<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>voting &#8211; Peepal Media</title>
	<atom:link href="https://peepalmedia.com/tag/voting/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 03 Jun 2024 10:58:20 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>voting &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>64 ಕೋಟಿ ಜನರಿಂದ ವಿಶ್ವ ದಾಖಲೆಯ ಮಹಾ ಮತದಾನ: ಮುಖ್ಯ ಚುನಾವಣಾ ಆಯುಕ್ತ</title>
		<link>https://peepalmedia.com/world-record-voter-turnout-of-64-crore-people-chief-election-commissioner/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 03 Jun 2024 10:57:19 +0000</pubDate>
				<category><![CDATA[Uncategorized]]></category>
		<category><![CDATA[ಲೋಕಸಭೆ ಚುನಾವಣೆ -2024]]></category>
		<category><![CDATA[bengalure]]></category>
		<category><![CDATA[Election 2024]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state politics]]></category>
		<category><![CDATA[voting]]></category>
		<category><![CDATA[worldrecard]]></category>
		<category><![CDATA[writing]]></category>
		<guid isPermaLink="false">https://peepalmedia.com/?p=40263</guid>

					<description><![CDATA[ನವದೆಹಲಿ: ಈ ಸಲದ ಲೋಕಸಭೆ ಚುನಾವಣೆಯಲ್ಲಿ 64.2 ಕೋಟಿ ಮತದಾರರು ಭಾಗವಹಿಸಿ ಮತದಾನ ಮಾಡಿದ್ದಾರೆ. ಇದು ವಿಶ್ವದಲ್ಲಿಯೇ ಅತಿಹೆಚ್ಚು ಮತದಾನ ನಡೆದ ಪ್ರಕರಣವಾಗಿದ್ದು, ಭಾರತ ವಿಶ್ವ ದಾಖಲೆ ನಿರ್ಮಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸೋಮವಾರ ಹೇಳಿದರು. ದೆಹಲಿಯಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 31.2 ಕೋಟಿ ಮತದಾನ ಮಾಡಿದ್ದಾರೆ ಎಂದು ತಿಳಿಸಿದರು. 68,000 ಮೇಲ್ವಿಚಾರಣಾ ತಂಡಗಳು ಮತ್ತು 1.5 ಕೋಟಿ ಮತದಾನ ಮತ್ತು ಭದ್ರತಾ ಸಿಬ್ಬಂದಿ ವಿಶ್ವದ ಅತಿದೊಡ್ಡ ಚುನಾವಣಾ ಪ್ರಕ್ರಿಯೆಯಲ್ಲಿ [&#8230;]]]></description>
										<content:encoded><![CDATA[
<p><a href="https://www.facebook.com/sharer.php?u=https%3A%2F%2Fnaanugauri.com%2Fvoted-by-over-64-crore-people-chief-election-commissioner-rajeev-kumar-said-it-was-a-world-record%2F"></a></p>



<p><strong>ನವದೆಹಲಿ: </strong>ಈ ಸಲದ ಲೋಕಸಭೆ ಚುನಾವಣೆಯಲ್ಲಿ 64.2 ಕೋಟಿ ಮತದಾರರು ಭಾಗವಹಿಸಿ ಮತದಾನ ಮಾಡಿದ್ದಾರೆ. ಇದು ವಿಶ್ವದಲ್ಲಿಯೇ ಅತಿಹೆಚ್ಚು ಮತದಾನ ನಡೆದ ಪ್ರಕರಣವಾಗಿದ್ದು, ಭಾರತ ವಿಶ್ವ ದಾಖಲೆ ನಿರ್ಮಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸೋಮವಾರ ಹೇಳಿದರು.</p>



<p>ದೆಹಲಿಯಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 31.2 ಕೋಟಿ ಮತದಾನ ಮಾಡಿದ್ದಾರೆ ಎಂದು ತಿಳಿಸಿದರು. </p>



<p> 68,000 ಮೇಲ್ವಿಚಾರಣಾ ತಂಡಗಳು ಮತ್ತು 1.5 ಕೋಟಿ ಮತದಾನ ಮತ್ತು ಭದ್ರತಾ ಸಿಬ್ಬಂದಿ ವಿಶ್ವದ ಅತಿದೊಡ್ಡ ಚುನಾವಣಾ  ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.&nbsp; ಸುಮಾರು ನಾಲ್ಕು ಲಕ್ಷ ವಾಹನಗಳು, 135 ವಿಶೇಷ ರೈಲುಗಳು ಮತ್ತು 1,692 ಏರ್ ಬಳಸಲಾಗಿದೆ.  ಬಳಸಲಾಗಿದೆ. ಇಷ್ಟೊಂದು ಮಹಾ ಮತದಾನ ನಡೆದಿದ್ದು ವಿಶ್ವದಲ್ಲೇ ದಾಖಲೆಯಾಗಿದೆ ಎಂದರು. </p>



<p>ಚುನಾವಣಾ ಆಯುಕ್ತರನ್ನು ‘ಲಾಪತಾ ಜಂಟಲ್‌ಮೆನ್ ಕಾಣೆಯಾಗಿದ್ದಾರೆ’ ಎಂದು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡಲಾಯಿತು. ಆದರೆ, “ನಾವು ಯಾವಾಗಲೂ ಇಲ್ಲಿಯೇ ನಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದೇವೆ. ಎಂದಿಗೂ ಕಾಣೆಯಾಗಲಿಲ್ಲ. ಈಗ ‘ಲಾಪತಾ ಜಂಟಲ್‌ಮೆನ್ ಮರಳಿದ್ದಾರೆ ಎಂದು ಟ್ರೋಲ್‌ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. </p>



<p>“2019 ರಲ್ಲಿ 540 ಮರುಮತದಾನಗಳು ನಡೆದಿದ್ದವು. ಆದರೆ, ಈ ಸಲದ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 39 ಮರುಮತದಾನಗಳು ನಡೆದಿವೆ. ಜಮ್ಮು ಮತ್ತು ಕಾಶ್ಮೀರವು ನಾಲ್ಕು ದಶಕಗಳಲ್ಲಿ ಒಟ್ಟಾರೆ ಶೇಕಡಾ 58.58 ಮತ್ತು ಕಣಿವೆಯಲ್ಲಿ ಶೇಕಡಾ 51.05 ರಷ್ಟು ಮತದಾನವಾಗಿದೆ.</p>



<p> 2024 ರ ಚುನಾವಣೆಯಲ್ಲಿ ನಗದು, ಉಚಿತ ವಸ್ತುಗಳು, ಡ್ರಗ್ಸ್ ಮತ್ತು ಮದ್ಯ ಸೇರಿದಂತೆ ₹10,000 ಕೋಟಿ ವಶಪಡಿಸಿಕೊಳ್ಳಲಾಗಿದೆ. 2019 ರಲ್ಲಿ ₹3,500 ಕೋಟಿಯಷ್ಟು ವಶಪಡಿಸಿಕೊಳಳಲಾಗಿತ್ತು ಎಂದು ಅವರು ಮಾಹಿತಿ ನೀಡಿದರು. </p>
]]></content:encoded>
					
		
		
			</item>
		<item>
		<title>1 ಮತ್ತು 2ನೇ ಹಂತದ ಮತದಾನದ ಅಂತಿಮ ಡೇಟಾ ಬಿಡುಗಡೆ ಮಾಡದ ಚುನಾವಣಾ ಆಯೋಗ</title>
		<link>https://peepalmedia.com/final-data-o-phases-1-and-2-voter-turnout-not-released-by-eci/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 30 Apr 2024 08:36:23 +0000</pubDate>
				<category><![CDATA[ರಾಜಕೀಯ]]></category>
		<category><![CDATA[election]]></category>
		<category><![CDATA[Election 2024]]></category>
		<category><![CDATA[Election Commission of India]]></category>
		<category><![CDATA[voting]]></category>
		<guid isPermaLink="false">https://peepalmedia.com/?p=38970</guid>

					<description><![CDATA[ನವದೆಹಲಿ: 2024 ರ ಲೋಕಸಭಾ ಚುನಾವಣೆಯ ಮೊದಲ ಹಂತವು ಏಪ್ರಿಲ್ 19 ರಂದು ಮತ್ತು ಎರಡನೇ ಹಂತವು ಏಪ್ರಿಲ್ 26 ರಂದು ನಡೆಯಿತು, ಆದರೆ ಭಾರತೀಯ ಚುನಾವಣಾ ಆಯೋಗವು ಎರಡೂ ಹಂತದ ಮತದಾನದ ಅಂತಿಮ ಅಂಕಿಅಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಪ್ರತಿ ಮತದಾನದ ದಿನ ಸುಮಾರು 7 ಗಂಟೆಗೆ ಆಯೋಗ ಬಿಡುಗಡೆ ಮಾಡಿದ &#8220;approximate trend&#8221; ಮಾತ್ರ ಲಭ್ಯವಿದೆ. ಏಪ್ರಿಲ್ 19 ರ ಈ ಅಂದಾಜಿನ ಪ್ರಕಾರ 60% ಮತ್ತು ಏಪ್ರಿಲ್ 26 ಕ್ಕೆ 60.96% ಆಗಿತ್ತು. [&#8230;]]]></description>
										<content:encoded><![CDATA[
<p><strong>ನವದೆಹಲಿ:</strong> 2024 ರ ಲೋಕಸಭಾ ಚುನಾವಣೆಯ ಮೊದಲ ಹಂತವು ಏಪ್ರಿಲ್ 19 ರಂದು ಮತ್ತು ಎರಡನೇ ಹಂತವು ಏಪ್ರಿಲ್ 26 ರಂದು ನಡೆಯಿತು, ಆದರೆ ಭಾರತೀಯ ಚುನಾವಣಾ ಆಯೋಗವು ಎರಡೂ ಹಂತದ ಮತದಾನದ ಅಂತಿಮ ಅಂಕಿಅಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಪ್ರತಿ ಮತದಾನದ ದಿನ ಸುಮಾರು 7 ಗಂಟೆಗೆ ಆಯೋಗ ಬಿಡುಗಡೆ ಮಾಡಿದ &#8220;approximate trend&#8221; ಮಾತ್ರ ಲಭ್ಯವಿದೆ.</p>



<p>ಏಪ್ರಿಲ್ 19 ರ ಈ ಅಂದಾಜಿನ ಪ್ರಕಾರ 60% ಮತ್ತು ಏಪ್ರಿಲ್ 26 ಕ್ಕೆ 60.96% ಆಗಿತ್ತು.</p>



<p>ಮೊದಲ ಹಂತದಲ್ಲಿ 66.14% ಮತ್ತು ಎರಡನೇ ಹಂತದಲ್ಲಿ 66.7% ರಷ್ಟು ಅಂತಿಮ ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು <a href="https://www.thehindubusinessline.com/data-stories/ec-website-fails-to-disclose-exact-poll-percentage-for-two-phases/article68121829.ece" data-type="link" data-id="https://www.thehindubusinessline.com/data-stories/ec-website-fails-to-disclose-exact-poll-percentage-for-two-phases/article68121829.ece">ಬಿಸಿನೆಸ್‌ಲೈನ್‌ಗೆ</a>  ತಿಳಿಸಿದ್ದಾರೆ. &#8220;ನಾವು ಸಂಗ್ರಹಿಸಿದ ತಕ್ಷಣ ನಾವು ಅಂತಿಮ ಅಂಕಿಅಂಶಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಹಾಕುತ್ತೇವೆ&#8221; ಎಂದು ಅವರು ತಿಳಿಸಿದ್ದಾರೆ. ಆದರೆ ಈ ಅಂಕಿಅಂಶಗಳು ಇನ್ನೂ ವೆಬ್‌ಸೈಟ್‌ನಲ್ಲಿಲ್ಲ.</p>



<p>ಬ್ಯುಸಿನೆಸ್‌ಲೈನ್ ವರದಿ ಮಾಡಿದಂತೆ, ಇದು ವೆಬ್‌ಸೈಟ್‌ನಿಂದ ಕಾಣೆಯಾಗಿರುವ ಮತದಾರರ ಮತದಾನದ ಡೇಟಾ ಅಲ್ಲ. ಪ್ರತಿ ಸಂಸದೀಯ ಕ್ಷೇತ್ರದಲ್ಲಿ ನೋಂದಾಯಿತ ಮತದಾರರ ಸಂಖ್ಯೆಯೂ ಕಾಣೆಯಾಗಿದೆ. “ಬಿಸಿನೆಸ್‌ಲೈನ್‌ ಪ್ರತಿ ಕ್ಷೇತ್ರದ ಮತದಾರರ ಸಂಖ್ಯೆಯನ್ನು ಕಂಡುಹಿಡಿಯಲು ಪ್ರಯತ್ನಿಸಿದಾಗ, ಸಿಕ್ಕಿದ್ದು ಉತ್ತರ ಪ್ರದೇಶದಂತಹ ಕೆಲವು ಆಯ್ದ ರಾಜ್ಯಗಳಲ್ಲಿನ ಬೂತ್‌ವಾರು ಚುನಾವಣಾ ಪಟ್ಟಿಗಳು. ಒಡಿಶಾ, ಬಿಹಾರ ಅಥವಾ ದೆಹಲಿಯ ಡೇಟಾ ಲಭ್ಯವಿಲ್ಲ. ಬಿಹಾರ ಅಥವಾ ಒಡಿಶಾದ ಮತದಾರರ ಸಂಖ್ಯೆಯನ್ನು ನೋಡೆದರೆ, ಮಾಹಿತಿಯನ್ನು ಒದಗಿಸಬೇಕಾದ ಕೊನೆಯ ಪುಟದಲ್ಲಿ ದೋಷಗಳಿವೆ.”</p>



<p>ಇದುವರೆಗಿನ ಅಂದಾಜು ಮತದಾನದ ಪ್ರಮಾಣವು 2019 ರ ಲೋಕಸಭೆ ಚುನಾವಣೆಯಲ್ಲಿ ಕಂಡುಬಂದಕ್ಕಿಂತ ಕಡಿಮೆಯಾಗಿದೆ.</p>



<p>&#8220;ಈ ಕುಸಿತವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರಂತಹ ಮೋದಿ ಸರ್ಕಾರದ ಟೀಕಾಕಾರರು ಈ ಕುಸಿತವನ್ನು ಕೇಂದ್ರದ ಕಡೆಗೆ ಜನರು ತೋರಿರುವ ಅಸಮಧಾನವಾಗಿ ನೋಡುತ್ತಾರೆ.ಎನ್‌ಡಿಎಯೇತರ ಪಕ್ಷಗಳಿಗಿಂತ ಬಿಜೆಪಿ ನೇತೃತ್ವದ ಎನ್‌ಡಿಎ ಹೊಂದಿರುವ ಸ್ಥಾನಗಳಲ್ಲಿ ಮತದಾನ ಪ್ರಮಾಣದಲ್ಲಿ ಕುಸಿತವು ಹೆಚ್ಚಾಗಿದೆ ಎಂದು ಪ್ರತಿಪಾದಿಸುತ್ತಾರೆ. ಆದರೆ ಬಿಜೆಪಿಯ ಬೆಂಬಲಿಗರು ಇದಕ್ಕೆ ವಾತಾವರಣದಲ್ಲಿ ಆಗಿರುವ ತೀವ್ರತರವಾದ ಬಿಸಿಲು ಕಾರಣ ಎಂದು ನಂಬುತ್ತಾರೆ,” ಎಂದು <a href="https://thewire.in/politics/dwindling-voter-turnout-shows-discontent-and-political-apathy-in-2nd-phase-of-lok-sabha-polls" data-type="link" data-id="https://thewire.in/politics/dwindling-voter-turnout-shows-discontent-and-political-apathy-in-2nd-phase-of-lok-sabha-polls">ಅಜೋಯ್ ಆಶೀರ್ವಾದ್ ಮಹಾಪ್ರಶಾಸ್ತಾ </a>ಬರೆದಿದ್ದಾರೆ .</p>



<p>“&#8230;ಲೋಕಸಭಾ ಚುನಾವಣೆಯನ್ನು ವ್ಯಾಪಾರ-ವಹಿವಾಟು, ವಾಡಿಕೆಯ ವ್ಯವಹಾರದಂತೆ ನಡೆಸಲಾಗುತ್ತಿದೆ. ಸ್ವತಃ ಪ್ರಧಾನಿ ನೇತೃತ್ವದ ಬಿಜೆಪಿ ನಾಯಕರು ಅಲ್ಪಸಂಖ್ಯಾತರ ವಿರುದ್ಧ ದ್ವೇಷಪೂರಿತ ಟೀಕೆಗಳನ್ನು ಮಾಡುವುದರಲ್ಲಿ ನಿರ್ಭಯದಿಂದ ತೊಡಗಿಸಿಕೊಂಡಿದ್ದಾರೆ, ಚುನಾವಣಾ ಆಯೋಗದಿಂದಲೂ ಯಾವುದೇ ಹಸ್ತಕ್ಷೇಪವಾಗಿಲ್ಲ. ಕೆಲವು ಪ್ರಾದೇಶಿಕ ನಾಯಕರನ್ನು ಹೊರತುಪಡಿಸಿ ಪ್ರತಿಪಕ್ಷಗಳು ತಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಮತ್ತು ಸಂಪನ್ಮೂಲಗಳನ್ನು ಸಂಗ್ರಹಿಸಲು ಹೆಣಗಾಡುತ್ತಿವೆ, ಮೋದಿ ಆಡಳಿತವು ಮಾಡಿದ ಅತಿರೇಕಗಳಿಗೆ ಸವಾಲೆಸೆಯುವವರು ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.</p>
]]></content:encoded>
					
		
		
			</item>
		<item>
		<title> ನಾನು ದ್ವೇಷದ ವಿರುದ್ಧ ಮತ ನೀಡಿದ್ದೇನೆ, ನೀವು?: ಪ್ರಕಾಶ್‌ ರಾಜ್‌</title>
		<link>https://peepalmedia.com/i-voted-against-hate-you-prakash-raj/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 26 Apr 2024 07:01:48 +0000</pubDate>
				<category><![CDATA[ಲೋಕಸಭೆ ಚುನಾವಣೆ -2024]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[prakash raj]]></category>
		<category><![CDATA[state politics]]></category>
		<category><![CDATA[voting]]></category>
		<guid isPermaLink="false">https://peepalmedia.com/?p=38771</guid>

					<description><![CDATA[ಬೆಂಗಳೂರು: ಸಾಮಾಜಿಕ ಚಿಂತಕ, ಚಿತ್ರನಟ ಪ್ರಕಾಶ್‌ ರಾಜ್‌ ಬೆಂಗಳೂರಿನ ಮತಗಟ್ಟೆಯೊಂದರಲ್ಲಿ ಇಂದು ತಮ್ಮ ಮತ ಚಲಾಯಿಸಿದ ನಂತರ ಎಕ್ಸ್‌  ಪೋಸ್ಟ್‌ ನಲ್ಲಿ  ಎಲ್ಲರೂ ಮತದಾನ ಮಾಡುವಂತೆ ವಿನಂತಿಸಿ ವೀಡಿಯೋ ಸಂದೇಶವೊಂದನ್ನು ಫೋಸ್ಟ್‌ ಮಾಡಿದ್ದಾರೆ. &#160;“ನಾನು ಬದಲಾವಣೆಗೆ ಮತ್ತು ದ್ವೇಷದ ವಿರುದ್ಧ ಮತ ನೀಡಿದ್ದೇನೆ. ಸಂಸತ್ತಿನಲ್ಲಿ ನನ್ನ ದನಿಯಾಗಬಲ್ಲರೆಂದು ನಾನು ನಂಬುವ ಪ್ರತಿನಿಧಿಗೆ ನಾನು ಮತ ಹಾಕಿದ್ದೇನೆ. ದಯವಿಟ್ಟು ಹೋಗಿ ನೀವು ಮತದಾನದ ಹಕ್ಕನ್ನು ಚಲಾಯಿಸಿ. ಬದಲಾವಣೆಗೆ ನಿಮ್ಮಕೊಡುಗೆಯೂ ಇರಲಿ, ಪ್ರೀತಿಯಿಂದ ನನ್ನ ಮನವಿ,” ಎಂದು ಅವರು ತಮ್ಮ [&#8230;]]]></description>
										<content:encoded><![CDATA[
<p>ಬೆಂಗಳೂರು: ಸಾಮಾಜಿಕ ಚಿಂತಕ, ಚಿತ್ರನಟ ಪ್ರಕಾಶ್‌ ರಾಜ್‌ ಬೆಂಗಳೂರಿನ ಮತಗಟ್ಟೆಯೊಂದರಲ್ಲಿ ಇಂದು ತಮ್ಮ ಮತ ಚಲಾಯಿಸಿದ ನಂತರ ಎಕ್ಸ್‌  ಪೋಸ್ಟ್‌ ನಲ್ಲಿ  ಎಲ್ಲರೂ ಮತದಾನ ಮಾಡುವಂತೆ ವಿನಂತಿಸಿ ವೀಡಿಯೋ ಸಂದೇಶವೊಂದನ್ನು ಫೋಸ್ಟ್‌ ಮಾಡಿದ್ದಾರೆ.</p>



<p>&nbsp;“ನಾನು ಬದಲಾವಣೆಗೆ ಮತ್ತು ದ್ವೇಷದ ವಿರುದ್ಧ ಮತ ನೀಡಿದ್ದೇನೆ. ಸಂಸತ್ತಿನಲ್ಲಿ ನನ್ನ ದನಿಯಾಗಬಲ್ಲರೆಂದು ನಾನು ನಂಬುವ ಪ್ರತಿನಿಧಿಗೆ ನಾನು ಮತ ಹಾಕಿದ್ದೇನೆ. ದಯವಿಟ್ಟು ಹೋಗಿ ನೀವು ಮತದಾನದ ಹಕ್ಕನ್ನು ಚಲಾಯಿಸಿ. ಬದಲಾವಣೆಗೆ ನಿಮ್ಮಕೊಡುಗೆಯೂ ಇರಲಿ, ಪ್ರೀತಿಯಿಂದ ನನ್ನ ಮನವಿ,” ಎಂದು ಅವರು ತಮ್ಮ ವೀಡಿಯೋ ಸಂದೇಶದಲ್ಲಿ ವಿನಂತಿಸಿಕೊಂಡಿದ್ದೇನೆ.</p>



<p>ವೀಡಿಯೋಗೆ ನೀಡಿದ ಶೀರ್ಷಿಕೆಯಲ್ಲಿ ಅವರು “ನಾನು ಮತದಾನ ಮಾಡಿದ್ದೇನೆ. ದಯವಿಟ್ಟು ಹೋಗಿ ಮತದಾನ ಮಾಡಿ ಜಸ್ಟ್‌ಆಸ್ಕಿಂಗ್, ಸೇವ್‌ ಡೆಮಾಕ್ರೆಸಿ ಸೇವ್‌ ಇಂಡಿಯಾ” ಎಂದು ಅವರು ಹ್ಯಾಸ್‌ ಟ್ಯಾಗ್‌ ಹಾಕಿದ್ದಾರೆ.</p>



<p>ಮತ ಚಲಾಯಿಸಿದ ನಂತರ ಮಾಧ್ಯಮವೊಂದರ ಜೊತೆ ಮಾತನಾಡಿದ ಪ್ರಕಾಶ್‌ ರಾಜ್‌, ನನ್ನ ಮತ ನನ್ನ ಹಕ್ಕಿಗೆ ಸಂಬಂಧಿಸಿದೆ, ಯಾರು ನನ್ನನ್ನು ಪ್ರತಿನಿಧಿಸಬೇಕೆಂದು, ಯಾರು ಸಂಸತ್ತಿನಲ್ಲಿ ನನ್ನ ದನಿಯಾಗಬೇಕೆಂದು ಆರಿಸುವ &nbsp;ಅಧಿಕಾರ ನನ್ನದು. ಕಳೆದೊಂದು ದಶಕದಲ್ಲಿ ನಾವು ನೋಡಿರುವ ದ್ವೇಷ ಮತ್ತು ದೇಶವನ್ನು ಇಬ್ಬಾಗ ಮಾಡಿ ನೋಡುವ ರಾಜಕಾರಣದಿಂದ ಬೇಸರ ಬಂದಿತ್ತು. &nbsp;ನೀವು ನಂಬಿಕೆಯಿರಿಸಿರುವ ಅಭ್ಯರ್ಥಿಗೆ ಮತ ನೀಡಿ. ನಾನು ನಂಬಿಕೆ ಇರಿಸಿದ ಅಭ್ಯರ್ಥಿಗೆ ಹಾಗು ಅವರು ಬದಲಾವಣೆಗೆ ಮತ ನೀಡಿದ್ದೇನೆ ಎಂದು ಅವರು ತಿಳಿಸಿದರು.</p>
]]></content:encoded>
					
		
		
			</item>
	</channel>
</rss>
