<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Vanashree Manjappa &#8211; Peepal Media</title>
	<atom:link href="https://peepalmedia.com/tag/vanashree-manjappa/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 24 Jun 2023 03:49:41 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Vanashree Manjappa &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಶಾಲಾ ಬಾಲಕಿಯ ಅನುಮಾನಾಸ್ಪದ ಸಾವಿನ ಪ್ರಕರಣ ; ಮುಖ್ಯ ಆರೋಪಿ ವನಶ್ರೀ ಮಂಜಪ್ಪನಿಗೆ ಜಾಮೀನು ಮಂಜೂರು</title>
		<link>https://peepalmedia.com/case-of-suspicious-death-of-school-girl-the-main-accused-vanashree-manjappa-was-granted-bail/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 24 Jun 2023 03:45:55 +0000</pubDate>
				<category><![CDATA[ಶಿವಮೊಗ್ಗ]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[POCSO act]]></category>
		<category><![CDATA[sagara]]></category>
		<category><![CDATA[Vanashree Manjappa]]></category>
		<guid isPermaLink="false">https://peepalmedia.com/?p=22661</guid>

					<description><![CDATA[ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ವನಶ್ರೀ ವಸತಿ ಶಾಲೆಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಶಿವಮೊಗ್ಗ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಶುಕ್ರವಾರ ನಡೆದ ವಿಚಾರಣೆಯಲ್ಲಿ ಮಹತ್ವದ ಸಾಕ್ಷಾಧಾರಗಳ ಕೊರತೆಯ ಕಾರಣಕ್ಕೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ. ವನಶ್ರೀ ವಸತಿ ಶಾಲೆ ಸಂಸ್ಥಾಪಕ ಮುಖ್ಯಸ್ಥ ವನಶ್ರೀ ಮಂಜಪ್ಪಗೆ ನ್ಯಾಯಾಧೀಶೆ ಲತಾರವರು 1 ಲಕ್ಷ ರೂ. ಬಾಂಡ್ ಹಾಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಅವರನ್ನು ಬಿಡುಗಡೆಗೆ [&#8230;]]]></description>
										<content:encoded><![CDATA[
<figure class="wp-block-image size-large"><img fetchpriority="high" decoding="async" width="1024" height="576" src="https://peepalmedia.com/wp-content/uploads/2023/06/FB_IMG_1686398317652-1024x576.jpg" alt="" class="wp-image-22664" srcset="https://peepalmedia.com/wp-content/uploads/2023/06/FB_IMG_1686398317652-1024x576.jpg 1024w, https://peepalmedia.com/wp-content/uploads/2023/06/FB_IMG_1686398317652-300x169.jpg 300w, https://peepalmedia.com/wp-content/uploads/2023/06/FB_IMG_1686398317652-768x432.jpg 768w, https://peepalmedia.com/wp-content/uploads/2023/06/FB_IMG_1686398317652-150x84.jpg 150w, https://peepalmedia.com/wp-content/uploads/2023/06/FB_IMG_1686398317652-696x392.jpg 696w, https://peepalmedia.com/wp-content/uploads/2023/06/FB_IMG_1686398317652-1068x601.jpg 1068w, https://peepalmedia.com/wp-content/uploads/2023/06/FB_IMG_1686398317652.jpg 1080w" sizes="(max-width: 1024px) 100vw, 1024px" /></figure>



<p>ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ವನಶ್ರೀ ವಸತಿ ಶಾಲೆಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಶಿವಮೊಗ್ಗ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.</p>



<p>ಶುಕ್ರವಾರ ನಡೆದ ವಿಚಾರಣೆಯಲ್ಲಿ ಮಹತ್ವದ ಸಾಕ್ಷಾಧಾರಗಳ ಕೊರತೆಯ ಕಾರಣಕ್ಕೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ. ವನಶ್ರೀ ವಸತಿ ಶಾಲೆ ಸಂಸ್ಥಾಪಕ ಮುಖ್ಯಸ್ಥ ವನಶ್ರೀ ಮಂಜಪ್ಪಗೆ ನ್ಯಾಯಾಧೀಶೆ ಲತಾರವರು 1 ಲಕ್ಷ ರೂ. ಬಾಂಡ್ ಹಾಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಅವರನ್ನು ಬಿಡುಗಡೆಗೆ ಆದೇಶಿಸಿದ್ದಾರೆ.</p>



<p>ಮೃತ ವಿದ್ಯಾರ್ಥಿನಿ ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ತನ್ನ ಸಹಪಾಠಿ ವಿದ್ಯಾರ್ಥಿಗಳಿಗೆ, ಶಾಲೆಯ ಬೇರಾವುದೇ ಸಿಬ್ಬಂದಿಗಳಿಗೆ ಯಾವುದೇ ವಿಚಾರವನ್ನೂ ಹೇಳಿಲ್ಲ, ಉಳಿದ ಮಕ್ಕಳು ಮೃತರ ತಾಯಿಗೆ ಹೇಳಿದ್ದು ಬಿಟ್ಟರೆ ಬೇರಾವ ಸಾಕ್ಷ್ಯಗಳೂ ಇಲ್ಲ.</p>



<p>ಹಾಗೆಯೇ ವನಶ್ರೀ ಮಂಜಪ್ಪ ಮೃತ ವಿದ್ಯಾರ್ಥಿನಿಯ ಕೈ-ಕಾಲಿಗೆ ಮುಲಾಮು ಹಚ್ಚಿದ್ದರ ಕುರಿತು ಆಕೆಯ ಸಹಪಾಠಿಗಳಿಗೆ ಹೇಳಿದ ಯಾವುದೇ ದಾಖಲೆಗಳಿಲ್ಲ ಎಂದೂ ಆರೋಪಿ ಪರ ವಕೀಲರಾದ ಅಶೋಕ್ ಭಟ್ ತಮ್ಮ ವಾದ ಮಂಡಿಸಿದ್ದಾರೆ.</p>



<p>ಇನ್ನು ಮೃತ ವಿದ್ಯಾರ್ಥಿನಿ ಮತ್ತು ಇನ್ನೋರ್ವ ವಿಧ್ಯಾರ್ಥಿನಿಗೆ ಲೀಟರುಗಟ್ಟಲೆ ನೀರು ಕುಡಿಸಿದ ವಿಚಾರವಾಗಿ, ಆಸ್ಪತ್ರೆಗೆ ಸಾಗಿಸುವಾಗ ನಡೆದ ಶಾಲಾ ಮುಖ್ಯಸ್ಥರ ಅಜಾಗರೂಕತೆ ವಿಚಾರವಾಗಿ ಅಷ್ಟು ಬಲವಾದ ವಾದ ನಡೆಯಲಿಲ್ಲ ಎಂದು ತಿಳಿದು ಬಂದಿದೆ.</p>



<p>ಮೃತ ಬಾಲಕಿಯ ತಾಯಿಯ ದೂರಿನನ್ವಯ ವಸತಿ ಶಾಲಾ ಮುಖ್ಯಸ್ಥರ ವಿರುದ್ಧ ಪೋಕ್ಸೋ ಸೆಕ್ಷನ್ 8, 12, ಅಟ್ರಾಸಿಟಿ ಸೆಕ್ಷನ್ 3, ಐಪಿಸಿ ಸೆಕ್ಷನ್ 504, 506ರ ಅಡಿಯಲ್ಲಿ ದೂರು ದಾಖಲಾಗಿತ್ತು. ಸಧ್ಯ ಬಲವಾದ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿ ವನಶ್ರೀ ಮಂಜಪ್ಪನಿಗೆ ಶಿವಮೊಗ್ಗ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.</p>
]]></content:encoded>
					
		
		
			</item>
		<item>
		<title>ವನಶ್ರೀ ಮಂಜಪ್ಪನ ವಿರುದ್ಧ ಎಫ್‌ ಐ ಆರ್‌ ನಲ್ಲಿ ಏನೇನಿದೆ?</title>
		<link>https://peepalmedia.com/what-is-in-the-fir-against-vanashree-manjappa/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 13 Jun 2023 11:35:49 +0000</pubDate>
				<category><![CDATA[ಸತ್ಯ ಶೋಧ]]></category>
		<category><![CDATA[Death case]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sagara]]></category>
		<category><![CDATA[Sexual Harassment]]></category>
		<category><![CDATA[SHIVAMOGGA POLICE]]></category>
		<category><![CDATA[Vanashree Manjappa]]></category>
		<guid isPermaLink="false">https://peepalmedia.com/?p=22350</guid>

					<description><![CDATA[ಶಿವಮೊಗ್ಗ ಜಿಲ್ಲೆ ಸಾಗರದ ವನಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹೊನ್ನೇಸರ ಪಿಣಿಯಜ್ಜಿ ಮಂಜಪ್ಪ ಆಲಿಯಾಸ್‌ ವನಶ್ರೀ ಮಂಜಪ್ಪ ಇದೀಗ ಪೋಕ್ಸೋ ಮತ್ತು ಎಸ್‌ ಸಿ, ಎಸ್‌ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಜೈಲು ಪಾಲಾಗಿದ್ದಾನೆ. ವಸತಿ ನಿಲಯಕ್ಕೆ ಸೇರಿದ್ದ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಮಂಜಪ್ಪನ ಕೃತ್ಯಗಳು ಕಾರಣ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಇನ್ನಿತರ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೂ ಲೈಂಗಿಕ ಕಿರುಕುಳ ನೀಡಿರುವ ದೂರಿನ ಆಧಾರದ ಮೇರೆಗೆ ಪೋಕ್ಸೋ ಕಾಯ್ದೆ ಆಡಿ ಪ್ರಕರಣ ದಾಖಲಾಗಿದೆ. ತನ್ನ ವಸತಿ ನಿಲಯಕ್ಕೆ [&#8230;]]]></description>
										<content:encoded><![CDATA[
<p>ಶಿವಮೊಗ್ಗ ಜಿಲ್ಲೆ ಸಾಗರದ ವನಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹೊನ್ನೇಸರ ಪಿಣಿಯಜ್ಜಿ ಮಂಜಪ್ಪ ಆಲಿಯಾಸ್‌ ವನಶ್ರೀ ಮಂಜಪ್ಪ ಇದೀಗ ಪೋಕ್ಸೋ ಮತ್ತು ಎಸ್‌ ಸಿ, ಎಸ್‌ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಜೈಲು ಪಾಲಾಗಿದ್ದಾನೆ. ವಸತಿ ನಿಲಯಕ್ಕೆ ಸೇರಿದ್ದ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಮಂಜಪ್ಪನ ಕೃತ್ಯಗಳು ಕಾರಣ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಇನ್ನಿತರ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೂ ಲೈಂಗಿಕ ಕಿರುಕುಳ ನೀಡಿರುವ ದೂರಿನ ಆಧಾರದ ಮೇರೆಗೆ ಪೋಕ್ಸೋ ಕಾಯ್ದೆ ಆಡಿ ಪ್ರಕರಣ ದಾಖಲಾಗಿದೆ.</p>



<p>ತನ್ನ ವಸತಿ ನಿಲಯಕ್ಕೆ ಸೇರಿದ ಕೂಡಲೇ ಏನೂ ತಿಳಿಯದ ಈ ಪರಿಶಿಷ್ಟ ಅಲೆಮಾರಿ ಸಮುದಾಯದ ವಿದ್ಯಾರ್ಥಿನಿಗೆ ಯೋಗಾಭ್ಯಾಸದ ಹೆಸರಿನಲ್ಲಿ ವಿಪರೀತ ದೇಹ ದಂಡಿಸಿದ್ದ ಮಂಜಪ್ಪ ನಂತರದಲ್ಲಿ ಅತಿರೇಕದ ಕೃತ್ಯಗಳನ್ನು ನಡೆಸಿ ಬಾಲಕಿಯ ದುರ್ಮರಣಕ್ಕೆ ಕಾರಣವಾಗಿರುವ ಕುರಿತು ಎಲ್ಲವನ್ನೂ ಖುದ್ದಾಗಿ ನೋಡಿರುವ ಬಾಲಕಿಯರು ದೂರಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡು 12.06.2023ರಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ನೇತೃತ್ವದ ತಂಡ ವಸತಿ ನಿಲಯಕ್ಕೆ ಭೇಟಿ ನೀಡಿ ಸಂತ್ರಸ್ತ ಬಾಲಕಿಯರ ಮಾತುಗಳನ್ನು ವಿಡಿಯೋ ದಾಖಲೀಕರಣ ಮಾಡಿಕೊಂಡಿದೆ. ಜೊತೆಯಲ್ಲಿ ಪಂಚನಾಮೆ ಪ್ರಕ್ರಿಯೆ ಸಹ ನಡೆಸಲಾಗಿದೆ.</p>



<p><strong>ಪೀಪಲ್‌ ಮೀಡಿಯಾ</strong>ಕ್ಕೆ ಲಭ್ಯವಾಗಿರುವ ಎಫ್‌ ಐ ಆರ್‌ (ಪ್ರಥಮ ವರ್ತಮಾನ ವರದಿ) ಪ್ರತಿಯಲ್ಲಿ ಉಲ್ಲೇಖವಾಗಿರುವಂತೆ ಸಾಗರದ ಗ್ರಾಮಾಂತರ ಠಾಣೆಯಲ್ಲಿ ದಿನಾಂಕ 10-06-2023ರಂದು ದೂರು ದಾಖಲಾಗಿದೆ.</p>



<p><strong>FIRನಲ್ಲಿ ಏನಿದೆ?</strong><br>ವನಶ್ರೀ ಮಂಜಪ್ಪ ನಡೆಸುವ ವಸತಿ ಶಾಲೆಗೆ ಸೇರಿದ್ದ ವಿದ್ಯಾರ್ಥಿನಿಯ ತಾಯಿಯು ನೀಡಿರುವ ದೂರಿನಲ್ಲಿ ಆಘಾತಕಾರಿ ಅಂಶಗಳಿವೆ. ದಿನಾಂಕ 04-06-23ರಂದು ಮೃತ ವಿದ್ಯಾರ್ಥಿನಿಯೂ ಸೇರಿದಂತೆ ಐದು ಮಂದಿ ವಿದ್ಯಾರ್ಥಿನಿಯರು ವಸತಿ ನಿಲಯಕ್ಕೆ ದಾಖಲಾಗಿದ್ದರು. ʼ07-06-23ರಂದು ಮದ್ಯಾಹ್ನ ಎರಡು ಗಂಟೆ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದೆ. ಇದನ್ನು ಮಂಜಪ್ಪ ಅವರ ಗಮನಕ್ಕೆ ತಂದಾಗ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದಲ್ಲದೆ ತಮಗೆ ತಿಳಿದ ಮಾತ್ರೆ ಹಾಗೂ ಕಷಾಯ ಕುಡಿಸಿದ್ದಾರೆ. ನಂತರ ಆಕೆ ಕಾಲು ನೋವು ಹಾಗೂ ತೊಡೆ ನೋವು ಎಂದು ತಮ್ಮ ಜೊತೆಯಲ್ಲಿದ್ದವರಿಗೆ ತಿಳಿಸಿದ್ದಳು. ಇದನ್ನು ಅವರು ಮಂಜಪ್ಪ ಅವರಿಗೆ ತಿಳಿಸಿದಾಗ ಮಂಜಪ್ಪ ಅವರು ಬಾಧಿತ ಬಾಲಕಿಯನ್ನು ಪ್ರತ್ಯೇಕವಾಗಿ ತಮ್ಮ ರೂಂಗೆ ಕರೆದುಕೊಂಡು ಹೋಗಿ ಮೊಣಕಾಲು, ತೊಡೆ ಹಾಗೂ ಇತರ ಕಡೆ ಮುಲಾಮು ಹಚ್ಚಿ ಹೊರ ಬಂದು ಉಳಿದವರಿಗೆ ಅವಳು ಹುಷಾರಾಗುತ್ತಾಳೆ, ನೀವು ಹೋಗಿ ಎಂದು ಹೇಳಿರುತ್ತಾರೆ. ಯಾವುದೇ ಆಸ್ಪತ್ರೆಗೆ ದಾಖಲಿಸಿರುವುದಿಲ್ಲ. ಮಾತ್ರವಲ್ಲದೇ ಮಕ್ಕಳಿಗೆ ಆ ವಿದ್ಯಾರ್ಥಿನಿಗೆ ಹುಷಾರಿಲ್ಲದ ವಿಷಯ ಯಾರಿಗೂ ಹೇಳಕೂಡದು ಎಂದು ಗದರಿಸಿದ್ದಾನೆ.</p>



<p>ಮರುದಿನ ಅಂದರೆ ʼ08-06-23ರಂದು ಬಾಲಕಿಯ ಆರೋಗ್ಯ ತೀರಾ ಹದಗೆಟ್ಟಿರುವಾಗ ಮಂಜಪ್ಪ ಬಲವಂತವಾಗಿ ತುಂಬಾ ನೀರು ಕುಡಿಸಿ ಆಕೆ ಸುಸ್ತಾಗಿ ಮಲಗಿದ್ದಳು. ನಂತರ ಆಕೆಯನ್ನು ಮಕ್ಕಳು ಮಾತಾಡಿಸಲು ಹೋದಾಗ ಅವಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದಾಗ ಮಕ್ಕಳನ್ನು ಹೊರಕ್ಕೆ ಕಳಿಸಿ ಅವಳನ್ನು ಮಾತಾಡಿಸುವ ಪ್ರಯತ್ನ ಮಾಡಿದಾಗ ಆಕೆ ನಾಲಿಗೆ ಕಚ್ಚಿಕೊಂಡು ಯಾವುದೇ ಪ್ರತಿಕ್ರಿಯೆ ನೀಡದಂತಾಗಿದ್ದಳು. ಆ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಗಲೂ ಸಹ ಬಾಲಕಿಯ ಪೋಷಕರಿಗೆ ವಿಷಯ ತಿಳಿಸಿರುವುದಿಲ್ಲ. ಆಸ್ಪತ್ರೆಯ ಆವರಣದಲ್ಲಿ ಮಕ್ಕಳು ಅಪರಿಚಿತರ ಸಾಯದಿಂದ ಪೋಷಕರಿಗೆ ವಿಷಯ ತಿಳಿಸಿರುತ್ತಾರೆ.</p>



<p>ನಂತರ ಪೋಷಕರು ತಮ್ಮ ಮಗಳ ಜೊತೆಗಿದ್ದ ನಾಲ್ಕು ಜನ ಮಕ್ಕಳನ್ನು ವಿಚಾರಿಸಿದಾಗ ಮಂಜಪ್ಪನ ಅಶ್ಲೀಲ ವರ್ತನೆ ಬಗ್ಗೆ, ಅವನು ಖಾಸಗಿ ಭಾಗಗಳನ್ನು ಮುಟ್ಟುವುದು, ಅಪ್ಪಿಕೊಳ್ಳುವುದು, ಅವಾಚ್ಯವಾಗಿ ಮಾತಾಡಿರುವ ಬಗ್ಗೆ ಮಾಹಿತಿ ನೀಡಿ ತಮಗಾದ ಅವಮಾನ ಹಿಂಸೆಯನ್ನು ಹೇಳಿಕೊಂಡು ಕಣ್ಣೀರು ಹಾಕಿರುತ್ತಾರೆ. ಇದೇ ರೀತಿಯ ಲೈಂಗಿಕ ದೌರ್ಜನ್ಯ ತಮ್ಮ ಮಗಳಿಗೂ ಆಗಿರಬಹುದುʼ ಎಂದು ಪೋಷಕರು ದೂರಿನಲ್ಲಿ ತಿಳಿಸಿರುತ್ತಾರೆ. ಮಂಜಪ್ಪನ ಈ ರೀತಿಯ ಲೈಂಗಿಕ ದೌರ್ಜನ್ಯದಿಂದ ತಮ್ಮ ಮಗಳು ಹೆದರಿಕೊಂಡು, ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಅನುಭವಿಸಿ ಭಯ ಹಾಗೂ ಬೇಸರದಲ್ಲಿ ಮನಸ್ಸಿಗೆ ಹಚ್ಚಿಕೊಂಡು ಇದರಿಂದ ಜ್ವರ ಸುಸ್ತು ವಾಂತಿ ಪ್ರಾರಂಭವಾಗಿ ಎರಡು ದಿನ ನರಳಾಡಿದ್ದಾಳೆʼ ಎಂದು ದೂರಿದ್ದಾರೆ. ʼಮಂಜಪ್ಪನ ಭಯದಿಂದ ಹಾಗೂ ಆಸ್ಪತ್ರೆಗೆ ತೋರಿಸದೇ ತಾನೇ ಮಾತ್ರೆ ಮುಲಾಮು ಕಷಾಯ ಕುಡಿಸಿ ಸಮಯ ವ್ಯರ್ಥಮಾಡಿ, ಆ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸದೇ, ಪೋಷಕರಿಗೂ ವಿಷಯ ತಿಳಿಸದೇ ಹೋಗಿದ್ದರಿಂದ ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ಸೇರಿಸಿದ್ದರಂತಿ ತಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ದೂರುದಾರರು ತಿಳಿಸಿದ್ದಾರೆ.</p>



<p>ಈ ಎಲ್ಲಾ ವಿಚಾರಗಳು ಪಿರ್ಯಾದುದಾರರಿಗೆ ಮಂಜಪ್ಪನವರ ಮೇಲೆ ಬಲವಾದ ಅನುಮಾನಕ್ಕೆ ಕಾರಣವಾಗಿರುತ್ತವೆ ಹಾಗೂ ತಮ್ಮ ಮಗಳಿಗೆ ಅವಾಚ್ಯವಾಗಿ ನಿಂದಿಸಿರುವುದು, ಭಯ ಹುಟ್ಟಿಸಿರುವುದು, ತಾನು ಹೇಳಿದಂತೆ ಕೇಳದಿದ್ದರೆ ನಿಮ್ಮನ್ನು ನೋಡಿಕೊಳ್ಳುತ್ತೇನೆ, ಈ ವಿಚಾರವಾಗಿ ಯಾರಿಗೂ ಹೇಳಬಾರದು ಎಂದು ಎಚ್ಚರಿಕೆ ನೀಡಿದ್ದನ್ನು ಮಕ್ಕಳು ಮನೆಗೆ ಬಂದು ಹೇಳಿರುವ ಹಿನ್ನೆಲೆಯಲ್ಲಿ ಮಂಜಪ್ಪ ಅವರ ಮೇಲೆ ಎಸ್‌ ಸಿ ಎಸ್‌ ಟಿ ದೌರ್ಜನ್ಯ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು FIR ನಲ್ಲಿ ದಾಖಲಾಗಿರುತ್ತದೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="UuYdq0sCyu4"><iframe title="ಪರಿಶಿಷ್ಟ ಅಲೆಮಾರಿ ಬಾಲಕಿ ತೇಜಸ್ವಿನಿಯ ಅನುಮಾನಾಸ್ಪದ ಸಾವು. ಆರ್ ಎಸ್ ಎಸ್ ವ್ಯಕ್ತಿ ವನಶ್ರೀ ಮಂಜಪ್ಪನೇ ತಪ್ಪಿತಸ್ಥನೆ?" width="696" height="392" src="https://www.youtube.com/embed/UuYdq0sCyu4?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>
]]></content:encoded>
					
		
		
			</item>
	</channel>
</rss>
