<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>youtube &#8211; Peepal Media</title>
	<atom:link href="https://peepalmedia.com/tag/youtube/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 06 Mar 2025 08:38:36 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>youtube &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸೌಜನ್ಯ ಪರ ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಗೆ ಪೊಲೀಸ್ ನೋಟಿಸ್</title>
		<link>https://peepalmedia.com/police-notice-issued-to-youtuber-sameer-for-making-pro-civility-video/</link>
		
		<dc:creator><![CDATA[Peepal Media]]></dc:creator>
		<pubDate>Thu, 06 Mar 2025 08:36:23 +0000</pubDate>
				<category><![CDATA[ರಾಜ್ಯ]]></category>
		<category><![CDATA[Dharmastala]]></category>
		<category><![CDATA[karnataka congrees]]></category>
		<category><![CDATA[murder]]></category>
		<category><![CDATA[rape]]></category>
		<category><![CDATA[sowjanya case]]></category>
		<category><![CDATA[youtube]]></category>
		<guid isPermaLink="false">https://peepalmedia.com/?p=54866</guid>

					<description><![CDATA[ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ವಿಡಿಯೋ ಮಾಡಿದ್ದ ಸಮೀರ್ ಎಂ.ಡಿ. ಅವರ ಮನೆಗೆ ಮಾರ್ಚ್ 6ರ, ಬುಧವಾರ ತಡರಾತ್ರಿ ಪೊಲೀಸರು ಪ್ರವೇಶಿಸಿದ್ದಾರೆ. ಬಂಧಿಸಲು ಯತ್ನಿಸಿ, ಆನಂತರ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಬುಧವಾರ ರಾತ್ರಿ 1ಗಂಟೆ ಸುಮಾರಿ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಮಾಹಿತಿ ನೀಡಿರುವ ಸಮೀರ್ ತಮ್ಮ ಮೇಲಾಗುತ್ತಿರುವ ಟ್ರೋಲ್ ಗಳು, ಮತ್ತು ಅವರ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.  ಸಮೀರ್ ತಮ್ಮ ಯೂಟ್ಯೂಬ್ ನಲ್ಲಿ ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ [&#8230;]]]></description>
										<content:encoded><![CDATA[
<p>ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ವಿಡಿಯೋ ಮಾಡಿದ್ದ ಸಮೀರ್ ಎಂ.ಡಿ. ಅವರ ಮನೆಗೆ ಮಾರ್ಚ್ 6ರ, ಬುಧವಾರ ತಡರಾತ್ರಿ ಪೊಲೀಸರು ಪ್ರವೇಶಿಸಿದ್ದಾರೆ. ಬಂಧಿಸಲು ಯತ್ನಿಸಿ, ಆನಂತರ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಬುಧವಾರ ರಾತ್ರಿ 1ಗಂಟೆ ಸುಮಾರಿ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಮಾಹಿತಿ ನೀಡಿರುವ ಸಮೀರ್ ತಮ್ಮ ಮೇಲಾಗುತ್ತಿರುವ ಟ್ರೋಲ್ ಗಳು, ಮತ್ತು ಅವರ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. </p>



<p>ಸಮೀರ್ ತಮ್ಮ ಯೂಟ್ಯೂಬ್ ನಲ್ಲಿ ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ಇತ್ತೀಚೆಗೆ ಮಾಡಿದ್ದ ವೀಡಿಯೊವೊಂದು ಹೆಚ್ಚು ವೈರಲ್ ಆಗಿತ್ತು, ಆ ಮೂಲಕ ರಾಜ್ಯದಾದ್ಯಂತ ಮತ್ತೆ ಸೌಜನ್ಯ ಪ್ರಕರಣ ಮುನ್ನಲೆಗೆ ಬಂದಿದೆ. ಈ ನಡುವೆ ಸಮೀರ್ ಅವರ ಧರ್ಮವನ್ನು ಮುನ್ನಲೆಗೆ ತಂದು ಅವರನ್ನು ಅವಮಾನಿಸುತ್ತಿರುವವರಿಗೆ ಪ್ರತಿಕ್ರಿಯೆ ನೀಡಿರುವ ಸಮೀರ್, ಜನರು ಜಾತಿ ಮತ್ತು ಧರ್ಮವನ್ನು ಈ ವಿಷಯಕ್ಕೆ ಏಕೆ ಎಳೆದು ತರುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ  ನಡುವೆ ಎಡಿಜಿಪಿ ( ಕಾನೂನು ಮತ್ತು ಸುವ್ಯವಸ್ಥೆ) ಅವರು ಹೊರಡಿಸಿದ್ದಾರೆ ಎನ್ನಲಾದ ಆದೇಶದ ಪ್ರತಿಯೊಂದು ಬುಧವಾರ ಸಂಜೆಯಿಂದ ವೈರಲ್ ಆಗಿದೆ. ಈ ಆದೇಶದಲ್ಲಿ “ಸಮೀರ್ ವೀಡಿಯೊದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದ್ದು, ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಸೆಲ್ ಚುರುಕುಗೊಳಿಸಿ ಕ್ರಮ ಕೈಗೊಳ್ಳಬೇಕು” ಎಂಬ ಆದೇಶ ನೀಡಲಾಗಿದ್ದು, ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. </p>



<p>ಎಡಿಜಿಪಿ ಹೊರಡಿಸಿದ್ದಾರೆ ಎನ್ನಲಾದ ಈ ಆದೇಶದಲ್ಲಿ, “ಇತ್ತೀಚಿಗೆ ಸಮೀರ್ ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಹರಿಬಿಟ್ಟದ್ದು, ಘಟಕಾಧಿಕಾರಿಗಳು ಈ ವಿಷಯವನ್ನು ತಮ್ಮ ಘಟಕಗಳಲ್ಲಿರುವ Social Media Monitoring Cell ಮುಖೇನ ಮೇಲಾಧಿಕಾರಿಗಳ ಗಮನಕ್ಕೆ ತರುವಲ್ಲಿ ವಿಫಲರಾಗಿರುತ್ತೀರಿ. ಈ ವಿಷಯ ಕುರಿತಂತೆ ಸಾರ್ವಜನಿಕರಲ್ಲಿ ಪರ/ವಿರೋಧ ಅನಿಸಿಕೆಗಳು ಉದ್ಭವಿಸಿ ಸಾಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿರುತ್ತದೆ. ಆದ್ದರಿಂದ, Social Media Monitoring Cell ಚುರುಕುಗೊಳಿಸುವುದು ಹಾಗೂ ಈ ಕುರಿತಂತೆ ಕೈಗೊಂಡ ಕ್ರಮದ ಬಗ್ಗೆ ಮಾನ್ಯ ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ರವರಿಗೆ ಮಾಹಿತಿ ನೀಡುವುದು” ಎಂದು ಹೇಳಿದೆ.</p>



<p>ಮಾಜಿ ಪೊಲೀಸ್ ಅಧಿಕಾರಿ, ಸೌಜನ್ಯ ಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಗಿರೀಶ್ ಮಟ್ಟಣ್ಣನವರ್ ಅವರ ಜೊತೆಗೆ ಸಮೀರ್ ಅವರು ಬುಧವಾರ ತಡರಾತ್ರಿ ಫೇಸ್‌ಬುಕ್ ಲೈವ್‌ನಲ್ಲಿ ತನಗೆ ವ್ಯಾಪಕ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹೇಳಿದ್ದಾರೆ.</p>



<p>ಲೈವ್‌ನಲ್ಲಿ ಮಾತನಾಡಿದ ಸಮೀರ್, “ಪ್ರಸ್ತುತ ನನ್ನ ಪರಿಸ್ಥತಿ ತುಂಬಾ ಕೆಟ್ಟದಾಗಿದ್ದು, ಈಗಾಗಲೆ ಪೊಲೀಸ್ ನೋಟಿಸ್ ಬಂದಿದೆ. ಸುಮಾರು ರಾತ್ರಿ 10;45ರ ಹೊತ್ತಿಗೆ ಪೊಲೀಸರು ಬಂದು ನೋಟಿಸ್ ಕೊಟ್ಟು ಹೋಗಿದ್ದಾರೆ. ಅದಾಗ್ಯೂ ನನಗೆ ಯಾವುದೇ ಭಯವಿಲ್ಲ. ನಾನು ವಿಡಿಯೊದಲ್ಲಿ ಹೇಳಿರುವ ಎಲ್ಲಾ ವಿಚಾರಗಳಿಗೂ ಸಾಕ್ಷಿಯಿದೆ. ನನಗೆ ಕಾನೂನಿನ ಮೇಲೆ ನಂಬಿಕೆಯಿದ್ದು, ಕೋರ್ಟ್‌ನ ಮುಂದೆ ಮತ್ತಷ್ಟು ವಿಸೃತವಾಗಿ ಮಂಡಿಸುತ್ತೇನೆ. ಈ ಬಗ್ಗೆ ಯಾವುದೇ ತೊಂದರೆಯಿಲ್ಲ” ಎಂದು ಹೇಳಿದ್ದಾರೆ.</p>



<p>ಪ್ರಸ್ತುತ ತನಗೆ ತೊಂದರೆ ಆಗುತ್ತಿರುವುದು, ಮುಸ್ಲಿಮನೊಬ್ಬ ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ್ದೆ ತಪ್ಪು ಹಾಗೂ ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಆದರೆ, ನಾನು ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದೇನೆ, ಅದು ನನ್ನ ಧರ್ಮ, ಅದನ್ನು ನಾನು ಪಾಲಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.</p>



<p>“ಒಂದು ವೇಳೆ ನಾನು ಹಿಂದೂ ವಿರೋಧಿ ಆಗಿದ್ದರೆ, ಒಬ್ಬ ಹಿಂದೂ ಹುಡುಗಿಗೆ ಆಗಿರುವ ಅನ್ಯಾಯದ ಬಗ್ಗೆ ನಾನು ಯಾಕೆ ಧ್ವನಿ ಎತ್ತಬೇಕು? ನ್ಯಾಯದ ಬಗ್ಗೆ ಮಾತನಾಡೋಣ. ಅದುವೇ ಧರ್ಮ” ಎಂದು ಸಮೀರ್ ಅವರು ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾರೆ.</p>
]]></content:encoded>
					
		
		
			</item>
		<item>
		<title>ಯೂಟ್ಯೂಬ್‌ ಭಾರತೀಯರ ಅತ್ಯಂತ ಮೆಚ್ಚಿನ ವೀಡಿಯೊ ಪ್ಲಾಟ್‌ಫಾರ್ಮ್: ವರದಿ</title>
		<link>https://peepalmedia.com/youtube-is-indians-most-popular-video-streaming-platform-report/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 11 Jan 2025 08:33:06 +0000</pubDate>
				<category><![CDATA[ವಿಜ್ಞಾನ-ತಂತ್ರಜ್ಞಾನ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[netflix]]></category>
		<category><![CDATA[youtube]]></category>
		<guid isPermaLink="false">https://peepalmedia.com/?p=52112</guid>

					<description><![CDATA[ಬೆಂಗಳೂರು: 2024 ರಲ್ಲಿ ಭಾರತದಲ್ಲಿ ಯೂಟ್ಯೂಬ್ ವೀಡಿಯೊ ಸ್ಟ್ರೀಮಿಂಗ್ ಸೇವೆಗಳು ಪ್ರಮುಖ ಮುಂಚೂಣಿಯಲ್ಲಿದೆ ಎಂದು ವೀಡಿಯೊ ಉದ್ಯಮದ ಸದ್ಯದ ಪರಿಸ್ಥಿತಿಯ ಬಗೆಗಿನ ವರದಿಯು ಬಹಿರಂಗಪಡಿಸಿದೆ.  ಬಿಸಿನೆಸ್ ಸ್ಟ್ಯಾಂಡರ್ಡ್‌ನ ವರದಿಯ ಪ್ರಕಾರ , ಯೂಟ್ಯೂಬ್ ಅತಿದೊಡ್ಡ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿ ಉಳಿದಿದೆ ಮತ್ತು ಭಾರತದಲ್ಲಿ 14,300 ಕೋಟಿ ಆದಾಯವನ್ನು ಗಳಿಸಿದೆ. ಇದರ ನಂತರ ನಂತರ ಮೆಟಾ, ಜಿಯೋಸ್ಟಾರ್ ಮತ್ತು ನೆಟ್‌ಫ್ಲಿಕ್ಸ್ ಗಳಿವೆ. ಏಷ್ಯಾ ಪೆಸಿಫಿಕ್ ವೀಡಿಯೊ ಮತ್ತು ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯ ಕುರಿತು ಮೀಡಿಯಾ ಪಾರ್ಟ್‌ನರ್ಸ್ ಏಷ್ಯಾದ 2025 ರ ವರದಿಯು ಪ್ರಮುಖ ಬೆಳವಣಿಗೆಗಳು ಮತ್ತು ಉದ್ಯಮ ಕ್ಷೇತ್ರದ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> 2024 ರಲ್ಲಿ ಭಾರತದಲ್ಲಿ ಯೂಟ್ಯೂಬ್ ವೀಡಿಯೊ ಸ್ಟ್ರೀಮಿಂಗ್ ಸೇವೆಗಳು ಪ್ರಮುಖ ಮುಂಚೂಣಿಯಲ್ಲಿದೆ ಎಂದು ವೀಡಿಯೊ ಉದ್ಯಮದ ಸದ್ಯದ ಪರಿಸ್ಥಿತಿಯ ಬಗೆಗಿನ ವರದಿಯು ಬಹಿರಂಗಪಡಿಸಿದೆ. </p>



<p><a href="https://www.business-standard.com/entertainment/youtube-remains-the-crown-jewel-of-india-s-video-streaming-market-125010701088_1.html"></a><em>ಬಿಸಿನೆಸ್ ಸ್ಟ್ಯಾಂಡರ್ಡ್‌ನ</em> ವರದಿಯ <a href="https://www.business-standard.com/entertainment/youtube-remains-the-crown-jewel-of-india-s-video-streaming-market-125010701088_1.html">ಪ್ರಕಾರ</a> , ಯೂಟ್ಯೂಬ್ ಅತಿದೊಡ್ಡ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿ ಉಳಿದಿದೆ ಮತ್ತು ಭಾರತದಲ್ಲಿ 14,300 ಕೋಟಿ ಆದಾಯವನ್ನು ಗಳಿಸಿದೆ. ಇದರ ನಂತರ ನಂತರ ಮೆಟಾ, ಜಿಯೋಸ್ಟಾರ್ ಮತ್ತು ನೆಟ್‌ಫ್ಲಿಕ್ಸ್ ಗಳಿವೆ.</p>



<p>ಏಷ್ಯಾ ಪೆಸಿಫಿಕ್ ವೀಡಿಯೊ ಮತ್ತು ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯ ಕುರಿತು ಮೀಡಿಯಾ <a href="https://media-partners-asia.com/AVB2025/MPA_AVB_2025_Media_Release.pdf">ಪಾರ್ಟ್‌ನರ್ಸ್ ಏಷ್ಯಾದ 2025 ರ ವರದಿಯು</a> ಪ್ರಮುಖ ಬೆಳವಣಿಗೆಗಳು ಮತ್ತು ಉದ್ಯಮ ಕ್ಷೇತ್ರದ ಗಮನಾರ್ಹ ಬದಲಾವಣೆಗಳನ್ನು ಬಹಿರಂಗಪಡಿಸಿದೆ. 2027 ರ ವೇಳೆಗೆ ಸ್ಟ್ರೀಮಿಂಗ್ ವ್ಯವಸ್ಥೆ ಭಾರತ ಮತ್ತು ಚೀನಾಗಳಲ್ಲಿ ಇರುವ ಟಿವಿಯನ್ನು ಹಿಂದಿಕ್ಕಲಿದೆ. ಎಪಿಎಸಿ ವೀಡಿಯೊ ಉದ್ಯಮದ ಆದಾಯದಲ್ಲಿ ಸ್ಟ್ರೀಮಿಂಗ್ ನಿಂದ ಬರುವ ಆದಾಯದ ಪಾಲು 2024 ರಲ್ಲಿ ಇದ್ದ 44% ರಿಂದ 2029 ರ ವೇಳೆಗೆ 54% ಕ್ಕೆ ಏರಲಿದೆ ಎಂದು ಅದು ಹೇಳಿದೆ.</p>



<p><em>ಬಿಸಿನೆಸ್ ಸ್ಟ್ಯಾಂಡರ್ಡ್</em> ವರದಿಯ ಪ್ರಕಾರ , 2024 ರಲ್ಲಿ ಸಬ್‌ಸ್ಕ್ರಿಪ್ಶನ್-ಚಾಲಿತ ವೀಡಿಯೊ ಆನ್ ಡಿಮ್ಯಾಂಡ್ (SVoD) ಮಾರುಕಟ್ಟೆಯು ಸಹ 2024 ರಲ್ಲಿ ಪುಟಿದೆದ್ದಿತು, ಅಂದಾಜು 15 ಮಿಲಿಯನ್ ಚಂದಾದಾರರು ಬಂದಿದ್ದರು. ಭಾರತದಲ್ಲಿ ಒಟ್ಟು ಸ್ಟ್ರೀಮಿಂಗ್ ವೀಡಿಯೊ ಚಂದಾದಾರರ ಸಂಖ್ಯೆಯನ್ನು 125 ಮಿಲಿಯನ್‌ಗೆ ಏರಿದೆ.</p>



<p>ಆನ್‌ಲೈನ್ ವೀಡಿಯೊ ಮಾರುಕಟ್ಟೆಯು ಕಳೆದ ಕೆಲವು ವರ್ಷಗಳಿಂದ ಕ್ಷಿಪ್ರ ಏರಿಕೆಗೆ ಸಾಕ್ಷಿಯಾಗಿದೆ.</p>



<p>ಭಾರತವು ವೀಡಿಯೊ ಸ್ಟ್ರೀಮಿಂಗ್‌ಗೆ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಉದ್ಯಮದ ಆದಾಯದ ಬೆಳವಣಿಗೆಯನ್ನು 26% ರಷ್ಟು ಹೆಚ್ಚಿಸಿದೆ. ಭಾರತದ ನಂತರ ಚೀನಾ (23%), ಜಪಾನ್ (15%), ಆಸ್ಟ್ರೇಲಿಯಾ (11%), ಕೊರಿಯಾ (9%) ಮತ್ತು ಇಂಡೋನೇಷ್ಯಾ (5%) ದೇಶಗಳಿವೆ. ಒಟ್ಟಾರೆಯಾಗಿ, ಈ ಪ್ರಮುಖ ಮಾರುಕಟ್ಟೆಗಳು ಹೆಚ್ಚುತ್ತಿರುವ ವೀಡಿಯೊ ಉದ್ಯಮದ ಆದಾಯದ ಬೆಳವಣಿಗೆಯಲ್ಲಿ ಸರಿಸುಮಾರು 90% ನಷ್ಟು ಭಾಗವನ್ನು ಹೊಂದಿವೆ ಎಂದು MPA ವರದಿ ಬಹಿರಂಗಪಡಿಸಿದೆ.</p>



<p>ಏಷ್ಯಾ ಪೆಸಿಫಿಕ್‌ನಾದ್ಯಂತ ಹೆಚ್ಚುತ್ತಿರುವ ಬೆಳವಣಿಗೆಯಲ್ಲಿ ವಲಯದ 5.5 ಶತಕೋಟಿ ಅಮೇರಿಕನ್‌ ಡಾಲರ್‌ನ ಅರ್ಧದಷ್ಟು ಕೊಡುಗೆ ನೀಡುವ ಪ್ರೀಮಿಯಂ ವಿಡಿಯೋ ವಲಯದಲ್ಲಿ ಭಾರತವು ಬೆಳವಣಿಗೆಯನ್ನು ಮುನ್ನಡೆಸುತ್ತದೆ ಎಂದು ವರದಿ ಮುನ್ಸೂಚನೆ ನೀಡಿದೆ. </p>



<p>ಈ ಮಧ್ಯೆ, ಆನ್‌ಲೈನ್ ವೀಡಿಯೊವು ಭಾರತದಲ್ಲಿ ದೃಢವಾದ 16% CAGR ಬೆಳವಣಿಗೆಯನ್ನು ನೋಡುವ ನಿರೀಕ್ಷೆಯಿದೆ. ಇದು ಸಾಂಪ್ರದಾಯಿಕ ಟಿವಿಯ ವಿನಾಶವು ಹೆಚ್ಚು ದೂರವಿಲ್ಲ ಎಂಬುದನ್ನು ಸಾರುವಂತಿದೆ. </p>
]]></content:encoded>
					
		
		
			</item>
		<item>
		<title>&#8216;ಸೆಲೆಬ್ರಿಟಿ ಜಾಹೀರಾತುಗಳ&#8217; 1,000 ವೀಡಿಯೊಗಳನ್ನು ಅಳಿಸಿ ಹಾಕಿದ ಯುಟ್ಯೂಬ್ !: ಮಾಹಿತಿ ಇಲ್ಲಿದೆ ನೋಡಿ.</title>
		<link>https://peepalmedia.com/youtube-deletes-1000-videos-of-celebrity-ads/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 27 Jan 2024 06:48:47 +0000</pubDate>
				<category><![CDATA[Uncategorized]]></category>
		<category><![CDATA[Deepfake]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[youtube]]></category>
		<guid isPermaLink="false">https://peepalmedia.com/?p=35425</guid>

					<description><![CDATA[ಗೂಗಲ್ ಮಾಲೀಕತ್ವದ ಯೂಟ್ಯೂಬ್ ತನ್ನ ಪ್ಲಾಟ್‌ಫಾರ್ಮ್‌ನಿಂದ ಸೆಲೆಬ್ರಿಟಿಗಳ 1,000 ಕ್ಕೂ ಹೆಚ್ಚು ಡೀಪ್‌ಫೇಕ್ ಸ್ಕ್ಯಾಮ್ ಜಾಹೀರಾತುಗಳ ವೀಡಿಯೊಗಳನ್ನು ಅಳಿಸಿದೆ ಎಂದು ವರದಿಯಾಗಿದೆ. ಅಂತಹ ವೀಡಿಯೊಗಳು ಸುಮಾರು 200 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು, ಬಳಕೆದಾರರು ಮತ್ತು ಸೆಲೆಬ್ರಿಟಿಗಳು ನಿಯಮಿತವಾಗಿ ಅವುಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ಹೇಳಿದೆ. ಸೆಲೆಬ್ರಿಟಿ ಹಗರಣ ಜಾಹೀರಾತುಗಳನ್ನು ತಡೆಗಟ್ಟಲು ಗೂಗಲ್ ಒಡೆತನದ Youtube, AI ಚಾಲಿತ&#160; ಸಂಪನ್ಮೂಲಗಳ ಮೇಲೆ ಬಾರೀ ಹೂಡಿಕೆ ಮಾಡಿದ ನಂತರ ಈಗ ಇಂತಹ [&#8230;]]]></description>
										<content:encoded><![CDATA[
<p>ಗೂಗಲ್ ಮಾಲೀಕತ್ವದ ಯೂಟ್ಯೂಬ್ ತನ್ನ ಪ್ಲಾಟ್‌ಫಾರ್ಮ್‌ನಿಂದ ಸೆಲೆಬ್ರಿಟಿಗಳ 1,000 ಕ್ಕೂ ಹೆಚ್ಚು ಡೀಪ್‌ಫೇಕ್ ಸ್ಕ್ಯಾಮ್ ಜಾಹೀರಾತುಗಳ ವೀಡಿಯೊಗಳನ್ನು ಅಳಿಸಿದೆ ಎಂದು ವರದಿಯಾಗಿದೆ. ಅಂತಹ ವೀಡಿಯೊಗಳು ಸುಮಾರು 200 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು, ಬಳಕೆದಾರರು ಮತ್ತು ಸೆಲೆಬ್ರಿಟಿಗಳು ನಿಯಮಿತವಾಗಿ ಅವುಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ಹೇಳಿದೆ.</p>



<p>ಸೆಲೆಬ್ರಿಟಿ ಹಗರಣ ಜಾಹೀರಾತುಗಳನ್ನು ತಡೆಗಟ್ಟಲು ಗೂಗಲ್ ಒಡೆತನದ Youtube, AI ಚಾಲಿತ&nbsp; ಸಂಪನ್ಮೂಲಗಳ ಮೇಲೆ ಬಾರೀ ಹೂಡಿಕೆ ಮಾಡಿದ ನಂತರ ಈಗ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. 404 ಮೀಡಿಯಾದ ತನಿಖೆಯ ನಂತರ, ಟೇಲರ್ ಸ್ವಿಫ್ಟ್, ಸ್ಟೀವ್ ಹಾರ್ವೆ ಮತ್ತು ಜೋ ರೋಗನ್ ನಂತಹ ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡ ಮೆಡಿಕೇರ್ ಹಗರಣಗಳ ಜಾಹೀರಾತುಗಳನ್ನು ಕಂಡುಹಿಡಿಯಲು AI ಬಳಕೆಯಾಗಿದೆ. ಈ ಮೂಲಕ AI ಅನ್ನು ಬಳಸಿದ ನಂತರ ಡೀಪ್ ಫೇಕ್ ನಕಲಿ ಜಾಹೀರಾತುಗಳ 1,000 ಕ್ಕೂ ಹೆಚ್ಚು ವೀಡಿಯೊಗಳನ್ನು&nbsp; ಯುಟ್ಯೂಬ್&nbsp; ತೆಗೆದುಹಾಕಿದೆ.</p>



<p>ಹೀಗೆ ತಗೆದು ಹಾಕಲಾದ ಬಹುತೇಕ ವಿಡಿಯೋಗಳು ಸುಮಾರು 200 ಮಿಲಿಯನ್ ಮೀರಿ ವೀಕ್ಷಣೆಗಳನ್ನು ಪಡೆದಿವೆ. ಇದರ ನಂತರ ಬಳಕೆದಾರರು ಮತ್ತು ಸೆಲೆಬ್ರಿಟಿಗಳಿಂದ ಡೀಪ್ ಫೇಕ್ ಬಗ್ಗೆ ಆಗಾಗ್ಗೆ ದೂರುಗಳು ಕೇಳಿ ಬಂದಿವೆ. ಈ ಕಾರಣ ಯೂಟ್ಯೂಬ್ ಈ ಸಮಸ್ಯೆಯ ಬಗ್ಗೆ ಸಂಪೂರ್ಣವಾಗಿ ತಿಳಿದು, ಸೆಲೆಬ್ರಿಟಿ ಡೀಪ್ಫೇಕ್ಗಳ ಪ್ರಸರಣವನ್ನು ತಡೆಯಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗೂಗಲ್ ತಿಳಿಸಿದೆ.</p>



<p><strong>YouTube ಇತರ AI- ಸೂಚಿಸಿದ ವಿಷಯವನ್ನು ಏಕೆ ತೆಗೆದುಹಾಕುತ್ತಿದೆ?</strong><br>ಜನವರಿ ತಿಂಗಳ ಆರಂಭದಲ್ಲಿ, ಸತ್ತ ಅಪ್ರಾಪ್ತ ವಯಸ್ಕರು ಹಾಗೂ&nbsp; ದಾಖಲಾಗಿರುವ ಹಿಂಸಾತ್ಮಕ ಘಟನೆಗಳ ಬಲಿಪಶುಗಳನ್ನು, ನೈಜವಾಗಿ ಚಿತ್ರಿಸುವ ಡೀಪ್ ಫೇಕ್ ಮೂಲಕ ಚಿತ್ರಿಸಿದ AI- ಸೂಚಿಸಿದ ವಿಷಯದ ವಿರುದ್ಧ ಕ್ರಮ ಕೈಗೊಳ್ಳಲು YouTube ತನ್ನ ಯೋಜನೆಗಳನ್ನು ಪ್ರಕಟಿಸಿತ್ತು.</p>



<p>ಈ ನಿಟ್ಟಿನಲ್ಲಿ ಯೂಟ್ಯೂಬ್ ಪ್ಲಾಟಫಾರಂ ಹೊಸದಾಗಿ ತನ್ನ, ಕಿರುಕುಳ ಮತ್ತು ಸೈಬರ್‌ಬುಲ್ಲಿಂಗ್ ನೀತಿಗಳನ್ನು ನವೀಕರಿಸಿದೆ. ಕೆಲವು ವಿಷಯಗಳ ರಚನೆಕಾರರು ಸತ್ತ ಅಥವಾ ಕಾಣೆಯಾದ ಮಕ್ಕಳ ಹೋಲಿಕೆಯನ್ನು ಮರುಸೃಷ್ಟಿಸಲು AI ತಂತ್ರಜ್ಞಾನವನ್ನು ಬಳಸುತ್ತಿದ್ದು, ಸಾವಿನ ವಿವರಗಳನ್ನು ವಿವರಿಸಲು ಅವರಿಗೆ ಮಗುವಿನಂತಹ &#8220;ಧ್ವನಿ&#8221; ನೀಡುತ್ತಿದ್ದಾರೆ&nbsp; ಎಂದು ವರದಿಗಳು ಸೂಚಿಸಿವೆ.<br><br>ಹಾಗೆಯೇ ಈ ನೀತಿಯನ್ನು ಉಲ್ಲಂಘಿಸುವ ಯಾವುದೇ ವಿಷಯವಾದರೂ ಅದನ್ನು ತೆಗೆದುಹಾಕಲಾಗುವುದು ಮತ್ತು ವಿಡಿಯೋ ರಚನೆಕಾರರಿಗೆ ಇಮೇಲ್ ಮೂಲಕ ಎಚ್ಚರಿಕೆ ಸೂಚಿಸಲಾಗುವುದು ಎಂದು YouTube ಸ್ಪಷ್ಟಪಡಿಸಿದೆ.</p>



<p><strong>ಟೇಲರ್ ಸ್ವಿಫ್ಟ್ ಅವರ ಅಸ್ಪಷ್ಟ ಲೈಂಗಿಕ ಪೋಸ್ಟ್ ಗಳು</strong><br>ಟೇಲರ್ ಸ್ವಿಫ್ಟ್ ಅನ್ನು ಒಳಗೊಂಡ ಲೈಂಗಿಕವಾಗಿ ಅಸ್ಪಷ್ಟವಾಗಿರುವ ನಕಲಿ ವಿಡಿಯೋಗಳು ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್‌ನಲ್ಲಿ) ವೈರಲ್ ಆಗಿವೆ. ಇವುಗಳಲ್ಲಿ ಸರಿಸುಮಾರು 17 ಗಂಟೆಗಳ ಲೈವ್ ಹೋಗಿರುವ  ಒಂದು ಪೋಸ್ಟ್‌ನ್ನು ಮಾತ್ರ ತೆಗೆದುಹಾಕುವ ಮೊದಲು 45 ಮಿಲಿಯನ್ ವೀಕ್ಷಣೆಗಳು ಮತ್ತು 24,000 ಶೇರ್ ಗಳನ್ನು ಯೂಟ್ಯೂಬ್ ಗಳಿಸಿದೆ.</p>



<p>404 ಮೀಡಿಯಾದ ವರದಿಯು ಈ ಚಿತ್ರಗಳ ಮೂಲವನ್ನು ಟೆಲಿಗ್ರಾಮ್ ಗುಂಪಿನಲ್ಲಿ ಪತ್ತೆ ಹಚ್ಚಬಹುದೆಂದು ಬಹಿರಂಗಪಡಿಸಿವೆ. ಅಲ್ಲಿ ಮಹಿಳೆಯರ ಸ್ಪಷ್ಟವಾದ AI- ರಚಿತ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.<br>ಸೈಬರ್ ಸೆಕ್ಯುರಿಟಿ ಸಂಸ್ಥೆ ಡೀಪ್ಟ್ರೇಸ್ ಪ್ರಕಾರ, ಸುಮಾರು 96% ನಕಲಿ ವಿಡಿಯೋಗಳು ಅಶ್ಲೀಲ ಸ್ವರೂಪವನ್ನು ಹೊಂದಿವೆ ಮತ್ತು ಇವುಗಳಲ್ಲಿ ಹೆಚ್ಚಿನವರು ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿಸಿದೆ.</p>
]]></content:encoded>
					
		
		
			</item>
		<item>
		<title>ಕೋಮು ದ್ವೇಷ ಹರಡದಂತೆ ಮೆಟಾ-ಗೂಗಲ್‌ಗೆ INDIA ಪತ್ರ</title>
		<link>https://peepalmedia.com/india-alliance-writes-to-meta-and-google-demanding-not-to-spread-hate/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 13 Oct 2023 08:09:18 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[facebook]]></category>
		<category><![CDATA[google]]></category>
		<category><![CDATA[india]]></category>
		<category><![CDATA[INDIA Alliance]]></category>
		<category><![CDATA[Instagram]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Mark Zuckerberg]]></category>
		<category><![CDATA[meta]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Sundar Pichai]]></category>
		<category><![CDATA[The Washington Post]]></category>
		<category><![CDATA[writing]]></category>
		<category><![CDATA[youtube]]></category>
		<guid isPermaLink="false">https://peepalmedia.com/?p=29734</guid>

					<description><![CDATA[ಬೆಂಗಳೂರು,ಅಕ್ಟೋಬರ್.‌13: ಇಂಡಿಯಾ ಮೈತ್ರಿಕೂಟವು ಸಾಮಾಜಿಕ ಜಾಲತಾಣಗಳ ಸಂಸ್ಥೆಗಳಾದ ಮೆಟಾ ಮತ್ತು ಆಲ್ಫಾಬೆಟ್‌ಗೆ ಭಾರತದಲ್ಲಿ ಸೌಹಾರ್ದತೆಯನ್ನು ಕದಡುವುದರಲ್ಲಿರುವ ಇವುಗಳ ಪಾತ್ರದ ಬಗ್ಗೆ ಆಕ್ಷೇಪವೆತ್ತಿ ಪತ್ರವನ್ನು ಬರೆದಿದೆ. ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಬುಧವಾರ ಪ್ರತ್ಯೇಕವಾಗಿ ಪತ್ರಗಳನ್ನು ಬರೆಯಲಾಗಿದೆ. Facebook ಮತ್ತು Instagram – Metaದ ಒಡೆತನದಲ್ಲಿದ್ದರೆ, ಆಲ್ಫಾಬೆಟ್ Google ಮತ್ತು YouTube ನ ಮೂಲ ಕಂಪನಿಯಾಗಿದೆ. ಅಕ್ಟೋಬರ್ 8ರಂದು ದಿ ವಾಷಿಂಗ್ಟನ್ ಪೋಸ್ಟ್ ತನ್ನ ಸಂಪಾದಕೀಯಲ್ಲಿ  ಪ್ರಧಾನಿ ನರೇಂದ್ರ ಮೋದಿಯವರ [&#8230;]]]></description>
										<content:encoded><![CDATA[
<p>ಬೆಂಗಳೂರು,ಅಕ್ಟೋಬರ್.‌13: ಇಂಡಿಯಾ ಮೈತ್ರಿಕೂಟವು ಸಾಮಾಜಿಕ ಜಾಲತಾಣಗಳ ಸಂಸ್ಥೆಗಳಾದ ಮೆಟಾ ಮತ್ತು ಆಲ್ಫಾಬೆಟ್‌ಗೆ ಭಾರತದಲ್ಲಿ ಸೌಹಾರ್ದತೆಯನ್ನು ಕದಡುವುದರಲ್ಲಿರುವ ಇವುಗಳ ಪಾತ್ರದ ಬಗ್ಗೆ ಆಕ್ಷೇಪವೆತ್ತಿ ಪತ್ರವನ್ನು ಬರೆದಿದೆ.</p>



<p>ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಬುಧವಾರ ಪ್ರತ್ಯೇಕವಾಗಿ ಪತ್ರಗಳನ್ನು ಬರೆಯಲಾಗಿದೆ. Facebook ಮತ್ತು Instagram – Metaದ ಒಡೆತನದಲ್ಲಿದ್ದರೆ, ಆಲ್ಫಾಬೆಟ್ Google ಮತ್ತು YouTube ನ ಮೂಲ ಕಂಪನಿಯಾಗಿದೆ.</p>



<p>ಅಕ್ಟೋಬರ್ 8ರಂದು <a href="https://www.washingtonpost.com/opinions/2023/10/08/india-nationalism-social-media-toxic-tech/" data-type="link" data-id="https://www.washingtonpost.com/opinions/2023/10/08/india-nationalism-social-media-toxic-tech/">ದಿ ವಾಷಿಂಗ್ಟನ್ ಪೋಸ್ಟ್ ತನ್ನ ಸಂಪಾದಕೀಯ</a>ಲ್ಲಿ  ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳು ದ್ವೇಷ ಹರಡುವ ವೇದಿಕೆಗಳಾಗಿವೆ (conveyor belts for hate) ಎಂದು ಆರೋಪಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಎರಡು ಕಂಪನಿಗಳಿಗೆ ಪತ್ರಗಳನ್ನು ಬರೆದಿದ್ದಾರೆ.</p>


<div class="wp-block-image">
<figure class="aligncenter size-large is-resized"><img fetchpriority="high" decoding="async" width="724" height="1024" src="https://peepalmedia.com/wp-content/uploads/2023/10/F8PnyDNbAAAX-U6-724x1024.jpg" alt="" class="wp-image-29739" style="aspect-ratio:0.7074422583404619;width:357px;height:auto" srcset="https://peepalmedia.com/wp-content/uploads/2023/10/F8PnyDNbAAAX-U6-724x1024.jpg 724w, https://peepalmedia.com/wp-content/uploads/2023/10/F8PnyDNbAAAX-U6-212x300.jpg 212w, https://peepalmedia.com/wp-content/uploads/2023/10/F8PnyDNbAAAX-U6-768x1086.jpg 768w, https://peepalmedia.com/wp-content/uploads/2023/10/F8PnyDNbAAAX-U6-1087x1536.jpg 1087w, https://peepalmedia.com/wp-content/uploads/2023/10/F8PnyDNbAAAX-U6-1449x2048.jpg 1449w, https://peepalmedia.com/wp-content/uploads/2023/10/F8PnyDNbAAAX-U6-150x212.jpg 150w, https://peepalmedia.com/wp-content/uploads/2023/10/F8PnyDNbAAAX-U6-300x424.jpg 300w, https://peepalmedia.com/wp-content/uploads/2023/10/F8PnyDNbAAAX-U6-696x984.jpg 696w, https://peepalmedia.com/wp-content/uploads/2023/10/F8PnyDNbAAAX-U6-1068x1510.jpg 1068w, https://peepalmedia.com/wp-content/uploads/2023/10/F8PnyDNbAAAX-U6-1920x2714.jpg 1920w, https://peepalmedia.com/wp-content/uploads/2023/10/F8PnyDNbAAAX-U6-scaled.jpg 1811w" sizes="(max-width: 724px) 100vw, 724px" /></figure></div>

<div class="wp-block-image">
<figure class="aligncenter size-large is-resized"><img decoding="async" width="724" height="1024" src="https://peepalmedia.com/wp-content/uploads/2023/10/F8PoIIGakAAangG-724x1024.jpg" alt="" class="wp-image-29740" style="aspect-ratio:0.70703125;width:361px;height:auto" srcset="https://peepalmedia.com/wp-content/uploads/2023/10/F8PoIIGakAAangG-724x1024.jpg 724w, https://peepalmedia.com/wp-content/uploads/2023/10/F8PoIIGakAAangG-212x300.jpg 212w, https://peepalmedia.com/wp-content/uploads/2023/10/F8PoIIGakAAangG-768x1086.jpg 768w, https://peepalmedia.com/wp-content/uploads/2023/10/F8PoIIGakAAangG-1087x1536.jpg 1087w, https://peepalmedia.com/wp-content/uploads/2023/10/F8PoIIGakAAangG-1449x2048.jpg 1449w, https://peepalmedia.com/wp-content/uploads/2023/10/F8PoIIGakAAangG-150x212.jpg 150w, https://peepalmedia.com/wp-content/uploads/2023/10/F8PoIIGakAAangG-300x424.jpg 300w, https://peepalmedia.com/wp-content/uploads/2023/10/F8PoIIGakAAangG-696x984.jpg 696w, https://peepalmedia.com/wp-content/uploads/2023/10/F8PoIIGakAAangG-1068x1510.jpg 1068w, https://peepalmedia.com/wp-content/uploads/2023/10/F8PoIIGakAAangG-1920x2714.jpg 1920w, https://peepalmedia.com/wp-content/uploads/2023/10/F8PoIIGakAAangG-scaled.jpg 1811w" sizes="(max-width: 724px) 100vw, 724px" /></figure></div>


<p>ಭಾರತದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸಿ ತಪ್ಪಿತಸ್ಥವಾಗಿದೆ ಎಂದು ಮೆಟಾಗೆ ಬುಧವಾರ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ. &#8220;ಇದಲ್ಲದೆ, ನಿಮ್ಮ ಜಾಲತಾಣಗಳಲ್ಲಿ ಆಡಳಿತ ಪಕ್ಷದ ವಿಚಾರವನ್ನು ಪ್ರಚಾರ ಮಾಡುತ್ತಾ ವಿರೋಧ ಪಕ್ಷದ ನಾಯಕರ ವಿಚಾರಗಳನ್ನು ಅಲ್ಗಾರಿದಮಿಕ್ ಆಗಿ ಮಿತಗೊಳಿಸುವ (algorithmic moderation) ಮತ್ತು ನಿಗ್ರಹಿಸುವ ಬಗ್ಗೆ ನಮ್ಮಲ್ಲಿ ಡೇಟಾವಿದೆ&#8221; ಎಂದು INDIA ಆರೋಪಿಸಿದೆ.</p>



<p>&#8220;ಖಾಸಗಿ ವಿದೇಶಿ ಕಂಪನಿಯೊಂದು ರಾಜಕೀಯ ಸಂರಚನೆಯಲ್ಲಿ ಅಸ್ಪಷ್ಟ ಪಕ್ಷಪಾತ ನಿಲಯವನ್ನು ಹೊಂದಿರುವುದು ಮತ್ತು ಭಾರತದ ಪ್ರಜಾಪ್ರಭುತ್ವದಲ್ಲಿ ಮೂಗುತೂರಿಸುವುದನ್ನು INDIA ಮೈತ್ರಿಕೂಟ ಲಘುವಾಗಿ ಪರಿಗಣಿಸುವುದಿಲ್ಲ,&#8221; ಟೀಕಿಸಿದೆ.</p>



<p>2024 ರ ಲೋಕಸಭಾ ಚುನಾವಣೆಯಲ್ಲಿ ಭಾರತದಲ್ಲಿ ಮೆಟಾದ ಚಟುವಟಿಕೆಗಳನ್ನು ತಟಸ್ಥಗೊಳಿಸಲು ಪತ್ರದಲ್ಲಿ ಜುಕರ್‌ಬರ್ಗ್ ಅವರನ್ನು INDIA ಒತ್ತಾಯಿಸಿದೆ.</p>



<p>ಸೆಪ್ಟೆಂಬರ್ 26 ರಂದು ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ ಲೇಖನ &#8220;<a href="https://www.washingtonpost.com/world/2023/09/26/india-facebook-propaganda-hate-speech/" data-type="link" data-id="https://www.washingtonpost.com/world/2023/09/26/india-facebook-propaganda-hate-speech/">Under India’s pressure, Facebook let propaganda and hate speech thrive</a> &#8221; ವನ್ನು ಸಹ ಪತ್ರದಲ್ಲಿ ಉಲ್ಲೇಖಿಸಲಾಗಿದೆ.</p>



<p>ಸುಮಾರು ಮೂರು ವರ್ಷಗಳ ಹಿಂದೆ, ಕಾಶ್ಮೀರದಲ್ಲಿ ಭದ್ರತಾ ಪಡೆಗಳ ದಮನವನ್ನು ಹೊಗಳಲು ಮತ್ತು ಕಾಶ್ಮೀರಿ ಪತ್ರಕರ್ತರ ಮೇಲೆ ಪ್ರತ್ಯೇಕತಾವಾದ ಮತ್ತು ದೇಶದ್ರೋಹದ ಆರೋಪ ಮಾಡಲು ನೂರಾರು ನಕಲಿ ಖಾತೆಗಳನ್ನು ಬಳಸಿರುವ ಬೃಹತ್ ಸೋಷಿಯಲ್‌ ಮಿಡಿಯಾ ಆಪರೇಷನ್ ಹಿಂದೆ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಇದೆ ಎಂದು ಫೇಸ್‌ಬುಕ್‌ನ ತಂಡವೊಂದು ಆರೋಪಿಸಿರುವ ಬಗ್ಗೆ ಈ  ಲೇಖನದಲ್ಲಿ ವರದಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹೊಸದಿಲ್ಲಿಯಲ್ಲಿರುವ ಫೇಸ್‌ಬುಕ್ ಅಧಿಕಾರಿಗಳು ಭಾರತ ಸರ್ಕಾರದ ವಿರುದ್ಧ ಹೋಗಲು ಅಸಾಧ್ಯವೆಂದು ಈ ಕಾರ್ಯಾಚರಣೆಯಲ್ಲಿ ಬಳಸಿದ ಫೇಸ್‌ಬುಕ್‌ ಪೇಜ್‌ಗಳನ್ನು ಡಿಲಿಟ್‌ ಮಾಡಲು ಹಿಂಜರಿದರು ಎಂದು ಲೇಖನದಲ್ಲಿ ಹೇಳಲಾಗಿದೆ.</p>


<div class="wp-block-image">
<figure class="aligncenter size-full is-resized"><img decoding="async" width="800" height="904" src="https://peepalmedia.com/wp-content/uploads/2023/10/fgh.jpg" alt="" class="wp-image-29741" style="aspect-ratio:0.8849557522123894;width:425px;height:auto" srcset="https://peepalmedia.com/wp-content/uploads/2023/10/fgh.jpg 800w, https://peepalmedia.com/wp-content/uploads/2023/10/fgh-265x300.jpg 265w, https://peepalmedia.com/wp-content/uploads/2023/10/fgh-768x868.jpg 768w, https://peepalmedia.com/wp-content/uploads/2023/10/fgh-150x170.jpg 150w, https://peepalmedia.com/wp-content/uploads/2023/10/fgh-300x339.jpg 300w, https://peepalmedia.com/wp-content/uploads/2023/10/fgh-696x786.jpg 696w" sizes="(max-width: 800px) 100vw, 800px" /></figure></div>


<p>ಪಿಚೈ ಅವರಿಗೆ ಬರೆದ ಪತ್ರದಲ್ಲಿ <a href="https://www.washingtonpost.com/world/2023/09/26/india-monu-manesar-viligante-social-media/" data-type="link" data-id="https://www.washingtonpost.com/world/2023/09/26/india-monu-manesar-viligante-social-media/">He live-streamed his attacks on Indian Muslims. YouTube gave him an award </a>ಎಂಬ ದಿ ವಾಷಿಂಗ್ಟನ್ ಪೋಸ್ಟ್‌ನ ಲೇಖನವನ್ನು ಉಲ್ಲೇಖಿಸಲಾಗಿದೆ.</p>



<p>ಈ ಲೇಖನದಲ್ಲಿ “emerging phenomenon of cow vigilante streamers” ಬಗ್ಗೆ ಹೇಳುತ್ತಾ <a href="https://scroll.in/latest/1055833/monu-manesar-accused-in-murder-of-two-muslim-men-detained" data-type="link" data-id="https://scroll.in/latest/1055833/monu-manesar-accused-in-murder-of-two-muslim-men-detained">ಬಜರಂಗ ದಳದ ಸದಸ್ಯ ಮತ್ತು ಡಬಲ್ ಮರ್ಡರ್ ಆರೋಪಿ ಮೋನು ಮಾನೇಸರ್‌</a> ಬಗ್ಗೆ ಬರೆಯಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ, 10,000 ಸಬ್‌ಸ್ಕ್ರೈಬರ್‌ ಗಳಿಸಿದಕ್ಕಾಗಿ ಮೋನು ಮನೇಸರ್‌ಗೆ ಯೂಟ್ಯೂಬ್‌ &#8216;ಸಿಲ್ವರ್ ಕ್ರಿಯೇಟರ್&#8217; ಪ್ರಶಸ್ತಿ ನೀಡಿತ್ತು. ಈತ ಹಸುವಿನ ಪಕ್ಕದಲ್ಲಿ ಅದನ್ನು ಹಿಡಿದುಕೊಂಡು ಪೋಸ್ ನೀಡಿದ್ದ ಎಂದು ಲೇಖನದಲ್ಲಿ ತಿಳಿಸಲಾಗಿದೆ.</p>



<p>ಈ ಲೇಖನವು &#8220;ಬಿಜೆಪಿ ಸದಸ್ಯರು ಮತ್ತು ಬೆಂಬಲಿಗರು ಯೂಟ್ಯೂಬ್ &nbsp;ಬಳಸಿಕೊಂಡು ಹೇಗೆ ಇಂತಹ ನೀಚ, ಕೋಮು ದ್ವೇಷದ ಪ್ರಚಾರವನ್ನು ಮಾಡುತ್ತಾರೆ&#8221; ಎಂಬುದರ ಚಿತ್ರಣವನ್ನು ನೀಡುತ್ತದೆ ಎಂದು INDIA ಪತ್ರದಲ್ಲಿ ತಿಳಿಸಿದೆ. ಆದರೂ ಮೆಟಾ ಮತ್ತು ಆಲ್ಫಾಬೆಟ್ ಈ ದೇಶದ ಮಹಾತ್ಮ ಬಯಸಿದ ಸಾಮರಸ್ಯದ ಭಾರತವನ್ನು ಕಟ್ಟುತ್ತವೆ ಎಂದು ಪತ್ರದಲ್ಲಿ ವಿಶ್ವಾಸ ವ್ಯಕ್ತಪಡಿಸಲಾಗಿದೆ. &nbsp;</p>
]]></content:encoded>
					
		
		
			</item>
		<item>
		<title>ಎರಡು ವರ್ಷ ಪೂರೈಸಿದ `ಅಂಬೇಡ್ಕರ್ ಓದು’</title>
		<link>https://peepalmedia.com/ambedkar-odu-completes-two-years/</link>
		
		<dc:creator><![CDATA[Arun Jolada Kudligi]]></dc:creator>
		<pubDate>Sat, 15 Oct 2022 12:12:38 +0000</pubDate>
				<category><![CDATA[ವಿಶೇಷ]]></category>
		<category><![CDATA[Ambedkar]]></category>
		<category><![CDATA[Ambedkar odu]]></category>
		<category><![CDATA[Arun Jolada kudligi]]></category>
		<category><![CDATA[Bhimrao Ramji Ambedkar]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Series]]></category>
		<category><![CDATA[state politics]]></category>
		<category><![CDATA[writing]]></category>
		<category><![CDATA[youtube]]></category>
		<guid isPermaLink="false">https://peepalmedia.com/?p=10903</guid>

					<description><![CDATA[ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಂತರ್ಜಾಲದ ಮೂಲಕ ಮನೆ ಮನಗಳಿಗೆ ತಲುಪಿಸುವ `ಅಂಬೇಡ್ಕರ್ ಓದು’ ಯೂಟೂಬ್ ಸರಣಿಯು ಇದೀಗ ಎರಡು ವರ್ಷ ಪೂರೈಸಿದೆ. ಅಂಬೇಡ್ಕರ್ ಓದು ಸರಣಿ 525 ನೇ ಸಂಚಿಕೆ ತಲುಪಿದೆ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನದ ಅಕ್ಟೋಬರ್-14 ರ ವಿಶೇಷ ಸಂಚಿಕೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಓದಿದ್ದಾರೆ. ಸೆಪ್ಟಂಬರ್ 7, 2020 ರಂದು ಲೇಖಕಿ ಹೆಚ್.ಎಸ್.ಅನುಪಮಾ ಮೊದಲ ಸಂಚಿಕೆ ಓದಿದ್ದರು. ಹೀಗೆ ಆರಂಭವಾದ ಅಂಬೇಡ್ಕರ್ ಓದು ಎರಡು ವರ್ಷ ಪೂರೈಸಿ [&#8230;]]]></description>
										<content:encoded><![CDATA[
<p>ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಂತರ್ಜಾಲದ ಮೂಲಕ ಮನೆ ಮನಗಳಿಗೆ ತಲುಪಿಸುವ `ಅಂಬೇಡ್ಕರ್ ಓದು’ ಯೂಟೂಬ್ ಸರಣಿಯು ಇದೀಗ ಎರಡು ವರ್ಷ ಪೂರೈಸಿದೆ. ಅಂಬೇಡ್ಕರ್ ಓದು ಸರಣಿ 525 ನೇ ಸಂಚಿಕೆ ತಲುಪಿದೆ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನದ ಅಕ್ಟೋಬರ್-14 ರ ವಿಶೇಷ ಸಂಚಿಕೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಓದಿದ್ದಾರೆ. ಸೆಪ್ಟಂಬರ್ 7, 2020 ರಂದು ಲೇಖಕಿ ಹೆಚ್.ಎಸ್.ಅನುಪಮಾ ಮೊದಲ ಸಂಚಿಕೆ ಓದಿದ್ದರು. ಹೀಗೆ ಆರಂಭವಾದ ಅಂಬೇಡ್ಕರ್ ಓದು ಎರಡು ವರ್ಷ ಪೂರೈಸಿ ಮುನ್ನಡೆದಿದೆ. ಈತನಕ 351 ಜನರಿಂದ 525 ಸರಣಿಗಳನ್ನು ಓದಿಸಲಾಗಿದೆ, ಈಗ ಅಂಬೇಡ್ಕರ್ ಚಿಂತನೆಗಳನ್ನು ಕನ್ನಡದಲ್ಲಿ 120 ಗಂಟೆಗಳ ಕಾಲ ಕೇಳಬಹುದಾಗಿದೆ. ಈತನಕ 167 ಮಹಿಳೆಯರು 300 ಕ್ಕಿಂತ ಹೆಚ್ಚಿನ ಸರಣಿಗಳನ್ನು ಓದಿರುವುದು ವಿಶೇಷವಾಗಿದೆ.</p>



<p>&nbsp;500 ನೇ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಓದಿದ್ದರು. ಈ ಹಿಂದೆ ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ನಟರಾದ ರಮೇಶ್ ಅರವಿಂದ, ಕಿಶೋರ್, ರಂಗಾಯಣ ರಘು, ಅಚ್ಯುತ ಕುಮಾರ್, ಸಿನೆಮಾ ನಿರ್ದೇಶಕರಾದ ಬಿ.ಸುರೇಶ್, ಬಿ.ಎಂ ಗಿರಿರಾಜ, ರಾಜಕಾರಣಿ ಶ್ರೀಮತಿ ಮೋಟಮ್ಮ, ಬಿಜಾಪುರದ ಮಹಿಳಾ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ.ಸಭಿಹಾ ಲೇಖಕರಾದ ದೇವನೂರು ಮಹಾದೇವ, ಅಮರೇಶ ನುಗಡೋಣಿ, ನಟರಾಜ ಹುಳಿಯಾರ, ಹೆಚ್.ಎಸ್.ರಾಘವೇಂದ್ರರಾವ್, ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಪತ್ರಕರ್ತರಾದ ದಿನೇಶ ಅಮಿನಮಟ್ಟು, ರವೀಂದ್ರ ಭಟ್, ವೈ.ಗ ಜಗದೀಶ, ರಶ್ಮಿ ಎಸ್. ಹೀಗೆ ಸಾಹಿತಿಗಳು, ಪತ್ರಕರ್ತರು, ನಟ ನಟಿಯರು, ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು, ರೈತರು ಎಲ್ಲಾ ಹಿನ್ನೆಲೆಯವರೂ ಓದಿನ ಭಾಗವಾಗಿದ್ದಾರೆ.</p>



<p>2019 ರ ಏಪ್ರಿಲ್ 14 ರಂದು ನನ್ನ ಪೇಸ್ ಬುಕ್ ಪೇಜಲ್ಲಿ ಅಂಬೇಡ್ಕರ್ ಓದನ್ನು ಲೈವ್ ಮಾಡಿದ್ದೆ. ಈ ಓದಿಗೆ ಸಿಕ್ಕ ಪ್ರತಿಕ್ರಿಯೆ ಓದನ್ನು ನಿರಂತರವಾಗಿ ನಡೆಸುವ ಕನಸೊಂದನ್ನು ಹುಟ್ಟಿಸಿತ್ತು. ಖಾಸಗಿ ವಾಹಿನಿಯಲ್ಲಿ ಮಹಾನಾಯಕ ದಾರವಾಹಿ ಶುರುವಾದ ನಂತರ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಹುಡುಕಾಟ ಹೆಚ್ಚಾಯಿತು. ಆದರೆ ಆಗ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಅರಿವು ಹೆಚ್ಚಾಗಿ ಇರಲಿಲ್ಲ, ಆಗ ಅಂತರ್ಜಾಲದಲ್ಲಿ ಅಂಬೇಡ್ಕರ್ ಚಿಂತನೆಗಳು ಸಿಗುವಂತಾಗಬೇಕು ಎಂದು ಅಂಬೇಡ್ಕರ್ ಓದು ಪ್ರಾರಂಭಿಸಲಾಯಿತು. ನಾನು ನೆಪಮಾತ್ರನಾಗಿದ್ದು `ಇದು ಸಹಭಾಗಿತ್ವದ ಯಶಸ್ಸು, `ಎಲ್ಲರ ಅಂಬೇಡ್ಕರ್’ ಎನ್ನುವ ತತ್ವದಡಿ ಎಲ್ಲರೂ ಅಂಬೇಡ್ಕರ್ ಅವರನ್ನು ಓದುವಂತಾಗಬೇಕು, ಎಲ್ಲರೂ ಕೇಳುವಂತಾಗಬೇಕು. ಅಂಬೇಡ್ಕರ್ ಚಿಂತನೆ ಕನ್ನಡದಲ್ಲಿ ಕೇಳಲು ಅಂತರ್ಜಾಲದಲ್ಲಿ ಸಿಗುವಂತಾಗಬೇಕು ಎನ್ನುವ ಕನಸು ಈ ಸರಣಿಯ ಹಿಂದಿದೆ.</p>



<p></p>



<figure class="wp-block-image size-full"><img loading="lazy" decoding="async" width="696" height="409" src="https://peepalmedia.com/wp-content/uploads/2022/10/ambedkar-odu-sarani-peepal-media.jpg" alt="" class="wp-image-10904" srcset="https://peepalmedia.com/wp-content/uploads/2022/10/ambedkar-odu-sarani-peepal-media.jpg 696w, https://peepalmedia.com/wp-content/uploads/2022/10/ambedkar-odu-sarani-peepal-media-300x176.jpg 300w, https://peepalmedia.com/wp-content/uploads/2022/10/ambedkar-odu-sarani-peepal-media-150x88.jpg 150w" sizes="auto, (max-width: 696px) 100vw, 696px" /><figcaption>ಡಾ. ಬಿ.ಆರ್‌ ಅಂಬೇಡ್ಕರ್‌ ಮತ್ತು ಅರುಣ್ ಜೋಳದಕೂಡ್ಲಿಗಿ</figcaption></figure>



<p> ಈ ತರಹದ ಅಂಬೇಡ್ಕರ್ ಆಡಿಯೋ ಆರ್ಖೈವ್ ರೂಪುಗೊಂಡಿರುವುದು ಭಾರತದ ದೇಸಿ ಭಾಷೆಗಳಲ್ಲಿ ಇದು ಮೊದಲ ಪ್ರಯತ್ನ. ಇದು ಇತರೆ ಭಾಷಿಕರಿಗೆ ಮಾದರಿಯಾಗಬೇಕು ಎನ್ನುವುದು ನನ್ನ ಕನಸಾಗಿದೆ. ಈ ತನಕ ಯೂಟೂಬ್ ಚಾನಲ್ಲಿನಲ್ಲಿ ಒಂಬತ್ತು ಲಕ್ಷದಷ್ಟು ಕೇಳುವಿಕೆ ಸಾಧ್ಯವಾಗಿದೆ. ಅನೇಕರು ಈ ಓದಿನಿಂದ ಪ್ರೇರಿತರಾಗಿದ್ದಾರೆ. ಇದೀಗ ಅನೇಕರು ಅಂಬೇಡ್ಕರ್ ಓದಿನ ಅವಕಾಶಕ್ಕಾಗಿ ಕೇಳುತ್ತಿದ್ದಾರೆ. ಇದು ಈ ಸರಣಿಯ ರೂಪಾಂತರವಾಗಿದೆ. ಅಂಬೇಡ್ಕರ್ ಅವರ ಸಮಕಾಲೀನವೆನಿಸುವ ಎಲ್ಲಾ ಬರಹಗಳನ್ನು ಓದಿಸುವ ಗುರಿ ಈ ಸರಣಿಗಿದೆ. ಹಾಗಾಗಿ ಅಂಬೇಡ್ಕರ್ ಓದು ಇನ್ನೂ ಮುಂದುವರಿಯಲಿದೆ. ಅಂಬೇಡ್ಕರ್ ಓದಿನ ಸಹಭಾಗಿಗಳಾದ ಎಲ್ಲರಿಗೂ ಮತ್ತೊಮ್ಮೆ ಜೈಭೀಮ್ ನಮನಗಳನ್ನು ಸಲ್ಲಿಸುವೆ.</p>
]]></content:encoded>
					
		
		
			</item>
	</channel>
</rss>
