<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>viral viral news &#8211; Peepal Media</title>
	<atom:link href="https://peepalmedia.com/tag/viral-viral-news/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 19 Feb 2024 09:39:01 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>viral viral news &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ವಿವಿಗಳು ಸಾಲದಲ್ಲಿ&#8230; ಶಿಕ್ಷಣಕ್ಕೆ ಖರ್ಚು ಕಮ್ಮಿ&#8230; ಮೋದಿ ಆಡಳಿತದಲ್ಲಿ ಶಿಕ್ಷಣ ವ್ಯವಸ್ಥೆಯ ಕಥೆ!</title>
		<link>https://peepalmedia.com/condition-of-education-system-in-modi-government/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 12 Feb 2024 08:12:37 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[department]]></category>
		<category><![CDATA[education]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[universities]]></category>
		<category><![CDATA[viral viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35851</guid>

					<description><![CDATA[ಮೋದಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದು ಒಂದು ದಶಕವಾಗುತ್ತಾ ಬಂತು. 2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಸದ್ಯ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಸಂಕ್ಷಿಪ್ತವಾಗಿ ನೋಡೋಣ. ಶಿಕ್ಷಣದ ಮೇಲೆ ಮಾಡಿದ ಹೂಡಿಕೆ ಹೆಚ್ಚಿನ ಲಾಭಾಂಶವನ್ನು ತರುತ್ತದೆ ಎಂದು ಬಿಜೆಪಿ ತನ್ನ 2014 ರ&#160; ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವನ್ನು ಒಟ್ಟು ದೇಶೀಯ ಉತ್ಪನ್ನದ 6% ಗೆ ಹೆಚ್ಚಿಸುವುದಾಗಿ ಭರವಸೆ ನೀಡಿತು. ಬಿಜೆಪಿ ಸರಕಾರದ ಭರವಸೆಯ ಹೊರತಾಗಿಯೂ, 2014 ಮತ್ತು [&#8230;]]]></description>
										<content:encoded><![CDATA[
<p>ಮೋದಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದು ಒಂದು ದಶಕವಾಗುತ್ತಾ ಬಂತು. 2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಸದ್ಯ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಸಂಕ್ಷಿಪ್ತವಾಗಿ ನೋಡೋಣ.</p>



<p>ಶಿಕ್ಷಣದ ಮೇಲೆ ಮಾಡಿದ ಹೂಡಿಕೆ ಹೆಚ್ಚಿನ ಲಾಭಾಂಶವನ್ನು ತರುತ್ತದೆ ಎಂದು ಬಿಜೆಪಿ ತನ್ನ 2014 ರ&nbsp; ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವನ್ನು ಒಟ್ಟು ದೇಶೀಯ ಉತ್ಪನ್ನದ 6% ಗೆ ಹೆಚ್ಚಿಸುವುದಾಗಿ ಭರವಸೆ ನೀಡಿತು. <a href="https://www.cbgaindia.org/publication/walking-the-tightrope-an-analysis-of-union-budget-2023-24/"> ಬಿಜೆಪಿ ಸರಕಾರದ ಭರವಸೆಯ</a> ಹೊರತಾಗಿಯೂ, 2014 ಮತ್ತು 2024 ರ ನಡುವೆ, ಪ್ರತಿ ವರ್ಷ ವಾರ್ಷಿಕ GDP ಯ ಸರಾಸರಿ 0.44% ಅನ್ನು ಶಿಕ್ಷಣಕ್ಕೆ ಮೀಸಲಿಟ್ಟಿತು.</p>



<p>ಇದಕ್ಕೆ ಹೋಲಿಸಿದರೆ, 2004 ಮತ್ತು 2014 ರ ನಡುವೆ, <a href="https://www.cbgaindia.org/wp-content/uploads/2016/03/Response-to-Union-Budget-2008-09.pdf">ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ</a> ಶಿಕ್ಷಣದ ಮೇಲೆ ಜಿಡಿಪಿಯ ಸರಾಸರಿ 0.61% ಅನ್ನು ಮೀಸಲಿಟ್ಟಿತು.</p>



<p>ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಅನುಮೋದಿಸಿದ್ದು ತಮ್ಮ ಸರ್ಕಾರದ ಒಂದು ಪ್ರಮುಖ ಸಾಧನೆ ಎಂದು ಸರ್ಕಾರವು ಹೇಳಿಕೊಂಡಿದೆ. ಈ ನೀತಿ<a href="https://www.researchgate.net/publication/337676989_Promising_but_Perplexing_Solutions_A_Critique_of_the_Draft_National_Education_Policy_2019"> ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಟೀಕೆ</a>ಗೆ ಗುರಿಯಾಯ್ತು.<a href="https://www.newsclick.in/professors-forum-flags-concerns-anti-teacher-NEP-teacher-day"> ಈ ಟೀಕೆಗಳ</a> ಮತ್ತು<a href="https://www.ndtv.com/education/nep-2020-student-teacher-bodies-call-new-education-policy-anti-democratic-2271135"> ವಿರೋಧಗಳ</a> ಹೊರತಾಗಿಯೂ ಸಾರ್ವಜನಿಕ ಸಂಸ್ಥೆಗಳ<a href="https://www.thehindu.com/news/national/andhra-pradesh/nep-leads-to-privatisation-of-education-say-student-unions/article65801394.ece"> ಖಾಸಗೀಕರಣ</a> ಮತ್ತು ತರಗತಿಗಳ ಡಿಜಿಟಲ್ ವರ್ಧನೆಗೆ ಉತ್ತೇಜನ ನೀಡಲಾಯ್ತು.  ಆದರೂ ಶಿಕ್ಷಣ ವಲಯ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ವಿದ್ಯಾರ್ಥಿಗಳಿಗಾಗಿ ಹಲವಾರು <a href="https://www.newindianexpress.com/opinions/2020/Dec/28/the-trouble-with-neps-multiple-entryexit-system-2242001.html">&#8220;ಎಕ್ಸಿಟ್&#8221; ಆಯ್ಕೆಗಳನ್ನು</a> ನೀಡಿದರಿಂದ ಡ್ರಾಪ್‌ಔಟ್‌ ಕೂಡ ಹೆಚ್ಚಾಗುವ ಸಾಧ್ಯತೆಗಳಿವೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ಹತ್ತು ವರ್ಷಗಳಲ್ಲಿ ಶಾಲಾ ಕಾಲೇಜುಗಳಿಗೆ ಮೋದಿ ಮಾಡಿದ್ದೇನು? |Peepal Media | ಪೀಪಲ್‌ ಮೀಡಿಯಾ" width="696" height="392" src="https://www.youtube.com/embed/pAoIPPvpz6Y?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe>
</div></figure>



<p>ಕಳೆದ ಒಂದು ದಶಕದಲ್ಲಿ <a href="https://img.asercentre.org/docs/ASER%202022%20report%20pdfs/allindiaaser202217_01_2023final.pdf">ಶಾಲಾ ದಾಖಲಾತಿ</a>ಯಲ್ಲಿ 2014 ರಲ್ಲಿ 96.7%, 2018 ರಲ್ಲಿ 97.2% ಮತ್ತು 2022 ರಲ್ಲಿ 98.4% ಸ್ಥಿರವಾದ ಹೆಚ್ಚಳವನ್ನು ಕಂಡಿದೆ. ಮಹಿಳಾ ದಾಖಲಾತಿಯೂ ಹೆಚ್ಚಾಗಿದೆ. 2006 ರಲ್ಲಿ 10%&nbsp; ಇದ್ದ ಶಾಲೆಗೆ ದಾಖಲಾಗದ 11 ಮತ್ತು 14 ರ ನಡುವಿನ ವಯಸ್ಸಿನ ಹುಡುಗಿಯರ ಪ್ರಮಾಣ 2022 ರಲ್ಲಿ 2% ರಷ್ಟು ಕಡಿಮೆಯಾಗಿದೆ.</p>



<p>ಸುಮಾರು 75% ಶಾಲೆಗಳು ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನು ಹೊಂದಿವೆ ಮತ್ತು ಸುಮಾರು 40% ರಷ್ಟು ಗ್ರಂಥಾಲಯ ಪುಸ್ತಕಗಳನ್ನು ಹೊಂದಿವೆ. ಶೇ.7ರಷ್ಟು ಶಾಲೆಗಳು ಮಾತ್ರ ಕಂಪ್ಯೂಟರ್ ಹೊಂದಿದ್ದಾರೆ. <a href="https://img.asercentre.org/docs/ASER%202022%20report%20pdfs/allindiaaser202217_01_2023final.pdf">(ನೋಡಿ)</a></p>



<p>ದೇಶದಾದ್ಯಂತ, ಕಡಿಮೆ ದಾಖಲಾತಿ ಹೊಂದಿರುವ ಒಬ್ಬರೇ ಶಿಕ್ಷಕರನ್ನು ಹೋಂದಿರುವ <a href="https://scroll.in/article/1027639/indias-mass-closure-of-schools-is-leaving-lakhs-of-students-stranded">ಶಾಲೆಗಳನ್ನು ಮುಚ್ಚಲಾಯಿತು</a>. ಇದು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿನ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಿತು. ಸದ್ಯ, <a href="https://www.thehindu.com/data/data-one-in-seven-indian-primary-schools-run-by-a-lone-teacher/article66881043.ece">ಏಳು ಶಾಲೆಗಳಲ್ಲಿ ಒಂದನ್ನು ಒಬ್ಬ ಶಿಕ್ಷಕರೇ ನಡೆಸುತ್ತಿದ್ದಾರೆ</a>.</p>



<p>ಶಾಲಾ ಮಕ್ಕಳಲ್ಲಿ ಪೌಷ್ಠಿಕಾಂಶದ ಮಟ್ಟವನ್ನು ಹೆಚ್ಚಿಸಲು ಜಾರಿಗೆ ತಂದ ಮಧ್ಯಾಹ್ನದ ಊಟದ ಯೋಜನೆಯಾದ <a href="https://scroll.in/latest/1019739/underutilisation-pm-poshan-and-samagra-shiksha-abhiyan-funds-flagged-by-parliamentary-commitee">ಪಿಎಂ-ಪೋಷನ್‌ </a>ಯೋಜನೆಯಲ್ಲಿ ಹಣವನ್ನು ಸಮರ್ಪಕವಾಗಿ ಬಳಸಲಾಗಿಲ್ಲ. ತನ್ನ ಇತ್ತೀಚಿನ ವರದಿಯಲ್ಲಿ ಕೇಂದ್ರ ಸರ್ಕಾರದ ಮಧ್ಯಾಹ್ನದ ಊಟ ಯೋಜನೆ ಪಿಎಂ-ಪೋಶನ್ ಮತ್ತು ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ ಸಮಗ್ರ ಶಿಕ್ಷಾ ಅಭಿಯಾನಕ್ಕೆ ನಿಗದಿಪಡಿಸಿದಕ್ಕಿಂತ ಹಣವನ್ನು ಕಡಿಮೆ ಬಳಸಲಾಗುತ್ತಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.</p>



<p>ಬಿಜೆಪಿ ರಾಜ್ಯಸಭಾ ಸಂಸದ ವಿನಯ್ ಪಿ ಸಹಸ್ರಬುದ್ಧೆ ಅಧ್ಯಕ್ಷತೆಯ ಈ ಸಮಿತಿಯು ಜನವರಿ 31, 2022 ರ ಹೊತ್ತಿಗೆ ಸಮಗ್ರ ಶಿಕ್ಷಾ ಅಭಿಯಾನಕ್ಕಾಗಿ ಆ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟ 37,383.36 ಕೋಟಿ ರುಪಾಯಿಯಲ್ಲಿ ಕೇವಲ 16,821.70 ಕೋಟಿ (55%) ರುಪಾಯಿ ಬಳಸಲಾಗಿದೆ ಎಂದು ವರದಿ ಮಾಡಿದೆ. ಪಿಎಂ-ಪೋಷನ್ ಯೋಜನೆಗಾಗಿ,ಒಟ್ಟು 11,500 ಕೋಟಿ ರುಪಾಯಿಯಲ್ಲಿ ಜನವರಿ 31 ರವರೆಗೆ ಕೇವಲ 6,660.54 ಕೋಟಿ (57.91%) ಮಾತ್ರ ಬಳಸಲಾಗಿದೆ.</p>



<p><a href="https://img.asercentre.org/docs/ASER%202022%20report%20pdfs/allindiaaser202217_01_2023final.pdf">The National Initiative for Proficiency in Reading with Understanding and Numeracy</a> &#8211; ನಿಪುಣ್‌ ಭಾರತ್‌ ಮಿಷನನ್ನು 2021 ರಲ್ಲಿ ಸ್ಥಾಪಿಸಲಾಯಿತು ಮತ್ತು 2025 ರ ವೇಳೆಗೆ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಸಂಖ್ಯೆಗಳ ಬಳಕೆ ಹಾಗೂ ಸಾಕ್ಷರತೆಯಲ್ಲಿ ಹಿಡಿತ ಸಾಧಿಸಿಲು ಈ ಮಿಷನ್‌ ಜಾರಿ ಮಾಡಲಾಗಿದೆ. 2022 ರಲ್ಲಿ, 3 ನೇ ತರಗತಿಯಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಕ್ಕಳು ಮಾತ್ರ ಗಣಿತದಲ್ಲಿ ಮತ್ತು&nbsp; 20% ಮಕ್ಕಳು ಓದುವಿಕೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಒಳ್ಳೆಯ ಫಲಿತಾಂಶ ನೀಡಿದ್ದಾರೆ ಎಂದು Annual Status of Education Report 2022&nbsp; ಡೇಟಾ ತೋರಿಸುತ್ತದೆ.</p>



<p>2017 ರಿಂದ, NCERTಯ ಶಾಲಾ ಪಠ್ಯಪುಸ್ತಕಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. 2022 ರಲ್ಲಿ, ಅಂದರೆ ತೀರ ಇತ್ತೀಚಿಗೆ ಕೂಡ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ: <a href="https://www.hindustantimes.com/india-news/ncert-drops-mughal-empire-chapters-kapil-mishra-says-akbar-101680590093526.html">ಮೊಘಲ್ ಯುಗ</a> ಮತ್ತು <a href="https://indianexpress.com/article/express-exclusive/express-investigation-part-2-key-deletions-on-caste-minorities-in-revised-school-textbooks-7977839/">ಜಾತಿ ವ್ಯವಸ್ಥೆಯ</a> ಉಲ್ಲೇಖಗಳನ್ನು ಡಿಲಿಟ್‌ ಮಾಡಲಾಗಿದೆ. <a href="https://frontline.thehindu.com/the-nation/cutting-to-shape/article32184586.ece">ಸಾಮಾಜಿಕ ಚಳುವಳಿಗಳ</a> ಅಧ್ಯಾಯಗಳು,<a href="https://www.thehindu.com/news/national/ncert-drops-texts-on-gandhi-hindu-muslim-unity-rss-ban-from-class-12-textbook/article66702224.ece"> ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲಿನ ನಿಷೇಧದ ಬಗೆಗಿನ ಪಠ್ಯ </a>ಮತ್ತು ಹಿಂದುತ್ವ ಮತ್ತು ಗಾಂಧಿ ಹತ್ಯೆಯ ಮಾಹಿತಿಗಳನ್ನು ತೆಗೆದುಹಾಕಲಾಗಿದೆ. 2023 ರಲ್ಲಿ, <a href="https://frontline.thehindu.com/news/when-creationism-takes-over-darwins-theory-of-evolution-in-indian-schools/article66780658.ece#:~:text=The%20erasure%20of%20Darwin,not%20be%20taught%20in%20schools.">ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದದ</a> ಅಧ್ಯಾಯವನ್ನು ಸಹ ತೆಗೆದುಹಾಕಲಾಯಿತು.<a href="https://frontline.thehindu.com/the-nation/communalism/targeting-young-minds-bjp-plans-to-introduce-bhagavad-gita-as-subject-in-gujarat/article38467823.ece"> ಹಿಂದುತ್ವಕ್ಕೆ </a>ಸವಾಲಾಗುವ ಎಲ್ಲಾ ಮಾಹಿತಿಗಳನ್ನು ಕೇಂದ್ರ ಸರ್ಕಾರ ಪಠ್ಯ ಪುಸ್ತಕಗಳಿಂದ ಕಿತ್ತುಹಾಕಿದೆ</p>



<p>ಕೇಂದ್ರ ಸರ್ಕಾರವು 2017 ರಲ್ಲಿ ಸ್ಥಾಪಿಸಿದ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಯು (Higher Education Financing Agency) UGC ಯ ಧನಸಹಾಯಕ್ಕೆ ಸಂಬಂಧಿಸಿದ ಹಲವಾರು ಕೆಲಸಗಳನ್ನು ತಾನು ವಹಿಸಿಕೊಂಡಿದೆ. ಸರ್ಕಾರವು ಹಣಕಾಸಿನ ವಿಧಾನವನ್ನು ಅನುದಾನದಿಂದ ಸಾಲಕ್ಕೆ ಬದಲಾಯಿಸಿತು. ಇದರಿಂದಾಗಿ ಅನೇಕ ಕೇಂದ್ರೀಯ ಸಂಸ್ಥೆಗಳು <a href="https://scroll.in/article/1047185/how-students-are-repaying-the-loans-that-universities-are-taking">ಸಾಲಗಳನ್ನು&nbsp; ಮರುಪಾವತಿಸಲು</a> ಹೆಣಗಾಡುವಂತೆ ಮಾಡಿತು. ಸಂಸ್ಥೆಗಳ ಆಡಳಿತ ಮಂಡಳಿ ಶುಲ್ಕವನ್ನು ಹೆಚ್ಚಿಸಲು ಅಥವಾ ಶಿಕ್ಷಣದ ಇತರ ಅಂಶಗಳಲ್ಲಿ ರಾಜಿ ಮಾಡಿಕೊಳ್ಳುವಂತೆ ಮಾಡಿತು.</p>



<p>ಸರ್ಕಾರವು &#8220;ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್&#8221; ಅನ್ನು ಗುರುತಿಸಿ, ಅವುಗಳನ್ನು ವಿಶ್ವ ದರ್ಜೆಯ ವಿಶ್ವವಿದ್ಯಾನಿಲಯಗಳಾಗಿ ಅಭಿವೃದ್ಧಿ ಪಡಿಸಲು ಯೋಜನೆಯನ್ನು ಹಾಕಿಕೊಂಡಿತು. ನಿಮಗೆ ನೆನಪಿರಬಹುದು, ಮುಕೇಶ್‌ ಅಂಬಾನಿ, ನೀತಾ ಅಂಬಾನಿ ಒಡೆತನದ <a href="https://scroll.in/article/886166/explainer-how-reliances-jio-institute-was-chosen-as-an-institution-of-eminence">ಜಿಯೋ ಯುನಿವರ್ಸಿಟಿ</a> ಕೋರ್ಸ್‌ ಆರಂಭಿಸುವ ಮೊದಲೇ, ಹುಟ್ಟುವ ಮೊದಲೇ ಮೋದಿ ಸರ್ಕಾರದಿಂದ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಎಂದು ಪರಿಗಣಿಸಲ್ಪಟ್ಟಿತು.</p>



<p>ಆದರೆ ಅನೇಕ ಟೀಕೆ- ದೂರುಗಳಿಂದಾಗಿ <a href="https://www.universityworldnews.com/post.php?story=20220930130425671">ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ </a>ಯೋಜನೆ ನನೆಗುದಿಗೆ ಬಿದ್ದಿದೆ. 2019 ರಲ್ಲಿ, ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ 2024 ರ ವೇಳೆಗೆ 50 ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಅನ್ನು ಗುರುತಿಸುವುದಾಗಿ ಹೇಳಿತ್ತು. ಆದರೆ ಇದುವರೆಗೆ ಆಗಿದ್ದು 20 ಶಿಕ್ಷಣ ಸಂಸ್ಥೆಗಳು ಮಾತ್ರ.</p>



<p>ತನ್ನ 2014 ರ ಪ್ರಣಾಳಿಕೆಯಲ್ಲಿ, ಭಾರತೀಯ ವಿಶ್ವವಿದ್ಯಾನಿಲಯಗಳನ್ನು &#8220;ಜಾಗತಿಕ ವಿಶ್ವವಿದ್ಯಾನಿಲಯಗಳಿಗೆ ಸಮಾನವಾಗಿ&#8221; ಬೆಳೆಸಲು ಶೈಕ್ಷಣಿಕ ಮತ್ತು ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದಾಗಿ ಸರ್ಕಾರ ಹೇಳಿದೆ. ಹಾಗಿದ್ದೂ ವಿಜ್ಞಾನ ಸಂಸ್ಥೆಗಳು ಮೋದಿ ಆಡಳಿತದ ಅಡಿಯಲ್ಲಿ ಸಂಕಷ್ಟಕ್ಕೆ ಸಿಲುಕಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ಗೆ ಫಂಡ್‌ನಲ್ಲಿ 50% ಭಾಗವನ್ನು ಸ್ವತಃ ಸಂಗ್ರಹಿಸಲು, ಉದ್ಯಮಿಗಳಿಂದ ಮತ್ತು ಕೈಗಾರಿಕೆಗಳಿಂದ ಸಂಗ್ರಹಿಸಲು ಹೇಳಲಾಯ್ತು. <a href="https://www.thehindu.com/news/national/csir-faces-fund-crunch-asks-labs-to-look-outside/article18718763.ece">ಇದು ಬೃಹತ್ ಪ್ರಮಾಣದ ಫಂಡ್‌ನ ಕೊರತೆಗೆ ಕಾರಣವಾಯಿತು.&nbsp;</a></p>



<p>ಸರ್ಕಾರವು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 10% ಮೀಸಲಾತಿಯನ್ನು ನೀಡಿತು. ಈ ಸಂಸ್ಥೆಗಳಿಗೆ ಹೆಚ್ಚಿನ ಸೀಟುಗಳನ್ನು ಸೃಷ್ಟಿಸಲು ಹೇಳಲಾಯ್ತು. ಆದರೆ, <a href="https://www.newindianexpress.com/nation/2019/Apr/03/central-institutes-face-admission-for-ews-quota-seats-in-current-academic-year-without-funds-1959587.html">EWS ಕೋಟಾದ ಸೀಟುಗಳನ್ನು ಹೆಚ್ಚಿಸಲು ಹಣವನ್ನೇ ಸರ್ಕಾರ ಕೊಡಲಿಲ್ಲ.</a></p>



<p><a href="https://scroll.in/article/1049603/a-dalit-scholars-death-and-brahmin-dominance-at-indias-premier-scientific-institute">ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ</a> ಹೆಚ್ಚಾಗುತ್ತಲೇ ಇದೆ. <a href="https://sabrangindia.in/wp-content/uploads/2023/12/loksabhaquestions_annex_1714_AU188-1.pdf">ಶಿಕ್ಷಣ ಸಚಿವರು ಲೋಕಸಭೆಯಲ್ಲಿ</a> ಡಿಸೆಂಬರ್ 2023 ರಲ್ಲಿ ನೀಡಿದ ಉತ್ತರದ ಪ್ರಕಾರ, ಹಿಂದಿನ ಐದು ವರ್ಷಗಳಲ್ಲಿ, 2,622 ಪರಿಶಿಷ್ಟ ಪಂಗಡ, 2,424 ಪರಿಶಿಷ್ಟ ಜಾತಿ ಮತ್ತು 4,596 ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಿಂದ ಡ್ರಾಪ್‌ಔಟ್‌ ಆಗಿದ್ದಾರೆ. (<a href="https://scroll.in/article/1018995/why-phds-are-a-minefield-for-indias-marginalised-students">ನೋಡಿ</a>)</p>



<p>ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೌಲಾನಾ ಆಜಾದ್ ಫೆಲೋಶಿಪ್ ಅನ್ನು ಸಹ ಕೇಂದ್ರ ಸರ್ಕಾರ ನಿಲ್ಲಿಸಿದೆ. ಇದಲ್ಲದೆ, ಇದು ರಾಷ್ಟ್ರೀಯ ಸಾಗರೋತ್ತರ ಸ್ಕಾಲರ್‌ಶಿಪ್‌ನಿಂದ ಮಾನವಿಕ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಹೊರಗಿಟ್ಟಿದೆ. ಅಂದರೆ ವಿದೇಶಗಳಲ್ಲಿ ಹೋಗಿ ಓದಲು ಕನಸು ಕಂಡ ಬಡ ವಿದ್ಯಾರ್ಥಿಗಳ ಮೇಲೆ ಮೋದಿ ಸರ್ಕಾರ ಚಪ್ಪಡಿಕಲ್ಲು ಹಾಕಿದೆ. ಇದು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿ ಮಾಡಲಾಗಿದೆ.</p>



<p>ಕಳೆದ ಒಂದು ದಶಕದಲ್ಲಿ <a href="https://www.indiatoday.in/india/story/india-bloc-backed-student-outfits-protest-against-education-policy-in-delhi-2488111-2024-01-13">ಖಾಸಗೀಕರಣ,</a> ಫೆಲೋಶಿಪ್‌ಗಳ <a href="https://www.aljazeera.com/news/2015/12/29/indian-students-protest-scrapping-of-fellowships">ರದ್ದತಿ</a>, ಸ್ಟೈಫಂಡ್‌ಗಳಲ್ಲಿ <a href="https://www.thehindu.com/news/cities/Delhi/students-protest-against-delay-in-scholarships/article33055331.ece">ವಿಳಂಬ</a> , <a href="https://timesofindia.indiatimes.com/city/pune/funding-cuts-hurt-top-scientific-institutions/articleshow/69208587.cms">ಸಂಶೋಧನೆಗಳಿಗೆ ಫಂಡ್‌ </a>ಕೊಡದೇ ಇರುವುದು, <a href="https://timesofindia.indiatimes.com/city/delhi/jnu-hostel-students-protest-lack-of-drinking-water-for-past-20-days/articleshow/93508613.cms">ಮೂಲಸೌಕರ್ಯಗಳ ಕೊರತೆ</a> ಮತ್ತು ಕ್ಯಾಂಪಸ್‌ಗಳಲ್ಲಿ <a href="https://www.deccanherald.com/india/saffronising-the-campus-students-plan-protest-at-hansraj-college-over-ban-on-non-veg-food-1182206.html">ಕೇಸರಿಕರಣದಂತಹ</a> ಅನೇಕ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಆದರೆ ಎಮ್ಮೆ ಚರ್ಮದ ಮೋದಿ ಸರ್ಕಾರಕ್ಕೆ ಯಾವುದೂ ನಾಟುತ್ತಿಲ್ಲ.</p>
]]></content:encoded>
					
		
		
			</item>
		<item>
		<title>ಜೈನ ಧರ್ಮದ ಬೋಧನೆಗಳು</title>
		<link>https://peepalmedia.com/teachings-of-jainism2/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 30 Jan 2024 05:32:03 +0000</pubDate>
				<category><![CDATA[ಅಂಕಣ]]></category>
		<category><![CDATA[bahubali]]></category>
		<category><![CDATA[Bharath]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[jain]]></category>
		<category><![CDATA[jainism]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mahavir]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[philosophy]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[story]]></category>
		<category><![CDATA[teachings]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35476</guid>

					<description><![CDATA[ಜೈನ ಧರ್ಮಾವಲಂಬಿಗಳ ನಂಬಿಕೆಯ ಪ್ರಕಾರ ಜೈನಮತ ಅತ್ಯಂತ ಪ್ರಾಚೀನ ವಾದುದೆಂದೂ ವೃಷಭದೇವನೇ ಆದಿಯಾಗಿ ಇಪ್ಪತ್ನಾಲ್ಕು ತೀರ್ಥಂಕರರು ಈ ಮತವನ್ನು ಪ್ರಚಾರ ಮಾಡಿದರೆಂದೂ ತಿಳಿದುಬರುತ್ತದೆ. ಆದರೆ ಮೊದಲಿನ ಇಪ್ಪತ್ತೆರಡು ತೀರ್ಥಂಕರರು ಪೌರಾಣಿಕ ವ್ಯಕ್ತಿಗಳೆಂದು ವೇದ್ಯವಾಗುತ್ತದೆ. ಇಪ್ಪತ್ತೂರನೇ ತೀರ್ಥಂಕರನಾದ ಪಾರ್ಶ್ವ ನಾಥ ಕ್ರಿ.ಪೂ. ಎಂಟನೇ ಶತಮಾನದಲ್ಲಿ ಜೀವಿಸಿದ್ದ. ಕ್ಷತ್ರಿಯ ವರ್ಗಕ್ಕೆ ಸೇರಿದ ಪಾರ್ಶ್ವ ನಾಥ ತನ್ನ ೩೦ನೇ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ ಕಠಿಣ ತಪಸ್ಸನ್ನು ಆಚರಿಸಿದ. ತಪಶ್ಚರ್ಯೆಯಿಂದ ತನಗೆ ಸಿದ್ಧಿಸಿದ ಜ್ಞಾನವನ್ನು ಇತರರಿಗೆ ಪ್ರಸಾರ ಮಾಡಿದ. ತನ್ನ ತತ್ತ್ವಗಳನ್ನು ಪ್ರಸಾರ [&#8230;]]]></description>
										<content:encoded><![CDATA[
<pre class="wp-block-code"><code><strong>ಜೈನಮತವು ಅಹಿಂಸಾ ಪರಿಪಾಲನೆ, ಸತ್ಯ ನುಡಿಯುವುದು, ಕಳ್ಳತನ ಮಾಡದಿರುವುದು ಮತ್ತು ಆಸ್ತಿಯ ವ್ಯಾಮೋಹವನ್ನು ತ್ಯಜಿಸುವುದು-ಇವುಗಳು ಪಾರ್ಶ್ವನಾಥ ಬೋಧಿಸಿದ ಮುಖ್ಯ ತತ್ತ್ವಗಳು</strong>
- <strong>ಲೇಖಕರು:</strong> ಗೌತಮ ಆವರ್ತಿ</code></pre>



<p>ಜೈನ ಧರ್ಮಾವಲಂಬಿಗಳ ನಂಬಿಕೆಯ ಪ್ರಕಾರ ಜೈನಮತ ಅತ್ಯಂತ ಪ್ರಾಚೀನ ವಾದುದೆಂದೂ ವೃಷಭದೇವನೇ ಆದಿಯಾಗಿ ಇಪ್ಪತ್ನಾಲ್ಕು ತೀರ್ಥಂಕರರು ಈ ಮತವನ್ನು ಪ್ರಚಾರ ಮಾಡಿದರೆಂದೂ ತಿಳಿದುಬರುತ್ತದೆ. ಆದರೆ ಮೊದಲಿನ ಇಪ್ಪತ್ತೆರಡು ತೀರ್ಥಂಕರರು ಪೌರಾಣಿಕ ವ್ಯಕ್ತಿಗಳೆಂದು ವೇದ್ಯವಾಗುತ್ತದೆ. ಇಪ್ಪತ್ತೂರನೇ ತೀರ್ಥಂಕರನಾದ ಪಾರ್ಶ್ವ ನಾಥ ಕ್ರಿ.ಪೂ. ಎಂಟನೇ ಶತಮಾನದಲ್ಲಿ ಜೀವಿಸಿದ್ದ. ಕ್ಷತ್ರಿಯ ವರ್ಗಕ್ಕೆ ಸೇರಿದ ಪಾರ್ಶ್ವ ನಾಥ ತನ್ನ ೩೦ನೇ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ ಕಠಿಣ ತಪಸ್ಸನ್ನು ಆಚರಿಸಿದ. ತಪಶ್ಚರ್ಯೆಯಿಂದ ತನಗೆ ಸಿದ್ಧಿಸಿದ ಜ್ಞಾನವನ್ನು ಇತರರಿಗೆ ಪ್ರಸಾರ ಮಾಡಿದ. ತನ್ನ ತತ್ತ್ವಗಳನ್ನು ಪ್ರಸಾರ ಮಾಡಲು ಭಿಕ್ಷುಗಳನ್ನು ನೇಮಿಸಿದ. ಅಹಿಂಸಾ ಪರಿಪಾಲನೆ, ಸತ್ಯ ನುಡಿಯುವುದು, ಕಳ್ಳತನ ಮಾಡದಿರುವುದು ಮತ್ತು ಆಸ್ತಿಯ ವ್ಯಾಮೋಹವನ್ನು ತ್ಯಜಿಸು ವುದು-ಇವುಗಳು ಪಾರ್ಶ್ವನಾಥ ಬೋಧಿಸಿದ ಮುಖ್ಯ ತತ್ತ್ವಗಳು. ವರ್ಧಮಾನ ಮಹಾ ವೀರನ ಮಾತಾಪಿತೃಗಳು ಪಾರ್ಶ್ವನಾಥನ ಪಂಥಕ್ಕೆ ಸೇರಿದವರಾಗಿದ್ದರು.</p>



<p>ವರ್ಧಮಾನ ಮಹಾವೀರ : ವೈಶಾಲಿಯ ಉಪನಗರವಾದ ಕುಂಡಲವನದಲ್ಲಿ ವಾಸಿಸುತ್ತಿದ್ದ ಜ್ಞಾತ್ರಿಕ ಕ್ಷತ್ರಿಯ ಪಂಗಡದ ಸಿದ್ದಾರ್ಥ ಮತ್ತು ತ್ರಿಶಾಲಿ ಎಂಬುವವರ ಮಗನಾದ ವರ್ಧಮಾನ ಕ್ರಿ.ಪೂ. ಸುಮಾರು ೫೪೦ ರಲ್ಲಿ ಹುಟ್ಟಿದ. ವರ್ಧಮಾನನಿಗೆ ಬಾಲ್ಯದಲ್ಲಿ ಸೂಕ್ತ ಶಿಕ್ಷಣ ಕೊಡಲಾಗಿತ್ತು. ಅವನು ಪ್ರಾಪ್ತವಯಸ್ಕನಾದಾಗ &#8216;ಯಶೋದ&#8217; ಎಂಬ ಕನೈಯನ್ನು ವರಿಸಿದ. ಅನೇಕ ವರ್ಷಗಳ ಕಾಲ ಅವರ ದಾಂಪತ್ಯ ಜೀವನ ಮುಂದುವರಿಯಿತು. ಅವರಿಗೆ ಒಬ್ಬಳು ಪುತ್ರಿಯೂ ಇದ್ದಳು. ಅವಳನ್ನು ಜಾಮಾಲಿ ಎಂಬುವವ ನಿಗೆ ಕೊಟ್ಟು, ವಿವಾಹಮಾಡಿದ್ದರು. ಜಾಮಾಲಿ ಅನಂತರ ವರ್ಧಮಾನನಿಂದ ದೀಕ್ಷೆ ಪಡೆ ದವರಲ್ಲಿ ಒಬ್ಬ. ವರ್ಧಮಾನನ ೩೦ ನೇ ವಯಸ್ಸಿನಲ್ಲಿ ಅವನ ಮಾತಾಪಿತೃಗಳು ಮರಣ ಹೊಂದಿದರು. ಮಾತಾಪಿತೃಗಳ ಅಗಲುವಿಕೆಯ ದುಃಖದಿಂದ ಬಹುವಾಗಿ ನೊಂದ ವರ್ಧ &#8211; ಮಾನ ಸಂಸಾರ ತ್ಯಾಗಮಾಡಿ ತಪಶ್ಚರ್ಯೆ ಕೈಗೊಂಡ. ಸುಮಾರು ೧೩ ವರ್ಷಗಳ ಕಾಲ ಅವನು ಕಠಿಣವಾದ ತಪಸ್ಸನ್ನಾಚರಿಸಿದ. ಈ ಅವಧಿಯ ಕೊನೆಯಲ್ಲಿ ಬಿಹಾರದ ಪಾರ್ಶ್ವ ತ ನಾಥ ಗುಡ್ಡದ ಬಳಿಯಲ್ಲಿ ವರ್ಧಮಾನ ಪರಮಜ್ಞಾನ ಪಡೆದ. ಅಂದಿನಿಂದ ಅವನಿಗೆ ಮಹಾವೀರ ಎಂಬ ಹೆಸರಾಯಿತು. ಅನಂತರ ಮಹಾವೀರ ಮತಪ್ರಚಾರ ಕಾರ್ಯದಲ್ಲಿ ತೊಡಗಿದ. ಅವನು ತನ್ನ ೭೨ನೇ ವಯಸ್ಸಿನಲ್ಲಿ ಪಾವಾ ಗ್ರಾಮದ ಬಳಿ ಕ್ರಿ.ಪೂ. ಸುಮಾರು ೨ ೪೬೮ ರಲ್ಲಿ ಕೈವಲ್ಯ ಹೊಂದಿದ. ಮಹಾವೀರ ಪ್ರಚಾರಮಾಡಿದ ಧರ್ಮಕ್ಕೆ ಜೈನಮತವೆಂದು &#8211; ಹೆಸರಾಗಿದೆ.</p>



<p>ಜೈನಮತದ ಮುಖ್ಯ ತತ್ತ್ವಗಳು: ಮಹಾವೀರ ಪಾರ್ಶ್ವನಾಥ ಬೋಧಿಸಿದ ತತ್ತ್ವಗಳ ಜೊತೆಗೆ ಕೆಲವು ಅಂಶಗಳನ್ನು ಸೇರಿಸಿದ. ಜೈನಮತದ ಮುಖ್ಯ ತತ್ತ್ವಗಳೇ ನೆಂದರೆ: (೧) ಅಸತ್ಯ ನುಡಿಯಬಾರದು, (೨) ಕಳ್ಳತನ ಮಾಡಬಾರದು, (೩) ಜೀವರಾಶಿಗಳನ್ನು ಹಿಂಸಿಸಬಾರದು, (೪) ಆಸ್ತಿಯನ್ನು ಹೊಂದಬಾರದು, (೫) ತಪಶ್ಚರೆಯನ್ನು ಅನುಸರಿಸಬೇಕು. ಮಹಾವೀರ ವೇದಗಳನ್ನು ಪ್ರಮಾಣವೆಂದಾಗಲಿ, ಅಪೌರುಷೇಯವೆಂದಾಗಲಿ ಒಪ್ಪಲಿಲ್ಲ. ಜಗತ್ತು ಭಗವಂತನ ನಿಯಾಮಕ ಮತ್ತು ಲೀಲೆ ಎಂಬುದನ್ನು ಜೈನಮತ ಪುರಸ್ಕರಿಸಲಿಲ್ಲ. ಜೈನಮತ ಅಹಿಂಸೆಗೆ ವಿಶೇಷ ಪ್ರಾಧಾನ್ಯ ಕೊಟ್ಟಿದೆ.</p>



<p>ಜೈನ ತತ್ತ್ವದ ಪ್ರಕಾರ ಆತ್ಮ ಪರಿಶುದ್ಧವಾದುದು, ಪರಿಶುದ್ಧವಾದ ಆತ್ಮವನ್ನು ಪುದ್ದಲ ಹೊಕ್ಕು ಅಶುದ್ಧಗೊಳಿಸುವುದರಿಂದ ಸಂಸಾರ ಬಂಧನವುಂಟಾಗುತ್ತದೆ. ಕಠಿಣ ತಪಸ್ಸನ್ನಾಚರಿಸುವುದರಿಂದ ಪುನಃ ಆತ್ಮ ಪರಿಶುದ್ಧವಾಗಿ ಮೋಕ್ಷ ಪಡೆಯುವುದು. ಸಮ್ಯಕ್ ಆಚಾರ, ಸಮ್ಯಕ್ ದರ್ಶನ, ಸಮ್ಯಕ್ ಚಿಂತನೆ ಇವು ಜೈನಮತದ ತ್ರಿರತ್ನಗಳು. ಜೈನಯತಿಗಳು ಕಠಿಣವಾದ ನಿಯಮಗಳನ್ನು ಆಚರಿಸಬೇಕು. ಗೃಹಸ್ಥರು ಜೈನಮತದ</p>



<p>ಮುಖ್ಯ ನಿಯಮಗಳ ಜೊತೆಗೆ ಪಂಚಪರಮೇಷ್ಠಿ ಯಜ್ಞವನ್ನಾಚರಿಸಬೇಕು. ಜೈನಮತದ ಪ್ರಚಾರ : ಮಹಾವೀರನಿಗೆ ಹನ್ನೊಂದು ಮಂದಿ ಆಪ್ತ ಶಿಷ್ಯ ರಿದ್ದರು. ಅವರಲ್ಲಿ ಸುಧಮ್ಮನ್ ಎಂಬುವನೊಬ್ಬನ ಹೊರತಾಗಿ ಉಳಿದವರು ಮಹಾವೀರನು ಜೀವಿಸಿರುವಾಗಲೆ ಮರಣ ಹೊಂದಿದರು. ಸುಧಮ್ಮನ್ ಮಹಾವೀರನ ಮರಣಾನಂತರ ಜೈನ ಯತಿಗಳ ಸಂಘದ ಮುಖ್ಯನಾದ. ಅವನ ಅನಂತರ ಒಬ್ಬೊಬ್ಬರಾಗಿ ಅನೇಕ ಆಚಾರೈರು ಶ್ರವಣ ಸಂಘದ ಮುಖ್ಯರಾಗಿದ್ದರು. ಅವರಲ್ಲಿ ಆರನೆಯವನಾದ ಭದ್ರಬಾಹು ಚಂದ್ರಗುಪ್ತ ಮೌಯ್ಯನ ಸಮಕಾಲೀನನಾಗಿದ್ದ. ಚಂದ್ರಗುಪ್ತಮೌಯ್ಯನ ಆಳ್ವಿಕೆಯ ಕೊನೆಗಾಲದಲ್ಲಿ ಮಗಧ ಸಾಮ್ರಾಜ್ಯದಲ್ಲಿ ಹನ್ನೆರಡು ವರ್ಷಗಳ ಅವಧಿಯ ಕ್ಷಾಮ ತಲೆದೋರಿತೆಂದೂ, ಆ ಸಮಯದಲ್ಲಿ ಮೌಲ್ಯ ಚಕ್ರವರ್ತಿ ಸಿಂಹಾಸನ ತ್ಯಾಗಮಾಡಿ ಭದ್ರಬಾಹು ಮತ್ತು ಇತರ ಅನೇಕ ಜೈನಭಿಕ್ಷುಗಳೊಡನೆ ದಕ್ಷಿಣಕ್ಕೆ ಬಂದು ಮೈಸೂರು ದೇಶದ ಶ್ರವಣಬೆಳಗೊಳದಲ್ಲಿ ತಂಗಿದನೆಂದೂ ತಿಳಿದುಬರುತ್ತದೆ. ಶ್ರವಣಬೆಳಗೊಳದ ಚಿಕ್ಕ ಬೆಟ್ಟದಲ್ಲಿರುವ ಚಂದ್ರಗುಪ್ತ ಬಸದಿ ಈ ಘಟನೆಯ ನೆನಪಾಗಿ ಇಂದಿಗೂ ಉಳಿದುಬಂದಿದೆ. ಭದ್ರಬಾಹುವಿನೊಡನೆ ಶ್ರವಣಬೆಳಗೊಳಕ್ಕೆ ಬಂದ ಮೌಲ್ಯ ಚಕ್ರವರ್ತಿ ಚಂದ್ರಗುಪ್ತನ ಮೊಮ್ಮಗ ಸಂಪ್ರಾತಿ ಚಂದ್ರಗುಪ್ತನಾಗಿರಬಹುದೆಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕ್ಷಾಮದ ಅವಧಿಯಲ್ಲಿ ಮಗಧರಾಜ್ಯದಲ್ಲೇ ನೆಲಸಿದ್ದ ಜೈನಭಿಕ್ಷುಗಳು ಒಂದು ಸಮ್ಮೇಳನ ನಡೆಸಿ ಆ ಸಮ್ಮೇಳನದ ನಿರ್ಣಯದ ಪ್ರಕಾರ ಜೈನದರ್ಶನದ ಹನ್ನೆರಡು ಅಂಗಗಳನ್ನೊಳಗೊಂಡ ಪವಿತ್ರಗ್ರಂಥಗಳನ್ನು ರಚಿಸಿದರು. ಅಲ್ಲದೆ ಬಿಳಿಬಟ್ಟೆಗಳನ್ನು ಧರಿಸುವ ಹಾಗೂ ಇತರ ಕೆಲವು ಪದ್ಧತಿಗಳನ್ನು ಅವರು ಆಚರಣೆಗೆ ತಂದುಕೊಂಡಿದ್ದರು. ಹಲವು ವರ್ಷಗಳ ಅನಂತರ ಭದ್ರ ಬಾಹು ಮತ್ತು ಅವನ ಅನುಯಾಯಿಗಳು ಮಗಧರಾಜ್ಯಕ್ಕೆ ಹಿಂದಿರುಗಿದರು. ತಮ್ಮ ಗೈರುಹಾಜರಿಯಲ್ಲಿ ಆಚರಣೆಗೆ ಬರದಿದ್ದ ನಿಯಮಗಳನ್ನು ಅವರು ಒಪ್ಪಲಿಲ್ಲ. ಆದ್ದರಿಂದ</p>



<p>ಜೈನಮತ &#8216;ದಿಗಂಬರ&#8217; ಮತ್ತು &#8216;ಶ್ವೇತಾಂಬರ&#8217; ಎಂಬ ಎರಡು ಶಾಖೆಗಳಾಗಿ ಮಾಲ್ಪಟ್ಟಿತು. ಜೈನಮತ ಕ್ರಿ.ಪೂ. ೪ನೇ ಶತಮಾನದ ವೇಳೆಗೆ ದಕ್ಷಿಣ ಭಾರತದಲ್ಲಿ ಪ್ರಚಾರ ವಾಯಿತು. ತಮಿಳು ಸಂಘಂ&#8217;ಕಾಲದಲ್ಲಿ ಮಧುರೆಯ ಪಾಂಡ್ಯರು ಜೈನಮತಕ್ಕೆ ಪ್ರೋತ್ಸಾಹ ನೀಡಿದರು. ಅನೇಕ ಜೈನಕವಿಗಳು ತಮಿಳು ಗ್ರಂಥಗಳನ್ನು ರಚಿಸಿರುವರು. ಕ್ರಿ.ಶ. ಎರಡನೇ ಶತಮಾನದಲ್ಲಿ ಕಳಿಂಗದ ಖಾರವೇಲ ಜೈನಮತಕ್ಕೆ ವಿಶೇಷ ಪ್ರೋತ್ಸಾಹ ನೀಡಿದ. ಕನ್ನಡ ನಾಡಿನ ಅರಸು ಮನೆತನಗಳಾದ ಗಂಗರು, ರಾಷ್ಟ್ರಕೂಟರು, ಹೊಯ್ಸಳರು ಜೈನಮತಕ್ಕೆ ವಿಶೇಷ ಪ್ರೋತ್ಸಾಹ ನೀಡಿದರು. ಈ ಮನೆತನಗಳ ಅನೇಕ ರಾಜರು ಜೈನಮತೀಯರಾಗಿ ದ್ದರು. ಸಿಂಹನಂದಿ ಕುಂದಕುಂದಾಚಾರ, ಪೂಜ್ಯಪಾದ ಮೊದಲಾದ ಪ್ರಸಿದ್ಧ ಜೈನಯತಿ ಗಳು ಸಂಸ್ಕೃತ ಭಾಷೆಯಲ್ಲಿ ದಾರ್ಶನಿಕ ಗ್ರಂಥಗಳನ್ನು ರಚಿಸಿದರು.</p>



<p>ತಲಕಾಡಿನ ಗಂಗರ ಕಾಲದಲ್ಲಿ ಕನ್ನಡನಾಡಿನಲ್ಲಿ ಜೈನಮತ ಸರ್ವತೋಮುಖ ಅಭಿ ವೃದ್ಧಿ ಹೊಂದಿತ್ತು. ಕ್ರಿ.ಶ. ೧೦ನೇ ಶತಮಾನದಲ್ಲಿ ಮಾರಸಿಂಹ ಗಂಗ ಮತ್ತು ಅವನ ಮಗ ರಾಚಮಲ್ಲನ ಅಮಾತ್ಯನಾಗಿದ್ದ ಚಾವುಂಡರಾಯ ಶ್ರವಣಬೆಳಗೊಳದ ಜಗತ್ರ ಸಿದ್ಧವಾದ ಏಕಶಿಲೆಯ ೫೮ ಅಡಿ ಎತ್ತರದ ಗೊಮ್ಮಟ ಪ್ರತಿಮೆಯನ್ನು ಕಡೆಸಿ ಸ್ಥಾಪಿಸಿದ. ಕನ್ನಡ ನಾಡಿನ ಬೇರೆಬೇರೆ ಸಂತತಿಗಳ ರಾಜರ ಆಸ್ಥಾನದಲ್ಲಿದ್ದ ಪಂಪ, ರನ್ನ, ಪೊನ್ನ, ಜನ್ನ ಮತ್ತು ಇತರ ಪ್ರಸಿದ್ಧ ಜೈನಕವಿಗಳು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಶ್ರೇಷ್ಠ ಗ್ರಂಥಗಳನ್ನು ರಚಿಸಿದ್ದಾರೆ.</p>



<p>ಮಧ್ಯಕಾಲೀನ ಯುಗದ ರಜಪೂತರು ಜೈನ ದಾರ್ಶನಿಕರಿಗೂ ವಿದ್ವಾಂಸರಿಗೂ ಪ್ರೋತ್ಸಾಹ ನೀಡಿದರು. ಆ ಕಾಲದಲ್ಲಿ ಮೌಂಟ್ ಅಬು ಬೆಟ್ಟಗಳ ಮೇಲೆ ಅಮೃತಶಿಲೆಯ ಜೈನ ದೇವಾಲಯ ನಿರ್ಮಾಣವಾಯಿತು. ಮೊಗಲ್ ಸಾಮ್ರಾಟ ಅಕ್ಟರ್‌ನ ಆಸ್ಥಾನದಲ್ಲಿ ಪ್ರಸಿದ್ಧ ಜೈನ ದಾರ್ಶನಿಕರಾದ ಹೀರವಿಜಯಸೂರಿ ಮೊದಲಾದವರಿದ್ದರು. ಹೀರವಿಜಯಸೂರಿಯು ಅಕ್ಟರ್ ಸಾಮ್ರಾಟನ ವಿಶೇಷ ಮನ್ನಣೆಗೆ ಪಾತ್ರನಾಗಿದ್ದನು. ಜೈನಮತ ಬೌದ್ಧ ಮತದಷ್ಟು ವಿಶೇಷವಾಗಿ ಭಾರತದಲ್ಲಿ ಹರಡಲೂ ಇಲ್ಲ, ಸಂಪೂರ್ಣವಾಗಿ ಚ್ಯುತಿ ಹೊಂದಲೂ ಇಲ್ಲ.</p>



<p>ಜೈನಮತ ಅಹಿಂಸಾ ತತ್ತ್ವವನ್ನು ವಿಶೇಷವಾಗಿ ಪ್ರಚಾರಪಡಿಸಿತು. ಪ್ರಾಂತೀಯ ಭಾಷೆಗಳ ಬೆಳವಣಿಗೆಗೆ ಬಹುಮಟ್ಟಿಗೆ ಸಹಕಾರಿಯಾಯಿತು. ಭಾರತೀಯ ತತ್ತ್ವಶಾಸ್ತ್ರಕ್ಕೆ ಜೈನಮತ ತನ್ನ ಕೊಡುಗೆ ಸಲ್ಲಿಸಿದೆ. ಜೈನ ಮತೀಯರು ಪ್ರಾರಂಭದಲ್ಲಿ ಅನೇಕ ಗುಹಾಲಯಗಳನ್ನು ನಿರ್ಮಿಸಿದರು. ಶ್ರವಣಬೆಳಗೊಳ, ಮೌಂಟ್ ಅಬು, ಹಳೇಬೀಡು ಮೊದಲಾದ ಸ್ಥಳಗಳಲ್ಲಿರುವ ಜೈನ ದೇವಾಲಯಗಳು ಇಂದಿಗೂ ಪ್ರಸಿದ್ಧವಾಗಿವೆ. ಮೈಸೂರು ರಾಜ್ಯದ ಧರ್ಮಸ್ಥಳದಲ್ಲಿ ಬೃಹತ್ ಗೊಮ್ಮಟ ಶಿಲಾ ಪ್ರತಿಮೆ ಜೈನ ಧರ್ಮದ ಸಾಕ್ಷಿಯಾಗಿ ನಿಂತಿದೆ.</p>



<p style="font-size:17px"><strong>ಲೇಖಕರು:</strong> ಗೌತಮ ಆವರ್ತಿ </p>



<p>ಆಕರ: ಡಾ. ಬಿ. ಷೇಕ್ ಅಲಿ ಜಿ. ಆರ್. ರಂಗಸ್ವಾಮಯ್ಯ ಡಾ. ಎ. ವಿ. ವೆಂಕಟರತ್ನಂ. ಡಾ. ಬಿ. ಮುದ್ದಾಚಾರಿ, VARF &#8211; Visual Anthropology Research Foundation Varf Viewfinder ಕನ್ನಡದ ಐತಿಹಾಸಿಕ ದಾಖಲೆಗಳು</p>



<p></p>
]]></content:encoded>
					
		
		
			</item>
		<item>
		<title>&#8216;ರಾಷ್ಟ್ರೀಯ ಭದ್ರತೆ&#8217;ಗಾಗಿ ಹೊಸ ಟೆಲಿಕಾಂ ಮಸೂದೆ: ಕೇಂದ್ರಕ್ಕಿದೆ ಸ್ವಾಧೀನ, ಸ್ಥಗಿತದ ಅಧಿಕಾರ</title>
		<link>https://peepalmedia.com/new-telecom-bill-for-national-security/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 19 Dec 2023 09:55:55 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[Ashwini Vaishnaw]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breakimg news]]></category>
		<category><![CDATA[centre]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Minister of Electronics and Information Technology]]></category>
		<category><![CDATA[narendra modi]]></category>
		<category><![CDATA[New Telecom Bill]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[telecom]]></category>
		<category><![CDATA[trendi]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[viral viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33882</guid>

					<description><![CDATA[ನವದೆಹಲಿ: &#8220;ರಾಷ್ಟ್ರೀಯ ಭದ್ರತೆ&#8221; ಉದ್ದೇಶಗಳಿಗಾಗಿ ಯಾವುದೇ ರೀತಿಯ ದೂರಸಂಪರ್ಕ ಜಾಲವನ್ನು ಸ್ವಾಧೀನಪಡಿಸಿಕೊಳ್ಳಲು, ನಿರ್ವಹಿಸಲು ಅಥವಾ ಅಮಾನತುಗೊಳಿಸಲು ಕೇಂದ್ರಕ್ಕೆ ಅವಕಾಶ ನೀಡುವ ದೂರಸಂಪರ್ಕ ಮಸೂದೆ 2023 ಅನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಸ್ತಾಪಿಸಿರುವ ಈ ಮಸೂದೆಯು 138 ವರ್ಷಗಳಷ್ಟು ಹಳೆಯದಾದ ಭಾರತೀಯ ಟೆಲಿಗ್ರಾಫ್ ಆಕ್ಟ್, ಇಂಡಿಯನ್ ವೈರ್‌ಲೆಸ್ ಟೆಲಿಗ್ರಾಫಿ ಆಕ್ಟ್ 1933 ಮತ್ತು ಟೆಲಿಗ್ರಾಫ್ ವೈರ್ಸ್ (ಕಾನೂನುಬಾಹಿರ ಸ್ವಾಧೀನ) ಕಾಯಿದೆ 1950 ಅನ್ನು ಬದಲಿಸಲಿದೆ. ಮಸೂದೆಗೆ ಅಗಸ್ಟ್‌ನಲ್ಲಿ [&#8230;]]]></description>
										<content:encoded><![CDATA[
<p><strong>ನವದೆಹಲಿ: </strong>&#8220;ರಾಷ್ಟ್ರೀಯ ಭದ್ರತೆ&#8221; ಉದ್ದೇಶಗಳಿಗಾಗಿ ಯಾವುದೇ ರೀತಿಯ ದೂರಸಂಪರ್ಕ ಜಾಲವನ್ನು ಸ್ವಾಧೀನಪಡಿಸಿಕೊಳ್ಳಲು, ನಿರ್ವಹಿಸಲು ಅಥವಾ ಅಮಾನತುಗೊಳಿಸಲು ಕೇಂದ್ರಕ್ಕೆ ಅವಕಾಶ ನೀಡುವ ದೂರಸಂಪರ್ಕ ಮಸೂದೆ 2023 ಅನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.</p>



<p>ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಸ್ತಾಪಿಸಿರುವ ಈ ಮಸೂದೆಯು 138 ವರ್ಷಗಳಷ್ಟು ಹಳೆಯದಾದ ಭಾರತೀಯ ಟೆಲಿಗ್ರಾಫ್ ಆಕ್ಟ್, ಇಂಡಿಯನ್ ವೈರ್‌ಲೆಸ್ ಟೆಲಿಗ್ರಾಫಿ ಆಕ್ಟ್ 1933 ಮತ್ತು ಟೆಲಿಗ್ರಾಫ್ ವೈರ್ಸ್ (ಕಾನೂನುಬಾಹಿರ ಸ್ವಾಧೀನ) ಕಾಯಿದೆ 1950 ಅನ್ನು ಬದಲಿಸಲಿದೆ.</p>



<p style="font-size:20px"><strong>ಮಸೂದೆಗೆ ಅಗಸ್ಟ್‌ನಲ್ಲಿ ಸಿಕ್ಕಿತ್ತು ಕೇಂದ್ರ ಸಂಪುಟದ ಒಪ್ಪಿಗೆ</strong></p>



<p>&#8220;ಯಾವುದೇ ಸಾರ್ವಜನಿಕ ತುರ್ತು ಪರಿಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ&#8221;, ಯಾವುದೇ ಸಂದೇಶವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು &#8220;ತಡೆಗಟ್ಟಬಹುದು ಅಥವಾ ತಡೆಹಿಡಿಯಬಹುದು&#8221; ಎಂದು ಈ ಮಸೂದೆ ಹೇಳುತ್ತದೆ.</p>



<p>ಸಾರ್ವಜನಿಕ ತುರ್ತುಸ್ಥಿತಿಯ ಸಂದರ್ಭದಲ್ಲಿ ಪ್ರತಿಕ್ರಿಯೆ ಮತ್ತು ರಿಕವರಿಗೆ ಅಧಿಕೃತವಾಗಿರುವ ಬಳಕೆದಾರರ ಅಥವಾ ಬಳಕೆದಾರರ ಗುಂಪಿನ ಸಂದೇಶಗಳನ್ನು ಆದ್ಯತೆಯ ಮೇಲೆ ರವಾನಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಬೇಕಾದ ಕಾರ್ಯವಿಧಾನವನ್ನು ಕೂಡ ಈ ಮಸೂದೆಯಲ್ಲಿ ನೀಡಲಾಗಿದೆ.&nbsp;</p>



<p>ಈ ಮಸೂದೆಯ ಮೂಲಕ ಕೇಂದ್ರ ಸರ್ಕಾರ &#8220;ದೂರಸಂಪರ್ಕ ಸೇವೆಗಳನ್ನು ಒದಗಿಸಲು&#8221;, ನೆಟ್‌ವರ್ಕ್‌ಗಳನ್ನು ನಿರ್ವಹಿಸಲು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಪರವಾನಗಿಗಳನ್ನು ನೀಡಲು ಸಾಧ್ಯವಾಗುತ್ತದೆ.&nbsp;</p>



<p>ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಸ್ಪೆಕ್ಟ್ರಮ್ ಅನ್ನು ಹಂಚುವ ವಿಧಾನದಲ್ಲಿ ಬದಲಾವಣೆಗಳನ್ನು ತರುವ ಮಸೂದೆಯು, ಹರಾಜು ಇಲ್ಲದೇ ಸ್ಪೆಕ್ಟ್ರಂ ಹಂಚಿಕೆ ಸೇವೆಗಳಿಗೆ ಆಡಳಿತಕ್ಕೆ ಬೆಲೆಯಲ್ಲಿ ನಿಗದಿಪಡಿಸುವ ಅವಕಾಶವನ್ನೂ ನೀಡುತ್ತದೆ.&nbsp;</p>



<p>ಕಾನೂನು ಬಾಹಿರ ಮೆಸೆಜ್‌ಗಳಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, 2 ಕೋಟಿ ರುಪಾಯಿ ವರೆಗೆ ದಂಡ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದು ಎಂದು ಈ ಮಸೂದೆ ಹೇಳುತ್ತದೆ. ಇದು ಟೆಲಿಕಾಂ ವಿವಾದಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಾಧಿಕರಣದ ರಚನೆಗೆ ಅವಕಾಶ ಒದಗಿಸುತ್ತದೆ.</p>



<p>ಕಳೆದ ವರ್ಷ ಬಿಡುಗಡೆಯಾದ ಕರಡಿನಲ್ಲಿ ದೂರಸಂಪರ್ಕ ಮಸೂದೆಯು ದೂರಸಂಪರ್ಕ ಸೇವೆಗಳ ವ್ಯಾಖ್ಯಾನದಲ್ಲಿ ವಾಟ್ಸಾಪ್, ಸಿಗ್ನಲ್ ಮತ್ತು ಟೆಲಿಗ್ರಾಮ್‌ನಂತಹ ಹೊಸ-ಯುಗದ ಓವರ್-ದಿ-ಟಾಪ್ ಅಥವಾ OTT, ಸಂವಹನ ಸೇವೆಗಳನ್ನೂ ಸೇರಿಸಲು ಪ್ರಸ್ತಾಪಿಸಲಾಗಿತ್ತು.</p>
]]></content:encoded>
					
		
		
			</item>
	</channel>
</rss>
