<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>vote theft &#8211; Peepal Media</title>
	<atom:link href="https://peepalmedia.com/tag/vote-theft/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 19 Aug 2025 06:44:55 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>vote theft &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಒಂದು ಮನೆ ವಿಳಾಸದಲ್ಲಿ ಬೇರೆ ಬೇರೆ ಸಮುದಾಯಗಳ 24 ಮತದಾರರು! &#8211; ತಂಡಗಳಿಂದ ಬಿಹಾರದ ಮತದಾರರ ಪಟ್ಟಿ ಪರಿಶೀಲನೆ</title>
		<link>https://peepalmedia.com/24-voters-from-different-communities-at-one-home-address-teams-verify-bihars-voter-list/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 19 Aug 2025 06:27:22 +0000</pubDate>
				<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[bihar]]></category>
		<category><![CDATA[Election Commission of India]]></category>
		<category><![CDATA[Gyanesh Kumar]]></category>
		<category><![CDATA[jharkhand]]></category>
		<category><![CDATA[karnataka]]></category>
		<category><![CDATA[Rahul Gandhi]]></category>
		<category><![CDATA[vote theft]]></category>
		<guid isPermaLink="false">https://peepalmedia.com/?p=64362</guid>

					<description><![CDATA[ಅಗಸ್ಟ್ ಮೂರನೇ ವಾರದ ಒಂದು ಮುಂಜಾನೆ, ಅರಾ ಪಟ್ಟಣದ ಗೌಸ್‌ಗಂಜ್‌ನ ಬೀದಿಯೊಂದರ ಮೂಲೆಯಲ್ಲಿ ಮರದ ಮೇಜಿನ ಸುತ್ತಲೂ ಜನರ ಗುಂಪೊಂದು ಜಮಾಯಿಸಿತ್ತು. ಮಳೆಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾಗಿದ್ದ ಪ್ಲಾಸ್ಟಿಕ್ ಟೆಂಟಿನ ಅಡಿಯಲ್ಲಿ ಅವರು ಗುಂಪುಗೂಡಿದ್ದರು. ಮೇಜಿನ ಮೇಲೆ ಹರಡಿದ ಕಾಗದದ ಹಾಳೆಗಳನ್ನು ಒಟ್ಟುಮಾಡಿ ಪಿನ್‌ ಮಾಡಲಾಗಿತ್ತು: ಅವು ಆ ಪಟ್ಟಣದ ಉತ್ತರ ಹೊರವಲಯದಲ್ಲಿರುವ ಅರಾ ಕ್ಷೇತ್ರದ ಬೂತ್ ಸಂಖ್ಯೆ 103 ರ ಮತದಾರರ ಪಟ್ಟಿಯ ಪ್ರಿಂಟ್‌ಔಟ್. ಇವರೆಲ್ಲಾ ವಿರೋಧ ಪಕ್ಷದ ಮಹಾಘಟಬಂಧನ್‌ನ ಭಾಗವಾಗಿರುವ ಬಿಹಾರದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾದ [&#8230;]]]></description>
										<content:encoded><![CDATA[
<pre class="wp-block-code"><code>‌<em>ಮತದಾರರ ಪಟ್ಟಿಯನ್ನು ಅಧ್ಯಯನ ಮಾಡಿದ ತಂಡವು ಒಂದೇ ವಿಳಾಸದಲ್ಲಿ 24 ಮತದಾರರನ್ನು ನೋಂದಾಯಿಸಿರುವುದನ್ನು ಕಂಡುಹಿಡಿದಿದೆ, ಮತ್ತೊಂದು ಪ್ರಕರಣದಲ್ಲಿ, ತಂದೆಯ ವಯಸ್ಸು ಮಗಳ ವಯಸ್ಸುಗಿಂತ ಕಡಿಮೆಯಿದೆ. ಹಾಗಿದ್ದೂ, ಈ ಅನುಮಾನಗಳನ್ನು ಪರಿಶೀಲಿಸುವುದು ಒಂದು ಸವಾಲಿನ ಸಂಗತಿ</em> - 
ತುಷಾರ್ ಧಾರಾ</code></pre>



<p>ಅಗಸ್ಟ್ ಮೂರನೇ ವಾರದ ಒಂದು ಮುಂಜಾನೆ, ಅರಾ ಪಟ್ಟಣದ ಗೌಸ್‌ಗಂಜ್‌ನ ಬೀದಿಯೊಂದರ ಮೂಲೆಯಲ್ಲಿ ಮರದ ಮೇಜಿನ ಸುತ್ತಲೂ ಜನರ ಗುಂಪೊಂದು ಜಮಾಯಿಸಿತ್ತು. ಮಳೆಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾಗಿದ್ದ ಪ್ಲಾಸ್ಟಿಕ್ ಟೆಂಟಿನ ಅಡಿಯಲ್ಲಿ ಅವರು ಗುಂಪುಗೂಡಿದ್ದರು. ಮೇಜಿನ ಮೇಲೆ ಹರಡಿದ ಕಾಗದದ ಹಾಳೆಗಳನ್ನು ಒಟ್ಟುಮಾಡಿ ಪಿನ್‌ ಮಾಡಲಾಗಿತ್ತು: ಅವು ಆ ಪಟ್ಟಣದ ಉತ್ತರ ಹೊರವಲಯದಲ್ಲಿರುವ ಅರಾ ಕ್ಷೇತ್ರದ ಬೂತ್ ಸಂಖ್ಯೆ 103 ರ ಮತದಾರರ ಪಟ್ಟಿಯ ಪ್ರಿಂಟ್‌ಔಟ್. ಇವರೆಲ್ಲಾ ವಿರೋಧ ಪಕ್ಷದ ಮಹಾಘಟಬಂಧನ್‌ನ ಭಾಗವಾಗಿರುವ ಬಿಹಾರದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂಎಲ್) ಲಿಬರೇಶನ್‌ನ ಕಾರ್ಯಕರ್ತರಾಗಿದ್ದರು.</p>



<p>ಲಿಬರೇಶನ್‌ನ ಬಿಹಾರ ರಾಜ್ಯ ಸಮಿತಿಯ ಸದಸ್ಯರಾದ ಖುಯಾಮುದ್ದೀನ್ ಅನ್ಸಾರಿ, ಮತದಾರರ ಪಟ್ಟಿಯಲ್ಲಿ ಆಗಿರುವ ಮೋಸವನ್ನು ಪತ್ತೆಹಚ್ಚಲು, ಕಾಣೆಯಾಗಿರುವ ಹೆಸರುಗಳು ಅಥವಾ ಡಿಲಿಟ್‌ ಮಾಡಲಾಗಿರುವ ಹೆಸರುಗಳನ್ನು ಗುರುತಿಸಲು ಮತ್ತು ಕರಡು ಪಟ್ಟಿಯಲ್ಲಿರುವ ಮತದಾರರ ಮನೆ-ಮನೆ ಪರಿಶೀಲನೆಯನ್ನು ನಡೆಸಲು ರೂಪಿಸಲಾಗಿರುವ ತಂಡವೊಂದನ್ನು  ಮುನ್ನಡೆಸುತ್ತಿದ್ದರು. ಹಾಗಿದ್ದೂ, ಮಳೆಗಾಲದ ಕಾರಣ, ಇಡೀ ನೆರೆಹೊರೆಯ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದು, ಮುಖತಃ ಹೋಗಿ ಭೇಟಿ ಮಾಡುವುದು ಸವಾಲಿನ ಸಂಗತಿಯಾಗಿತ್ತು.</p>



<p>ಖ್ವಾಮುದ್ದೀನ್ ಮತ್ತು ವಿಶ್ವಕರ್ಮ ಪಾಸ್ವಾನ್ ಮತ್ತು ಹಿಮ್ಮತ್ ಯಾದವ್ ಅವರನ್ನು ಒಳಗೊಂಡಿರುವ ಅವರ ತಂಡ ಈ ವಂಚನೆಯ ಪ್ರಕರಣಗಳನ್ನು ಗುರುತಿಸಲು ಪ್ರಯತ್ನಿಸುತ್ತಾ, ಕರಡು ಮತದಾರರ ಪಟ್ಟಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಒಂದು ನಿದರ್ಶನದಲ್ಲೇ, ಮತದಾರರ ಪಟ್ಟಿಯಲ್ಲಿ ಮನೆ ಸಂಖ್ಯೆ 10 ಎಂಬ ಒಂದೇ ವಿಳಾಸದಲ್ಲಿ 24 ಮತದಾರರು ನೋಂದಾಯಿಸಲ್ಪಟ್ಟಿರುವುದನ್ನು ಅವರು ಕಂಡುಹಿಡಿದರು ಮತ್ತು ಇದನ್ನು ವಂಚನೆಯೆಂದು ಕರೆದರು. </p>



<p>ಪಟ್ಟಿಯಲ್ಲಿ ಠಾಕೂರರು, ಬ್ರಾಹ್ಮಣರು ಮತ್ತು ಬನಿಯಾ ಹೆಸರುಗಳು ಇದ್ದುದರಿಂದ ಅವರು ಈ ತೀರ್ಮಾನಕ್ಕೆ ಬಂದಿದ್ದರು. ಬಿಹಾರದ ಜಾತಿ ವ್ಯವಸ್ಥೆಯ ವಾಸ್ತವಗಳನ್ನು ನೋಡಿದರೆ ಇದೊಂದು ವಿಚಿತ್ರವೆಂಬಂತೆ ಅವರಿಗೆ ಅನ್ನಿಸಿತ್ತು. ಅಲ್ಲದಿದ್ದರೆ ಬೇರೆ ಬೇರೆ ಜಾತಿಯ ಜನರು ಒಂದೇ ಮನೆಯ ಸದಸ್ಯರಂತೆ ಒಂದು ಮನೆಯಲ್ಲಿ ವಾಸಿಸಲು ಹೇಗೆ ಸಾಧ್ಯ?  </p>



<p>ಆಪಾದಿತ ದುಷ್ಕೃತ್ಯದ ಮತ್ತೊಂದು ಉದಾಹರಣೆಯೆಂದರೆ ತಂದೆ-ಮಗಳನ್ನು ದಂಪತಿಯೆಂಬಂತೆ ಮತದಾರರ ಹೆಸರಿನಲ್ಲಿ ಪಟ್ಟಿ ಮಾಡಿರುವುದು! ಅದೂ ತಂದೆಯ ವಯಸ್ಸು 28 ಮತ್ತು ಮಗಳ ವಯಸ್ಸು 29 ಎಂದು ಉಲ್ಲೇಖಿಸಲಾಗಿದೆ!</p>



<p>&#8220;ಮನೆ ಮನೆ ಭೇಟಿಗಳಿಂದ ಈ ವಂಚನೆಯನ್ನು ದೃಢೀಕರಿಸಲು ಸಾಧ್ಯವಿಲ್ಲ, ಮತದಾರರ ಪಟ್ಟಿಯ ವಿಸ್ತೃತ ಅಧ್ಯಯನದಿಂದ ಮಾತ್ರ ಅದನ್ನು ಬಯಲಿಗೆಳೆಯಬಹುದು&#8221; ಎಂದು ಖುಯಮ್ಮುದ್ದೀನ್ ಹೇಳುತ್ತಾರೆ. ತಮ್ಮ ಹೆಸರುಗಳನ್ನು ತಪ್ಪಾಗಿ ಅಳಿಸಲಾಗಿದೆ ಎಂದು ಆರೋಪಿಸುತ್ತಿರುವ ನೂರಾರು ಜನರ ಸಾಕ್ಷ್ಯಗಳನ್ನು ಅವರು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಇಟ್ಟಿದ್ದಾರೆ.</p>



<p><em>ಅನುಮಾನಾಸ್ಪದ ವಿಳಾಸದ ಮೊದಲ ನಿದರ್ಶನವನ್ನು ದಿ ವೈರ್</em>&nbsp;ಎರಡು ಕಾರಣಗಳಿಗಾಗಿ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ: ಮೊದಲನೆಯದಾಗಿ, ಈ ನಿರ್ದಿಷ್ಟ ಮನೆ ಇರುವ ಪ್ರದೇಶವು ಪ್ರವಾಹಕ್ಕೆ ಸಿಲುಕಿದೆ, ಆದ್ದರಿಂದ ಭೇಟಿ ನೀಡುವುದು ಕಷ್ಟಕರವಾಗಿದೆ. ಎರಡನೆಯದಾಗಿ, ಮತದಾರರ ಪಟ್ಟಿಯಲ್ಲಿ ಅನುಗುಣವಾದ ವಿಳಾಸವನ್ನು ನೀಡದೆ ಮನೆ ಸಂಖ್ಯೆಯನ್ನು ಪಟ್ಟಿ ಮಾಡಲಾಗಿದೆ, ಇದರಿಂದಾಗಿ ಆ ಪ್ರದೇಶದ ಪರಿಚಯವಿಲ್ಲದವರನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ.&nbsp;</p>



<p>ಈ ಎರಡೂ ಪ್ರಕರಣಗಳು ಚುನಾವಣಾ ವಂಚನೆಗೆ ದೊಡ್ಡ ನಿದರ್ಶನಗಳಾಗಿವೆ ಎಂದು ಲಿಬರೇಶನ್ ತಂಡಕ್ಕೆ ಮನವರಿಕೆಯಾಗಿದೆಯಾದರೂ, ವಿಷಯವು ಅಷ್ಟು ಸ್ಪಷ್ಟವಾಗಿಲ್ಲ. ಅಲ್ಲದೇ, ಇದು ಪ್ರತಿಕೂಲ ಹವಾಮಾನ ಇರುವಾಗ ಕಡಿಮೆ ಅವಧಿಯಲ್ಲಿ ಮತದಾರರ ಪಟ್ಟಿಗಳನ್ನು ಪರಿಶೀಲಿಸುವಲ್ಲಿನ ತೊಂದರೆಗಳನ್ನು ಎತ್ತಿ ತೋರಿಸುತ್ತದೆ. </p>



<p>ಮತದಾರರು ವಿಳಾಸ ಕಾಲಮ್ ಅನ್ನು ಖಾಲಿ ಬಿಡುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಚುನಾವಣಾ ಆಯೋಗವು ಕಾಲ್ಪನಿಕ ಮನೆ ಸಂಖ್ಯೆಗಳನ್ನು ಬಳಸುತ್ತದೆ. <a href="https://indianexpress.com/article/political-pulse/election-commission-notional-house-numbers-inclusion-roll-standardised-addresses-10185846/" target="_blank" rel="noreferrer noopener"><em>ದಿ ಇಂಡಿಯನ್ ಎಕ್ಸ್‌ಪ್ರೆಸ್</em></a><a href="https://indianexpress.com/article/political-pulse/election-commission-notional-house-numbers-inclusion-roll-standardised-addresses-10185846/" target="_blank" rel="noreferrer noopener"> ವರದಿ ಮಾಡಿದಂತೆ</a> ಚುನಾವಣಾ ಸಂಸ್ಥೆಯು ರೋಲ್‌ಗಳನ್ನು ಗಣಕೀಕರಿಸಲು ಪ್ರಾರಂಭಿಸಿದಾಗ ಇದು ಪ್ರಾರಂಭವಾಯಿತು ಮತ್ತು ಡಿಜಿಟಲೀಕರಣಕ್ಕೆ ಬದಲಾವಣೆಯ ಸಮಯದಲ್ಲಿ ಕಾಲ್ಪನಿಕ ವಿಳಾಸಗಳನ್ನು ಬಳಸುವುದು ಪ್ರಮಾಣಿಕೃತವಾಯಿತು.  </p>



<p>ಆಗಸ್ಟ್ 7 ರಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು &#8220;ಕಳ್ಳತನ&#8221;ವಾಗಿದ್ದು, ಅವುಗಳಲ್ಲಿ ಅರ್ಧದಷ್ಟು ವಿಳಾಸ ಅಕ್ರಮಗಳಾಗಿವೆ ಎಂದು ಹೇಳಿದಾಗ ಈ ವಿಚಾರ ಮುನ್ನಲೆಗೆ ಬಂತು.</p>



<p>&#8220;ಮತದಾರರ ಪಟ್ಟಿಯಲ್ಲಿ ವಿಳಾಸ ಅಕ್ರಮಗಳ ಬಗ್ಗೆ ಹಲವಾರು ವ್ಯಾಖ್ಯಾನಗಳಿವೆ ಮತ್ತು ಪರಿಶೀಲಿಸಲು ಏಕೈಕ ಮಾರ್ಗವೆಂದರೆ ಮನೆಗೆ ಭೇಟಿ ನೀಡುವುದು&#8221; ಎಂದು&nbsp; ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನ ಸ್ಥಾಪಕ ಸದಸ್ಯ ಜಗದೀಪ್ ಛೋಕರ್,&nbsp;<em>ದಿ ವೈರ್</em>&nbsp;ಜೊತೆಗಿನ ದೂರವಾಣಿ ಸಂದರ್ಶನದಲ್ಲಿ ಹೇಳಿದರು.</p>



<p>&#8220;ನೀವು ರಾಜಕೀಯ ಪಕ್ಷಗಳನ್ನು ಅವಲಂಬಿಸಿದರೆ, ಅವರು ನಿಮಗೆ ಏನು ತೋರಿಸಬೇಕೆಂದು ಬಯಸುತ್ತಾರೋ ಅದನ್ನೇ ತೋರಿಸುತ್ತಾರೆ&#8221; ಎಂದು ಅವರು ಹೇಳಿದರು. ತಂದೆ-ಮಗಳ ವಯಸ್ಸಿನ ವ್ಯತ್ಯಾಸದ ಬಗ್ಗೆ ಜಗದೀಪ್ ಛೋಕರ್, ಇವುಗಳು ಸ್ಥೂಲ ದೋಷಗಳಾಗಿರಬಹುದು ಎಂದು ಹೇಳಿದರು. &#8220;ಸಣ್ಣ ಸಣ್ಣ ವೈಯಕ್ತಿಕ ದೋಷಗಳ ಬದಲು ವ್ಯವಸ್ಥಿತ ವಂಚನೆಯನ್ನು ಹುಡುಕಿ ಬಯಲಿಗೆಳೆಯಬೇಕು.&#8221; </p>



<p>ಬಿಹಾರದಲ್ಲಿ ನಡೆಸಿದ ವಿಶೇಷ ತೀವ್ರ ಪರಿಶೀಲನೆಯನ್ನು (Special Intensive Review) ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಕೂಡ ಒಂದು. ಆದರೆ ಹಲವಾರು ಕಾರಣಗಳಿಂದಾಗಿ, ಇದನ್ನು ಹೇಳುವುದು ಸುಲಭ, ಆದರೆ ಅನೇಕ ಕಾರಣಗಳಿಂದಾಗಿ ಮಾಡುವುದು ಅಷ್ಟು ಸುಲಭದಲ್ಲ.. </p>



<p>ಆಗಸ್ಟ್ 9 ರಂದು, ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ದಿಲಿಟ್‌ ಮಾಡಿ, ಸ್ಕ್ಯಾನ್ ಮಾಡಿದ ಚಿತ್ರಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಇದರ ಮೆಷಿನ್‌ ರೀಡಿಂಗ್‌ ಮಾಡುವುದು ಕಷ್ಟದ ಕೆಲಸ, ಇದರಿಂದಾಗಿ ದೊಡ್ಡ ಪ್ರಮಾಣದ ಅಕ್ರಮಗಳನ್ನು ಪತ್ತೆಹಚ್ಚಲಾಯಿತು ಎಂದು <a href="https://scroll.in/latest/1085399/election-commission-removes-digital-draft-voter-lists-in-bihar" target="_blank" rel="noreferrer noopener"><em>ಸ್ಕ್ರೋಲ್</em> ವರದಿ ಮಾಡಿದೆ</a>. </p>



<p>ಎರಡನೆಯದಾಗಿ, ಚುನಾವಣಾ ಸಂಸ್ಥೆಯು SIR ಮತದಾರರ ಪಟ್ಟಿಯಿಂದ ಅಳಿಸಲಾದವರ ಪಟ್ಟಿಯನ್ನು (ಇಲ್ಲಿಯವರೆಗೆ 65 ಲಕ್ಷ) ನೀಡಿದ್ದರೂ, ಯಾಕೆ ಅಳಿಸಲಾಗಿದೆ ಎಂಬ ಕಾರಣಗಳ ವಿವರವನ್ನು ನೀಡಿಲ್ಲ. ಎಷ್ಟು ಹೆಸರುಗಳು ಸ್ಥಳಾಂತರಗೊಂಡಿವೆ, ಎಷ್ಟು ಜನ ಸತ್ತಿದ್ದಾರೆ ಅಥವಾ ನಕಲಿ ನಮೂದುಗಳಾಗಿದ್ದವು ಎಂದು ತಿಳಿಯಲು ಯಾವುದೇ ಮಾರ್ಗವಿಲ್ಲ. ಈ ಮಾಹಿತಿಯಿಲ್ಲದೆ, ನೆಲಮಟ್ಟದಲ್ಲಿ ಪರಿಶೀಲನೆ ನಡೆಸುವುದು ಇನ್ನಷ್ಟು ಕಷ್ಟಕರವಾಗುತ್ತದೆ. </p>



<p>ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಅಳಿಸುವಿಕೆಗೆ ಕಾರಣಗಳ ಜೊತೆಗೆ ಪಟ್ಟಿಯನ್ನು ಪ್ರಕಟಿಸುವಂತೆ ನಿರ್ದೇಶನ ನೀಡಿದ್ದರೂ, ಕಡಿಮೆ ಅವಧಿ ಮತ್ತು ಮಳೆಯಲ್ಲಿ ಏರಿಕೆ ಕಂಡುಬಂದಿರುವುದರಿಂದ ಅಕ್ರಮಗಳನ್ನು ಪತ್ತೆಹಚ್ಚಲು ತಂಡಗಳು ಓಡುತ್ತಿವೆ. ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 1 ರಂದು ಪ್ರಕಟಿಸಲಾಗುವುದು. </p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="1024" height="989" src="https://peepalmedia.com/wp-content/uploads/2025/08/image-1.png" alt="" class="wp-image-64371" style="width:450px;height:auto" srcset="https://peepalmedia.com/wp-content/uploads/2025/08/image-1.png 1024w, https://peepalmedia.com/wp-content/uploads/2025/08/image-1-300x290.png 300w, https://peepalmedia.com/wp-content/uploads/2025/08/image-1-768x742.png 768w, https://peepalmedia.com/wp-content/uploads/2025/08/image-1-150x145.png 150w, https://peepalmedia.com/wp-content/uploads/2025/08/image-1-696x672.png 696w" sizes="(max-width: 1024px) 100vw, 1024px" /><figcaption class="wp-element-caption">ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ &#8216;ಮೃತ&#8217; ಎಂದು ಘೋಷಿಸಲ್ಪಟ್ಟಿರುವ ಮಿಂಟು ಪಾಸ್ವಾನ್. ಫೋಟೋ: ದಿ ವೈರ್ </figcaption></figure></div>


<p><a href="https://thewire.in/government/declared-dead-in-draft-electoral-roll-bihar-voter-appears-in-supreme-court" target="_blank" rel="noreferrer noopener">ಗೌಸ್‌ಗಂಜ್‌ನಲ್ಲಿ ಕೆಲಸ ಮಾಡುತ್ತಿರುವ ಲಿಬರೇಶನ್ ತಂಡವು ಮಿಂಟು ಪಾಸ್ವಾನ್ ಪ್ರಕರಣವನ್ನು ಪತ್ತೆಹಚ್ಚಿತು</a>. ಮಿಂಟು ಜೀವಂತವಾಗಿದ್ದರೂ ಮತದಾರರ ಪಟ್ಟಿಯಲ್ಲಿ ಅವರನ್ನು &#8216;ಸತ್ತಿದ್ದಾರೆ&#8217; ಎಂದು ಘೋಷಿಸಲಾಗಿದೆ. ನಿಜವೇನೆಂದರೆ, ಸುಪ್ರೀಂ ಕೋರ್ಟ್‌ನಲ್ಲಿ ಸಾಕ್ಷಿಯಾಗಿ ಹಾಜರಾಗಲು, ಎಸ್‌ಐಆರ್ ನಿಜವಾದ ಮತದಾರರನ್ನು ಪಟ್ಟಿಯಿಂದ ಹೇಗೆ ಅಳಿಸುತ್ತಿದೆ ಎಂಬುದನ್ನು ತೋರಿಸಲು ಮಿಂಟು ನವದೆಹಲಿಗೆ ಹೋಗಿದ್ದಾರೆ.</p>



<p>ಅರ್ರಾಹ್‌ನ ಇನ್ನೊಂದು ಭಾಗದಲ್ಲಿ, ಸುಧೀರ್ ಕುಮಾರ್ ತಮ್ಮ ಕಚೇರಿಯಲ್ಲಿ ಕಾಗದಗಳು ಮತ್ತು ನೋಟ್‌ಬುಕ್‌ಗಳ ಜೊತೆಗೆ ಕುಳಿತಿದ್ದಾರೆ. ಕುಮಾರ್ ಲಿಬರೇಶನ್‌ನ ಸದಸ್ಯರಾಗಿದ್ದಾರೆ ಮತ್ತು ಅರ್ರಾಹ್‌ನ ಪಟ್ಟಣ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೇಜಿನ ಮೇಲೆ ಅರ್ರಾಹ್ ಪಟ್ಟಣದ ಮತದಾರರ ಅಳಿಸುವಿಕೆಗಳನ್ನು ಒಳಗೊಂಡಿರುವ A4 ಹಾಳೆಗಳ ದಾಖಲೆಯಿದೆ, ಜೊತೆಗೆ ಪಕ್ಷವು ಆಡಳಿತದಲ್ಲಿನ ವಿಸ್ಲ್‌ಬ್ಲೋವರ್‌ಗಳ ಸಹಾಯದಿಂದ ಸಂಗ್ರಹಿಸಿರುವ ಕಾರಣಗಳನ್ನು ಸಹ ಹೊಂದಿದೆ. ಲಿಬರೇಶನ್ ತಕ್ಷಣವೇ ಅರ್ರಾಹ್ ಪಟ್ಟಣದಾದ್ಯಂತ ಹೋಗಿ ಮತದಾರರ ಪಟ್ಟಿಗಳನ್ನು ಭೌತಿಕ ಪರಿಶೀಲನೆ ನಡೆಸುವುದರೊಂದಿಗೆ ಅನೇಕ ತಂಡಗಳನ್ನು ರಚಿಸಿತು.</p>



<p>ಇದು ಕಷ್ಟದ ಕೆಲಸ. ಅರಾಹ್ ವಿಧಾನಸಭಾ ಕ್ಷೇತ್ರವು 45 ವಾರ್ಡ್‌ಗಳು ಮತ್ತು 242 ಬೂತ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, 12 ಗ್ರಾಮ ಪಂಚಾಯತ್‌ಗಳಿವೆ. ಇಲ್ಲಿಯವರೆಗೆ, 16 ಪ್ರಕರಣಗಳನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಗಿದೆ: ಪಟ್ಟಿಯಲ್ಲಿ &#8216;ಸ್ಥಳಾಂತರಗೊಂಡ&#8217; ಎಂದು ಪಟ್ಟಿ ಮಾಡಲಾದ ಆರು ಪ್ರಕರಣಗಳು ಅರ್ರಾಹ್‌ನಲ್ಲಿವೆ, ಮತ್ತು &#8216;ಸತ್ತ&#8217; ಎಂದು ಘೋಷಿಸಲ್ಪಟ್ಟ 10 ಪ್ರಕರಣಗಳು ಇನ್ನೂ ಜೀವಂತವಾಗಿವೆ. ಆ 10 ಜನರಲ್ಲಿ ಏಳು ಜನರನ್ನು ಪಕ್ಷದ ಕಾರ್ಯಕರ್ತರು ಭೇಟಿ ಮಾಡಿದ್ದಾರೆ, ಮೂವರ ಬಗ್ಗೆ ಇನ್ನೂ ದೃಢೀಕರಿಸಬೇಕಾಗಿದೆ. </p>



<p>ಕುಮಾರ್ ಮತ್ತು ಅವರ ಉಪನಾಯಕ ರಣಧೀರ್ ರಾಣಾ ಅವರು &#8216;ಸತ್ತವರ&#8217; ಪಟ್ಟಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾರೆ ಮತ್ತು ಅದನ್ನು ಬೂತ್‌ವಾರು ಅಳಿಸಿದವರ ಪಟ್ಟಿಯೊಂದಿಗೆ ಹೋಲಿಸುತ್ತಾರೆ. ಹೆಸರುಗಳು ಹೊಂದಿಕೆಯಾದರೆ, ಆ ಮತದಾರರ ಸ್ಥಿತಿಗತಿಯನ್ನು ಪರಿಶೀಲಿಸಲು ಪಕ್ಷದ ಕಾರ್ಯಕರ್ತರನ್ನು ಬೂತ್‌ಗೆ ಕಳುಹಿಸಲಾಗುತ್ತದೆ, ಇದನ್ನು ಅವರು ನೆರೆಹೊರೆಯವರೊಂದಿಗೆ ಮಾತನಾಡುವುದು, ವಿಳಾಸವನ್ನು ಪಡೆಯುವುದು ಮತ್ತು ಭೇಟಿ ಮಾಡುವುದು ಮತ್ತು EC ಯ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಬಳಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಮಾಡುತ್ತಾರೆ.</p>



<p>SIR ಗೆ ಸಮಾನಾಂತರವಾಗಿ, ಚುನಾವಣಾ ಆಯೋಗವು ಮತದಾನ ಕೇಂದ್ರಗಳನ್ನು ವಿಭಜಿಸಿರುವುದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ನಿಜವಾಗಿ, ಪ್ರತಿ ಬೂತ್‌ಗೆ 1,200 ಕ್ಕಿಂತ ಹೆಚ್ಚು ಮತದಾರರು ಇರಬಾರದು, ಅದಕ್ಕೂ ಹೆಚ್ಚು ಮತದಾರರು ಇದ್ದರೆ ಹೊಸ ಬೂತ್ ಅನ್ನು ರಚಿಸಲಾಗುತ್ತದೆ ಅಥವಾ ಹೆಚ್ಚುವರಿ ಮತದಾರರನ್ನು ಮತ್ತೊಂದು ಬೂತ್‌ಗೆ ಸ್ಥಳಾಂತರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬೂತ್ ಸಂಖ್ಯೆಗಳು ಬದಲಾಗುತ್ತವೆ, ಇದು ಗೊಂದಲವನ್ನು ಹೆಚ್ಚಿಸುತ್ತದೆ. </p>



<p>ಉದಾಹರಣೆಗೆ, ಆಗಸ್ಟ್ 11 ರಂದು, &#8216;ಸತ್ತವರು&#8217; ಎಂದು ಪಟ್ಟಿ ಮಾಡಲಾದ ನಾಲ್ವರು ಜನರು ಜೀವಂತವಾಗಿರುವುದು ಕಂಡುಬಂದಿತು, ಅದರಲ್ಲಿ ಮೂರು ಹೆಸರುಗಳು ಹತ್ತಿರದ ಮತಗಟ್ಟೆಯಲ್ಲಿ ಕಂಡುಬಂದವು. ಹೆಚ್ಚುವರಿಯಾಗಿ, ಕರಡು ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲು ದಾಖಲೆಗಳನ್ನು ಸಂಗ್ರಹಿಸುವ ಮತ್ತು ಮತದಾರರನ್ನು ಸೇರಿಸುವ ಹೆಚ್ಚಿನ ಕೆಲಸವನ್ನು ಮಾಡಿದ ಬ್ಲಾಕ್ ಮಟ್ಟದ ಅಧಿಕಾರಿಗಳು ಹೆಚ್ಚಿನ ಸಹಾಯವನ್ನು ನೀಡಲಿಲ್ಲ.&nbsp;</p>



<p>ಅವರಲ್ಲಿ ಹೆಚ್ಚಿನವರಿಗೆ ಸಾಕು ಸಾಕಾಗಿ ಹೋಗಿದೆ, ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ, ಕರೆಗಳನ್ನು ಸ್ವೀಕರಿಸುತ್ತಿಲ್ಲ. </p>



<p>&#8220;ಮುಂದಿನ 15 ದಿನಗಳಲ್ಲಿ ನಾವು ಎಷ್ಟು ಅಕ್ರಮಗಳನ್ನು ಕಂಡುಹಿಡಿಯಬಹುದು?&#8221; ಎಂದು ಕುಮಾರ್ ಕೇಳುತ್ತಾರೆ. ಬಿಹಾರದ ಹೆಚ್ಚಿನ ಜನರು ಇನ್ನೂ SIR ಮತ್ತು ಪೌರತ್ವದ ನಡುವಿನ ಸಂಬಂಧವನ್ನು ಕಂಡುಕೊಂಡಿಲ್ಲ ಮತ್ತು ವಿರೋಧ ಪಕ್ಷಗಳಿಗೆ ಇದನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಾಗಿಲ್ಲ ಎಂದು ಅವರು ಒಪ್ಪಿಕೊಳ್ಳುತ್ತಾರೆ. </p>



<p>ಬಿಹಾರದಲ್ಲಿ ಲಿಬರೇಶನ್‌ನ ಪ್ರಮುಖ ಮತದಾರರು ದಲಿತರ ಮತ್ತು ಇಬಿಸಿ ಸಮುದಾಯಗಳಲ್ಲಿದ್ದಾರೆ. ಲಿಬರೇಶನ್ ಪಕ್ಷದ ಪ್ರಕಾರ, ಅಳಿಸಲಾಗಿರುವ ಗರಿಷ್ಠ ಮತದಾರರು ಈ ವರ್ಗಗಳಿಗೆ ಸೇರಿದವರು.  ಛತ್ತೀಸ್‌ಗಢದಲ್ಲಿ ಮಾವೋವಾದಿಗಳನ್ನು &#8220;ಮುಗಿಸಿದಂತೆ&#8221; ತಮ್ಮ ಮತದಾರರನ್ನು ನಿರ್ಮೂಲನೆ ಮಾಡುವ ಮೂಲಕ ಬಿಹಾರದಲ್ಲಿ ವಿಮೋಚನೆಯನ್ನು ಪೂರ್ಣಗೊಳಿಸಲು ಬಿಜೆಪಿ ಬಯಸುತ್ತಿದೆ ಎಂದು ಕುಮಾರ್ ಹೇಳುತ್ತಾರೆ. ‌ </p>



<p>“ಹಿಂದೆಲ್ಲಾ, ನೇರವಾಗಿ ಬೂತ್‌ಗಳನ್ನು ಕಬಳಿಸಲಾಗುತ್ತಿತ್ತು, ಈಗ ಪರೋಕ್ಷವಾಗಿ ಕಬಳಿಸಲಾಗುತ್ತಿದೆ,” ಎಂದು ಅವರು ಹೇಳುತ್ತಾರೆ.</p>



<p><em>ಇದು ದಿ ವೈರ್‌ ಪ್ರಕಟಿಸಿದ ತುಷಾರ್ ಧಾರಾ</em> ಅವರ<em> &#8216;<a href="https://thewire.in/rights/bihar-sir-voter-roll-scrutiny-teams-examining-election-commission-eletoral-rolls-24-voters-in-address">24 Voters in an Address&#8217;, Floods and a Ticking Clock: What Teams Examining Bihar&#8217;s Voter Rolls Encounter</a> ನ ಕನ್ನಡಾನುವಾದ</em></p>



<p></p>



<p></p>
]]></content:encoded>
					
		
		
			</item>
		<item>
		<title>ಅಫಿಡವಿಟ್‌ನಲ್ಲಿ ಪಕ್ಷಪಾತ, ಅಕ್ರಮ ವಲಸಿಗರ ಬಗ್ಗೆ ಮೌನ: ಚುನಾವಣಾ ಆಯೋಗದ ಬಳಿ ಈ ಏಳು ಪ್ರಶ್ನೆಗಳಿಗೆ ಉತ್ತರವಿಲ್ಲ!</title>
		<link>https://peepalmedia.com/silence-on-illegal-immigrants-no-answers-from-the-election-commission/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 18 Aug 2025 07:18:00 +0000</pubDate>
				<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[Election Commission of India]]></category>
		<category><![CDATA[Gyanesh Kumar]]></category>
		<category><![CDATA[karnataka]]></category>
		<category><![CDATA[Rahul Gandhi]]></category>
		<category><![CDATA[vote theft]]></category>
		<guid isPermaLink="false">https://peepalmedia.com/?p=64321</guid>

					<description><![CDATA[&#8220;ಮತ ಕಳ್ಳತನ&#8221; ಆರೋಪ ಮತ್ತು ಬಿಹಾರದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ 65 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿರುವ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (Special Intensive Revision &#8211; SIR) ಕುರಿತು ವಿರೋಧ ಪಕ್ಷಗಳ ಟೀಕೆಗಳನ್ನು ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಭಾನುವಾರ (ಆಗಸ್ಟ್ 17) ಮಾತನಾಡಿದರು. 2024 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ [&#8230;]]]></description>
										<content:encoded><![CDATA[
<pre class="wp-block-code"><code><em>ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 2003 ರಲ್ಲಿ ಬಿಹಾರ ಎಸ್ಐಆರ್ ಅನ್ನು ಜುಲೈನಲ್ಲಿ ನಡೆಸಲಾಯಿತು ಎಂದು ಹೇಳಿದರೆ. ಆದರೆ ಆ ವರ್ಷ ಯಾವುದೇ ಚುನಾವಣೆಗಳು ನಡೆದಿಲ್ಲ ಎಂಬುದನ್ನು ಉಲ್ಲೇಖಿಸಲಿಲ್ಲ. ರಾಹುಲ್ ಗಾಂಧಿಯವರು 7 ದಿನಗಳಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು ಮತ್ತು ಮತದಾರರ ಪಟ್ಟಿಯಲ್ಲಿ ಹಲವು ಬಾರಿ ಹೆಸರುಗಳು ಬಂದಿದ್ದರೆ, ಅದು ಮತ ಕಳ್ಳತನವನ್ನು ತೋರಿಸುವುದಿಲ್ಲ ಎಂದು ಹೇಳಿದರು</em> - ಶ್ರಾವಸ್ತಿ ದಾಸಗುಪ್ತ, ದಿ ವೈರ್</code></pre>



<p>&#8220;ಮತ ಕಳ್ಳತನ&#8221; ಆರೋಪ ಮತ್ತು ಬಿಹಾರದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ 65 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿರುವ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (Special Intensive Revision &#8211; SIR) ಕುರಿತು ವಿರೋಧ ಪಕ್ಷಗಳ ಟೀಕೆಗಳನ್ನು ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಭಾನುವಾರ (ಆಗಸ್ಟ್ 17) ಮಾತನಾಡಿದರು.</p>



<p>2024 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂಬ ಆರೋಪದ ಮೇಲೆ ಚುನಾವಣಾ ಆಯೋಗವು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಂದ ಪ್ರಮಾಣವಚನದಡಿಯಲ್ಲಿ (oath) ಅಫಿಡವಿಟ್ ಕೇಳುತ್ತಿದೆಯೇ ಎಂಬ ಪ್ರಶ್ನೆಗೆ ಇಡೀ ಪತ್ರಿಕಾಗೋಷ್ಠಿಯಲ್ಲಿ ಜ್ಞಾನೇಶ್‌ ಕುಮಾರ್ ಯಾವುದೇ ಉತ್ತರವನ್ನು ನೀಡಲಿಲ್ಲ. ಆದರೆ ರಾಯ್ ಬರೇಲಿ, ವಯನಾಡ್, ಡೈಮಂಡ್ ಹಾರ್ಬರ್ ಮತ್ತು ಕನ್ನೌಜ್‌ನಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದಾಗ, ಅವರಿಂದ ಚುನಾವಣಾ ಆಯೋಗ ಯಾವುದೇ ಅಫಿಡವಿಟ್ ಕೇಳಿರಲಿಲ್ಲ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಅಭಿಷೇಕ್ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಅವರು ಲೋಕಸಭಾ ಸಂಸದ <a href="https://thewire.in/politics/elections-choreographed-huge-criminal-fraud-by-election-commission-rahul-gandhi">ಸ್ಥಾನಕ್ಕೆ</a> ರಾಜೀನಾಮೆ ನೀಡಬೇಕೆಂದು ಅನುರಾಗ್‌ ಠಾಕೂರ್ ಒತ್ತಾಯಿಸಿದರು.‌</p>



<p>ಬಿಹಾರದಲ್ಲಿ ಎಷ್ಟು ಗಣತಿ ನಮೂನೆಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲಾಗಿದೆ ಮತ್ತು ಎಸ್‌ಐಆರ್ ಸಮಯದಲ್ಲಿ ಎಷ್ಟು ವಿದೇಶಿ ದಾಖಲೆರಹಿತ ವಲಸಿಗರು ಕಂಡುಬಂದಿದ್ದಾರೆ ಎಂಬ ಪ್ರಶ್ನೆಗಳಿಗೆ ಹಾಗೂ ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತರಲು ಈ ಪ್ರಕ್ರಿಯೆಯನ್ನು ಬಳಸಲಾಗುತ್ತಿದೆಯೇ ಎಂಬ ಆರೋಪಗಳಿಗೆ ಕೂಡ ಜ್ಞಾನೇಶ್ ಕುಮಾರ್ ಯಾವುದೇ ಉತ್ತರಗಳನ್ನು ನೀಡಲಿಲ್ಲ.</p>



<p>ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲಿರುವಾಗ ಮತ್ತು ಅದು ಕೂಡ ಪ್ರವಾಹದ ಸಮಯದಲ್ಲಿ ಎಸ್‌ಐಆರ್ ಅನ್ನು ಏಕೆ ನಡೆಸಲಾಗುತ್ತಿದೆ ಎಂಬ ಪ್ರಶ್ನೆಗೆ ಕುಮಾರ್ ಉತ್ತರಿಸುತ್ತಾ, 2003 ರಲ್ಲಿ ನಡೆದ ಕೊನೆಯ ಪುನರಾವರ್ತನೆಯು (Iteration) ಜುಲೈನಲ್ಲಿ ನಡೆಯಿತು ಎಂದು ಹೇಳಿದರು, ಆದರೆ ವಿಧಾನಸಭಾ ಚುನಾವಣೆಗಳು ಅಕ್ಟೋಬರ್ 2005 ರವರೆಗೆ ಇರಲಿಲ್ಲ ಎಂದು ಉಲ್ಲೇಖಿಸುವುದನ್ನು ಮರೆತಂತಿತ್ತು.</p>



<p>ಬದಲಾಗಿ, ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ‌ ಬಹಳ ಅಳೆದು ತೂಗಿ ತಮ್ಮ ಉತ್ತರಗಳನ್ನು ನೀಡುತ್ತಿದ್ದರು. ಮನೆ ಸಂಖ್ಯೆಗಳನ್ನು 0 (ಸೊನ್ನೆ) ಎಂದು ಉಲ್ಲೇಖಿಸಲಾಗಿರುವ ಮತದಾರರ ಹೆಸರುಗಳನ್ನು  ಬಡವರ ಬಗ್ಗೆ ಮಾಡುವ ತಮಾಷೆ ಎಂದು ಬಿಂಬಿಸಲುಪ್ರಯತ್ನಿಸಿದರು ಮತ್ತು ಮತದಾರರ ಹೆಸರು ಹಲವು ಬಾರಿ ಕಾಣಿಸಿಕೊಳ್ಳುವುದು ಮತ ಕಳ್ಳತನವನ್ನು ತೋರಿಸುವುದಿಲ್ಲ ಅಥವಾ ಅವರು ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಿದ್ದಾರೆ ಎಂದು ಅರ್ಥವಲ್ಲ ಎಂದು ವಾದಿಸಿದರು. </p>



<p>ಜ್ಞಾನೇಶ್‌ ಕುಮಾರ್‌ ರಾಹುಲ್ ಗಾಂಧಿಯವರಿಗೆ ಒಂದು ಅಲ್ಟಿಮೇಟಮ್ ಸಹ ಹೊರಡಿಸಿದರು, ಏಳು ದಿನಗಳಲ್ಲಿ ಪ್ರಮಾಣವಚನದಡಿ ಅಫಿಡವಿಟ್‌ ಸಲ್ಲಿಸಬೇಕು ಅಥವಾ ರಾಷ್ಟ್ರದ ಕ್ಷಮೆಯಾಚಿಸಿ ಎಂದು ಹೇಳಿದರು.</p>



<p><em>ಚುನಾವಣಾ ಆಯೋಗದ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸದ ಏಳು ಅಂಶಗಳ ಬಗ್ಗೆ ಒಂದು ಒಳನೋಟವನ್ನು ಇಲ್ಲಿ ನೀಡಲಾಗಿದೆ. </em></p>



<p>‌ಚುನಾವಣಾ ಆಯೋಗವು ರಾಹುಲ್ ಗಾಂಧಿಯವರಿಂದ ಅಫಿಡವಿಟ್ ಕೇಳಿದೆಯೇ ಹೊರತು, ಅಂತಹದೇ ಆರೋಪಗಳನ್ನು ಮಾಡಿರುವ ಬಿಜೆಪಿಯಿಂದ ಕೇಳಿಲ್ಲ.</p>



<p><em>ಜ್ಞಾನೇಶ್‌ ಕುಮಾರ್ ತಮ್ಮ ಪತ್ರಿಕಾಗೋಷ್ಠಿಯನ್ನು ಆರಂಭಿಸುತ್ತಲೇ, ಚುನಾವಣಾ ಆಯೋಗಕ್ಕೆ &#8220;ಪಕ್ಷ</em> ಅಥವಾ <em>ವಿಪಕ್ಷ</em> &#8221; (ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ) ಎಂಬುದು ಇಲ್ಲ ಎಂದು ಹೇಳಿದರು.</p>



<p>&#8220;ಚುನಾವಣಾ ಆಯೋಗಕ್ಕೆ ಆಡಳಿತ ಪಕ್ಷಗಳು ಅಥವಾ ವಿರೋಧ ಪಕ್ಷಗಳು ಇಲ್ಲ; ಎಲ್ಲರೂ ಸಮಾನರು. ಯಾವುದೇ ರಾಜಕೀಯ ಪಕ್ಷದಿಂದ ಯಾರೇ ಬಂದರೂ, ಆಯೋಗ ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ಮಾಡದೇ ಇರುವುದಿಲ್ಲ&#8221; ಎಂದು ಅವರು ಹೇಳಿದರು.</p>



<p><a href="https://thewire.in/government/election-commission-opposition-creating-confusion-bihar-sir">ಹಾಗಿದ್ದೂ, ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪಗಳು &#8220;ಆಧಾರರಹಿತ&#8221;</a> ಎಂದು ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿ‌, ಅವರಿಂದ ಅಫಿಡವಿಟ್ ಕೂಡ ಕೇಳಿದರು.</p>



<p>&#8220;ಒಬ್ಬ ಮತದಾರನ ವಿರುದ್ಧ ದೂರು ಬಂದರೆ, ಚುನಾವಣಾ ಆಯೋಗ ಅದನ್ನು ಪರಿಶೀಲಿಸುತ್ತದೆ. ಆದರೆ ಸುಮಾರು 1.5 ಲಕ್ಷ ಮತದಾರರ ಬಗ್ಗೆ ಮೇಲೆ ಆರೋಪಗಳು ಬಂದಿವೆ, ಯಾವುದೇ ಪುರಾವೆ ಅಥವಾ ಅಫಿಡವಿಟ್ ಇಲ್ಲದೆ 1.5 ಲಕ್ಷ ಮತದಾರರಿಗೆ ನಾವು ನೋಟಿಸ್ ಕಳುಹಿಸಬೇಕೇ? ಇದು ಕಾನೂನುಬದ್ಧವಾಗುತ್ತದೆಯೇ? ಕಾನೂನಿನಲ್ಲಿ ಅಥವಾ ಅಫಿಡವಿಟ್‌ನಲ್ಲಿ ಯಾವುದೇ ಪುರಾವೆಗಳಿಲ್ಲ. ನಾವು 1.5 ಲಕ್ಷ ಮತದಾರರನ್ನು ಎಸ್‌ಡಿಎಂ [ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್] ಕಚೇರಿಗೆ ಕರೆದು ಅವರು ನಕಲಿ ಮತದಾರರು ಎಂದು ಹೇಳಬೇಕೇ? ಮತದಾರರು ಪುರಾವೆ ಕೇಳುವುದಿಲ್ಲವೇ? ಯಾವುದೇ ಪುರಾವೆ ಇಲ್ಲದೆ, ಮತದಾರರ ಹೆಸರುಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ,&#8221; ಎಂದು ಕುಮಾರ್ ಹೇಳಿದರು.</p>



<p>&#8220;ಪ್ರತಿಯೊಬ್ಬ ಮತದಾರರೊಂದಿಗೆ ಚುನಾವಣಾ ಆಯೋಗವು ಗುರಾಣಿಯಂತೆ ನಿಂತಿದೆ. ತಪ್ಪು ವಿಶ್ಲೇಷಣೆ ಮತ್ತು ಅಂಕಿ-ಅಂಶಗಳೊಂದಿಗೆ ಪಿಪಿಟಿ ನೀಡುವ ಮೂಲಕ ಮತ್ತು &#8216;ಈ ಮಹಿಳೆ ಎರಡು ಬಾರಿ ಮತ ಚಲಾಯಿಸಿದ್ದಾರೆ&#8217; ಎಂದು ಹೇಳುವ ಮೂಲಕ ಚುನಾವಣಾ ಆಯೋಗವು ಇದಕ್ಕೆ ಪ್ರತಿಕ್ರಿಯಿಸುತ್ತದೆ ಎಂದು ಯಾರಾದರೂ ಭಾವಿಸಿದರೆ, ಇಂತಹ ಗಂಭೀರ ಆರೋಪಗಳ ವಿಷಯದಲ್ಲಿ ಅಫಿಡವಿಟ್ ಇಲ್ಲದೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಅದು ಕಾನೂನು ಮತ್ತು ಸಂವಿಧಾನಕ್ಕೆ ವಿರುದ್ಧವಾಗಿರುತ್ತದೆ,&#8221; ಎಂದು ಆಯುಕ್ತರು ಹೇಳಿದರು.</p>



<p>ಆಗಸ್ಟ್ 7 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ, ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವೆ <a href="https://thewire.in/politics/elections-choreographed-huge-criminal-fraud-by-election-commission-rahul-gandhi">&#8220;ಒಂದು ಸಂಬಂಧವಿದೆ&#8221; ಇದೆ</a> ಎಂದು ಆರೋಪಿಸಿದ್ದರು ಮತ್ತು ಮಹದೇವಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂದು ಹೇಳಲು ಚುನಾವಣಾ ಆಯೋಗದ ಮತದಾರರ ಪಟ್ಟಿಯನ್ನು ಪುರಾವೆಯಾಗಿ ತೋರಿಸಿದ್ದರು.</p>



<p>ಲೋಕಸಭಾ ಸದಸ್ಯರಾದ ಗಾಂಧಿ (ರಾಯ್ ಬರೇಲಿ), ವಾದ್ರಾ (ವಯನಾಡು), ಯಾದವ್ (ಕನ್ನೌಜ್) ಮತ್ತು ಬ್ಯಾನರ್ಜಿ (ಡೈಮಂಡ್ ಹಾರ್ಬರ್) ವಿರುದ್ಧದ ಬಿಜೆಪಿ ಸಂಸದ ಠಾಕೂರ್ ಅರೋಪಗಳನ್ನು ಮಾಡಿದ್ದರು, ಆದರೆ ಅವರಿಂದ ಚುನಾವಣಾ ಆಯೋಗ ಏಕೆ ಅಫಿಡವಿಟ್ ಕೇಳುತ್ತಿಲ್ಲ ಎಂದು ವರದಿಗಾರರು ಕುಮಾರ್ ಅವರನ್ನು ಕೇಳಿದರು.</p>



<p><strong>ನಿಯಮ 20(3)(b) ರ ಉಲ್ಲೇಖ</strong></p>



<p>ರಾಹುಲ್ ಗಾಂಧಿಯವರ ಹೆಸರನ್ನು ಉಲ್ಲೇಖಿಸದೆ, ಅವರಿಂದ ಅಫಿಡವಿಟ್ ಕೋರುವಾಗ,‌ ಜ್ಞಾನೇಶ್ ಕುಮಾರ್, 1960 ರ ಮತದಾರರ ನೋಂದಣಿ ನಿಯಮಗಳ ನಿಯಮ 20(3)(ಬಿ) ಮೇಲೆ‌ ತಮ್ಮ ವಾದವನ್ನು ಕೇಂದ್ರೀಕರಿಸಿದರು.</p>



<p>&#8220;ನೀವು ಆ ಕ್ಷೇತ್ರದ ಮತದಾರರಾಗಿದ್ದರೆ, ನೀವು ನಿಗದಿತ ಸಮಯದೊಳಗೆ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಫಾರ್ಮ್ 6, 7 ಮತ್ತು 8 ಅನ್ನು ಭರ್ತಿ ಮಾಡಬಹುದು. ಆದರೆ ನೀವು ಆ ಕ್ಷೇತ್ರದ ಮತದಾರರಲ್ಲದಿದ್ದರೆ, ಕಾನೂನಿನಡಿಯಲ್ಲಿ ನಿಮಗೆ ಒಂದೇ ಒಂದು ಪರಿಹಾರವಿದೆ, ಅದು ನಿಯಮ 20(3)(b).&#8221;</p>



<p>&#8220;ನೀವು ಆ ಕ್ಷೇತ್ರದ ಮತದಾರರಲ್ಲದಿದ್ದರೆ, ನೀವು ಸಾಕ್ಷಿಯಾಗಿ ನಿಮ್ಮ ದೂರನ್ನು ಸಲ್ಲಿಸಬಹುದು ಎಂಬುದು ಇದರ ಅರ್ಥ. ನೀವು ಚುನಾವಣಾ ನೋಂದಣಿ ಅಧಿಕಾರಿಗೆ ಪ್ರಮಾಣ ವಚನ ಸ್ವೀಕರಿಸಬೇಕು ಮತ್ತು ನೀವು ದೂರು ನೀಡಿದ ವ್ಯಕ್ತಿಯ ಮುಂದೆ ಆ ಪ್ರಮಾಣ ವಚನ ಸ್ವೀಕರಿಸಬೇಕು.&#8221;</p>



<p>ಚುನಾವಣಾ ಆಯೋಗದ ಪರಿಷ್ಕರಣಾ ಪ್ರಕ್ರಿಯೆಯ ನಂತರ ಕರಡು ಪಟ್ಟಿಗಳನ್ನು ಸಿದ್ಧಪಡಿಸಿದ ನಂತರ ಎತ್ತಲಾದ ಪ್ರಶ್ನೆಗಳು ಮತ್ತು ಆಕ್ಷೇಪಣೆಗಳಿಗೆ ನಿಯಮ 20(3)(ಬಿ) ಅನ್ವಯಿಸುತ್ತದೆ ಎಂದು <em>ದಿ ವೈರ್</em> ಈ ಹಿಂದೆ <a href="https://thewire.in/government/can-the-election-commission-demand-an-oath-from-rahul-gandhi-to-probe-vote-theft-allegations">ವರದಿ ಮಾಡಿತ್ತು .</a></p>



<p>2024 ರ ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ನಿಯಮ 20(3)(b) ದ ವ್ಯಾಪ್ತಿಗೆ ಬರುವುದಿಲ್ಲ, ಏಕೆಂದರೆ ಚುನಾವಣೆ ನಡೆದು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ ಎಂದು ತಜ್ಞರು ಹೇಳಿದ್ದಾರೆ.</p>



<p>ಪರಿಷ್ಕರಣೆಯ ನಂತರ ಕರಡು ಪಟ್ಟಿಗಳನ್ನು ಸಿದ್ಧಪಡಿಸಿದ ನಂತರ ಎತ್ತಲಾದ ಪ್ರಶ್ನೆಗಳು ಮತ್ತು ಆಕ್ಷೇಪಣೆಗಳಿಗೆ ನಿಯಮ 20(3)(b) ಅನ್ವಯಿಸುತ್ತದೆ ಎಂದು ಕುಮಾರ್ ಉಲ್ಲೇಖಿಸಲಿಲ್ಲ. ಬದಲಾಗಿ, ರಾಹುಲ್ ಗಾಂಧಿಯವರ ಆರೋಪಗಳನ್ನು ಉಲ್ಲೇಖಿಸಿ 45 ದಿನಗಳಲ್ಲಿ ತಾವು ಕಂಡಿರುವ ದೋಷಗಳನ್ನು ಸಲ್ಲಿಸಬೇಕು, ಇಲ್ಲದಿದ್ದರೆ ಅದು &#8220;ಸಾರ್ವಜನಿಕರ ಹಾದಿ ತಪ್ಪಿಸಿದಂತೆ&#8221; ಎಂದು ಅವರು ಹೇಳಿದರು.</p>



<p>&#8220;ನೀವು ನಿಗದಿತ 45 ದಿನಗಳ ಒಳಗೆ ಮತದಾರರ ಪಟ್ಟಿಯಲ್ಲಿರುವ ದೋಷಗಳ ವಿರುದ್ಧ ದೂರು ನೀಡದಿದ್ದರೆ, ಮತ್ತು ನಂತರ ʼಓಟ್ <em>ಚೋರಿ</em> [ಮತ ಕಳ್ಳತನ]ʼ ನಂತಹ ತಪ್ಪು ಪದಗಳನ್ನು ಬಳಸಿದರೆ <em>,</em> ಅದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಒಂದು ಮಾರ್ಗವಲ್ಲವೇ? ಇದು ಭಾರತದ ಸಂವಿಧಾನದ ಬಗ್ಗೆ ಅಗೌರವವನ್ನು ತೋರಿಸುತ್ತದೆ. ಅಲ್ಲದಿದ್ದರೆ ಮತ್ತೆ ಏನು?&#8221; ಅವರು ಹೇಳಿದರು.</p>



<p>ಜ್ಞಾನೇಶ್ ಕುಮಾರ್ ಏಳು ದಿನಗಳಲ್ಲಿ ಗಾಂಧಿಯವರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.</p>



<p>&#8220;ದೇಶಕ್ಕೆ ಪ್ರಮಾಣ ವಚನ ನೀಡಿ ಅಥವಾ ಕ್ಷಮೆಯಾಚಿಸಿ. ಮೂರನೇ ಆಯ್ಕೆ ಇಲ್ಲ. ಏಳು ದಿನಗಳಲ್ಲಿ ನಮಗೆ‌ ಅವರಿಂದ ಅಫಿಡವಿಟ್ ಸಿಗದಿದ್ದರೆ, ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಮತ್ತು &#8216;ನಮ್ಮ ಮತದಾರರು ವಂಚಕರು&#8217; ಎಂದು ಹೇಳುತ್ತಿರುವ ಆ ವ್ಯಕ್ತಿ ಕ್ಷಮೆಯಾಚಿಸಬೇಕು ಎಂದರ್ಥ.&#8221;</p>



<p>ಚುನಾವಣೆಗೆ ತುಂಬಾ ಹತ್ತಿರವಿರುವಾಗ ಮತ್ತು ಬಿಹಾರವು ಮಾನ್ಸೂನ್ ಪ್ರೇರಿತ ಪ್ರವಾಹವನ್ನು ಕಾಣುವ ಸಮಯದಲ್ಲಿ &#8211; ಬಿಹಾರದಲ್ಲಿ ಎಸ್‌ಐಆರ್‌ನ ಸಮಯದ ಕುರಿತು ಪ್ರಶ್ನೆಗಳಿಗೆ ಕುಮಾರ್ ಉತ್ತರಿಸಲು ಪ್ರಯತ್ನಿಸಿದರು ಮತ್ತು ಈ ಪ್ರಕ್ರಿಯೆಯನ್ನು ಕೊನೆಯ ಬಾರಿಗೆ 2003 ರ ಜುಲೈನಲ್ಲಿ ನಡೆಸಲಾಗಿತ್ತು ಎಂದು ಹೇಳಿದರು.</p>



<p>&#8220;ಹವಾಮಾನ ಚೆನ್ನಾಗಿಲ್ಲದಿದ್ದಾಗ ಜುಲೈನಲ್ಲಿ ಏಕೆ ಮಾಡಬೇಕು ಎಂಬ ಪ್ರಶ್ನೆ ಬಂದಿದೆ. ಬಿಹಾರದಲ್ಲಿ 2003 ರಲ್ಲಿ ಎಸ್‌ಐಆರ್ ನಡೆಸಿದಾಗ, ಅದನ್ನು ಜುಲೈ 14 ರಿಂದ ಆಗಸ್ಟ್ 14 ರವರೆಗೆ ಮಾಡಲಾಗಿತ್ತು ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಹಾಗಿದ್ದೂ ಇದನ್ನು ಯಶಸ್ವಿಯಾಗಿ ಮಾಡಲಾಯಿತು, ಈಗ ಕೂಡ ಎಲ್ಲಾ ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ, ”ಎಂದು ಕುಮಾರ್ ಹೇಳಿದರು.</p>



<p>ಹಾಗಿದ್ದೂ, ಬಿಹಾರದಲ್ಲಿ 2003 ರಲ್ಲಿ ಯಾವುದೇ ವಿಧಾನಸಭಾ ಚುನಾವಣೆಗಳು ನಡೆದಿರಲಿಲ್ಲ ಎಂಬುದನ್ನು ಅವರು ಉಲ್ಲೇಖಿಸಲಿಲ್ಲ .</p>



<p>ಮಾರ್ಚ್ 2000 ರಲ್ಲಿ, ಜನತಾದಳ (ಸಂಯುಕ್ತ)ದ ಈಗಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಒಂದು ದಿನ ಮೊದಲು&nbsp;<a href="https://www.deccanherald.com/india/march-2000-when-nitish-quit-as-cm-before-floor-test-779422.html">ರಾಜೀನಾಮೆ ನೀಡಿದರು</a>&nbsp;ಮತ್ತು ರಾಷ್ಟ್ರೀಯ ಜನತಾದಳದ ರಾಬ್ರಿ ದೇವಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು 2005 ರಲ್ಲಿ ನಡೆದ ವಿಧಾನಸಭಾ ಚುನಾವಣೆಯವರೆಗೂ ಅಧಿಕಾರದಲ್ಲಿ ಮುಂದುವರೆದರು.</p>



<p>2003 ರ SIR ನಡೆಸಲು ನೀಡಿದ ಆದೇಶವು ಇನ್ನೂ ಲಭ್ಯವಿಲ್ಲ ಮತ್ತು ಆ ವರ್ಷದ ಸಂಪೂರ್ಣ ಅವಧಿಯ ಉಲ್ಲೇಖಕ್ಕಾಗಿ ಅದನ್ನು ಪರಿಶೀಲಿಸಲಾಗುವುದಿಲ್ಲ ಎಂದು <em>ದಿ ವೈರ್ </em><a href="https://thewire.in/government/bihar-sir-why-has-no-one-seen-2003-revision-order">ವರದಿ ಮಾಡಿದೆ</a> , ಆದರೆ 2005 ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವುದಕ್ಕೆ ಬಹಳ ಹಿಂದೆಯೇ SIR ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಸ್ಪಷ್ಟವಾಗುತ್ತದೆ.<a href="https://thewire.in/government/bihar-sir-why-has-no-one-seen-2003-revision-order"></a></p>



<p>2004 ರಲ್ಲಿ ಹೊರಡಿಸಲಾದ ತೀವ್ರ ಪರಿಷ್ಕರಣಾ ಆದೇಶದ ಕುರಿತಾದ ಪ್ರಶ್ನೆಗಳಿಗೆ ಕುಮಾರ್ ಉತ್ತರಿಸಲಿಲ್ಲ, ಆ ಆದೇಶದಲ್ಲಿ ಚುನಾವಣಾ ಆಯೋಗವು ಅರುಣಾಚಲ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಆ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ ಮತ್ತು ಆದ್ದರಿಂದ ಈ ರಾಜ್ಯಗಳಲ್ಲಿ ಚುನಾವಣೆಯ ನಂತರ ಪರಿಷ್ಕರಣೆ ನಡೆಯಲಿದೆ ಎಂದು ಹೇಳಿತ್ತು. ಆ ಆದೇಶದ ಪ್ರತಿಯನ್ನು <em>ದಿ ವೈರ್ ಪರಿಶೀಲಿಸಿದೆ.</em></p>



<p>ಪ್ರತಿ ಚುನಾವಣೆಗೂ ಮುನ್ನ ಪರಿಷ್ಕರಣಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಕಾನೂನು ಹೇಳುತ್ತದೆ ಎಂದು ಚುನಾವಣಾ ಮುಖ್ಯಸ್ಥರು ಹೇಳಿದರು. ಈ ವರ್ಷದ ಜನವರಿಯಲ್ಲಿ ಬಿಹಾರದಲ್ಲಿ ಸಾರಾಂಶ ಪರಿಷ್ಕರಣೆಯನ್ನು ನಡೆಸಲಾಗಿದ್ದರೂ, ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗಳಿಗೆ ಅದು ಸಾಕಾಗುವುದಿಲ್ಲ, ಆದ್ದರಿಂದ ಜುಲೈ ಅನ್ನು ಅರ್ಹತಾ ದಿನಾಂಕವೆಂದು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.</p>



<p><strong>ಅಕ್ರಮ ವಲಸಿಗರ ಬಗ್ಗೆ ಯಾವುದೇ ಉತ್ತರಗಳಿಲ್ಲ</strong></p>



<p><a href="https://www.eci.gov.in/eci-backend/public/api/download?url=LMAhAK6sOPBp%2FNFF0iRfXbEB1EVSLT41NNLRjYNJJP1KivrUxbfqkDatmHy12e%2FzIv7%2FZQ09etPKoyJV5h%2FcTqdXj7y4XEu54AgUpFYqlgb%2F9owy3xJkkWNyeb7x3GfQsXQUwCbGU493NshNTgs7UQ%3D%3D">ಜೂನ್ 24 ರಂದು ಬಿಹಾರದಲ್ಲಿ SIR ಅನ್ನು ಘೋಷಿಸುವಾಗ</a>, ಚುನಾವಣಾ ಆಯೋಗವು ವಿವಿಧ ಕಾರಣಗಳಿಗಾಗಿ ಇದನ್ನು ನಡೆಸುವುದು ಅಗತ್ಯ ಎಂದು ಹೇಳಿದೆ, ಅವುಗಳಲ್ಲಿ &#8220;ವಿದೇಶಿ ಅಕ್ರಮ ವಲಸಿಗರೂ&#8221; ಮತದಾರರ ಪಟ್ಟಿಯಲ್ಲಿ ಸೇರಿರುವುದು ಸೇರಿದೆ.</p>



<p>ನೇಪಾಳ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ಬಂದ ಅನಿರ್ದಿಷ್ಟ ಸಂಖ್ಯೆಯ ಅಕ್ರಮ ವಲಸಿಗರು ಪಟ್ಟಿಯಲ್ಲಿ ಕಂಡುಬಂದಿದ್ದಾರೆ ಎಂದು ಚುನಾವಣಾ ಆಯೋಗವು ಈ ಹಿಂದೆ&nbsp;<a href="https://thewire.in/politics/election-commission-addresses-bihar-sir-criticism-through-selectively-made-available-whatsapp-texts">ಕೆಲವು ಮಾಧ್ಯಮಗಳಿಗೆ &#8220;ಮೂಲಗಳ&#8221;</a>&nbsp;ಮೂಲಕ ತಿಳಿಸಿತ್ತು .</p>



<p>ಪತ್ರಿಕಾಗೋಷ್ಠಿಯಲ್ಲಿ ದಾಖಲೆರಹಿತ ವಲಸಿಗರ ಸಂಖ್ಯೆಯ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, ಜ್ಞಾನೇಶ್ ಕುಮಾರ್ ಯಾವುದೇ ಅಂಕಿ ಅಂಶವನ್ನು ಒದಗಿಸಲಿಲ್ಲ.</p>



<p>&#8220;ಭಾರತದ ಸಂವಿಧಾನದ ಪ್ರಕಾರ, ಭಾರತೀಯ ನಾಗರಿಕರು ಮಾತ್ರ ಸಂಸದರು ಮತ್ತು ಶಾಸಕರ ಚುನಾವಣೆಗಳಿಗೆ ಮತ ಚಲಾಯಿಸಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇತರ ದೇಶಗಳ ಜನರಿಗೆ ಆ ಹಕ್ಕಿಲ್ಲ. ಅಂತಹ ಜನರು ಗಣತಿ ನಮೂನೆಯನ್ನು ಭರ್ತಿ ಮಾಡಿದ್ದರೆ, SIR ಪ್ರಕ್ರಿಯೆಯ ಸಮಯದಲ್ಲಿ ಅವರು ಕೆಲವು ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸಬೇಕಾಗುತ್ತದೆ, ಇವುಗಳನ್ನು ಸೆಪ್ಟೆಂಬರ್ 30 ರವರೆಗೆ ಪರಿಶೀಲಿಸಲಾಗುತ್ತಿದೆ. ಭಾರತೀಯ ನಾಗರಿಕರಲ್ಲದವರನ್ನು ಕಂಡುಹಿಡಿಯಲಾಗುತ್ತದೆ ಮತ್ತು ಅವರನ್ನು ಮತದಾರರಾಗಿ ಸೇರಿಸಲಾಗುವುದಿಲ್ಲ,”‌ ಎಂದು ಅವರು ಹೇಳಿದರು.</p>



<p>ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತರಲು SIR ಪ್ರಕ್ರಿಯೆಯನ್ನು ಬಳಸಲಾಗುತ್ತಿದೆಯೇ ಎಂಬುದಕ್ಕೆ ಅವರು ಯಾವುದೇ ಉತ್ತರಗಳನ್ನು ನೀಡಲಿಲ್ಲ.</p>



<p><strong>ಪರಿಶೀಲನಾ ದಾಖಲೆಗಳೊಂದಿಗೆ ಸ್ವೀಕರಿಸಲಾದ ಗಣತಿ ನಮೂನೆಗಳ ಸಂಖ್ಯೆಯ ಬಗ್ಗೆ ಸ್ಪಷ್ಟ ಉತ್ತರವಿಲ್ಲ</strong></p>



<p>ಜುಲೈ 25 ರಂದು ಗಣತಿ ನಮೂನೆಗಳನ್ನು ಸಂಗ್ರಹಿಸಲು ಮೀಸಲಾಗಿರುವ SIR ಹಂತದ ಕೊನೆಯಲ್ಲಿ, 99.8% ನಮೂನೆಗಳನ್ನು ಮತದಾರರಿಂದ ಸಂಗ್ರಹಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.</p>



<p>ಈ ಪ್ರಕ್ರಿಯೆಯಲ್ಲಿ ಪ್ರಮುಖ ವಿವಾದಾತ್ಮಕ ಅಂಶವೆಂದರೆ ಆಯೋಗವು ಮತದಾರರಿಂದ ಅವರ ಅರ್ಹತೆಯ ಪುರಾವೆಯಾಗಿ ಕೇಳುತ್ತಿರುವ 11 ದಾಖಲೆಗಳ ಪಟ್ಟಿ. ಅರ್ಹ ದಾಖಲೆಗಳೊಂದಿಗೆ ಎಷ್ಟು ಫಾರ್ಮ್‌ಗಳನ್ನು ಸ್ವೀಕರಿಸಲಾಗಿದೆ ಅಥವಾ ಬೂತ್ ಮಟ್ಟದ ಅಧಿಕಾರಿಗಳು &#8216;ಶಿಫಾರಸು ಮಾಡಿದ್ದಾರೆ&#8217; ಮತ್ತು &#8216;ಶಿಫಾರಸು ಮಾಡಿಲ್ಲ&#8217; ಎಂಬ ಮತದಾರರ ನಡುವೆ ಈಗ ವ್ಯತ್ಯಾಸ ಏಕೆ ಇದೆ ಎಂಬುದರ ಕುರಿತು ಕುಮಾರ್ ಯಾವುದೇ ಸ್ಪಷ್ಟ ಉತ್ತರಗಳನ್ನು ನೀಡಿಲ್ಲ.</p>



<p>&#8220;ಬಿಹಾರದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ, ಎಷ್ಟು ಜನರನ್ನು ಸ್ವೀಕರಿಸಲಾಗಿದೆ, ಎಷ್ಟು ಜನರನ್ನು ಶಿಫಾರಸು ಮಾಡಲಾಗಿದೆ ಮತ್ತು ಪ್ರತಿಯೊಬ್ಬ ಬೂತ್ ಮಟ್ಟದ ಅಧಿಕಾರಿ ಏನು ಶಿಫಾರಸು ಮಾಡಿದ್ದಾರೆ ಎಂಬುದರ ದಾಖಲೆಗಳು &#8211; ಈ ಡೇಟಾವನ್ನು ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದೆ. ಚುನಾವಣಾ ಆಯೋಗವು ಬಹು ಹಂತದಲ್ಲಿ ಈ ಕೆಲಸ ಮಾಡುತ್ತಿದೆ&#8221; ಎಂದು ಕುಮಾರ್ ಹೇಳಿದರು.</p>



<p>&#8220;ಮೊದಲು ಬೂತ್ ಮಟ್ಟದ ಅಧಿಕಾರಿ, ನಂತರ ಬೂತ್ ಮಟ್ಟದ ಮೇಲ್ವಿಚಾರಕ, ನಂತರ SDM, ನಂತರ DM ಮತ್ತು ನಂತರ ಮುಖ್ಯ ಚುನಾವಣಾ ಅಧಿಕಾರಿ ಇರುತ್ತಾರೆ. ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ ಚುನಾವಣಾ ಆಯೋಗ ಅಥವಾ ಬೇರೆ ಯಾರೂ ಯಾವುದೇ ಮತವನ್ನು ಸೇರಿಸಲು ಸಾಧ್ಯವಿಲ್ಲ. ಈ ವಿಕೇಂದ್ರೀಕೃತ ರಚನೆಯ ಅಡಿಯಲ್ಲಿ, ಎಷ್ಟು ದಾಖಲೆಗಳನ್ನು ತೆಗೆದುಕೊಳ್ಳಲಾಗಿದೆಯೋ ಇಲ್ಲವೋ, ಇನ್ನೂ SDM ಮಟ್ಟದಲ್ಲಿ ನಡೆಯುತ್ತಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇದು ಇನ್ನೂ ಹೊರಬರಬೇಕಿದೆ, ಅದಕ್ಕೂ ಮುಂಚಿತವಾಗಿ ಏನನ್ನೂ ಹೇಳುವುದು ಸರಿಯಲ್ಲ,&#8221; ಎಂದು ಅವರು ಹೇಳಿದರು.</p>



<p><strong>ಮನೆ ನಂಬರ್‌ &#8211; 0 </strong></p>



<p>ಬಿಹಾರದ ಮತದಾರರ ಪಟ್ಟಿಯಲ್ಲಿ ಹಲವಾರು ಮತದಾರರ <a href="https://www.thenewsminute.com/news/exclusive-bihar-sir-rolls-reveal-292048-voters-with-house-number-0">ಮನೆ ಸಂಖ್ಯೆಗಳು 0 ಎಂದು ದಾಖಲಾಗಿವೆ</a> ಎಂದು ವರದಿಗಳು ಹೊರಬಿದ್ದಿವೆ, ಆದರೆ ಅದನ್ನು ಪ್ರಶ್ನಿಸುವುದು ಬಡ ಮತದಾರರನ್ನು ತಮಾಷೆ ಮಾಡಿದಂತೆ ಎಂದು ಜ್ಞಾನೇಶ್ ಕುಮಾರ್ ಹೇಳಿದರು.</p>



<p>&#8220;ಹಲವರಿಗೆ ಮನೆ ಇಲ್ಲ‌, ಆದರೆ ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳಿವೆ. ಹಾಗಾದರೆ ಅವರ ವಿಳಾಸ ಏನು? ಅವರು ರಾತ್ರಿ ಮಲಗಲು ಹೋಗುವ ಸ್ಥಳವೇ ವಿಳಾಸ; ಕೆಲವೊಮ್ಮೆ ರಸ್ತೆಯ ಬದಿಯಲ್ಲಿ, ಕೆಲವೊಮ್ಮೆ ಸೇತುವೆಯ ಕೆಳಗೆ, ಕೆಲವೊಮ್ಮೆ ದೀಪದ ಕಂಬದ ಪಕ್ಕದಲ್ಲಿ. ಅವರನ್ನು ನಕಲಿ ಮತದಾರರು ಎಂದು ಹೇಳಿದರೆ, ಅದು ನಮ್ಮ ಬಡ ಮತದಾರರು, ಸಹೋದರಿಯರು, ಸಹೋದರರು ಮತ್ತು ಹಿರಿಯರ ಬಗ್ಗೆ ದೊಡ್ಡ ವ್ಯಂಗ್ಯ ಮಾಡಿದಂತೆ,&#8221; ಎಂದು ಅವರು ಹೇಳಿದರು.</p>



<p>ಕೋಟ್ಯಂತರ&#8221; ಜನರ ವಿಳಾಸಗಳ ಮನೆ ನಂಬರ್‌ 0, ಏಕೆಂದರೆ ಅವರ ಪಂಚಾಯತ್‌ಗಳು ಅಥವಾ ಪುರಸಭೆಗಳು ಅವರ ಮನೆಗಳಿಗೆ ಸಂಖ್ಯೆಗಳನ್ನು ನೀಡಿಲ್ಲ ಎಂದು ಕುಮಾರ್ ಹೇಳಿದರು, ಚುನಾವಣಾ ಆಯೋಗವು ಅಂತಹ ಮತದಾರರಿಗೆ &#8220;ಕಾಲ್ಪನಿಕ ಸಂಖ್ಯೆಗಳನ್ನು&#8221; ಒದಗಿಸುತ್ತದೆ, ಅದನ್ನು &#8220;ಕಂಪ್ಯೂಟರ್‌ನಲ್ಲಿ ಶೂನ್ಯವಾಗಿ ತೋರಿಸಲಾಗುತ್ತದೆ ಎಂದು ಅವರು ಹೇಳಿದರು. &#8220;ಇದರರ್ಥ ಅವರು ಮತದಾರರಲ್ಲ ಎಂದು ಅರ್ಥವಲ್ಲ,&#8221; ಎಂದು ಜ್ಞಾನೇಶ್‌ ಹೇಳಿದರು.</p>



<p><strong>ಮತದಾರರ ಪಟ್ಟಿಯಲ್ಲಿ ಅನೇಕ ಬಾರಿ ಮತದಾರನ ಹೆಸರು</strong></p>



<p>ಒಂದೇ ಮತದಾರನನ್ನು ಹಲವಾರು ಮತಗಟ್ಟೆಗಳಲ್ಲಿ ನೋಂದಾಯಿಸಿರುವ ನಿದರ್ಶನಗಳಿವೆ ಎಂದು ಗಾಂಧಿ ಆರೋಪಿಸಿದ್ದರೆ, ಒಬ್ಬ ಮತದಾರನ ಹೆಸರು ಹಲವು ಬಾರಿ ಇದ್ದರೂ ಒಮ್ಮೆ ಮಾತ್ರ ಮತ ಚಲಾಯಿಸಬಹುದು ಎಂದು ಕುಮಾರ್ ಹೇಳಿದರು.</p>



<p>ಮತದಾರರ ಪಟ್ಟಿಯಲ್ಲಿ ಒಬ್ಬ ಮತದಾರರ ಹೆಸರು ಹಲವು ಬಾರಿ ಏಕೆ ಕಾಣಿಸಿಕೊಳ್ಳುತ್ತಿದೆ ಎಂಬುದಕ್ಕೆ ಅವರು ಯಾವುದೇ ಉತ್ತರವನ್ನು ನೀಡಲಿಲ್ಲ.</p>



<p>ಆಗಸ್ಟ್ 7 ರ ಪತ್ರಿಕಾಗೋಷ್ಠಿಯಲ್ಲಿ ಗಾಂಧಿಯವರು ವಿವಿಧ ಬೂತ್‌ಗಳಲ್ಲಿನ ಮತದಾರರ ಪಟ್ಟಿಯಲ್ಲಿ ಮತದಾರರು ಹಲವು ಬಾರಿ ಕಾಣಿಸಿಕೊಂಡಿರುವ ವಿವಿಧ ಉದಾಹರಣೆಗಳನ್ನು ತೋರಿಸಿದ್ದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">New Voter List Irregularities<br><br>Significant irregularities have also been observed in the new voter list.<br><br>For instance, a woman named &#39;Shakun Rani&#39; was registered twice within two months. This was done so cleverly that in one instance, her full name was entered as &#39;Shakun Rani&#39;… <a href="https://t.co/EOZWWTIyZA">pic.twitter.com/EOZWWTIyZA</a></p>&mdash; Congress (@INCIndia) <a href="https://twitter.com/INCIndia/status/1953419885108773194?ref_src=twsrc%5Etfw">August 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಒಬ್ಬ ಮತದಾರ &#8220;ಒಮ್ಮೆ ಮಾತ್ರ ಮತ ಚಲಾಯಿಸಬಹುದು. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಎರಡು ಬಾರಿ ಇದ್ದರೆ ಅದು ಹೇಗೆ ಮತ ಕಳ್ಳತನವಾಗುತ್ತದೆ? ಅದು ಸಾಧ್ಯವಿಲ್ಲ. ಪ್ರತಿಯೊಬ್ಬ ಮತದಾರರು ಒಮ್ಮೆ ಮಾತ್ರ ಮತ ಚಲಾಯಿಸಬಹುದು. ಅದಕ್ಕಾಗಿಯೇ ಚುನಾವಣಾ ಆಯೋಗದ ಡೇಟಾವನ್ನು ತಪ್ಪಾಗಿ ವಿಶ್ಲೇಷಿಸಲಾಗಿದೆ ಮತ್ತು ಮತದಾರರ ಪಟ್ಟಿಗಳು ತಪ್ಪು ಮತ್ತು ಆದ್ದರಿಂದ ಮತದಾನ ತಪ್ಪು ಎಂದು ಹೇಳಲಾಗಿದೆ ಎಂದು ನಾವು ಹೇಳಿದ್ದೇವೆ &#8211; ಚುನಾವಣಾ ಪಟ್ಟಿಗಳು ಮತ್ತು ಮತದಾನ ಬೇರೆ ಬೇರೆ&#8221; ಎಂದು ಕುಮಾರ್ ಹೇಳಿದರು.‌</p>



<p>(ಇದು ದಿ ವೈರ್‌ ಪ್ರಕಟಿಸಿದ <a href="https://thewire.in/government/chief-election-commissioner-gyanesh-kumar-presser-seven-non-answers"><strong>Oath Politics, Silence on Forms Received and Number of &#8216;Illegal&#8217; Immigrants: EC&#8217;s Seven Non-Answers</strong></a> ಕನ್ನಡಾನುವಾದ)</p>



<p></p>
]]></content:encoded>
					
		
		
			</item>
		<item>
		<title>ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ರಾಹುಲ್‌ ಗಾಂಧಿಯನ್ನು ಟಾರ್ಗೆಟ್‌ ಮಾಡಿದ ಚುನಾವಣಾ ಆಯೋಗ!</title>
		<link>https://peepalmedia.com/the-election-commission-targeted-rahul-gandhi-to-cover-up-its-failure/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 11 Aug 2025 06:30:25 +0000</pubDate>
				<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[Election Commission of India]]></category>
		<category><![CDATA[mahadevapura]]></category>
		<category><![CDATA[Rahul Gandhi]]></category>
		<category><![CDATA[vote theft]]></category>
		<guid isPermaLink="false">https://peepalmedia.com/?p=63987</guid>

					<description><![CDATA[ಆಗಸ್ಟ್ 8, 2025ರಂದು, ಭಾರತದ ಚುನಾವಣಾ ಆಯೋಗ (ECI) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಒಂದು ಒತ್ತಾಯವನ್ನು ನೀಡಿತು. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ &#8220;ವ್ಯಾಪಕ ಮತದಾನ ಕಳ್ಳತನ&#8221; ಎಂದು ಅವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಆರೋಪಗಳನ್ನು ಕಾನೂನಿನ ಪ್ರಕಾರ ಪ್ರಮಾಣದ ಮೂಲಕ ಸಲ್ಲಿಸಿ, ಅಥವಾ &#8220;ಸಾರ್ವಜನಿಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಿ,&#8221; ಎಂದು ಆಯೋಗವು ಅವರಿಗೆ ಸವಾಲು ಹಾಕಿತು. ಆದರೆ ಇದು ಕೇವಲ ರಾಜಕೀಯ ವಾಗ್ವಾದವಲ್ಲ. ಇದು ಚುನಾವಣಾ ಆಯೋಗದ ಒಂದು ದಶಕದ ದಾಖಲಿತ ವೈಫಲ್ಯಗಳ ಫಲವಾಗಿದೆ. ಮಹದೇವಪುರದಲ್ಲಿ, [&#8230;]]]></description>
										<content:encoded><![CDATA[
<p>ಆಗಸ್ಟ್ 8, 2025ರಂದು, ಭಾರತದ ಚುನಾವಣಾ ಆಯೋಗ (ECI) <a href="https://x.com/INCIndia/status/1953419885108773194">ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ</a>ಗೆ ಒಂದು ಒತ್ತಾಯವನ್ನು ನೀಡಿತು. ಬೆಂಗಳೂರಿನ <a href="https://x.com/ECISVEEP/status/1953419769564254699">ಮಹದೇವಪುರ ಕ್ಷೇತ್ರದಲ್ಲಿ &#8220;ವ್ಯಾಪಕ ಮತದಾನ ಕಳ್ಳತನ&#8221; ಎಂದು ಅವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆಯಾಗಿ</a>, ಆರೋಪಗಳನ್ನು ಕಾನೂನಿನ ಪ್ರಕಾರ ಪ್ರಮಾಣದ ಮೂಲಕ ಸಲ್ಲಿಸಿ, ಅಥವಾ &#8220;ಸಾರ್ವಜನಿಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಿ,&#8221; ಎಂದು ಆಯೋಗವು ಅವರಿಗೆ ಸವಾಲು ಹಾಕಿತು.</p>



<p>ಆದರೆ ಇದು ಕೇವಲ ರಾಜಕೀಯ ವಾಗ್ವಾದವಲ್ಲ. ಇದು ಚುನಾವಣಾ ಆಯೋಗದ ಒಂದು ದಶಕದ ದಾಖಲಿತ ವೈಫಲ್ಯಗಳ ಫಲವಾಗಿದೆ.</p>



<p>ಮಹದೇವಪುರದಲ್ಲಿ, ಚುನಾವಣಾ ಆಯೋಗವು ವರ್ಷಗಳಿಂದ ತನ್ನದೇ ಆದ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಿದೆ, ಆದರೂ ಕ್ಷೇತ್ರದ ಮತದಾರರ ಪಟ್ಟಿಯು ಅಸಾಮಾನ್ಯ ಮತ್ತು ಅಸಂಭವ ದರದಲ್ಲಿ ಬೆಳೆಯುತ್ತಿತ್ತು. ಆಯೋಗದ ದತ್ತಾಂಶ, ಸುದ್ದಿ ವರದಿಗಳು ಮತ್ತು ಹಿಂದಿನ ಹಗರಣಗಳು, ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸುವ ಏಕೈಕ ಜವಾಬ್ದಾರಿಯನ್ನು ಹೊಂದಿರುವ ಸಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು, ಬಿಕ್ಕಟ್ಟನ್ನು ಬೆಳೆಯಲು ಅವಕಾಶ ನೀಡಿತ್ತು ಮತ್ತು ಈಗ ಅದನ್ನು ಬಹಿರಂಗವಾಗಿ ನಿರಾಕರಿಸುತ್ತಿದೆ. </p>



<p>ಮಹದೇವಪುರದ ಕಥೆ ಚುನಾವಣಾ ಆಯೋಗದ ಸ್ವಂತ<a href="https://www.eci.gov.in/Documents/Final-ER-FAQ.pdf"> ಕೈಪಿಡಿಯಿಂದ</a> ಆರಂಭವಾಗುತ್ತದೆ. ಈ ಕೈಪಿಡಿ ಒಂದು ಪರಿಷ್ಕರಣೆಯ ಸಂದರ್ಭದಲ್ಲಿ ಮತದಾರರ ಸಂಖ್ಯೆಯ ಶೇ.4ಕ್ಕಿಂತ ಹೆಚ್ಚು ನಿವ್ವಳ ಸೇರ್ಪಡೆಯಾದರೆ &#8220;ಹೆಚ್ಚುವರಿ ಹಂತಗಳ ದೃಢೀಕರಣವನ್ನು&#8221; ಮಾಡಬೇಕೆಂದು ಹೇಳುತ್ತದೆ.  ಈ ಶೇ.4 ರ ಗಡಿಯು ಸಿಂಗಲ್‌ ರಿವಿಷನ್‌ ಸೈಕಲ್‌ಗೆ ಆಯೋಗದ ಎಚ್ಚರಿಕೆಯ ಗಂಟೆಯಾಗಿದೆ.</p>



<p>ಮಹದೇವಪುರದಲ್ಲಿ, ದತ್ತಾಂಶವು ಈ ಎಚ್ಚರಿಕೆಯ ಗಂಟೆ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಬಡಿಯುತ್ತಿತ್ತು ಎಂಬುದನ್ನು ತೋರಿಸುತ್ತದೆ. ಅಧಿಕೃತ ಮತದಾರ ದತ್ತಾಂಶವು ತೀವ್ರವಾದ ಬೆಳವಣಿಗೆಯನ್ನು ಬಹಿರಂಗಪಡಿಸುತ್ತದೆ. ಆಯೋಗವು ಸ್ವಂತ ಮಾನದಂಡದ ಅಡಿಯಲ್ಲಿ ನಿರಂತರ ವಿಶೇಷ ಪರಿಶೀಲನೆಯನ್ನು ಮಾಡಬೇಕಿತ್ತು. </p>



<h4 class="wp-block-heading">ವಿವರಣೆ:</h4>



<figure class="wp-block-image size-large"><img decoding="async" width="1024" height="366" src="https://peepalmedia.com/wp-content/uploads/2025/08/image-1024x366.png" alt="" class="wp-image-63988" srcset="https://peepalmedia.com/wp-content/uploads/2025/08/image-1024x366.png 1024w, https://peepalmedia.com/wp-content/uploads/2025/08/image-300x107.png 300w, https://peepalmedia.com/wp-content/uploads/2025/08/image-768x274.png 768w, https://peepalmedia.com/wp-content/uploads/2025/08/image-1536x549.png 1536w, https://peepalmedia.com/wp-content/uploads/2025/08/image-150x54.png 150w, https://peepalmedia.com/wp-content/uploads/2025/08/image-696x249.png 696w, https://peepalmedia.com/wp-content/uploads/2025/08/image-1068x381.png 1068w, https://peepalmedia.com/wp-content/uploads/2025/08/image.png 1596w" sizes="(max-width: 1024px) 100vw, 1024px" /></figure>



<ul class="wp-block-list">
<li>ಪ್ರತಿ ಐದು ವರ್ಷಗಳ ಗುಂಪಿನಲ್ಲಿ, ಸರಾಸರಿ ವಾರ್ಷಿಕ ಬೆಳವಣಿಗೆ ದರವು ಶೇ.5.5 ರಿಂದ ಶೇ.6.8 ರವರೆಗೆ ಇತ್ತು, ಇದರಿಂದ ಆಯೋಗದ ಶೇ.4 ರ ಗಡಿಯನ್ನು ಹಲವಾರು ಬಾರಿ ಉಲ್ಲಂಘಿಸಲಾಗಿದೆ ಎಂಬುದು ಖಚಿತವಾಗಿದೆ.</li>



<li>ಒಂದು ವರ್ಷದಲ್ಲಿ, ಮತದಾರರ ಸಂಖ್ಯೆ ಶೇ.8.54 ರಷ್ಟು ಏರಿಕೆಯಾಗಿದೆ. 2023 ರ ರಾಜ್ಯ ಚುನಾವಣೆ ಮತ್ತು 2024 ರ ಸಾರ್ವತ್ರಿಕ ಚುನಾವಣೆಯ ನಡುವೆ, ಮತದಾರರ ಸಂಖ್ಯೆ ಶೇ.8.54 ರಷ್ಟು ಗಣನೀಯವಾಗಿ ಬೆಳೆಯಿತು. ಈ ಸಿಂಗಲ್‌ ರಿವಿಷನ್‌ ಸೈಕಲ್‌ ಆಯೋಗದ ಶೇ.4 ರ ಕೆಂಪು ಗೆರೆಯನ್ನು ಎರಡು ಪಟ್ಟು ಮೀರಿತು. ಆಯೋಗ ಸ್ವಯಂಚಾಲಿತ ಪರಿಶೀಲನೆಯನ್ನು ಆರಂಭಿಸಬೇಕಿತ್ತು.</li>
</ul>



<p>ಇದು ನಗರವ್ಯಾಪಿ ಪ್ರವೃತ್ತಿಯಾಗಿರಲಿಲ್ಲ. 2008 ರಿಂದ 2024 ರವರೆಗೆ ಮಹದೇವಪುರದ ಶೇ.140 ರ ಬೆಳವಣಿಗೆಯು, ಅದೇ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಇತರ ಏಳು ವಿಧಾನಸಭಾ ಭಾಗಗಳ ಬೆಳವಣಿಗೆಯನ್ನು ಕುಗ್ಗಿಸಿತು. <a href="https://archive.ph/JYREo"><em>ದಿ ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ</a>ಯಂತೆ, ಎರಡನೇ ವೇಗವಾಗಿ ಬೆಳೆಯುತ್ತಿರುವ ಭಾಗವಾದ ಸರ್ವಜ್ಞನಗರವು ಇದೇ ಅವಧಿಯಲ್ಲಿ ಕೇವಲ ಶೇ.26.5 ರಷ್ಟು ಬೆಳೆಯಿತು. ಉಳಿದ ಆರು ಭಾಗಗಳ ಬೆಳವಣಿಗೆ ಇದಕ್ಕಿಂತಲೂ ಕಡಿಮೆಯಾಗಿತ್ತು.</p>



<p>ಮಹದೇವಪುರದಲ್ಲಿ ಐಟಿ ಕಾರಿಡಾರ್‌ನಿಂದಾಗಿ ರಿಯಲ್ ಎಸ್ಟೇಟ್ ಮತ್ತು ಜನಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎಂಬುದು ನಿರಾಕರಿಸಲಾಗದ ಸತ್ಯ. ಆದರೆ, ಇಂತಹ ಜನಸಂಖ್ಯಾಶಾಸ್ತ್ರೀಯ ಬದಲಾವಣೆಗಳನ್ನು ನಿರ್ವಹಿಸಲು ಚುನಾವಣಾ ಆಯೋಗದ ನಿಯಮಗಳನ್ನು ರೂಪಿಸಲಾಗಿದೆ. ಅಸಾಧಾರಣ ಬೆಳವಣಿಗೆಯು ಅಧಿಕಾರಿಗಳನ್ನು ತಮ್ಮ ಕರ್ತವ್ಯ ಮಾಡುವುದರಿಂದ ವಿನಾಯಿತಿ ನೀಡುವುದಿಲ್ಲ; ಇದಕ್ಕೆ ವಿರುದ್ಧವಾಗಿ, ಇದು &#8220;additional layers of cross-verification&#8221; ಮಾಡಬೇಕೆಂದು ಒತ್ತಾಯಿಸುತ್ತದೆ, ಆದರೆ ಇವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ತೋರುತ್ತದೆ.</p>



<p>ದತ್ತಾಂಶವು ಎರಡು ವಿಷಯಗಳನ್ನು ಸಾಬೀತುಪಡಿಸುತ್ತದೆ. ಮೊದಲನೆಯದಾಗಿ, ಮಹದೇವಪುರವು ಒಂದು ತೀವ್ರವಾದ ವಿಚಲನವಾಗಿತ್ತು. ಎರಡನೆಯದಾಗಿ, ಚುನಾವಣಾ ಆಯೋಗವು ತನ್ನದೇ ಆದ ನಿಯಮಗಳ ಪ್ರಕಾರ ವರ್ಷದಿಂದ ವರ್ಷಕ್ಕೆ ತನಿಖೆ ನಡೆಸಬೇಕಿತ್ತು, ಆದರೂ ಅದು ಮತದಾರರ ಪಟ್ಟಿಯನ್ನು ಹತ್ತಿರದಲ್ಲೇ ಇದ್ದ ಮುಂದಿನ ದೊಡ್ಡ ಕ್ಷೇತ್ರಕ್ಕಿಂತ ಎರಡು ಪಟ್ಟು ದೊಡ್ಡದಾಗಲು ಅವಕಾಶ ನೀಡಿತು.</p>



<p><strong>ಸಾರ್ವಜನಿಕ ಎಚ್ಚರಿಕೆಗಳು ಮತ್ತು ದಾಖಲಿತ ಹಗರಣಗಳು</strong></p>



<p>ಎಚ್ಚರಿಕೆಗಳು ಕೇವಲ ದತ್ತಾಂಶದಲ್ಲಿ ಮಾತ್ರ ಇರಲಿಲ್ಲ. ಬೆಂಗಳೂರಿನ ನಾಗರಿಕರು ಮತ್ತು ಕಾರ್ಯಕರ್ತರು ವರ್ಷಗಳಿಂದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು, ಆದರೆ ಪ್ರತಿಕ್ರಿಯೆ ಮಾತ್ರ ನೀರಸವಾಗಿತ್ತು. </p>



<p>2017 ರಲ್ಲಿ, ವೈಟ್‌ಫೀಲ್ಡ್‌ನಲ್ಲಿ &#8220;ಮಿಲಿಯನ್ ವೋಟರ್ಸ್ ರೈಸಿಂಗ್&#8221; ಎಂಬ ನಾಗರಿಕರ ಸಂಘಟನೆಯೊಂದು ಆಳವಾದ ಸಮಸ್ಯೆಗಳನ್ನು ಕಂಡುಕೊಂಡಿತು. <a href="https://www.thehindu.com/news/national/karnataka/mahadevapura-has-seen-allegations-over-electoral-roll-manipulation-earlier-too/article69909837.ece"><em>ದಿ ಹಿಂದೂ</em> </a>ವರದಿಯಂತೆ, ಶೇ.66 ರಷ್ಟು ಮತದಾರರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿತ್ತು. ಸಾರ್ವಜನಿಕರು ಆಕ್ರೋಶಿತರಾದರು, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಫಾರ್ಮ್‌ಗಳ ಮರುಪರಿಶೀಲನೆಗೆ ಆದೇಶಿಸಲು ಒತ್ತಾಯಿಸಿದರು. ಆದರೂ ಇದರಿಂದ ತೃಪ್ತರಾಗದ ನಾಗರಿಕರು ಈ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಬಾಗಿಲಿಗೆ ತಂದರು. </p>



<p>ನಂತರ, 2022 ರಲ್ಲಿ, ಚಿಲುಮೆ ವಿವಾದವು ಮತದಾರರ ಪಟ್ಟಿಯ ದುರ್ಬಳಕೆಯ ಒಂದು ಭಯಾನಕತೆಯನ್ನು ನಮ್ಮ ಮುಂದೆ ಇಟ್ಟಿತು. <em><a href="https://www.thenewsminute.com/karnataka/probe-finds-chilume-collected-bengaluru-voter-data-illegally-and-stored-foreign-servers">ದಿ ನ್ಯೂಸ್‌ಮಿನಿಟ್</a></em> ಮತ್ತು ಪ್ರತಿಧ್ವನಿ ನಡೆಸಿದ ತನಿಖಾ ವರದಿಯಲ್ಲಿ, ನಗರರಾಡಳಿತದಿಂದ &#8216;ಮತದಾರರ ಜಾಗೃತಿಯನ್ನು ಹೆಚ್ಚಿಸಲು&#8217; ಅಧಿಕಾರ ಪಡೆದ ಚಿಲುಮೆ ಟ್ರಸ್ಟ್ ಎಂಬ ಎನ್‌ಜಿಒ ಮೇಲೆ, ಮತದಾರರ ವೈಯಕ್ತಿಕ ದತ್ತಾಂಶವನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ ಆರೋಪ ಮಾಡಲಾಗಿತ್ತು. ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷವು, ಈ ಸಂಸ್ಥೆಯು ಈ ದತ್ತಾಂಶವನ್ನು ರಾಜಕೀಯ ಕ್ಲೈಂಟ್‌ಗಳಿಗಾಗಿ ಮತದಾರರನ್ನು ಪಟ್ಟಿಯಿಂದ ಅಳಿಸಲು ಬಳಸಿದೆ ಎಂದು ಆರೋಪಿಸಿತು.</p>



<p>ಸರ್ಕಾರಿ ತನಿಖೆಯು ನಂತರ ಚಿಲುಮೆ &#8220;ಕಾನೂನುಬಾಹಿರವಾಗಿ&#8221; ಮತದಾರರ ದತ್ತಾಂಶವನ್ನು ಸಂಗ್ರಹಿಸಿ ಖಾಸಗಿ ಸರ್ವರ್‌ಗಳಲ್ಲಿ ಸಂಗ್ರಹಿಸಿತು ಎಂದು ಒಪ್ಪಿಕೊಂಡಿತು, ಆದರೂ &#8220;ದುರ್ಬಳಕೆಯಾಗಿದೆ&#8221; ಎಂದು ತನಿಖೆ ಕಂಡುಹಿಡಿಯಲಿಲ್ಲ. ಮತದಾರರ ಜಾಗೃತಿಯ ಹೆಸರಿನಲ್ಲಿ ಅಧಿಕೃತ ಪ್ರಕ್ರಿಯೆಯನ್ನು ಕಾನೂನುಬಾಹಿರ ಉದ್ದೇಶಗಳಿಗಾಗಿ ಉಲ್ಲಂಘಿಸಲಾಗಿತ್ತು. ಮಹದೇವಪುರವು ಚಿಲುಮೆ ಸಂಸ್ಥೆ ಸಕ್ರಿಯವಾಗಿ ಕೆಲಸ ಮಾಡಿದ್ದ ಮೂರು ಕ್ಷೇತ್ರಗಳಲ್ಲಿ ಒಂದಾಗಿತ್ತು.</p>



<p><strong>ಪ್ರಮಾಣ ಎಂಬ ವಿಡಂಬನೆ</strong></p>



<p>ಇದು ಆಗಸ್ಟ್ 7, 2025 ರಂದು ರಾಹುಲ್ ಗಾಂಧಿಯವರು ನಡೆಸಿದ ಪತ್ರಿಕಾಗೋಷ್ಠಿಯ ಹಿನ್ನೆಲೆಯಾಗಿತ್ತು. ಅವರ 1,00,250 &#8220;ಕದ್ದ ಮತಗಳ&#8221; ಆರೋಪಕ್ಕೆ ವರ್ಷಗಳಿಂದ ಏರಿಳಿಯುತ್ತಿರುವ ಮತದಾರರ ಸಂಖ್ಯೆಗಳು, ನಿರ್ಲಕ್ಷಿತ ದೂರುಗಳು ಮತ್ತು ಸಾರ್ವಜನಿಕ ಹಗರಣಗಳು ಆಧಾರಿತವಾಗಿದ್ದವು.</p>



<p>ಚುನಾವಣಾ ಆಯೋಗದ ಪ್ರತಿಕ್ರಿಯೆ, ಆರೋಪವನ್ನು ಅಧಿಕೃತವಾಗಿ ಸಲ್ಲಿಸಲು ಒತ್ತಾಯಿಸುವುದು ವಿಡಂಬನೆಯಾಗಿದೆ. ವಿವರವಾದ ಆರೋಪಗಳನ್ನು ತನಿಖೆ ಮಾಡುವ ಬದಲು, ಆಯೋಗವು ಆಕ್ರಮಣಕಾರಿಯಾಗಿ ನಡೆದುಕೊಂಡಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕಾನೂನು ತಜ್ಞ ಅಭಿಷೇಕ್ ಮನು ಸಿಂಗ್ವಿ <a href="https://www.thehindu.com/news/national/eci-is-shooting-the-messenger-and-ignoring-the-message-says-congresss-abhishek-singhvi/article69916195.ece"><em>ದಿ ಹಿಂದೂ</em>ಗೆ </a>ತಿಳಿಸಿದಂತೆ, ಆಯೋಗವು ತಕ್ಷಣವೇ &#8220;ಸಂದೇಶವಾಹಕನನ್ನು ಗುರಿಯಾಗಿಸಿ ಸಂದೇಶವನ್ನು ನಿರ್ಲಕ್ಷಿಸಿತು &#8211; shooting the messenger and ignoring the message.&#8221;</p>



<p>ಆರೋಪವನ್ನು ಪ್ರಮಾಣೀಕರಿಸಲು ಒತ್ತಾಯಿಸುವುದು ಒಂದು ತಂತ್ರವಾಗಿದೆ. ಇದು ಆಯೋಗದ ಜವಾಬ್ದಾರಿಯಾದ ವ್ಯವಸ್ಥಿತ ಸಮಸ್ಯೆಯನ್ನು, ರಾಜಕಾರಣಿಯ ವೈಯಕ್ತಿಕ ವಿಶ್ವಾಸಾರ್ಹತೆಯ ಸಮಸ್ಯೆಯಾಗಿ ಬದಲಾಯಿಸುತ್ತದೆ. ಸಿಂಗ್ವಿ ಕಾನೂನು ದೋಷವನ್ನು ಎತ್ತಿ ತೋರಿಸಿದರು, ಈ ನಿಯಮವನ್ನು &#8220;ಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ&#8221; ಎಂದು ಕರೆದರು. ಪ್ರಮಾಣವು ನಿರ್ದಿಷ್ಟ, ವೈಯಕ್ತಿಕ ಚುನಾವಣಾ ವಿವಾದಗಳಿಗಾಗಿ ರೂಪಿಸಲಾಗಿದೆ ಮತ್ತು &#8220;ಒಂದು ಸಂಪೂರ್ಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಬೃಹತ್‌ ವಂಚನೆಯ ಆರೋಪಕ್ಕೆ ಯಾವುದೇ ಸಂಬಂಧವಿಲ್ಲ&#8221; ಎಂದು ಅವರು ವಾದಿಸಿದರು.</p>



<p>ಚುನಾವಣಾ ಆಯೋಗವು ವಿರೋಧ ಪಕ್ಷದ ನಾಯಕನ ಮೇಲೆ ಒಂದು ಲಕ್ಷಕ್ಕಿಂತ ಹೆಚ್ಚು ವೈಯಕ್ತಿಕ ಪ್ರಕರಣಗಳನ್ನು ಸ್ವತಃ ದೃಢೀಕರಿಸುವ ಅಸಾಧ್ಯ ಕಾನೂನು ಭಾರವನ್ನು ಹೇರಲು ಹೊರಟಿದೆ. ಆಯೋಗ ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡದೆ ಇಷ್ಟು ದೊಡ್ಡದಾಗಿ ಈ ಸಂಖ್ಯೆ ಬೆಳೆದಿದೆ.  ಸಿಂಗ್ವಿ ಈ ಪರಿಸ್ಥಿತಿಯನ್ನು ಒಬ್ಬ ನಾಗರಿಕನು ಕಳ್ಳತನವನ್ನು ವರದಿ ಮಾಡಿದಾಗ, ಪೊಲೀಸರು ಕಳ್ಳರನ್ನು ನಿರ್ಲಕ್ಷಿಸಿ, ದೂರುದಾರನಿಗೆ ಪ್ರಮಾಣದ ಮೇಲೆ ಹೇಳಿಕೆಯನ್ನು ನೀಡಲು ಒತ್ತಾಯಿಸುವಂತೆ ಆಗಿದೆ ಎಂದು ಹೋಲಿಸಿದರು.</p>



<p><strong>ಕೇಂದ್ರ ವಿಷಯ</strong></p>



<p>ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸಲು ಸಂವಿಧಾನದಿಂದ ಬದ್ಧರಾದವರು ಚುನಾವಣಾ ಆಯೋಗದ ಅಧಿಕಾರಿಗಳೇ. ಮಹದೇವಪುರದಲ್ಲಿ, ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ತಮ್ಮದೇ ಆದ ದತ್ತಾಂಶ ಮತ್ತು ನಿಯಮಗಳ ಮೇಲೆ ಕಾರ್ಯನಿರ್ವಹಿಸಲು ಅವರು ವಿಫಲರಾದರು ಎಂಬುದಕ್ಕೆ ಸಾಕ್ಷಿಯಿದೆ. ಈಗ, ಅದೇ ಸಂಸ್ಥೆಯು ಒಂದು ಬೇರೆ ನಿಯಮವನ್ನು ಆಯುಧವಾಗಿ ಬಳಸಿಕೊಂಡು, ಸಮಸ್ಯೆಯನ್ನು ಮುನ್ನಲೆಗೆ ತಂದ ವ್ಯಕ್ತಿಯನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ. ಸಿಂಗ್ವಿ ಕೇಳಿದಂತೆ, &#8220;ಸಂವಿಧಾನಿಕ ಕಾವಲುಗಾರರು ತಮ್ಮ ಜವಾಬ್ದಾರಿಗಳನ್ನು ತ್ಯಜಿಸಿದಾಗ&#8230; ವಿರೋಧ ಪಕ್ಷವು ಕಾವಲುಗಾರರನ್ನು ಕಾಯದಿರೆ ಬೇರೆ ಯಾರುಕಾಯುತ್ತಾರೆ &#8211; When constitutional custodians… abdicate their responsibilities… Who will guard the guardians if not the opposition?&#8221;</p>



<p>ಮಹದೇವಪುರದ ಕಥೆಯು ಈಗ ಒಂದು ಕ್ಷೇತ್ರಕ್ಕೆ ಅಥವಾ ಒಬ್ಬ ರಾಜಕಾರಣಿಯ ಮೇಲಿನ ಆರೋಪಕ್ಕೆ ಸೀಮಿತವಾಗಿಲ್ಲ. ಇದು ಸಾಂಸ್ಥಿಕ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ, ಇದು ಚುನಾವಣಾ ಆಯೋಗವು ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಬದ್ಧವಾಗಿದೆಯೇ ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ.</p>
]]></content:encoded>
					
		
		
			</item>
	</channel>
</rss>
