಿ ಏಳು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದ ಸರಕಾರವು ಈಗ ವಿಚಿತ್ರ ಷರತ್ತುಗಳನ್ನು ಹಾಕುವ ಮೂಲಕ ಈ ಜಿಲ್ಲೆಗಳ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಈ ವಿವಿಗಳಿಗೆ ಯಾವುದೇ ಹೊಸ ಜಮೀನು ಮಂಜೂರು ಮಾಡದೆ, ಯಾವುದೇ ಹೊಸ ಸಿಬ್ಬಂದಿ ನೇಮಿಸದಂತೆ ಷರತ್ತಿನಲ್ಲಿ ತಿಳಿಸುವ ಮೂಲಕ ಉತ್ತರ ಕರ್ನಾಟಕ ಮತ್ತು ಕರ್ನಾಟಕ ಇತರ ಜಿಲ್ಲೆಗಳಿಗೆ ಘೋರ ಅನ್ಯಾಯವನ್ನು ಎಸಗಿದೆ. <br>ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಸಹಿ ಮಾಡಿರುವ ಕರ್ನಾಟಕ ಸರ್ಕಾರದ ನಡಾವಳಿಗಳ ಅಧಿಕೃತ ಆದೇಶ ಪೀಪಲ್ ಮೀಡಿಯಾಗೆ ಲಭ್ಯವಾಗಿದ್ದು, ಹಿಂದುಳಿದ ಜಿಲ್ಲೆಗಳಿಗೆ ವಿಶೇಷವಾಗಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರ ಕನಸಿಗೆ ತಣ್ಣೀರೆರಚಿರುವುದು ಸ್ಪಷ್ಟವಾಗುತ್ತದೆ.</p>



<p>ಪ್ರಸ್ತುತ ಹೊಸ ವಿವಿಗಳನ್ನು ಘೋಷಿಸಲಾಗಿರುವ ಏಳು ಜಿಲ್ಲೆಗಳಲ್ಲಿ, ನಾಲ್ಕು ಉತ್ತರ ಕರ್ನಾಟಕದವು. ಬಹುತೇಕ ಎಲ್ಲವೂ ಹಿಂದುಳಿದ ಜಿಲ್ಲೆಗಳು, (ಹಾಸನ ಹೊರತುಪಡಿಸಿ) ಕಳೆದ ಬಜೆಟ್ಟಿನಲ್ಲಿ ಈ ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಈಗ ಷರತ್ತುಗಳನ್ನು ನೋಡಿದರೆ, ಇರುವ ಸ್ನಾತಕೋತ್ತರ ಕೇಂದ್ರಗಳನ್ನೇ ವಿವಿಗಳೆಂದು ಘೋಷಿಸಿ ಕೈ ತೊಳೆದುಕೊಂಡಿದೆ ಸರ್ಕಾರ. ಹೊಸ ಕಟ್ಟಡವಾಗಲಿ, ಸಿಬ್ಬಂದಿಯಾಗಲಿ, ಭೂಮಿಯಾಗಲಿ ಮಂಜೂರಾಗದ ಇರುವ ವ್ಯವಸ್ಥೆಗೇ ಹೊಸ ಹೆಸರಿಟ್ಟು ವಿವಿ ಘೋಷಣೆಯೆಂದರೆ ಅದನ್ನು ಹೇಗೆ ಒಪ್ಪುವುದೆನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.</p>



<p>ಸಾಂಪ್ರದಾಯಿಕ ವಿವಿಗಳಿಗಿಂತ ಭಿನ್ನವಾಗಿ &#8220;ತಂತ್ರಜ್ಞಾನದ ಗರಿಷ್ಠ ಬಳಕೆ&#8221;ಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಬಳಸದೇ ಈ ವಿವಿಗಳನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆಯಂತೆ! ಇದರ ಅರ್ಥವೇನು? ಈಗ ಕಾರ್ಯನಿರ್ವಹಿಸುತ್ತಿರುವ ವಿವಿಗಳು ತಂತ್ರಜ್ಞಾನ ಬಳಸಿಕೊಳ್ಳದೆ, ಮಾನವ ಸಂಪನ್ಮೂಲ ಪೋಲು ಮಾಡುತ್ತಿವೆಯೇ? ಹೊಸ ವಿವಿಗಳು ಗರಿಷ್ಠ ತಂತ್ರಜ್ಞಾನ ಬಳಸಿಕೊಳ್ಳಬಹುದಾದರೆ ಹಳೆಯ ವಿವಿಗಳು ಯಾಕೆ ಬಳಸಿಕೊಳ್ಳಲಾಗದು? </p>



<p>ಈ ಜಿಲ್ಲೆಗಳ ಜನರು ತಮ್ಮ ಜಿಲ್ಲೆಗೂ ವಿವಿ ಬಂತು ಎಂದು ಹರ್ಷಪಟ್ಟಿದ್ದರು. ಈಗ ಇರುವ ಸ್ನಾತಕೋತ್ತರ ಕೇಂದ್ರಕ್ಕೇ ಬೋರ್ಡು ಬದಲಾಯಿಸುತ್ತಿದೆ ಸರ್ಕಾರ‌. ಉಳಿದಿರುವುದು ಜಮೀನು, ಕಟ್ಟಡ ವರ್ಗಾವಣೆಯ ತಾಂತ್ರಿಕ ಕೆಲಸಗಳು ಮಾತ್ರ. ಇದನ್ನೇ ಹೊಸ ವಿಶ್ವ ವಿದ್ಯಾಲಯ ಸ್ಥಾಪನೆಯೆನ್ನುವುದಾದರೆ ಇದನ್ನು ಕೇವಲ ಗಿಮಿಕ್‌ ಎನ್ನದೆ ಬೇರೆ ಯಾವ ಹೆಸರಿನಿಂದ ಕರೆಯಲು ಸಾಧ್ಯ?</p>



<p>ವಿವಿಗಳ ಸ್ಥಾಪನೆಗೆ ಸಂಬಂಧಸೊದಂತೆ ಸರಕಾರವು ಒಟ್ಟು 12 ಷರತ್ತುಗಳನ್ನು ವಿಧಿಸಿದ್ದು, ಮೊದಲ ಮೂರು ಷರತ್ತುಗಳು ಈ‌ ಕೆಳಕಂಡಂತಿವೆ.</p>



<ol class="wp-block-list">
<li>ನೂತನ 07 ವಿಶ್ವವಿದ್ಯಾಲಯಗಳು ಪ್ರಸ್ತುತ ಇರುವ ಸ್ನಾತಕೋತ್ತರ ಕೇಂದ್ರಗಳಲ್ಲಿಯೇ ಕಾರ್ಯನಿರ್ವಹಿಸತಕ್ಕದ್ದು,</li>



<li>ನೂತನ 07 ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಯಾವುದೇ ಜಮೀನನ್ನು ಖರೀದಿಸುವಂತಿಲ್ಲ ಹಾಗೂ ಹೊಸ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ.</li>



<li>ಈಗಾಗಲೇ ಮಾತ್ರ ವಿಶ್ವವಿದ್ಯಾಲಯಗಳಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಅವಶ್ಯ ಹುದ್ದೆಗಳನ್ನು ಈ 07 ನೂತನ ವಿಶ್ವವಿದ್ಯಾಲಯಗಳಿಗೆ ಬಳಸಿಕೊಳ್ಳುವುದು ಹಾಗೂ ಯಾವುದೇ ಹೊಸ ಹುದ್ದೆಗಳನ್ನು ಸೃಜಿಸುವಂತಿಲ್ಲ. ಈ ಉದ್ದೇಶಕ್ಕಾಗಿ ಯಾವುದೇ ಹೊಸ ಹುದ್ದೆಗಳನ್ನು ಸೃಜಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ.</li>
</ol>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img fetchpriority="high" decoding="async" width="770" height="1024" src="https://peepalmedia.com/wp-content/uploads/2022/11/image-2-770x1024.png" alt="" class="wp-image-14690" srcset="https://peepalmedia.com/wp-content/uploads/2022/11/image-2-770x1024.png 770w, https://peepalmedia.com/wp-content/uploads/2022/11/image-2-226x300.png 226w, https://peepalmedia.com/wp-content/uploads/2022/11/image-2-768x1021.png 768w, https://peepalmedia.com/wp-content/uploads/2022/11/image-2-150x199.png 150w, https://peepalmedia.com/wp-content/uploads/2022/11/image-2-300x399.png 300w, https://peepalmedia.com/wp-content/uploads/2022/11/image-2-696x925.png 696w, https://peepalmedia.com/wp-content/uploads/2022/11/image-2.png 963w" sizes="(max-width: 770px) 100vw, 770px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img decoding="async" width="781" height="1024" src="https://peepalmedia.com/wp-content/uploads/2022/11/image-3-781x1024.png" alt="" class="wp-image-14691" srcset="https://peepalmedia.com/wp-content/uploads/2022/11/image-3-781x1024.png 781w, https://peepalmedia.com/wp-content/uploads/2022/11/image-3-229x300.png 229w, https://peepalmedia.com/wp-content/uploads/2022/11/image-3-768x1007.png 768w, https://peepalmedia.com/wp-content/uploads/2022/11/image-3-150x197.png 150w, https://peepalmedia.com/wp-content/uploads/2022/11/image-3-300x393.png 300w, https://peepalmedia.com/wp-content/uploads/2022/11/image-3-696x913.png 696w, https://peepalmedia.com/wp-content/uploads/2022/11/image-3.png 976w" sizes="(max-width: 781px) 100vw, 781px" /></figure>
</div>
</div>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img decoding="async" width="740" height="1024" src="https://peepalmedia.com/wp-content/uploads/2022/11/image-4-740x1024.png" alt="" class="wp-image-14692" srcset="https://peepalmedia.com/wp-content/uploads/2022/11/image-4-740x1024.png 740w, https://peepalmedia.com/wp-content/uploads/2022/11/image-4-217x300.png 217w, https://peepalmedia.com/wp-content/uploads/2022/11/image-4-768x1063.png 768w, https://peepalmedia.com/wp-content/uploads/2022/11/image-4-150x208.png 150w, https://peepalmedia.com/wp-content/uploads/2022/11/image-4-300x415.png 300w, https://peepalmedia.com/wp-content/uploads/2022/11/image-4-696x963.png 696w, https://peepalmedia.com/wp-content/uploads/2022/11/image-4.png 925w" sizes="(max-width: 740px) 100vw, 740px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="748" height="1024" src="https://peepalmedia.com/wp-content/uploads/2022/11/image-5-748x1024.png" alt="" class="wp-image-14693" srcset="https://peepalmedia.com/wp-content/uploads/2022/11/image-5-748x1024.png 748w, https://peepalmedia.com/wp-content/uploads/2022/11/image-5-219x300.png 219w, https://peepalmedia.com/wp-content/uploads/2022/11/image-5-768x1051.png 768w, https://peepalmedia.com/wp-content/uploads/2022/11/image-5-150x205.png 150w, https://peepalmedia.com/wp-content/uploads/2022/11/image-5-300x411.png 300w, https://peepalmedia.com/wp-content/uploads/2022/11/image-5-696x953.png 696w, https://peepalmedia.com/wp-content/uploads/2022/11/image-5.png 935w" sizes="auto, (max-width: 748px) 100vw, 748px" /><figcaption class="wp-element-caption">ಆದೇಶ ಪ್ರತಿಗಳು</figcaption></figure>
</div>
</div>



<p></p>
]]></content:encoded>
					
		
		
			</item>
		<item>
		<title>&#8216;ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ  ಹಿಂದಿ ಕಡ್ಡಾಯ!&#8217; : ಅಮಿತ್ ಶಾ ನೇತೃತ್ವದ ಸಮಿತಿ ಶಿಫಾರಸು</title>
		<link>https://peepalmedia.com/ella-vishvavidyalayadalli-hindi-kaddaya-amitsha-netrutvada-samiti-shifarassu/</link>
		
		<dc:creator><![CDATA[Peepal Media]]></dc:creator>
		<pubDate>Sun, 09 Oct 2022 09:41:42 +0000</pubDate>
				<category><![CDATA[ದೇಶ]]></category>
		<category><![CDATA[amithsha]]></category>
		<category><![CDATA[Hindi]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[university]]></category>
		<guid isPermaLink="false">https://peepalmedia.com/?p=9663</guid>

					<description><![CDATA[ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ತಾಂತ್ರಿಕ ಅಥವಾ ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಕಡ್ಡಾಯವಾಗಿ ಹಿಂದಿಯಲ್ಲಿರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ಕಳೆದ ತಿಂಗಳು 11 ನೇ ಸಂಪುಟದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ವರದಿಯ ಪ್ರಕಾರ, ಇಂಗ್ಲಿಷ್ ಸಂಪೂರ್ಣವಾಗಿ ಅಗತ್ಯವಿರುವಲ್ಲಿ ಮಾತ್ರ ಬೋಧನಾ ಮಾಧ್ಯಮವಾಗಿರಬೇಕು ಮತ್ತು ಆ ಸಂಸ್ಥೆಗಳಲ್ಲಿ ಕ್ರಮೇಣ ಇಂಗ್ಲಿಷ್ ನಿಂದ ಹಿಂದಿಗೆ ಪರಿವರ್ತಿಸಿಕೊಳ್ಳಬೇಕು ಎಂದು ಹೇಳುತ್ತದೆ. &#8220;ದೇಶದ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ [&#8230;]]]></description>
										<content:encoded><![CDATA[
<p style="font-size:20px">ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ತಾಂತ್ರಿಕ ಅಥವಾ ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಕಡ್ಡಾಯವಾಗಿ ಹಿಂದಿಯಲ್ಲಿರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.</p>



<p style="font-size:20px">ಕಳೆದ ತಿಂಗಳು 11 ನೇ ಸಂಪುಟದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ವರದಿಯ ಪ್ರಕಾರ, ಇಂಗ್ಲಿಷ್ ಸಂಪೂರ್ಣವಾಗಿ ಅಗತ್ಯವಿರುವಲ್ಲಿ ಮಾತ್ರ ಬೋಧನಾ ಮಾಧ್ಯಮವಾಗಿರಬೇಕು ಮತ್ತು ಆ ಸಂಸ್ಥೆಗಳಲ್ಲಿ ಕ್ರಮೇಣ ಇಂಗ್ಲಿಷ್ ನಿಂದ ಹಿಂದಿಗೆ ಪರಿವರ್ತಿಸಿಕೊಳ್ಳಬೇಕು ಎಂದು ಹೇಳುತ್ತದೆ. &#8220;ದೇಶದ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನೆ ಮತ್ತು ಇತರ ಚಟುವಟಿಕೆಗಳ ಮಾಧ್ಯಮವಾಗಿ ಬಳಸಬೇಕು ಮತ್ತು ಇಂಗ್ಲಿಷ್ ಅನ್ನು ಐಚ್ಛಿಕವಾಗಿ ಮಾಡಬೇಕು&#8221; ಎಂದು ಸಮಿತಿ ಶಿಫಾರಸು ಮಾಡಿದೆ.</p>



<p style="font-size:20px">ವಿಶ್ವವಿದ್ಯಾಲಯಗಳು, ತಾಂತ್ರಿಕ ಅಥವಾ ತಾಂತ್ರಿಕೇತರ ಮತ್ತು ವೈದ್ಯಕೀಯ ಸಂಸ್ಥೆಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮ ಹಿಂದಿಯಾಗದ ಹೊರತು ಹಿಂದಿ ಒಂದು ಸಾಮಾನ್ಯ ಭಾಷೆಯಾಗಲು ಸಾಧ್ಯವಿಲ್ಲ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.</p>



<p style="font-size:20px">ಸಮಿತಿಯನ್ನು 1976 ರಲ್ಲಿ ಅಧಿಕೃತ ಭಾಷಾ ಕಾಯಿದೆ, 1963 ರ ಅಡಿಯಲ್ಲಿ ಸ್ಥಾಪಿಸಲಾಯಿತು. ಈ ಸಮಿತಿಯು ಸಂಸತ್ತಿನ 30 ಸದಸ್ಯರನ್ನು ಒಳಗೊಂಡಿದೆ. ಲೋಕಸಭೆಯಿಂದ 20 ಮತ್ತು ರಾಜ್ಯಸಭೆಯಿಂದ 10 ಸದಸ್ಯರನ್ನು ಹೊಂದಿದೆ. ಹಿಂದಿ ಬಳಕೆಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿ ಆ ಆಧಾರದ ಮೇಲೆ ವರದಿಯನ್ನು ಸಿದ್ದಪಡಿಸಿ ಶಿಫಾರಸುಗಳನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತದೆ.</p>



<p style="font-size:20px">ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಬೋಧನೆ, ನೇಮಕಾತಿ ಪರೀಕ್ಷೆಗಳಲ್ಲಿ ಕಡ್ಡಾಯ ಆಂಗ್ಲ ಭಾಷೆ ಪ್ರಶ್ನೆಪತ್ರಿಕೆಯನ್ನು ತೆಗೆದು ಹಿಂದಿ ಸೇರಿಸಬೇಕು. ಹಿಂದಿಯಲ್ಲಿ ಕೆಲಸ ಮಾಡದ ಅಧಿಕಾರಿಗಳು ಮತ್ತು ನೌಕರರಿಗೆ ಎಚ್ಚರಿಕೆ ನೀಡುವುದು ಮತ್ತು ಉಚ್ಚ ನ್ಯಾಯಾಲಯದ ಹಿಂದಿಭಾಷೆ. ಇನ್ನಿತರೆ 112 ಶಿಫಾರಸುಗಳನು ಈ ಸಮೀತಿ ಮಾಡಿದೆ.</p>



<p style="font-size:20px">ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿವೆ. ಇನ್ನು ಕೇಂದ್ರೀಯ ವಿದ್ಯಾಲಯಗಳು (ಕೆವಿಗಳು), ನವೋದಯ ವಿದ್ಯಾಲಯಗಳು (ಎನ್‌ವಿಗಳು) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳು ಕೇಂದ್ರದ ತಾಂತ್ರಿಕೇತರ ಸಂಸ್ಥೆಗಳಾಗಿವೆ.</p>



<p>ದಕ್ಷಿಣ ಭಾರತವಲ್ಲದೇ ಉತ್ತರ ಭಾರತದಲ್ಲೂ ಹಿಂದಿ ವಿರೋಧಿ ಅಲೆ ಇದೆ. ಸ್ಥಳೀಯ ಭಾಷೆಗಳಿಗೆ ಮನ್ನಣೆ ನೀಡಿ. ಹಿಂದಿ ಹೇರಬೇಡಿ, ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ ಎಂಬ ಕೂಗು ಕೇಳಿಬಂದಾಗಲೆಲ್ಲ ನಯವಾಗಿ ಪಾರಾಗುವ ಬಿಜೆಪಿಗರ ನೈಜ್ಯ ಮುಖವಾಡ ಈಗ ಬಯಲಾಗಿದೆ. ಇತ್ತ ಮೋದಿಯವರು ಕರ್ನಾಟಕ ಸಂಸ್ಕೃತಿ ಮತ್ತು ಕನ್ನಡ ಭಾಷೆಯನ್ನು ದೇಶಾದ್ಯಾಂತ ಗೌರವಿಸಲಾವುದು ಎಂಬ ಟ್ವೀಟ್‌ ಮಾಡಿ ದಕ್ಷಿಣದವರ ಮೂಗಿನ ಮೇಲೆ ತುಪ್ಪ ಸವರಿದರೆ. ಇತ್ತ ಅಮಿತ್‌ ಶಾ ಸಮೀತಿ ದೇಶಾದ್ಯಂತಾ ಹಿಂದಿ ಪ್ರಮೂಖ ಭಾಷೆಯನ್ನಾಗಿಸಲು ಮುಂದಾಗಿದ್ದಾರೆ.</p>
]]></content:encoded>
					
		
		
			</item>
	</channel>
</rss>
