<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Waqf Bill &#8211; Peepal Media</title>
	<atom:link href="https://peepalmedia.com/tag/waqf-bill/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 05 Apr 2025 07:35:08 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Waqf Bill &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ವಕ್ಫ್ ಮಸೂದೆ ವಂಚನೆ: ಮುಸ್ಲಿಂ ಕಲ್ಯಾಣದ ಕಾಳಜಿಯ ಹಿಂದಿನ ಮೋದಿ ಸರ್ಕಾರದ ಉದ್ದೇಶ ಏನು?</title>
		<link>https://peepalmedia.com/waqf-bill-what-is-the-modi-governments-motive-behind-concern-for-muslim-welfare/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 05 Apr 2025 07:12:10 +0000</pubDate>
				<category><![CDATA[ಅಂಕಣ]]></category>
		<category><![CDATA[Bharatiya Janata Party]]></category>
		<category><![CDATA[bjp]]></category>
		<category><![CDATA[communalism]]></category>
		<category><![CDATA[fascism]]></category>
		<category><![CDATA[hindutva]]></category>
		<category><![CDATA[modi]]></category>
		<category><![CDATA[Muslim Welfare]]></category>
		<category><![CDATA[narendra modi]]></category>
		<category><![CDATA[RSS]]></category>
		<category><![CDATA[Waqf Bill]]></category>
		<category><![CDATA[Waqf Bill Deception]]></category>
		<guid isPermaLink="false">https://peepalmedia.com/?p=56652</guid>

					<description><![CDATA[ಎಪ್ರಿಲ್ 2 ರಂದು ಲೋಕಸಭೆಯಲ್ಲಿ ದೇಶ ಕಂಡುಕೇಳರಿಯದ ತರ್ಕಹೀನ ಮತ್ತು ವಂಚನೆಯ ಜಾತ್ರೆಯೇ ನಡೆಯಿತು. ನರೇಂದ್ರ ಮೋದಿ ಸರ್ಕಾರವು ಮುಸ್ಲಿಂ ಸಮುದಾಯದ ಉದ್ಧಾರಕ್ಕಾಗಿ ವಕ್ಫ್ ಮಸೂದೆಯನ್ನು ತಂದಿದ್ದೇವೆ ಎಂದು ಹೇಳಿಕೊಂಡು ಸ್ವತಂತ್ರ ಭಾರತ ಕಂಡ ಅತ್ಯಂತ ನೀಚ ರಾಜಕೀಯ ವಂಚನೆಯನ್ನು ಮಾಡಿದೆ. ತರ್ಕಹೀನ ಮತ್ತು ವಂಚನೆಯು ರಾಷ್ಟ್ರದ ಸಾಮೂಹಿಕ ವಿವೇಕವನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ.&#160; ವಕ್ಫ್ ಮಸೂದೆಯ ಉದ್ದೇಶದ ಬಗ್ಗೆ ಬಹಳಷ್ಟು ಬರೆಯಲಾಗಿದೆ, ಮಾತನಾಡಲಾಗಿದೆ. ಅವಿದ್ಯಾವಂತರಿಗೆ ಕೂಡ ಇದರ ನಿಜವಾದ ಉದ್ದೇಶ ಏನೆಂದು ತಿಳಿದಿದೆ. ಅದರ [&#8230;]]]></description>
										<content:encoded><![CDATA[
<pre class="wp-block-code"><code><strong>ಲೋಕಸಭೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸದಸ್ಯನನ್ನು ಹೊಂದದ ಪಕ್ಷವೊಂದು ಆ ಸಮುದಾಯದ ಕಲ್ಯಾಣದ ಬಗ್ಗೆ ಉಪದೇಶ ನೀಡುವುದು ವಿಚಿತ್ರವಾಗಿದೆ. ಆದರೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅಥವಾ ಚಿರಾಗ್ ಪಾಸ್ವಾನ್ ಅವರಂತಹ ಮಿತ್ರಪಕ್ಷಗಳಿಂದ ಇನ್ನೂ ವಿರೋಧ ಪಕ್ಷಗಳು ಏನನ್ನಾದರೂ ನಿರೀಕ್ಷೆ ಮಾಡುತ್ತಿರುವುದು ಅಷ್ಟೇ ವಿಚಿತ್ರವಾಗಿವೆ</strong>
- ಲೇಖನ: <em><strong>ಸಂಜಯ್ ಕೆ. ಝಾ</strong>, ರಾಜಕೀಯ ವಿಶ್ಲೇಷಕರು</em></code></pre>



<p><br>ಎಪ್ರಿಲ್ 2 ರಂದು ಲೋಕಸಭೆಯಲ್ಲಿ ದೇಶ ಕಂಡುಕೇಳರಿಯದ ತರ್ಕಹೀನ ಮತ್ತು ವಂಚನೆಯ ಜಾತ್ರೆಯೇ ನಡೆಯಿತು. ನರೇಂದ್ರ ಮೋದಿ ಸರ್ಕಾರವು ಮುಸ್ಲಿಂ ಸಮುದಾಯದ ಉದ್ಧಾರಕ್ಕಾಗಿ ವಕ್ಫ್ ಮಸೂದೆಯನ್ನು ತಂದಿದ್ದೇವೆ ಎಂದು ಹೇಳಿಕೊಂಡು ಸ್ವತಂತ್ರ ಭಾರತ ಕಂಡ ಅತ್ಯಂತ ನೀಚ ರಾಜಕೀಯ ವಂಚನೆಯನ್ನು ಮಾಡಿದೆ. ತರ್ಕಹೀನ ಮತ್ತು ವಂಚನೆಯು ರಾಷ್ಟ್ರದ ಸಾಮೂಹಿಕ ವಿವೇಕವನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ.&nbsp;</p>



<p>ವಕ್ಫ್ ಮಸೂದೆಯ ಉದ್ದೇಶದ ಬಗ್ಗೆ ಬಹಳಷ್ಟು ಬರೆಯಲಾಗಿದೆ, ಮಾತನಾಡಲಾಗಿದೆ. ಅವಿದ್ಯಾವಂತರಿಗೆ ಕೂಡ ಇದರ ನಿಜವಾದ ಉದ್ದೇಶ ಏನೆಂದು ತಿಳಿದಿದೆ. ಅದರ ಬಗ್ಗೆ ಆಳವಾಗಿ ಹೋಗುವುದು ಬೇಡ. ಆದರೆ  ಕಳೆದ ಏಳು ದಶಕಗಳಲ್ಲಿ ಯಾವುದೇ ಸರ್ಕಾರಗಳು ಮಾಡಲಾಗದದ್ದನ್ನು ಮೋದಿ ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಕನಸು ಕಂಡಿದೆ &#8211; ಮುಸ್ಲಿಮರ ಆಸ್ತಿಗಳನ್ನು ಸಮುದಾಯದ ಕಲ್ಯಾಣಕ್ಕಾಗಿ ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು ಎಂಬ ಅಮೃತ ಕಾಲದ ಅದ್ಭುತ ಹೇಳಿಕೆಯನ್ನು ಗಂಭೀರವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ. ಬಡ ಮುಸ್ಲಿಮರ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ, ಯುವಕರನ್ನು ಕೌಶಲ್ಯಪೂರ್ಣರನ್ನಾಗಿಸಲು, ಮಹಿಳೆಯರ ಸಬಲೀಕರಣಕ್ಕಾಗಿ ಈ ಸಂಪನ್ಮೂಲಗಳನ್ನು ಏಕೆ ಬಳಸಿಕೊಳ್ಳಬಾರದು &#8211; ಎಂಬಂತ ಮಂತ್ರಿಗಳ ಬಾಯಿಂದ ಉದುರುತ್ತಿರುವ ಮಾತುಗಳು ದೇಶದ ಗಾಯಗೊಂಡ ಆತ್ಮದ ಮೇಲೆ ಹಚ್ಚುವ ಸಾಂತ್ವನಕಾರಿ ಮುಲಾಮಿನಂತೆ ಕಾಣುತ್ತಿದೆ.&nbsp;</p>



<p>ದೇಶ ಕೃತಜ್ಞತೆಯನ್ನು ತೋರಬೇಕಾದುದು ತಾನೇ ದೇವರೆಂಬ ಭ್ರಮೆಯಲ್ಲಿರುವ ಉದಾರ ಮನಸ್ಸಿನ ಅಮಿತ್ ಶಾಗೆ, ಅವರು ಸುರಿಸುತ್ತಿರುವ ಕರುಣೆ ನಿಸ್ಸಂದೇಹವಾಗಿ ಅವರ ಮಾರ್ಗದರ್ಶಕರ ದಯೆಯನ್ನೂ ಮೀರಿಸಿದೆ. ಗುಜರಾತ್‌ನಲ್ಲಿ ಕೋಮು ಸೌಹಾರ್ದತೆಯ ಸುಟ್ಟು ಬೂದಿಯಾದಾಗ, ಅದರ ಚಿತಾಭಸ್ಮದಿಂದ ಹುಟ್ಟಿದ ದ್ವಂದ್ವ ನೀತಿಯನ್ನು ಮರೆತುಬಿಡೋಣ. ಕೇವಲ ತಿಂಗಳುಗಳ ಹಿಂದೆ &#8211; ಬೇರೆ ಯಾವುದೇ ಸರ್ಕಾರ ಬಂದರೂ ಜನರ ಆಸ್ತಿ ಮತ್ತು ಆಭರಣಗಳನ್ನು ಕಸಿದುಕೊಂಡು ನುಸುಳುಕೋರರ ಮತ್ತು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸುವವರಿಗೆ ಕೊಡುತ್ತದೆ- ಎಂದು ಮೋದಿ ಹೇಳಿದ್ದನ್ನು ಮರೆತುಬಿಡೋಣ. ಗೂಂಡಾಗಳು ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಮಾಡಿದಾಗ, ಅವರ ಪುಂಡರು ಮುಸ್ಲಿಮರನ್ನು ದೇಶದ್ರೋಹಿಗಳೆಂದು ಬಣ್ಣಿಸುವ ವಿಷಕಾರಿ ಘೋಷಣೆಗಳನ್ನು ಕೂಗಿದಾಗ, ಮುಗ್ಧ ಜನರನ್ನು ಬೀದಿಗಳಲ್ಲಿ ಹೊಡೆದು ಸಾಯಿಸಿದಾಗ ವಾಚಾಳಿ ಗೃಹ ಸಚಿವರು ಒಂದು ಮಾತನ್ನೂ ಹೇಳುವುದಿಲ್ಲ ಎಂಬುದನ್ನು ಮರೆತುಬಿಡೋಣ. ರಾಜಕೀಯ ಸ್ಪರ್ಧೆಯನ್ನು 80 vs 20 ಯುದ್ಧ ಎಂದು ವ್ಯಾಖ್ಯಾನಿಸಿದಾಗ ಪ್ರಧಾನಿಯವರ ಮೌನವನ್ನು ಮರೆತುಬಿಡೋಣ.</p>



<p>ಈ ಸುಳ್ಳನ್ನು ಮಾರಾಟ ಮಾಡುವ ಸರ್ಕಾರದ ಧೈರ್ಯ ದಿಗ್ಭ್ರಮೆಗೊಳಿಸುವಂತಿದೆ. ಇಡೀ ದೇಶ ಒಂದು ಗಳಿಗೆ ಇವರ ರಾಜಕೀಯದ ನಿಲುವನ್ನು ಮರೆತುಬಿಡುತ್ತದೆ ಎಂಬಂತೆ, ಅವರ ಧರ್ಮಾಂಧ ಹಿಂಬಾಲಕರು ಸರ್ಜರಿ ಮುಗಿಯುವ ವರೆಗೆ ಸುಮ್ಮನಿರುತ್ತಾರೆ ಎಂಬಂತೆ, ದೇಶದ ರಾಜಕೀಯ ವ್ಯವಸ್ಥೆಗೆ ಲೋಕಲ್‌ ಅನಸ್ತೇಶಿಯಾ ಕೊಟ್ಟು ಈ ಕೆಲಸವನ್ನು ಮಾಡಬಹುದು ಎಂದು ಅವರು ಅಂದುಕೊಂಡಿದ್ದಾರೆ. ತ್ರಿವಳಿ ತಲಾಖ್ ಅನ್ನು ತೆಗೆದುಹಾಕುವ ಮೂಲಕ ಮುಸ್ಲಿಂ ಮಹಿಳೆಯರಿಗೆ ನೆರವಾಗಿದ್ದೇವೆ ಎಂಬ ಅಸಹಜ ಪ್ರಚಾರವನ್ನು ಸೃಷ್ಟಿಸಿದಾಗ ಇದು ನಡೆಯಿತು. ಬಡ ಮುಸ್ಲಿಂ ಮಹಿಳೆಯ ಪತಿ ಅಥವಾ ಅವಳ ಸಹೋದರನನ್ನು ಬೀದಿಯಲ್ಲಿ ಕಿರುಕುಳಕ್ಕೊಳಗಾದಾಗ ಅಥವಾ ಗಲ್ಲಿಗೇರಿಸಿದಾಗ ಅವಳ ಮೇಲೆ ಅದು ಪರಿಣಾಮ ಬೀರುವುದಿಲ್ಲವೇ? ತ್ರಿವಳಿ ತಲಾಖ್ ರದ್ದತಿಯಿಂದ ಪ್ರಯೋಜನ ಪಡೆದ ಮುಸ್ಲಿಂ ಮಹಿಳೆಗೆ ಆ ಪರಕೀಯತೆಯ ಭಾವನೆ, ಅಸಮಾನತೆಯ ನೋವು, ದೇಶದ್ರೋಹಿ ಎಂದು ಹಣೆಪಟ್ಟಿ ಹೊರುವ ಭಯ ಇರುವುದಿಲ್ಲವೇ?</p>



<p>ಈ ಸರ್ಕಾರದ ಈ ಪರೋಪಕಾರದ ಮನಸ್ಸು ಸ್ವಿಚ್-ಆನ್ ಸ್ವಿಚ್-ಆಫ್ ಮೋಡ್‌ನಲ್ಲಿ ಕೆಲಸ ಮಾಡುತ್ತದೆ. ಸಮಾನತೆ ಮತ್ತು ನ್ಯಾಯವು ಹಣದ ನೆರವಿಗೆ ಮಾತ್ರ ಸೀಮಿತವಾಗಿದೆ. ಮುಸ್ಲಿಮರು ಮಾತ್ರ ಏಕೆ ನಿರಂತರವಾಗಿ ರಾಷ್ಟ್ರಕ್ಕೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸುತ್ತಲೇ ಇರಬೇಕು? ಅವರ ಧಾರ್ಮಿಕ ಚಟುವಟಿಕೆಗಳ ಮೇಲೆ ವಿಶೇಷ ನಿರ್ಬಂಧಗಳು ಏಕೆ? ಕನ್ವರ್ ಯಾತ್ರೆಯ ಸಮಯದಲ್ಲಿ ಬೀದಿ ವ್ಯಾಪಾರಿಗಳ ಧರ್ಮವನ್ನು ಗುರುತಿಸಲು ವಿಶೇಷ ಕ್ರಮಗಳನ್ನು ಏಕೆ ತೆಗೆದುಕೊಳ್ಳಬೇಕು? ಈದ್‌ನಲ್ಲಿ ಭಕ್ತರಿಗೆ ಅನುಕೂಲ ಮಾಡಿಕೊಡಲು ಯಾವ ವಿಶೇಷ ಕ್ರಮಗಳನ್ನು ಘೋಷಿಸಲಾಗಿದೆ? ನವರಾತ್ರಿಗಳು ಮತ್ತು ಇತರ ಹಬ್ಬಗಳ ಸಮಯದಲ್ಲಿ ದಿನಗಳವರೆಗೆ ಮಾಂಸದ ಅಂಗಡಿಗಳನ್ನು ಮುಚ್ಚುವ ಮೂಲಕ ಅವರ ವ್ಯವಹಾರಗಳನ್ನು ಏಕೆ ಗುರಿಯಾಗಿಸಿಕೊಳ್ಳಲಾಗುತ್ತದೆ? ಇತರ ಧರ್ಮಗಳ ಭಕ್ತರ ಮೇಲೆ ಯಾವ ನಿರ್ಬಂಧಗಳನ್ನು ವಿಧಿಸಲಾಗಿದೆ? ಆಕ್ಷೇಪಣೆಗಳು ಅಂತ್ಯವಿಲ್ಲ &#8211; ಅಜಾನ್‌ನಿಂದ ಹಿಜಾಬ್‌ವರೆಗೆ, ಮದರಸಾಗಳಿಂದ ಮಸೀದಿಗಳವರೆಗೆ, ಅವರನ್ನು ಎರಡನೇ ದರ್ಜೆಯ ನಾಗರಿಕರ ಸ್ಥಾನಮಾನಕ್ಕೆ ತಳ್ಳಲು ಸ್ಪಷ್ಟ ತಂತ್ರವನ್ನು ಹೆಣೆಯಲಾಗಿದೆ.</p>



<p>ನೀಚ ಉದ್ದೇಶಗಳನ್ನು ಹೆಚ್ಚಾಗಿ ಉದಾತ್ತ ಆಡಂಬರಗಳಿಂದ ಮರೆಮಾಚಲಾಗುತ್ತದೆ. ನಾಜಿ ಫಿಲಾಸಫಿಯಷ್ಟು ನೈತಿಕತೆ ಮತ್ತು ಆದರ್ಶವಾದಕ್ಕೆ ಯಾವುದೇ ರಾಜಕೀಯವೂ ಹೆಚ್ಚಿನ ಒತ್ತು ನೀಡಿಲ್ಲ. ಆದರೆ ಅಡಾಲ್ಫ್ ಹಿಟ್ಲರ್ ಅಂಚಿನಲ್ಲಿರುವ ಸಮುದಾಯದ ಮೇಲೆ ಹೇಗೆ ಅಮಾನವೀಯ ನಿರ್ಬಂಧಗಳನ್ನು ವಿಧಿಸಬೇಕು ಎಂಬುದನ್ನು ಜಗತ್ತಿಗೇ ತೋರಿಸಿದನು. ಅವನು ಯಹೂದಿಗಳ ವಿರುದ್ಧ ಸಣ್ಣಪುಟ್ಟ ತಾರತಮ್ಯದ ಕೃತ್ಯಗಳೊಂದಿಗೆ ಪ್ರಾರಂಭಿಸಿ, ನಿಧಾನವಾಗಿ ಅವರ ಪ್ರಯಾಣ ಮತ್ತು ವ್ಯವಹಾರಗಳ ಮೇಲೆ ನಿರ್ಬಂಧಗಳನ್ನು ಹೇರುವವರೆಗೆ ಮುಂದುವರೆದನು, ನಂತರ ಮಾನವಕುಲ ಕಂಡ ಕೇಳರಿಯದ ಅತ್ಯಂತ ಕ್ರೂರ ನರಮೇಧವನ್ನು ಆರಂಭಿಸಿದನು. &#8220;ಬುದ್ಧಿಶಕ್ತಿ ಮತ್ತು ವಿವೇಚನೆ&#8221; ತನ್ನ ಭಕ್ತರ ದಾರಿ ತಪ್ಪಿಸಬಹುದು ಎಂದು ಹಿಟ್ಲರ್ ಅವರಿಗೆ ತಮ್ಮ ಇನ್‌ಸ್ಟಿಂಕ್ಟ್‌ಗಳನ್ನು (ಪ್ರಚೋದನೆಗಳಿಗೆ ಹುಟ್ಟುವ ಪ್ರತಿಕ್ರಿಯೆಗಳನ್ನು) ಮಾತ್ರ ನಂಬುವಂತೆ ಹೇಳಿ ಅವರ ಮನವೊಲಿಸುತ್ತಿದ್ದನು. ತನ್ನ ನಿರ್ಧಾರಗಳನ್ನು ಯಾರೂ ಪ್ರಶ್ನಿಸದ ವಾತಾವರಣವನ್ನು ಅವನು ಸೃಷ್ಟಿಸಿದನು.</p>



<p>ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಬಿಜೆಪಿಗೆ ಏನಾದರೂ ಪ್ರಶ್ನೆಗಳನ್ನು ಕೇಳುತ್ತವೆಯೇ?- ನಿಮ್ಮ ಕಾರ್ಯಸೂಚಿ ಏನು? ನೀವು ಮುಸ್ಲಿಮರ ಉದ್ದಾರ ಮಾಡುತ್ತೀರಾ, ಸಮಾನತೆ ಮತ್ತು ನ್ಯಾಯದ ಸಾಂವಿಧಾನಿಕ ಯೋಜನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಬಯಸುತ್ತೀರಾ, ನೀವು ಒಳ್ಳೆಯ ದೇಶಕ್ಕಾಗಿ ಒಡೆದು ಆಳುವ ರಾಜಕೀಯವನ್ನು ಬಿಡಲು ಬಯಸುತ್ತೀರಾ? ಬಣ್ಣ ಬಣ್ಣದ ಮಾತುಗಳು ಮತ್ತು ಒರಟಾದ ಅವಕಾಶವಾದವು ಮೋಸಗಾರರನ್ನು ಮೂರ್ಖರನ್ನಾಗಿ ಮಾಡಬಹುದು, ಆದರೆ ರಾಷ್ಟ್ರವನ್ನು ದುರ್ಬಲಗೊಳಿಸುತ್ತದೆ. ಬಿಜೆಪಿ ಮೊದಲು ಮುಸ್ಲಿಂ ಯುವಕರನ್ನು ದೇಶದ್ರೋಹಿಗಳೆಂದು ಕರೆಯುವ ಮೂಲಕ ಅವರನ್ನು ಪ್ರತ್ಯೇಕಿಸಲು ಬಯಸುತ್ತದೆಯೇ ಅಥವಾ ಉತ್ತಮ ಭವಿಷ್ಯಕ್ಕಾಗಿ ಅವರಿಗೆ ಶಿಕ್ಷಣ ಮತ್ತು ಕೌಶಲ್ಯವನ್ನು ನೀಡಲು ಬಯಸುತ್ತದೆಯೇ ಎಂಬುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕು. ವಕ್ಫ್ ಚರ್ಚೆಯ ಸಮಯದಲ್ಲಿ ಸಂಸತ್ತಿನಲ್ಲಿ ವ್ಯಕ್ತಪಡಿಸಿದ ಭಾವನೆಗಳು ನಿಜವಾದದ್ದಾಗಿದ್ದರೆ, ಅದು ಮಂತ್ರಿಗಳ ಭಾಷಣಗಳು, ಅವರ ಬೆಂಬಲಿಗರ ನಡವಳಿಕೆ ಮತ್ತು ಅವರ ಹಿಂದೆ ಮುಂದೆ ಓಡುವ ಮಾಧ್ಯಮಗಳಲ್ಲಿ ಪ್ರತಿಫಲಿಸಬೇಕು. ವಂಚನೆಯ ರಾಜಕೀಯವು ಬೆತ್ತಲೆಯಾಗಿದೆ; ಎಲ್ಲರೂ ಎಲ್ಲವನ್ನೂ ನೋಡುತ್ತಿದ್ದಾರೆ. ಕ್ಷಣಿಕ ಸದಾಚಾರದ ಅರಿವಳಿಕೆಯಡಿಯಲ್ಲಿ ಇರಿಸಲ್ಪಟ್ಟ ರಾಷ್ಟ್ರವು ತನ್ನ ಕಣ್ಣ ಮುಂದೆ ಏನಾಗುತ್ತಿದೆ ಎಂಬುದನ್ನು ನೋಡಲು ಸಾಧ್ಯವಿಲ್ಲ ಎಂಬ ಊಹೆಯು ಮೂರ್ಖತನವಾಗಿದೆ. ಜಗತ್ತಿಗೆ ಸತ್ಯ ತಿಳಿದಿದೆ ಮತ್ತು ಅದು ಕುತರ್ಕ ಹಾಗೂ ಮೊಂಡುವಾದಗಳನ್ನು ಮೀರಿ ಸತ್ಯ ಎತ್ತರದಲ್ಲಿ ನಿಂತಿದೆ.&nbsp;</p>



<p>ಲೋಕಸಭೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸದಸ್ಯನನ್ನು ಹೊಂದದ ಪಕ್ಷವೊಂದು ಆ ಸಮುದಾಯದ ಕಲ್ಯಾಣದ ಬಗ್ಗೆ ಉಪದೇಶ ನೀಡುವುದು ವಿಚಿತ್ರವಾಗಿದೆ. ಆದರೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅಥವಾ ಚಿರಾಗ್ ಪಾಸ್ವಾನ್ ಅವರಂತಹ ಮಿತ್ರಪಕ್ಷಗಳಿಂದ ಇನ್ನೂ ವಿರೋಧ ಪಕ್ಷಗಳು ಏನನ್ನಾದರೂ ನಿರೀಕ್ಷೆ ಮಾಡುತ್ತಿರುವುದು ಅಷ್ಟೇ ವಿಚಿತ್ರವಾಗಿವೆ. ಅವರು ಬಿಜೆಪಿಯ ಹಳೆಯ ಮತ್ತು ವಿಶ್ವಾಸಾರ್ಹ ಮಿತ್ರರು. ಅವರಿಗಿರುವ ಸೈದ್ಧಾಂತಿಕ ಹಿಂಜರಿಕೆಗಳು ಅವರನ್ನು ಬಿಜೆಪಿಯಿಂದ ದೂರ ಇರಿಸುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನ.</p>



<p>ನಿತೀಶ್ ಕುಮಾರ್ ಅವರ ರಾಜಕೀಯವು ಬಿಜೆಪಿಯ ಮಡಿಲಲ್ಲಿ ಬೆಳೆದ ಕೂಸು. ಅವರ ಸಾಂದರ್ಭಿಕ ದ್ರೋಹಗಳು ಸೈದ್ಧಾಂತಿಕವಾಗಿರದೆ, ಯುದ್ಧತಂತ್ರದ್ದಾಗಿದ್ದವು. ಅದಕ್ಕೆ ರಾಷ್ಟ್ರೀಯ ಕಾಳಜಿ ಇಲ್ಲ, ವೈಯಕ್ತಿಕ ಮಹತ್ವಾಕಾಂಕ್ಷೆಗಳೇ ಮುಖ್ಯವಾಗಿದ್ದವು. ನಾಯ್ಡು ಕೂಡ ಸೈದ್ಧಾಂತಿಕ ಬದ್ಧತೆಯ ರಾಜಕೀಯವನ್ನು ಮಾಡಿಲ್ಲ. ಅದು ಅದು ಅವರಿಂದ ತುಂಬಾ ದೂರದಲ್ಲಿದೆ. ಅವರ ರಾಜಕೀಯದ ಮೂಲತತ್ವ ಅಧಿಕಾರ ಮತ್ತು ಸ್ವಾರ್ಥ ಅಷ್ಟೇ. ಸಂವಿಧಾನವನ್ನು ಸಮಾಧಿ ಮಾಡಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದರೂ ಈ ಇಬ್ಬರೂ ಬಿಜೆಪಿಯೊಂದಿಗೆ ಇರುತ್ತಾರೆ. ಇವರ ಸ್ವಂತ ರಾಜಕೀಯ ಹಿತಾಸಕ್ತಿಗಳು ಅಪಾಯದಲ್ಲಿದ್ದರೆ ಪ್ರಾಯೋಗಿಕ ರಾಜಕೀಯದ ಒತ್ತಡದಲ್ಲಿ ಅವರು ಬಿಜೆಪಿಯೊಂದಿಗೆ ಇನ್ನೂ ತೀವ್ರವಾದ ಸಂಬಂಧವನ್ನು ಬೆಳೆಸುತ್ತಾರೆ. ಕಾಂಗ್ರೆಸ್ ಅಥವಾ ಇತರ ಜಾತ್ಯತೀತ ಪಕ್ಷಗಳು ಇವರ ಸಹಾಯದಿಂದ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ಬಯಸುವುದು ಜಾತ್ಯತೀತತೆಯ ಅಣಕವಾಗಿದೆ. ಈ ವರ್ತನೆ ಅವರ ದೌರ್ಬಲ್ಯಗಳು ಮತ್ತು ಅಸಹಾಯಕತೆಯನ್ನು ಬಹಿರಂಗಪಡಿಸುತ್ತದೆ.&nbsp;</p>



<p>ಇನ್ನೂ ಕೆಟ್ಟದ್ದೇನೆಂದರೆ, ಕೆಲವು ವಿರೋಧ ಪಕ್ಷದ ನಾಯಕರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮೋದಿಯನ್ನು ಟೀಕಿಸುತ್ತದೆ ಎಂದು ಕನಸು ಕಾಣುತ್ತಿರುವುದು. ಇಲ್ಲ, ಎಂದಿಗೂ ಇದು ಸಾಧ್ಯ ಇಲ್ಲ. ಆರ್‌ಎಸ್‌ಎಸ್ ಮೋದಿಯ ಬಗ್ಗೆ ವಿಮರ್ಶಾತ್ಮಕ ಮೌಲ್ಯಮಾಪನವನ್ನು ರೂಪಿಸಿರಬಹುದು, ಆದರೆ ಸರ್ಕಾರವನ್ನು ಬಲಪಡಿಸಲು ಮತ್ತು ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮಾತ್ರ ಅದು ಬದಲಿ ಬಗ್ಗೆ ಯೋಚಿಸುತ್ತದೆ. ಮೋದಿಯ ಅಡಿಯಲ್ಲಿ ಆರ್‌ಎಸ್‌ಎಸ್ ತನ್ನ ಅತ್ಯುತ್ತಮ ಫಲವನ್ನು ಕಂಡಿದೆ ಮತ್ತು ಅದರ ಪ್ರತಿಯೊಂದು ಹೆಜ್ಜೆಯೂ ತನ್ನ ಪ್ರಾಬಲ್ಯದ ನಿಯಂತ್ರಣವನ್ನು ಶಾಶ್ವತಗೊಳಿಸುವ ಗುರಿಯನ್ನು ಹೊಂದಿರುತ್ತದೆ.</p>



<p>ಆರೆಸ್ಸೆಸ್‌ನಲ್ಲಿನ ಮನಸ್ಸಿನ ಬದಲಾವಣೆ ಅಥವಾ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾದಳ (ಯುನೈಟೆಡ್) (ಜೆಡಿ (ಯು) ನಂತಹ ಪಕ್ಷಗಳಿಂದ ಉಂಟಾಗುವ ಪಲ್ಟಿಗಳು ವಿರೋಧ ಪಕ್ಷದ ಮೇಲೆ ಅವಲಂಬಿತವಾಗಿವೆ, ಇದು ಸ್ವತಃ ಸೈದ್ಧಾಂತಿಕ ಅಶುದ್ಧತೆಯ ಲಕ್ಷಣವಾಗಿದೆ. ವಕ್ಫ್ ಮಸೂದೆಯಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ಪ್ರಕ್ಷುಬ್ಧತೆಯನ್ನು ನಿರೀಕ್ಷಿಸಿದವರು ಈ ಅನುಭವದಿಂದ ಸರಿಯಾದ ಪಾಠಗಳನ್ನು ಕಲಿಯಬೇಕು. ಅವರು ಹಾಗೆ ಮಾಡದಿದ್ದರೆ, ಮುಂದೆ ಅವರು ಅವರು ಸಂವಿಧಾನದ ಸಣ್ಣ ಪ್ರತಿಯನ್ನು ತಮ್ಮ ನಡುಗುವ ಕೈಯಲ್ಲಿ ಹಿಡಿದುಕೊಂಡು ಗೊಂದಲದಲ್ಲಿ ಮುಳುಗುತ್ತಲೇ ಇರುತ್ತಾರೆ.&nbsp;</p>



<p>ಲೇಖನ: <em><strong>ಸಂಜಯ್ ಕೆ. ಝಾ</strong>, ರಾಜಕೀಯ ವಿಶ್ಲೇಷಕರು</em><br>ದಿ ವೈರ್‌ನಲ್ಲಿ ಪ್ರಕಟಿಸಲಾಗಿರುವ <strong><a href="https://thewire.in/politics/the-waqf-bill-deception-whats-the-modi-governments-agenda-behind-concern-for-muslim-welfare">The Waqf Bill Deception: What&#8217;s the Modi Government&#8217;s Agenda Behind Concern for Muslim Welfare?</a></strong> ಲೇಖನದ ಕನ್ನಡಾನುವಾದ</p>
]]></content:encoded>
					
		
		
			</item>
		<item>
		<title>ವಕ್ಫ್ ಮಸೂದೆಗೆ ನಿತೀಶ್ ಕುಮಾರ್ ಬೆಂಬಲ: ಇಫ್ತಾರ್ ಕೂಟ ಬಹಿಷ್ಕರಿಸಿದ ಮುಸ್ಲಿಂ ಸಂಘಟನೆಗಳು</title>
		<link>https://peepalmedia.com/nitish-kumar-supports-waqf-bill-muslim-organizations-boycott-iftar-gathering/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 24 Mar 2025 06:31:38 +0000</pubDate>
				<category><![CDATA[ದೇಶ]]></category>
		<category><![CDATA[bihar cm]]></category>
		<category><![CDATA[Iftar]]></category>
		<category><![CDATA[nitish kumar]]></category>
		<category><![CDATA[Ramzan]]></category>
		<category><![CDATA[Waqf Bill]]></category>
		<guid isPermaLink="false">https://peepalmedia.com/?p=55617</guid>

					<description><![CDATA[2024 ರ ವಕ್ಫ್ ತಿದ್ದುಪಡಿ ಮಸೂದೆಗೆ ಜನತಾದಳ (ಯುನೈಟೆಡ್) ಬೆಂಬಲ ನೀಡಿರುವುದನ್ನು ಉಲ್ಲೇಖಿಸಿ&#160;ಬಿಹಾರದ ಹಲವಾರು ಮುಸ್ಲಿಂ ಸಂಘಟನೆಗಳು ಭಾನುವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಾಟ್ನಾದ ತಮ್ಮ ಮನೆಯಲ್ಲಿ ಆಯೋಜಿಸಿದ್ದ ಇಫ್ತಾರ್ ಔತಣಕೂಟವನ್ನು&#160;ಬಹಿಷ್ಕರಿಸಿವೆ ಎಂದು&#160;ದಿ ಹಿಂದೂ&#160;ವರದಿ ಮಾಡಿದೆ. ಕುಮಾರ್ ಅವರಿಗೆ ಬರೆದ ಪತ್ರದಲ್ಲಿ, ಏಳು ಮುಸ್ಲಿಂ ಸಂಘಟನೆಗಳು ಮುಖ್ಯಮಂತ್ರಿಗಳು ಜಾತ್ಯತೀತ ಸರ್ಕಾರ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ಭರವಸೆಯ ಮೇರೆಗೆ ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳಿವೆ ಎಂದು ದಿ ಹಿಂದೂ ವರದಿ ಮಾಡಿದೆ. &#8220;ಆದರೆ ಭಾರತೀಯ ಜನತಾ ಪಕ್ಷದೊಂದಿಗಿನ ನಿಮ್ಮ [&#8230;]]]></description>
										<content:encoded><![CDATA[
<p>2024 ರ ವಕ್ಫ್ ತಿದ್ದುಪಡಿ ಮಸೂದೆಗೆ ಜನತಾದಳ (ಯುನೈಟೆಡ್) ಬೆಂಬಲ ನೀಡಿರುವುದನ್ನು ಉಲ್ಲೇಖಿಸಿ&nbsp;ಬಿಹಾರದ ಹಲವಾರು ಮುಸ್ಲಿಂ ಸಂಘಟನೆಗಳು ಭಾನುವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಾಟ್ನಾದ ತಮ್ಮ ಮನೆಯಲ್ಲಿ ಆಯೋಜಿಸಿದ್ದ ಇಫ್ತಾರ್ ಔತಣಕೂಟವನ್ನು&nbsp;<a href="https://www.thehindu.com/news/national/bihar/muslim-organisations-boycott-nitish-kumars-iftar-over-his-support-to-waqf-amendment-bill/article69365379.ece" rel="noreferrer noopener" target="_blank">ಬಹಿಷ್ಕರಿಸಿವೆ ಎಂದು&nbsp;</a><em>ದಿ ಹಿಂದೂ</em>&nbsp;ವರದಿ ಮಾಡಿದೆ.</p>



<p>ಕುಮಾರ್ ಅವರಿಗೆ ಬರೆದ ಪತ್ರದಲ್ಲಿ, ಏಳು ಮುಸ್ಲಿಂ ಸಂಘಟನೆಗಳು ಮುಖ್ಯಮಂತ್ರಿಗಳು ಜಾತ್ಯತೀತ ಸರ್ಕಾರ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ಭರವಸೆಯ ಮೇರೆಗೆ ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳಿವೆ ಎಂದು <em>ದಿ ಹಿಂದೂ</em> ವರದಿ ಮಾಡಿದೆ.</p>



<p>&#8220;ಆದರೆ ಭಾರತೀಯ ಜನತಾ ಪಕ್ಷದೊಂದಿಗಿನ ನಿಮ್ಮ ಮೈತ್ರಿ ಮತ್ತು ತರ್ಕಬದ್ಧವಲ್ಲದ ಹಾಗೂ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆಗೆ ನಿಮ್ಮ ಬೆಂಬಲವು ನೀವೇ ನೀಡಿದ ಭರವಸೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ&#8221; ಎಂದು ಪತ್ರವನ್ನು ಉಲ್ಲೇಖಿಸಿ ಪತ್ರಿಕೆ ಹೇಳಿದೆ.</p>



<p>ಕುಮಾರ್ ಅವರ ಜನತಾದಳ (ಯುನೈಟೆಡ್) ಬಿಹಾರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿದ್ದು, ಕೇಂದ್ರದಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿದೆ.</p>



<p>ವಕ್ಫ್ ಮಸೂದೆಯನ್ನು ವಿರೋಧ ಪಕ್ಷದ ಇಂಡಿಯಾ ಬಣದ ನಾಯಕರು ಮತ್ತು ಮುಸ್ಲಿಂ ಗುಂಪುಗಳು ವಿರೋಧಿಸಿವೆ, ಅವರು ಇದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಮತ್ತು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಈ ಕಾಯ್ದೆಯನ್ನು ಕೊನೆಯದಾಗಿ 2013 ರಲ್ಲಿ ತಿದ್ದುಪಡಿ ಮಾಡಲಾಯಿತು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">1 अणे मार्ग स्थित &#39;नेक संवाद&#39; में पवित्र रमजान के अवसर पर रोजेदारों को दावत-ए-इफ्तार पर आमंत्रित किया। दावत-ए-इफ्तार में माननीय राज्यपाल श्री आरिफ मोहम्मद खान सहित बड़ी संख्या में रोजेदारों एवं गणमान्य व्यक्तियों ने शिरकत की। इफ्तार के पहले मित्तन घाट के सज्जादानशीं हजरत सैयद शाह… <a href="https://t.co/1ln3VS01iC">pic.twitter.com/1ln3VS01iC</a></p>&mdash; Nitish Kumar (@NitishKumar) <a href="https://twitter.com/NitishKumar/status/1903830549837279541?ref_src=twsrc%5Etfw">March 23, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಆದಾಗ್ಯೂ, ಜನತಾದಳ (ಸಂಯುಕ್ತ) ಪಕ್ಷವು ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಗಳನ್ನು ಬೆಂಬಲಿಸಿದ್ದು, ಈ ಬದಲಾವಣೆಗಳು ಮುಸ್ಲಿಂ ವಿರೋಧಿಯಲ್ಲ ಎಂದು ಹೇಳಿದೆ ಎಂದು&nbsp;<em>ದಿ ಹಿಂದೂ</em>&nbsp;ವರದಿ ಮಾಡಿದೆ. ಈ ಮಸೂದೆಯು ವಕ್ಫ್ ಮಂಡಳಿಗಳ ಕಾರ್ಯಾಚರಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ ಮತ್ತು ಮಸೀದಿಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನವಲ್ಲ ಎಂದು ಪಕ್ಷ ಹೇಳಿದೆ.</p>



<p>ವಕ್ಫ್ ಎಂದರೆ ಮುಸ್ಲಿಮರು ಧಾರ್ಮಿಕ, ಶೈಕ್ಷಣಿಕ ಅಥವಾ ದತ್ತಿ ಉದ್ದೇಶಕ್ಕಾಗಿ ನೀಡುವ ಆಸ್ತಿ. ಭಾರತದಲ್ಲಿ, ವಕ್ಫ್‌ಗಳನ್ನು ವಕ್ಫ್ ಕಾಯ್ದೆಯಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಪ್ರತಿಯೊಂದು ರಾಜ್ಯವು ಕಾನೂನು ಘಟಕದ ನೇತೃತ್ವದಲ್ಲಿ ವಕ್ಫ್ ಮಂಡಳಿಯನ್ನು ಹೊಂದಿದ್ದು, ಅದು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು, ಹಿಡಿದಿಡಲು ಮತ್ತು ವರ್ಗಾಯಿಸಲು ಅಧಿಕಾರ ಹೊಂದಿದೆ.</p>



<p>&#8220;ನಿಮ್ಮ ಇಫ್ತಾರ್ ಔತಣದ ಉದ್ದೇಶ ಸದ್ಭಾವನೆ ಮತ್ತು ವಿಶ್ವಾಸವನ್ನು ಉತ್ತೇಜಿಸುವುದು, ಆದರೆ ವಿಶ್ವಾಸವು ಔಪಚಾರಿಕ ಹಬ್ಬಗಳಿಂದ ಮಾತ್ರ ಹೆಚ್ಚಾಗುವುದಿಲ್ಲ, ಬದಲಿಗೆ ಕಠಿಣ ನೀತಿ ಕ್ರಮಗಳಿಂದ ನಿರ್ಮಿಸಲ್ಪಡುತ್ತದೆ. ನಿಮ್ಮ ಸರ್ಕಾರವು ಮುಸ್ಲಿಮರ ಕಾನೂನುಬದ್ಧ ಬೇಡಿಕೆಗಳನ್ನು ನಿರ್ಲಕ್ಷಿಸುವುದರಿಂದ ಅಂತಹ ಔಪಚಾರಿಕ ಹಬ್ಬಗಳು ಅರ್ಥಹೀನವಾಗುತ್ತವೆ&#8221; ಎಂದು ಮುಸ್ಲಿಂ ಸಂಘಟನೆಗಳು ಪತ್ರದಲ್ಲಿ ಉಲ್ಲೇಖಿಸಿವೆ. </p>



<p>ಕರಡು ಶಾಸನವು ಜಾರಿಗೆ ಬಂದರೆ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಮಹಿಳಾ ಕೇಂದ್ರಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಶತಮಾನಗಳಷ್ಟು ಹಳೆಯದಾದ ವಕ್ಫ್ ಆಸ್ತಿಗಳನ್ನು ತೆಗೆದುಹಾಕಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.</p>



<p>&#8220;ಇದು ಸಾಚಾರ್ ಸಮಿತಿ ವರದಿಯಲ್ಲಿ ಈಗಾಗಲೇ ಹೇಳಿರುವಂತೆ ಮುಸ್ಲಿಂ ಸಮುದಾಯದಲ್ಲಿ ಬಡತನ ಮತ್ತು ಅಭಾವವನ್ನು ಮತ್ತಷ್ಟು ಹೆಚ್ಚಿಸುತ್ತದೆ&#8221; ಎಂದು ಪತ್ರದಲ್ಲಿ ತಿಳಿಸಲಾಗಿದೆ.</p>



<p>2005 ರಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಪರಿಶೀಲಿಸಲು ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ವರದಿಯನ್ನು ನವೆಂಬರ್ 2006 ರಲ್ಲಿ ಸಲ್ಲಿಸಲಾಯಿತು.</p>



<p>ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಇಮಾರತ್-ಎ-ಶರಿಯಾ, ಜಮಿಯತ್ ಉಲಮಾ-ಇ-ಹಿಂದ್, ಜಮಿಯತ್ ಅಹ್ಲೆ ಹದೀಸ್, ಜಮಾಲ್-ಎ-ಇಸ್ಲಾಮಿ ಹಿಂದ್, ಖಾಂಕಾ ಮುಜಿಬಿಯಾ ಮತ್ತು ಖಾಂಕಾ ರಹಮಾನಿ ತಮ್ಮ ಪ್ರತಿಭಟನೆಗಳನ್ನು ದಾಖಲಿಸಿದ್ದಾರೆ ಎಂದು&nbsp;<em>ದಿ ಹಿಂದೂ</em>&nbsp;ವರದಿ ಮಾಡಿದೆ.</p>



<p>ಮಸೂದೆಗೆ ಕುಮಾರ್ ಅವರ ಬೆಂಬಲವನ್ನು ಪ್ರತಿಭಟಿಸಲು ಅವರು ಆಯೋಜಿಸಿರುವ &#8220;ಸರ್ಕಾರಿ&#8221; ಇಫ್ತಾರ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಮತ್ತೊಂದು ಮುಸ್ಲಿಂ ಸಂಘಟನೆಯಾದ <a href="https://indianexpress.com/article/india/bihar-muslim-body-announces-boycott-of-nitish-kumars-iftaar-over-waqf-bill-congress-comes-to-his-defence-9902278/" target="_blank" rel="noreferrer noopener">ಇಮಾರತ್-ಎ-ಶರಿಯಾ ಕೂಡ ಘೋಷಿಸಿದೆ</a>.</p>



<p>ಆದಾಗ್ಯೂ, ಗುಂಪುಗಳ ಬಹಿಷ್ಕಾರದ ಹೊರತಾಗಿಯೂ ಮುಸ್ಲಿಂ ಸಮುದಾಯದ ಹಲವಾರು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>



<p>ಇಮಾರತ್-ಎ-ಶರಿಯಾದ ಬಹಿಷ್ಕಾರದ ಕರೆಗೆ ಪ್ರತಿಕ್ರಿಯಿಸಿದ ಜನತಾದಳ (ಸಂಯುಕ್ತ) ವಕ್ತಾರ ನೀರಜ್ ಕುಮಾರ್, ಇದು &#8220;ಅನಪೇಕ್ಷಿತ. ಹಲವಾರು ಮುಸ್ಲಿಂ ನಾಯಕರು ನಮ್ಮ ಇಫ್ತಾರ್‌ನಲ್ಲಿ ಭಾಗವಹಿಸಿರುವುದು ನಮಗೆ ಸಂತೋಷ ತಂದಿದೆ&#8221; ಎಂದು ಹೇಳಿದರು ಎಂದು <em>ದಿ ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ ಮಾಡಿದೆ. </p>



<p>ಇಫ್ತಾರ್ ಎಂದರೆ ಮುಸ್ಲಿಮರು ರಂಜಾನ್ ಪವಿತ್ರ ಮಾಸದಲ್ಲಿ ಸೂರ್ಯಾಸ್ತದ ಸಮಯದಲ್ಲಿ ಉಪವಾಸ ಮುರಿಯಲು ಸೇವಿಸುವ ಆಹಾರ.</p>



<p>ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ವಕ್ಫ್ ಮಸೂದೆಯಲ್ಲಿನ 44 ತಿದ್ದುಪಡಿಗಳು ವಕ್ಫ್ ಮಂಡಳಿಗಳ ಅಧಿಕಾರವನ್ನು ಮೊಟಕುಗೊಳಿಸುವ ಮತ್ತು ಅವುಗಳ ಮೇಲೆ ಹೆಚ್ಚಿನ ಸರ್ಕಾರಿ ನಿಯಂತ್ರಣವನ್ನು ಅನುಮತಿಸುವ ಪ್ರಸ್ತಾಪವನ್ನು ಹೊಂದಿವೆ. ಅವು ಮುಸ್ಲಿಮೇತರರು ಮಂಡಳಿಯ ಸದಸ್ಯರಾಗಲು, ಆಸ್ತಿ ದೇಣಿಗೆಗಳನ್ನು ನಿರ್ಬಂಧಿಸಲು ಮತ್ತು ವಕ್ಫ್ ನ್ಯಾಯಮಂಡಳಿಗಳ ಕಾರ್ಯವನ್ನು ಬದಲಾಯಿಸಲು ಸಹ ಅವಕಾಶ ನೀಡುತ್ತವೆ.</p>



<p>ವಿರೋಧ ಪಕ್ಷಗಳ ಆಕ್ಷೇಪಣೆಯ ನಂತರ ಆಗಸ್ಟ್ 8 ರಂದು ಕರಡು ಶಾಸನವನ್ನು ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಯಿತು.</p>



<p>ಜನವರಿ 29 ರಂದು, ಜಂಟಿ ಸಂಸದೀಯ ಸಮಿತಿಯು ಪರಿಷ್ಕೃತ 2024 ರ ವಕ್ಫ್ ತಿದ್ದುಪಡಿ ಮಸೂದೆಯನ್ನು ಮತದಾನದ ನಂತರ ಅಂಗೀಕರಿಸಿತು , ಅದರ ಕರಡು ವರದಿಯ ಪರವಾಗಿ 15 ಮತಗಳು ಮತ್ತು ವಿರುದ್ಧ 11 ಮತಗಳು ಬಿದ್ದವು. ಎರಡು ದಿನಗಳ ಹಿಂದೆ, NDA ಸದಸ್ಯರಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಿದ ನಂತರ ಮಸೂದೆಯನ್ನು ಅಂಗೀಕರಿಸಿತು.</p>



<p>ವಿರೋಧ ಪಕ್ಷದ ಸದಸ್ಯರು ಪ್ರಸ್ತಾಪಿಸಿದ ತಿದ್ದುಪಡಿಗಳನ್ನು ತಿರಸ್ಕರಿಸಲಾಯಿತು.</p>



<p></p>
]]></content:encoded>
					
		
		
			</item>
	</channel>
</rss>
