<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Vivekananda &#8211; Peepal Media</title>
	<atom:link href="https://peepalmedia.com/tag/vivekananda/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 13 Jan 2025 11:20:27 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Vivekananda &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸ್ವಾಮಿ ವಿವೇಕಾನಂದರು ಯುವ ಜನರಿಗೆ ಸ್ಪೂರ್ತಿಯ ಸಂಕೇತ: ಹೆಚ್.ಪಿ. ಸ್ವರೂಪ್</title>
		<link>https://peepalmedia.com/swami-vivekananda-is-a-symbol-of-inspiration-for-young-people-h-p-swarup/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 13 Jan 2025 11:20:27 +0000</pubDate>
				<category><![CDATA[Uncategorized]]></category>
		<category><![CDATA[ರಾಜ್ಯ]]></category>
		<category><![CDATA[ಹಾಸನ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[hasan]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Vivekananda]]></category>
		<guid isPermaLink="false">https://peepalmedia.com/?p=52229</guid>

					<description><![CDATA[ಹಾಸನ: ಭಾರತ ದೇಶದ ಶಕ್ತಿ ಏನೆಂಬುದನ್ನು ಇಡೀ ವಿಶ್ವಕ್ಕೆ ತಿಳಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದರವರಿಗೆ ಸಲ್ಲುತ್ತದೆ. ಜೊತೆಗೆ ವಿವೇಕಾನಂದರು ಯುವ ಜನರಿಗೆ ಸ್ಪೂರ್ತಿಯ ಸಂಕೇತ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಕರೆ ನೀಡಿದರು. ನಗರದ ತಣ್ಣೀರುಹಳ್ಳ ಬಳಿ ಇರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಎಸ್.ಡಿ.ಎಂ. ಕಾಲೇಜು ಅವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ [&#8230;]]]></description>
										<content:encoded><![CDATA[
<p><strong>ಹಾಸನ:</strong> ಭಾರತ ದೇಶದ ಶಕ್ತಿ ಏನೆಂಬುದನ್ನು ಇಡೀ ವಿಶ್ವಕ್ಕೆ ತಿಳಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದರವರಿಗೆ ಸಲ್ಲುತ್ತದೆ. ಜೊತೆಗೆ ವಿವೇಕಾನಂದರು ಯುವ ಜನರಿಗೆ ಸ್ಪೂರ್ತಿಯ ಸಂಕೇತ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಕರೆ ನೀಡಿದರು.</p>



<p>ನಗರದ ತಣ್ಣೀರುಹಳ್ಳ ಬಳಿ ಇರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಎಸ್.ಡಿ.ಎಂ. ಕಾಲೇಜು ಅವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ಸಪ್ತಾಹ &#8211; ೨೦೨೫ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಹೆಚ್ಚೆಚ್ಚು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಪುಸ್ತವನ್ನು ಆತ್ಮೀಯ ಸ್ನೇಹಿತನಾಗಿ ಮಾಡಿಕೊಳ್ಳಬೇಕು. ಪ್ರಸ್ತೂತದಲ್ಲಿ ಟಿವಿ ನೋಡಿದರೇ ನಿದ್ದೆ ಬರುವುದಿಲ್ಲ. ಆದರೇ ಪುಸ್ತಕ ನೋಡಿದರೇ ನಿದ್ದೆ ಬರುತ್ತದೆ. ವಿವೇಕಾನಂದರ ಪುಸ್ತಕ ಓದುವಾಗ ಇನ್ನಷ್ಟು ಓದ ಬೇಕೆನ್ನುವ ಆಸಕ್ತಿ ನನಗೂ ಕೂಡ ಬಂದಿದೆ. ಪ್ರಪಂಚದಲ್ಲಿಯೇ ಸ್ವಾಮಿ ವಿವೇಕಾನಂದರು ವಿದ್ವಾಂಶರು. ಲೋಕ ಸಂಚಾರಿ ಎಂದರೇ ತಪ್ಪಾಗಲಾರದು. ರಾಮಕೃಷ್ಣ ಪರಮವಂಶರ ಪ್ರೇರಣೆಯಿಂದ, ಒಡನಾಟದಿಂದ ಅವರು ಕೂಡ ಆಧ್ಯಾತ್ಮಿಕವಾಗಿ ಚಿಂತಕರಾಗಿದ್ದಾರೆ. ಅಮೇರಿಕಾದ ಚಿಕಾಗೋಕ್ಕೆ ಹೋಗಿ ಅಲ್ಲಿಂದ ರೈಲಿನಲ್ಲಿ ಹೋದ ಬಗೆ ಘಟನೆ ಹೇಳಿದರು. ಲಂಡನ್ ನಲ್ಲಿಯೂ ಕೂಡ ಒಂದು ಪುತ್ಥಳಿಯನ್ನು ಅನಾವರಣ ಮಾಡಿದ್ದು, ವಿವೇಕಾನಂದರ ಮೌಲ್ಯಗಳನ್ನು ನಾವುಗಳು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.</p>



<p>ನಗರಸಭೆ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಬಿಟ್ಟು ಹೋಗಿರುವ ಸಮಯ ಪಾಲನೆ, ಅವರ ಆದರ್ಶ, ಪ್ರೀತಿ ವಿಶ್ವಾಸ, ತತ್ವ ಸಿದ್ಧಾಂತ ಹಾಗೂ ಯಾವ ರೀತಿ ಬದುಕಬೇಕು ಎನ್ನುವ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯದ ಮೂಲಕ ಬದುಕು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.</p>



<p>ಶ್ರೀ ಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದ ನಿರ್ದೇಶಕ ಡಾ|| ಪ್ರಸನ್ನ ಎನ್. ರಾವ್ ಮತ್ತು ಕಾಲೇಜು ಪ್ರಾಂಶುಪಾಲರಾದ ಶೈಲಜಾ ಪ್ರಸನ್ನ ಮಾತನಾಡಿ, ವಿಶ್ವಕ್ಕೆ ಶಾಂತಿ ಸಂದೇಶ ಕೊಟಟ್ವರು. ಆದ್ಯಾತ್ಮಿಕ ಚಿಂತನೆ ಹೊಂದಿದವರ ಜನ್ಮ ದಿನಾಚರಣೆ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ವಿವೇಕಾನಂದರ ಮಾತಿನಂತೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಮಾತುಗಳನ್ನು ಇಂದಿಗೂ ಕೂಡ ಜೀವಂತವಾಗಿದ್ದು, ಸರ್ವರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದೇ ರೀತಿ ಜೀವನದಲ್ಲಿ ಗುರಿ ಇರಬೇಕು, ಪ್ರತಿನಿತ್ಯ ನನ್ನ ಕರ್ತವ್ಯ ಏನು, ಅದಕ್ಕೆ ಪೂರಕವಾಗಿ ನಾನು ಏನು ಮಾಡಿದ್ದೇನೆ. ನನ್ನ ಗುರಿಗಾಗಿ ನಾನು ಎಷ್ಟು ಶ್ರಮ ವಹಿಸುತ್ತೇವೆ ಎಂಬುದು ಬಹು ಮುಖ್ಯವಾಗಿರುತ್ತದೆ ಎಂದರು.</p>



<p>ಜಿಲ್ಲಾ ಯುವ ಸಬಲೀಕರಣ ಇಲಾಖೆ ಅಧಿಕಾರಿ ಸಿ.ಕೆ. ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿವೇಕಾನಂದವರು. ೧೮೯೩ ರಲ್ಲಿ ಚಿಕಾಗೊದಲ್ಲಿ ಮಾಡಿದ ಭಾಷಣ ಒಂದು ಇತಿಹಾಸ, ಜಗತ್ತಿಗೆ ಭ್ರಾತೃತ್ವದ ಮಹತ್ವವನ್ನು ತಿಳಿಸಿದರು. ಯುವ ಜನಾಂಗದ ಶಕ್ತಿಯ ಬಗ್ಗೆ ಪ್ರೇರಣಾ ಪೂರ್ವಕ ಅರಿವನ್ನು ಮೂಡಿಸಿದ್ದಾರೆ. ಸ್ವಾಮಿ ವಿವೇಕಾನಂದರ ಕರೆಯಂತೆ ಸತತ ಪರಿಶ್ರಮದಿಂದ ಗುರಿ ತಮ್ಮ ಮುಟ್ಟುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು. ಭಾರತ ದೇಶದ ಶಕ್ತಿ ಏನೆಂಬುದನ್ನು ಇಡೀ ವಿಶ್ವಕ್ಕೆ ತಿಳಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತದೆ ಎಂದರು. ಸ್ವಾಮಿ ವಿವೇಕಾನಂದರು ಯುವ ಜನರಿಗೆ ಸ್ಪೂರ್ತಿಯ ಸಂಕೇತ ಎಂದು ಹೇಳಿದರು.</p>



<p>ಕಾರ್ಯಕ್ರಮಕ್ಕೆ ಮೊದಲು ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆವರಣದ ಮುಖ್ಯಧ್ವಾರದಲ್ಲಿ ಬೆಳ್ಳಿ ಸಾರೋಟಿನಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವಿಟ್ಟು ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾತಂಡದೊಡನೆ ಕರೆತರಲಾಯಿತು. ಇದೆ ವೇಳೆ ಸ್ವಾಮಿ ವಿವೇಕಾನಂದರ ಕುರಿತು ಚಿತ್ರಕಲಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಕಲಾವಿದರಾದ ಕೆ.ಎನ್. ಶಂಕರಪ್ಪ, ಹೆಚ್.ಎಸ್. ಮಂಜುನಾಥ್ ಇತರರು ಬಿಡಿಸಿದ ವಿವೇಕಾನಂದರ ಚಿತ್ರಕ್ಕೆ ಗಣ್ಯರು ಬಣ್ಣ ತುಂಬಿ ಚಾಲನೆ ನೀಡಿದರು.</p>



<p>ಇದೆ ಸಂದರ್ಭದಲ್ಲಿ ಉತ್ತರ ಪ್ರದೇಶದ ಸತ್ಯನಾರಾಯಣ ಸಿಂಗ್, ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲರಾದ ಶೈಲಜಾ ಪ್ರಸನ್ನ ಇತರರು ಉಪಸ್ಥಿತರಿದ್ದರು. ಗುರುಬಸವರಾಜು ಕಾರ್ಯಕ್ರಮ ನಿರೂಪಿಸಿದರು.</p>
]]></content:encoded>
					
		
		
			</item>
		<item>
		<title>&#8220;ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು&#8230;&#8221;</title>
		<link>https://peepalmedia.com/dinesh-amin-writes-about-vivekananda/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 12 Jan 2024 10:23:59 +0000</pubDate>
				<category><![CDATA[ವಿಶೇಷ]]></category>
		<category><![CDATA[Dinesh Amin]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Swamy Vivekananda]]></category>
		<category><![CDATA[Vivekananda]]></category>
		<category><![CDATA[writing]]></category>
		<guid isPermaLink="false">https://peepalmedia.com/?p=34887</guid>

					<description><![CDATA[ಸ್ವಾಮಿ ವಿವೇಕಾನಂದರು ಒಬ್ಬ ದಡ್ಡ~ ವಿದ್ಯಾರ್ಥಿಯಾಗಿದ್ದರು.ವಿದ್ಯಾರ್ಥಿಗಳಿಗೆ ಬೋಧಿಸಲು ಬರುವುದಿಲ್ಲ~ ಎಂಬ ಕಾರಣಕ್ಕೆ ಶಿಕ್ಷಕನ ಉದ್ಯೋಗ ಕಳೆದುಕೊಂಡಿದ್ದರು. ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ಬಗೆಯ ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು. ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. ಜತೆಗೆ ದೇಶ-ವಿದೇಶದ ಮಾಂಸಾಹಾರಿ ಅಡುಗೆಯನ್ನು ಮಾಡುವ ಪಾಕಪ್ರಾವೀಣ್ಯತೆ ಹೊಂದಿದ್ದರು. ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರ ಮನೆಯಲ್ಲಿ ಭೇದ ಇಲ್ಲದೆ ಊಟ ಮಾಡುತ್ತಿದ್ದರು. ಸನ್ಯಾಸಿಯಾಗಿದ್ದುಕೊಂಡೇ [&#8230;]]]></description>
										<content:encoded><![CDATA[
<p>ಸ್ವಾಮಿ ವಿವೇಕಾನಂದರು ಒಬ್ಬ <code><strong>ದಡ್ಡ~ ವಿದ್ಯಾರ್ಥಿಯಾಗಿದ್ದರು.</strong></code>ವಿದ್ಯಾರ್ಥಿಗಳಿಗೆ ಬೋಧಿಸಲು ಬರುವುದಿಲ್ಲ~ ಎಂಬ ಕಾರಣಕ್ಕೆ ಶಿಕ್ಷಕನ ಉದ್ಯೋಗ ಕಳೆದುಕೊಂಡಿದ್ದರು.</p>



<p>ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ಬಗೆಯ ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು.</p>



<p>ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. ಜತೆಗೆ ದೇಶ-ವಿದೇಶದ ಮಾಂಸಾಹಾರಿ ಅಡುಗೆಯನ್ನು ಮಾಡುವ ಪಾಕಪ್ರಾವೀಣ್ಯತೆ ಹೊಂದಿದ್ದರು. ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರ ಮನೆಯಲ್ಲಿ ಭೇದ ಇಲ್ಲದೆ ಊಟ ಮಾಡುತ್ತಿದ್ದರು.</p>



<p>ಸನ್ಯಾಸಿಯಾಗಿದ್ದುಕೊಂಡೇ ಅವರು ಅಮೆರಿಕದ ಪ್ರಖ್ಯಾತ ಹೋಟೆಲ್‌ಗಳಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೆ ನಡೆಯುವ ಔತಣಕೂಟಗಳಲ್ಲಿ ಭಾಗವಹಿಸುತ್ತಿದ್ದರು….ಹೀಗೆ ಹೇಳುತ್ತಾ ಹೋದರೆ ಸ್ವಾಮಿ ವಿವೇಕಾನಂದರನ್ನು `ಹಿಂದೂ ಧರ್ಮದ ವೀರ ಸನ್ಯಾಸಿ~ ಎಂದು ಕೊಂಡಾಡುತ್ತಾ ಅವರ 150ನೇ ಜಯಂತಿ ಆಚರಣೆಯ ಸಂಭ್ರಮದಲ್ಲಿ ಮುಳುಗಿರುವವರಿಗೆ ಆಘಾತವಾದೀತು! ಆದರೆ ಇದು ಸತ್ಯ.</p>



<p>ಒಬ್ಬ ಶೂದ್ರನಾಗಿ ಹಿಂದೂ ಧರ್ಮದ ಪರಂಪರೆಗೆ ವಿರುದ್ಧವಾಗಿ ಸನ್ಯಾಸಿ ದೀಕ್ಷೆ ಪಡೆದ ವಿವೇಕಾನಂದರು, ಅದೇ ಪರಂಪರೆಯನ್ನು ಧಿಕ್ಕರಿಸಿ ಸಮುದ್ರ ಲಂಘನ ಮಾಡಿದ್ದರು.</p>



<p>ಸನಾತನಿಗಳು ದ್ವೇಷಿಸುತ್ತಿದ್ದ `ಮ್ಲೇಚ್ಛರ~ ಮನೆಗಳಲ್ಲಿಯೇ ಉಳಿದು ಉಂಡು ದಿನ ಕಳೆದಿದ್ದರು. ಇದಕ್ಕಾಗಿಯೇ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಹೋಗಿ ಹಿಂದಿರುಗಿದ ಅವರನ್ನು ಸ್ವಾಗತಿಸಲು ರಚಿಸಿದ ಸಮಿತಿಗೆ ಅಧ್ಯಕ್ಷರಾಗಲು ಹೈಕೋರ್ಟ್ ನ್ಯಾಯಮೂರ್ತಿ ಗುರುದಾಸ್ ಮುಖರ್ಜಿ ನಿರಾಕರಿಸಿದ್ದರು.</p>



<p>ಸನ್ಯಾಸಿಯಾದ ನಂತರವೂ ಬಹಳಷ್ಟು ಮೇಲ್ಜಾತಿ ಗಣ್ಯರು ಅವರನ್ನು <code><strong>ಸೋದರ~ನೆಂದು ಕರೆಯುತ್ತಿದ್ದರೇ ಹೊರತು</strong></code>ಸ್ವಾಮಿ~ ಎನ್ನುತ್ತಿರಲಿಲ್ಲ. ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆ, ಅಂಧ ಸಂಪ್ರದಾಯಗಳು, ದೇವಾಲಯಗಳಲ್ಲಿ ನಡೆಯುತ್ತಿರುವ ಡಾಂಭಿಕತನ, ಮತಾಂತರದ ಬಗ್ಗೆ ಅವರು ಬರೆದುದನ್ನು ಓದಿದರೆ ಅವರೊಬ್ಬ ಹಿಂದು ವಿರೋಧಿ ಎಂದು ಹಿಂದುತ್ವದ ಉಗ್ರ ಪ್ರತಿಪಾದಕರು ಸುಲಭದಲ್ಲಿ ಆರೋಪಿಸಬಹುದು.</p>



<p><code><strong>ತಲೆ ಮೇಲು, ಕಾಲು ಕೀಳು~ ಎಂದೆಲ್ಲ ಮನುಷ್ಯನ ಅಂಗಾಂಗಳಲ್ಲಿಯೇ ತಾರತಮ್ಯ ಕಾಣುತ್ತಿದ್ದ ಹಿಂದುಗಳ ನಡವಳಿಕೆಯಿಂದ ರೋಸಿಹೋಗಿದ್ದ ಅವರು, ಮನುಷ್ಯನಿಗೆ</strong></code>ಮುಸ್ಲಿಂ ದೇಹ ಮತ್ತು ವೇದಾಂತದ ಮೆದುಳು~ ಇರಬೇಕೆಂದು ಹೇಳುತ್ತಿದ್ದರು.</p>



<p>ಮುಸ್ಲಿಂ ಮನೆಯಲ್ಲಿ ಊಟಮಾಡಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಅವರ ಅಭಿಮಾನಿ ಖೇತ್ರಿಯ ಮಹಾರಾಜನಿಗೆ ವಿವೇಕಾನಂದರು `ನಾನು ಭಂಗಿಗಳ ಜತೆ ಕೂತು ಕೂಡಾ ಊಟಮಾಡಬಲ್ಲೆ. ನಿಮ್ಮಂತಹವರ ಬಗ್ಗೆ ನಾನು ಹೆದರಲಾರೆ. ನಿಮಗೆ ದೇವರು ಇಲ್ಲವೇ ಧರ್ಮದ ಬಗ್ಗೆ ಗೊತ್ತಿಲ್ಲ~ ಎಂದು ತಿರುಗೇಟು ನೀಡಿದ್ದರು.</p>



<p>`ಜೀಸಸ್ ಬದುಕಿದ್ದ ದಿನಗಳಲ್ಲಿ ನಾನೇನಾದರೂ ಪ್ಯಾಲೆಸ್ತೀನ್‌ನಲ್ಲಿದ್ದಿದ್ದರೆ ಕಣ್ಣಿರಿನಿಂದಲ್ಲ, ನನ್ನ ಹೃದಯದಿಂದ ರಕ್ತಬಸಿದು ಆತನ ಪಾದ ತೊಳೆಯುತ್ತಿದ್ದೆ..~ ಎಂದು ಭಾವುಕರಾಗಿ ಅವರು ಬರೆದುಕೊಂಡಿದ್ದಾರೆ.</p>



<p>ಹಿಂದೂಗಳು ಮುಸ್ಲಿಂ ದೊರೆಗಳ ಪ್ರಭಾವ ಮತ್ತು ಬಲವಂತದಿಂದಾಗಿ ಮತಾಂತರಗೊಂಡರು ಎನ್ನುವುದನ್ನು ಅವರು ಒಪ್ಪುತ್ತಿರಲಿಲ್ಲ.</p>



<p>ಹಿಂದೂ ಧರ್ಮದ ಒಳಗಿನ ಜಾತೀಯತೆ, ಅಸ್ಪೃಶ್ಯತೆ, ಶೋಷಣೆ ಇದಕ್ಕೆ ಕಾರಣ. ಮೂಲಭೂತವಾದ ಮಾನವಹಕ್ಕುಗಳು ಮತ್ತು ವ್ಯಕ್ತಿ ಘನತೆಯನ್ನು ಗೌರವಿಸದೆ ಇರುವ ಧರ್ಮ ಅಲ್ಲವೇ ಅಲ್ಲ, ಅದು `ಪ್ರೇತ ನೃತ್ಯ~, ಅದು ನಡೆಯುವ ಸ್ಥಳ ನರಕ~ ಎಂದು ಹೇಳಿದ್ದರು.</p>



<p>`ಧರ್ಮ-ಧರ್ಮಗಳ ನಡುವೆ ಸಹನೆಯಷ್ಟೇ ಇದ್ದರಷ್ಟೇ ಸಲ್ಲದು, ಅವುಗಳನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕು, ಗುರು ರಾಮಕೃಷ್ಣ ಪರಮಹಂಸರಿಂದ ನಾನು ಇದನ್ನೇ ಕಲಿತದ್ದು~ ಎಂದು ಅವರು ಬರೆದಿದ್ದಾರೆ.</p>



<p>ವಿವೇಕಾನಂದರ ಬಗ್ಗೆ ನಮ್ಮಲ್ಲಿ ಇನ್ನಷ್ಟು ಗೌರವ-ಅಭಿಮಾನ ಹುಟ್ಟಿಸುವ ಈ <code><strong>ಮನುಷ್ಯ ಮುಖ~ವನ್ನು ಅವರ 150ನೇ ಜಯಂತಿ ಆಚರಣೆಯಲ್ಲಿ ಬಿಂಬಿಸಲಾಗುತ್ತಿರುವ</strong></code>ಉತ್ಸವಮೂರ್ತಿ~ಯಲ್ಲಿ ಕಾಣಲು ಹೋದರೆ ನಿರಾಶೆಯಾಗುತ್ತದೆ.</p>



<p>ಕೇವಲ 39 ವರ್ಷ, ಐದು ತಿಂಗಳು ಮತ್ತು 24 ದಿನ ಬದುಕಿದ್ದ ಮತ್ತು 24ರ ಹರಯದಲ್ಲಿಯೇ ಸನ್ಯಾಸ ಸ್ವೀಕರಿಸಿದ್ದ ವಿವೇಕಾನಂದರನ್ನು ಅವರ ಸಾವಿನ 110 ವರ್ಷಗಳ ನಂತರವೂ ನಮಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲವೇನೋ ಎಂದು ಅನಿಸತೊಡಗುತ್ತದೆ.</p>



<p>ಇತ್ತೀಚಿನ ವರ್ಷಗಳಲ್ಲಿ ವಿವೇಕಾನಂದರನ್ನು ಹಿಂದೂ ಧರ್ಮದ `ಬ್ರಾಂಡ್ ಅಂಬಾಸಿಡರ್~ ಆಗಿ ಬಿಂಬಿಸುವ ಭರದಲ್ಲಿ ಅವರ ಮೇಲೆ ಇಲ್ಲಸಲ್ಲದ ಗುಣ-ವಿಶೇಷ, ಶಕ್ತಿ -ಸಾಮರ್ಥ್ಯಗಳನ್ನು ಆರೋಪಿಸಿ ದೇವರ ಪಟ್ಟಕ್ಕೆ ಏರಿಸಲಾಗುತ್ತಿದೆ.</p>



<p>ಇದೇನು ಹೊಸದಲ್ಲ. ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು `ದೇವರು~ ಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆ.</p>



<p>ದೇವರ ಅವತಾರವಾಗದೆ ಕೇವಲ ಮನುಷ್ಯನಾಗಿ ಹುಟ್ಟಿ ಅಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯ ಇಲ್ಲ ಎಂಬ ನಂಬಿಕೆಯನ್ನು ನಮ್ಮ ಅನೇಕ ಧಾರ್ಮಿಕ ನಾಯಕರು ಮತ್ತು ಧಾರ್ಮಿಕ ನಾಯಕರ ಸೋಗಿನ ರಾಜಕಾರಣಿಗಳು ಬಿತ್ತುತ್ತಾ, ಬೆಳೆಸುತ್ತಾ ಸಾಗಿದ್ದಾರೆ.</p>



<p>ಬುದ್ಧ-ಬಸವನಿಂದ ಹಿಡಿದು ವಿವೇಕಾನಂದ-ನಾರಾಯಣ ಗುರುಗಳವರೆಗೆ ಎಲ್ಲರನ್ನೂ ಅವರವರ ಭಕ್ತ ಸಮೂಹ ದೇವರುಗಳಾಗಿ ಮಾಡಿ ಪೂಜೆ-ಭಜನೆಗಳಲ್ಲಿ ಮುಳುಗಿಸಿ ಬಿಟ್ಟಿದ್ದಾರೆ. ಈ ಆರಾಧನೆಯ ಭರದಲ್ಲಿ ಆ ಮಹನೀಯರ ನಿಜವಾದ ಬದುಕು ಮತ್ತು ಚಿಂತನೆಯ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಎಲ್ಲೋ ಹೂತುಹೋಗಿರುತ್ತವೆ.</p>



<p>ಪ್ರಖ್ಯಾತ ಬಂಗಾಳಿ ಸಾಹಿತಿ ಮಣಿ ಸಂಕರ್ ಮುಖರ್ಜಿ ಅವರ <code><strong>ದಿ ಮಾಂಕ್ ಆ್ಯಸ್ ಮ್ಯಾನ್~ ಎನ್ನುವ ಪುಸ್ತಕವನ್ನು ಕಳೆದ ವರ್ಷ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದೆ. ಇದು ಎಂಟು ವರ್ಷಗಳ ಹಿಂದೆ ಪ್ರಕಟವಾದ ಸಂಶೋಧನೆ ಆಧಾರಿತ ಬಂಗಾಳಿ ಭಾಷೆಯ ಪುಸ್ತಕದ ಇಂಗ್ಲಿಷ್ ಅನುವಾದ (ಸಂಕರ್ ಅವರ</strong></code>ಸೀಮಾಬದ್ದ~ ಮತ್ತು `ಜನ ಅರಣ್ಯ~ ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು).</p>



<p>ವಿವೇಕಾನಂದರ ತತ್ವ-ಸಿದ್ಧಾಂತಗಳ ಜತೆ ಅವರ ಖಾಸಗಿ ಬದುಕಿನ ಅಪರಿಚಿತ ಮುಖವನ್ನು ಸಂಕರ್ ಅವರ ಪುಸ್ತಕ, ತಮ್ಮಂದಿರಾದ ಮಹೇಂದ್ರನಾಥ ದತ್ತಾ ಮತ್ತು ಡಾ. ಭೂಪೇಂದ್ರನಾಥ ದತ್ತಾ ಅವರು ಅಣ್ಣನ ಬಗ್ಗೆ ಬರೆದ ಪುಸ್ತಕಗಳು ಹಾಗೂ ಸೋದರಿ ನಿವೇದಿತಾ ಅವರ ಲೇಖನಗಳು ತೆರೆದಿಡುತ್ತದೆ.</p>



<p>ಮುಂದೊಂದು ದಿನ ವಿದೇಶಿ ನೆಲದಲ್ಲಿ ನಿಂತು ತನ್ನಲ್ಲಿರುವ ಜ್ಞಾನ ಮತ್ತು ಇಂಗ್ಲಿಷ್ ಭಾಷಾ ಪಾಂಡಿತ್ಯದಿಂದ ಅಲ್ಲಿನ ಇಂಗ್ಲಿಷ್ ಭಾಷಿಕರ ಮಂತ್ರಮುಗ್ಧಗೊಳಿಸಿದ್ದ ವಿವೇಕಾನಂದರು ಇಂಟರ್‌ಮಿಡಿಯೇಟ್ ಮತ್ತು ಬಿಎ ಪದವಿಯ ಇಂಗ್ಲಿಷ್ ಪರೀಕ್ಷೆಗಳಲ್ಲಿ ಗಳಿಸಿದ್ದ ಅಂಕ ಕ್ರಮವಾಗಿ ಶೇಕಡಾ 46 ಮತ್ತು ಶೇಕಡಾ 56. ಬಿಎ ಪರೀಕ್ಷೆಯ ಒಟ್ಟು 500 ಅಂಕಗಳಲ್ಲಿ ಗಳಿಸಿದ್ದು ಕೇವಲ 261. (ಸಂಸ್ಕೃತದಲ್ಲಿ 43 ಮತ್ತು ತತ್ವಶಾಸ್ತ್ರದಲ್ಲಿ 45).</p>



<p>ತಂದೆಯ ಸಾವಿನ ನಂತರ ಅನಿವಾರ‌್ಯವಾಗಿ ಉದ್ಯೋಗ ಮಾಡಬೇಕಾಗಿ ಬಂದ ವಿವೇಕಾನಂದರು ಮೊದಲು ಕೆಲಸಕ್ಕೆ ಸೇರಿದ್ದು ಈಶ್ವರಚಂದ್ರ ವಿದ್ಯಾಸಾಗರ ಅವರು ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ. ಅಲ್ಲಿ ಇವರನ್ನು ಮಕ್ಕಳಿಗೆ ಪಾಠ ಹೇಳಲು ಬರುವುದಿಲ್ಲ ಎನ್ನುವ ಕಾರಣ ನೀಡಿ ಸ್ವತಃ ಈಶ್ವರಚಂದ್ರರೇ ಕೆಲಸದಿಂದ ವಜಾಗೊಳಿಸಿದ್ದರು.</p>



<p>ಭುವನೇಶ್ವರಿ ದೇವಿ ಎಂಬ ತಾಯಿ ಇಲ್ಲದೆ ಹೋಗಿದ್ದರೆ ಜಗತ್ತಿಗೆ ವಿವೇಕಾನಂದರು ಸಿಗುತ್ತಿರಲಿಲ್ಲವೇನೋ? ಕೋಲ್ಕತ್ತಾದ ಸಾವಿರಾರು ನರೇಂದ್ರನಾಥರಲ್ಲಿ ಒಬ್ಬರಾಗಿ ಅವರು ಹುಟ್ಟಿ ಸಾಯುತ್ತಿದ್ದರು.</p>



<p>ವಿವೇಕಾನಂದರು ಮೂಲತಃ ಶ್ರಿಮಂತ ಕುಟುಂಬಕ್ಕೆ ಸೇರಿದವರಾಗಿದ್ದರೂ ತಂದೆಯ ಅಕಾಲಮೃತ್ಯುವಿನ ನಂತರ ಆಸ್ತಿಯನ್ನೆಲ್ಲ ದಾಯಾದಿಗಳು ಕಬಳಿಸಿದ ಕಾರಣ ಇಡೀ ಕುಟುಂಬ ಬೀದಿ ಪಾಲಾಗುತ್ತದೆ. ಹನ್ನೊಂದು ಮಕ್ಕಳಲ್ಲಿ ಇವರೇ ದೊಡ್ಡ ಗಂಡುಮಗನಾದ ಕಾರಣ ಸಂಸಾರ ನಿರ್ವಹಣೆ ನರೇಂದ್ರನಾಥನ ಪುಟ್ಟ ಹೆಗಲಮೇಲೆ ಬೀಳುತ್ತದೆ.</p>



<p>ನಿರುದ್ಯೋಗಿಯಾಗಿ ಹರಕಲು ಅಂಗಿ-ಪೈಜಾಮ ಹಾಕಿ ಬೀದಿ ಸುತ್ತುತ್ತಿದ್ದ ಅವರು ಎಷ್ಟೋ ಬಾರಿ ಉಪವಾಸ ಇರುತ್ತಿದ್ದರಂತೆ. ಕುಟುಂಬದ ಆಸ್ತಿಗಾಗಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹೋರಾಟ ಸತತ ಹದಿನೇಳು ವರ್ಷ ನಡೆದು ವಿವೇಕಾನಂದರ ಸಾವಿನ ಹಿಂದಿನ ತಿಂಗಳಷ್ಟೇ ಇತ್ಯರ್ಥವಾಗಿತ್ತು.</p>



<p>ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ. ಕಷ್ಟ ಕಾಲದಲ್ಲಿ ಕೈಬಿಟ್ಟು ಹೋದ ಎಂದು ಮಗನನ್ನು ತಾಯಿ ಭುವನೇಶ್ವರಿದೇವಿ ದ್ವೇಷಿಸಲಿಲ್ಲ, `ನನ್ನ ಮಗ 24ನೇ ವರ್ಷಕ್ಕೆ ಸನ್ಯಾಸಿಯಾದ~ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದರು.</p>



<p>ಮಗ ಸತ್ತನಂತರ ಎಂಟು ವರ್ಷ ಬದುಕಿದ್ದ ತಾಯಿ ಖೇತ್ರಿ ಮಹಾರಾಜ ಕೊಡುತ್ತಿದ್ದ ಮಾಸಿಕ ನೂರು ರೂಪಾಯಿಯಲ್ಲಿ ಕಡು ಕಷ್ಟದಲ್ಲಿಯೇ ಜೀವನ ಸಾಗಿಸಿದ್ದರು.</p>



<p>ಈಗ ವಿವೇಕಾನಂದರನ್ನು ತಲೆಮೇಲಿಟ್ಟು ಮೆರೆದಾಡಲಾಗುತ್ತಿದ್ದರೂ ಬದುಕಿದ್ದಾಗ ಭಾರತೀಯರು ಅವರಿಗೆ ಹೆಚ್ಚು ನೆರವಾಗಿರಲಿಲ್ಲ. `ಪ್ರತಿ ಬಾರಿ ವಿದೇಶಿಯರಲ್ಲಿಯೇ ಭಿಕ್ಷೆ ಕೇಳಲೇನು~ ಎಂದು ಅವರೊಮ್ಮೆ ಬೇಸರದಿಂದ ಪ್ರಶ್ನಿಸಿದ್ದರು.</p>



<p><code><strong>ವಿಶಾಲವಾದ ಎದೆ, ಬಲಿಷ್ಠವಾದ ತೋಳುಗಳು, ಕಾಂತಿಯುತ ಕಣ್ಣುಗಳು...~ ಎಂದೆಲ್ಲ ವಿವೇಕಾನಂದರನ್ನು ಹಿಂದೂ ಧರ್ಮದ</strong></code>ಹೀ ಮ್ಯಾನ್~ ಎಂಬಂತೆ ಬಣ್ಣಿಸುವವರಿಗೆ ಅವರು ಹುಟ್ಟುರೋಗಿಯಾಗಿದ್ದರೆಂದು ಗೊತ್ತಿದೆಯೋ ಇಲ್ಲವೋ? ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ ಅವರಿಗೆ 31 ಬಗೆಯ ರೋಗಗಳಿದ್ದವು.</p>



<p>ಮೂತ್ರಕೋಶ, ಲಿವರ್, ಗಂಟಲು ಸಂಬಂಧಿ ರೋಗಗಳಲ್ಲದೆ ರಕ್ತದೊತ್ತಡ, ಮಧುಮೇಹ, ಆಸ್ತಮಾ, ಅಜೀರ್ಣ, ಮಲಬದ್ಧತೆ, ಭೇದಿ, ನರದೌರ್ಬಲ್ಯ, ಮಂಡಿನೋವು, ಕಾಲುಬಾವು ಎಲ್ಲವೂ ಅವರನ್ನು ಕಾಡುತ್ತಿತ್ತು. ಪ್ರಾರಂಭದಿಂದಲೇ ನಿದ್ರಾಹೀನತೆಯಿಂದ ಬಳಲುತ್ತಿದ್ದ ಅವರು ಕೊನೆಯ ದಿನಗಳಲ್ಲಿ, ದಿನದಲ್ಲಿ ಒಂದೆರಡು ಗಂಟೆಗಳ ಕಾಲವೂ ನಿದ್ದೆ ಮಾಡಲಾಗುತ್ತಿರಲಿಲ್ಲ.</p>



<p>ಯಾರಾದರೂ ಮುಟ್ಟಿದರೆ ಮೈಯೆಲ್ಲ ನೋಯುತ್ತಿತ್ತು. `ನನ್ನ ಕೂದಲು-ಗಡ್ಡಗಳೆಲ್ಲ ವಯಸ್ಸಿಗೆ ಮೊದಲೇ ಬೆಳ್ಳಗಾಗಿ ಹೋಗಿದೆ, ಮುಖದ ಚರ್ಮ ಸುಕ್ಕುಗಟ್ಟಿ ನೆರಿಗೆಗಳು ಮೂಡಿವೆ~ ಎಂದು ತನ್ನ 34ನೇ ವಯಸ್ಸಿನಲ್ಲಿ ಶಿಷ್ಯೆ ಮೇರಿ ಹೇಲ್‌ಗೆ ಬರೆದ ಪತ್ರದಲ್ಲಿ ಅವರು ಹೇಳಿಕೊಂಡಿದ್ದಾರೆ.</p>



<p>ಅನಾರೋಗ್ಯದಿಂದ ಬೇಸತ್ತು ಹೋಗಿದ್ದ ಅವರು, ಒಂದು ದಿನ `ದಯಾಮರಣದ ಮೂಲಕವಾದರೂ ನನಗೆ ಸಾವು ನೀಡಿ, ರೇಸ್‌ನಲ್ಲಿ ಓಡಲಾಗದ ಕುಂಟು ಕುದುರೆಯಂತಾಗಿದ್ದೇನೆ ನಾನು. ಈ ನೋವು-ಸಂಕಟ ಸಹಿಸಲಾರೆ~ ಎಂದು ಹತಾಶೆಯಿಂದ ಹೇಳಿದ್ದನ್ನು ಸೋದರಿ ನಿವೇದಿತಾ ದಾಖಲಿಸಿದ್ದಾರೆ..</p>



<p>ಈ ಎಲ್ಲ ರೋಗಗಳ ನಡುವೆಯೂ ಅವರ ನಾಲಗೆಯ ಚಪಲ ಮಾತ್ರ ಕಡಿಮೆಯಾಗಿರಲಿಲ್ಲ. ಎಲ್ಲ ಬಂಗಾಳಿಗಳಂತೆ ಅವರೊಬ್ಬ ತಿಂಡಿಪೋತರಾಗಿದ್ದರು. `ನಾನು ಠಾಕೂರ್ (ಪರಮಹಂಸ) ಅವರಿಗೆ ಬಿಸಿನೀರಿನಲ್ಲಿ ಮಸಾಲೆಯ ಜತೆ ಮಾಂಸದ ತುಂಡುಗಳನ್ನು ಹಾಕಿ ಬೇಯಿಸಿ ಪಲ್ಯ ಮಾಡಿಕೊಡುತ್ತಿದ್ದೆ. ಆದರೆ ನರೇನ್ (ವಿವೇಕಾನಂದ) ಮಾತ್ರ ಮಾಂಸದ ಅಡುಗೆಯನ್ನು ಬಗೆಬಗೆಯಲ್ಲಿ ಮಾಡುತ್ತಿದ್ದ~ ಎಂದು ಶಾರದಾದೇವಿ ಬರೆದಿದ್ದಾರೆ.</p>



<p>ದೇಶ-ವಿದೇಶಗಳ ಮಾಂಸಾಹಾರಿ ಅಡುಗೆಯನ್ನು ಮಾಡುವ ಅವರ ಪಾಕಪ್ರಾವೀಣ್ಯತೆ ಬಗ್ಗೆ ಸೋದರಿ ನಿವೇದಿತಾ ವಿವರವಾಗಿ ದಾಖಲಿಸಿದ್ದಾರೆ. ಅವರ ಸಾವಿನ ದಿನವೇ ಮಳೆಗಾಲದ ಮೊದಲ ಅತಿಥಿಗಳಾಗಿ `ಹಿಲ್ಸಾ~ ಮೀನುಗಳು ಹೂಗ್ಲಿ ನದಿ ಪ್ರವೇಶಿಸಿದ್ದವು. ಅದನ್ನು ತಂದು ಪಲ್ಯಮಾಡಿ ಮಧ್ಯಾಹ್ಮ ಊಟ ಮಾಡಿ ವಿರಮಿಸಿದ್ದ ಅವರು ರಾತ್ರಿ ಕೊನೆಯುಸಿರೆಳೆದಿದ್ದರು.</p>



<p>ಅಕಾಡೆಮಿಕ್ ಮಾನದಂಡಗಳ ಪ್ರಕಾರ ದಡ್ಡರಾಗಿರುವ, ಹತ್ತಾರು ಬಗೆಯ ಕಾಯಿಲೆಗಳಿಂದ ನರಳುತ್ತಿರುವ, ಕುಟುಂಬದ ಕಷ್ಟಗಳಿಂದ ಜರ್ಝರಿತರಾಗಿರುವ, ತಿಂಡಿಪೋತರಾಗಿರುವ ಸಾಮಾನ್ಯ ವ್ಯಕ್ತಿಗಳು ಕೂಡಾ `ವಿವೇಕಾನಂದ~ನಾಗಿ ಬೆಳೆಯಲು ಸಾಧ್ಯ ಎಂಬುದನ್ನು ನರೇಂದ್ರನಾಥ ತನ್ನ ಸಾಧನೆ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.</p>



<p>ಇಷ್ಟೆಲ್ಲ ಕಷ್ಟ-ಕಾಯಿಲೆಗಳ ನಡುವೆಯೂ ಹಿಂದೂ ಧರ್ಮವೂ ಸೇರಿದಂತೆ ಜಗತ್ತಿನ ಎಲ್ಲ ಧರ್ಮಗಳ ಗ್ರಂಥಗಳು ಮತ್ತು ತತ್ವಜ್ಞಾನವನ್ನು ಅವರು ಅಧ್ಯಯನ ಮಾಡಿದ್ದರು. ದೇಶ-ವಿದೇಶಗಳಿಗೆ ಭೇಟಿ ನೀಡಿ ಭಾಷಣ ಮಾಡುತ್ತಿದ್ದರು, ನಿರಂತರವಾಗಿ ಪುಸ್ತಕ ಮತ್ತು ಪತ್ರಗಳನ್ನು ಬರೆಯುತ್ತಿದ್ದರು.</p>



<p>ಸಾವಿರಾರು ಶಿಷ್ಯರನ್ನು, ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದರು. ತಮ್ಮ ಗುರುವಿನ ಹೆಸರಲ್ಲಿ ಜಗತ್ತಿನಾದ್ಯಂತ ರಾಮಕೃಷ್ಣ ಮಿಷನ್ ಹೆಸರಿನ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದರು.</p>



<p>ಇವೆಲ್ಲವನ್ನು ಅವರು ಮಾಡಿದ್ದು ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ. ಯಃಕಶ್ಚಿತ್ ಮನುಷ್ಯನೊಬ್ಬ ಇಂತಹ ಸಾಧನೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ, ಅದಕ್ಕಾಗಿ ಆತ `ವಿವೇಕಾನಂದ~ ಆಗಿರಬೇಕು.</p>



<ul class="wp-block-list">
<li><strong>ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು<br>16-01-2012 ರ ಪ್ರಜಾವಾಣಿ ಪತ್ರಿಕೆಯ ಅನಾವರಣ ಅಂಕಣದಿಂದ</strong></li>
</ul>
]]></content:encoded>
					
		
		
			</item>
		<item>
		<title>ಅವಿವೇಕಿಗಳ‌ ಗದ್ದಲದಲ್ಲಿ ವಿವೇಕಿ ವಿವೇಕಾನಂದರನ್ನು ಸ್ಮರಿಸುತ್ತಾ&#8230;..</title>
		<link>https://peepalmedia.com/hl-pushpa-writes-about-swamy-vivekananda/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 12 Jan 2024 07:22:34 +0000</pubDate>
				<category><![CDATA[ವಿಶೇಷ]]></category>
		<category><![CDATA[HL Pushpa]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Swamy Vivekananda]]></category>
		<category><![CDATA[Vivekananda]]></category>
		<category><![CDATA[writing]]></category>
		<guid isPermaLink="false">https://peepalmedia.com/?p=34883</guid>

					<description><![CDATA[&#8220;ಮೊದಲು ನಿಮ್ಮ‌ಮೇಲೆ ನಂಬಿಕೆಯಿರಲಿ. ಅನಂತರ ದೇವರ ಮೇಲೆ. ಬೆರಳೆಣಿಕೆಯಷ್ಟು  ಶಕ್ತಿಶಾಲಿ  ಜನರು ಜಗತ್ತನ್ನೇ ಅಲುಗಾಡಿಸಬಲ್ಲರು. ನಮಗೆ  ಪರಿಭಾವಿಸುವ, ಆಲೋಚಿಸುವ ಜೀವಂತ ಮೆದುಳು ಬೇಕಿದೆ.  ಕೆಲಸ ಮಾಡುವ  ಬಲಿಷ್ಠ ಕೈಗಳು ಬೇಕಾಗಿವೆ&#8221;. &#160;&#160; &#8220;ತ್ಯಾಗ ಮಾಡಿ! ತ್ಯಾಗ ಮಾಡಿ! ನಿಮ್ಮ ದಿವ್ಯ ಸ್ವರೂಪವನ್ನು ತಿಳಿಯಿರಿ! ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ!&#8221; ಈ ಮೇಲಿನ‌&#160;&#160;&#160; ಮಾತುಗಳನ್ನು ವಿವೇಕಾನಂದರ ವಾಣಿ ಎಂದೇ&#160; ಕರೆಯಲಾಗುತ್ತದೆ.&#160; ವಿಶ್ವಮಾನವ ಎಂದೇ&#160; ಕರೆಸಿಕೊಂಡ ವಿವೇಕಾನಂದ&#160; ಭಾರತದ&#160; ಅಧ್ಯಾತ್ಮಿಕತೆ, ಧರ್ಮ,&#160; ಸಂಸ್ಕೃತಿಗಳ&#160; ನಡೆ ನುಡಿಯನ್ನು ಬಲ್ಲವರು. ವಿವೇಕಾನಂದರ&#160; [&#8230;]]]></description>
										<content:encoded><![CDATA[
<p>&#8220;ಮೊದಲು ನಿಮ್ಮ‌ಮೇಲೆ ನಂಬಿಕೆಯಿರಲಿ. ಅನಂತರ ದೇವರ ಮೇಲೆ. ಬೆರಳೆಣಿಕೆಯಷ್ಟು  ಶಕ್ತಿಶಾಲಿ  ಜನರು ಜಗತ್ತನ್ನೇ ಅಲುಗಾಡಿಸಬಲ್ಲರು. ನಮಗೆ  ಪರಿಭಾವಿಸುವ, ಆಲೋಚಿಸುವ ಜೀವಂತ ಮೆದುಳು ಬೇಕಿದೆ.  ಕೆಲಸ ಮಾಡುವ  ಬಲಿಷ್ಠ ಕೈಗಳು ಬೇಕಾಗಿವೆ&#8221;.</p>



<p><strong>&nbsp;&nbsp; &#8220;ತ್ಯಾಗ ಮಾಡಿ! ತ್ಯಾಗ ಮಾಡಿ! ನಿಮ್ಮ ದಿವ್ಯ ಸ್ವರೂಪವನ್ನು ತಿಳಿಯಿರಿ! ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ!&#8221;</strong></p>



<p>ಈ ಮೇಲಿನ‌&nbsp;&nbsp;&nbsp; ಮಾತುಗಳನ್ನು ವಿವೇಕಾನಂದರ ವಾಣಿ ಎಂದೇ&nbsp; ಕರೆಯಲಾಗುತ್ತದೆ.&nbsp; ವಿಶ್ವಮಾನವ ಎಂದೇ&nbsp; ಕರೆಸಿಕೊಂಡ ವಿವೇಕಾನಂದ&nbsp; ಭಾರತದ&nbsp; ಅಧ್ಯಾತ್ಮಿಕತೆ, ಧರ್ಮ,&nbsp; ಸಂಸ್ಕೃತಿಗಳ&nbsp; ನಡೆ ನುಡಿಯನ್ನು ಬಲ್ಲವರು. ವಿವೇಕಾನಂದರ&nbsp; ಚಿಂತನೆಗಳನ್ನು ಕೇವಲ ಭಾರತದ ದಾರ್ಶನಿಕತೆಯಲ್ಲಿ&nbsp; ಮಾತ್ರ ನೋಡುವಂತಿಲ್ಲ. ಅವರು ಪಾಶ್ಚಿಮಾತ್ಯರ ಧರ್ಮ ಹಾಗೂ ಧರ್ಮದ ಕಾಣಿಕೆಗಳನ್ನು ಸಹ ಬಲ್ಲವರಾಗಿದ್ದರು.</p>



<p>ಭಾರತದಲ್ಲಿ  ದೇವರು, ಧರ್ಮ, ಜಾತಿ ವ್ಯವಸ್ಥೆ  ಉಂಟು ಮಾಡಿರುವ  ಗುಲಾಮೀತನವನ್ನು ಕುರಿತು ಅಪಾರವಾದ ಅಧ್ಯಯನದಿಂದ  ಮಾತನಾಡಬಲ್ಲ ನಮ್ಮ ದೇಶದ ಇಬ್ಬರೇ ಇಬ್ಬರು ವಿದ್ವಾಂಸರೆಂದರೆ  ವೀವೇಕಾನಂದ  ಮತ್ತು  ಡಾ. ಬಿ. ಆರ್. ಅಂಬೇಡ್ಕರ್ ಮಾತ್ರ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.</p>



<p>ವಿವೇಕಾನಂದ ಜನ್ಮ‌ತಳೆಯುವ ಸಂದರ್ಭದಲ್ಲಿ ಬಂಗಾಳ ಸತತವಾಗಿ&nbsp; ಹಲವು ಅವಸ್ಥಾಂತರಗಳಿಗೆ ಒಳಗಾಗುತ್ತಿತ್ತು. ಮೊಗಲ್&nbsp; ಸಾಮ್ರಾಜ್ಯ ಅವನತಿಗೊಂಡು ಬ್ರಿಟಿಷ್ ಆಳ್ವಿಕೆಯ&nbsp;&nbsp; ಕಾಲಘಟ್ಟದಲ್ಲಿ&nbsp; ಬಿಡುಗಡೆ ಹಾಗೂ ಸರ್ವಾಂಗೀಣ ಪ್ರಗತಿಗಾಗಿ&nbsp; ಬಯಸುತ್ತಿದ್ದ ಕಾಲಘಟ್ಟವದು. ಈ ಬಿಡುಗಡೆಯ,&nbsp; ಪುನರುತ್ಥಾನದ&nbsp;&nbsp; ಹೊಸಭಾವಗಳು ಮೊದಲು ಕಾಣಿಸಿಕೊಂಡಿದ್ದು ಬಂಗಾಳದಲ್ಲಿ. ಈ ಕಾಲಘಟ್ಟವನ್ನು &#8216;ಬಂಗಾಳದ ಪುನರುತ್ಥಾನ&#8217;&nbsp; ಕಾಲ ಎಂದು ಕರೆಯಲಾಗಿದೆ.</p>



<p>ಇದೇ&nbsp;&nbsp; ಸಂದರ್ಭದಲ್ಲಿ ಆರಂಭವಾದ&nbsp; &#8216;ಏಷ್ಯಾಟಿಕ್ ಸೊಸೈಟಿ&#8217; ಭಾರತದ&nbsp; ಪ್ರಾಚೀನತೆ&nbsp; ಹಾಗೂ ಅದರ ಭವ್ಯ ಸಂಸ್ಕ್ರತಿಯ ಬಗ್ಗೆ ಸಂಶೋಧನೆ ಹಾಗೂ ಪ್ರಕಟಣೆಗಳನ್ನು ಆರಂಭಿಸಿತು.&nbsp; ಜನರ ಬದುಕನ್ನು ಅಧೋಗತಿಗಿಳಿಸಿದ್ದ&nbsp; ಸಾಮಾಜಿಕ, ಧಾರ್ಮಿಕ&nbsp; ಆಚರಣೆಗಳು&nbsp; ಹಾಗೂ ಬ್ರಿಟಿಷರ&nbsp; ಜೊತೆಯಲ್ಲಿಯೇ&nbsp; ಕಾಲಿಟ್ಟ&nbsp; ಕ್ರೈಸ್ತ ಮಿಷನರಿಗಳ ದರ್ಮಪ್ರಚಾರಕ್ಕೆ ಪರಿಹಾರವೆಂಬಂತೆ ರಾಜಾರಾಮಮೋಹನರಾಯರಿಂದ&nbsp;&nbsp; ಬ್ರಹ್ಮಸಮಾಜ ಹುಟ್ಟಿತು. ಬಂಗಾಳದ&nbsp;&nbsp; ಸನಾತನವಾದಿಗಳು&nbsp; ಕ್ರೈಸ್ತ ಮಿಷನರಿಗಳು, ಹಾಗೂ ಬ್ರಹ್ಮಸಮಾಜದ ವಿರುದ್ಧ ಸಿಡಿದೆದ್ದು ತೀವ್ರಗಾಮಿಗಳಾಗಿ&nbsp; &#8216;ಯುವ ಬಂಗಾಳ&#8217;ದವರೆಂದು ಪ್ರಸಿದ್ಧರಾದರು.</p>



<p>ರಾಜಾರಾಮ್ ಮೋಹನರಾಯ್ ಅವರ&nbsp; ಮರಣದ ನಂತರ ದೇವೇಂದ್ರನಾಥ್ ಟಾಗೋರರು ಬ್ರಹ್ಮ ಸಮಾಜದ ನೇತೃತ್ವ ವಹಿಸಿದರು.&nbsp;&nbsp; ದೇವೇಂದ್ರನಾಥರ&nbsp; ವಿಚಾರಗಳು ಒಪ್ಪಿಗೆಯಾಗದಿದ್ದಾಗ&nbsp; ಕೇಶವಚಂದ್ರಸೇನ್ ನೇತೃತ್ವದಲ್ಲಿ &#8216;ಬ್ರಹ್ಮಸಮಾಜ- ಇಂಡಿಯಾ&#8217;&nbsp; ಎಂಬ ಸಂಸ್ಥೆ ಹುಟ್ಟಿಕೊಂಡಿತು. ಜಾತಿ&nbsp; ಮತ್ತು ಸಾಮಾಜಿಕ&nbsp; ಸಮಸ್ಯೆಗಳ ಬಗೆಗಿನ ಇವರ ಅಭಿಪ್ರಾಯಗಳನ್ನು ಇಷ್ಟಪಡದ&nbsp; ಯುವಕರ ಗುಂಪು ಇವರ ನಾಯಕತ್ವವನ್ನು ಪ್ರಶ್ನಿಸಿ ಹೊರಬಂದು &#8216;ಸಾಧಾರಣ ಬ್ರಹ್ಮ ಸಮಾಜ&#8217;ವನ್ನು&nbsp; ಸ್ಥಾಪಿಸಿದರು. ಇದೇ ಸಂದರ್ಭದಲ್ಲಿ&nbsp;&nbsp; ಕೇಶವಚಂದ್ರಸೇನ್ ಅವರಿಂದ&nbsp; ಪ್ರಾರ್ಥನಾ ಸಮಾಜ ಸ್ಥಾಪಿಸಲ್ಪಟ್ಟಿತು.&nbsp;&nbsp; ಈ ಸಮಾಜ ಜನರಲ್ಲಿ&nbsp; ನವಪ್ರಜ್ಞೆಯೊಂದು ಉದಯಿಸುವ ಹಿನ್ನೆಲೆಯಲ್ಲಿ ಕೆಲಸ ಮಾಡಿತು.&nbsp; ಪಾಶ್ಚಿಮಾತ್ಯ ವಿಚಾರವಾದವನ್ನು&nbsp; ಗಮನವಿಟ್ಟು&nbsp; ನೋಡುತ್ತಲೇ ವಿದ್ಯಾಪ್ರಸಾರಕ್ಕೆ ಹೆಚ್ಚು ಒತ್ತು ಕೊಟ್ಟಿತು.&nbsp; ಈ ಹಿನ್ನೆಲೆಯಲ್ಲಿಯೇ&nbsp;&nbsp; ಮಹಾದೇವ ಗೋವಿಂದ ರಾನಡೆ, ಸ್ವಾಮಿ ದಯಾನಂದ ಸರಸ್ವತಿ ಮುಂತಾದವರು ಸೇರಿ ಆರ್ಯಸಮಾಜವನ್ನು ಸ್ಥಾಪಿಸಿದರು.</p>



<p>&nbsp; 1875 ರಲ್ಲಿ ಸ್ಥಾಪಿಸಿದ&nbsp;&nbsp; ಥಿಯಾಸಾಫಿಕಲ್ ಸೊಸೈಟಿ&nbsp; ಪೂರ್ವ ದೇಶಗಳ&nbsp; ಸಮಾನ&nbsp; ಧಾರ್ಮಿಕ ಸಿದ್ಧಾಂತಗಳನ್ನು ಹೊರದೇಶದಲ್ಲಿ&nbsp; ಪ್ರಚಾರ ಮಾಡುವ ಉದ್ದೇಶ ಹೊಂದಿತ್ತು. ಈ ಚಳವಳಿಯ&nbsp; ಮುಂಚೂಣಿಯಲ್ಲಿ&nbsp;&nbsp; ಶ್ರೀಮತಿ ಅನಿಬೆಸೆಂಟ್&nbsp; ಹಾಗೂ&nbsp; ಬಾರತ&nbsp; ಹಾಗೂ&nbsp; ಅಖಿಲ ಭಾರತ ರಾಷ್ಟ್ರೀಯ ಚಳವಳಿಗಾರರು ಇದ್ದರು. ಈ&nbsp; ತತ್ವಜ್ಞಾನಿಗಳು&nbsp; ಸಮಸ್ಯೆಗಳನ್ನು ಹಿಂದೂ ಧಾರ್ಮಿಕ ಸಿದ್ಧಾಂತ ಹಾಗೂ ಧಾರ್ಮಿಕ ಸಂಸ್ಥೆಗಳ ಪುನರುತ್ಥಾನದಿಂದ&nbsp; ಚರ್ಚಿಸಬಹುದೆಂದು&nbsp; ನಂಬಿದ್ದರು. ಈ ಸೊಸೈಟಿ&nbsp; ವಿದ್ಯಾಭ್ಯಾಸ ಮತ್ತು ಮಹಿಳೆಯರ ಬಗ್ಗೆ ಹೆಚ್ಚು ಗಮನ ವಹಿಸಿತು.ಸಾಹಿತ್ಯದಲ್ಲೂ&nbsp; ಕೂಡ ಈ ರೀತಿಯ ಜಾಗೃತಿ ಮತ್ತು&nbsp;&nbsp; ಪುನರುತ್ಥಾನದ&nbsp; ಚಿಂತನೆಗಳು&nbsp; ತಲೆಯೆತ್ತಿದವು. ಪಾಶ್ಚಿಮಾತ್ಯ&nbsp; ವಿದ್ಯಾಭ್ಯಾಸ&nbsp; ಕ್ರಮದಿಂದ ಹುಟ್ಟಿದ ಹೊಸ ಆಲೋಚನೆಗಳ ಯುವಜನಾಂಗವೊಂದು&nbsp; ಈ&nbsp; ಸಂಘರ್ಷ ಹಾಗೂ ವೈಚಾರಿಕಾ ದ್ವಂದ್ವವನ್ನು ಸಮರ್ಥವಾಗಿ ಎದುರಿಸಬಲ್ಲಂತೆ&nbsp; ಮೂಡಿತು. ಇಂತಹ&nbsp; ಕಾಲಘಟ್ಟದಲ್ಲಿಯೇ ನಾವು ವಿವೇಕಾನಂದರು ವಿಶ್ವಮಾನವರಾಗಿ ಗುರುತಿಸಿಕೊಂಡ ಚಾರಿತ್ರಿಕ ಅಗತ್ಯವನ್ನು ಗುರುತಿಸಬೇಕಾಗುತ್ತದೆ.</p>



<p>ಜನವರಿ 12, 1863 ರಂದು ಭುವನೇಶ್ವರಿ ಮತ್ತು ವಿಶ್ವನಾಥದತ್ತರ ಮಗನಾಗಿ ನರೇಂದ್ರನಾಥ ಜನಿಸಿದರು. ನರೇಂದ್ರನಾಥರ&nbsp; ತಂದೆ&nbsp;&nbsp; ಹೈಕೋಟ್೯ ವಕೀಲರಾಗಿದ್ದು ಬೈಬಲ್,ಇಸ್ಮಾಮಿಕ್, ಪರ್ಷಿಯನ್ ಹಾಗೂ ಇಂಗ್ಲೀಷ್ ಸಾಹಿತ್ಯದ&nbsp; ಬಗ್ಗೆ&nbsp; ಪಾಂಡಿತ್ಯವುಳ್ಳವರಾಗಿದ್ದರು. ನಾಸ್ತಿಕರಾಗಿದ್ದ&nbsp; ಇವರು ಹಿಂದಿನ&nbsp; ಮೂಢನಂಬಿಕೆಯ&nbsp;&nbsp; ವಿಚಾರಗಳನ್ನು&nbsp; ಖಂಡಿಸುವವರಾಗಿದ್ದರು. ನರೇಂದ್ರರ. ತಾತ ದುರ್ಗಾಚರಣರು&nbsp; ಪ್ರಾಪಂಚಿಕ ವ್ಯಾಮೋಹಗಳನ್ನು ತ್ಯಜಿಸಿ ಸಂನ್ಯಾಸಿಯಾಗಿ ಜೀವಿಸಲಾರಂಭಿಸಿದ್ದರು.&nbsp; ಇವರ&nbsp; ತಾಯಿ ತಮ್ಮ ಮಗನಿಗೆ ಹೇಳುತ್ತಿದ್ದ&nbsp; ರಾಮಾಯಣ,&nbsp; ಮಹಾಭಾರತ, ಪುರಾಣ ಪ್ರಪಂಚದ ಕಥೆಗಳು ಪರಂಪರೆಯ ಬಗ್ಗೆ ಕುತೂಹಲ&nbsp; ಹುಟ್ಟಿಸಿದ್ದವು.&nbsp; ಹಿಂದೂ ದೇವತೆಗಳ, ಸಂನ್ಯಾಸಿಗಳ ಬಗ್ಗೆ ಆಕರ್ಷಣೆ&nbsp; ಹುಟ್ಟಿದ್ದು ಈ ಕಾಲಘಟ್ಟದಲ್ಲಿಯೇ.</p>



<p>ಪಾರಮಾರ್ಥಿಕ&nbsp; ಅನುಭವವನ್ನು ಪಡೆಯಲು&nbsp; ತವಕಿಸುತ್ತಿದ್ದ ಅವರ ಮನಸ್ಸು&nbsp; ಮತಧರ್ಮಗಳ&nbsp; ಅಂತಿಮ ಗುರಿಯೇನು ಎಂದು ಪ್ರಶ್ನಿಸುತ್ತಿತ್ತು. ಉತ್ತರ&nbsp; ನೀಡುವ ವ್ಯಕ್ತಿಗಳಿಗಾಗಿ ತವಕಿಸುತ್ತಿದ್ದ&nbsp; ಅವರು&nbsp; ಬ್ರಹ್ಮಸಮಾಜದ ಹಿರಿಯರಾದ&nbsp; ದೇವೇಂದ್ರನಾಥ ಟಾಗೋರರನ್ನು ಕಂಡು &#8220;ಸರ್, ನೀವು ದೇವರನ್ನು ಕಂಡಿದ್ದೀರಾ&#8221; ಎಂದು ಪ್ರಶ್ನಿಸಿದರು.&nbsp; ಗಲಿಬಿಲಿಗೊಂಡ&nbsp; ದೇವೇಂದ್ರನಾಥ್ ಅವರು &#8220;ಪ್ರೀತಿಯ ತರುಣನೇ&nbsp; ನಿನ್ನಲ್ಲಿ ಯೋಗಿಯ ಕಣ್ಣುಗಳಿವೆ, ನೀನು&nbsp; ಯೋಗವನ್ನು ಅಭ್ಯಾಸ ಮಾಡು &#8220;ಎನ್ನುತ್ತಾರೆ.</p>



<p>ನರೇಂದ್ರರಿಗೆ&nbsp; ಹಿರಿಯರೊಬ್ಬರಿಂದ ಹಾಗೂ ಗುರುಗಳಾದ ಹಾಸ್ಟ್ ಅವರಿಂದ&nbsp; ಇಂತಹ&nbsp; ಪ್ರಶ್ನೆಗಳಿಗೆ ಉತ್ತರ ಸಿಗುವುದು&nbsp; ಕಾಳಿ&nbsp; ದೇವಾಲಯದ ಪೂಜಾರಿ&nbsp; ರಾಮಕೃಷ್ಣ ಪರಮಹಂಸರಿಂದ ಮಾತ್ರ ಎಂಬ ಸಲಹೆ ಸಿಗುತ್ತದೆ.</p>



<p>ಅವರ ಯುವ ಮನಸ್ಸು ರಾಮಕೃಷ್ಣರನ್ನು&nbsp; ಕೇವಲ ಒಬ್ಬ ಪೂಜಾರಿಯಾಗಿ ಕಂಡಿತ್ತು. ಆಕಸ್ಮಿಕವಾಗಿ ಮಿತ್ರರೊಬ್ಬರ&nbsp; ಮನೆಯಲ್ಲಿ&nbsp; ರಾಮಕೃಷ್ಣರ&nbsp; ಸಮ್ಮುಖದಲ್ಲಿ&nbsp; ದೇವರನಾಮವನ್ನು&nbsp;&nbsp; ನರೇಂದ್ರ&nbsp; ಹಾಡಬೇಕಾಗುತ್ತದೆ.&nbsp; ಈ&nbsp;&nbsp; ಭೇಟಿ&nbsp; ಅವರಿಗೆ&nbsp; ವಿಶೇಷವೆನಿಸದಿದ್ದರೂ&nbsp; ರಾಮಕೃಷ್ಣರಿಗೆ ಮಾತ್ರ ತಾವು ಬಹುಕಾಲದಿಂದ&nbsp; ಹುಡುಕುತ್ತಿದ್ದ&nbsp; ವ್ಯಕ್ತಿ&nbsp; ಈತನೇ ಎಂಬ ಅರಿವಾಗುತ್ತದೆ. ತಮ್ಮ&nbsp; ಸಿದ್ದಾಂತಗಳನ್ನು ಈತ&nbsp; ಮಾತ್ರ ಹೊರಜಗತ್ತಿಗೆ&nbsp; ತಲುಪಿಸಬಲ್ಲ ಎಂಬ&nbsp; ವಿಶ್ವಾಸ ಮೂಡುತ್ತದೆ. ಅವರು ಸರ್ವಸಂಗ&nbsp; ಪರಿತ್ಯಾಗಿಯಾದ,&nbsp; ವಿಷಯಾಸಕ್ತಿಗಳಿಂದ&nbsp; ದೂರವಾದ, ದೇವರನ್ನು ಅರಿಯುವ ಕುತೂಹಲವಿರುವ,&nbsp; ದೀನದಲಿತರ&nbsp; ಬಗ್ಗೆ&nbsp; ಕಾಳಜಿಯುಳ್ಳ&nbsp; ಶಿಷ್ಯನೊಬ್ಬನನ್ನು&nbsp; ಕಂಡುಕೊಳ್ಳುವ&nbsp; ನಿರೀಕ್ಷೆಯಲ್ಲಿದ್ದರು.</p>



<p>ಆಗ ರಾಮಕೃಷ್ಣ&nbsp; ಪರಮಹಂಸರು ಕಲ್ಕತ್ತಾದ ರಾಣಿ ರಾಸಮಣಿ&nbsp; ನಿರ್ಮಿಸಿದ&nbsp; ಕಾಳಿ ದೇಗುಲದಲ್ಲಿ ಕಾಳಿಯನ್ನು &#8216;ಭವತಾರಿಣಿ&#8217;&nbsp; ರೂಪದಲ್ಲಿ ಆರಾಧಿಸುತ್ತಿದ್ದರು. ರಾಮಕೃಷ್ಣರ&nbsp; ಆಹ್ವಾನಕ್ಕೆ&nbsp; ಅಷ್ಟಾಗಿ ಸ್ಪಂದಿಸಿದೇ ಇದ್ದರೂ ಮುಂದೊಂದು ದಿನ&nbsp; ಅವರನ್ನು ಕಾಳಿಮಂದಿರದಲ್ಲಿ ಭೇಟಿಯಾಗುತ್ತಾರೆ. ತಕ್ಷಣದ&nbsp; ಅವರ&nbsp; ಪ್ರಶ್ನೆಯೆಂದರೆ&nbsp; &#8220;ಸರ್,&nbsp; ನೀವು ದೇವರನ್ನು ಕಂಡಿದ್ದೀರಾ&#8221; ಎಂಬುದಾಗಿತ್ತು.&nbsp; &#8220;ಹೌದು, ನಿನ್ನನ್ನು ಕಂಡಿರುವಂತೆಯೇ ದೇವರನ್ನೂ ಕಂಡಿದ್ದೇನೆ. ಉತ್ಕಟವಾದ&nbsp; ಅಂತಃ ಶಕ್ತಿ ಬೆಳೆದಾಗ&nbsp; ಮಾತ್ರ ಇದು ಅನುಭವ&nbsp; ಸಾಧ್ಯ.&nbsp; ಆಗ ಯಾರು ಬೇಕಾದರೂ ಅವನೊಂದಿಗೆ&nbsp; ನಾನು, ನೀನು ಮಾತನಾಡುತ್ತಿರುವಂತೆ ಮಾತನಾಡಬಹುದು&#8221; ಎನ್ನುತ್ತಾರೆ.&nbsp; ಈ&nbsp; ಗೊಂದಲಗಳಿಲ್ಲದ ಉತ್ತರ&nbsp;&nbsp; ಪರಸ್ಪರ ಪರೀಕ್ಷಕರಾದ&nbsp; ಈ ಗುರು&nbsp; ಶಿಷ್ಯರ&nbsp; ಸಂಬಂಧ&nbsp; ಬದುಕನ್ನು ಬದಲಿಸುತ್ತದೆ.</p>



<p>ಸರ್ವರನ್ನು ಪ್ರೀತಿಸುವ , ವಿರೋಧಿಗಳನ್ನು,&nbsp; ತನ್ನನ್ನು ವಿಮರ್ಶಿಸುವರನ್ನು&nbsp; ಸಹ&nbsp;&nbsp; ದ್ವೇಷಿಸದ&nbsp; ರಾಮಕೃಷ್ಣರು&nbsp; ಒಂದೆಡೆಯಾದರೆ ಅನ್ಯಾಯದ&nbsp; ವಿರುದ್ದ ಸಿಡಿಯುವ, ವಿಮರ್ಶೆ&nbsp; ಸಣ್ಣತನಗಳನ್ನು&nbsp; ಸಹಿಸದ ಮೊಂಡು, ದುಡುಕುತನದ&nbsp;&nbsp; ನರೇಂದ್ರನಾಥರದು&nbsp; ಇನ್ನೊಂದೆಡೆ ಇದ್ದು ಇದು&nbsp; ಪರಸ್ಪರ ವಿರುದ್ದ&nbsp; ಸ್ವಭಾವಗಳ&nbsp; ಸಾಂಗತ್ಯವಾಗಿತ್ತು. ಐದು ವರ್ಷಗಳ ಶಿಷ್ಯತ್ವದಲ್ಲಿ ರಾಮಕೃಷ್ಣರು ಏನನ್ನೂ&nbsp; ಹೇಳದೆ,&nbsp; ಪ್ರಶ್ನಿಸದೆ, ವಿಮರ್ಶಿಸದೆ&nbsp; ತಮ್ಮ ಪಡಿಯಚ್ಚಾಗಿ&nbsp; ಮಾರ್ಪಡಿಸಲು ಯತ್ನಿಸದೆ&nbsp; ಉಕ್ಕನ್ನು ನಿಧಾನವಾಗಿ&nbsp; ಹದಗೊಳಿಸುವಂತೆ ತಮ್ಮ ಶಿಷ್ಯನನ್ನು ರೂಪಿಸಿದರು.</p>



<p>ರಾಮಕೃಷ್ಣ ಪರಮಹಂಸರು ನಿರ್ವಾಣ ಹೊಂದುವ ಗಳಿಗೆಯಲ್ಲಿ&nbsp; ತಮ್ಮ ಬಳಿ ನರೇಂದ್ರರನ್ನು ಕರೆದು ಧ್ಯಾನಾಸಕ್ತರಾಗುತ್ತಾರೆ. ನರೇಂದ್ರರಿಗೆ ತಮ್ಮ ಮೈಯೊಳಗೆ ಸೂಕ್ಷ್ಮವಾದ ವಿದ್ಯುತ್ ಪ್ರವಾಹದ&nbsp; ಶಕ್ತಿಯೊಂದು&nbsp; ಹೊಕ್ಕಂತೆ&nbsp; ಮೈ ಜುಂ ಎನಿಸಿತು. &#8220;ನನ್ನಲ್ಲಿ ಇದ್ದುದ್ದನೆಲ್ಲಾ&nbsp; ಇಂದು ನಿನಗೆ ನೀಡಿದ್ದೇನೆ. ಈಗ ನಾನೊಬ್ಬ ಫಕೀರ, ಭಿಕ್ಷುಕ. ನಾನು ಹರಿಸಿದ&nbsp; ಶಕ್ತಿಯಿಂದ ನೀನು ಅದ್ಬುತ&nbsp; ಕೆಲಸಗಳನ್ನು ಮಾಡಲು ಶಕ್ತನಾಗುತ್ತಿ. ಆದರೆ ನಾನು&nbsp; ಬದುಕಿರುವವರೆಗೂ&nbsp; ನೀನು&nbsp; ಎಲ್ಲಿಂದ&nbsp; ಬಂದೆಯೋ&nbsp; ಅಲ್ಲಿಗೆ&nbsp; ಹೋಗಿರು&#8221; ಎಂಬುದು ಅವರ ಕೊನೆಯ&nbsp; ಮಾತುಗಳಾಗಿದ್ದವು.&nbsp; ವಿಶ್ವಸಂಚಾರ&nbsp; ಹಾಗೂ&nbsp; ಭಾರತದರ್ಶನದಲ್ಲಿ&nbsp; ತಮ್ಮನ್ನು ತೊಡಗಿಸಿ ಕೊಂಡು ಮತಧರ್ಮಗಳ&nbsp;&nbsp; ಮೌಡ್ಯತೆಯಲ್ಲಿ&nbsp; ಮುಳುಗಿದವರನ್ನು ಎಚ್ಚರಿಸುವ&nbsp; ಕೆಲಸವನ್ನು&nbsp; ಸಮರ್ಥವಾಗಿ ನಿರ್ವಹಿಸಿದರು.</p>



<p>1893 ರಲ್ಲಿ&nbsp; ಚಿಕಾಗೋದಲ್ಲಿ&nbsp; ನಡೆದ&nbsp; ಸರ್ವಧರ್ಮ ಸಮ್ಮೇಳನದಲ್ಲಿನ&nbsp;&nbsp; ಭಾಗವಹಿಸುವಿಕೆ&nbsp; ಮತ್ತು ಅದರಲ್ಲಿ ಅವರು ಭಾರಿಸಿದ&nbsp; ಜಯಭೇರಿ ಕೇವಲ ಭಾರತೀಯನನ್ನಾಗಿಸದೆ&nbsp; ವಿಶ್ವಮಾನವನನ್ನಾಗಿ&nbsp;&nbsp; ರೂಪಿಸಿತು. ಜಗತ್ತಿನ&nbsp; ಎಲ್ಲಾ&nbsp; ದೇವರು, ಧರ್ಮಕ್ಕಿಂತಲೂ ಮಿಗಿಲಾದದ್ದು&nbsp; ಮಾನವಧರ್ಮ ಎಂದು ವಿಶ್ವದಾದ್ಯಂತ&nbsp; ಸಾರಿದ&nbsp; ಕೀರ್ತಿ&nbsp; ಬಂಗಾಳದ ವಿವೇಕಶಾಲಿ&nbsp;&nbsp;&nbsp; ವಿವೇಕಾನಂದ ಅವರಿಗೆ ಮಾತ್ರ&nbsp; ಸಲ್ಲುತ್ತದೆ. ಹೀಗಾಗಿಯೇ ವಿವೇಕಾನಂದರ&nbsp; ವಿಚಾರಧಾರೆಗಳು&nbsp; ಜಡಗೊಂಡ ಸನಾತನವಾದಿಗಳ&nbsp; ಕೈಗೆ ನಿಲುಕದೆ&nbsp; ಜಾತಿ, ಮತಪಂಥಗಳಿಂದಾಚೆ&nbsp; ನಿಂತ&nbsp; ವಿಶ್ವಮಾನವನ ಅನ್ವೇಷಣೆಗೆ ತೊಡಗುತ್ತವೆ.</p>
]]></content:encoded>
					
		
		
			</item>
	</channel>
</rss>
