<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>yuvanota &#8211; Peepal Media</title>
	<atom:link href="https://peepalmedia.com/tag/yuvanota/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 23 Dec 2022 12:13:34 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>yuvanota &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>&#8216;ಡ್ರೈವ್ ಮೈ ಕಾರ್&#8217; &#8211; ಒಂದು&#160; ಸಿನಿಮಾ ಪಯಣ</title>
		<link>https://peepalmedia.com/drive-my-car-guru-sulya/</link>
		
		<dc:creator><![CDATA[Guru Sulya]]></dc:creator>
		<pubDate>Fri, 23 Dec 2022 12:13:34 +0000</pubDate>
				<category><![CDATA[ಯುವ ನೋಟ]]></category>
		<category><![CDATA[guru sulya]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<category><![CDATA[yuvanota]]></category>
		<guid isPermaLink="false">https://peepalmedia.com/?p=18672</guid>

					<description><![CDATA[ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಸೆಣೆಸಿರುವ ಪ್ರಮುಖ ಚಿತ್ರಗಳಲ್ಲಿ &#8216;ಡ್ರೈವ್ ಮೈ ಕಾರ್&#8217;  ಕೂಡಾ ಒಂದು. ಹತ್ತಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮತ್ತು ಪ್ರಶಂಸೆಯನ್ನು ಪಡೆದಿರುವ ಈ ಚಿತ್ರದ ಕುರಿತು ಯುವನೋಟದಲ್ಲಿ ಬರೆದಿದ್ದಾರೆ ಗುರು ಸುಳ್ಯ ಜಪಾನಿನೆಡೆಗಿನ ಇಷ್ಟ ಜಪಾನ್ ದೇಶದೆಡೆಗೊಂದು ಪ್ರತ್ಯೇಕವಾದ ಇಷ್ಟವಿದೆ ನನಗೆ. ಕಲೆಗೆ ಸಂಬಂಧಿತ ವಿಷಯಗಳಲ್ಲಿ ಜಪಾನಿನ ಹೆಸರು ಕೇಳಿದರೆ ನನ್ನ ಕಿವಿ ನಿಮಿರುತ್ತದೆ. ಜಪಾನೀ ನಿರ್ದೇಶಕ &#8216;ಕೋರಿ ಇಡಾ&#8217; ನ ಸಿನಿಮಾಗಳು ನನಗೆ ತುಂಬಾ ಇಷ್ಟ. ಆತನ [&#8230;]]]></description>
										<content:encoded><![CDATA[
<p class="has-text-align-center has-very-light-gray-to-cyan-bluish-gray-gradient-background has-background"><strong>ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಸೆಣೆಸಿರುವ ಪ್ರಮುಖ ಚಿತ್ರಗಳಲ್ಲಿ &#8216;ಡ್ರೈವ್ ಮೈ ಕಾರ್&#8217;</strong><strong>  ಕೂಡಾ ಒಂದು. ಹತ್ತಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮತ್ತು ಪ್ರಶಂಸೆಯನ್ನು ಪಡೆದಿರುವ ಈ ಚಿತ್ರದ ಕುರಿತು ಯುವನೋಟದಲ್ಲಿ ಬರೆದಿದ್ದಾರೆ ಗುರು ಸುಳ್ಯ</strong></p>



<p><strong>ಜಪಾನಿನೆಡೆಗಿನ ಇಷ್ಟ</strong></p>



<p></p>



<p>ಜಪಾನ್ ದೇಶದೆಡೆಗೊಂದು ಪ್ರತ್ಯೇಕವಾದ ಇಷ್ಟವಿದೆ ನನಗೆ. ಕಲೆಗೆ ಸಂಬಂಧಿತ ವಿಷಯಗಳಲ್ಲಿ ಜಪಾನಿನ ಹೆಸರು ಕೇಳಿದರೆ ನನ್ನ ಕಿವಿ ನಿಮಿರುತ್ತದೆ. ಜಪಾನೀ ನಿರ್ದೇಶಕ &#8216;ಕೋರಿ ಇಡಾ&#8217; ನ ಸಿನಿಮಾಗಳು ನನಗೆ ತುಂಬಾ ಇಷ್ಟ. ಆತನ &#8216;ಮಾಬೊರೋಸಿ&#8217; ಚಿತ್ರ ನನ್ನ ಮನಸ್ಸಿಗೆ ಇವತ್ತಿಗು ಬಣ್ಣ ಹಚ್ಚುತ್ತಿದೆ. ಇತ್ತೀಚೆಗೆ ಪ್ರಕಟವಾದ &#8216;ಮಂಜುನಾಥ ಚಾರ್ವಾಕ&#8217; ಅನುವಾದಿಸಿರುವ ಜಪಾನಿ ಬರಹಗಾರ &#8216;ಮುರಕಾಮಿ&#8217;ಯ &#8216;ಕಿನೊ ಮತ್ತು ಇತರ ಕಥೆಗಳು&#8217; ಕೂಡ ನನ್ನನ್ನು ಬಹುವಾಗಿ ಆವರಿಸಿದ್ದವು. ಕೆಲವೊಂದು ಸಿನಿಮಾಗಳು, ಆ ಸಿನಿಮಾದ ಬಗ್ಗೆ ಒಂದಕ್ಷರ ಬರೆಯಲಾಗದಷ್ಟು ತಮ್ಮೊಳಗೆ ಎಳೆದುಕೊಂಡು ಬಿಡುತ್ತವೆ. ಆಧುನಿಕ ಯುಗದ ಜನಪ್ರಿಯ ಕಲೆಯಾದ&nbsp; ಸಿನಿಮಾ ನನ್ನ ಅಂತರಾಳವನ್ನು ಕಲಕುವ ಪರಿಗೆ ಬೆರಗು ಗೊಳ್ಳುತ್ತೇನೆ. ಕಳೆದ ವಾರ ಮುರಕಮಿ ಕಥೆಗಳನ್ನು ಆದರಿಸಿದ ಸಿನಿಮಾವೊಂದನ್ನು ನೋಡಿದೆ. ಅದರ ಬಗ್ಗೆ ಸುಮ್ಮನೆ ಮಾಡಿಟ್ಟುಕೊಂಡ ಟಿಪ್ಪಣಿಗಳು ವಿಸ್ತೃತಗೊಂಡು ಈ ಬರಹವಾಗಿದೆ.</p>



<p><br><strong>ಮಾತಿನ ಪರಿಮಿತಿಗಳ ಆಚೆಗೆ</strong></p>



<p></p>



<p>ನನ್ನ ಪಾಲಿಗೆ ಈ ಸಿನಿಮಾ ತೆರೆದುಕೊಳ್ಳುವುದೆ ಡೈನಿಂಗ್ ಟೇಬಲಿನಲ್ಲಿ. ಊಟದ ನಡುವೆ ಸನ್ನೆಗಳಲ್ಲಿ ಹರಡಿಕೊಳ್ಳುವ ಮೂಕಿ ಹುಡುಗಿಯ ಜೊತೆಗಿನ ಸಂಭಾಷಣೆಯಲ್ಲಿ. ಆ ದೃಶ್ಯ ಬರುವ ಹೊತ್ತಿಗಾಗಲೇ ಅರ್ಧ ಸಿನಿಮಾ ಮುಗಿದು ಹೋಗಿರುತ್ತದೆ. ಆದರೆ, ಅಲ್ಲಿಂದ ಹಿಂದಕ್ಕೂ-ಮುಂದಕ್ಕೂ ಚಲಿಸುತ್ತಾ, ನನ್ನನ್ನು ಒಂದು ಟೇಪ್ ರೆಕಾರ್ಡರಿನಂತಾಗಿಸಿತು ಆ ಸಿನಿಮಾ. ಆಡಿದ್ದು, ಆಡದ್ದು ಎಲ್ಲವನ್ನು ರೆಕಾರ್ಡ್ ಮಾಡಿಕೊಳ್ಳುವ ಅಸ್ತವ್ಯಸ್ತ ಬದುಕಿನಲ್ಲಿ ಕ್ಷಣಗಳಿಗೆ ಅಂಟಿಕೊಂಡು ಚದುರುವ ಚಿತ್ರಗಳು ನಾವು. ಈ ಚಲನಚಿತ್ರವು ಅಂತದ್ದೇ ಏನೋ ಒಂದು ಹೇಳಲಾಗದ ಸಂಕಟಗಳ ಸುರುಳಿಯನ್ನು ಹರವಿಟ್ಟು ನೋಡು ಎನ್ನುತ್ತದೆ. ಸಿನಿಮಾದಲ್ಲಿ, ಅಲ್ಲಲ್ಲಿ ಕಾರಿನ ಸ್ಟೀರಿಯೋದಲ್ಲಿ &#8216;ಕಫುಕು&#8217; ರೆಕಾರ್ಡ್ ಮಾಡಿಟ್ಟುಕೊಂಡ ಪಾತ್ರಗಳ ಮಾತುಗಳು ಪ್ಲೇ ಆಗುತ್ತಿರುತ್ತವೆ. ಆ ಮಾತುಗಳು ರಿಯಾಲಿಟಿಯನ್ನು ಪ್ರತಿಬಿಂಬಿಸುತ್ತವೆ. ಕಫುಕು ಒಬ್ಬ ನಾಟಕಕಾರ. ಜಪಾನಿನ &#8216;ಹಿರೋಶಿಮ&#8217; ನಗರದಲ್ಲಿ ನಡೆಯುವ ಆತನ ಹೊಸ ನಾಟಕ, ನಾಟಕಕಾರ &#8216;ಚೆಕಾವ್&#8217;ನ &#8216;ಅಂಕಲ್ ವ್ಯಾನ್ಯಾ&#8217;. ಕಫುಕುವಿನ ಬದುಕಿನ ಸಂದಿಗ್ಧತೆಗಳು ಈ ನಾಟಕದೊಳಗೂ ಹಾಸು ಹೊಕ್ಕಾಗಿರುತ್ತದೆ. ಈ ನಾಟಕಕ್ಕಾಗಿ ವಿವಿಧ ಭಾಷೆಗಳ ಕಲಾವಿದರನ್ನು ಆಯ್ಕೆ ಮಾಡಲು ಹುಡುಕಾಟ ನಡೆಯುತ್ತದೆ. ಜಪಾನ್, ಕೊರಿಯ, ಚೈನೀಸ್, ಥಾಯ್ ಇತ್ಯಾದಿ ಭಾಷೆಗಳನ್ನು ಒಟ್ಟಿಗೆ ಒಂದೇ ರಂಗದಲ್ಲಿ ತರುವ ಉದ್ದೇಶವು ಇದಕ್ಕಿರುತ್ತದೆ. ಈ ಹುಡುಕಾಟದ ನಡುವೆ ಸಿಗುವವಳೇ ಈ ಸದ್ದಿಲ್ಲದೆ ಮಾತನಾಡುವ ಹುಡುಗಿ. ಭಾಷೆಯ ಪರಿಮಿತಿಯನ್ನು ಮೀರಲು ಯತ್ನಿಸುವ ಮುರಕಾಮಿ ಇಲ್ಲಿ ಕಾಣಿಸಿಕೊಳ್ಳುತ್ತಾನೆ. ಮಾತು ಬಾರದ ಹುಡುಗಿಯ ಮಾತುಗಳು, ಸಿನಿಮಾದ ಡೈಲಾಗುಗಳಾಗಿ ಮೌನದ ರೂಪದಲ್ಲಿ ಚಿತ್ರದುದ್ದಕ್ಕೂ ಹರಿಯುತ್ತಲೇ, ಅಂತ್ಯ ಹಾಡುತ್ತದೆ.</p>



<p><br><br><strong>ಕಾರಿಗೂ ಜೀವವಿದೆ</strong></p>



<p></p>



<p>ಚಿತ್ರದ ಹೆಸರು &#8216;ಡ್ರೈವ್ ಮೈ ಕಾರ್&#8217;. &#8216;ನಾರ್ವೇಯನ್ ವುಡ್&#8217; ಹಾಡಿನಂತೆಯೇ ಮುರಕಾಮಿಯ ಇಷ್ಟದ &#8216;ಬೀಟಲ್ಸ್ ಮ್ಯೂಸಿಕ್ ಬ್ಯಾಂಡಿನ&#8217; ಹಾಡೊಂದರ ಸಾಲಿದು. ಕಥೆಯಲ್ಲಿ ಹಳದಿ ಬಣ್ಣದಲ್ಲಿರುವ ಕಾರನ್ನು ನಿರ್ದೇಶಕ ಎದ್ದು ಕಾಣುವ ಕೆಂಪು ಬಣ್ಣವಾಗಿಸಿದ್ದಾನೆ. ಸಿನಿಮಾದ ಮುಖ್ಯ ಪಾತ್ರವಾಗಿರುವ &#8216;ಕಫುಕು&#8217;ವಿನ ಕಾರಿನ ಡ್ರೈವರ್ ಆಗಿ ಬರುವವಳು &#8216;ಮಿಸಾಕಿ&#8217;. ಕಾರಿಗೂ ಜೀವವಿದೆ ಎಂಬಂತೆ ಚಲಾಯಿಸುವ ಮಿಸಾಕಿ, ಅಪಘಾತ ಮತ್ತು ಚೇತರಿಕೆಗಳರೆಡಕ್ಕೂ ಸಾಕ್ಷಿಯಂತಿರುವವಳು. ಕಾರಿನ ಚಾಲಕಿಯಾದ ಈ ಹುಡುಗಿ ನಿಂತು ಹೋದಂತಿದ್ದ ಆತನ ಚಲನೆಯನ್ನು ಉದ್ದೀಪಿಸುತ್ತಾಳೆ. ಯಾರಿಗೂ ಬೇಡವಾದ ಕಸದ ರಾಶಿಯನ್ನು ಸಂಸ್ಕರಿಸುವ ಜಾಗ ಆಕೆಯ ಇಷ್ಟದ ಜಾಗ. ಇದು ಹಿರೋಶಿಮದಲ್ಲಿ ನಡೆದ ಮಾರಣಹೋಮದ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕದ ಸ್ವಲ್ಪ ಹತ್ತಿರದಲ್ಲಿರುವುದು ಸಿನಿಮಾದ ಮಟ್ಟಿಗೆ ಕಾಕತಾಳೀಯವೇನಲ್ಲ. ಹಿರೋಶಿಮ ನಗರಕ್ಕೆ ಅಂಟಿಕೊಂಡಿರುವ ನೋವಿನ ಇತಿಹಾಸದ ಮೇಲೆ ನೇರವಾಗಿ ಕ್ಯಾಮರ ಚಲಿಸುವುದೇ ಇಲ್ಲ. ಹಿರೋಶಿಮದ ರಸ್ತೆಗಳಲ್ಲಿ ಓಡಾಡುವ ಕಾರನ್ನು ತೋರಿಸುವ ದೃಶ್ಯಗಳಲ್ಲಷ್ಟೇ ಆ ನಗರ ಓಡಾಡುವುದು.</p>



<p><br>ಕಫುಕು ಮತ್ತು ಮಿಸಾಕಿ, ತಮ್ಮ ಬದುಕಿನ ಕಥೆಗಳನ್ನು ತಮ್ಮದೇ ರೀತಿಯಲ್ಲಿ ಹೇಳಿಕೊಳ್ಳುತ್ತಾರೆ. ಗೂಗಲ್ ಮ್ಯಾಪ್ ತೆರೆದಿಟ್ಟು ತಮ್ಮ</p>



<figure class="wp-block-gallery has-nested-images columns-default is-cropped wp-block-gallery-1 is-layout-flex wp-block-gallery-is-layout-flex">
<figure class="wp-block-image size-large"><img fetchpriority="high" decoding="async" width="1024" height="485" data-id="18675" src="https://peepalmedia.com/wp-content/uploads/2022/12/IMG-20221223-WA0008-1024x485.jpg" alt="" class="wp-image-18675" srcset="https://peepalmedia.com/wp-content/uploads/2022/12/IMG-20221223-WA0008-1024x485.jpg 1024w, https://peepalmedia.com/wp-content/uploads/2022/12/IMG-20221223-WA0008-300x142.jpg 300w, https://peepalmedia.com/wp-content/uploads/2022/12/IMG-20221223-WA0008-768x364.jpg 768w, https://peepalmedia.com/wp-content/uploads/2022/12/IMG-20221223-WA0008-150x71.jpg 150w, https://peepalmedia.com/wp-content/uploads/2022/12/IMG-20221223-WA0008-696x330.jpg 696w, https://peepalmedia.com/wp-content/uploads/2022/12/IMG-20221223-WA0008-1068x506.jpg 1068w, https://peepalmedia.com/wp-content/uploads/2022/12/IMG-20221223-WA0008.jpg 1140w" sizes="(max-width: 1024px) 100vw, 1024px" /></figure>
</figure>



<p>ಗಮ್ಯವನ್ನು ಹುಡುಕಿ ಕೊಳ್ಳುವಂತಿರುತ್ತದೆ ಅವರಿಬ್ಬರ ಪಯಣ. ಕಫುಕು &#8211; ನೀನು ಬಿಟ್ಟು ಬಂದ ಊರಿಗೆ, ನಿನ್ನಮ್ಮ ಸತ್ತ ಜಾಗಕ್ಕೆ ನನ್ನನ್ನು ಕರೆದೊಯ್ಯಿ ಅನ್ನುತ್ತಾನೆ. ಹಿಮಪಾತವಾದ, ಮಂಜುತುಂಬಿದ ಜಾಗಕ್ಕೆ ಹೋಗುತ್ತಾರೆ ಇಬ್ಬರೂ. ದೇಹ ತಣ್ಣಗಾಗುವ ಮಂಜಿನ ಮಧ್ಯೆ ಅವಳು ಸೇದಿ ಮುಗಿಸಿದ ಸಿಗರೇಟಿನ ತುಂಡನ್ನು ನೆಡುತ್ತಾಳೆ. ಮರಣಕ್ಕೆ ಸಾಂತ್ವನಿಸುವಂತೆ, ಉರಿದು ಹೋಗುವ ಸಿಗರೇಟಿಗೆ ಲಾಲಿ ಹಾಡುತ್ತದೆ ಹಿಮ. ಇಬ್ಬರೂ ಸೇರಿಕೊಂಡು ಸತ್ತವರ ನೆನಪುಗಳಿಗೆ ಅಂಟಿದ ಕೊಳೆಯನ್ನು ತೊಳೆಯುತ್ತಾರೆ. ಅದನ್ನು ನೋಡುತ್ತಿರುವಾಗಲೇ, &#8216;ಸ್ಮಶಾನದಲ್ಲಿ ಮಾತನಾಡುವವರ, ಮೌನವನೊಮ್ಮೆ ಆಲಿಸಿ&#8217; ಅನ್ನುವ &#8216;ರೂಮಿ&#8217; ಯ ಸಾಲುಗಳು ನೆನಪಾಗುತ್ತವೆ.<br><br><strong>ಗುಪ್ತಗಾಮಿನಿ</strong></p>



<p><strong><br></strong>ಸಿನಿಮಾದ ಶುರುವಿಂದ ಕೊನೆಯವರೆಗೆ ಹರಿಯುವ ಗುಪ್ತಗಾಮಿನಿ ಕಫುಕುವಿನ ಹೆಂಡತಿ &#8216;ಒಟೊ&#8217;. ಆ ಹರಿವಿಂದ ಹುಟ್ಟಿದ ಕಥೆಗಳೇ ಎಲ್ಲವೂ. ಅವಳು ಯಾರ ಜೊತೆಗಾದರು ಸೆಕ್ಸ್ ಮಾಡುವಾಗ ಅವಳಲ್ಲಿ ಹುಟ್ಟುವ ಕಥೆಗಳನ್ನು ಕಾಣಬಹುದು, ಕೇಳಬಹುದು. ಇದು ಮನುಷ್ಯರ ವಿಕಾಸದಲ್ಲಿ ಕಥೆಗಳು ವಹಿಸಿದ ಪಾತ್ರವನ್ನು ಹೇಳುವಂತಿದೆ. ಅವಳ ಕಥೆಯೊಂದರಿಂದ ಪಾತ್ರವೊಂದು ಎದ್ದು ಬಂದು, ಉಳಿದ ಕಥೆ ತಾನೇ ಹೇಳುವಂಥ ಪಾತ್ರವೊಂದಿದೆ ಚಿತ್ರದಲ್ಲಿ. ಆ ಪಾತ್ರದ ಹೆಸರು &#8216;ಕೋಶಿ&#8217;. ಆತನ ಹುಡುಕಾಟಕ್ಕಿರುವ ಪ್ರಾಮಾಣಿಕತೆ ತೀವ್ರ ತರವಾದದ್ದು. ಕಪುಕು ಮತ್ತು ಒಟೊ ದಂಪತಿಗಳ ಮಗು ತೀರಿ ಹೋಗಿರುತ್ತದೆ. ಕಫುಕುವಿನ ಹೆಂಡತಿ ಒಟೊ ಕೂಡ ತೀರಿಕೊಳ್ಳುತ್ತಾಳೆ. ಮಿಸುಕಿಯ ತಾಯಿ ಸತ್ತಿರುತ್ತಾಳೆ. ಮಿಸುಕಿ ತನ್ನ ತಾಯಿ ಸಾಯುವುದನ್ನು ಹತಾಶೆ, ಪ್ರೀತಿ ಮತ್ತು ತಣ್ಣಗಿನ ಕ್ರೌರ್ಯದೊಂದಿಗೆ ನೋಡಿದ ತನ್ನ ನಡವಳಿಕೆಯನ್ನು ಕಫುಕುವಿನೊಂದಿಗೆ ಹಂಚಿಕೊಳ್ಳುತ್ತಾಳೆ. ಕಫುಕು ತನ್ನ ಹೆಂಡತಿ ಸಾಯುವ ಮುಂಚೆ ತನಗೆ ಏನೋ ಹೇಳಬೇಕೆಂದಿದ್ದನ್ನು ಕೇಳಿಸಿಕೊಳ್ಳದೇ ಹೋದುದಕ್ಕೆ ಪರಿತಪಿಸುತ್ತಾನೆ. ಬದುಕಿನೊಳಗೆ ಮೌನವಾಗಿ ಪ್ರವಹಿಸುವ ಸಾವು ನೋಡುಗರನ್ನು ಸೋಕುತ್ತದೆ.</p>



<p></p>



<p><strong>ಏಕತಾನತೆಯ ಪ್ರತಿನಿಧಿಗಳು</strong></p>



<figure class="wp-block-gallery has-nested-images columns-default is-cropped wp-block-gallery-2 is-layout-flex wp-block-gallery-is-layout-flex">
<figure class="wp-block-image size-large"><img decoding="async" width="554" height="554" data-id="18673" src="https://peepalmedia.com/wp-content/uploads/2022/12/IMG-20221223-WA0007.jpg" alt="" class="wp-image-18673" srcset="https://peepalmedia.com/wp-content/uploads/2022/12/IMG-20221223-WA0007.jpg 554w, https://peepalmedia.com/wp-content/uploads/2022/12/IMG-20221223-WA0007-300x300.jpg 300w, https://peepalmedia.com/wp-content/uploads/2022/12/IMG-20221223-WA0007-150x150.jpg 150w" sizes="(max-width: 554px) 100vw, 554px" /></figure>
</figure>



<p>ಯಾವುದು ನಮ್ಮ ಮನೆ ? ಒಂದು ಕಟ್ಟಡವೋ, ಒಬ್ರು ವ್ಯಕ್ತಿಯಾ? ಅಪರಿಚಿತ ಮನೆಯಲ್ಲಿನ ನಾಯಿ, ನಿನಗೊಂದು ಮನೆಯ ಫೀಲ್ ಕೊಡಬಲ್ಲುದಾ? ಹೌದು; ಒಂದು ಕಾರು, ಪ್ರಾಣಿ , ಮನುಷ್ಯರು, ಒಂದು ಭಾವ, ನಾಟಕದ ಥಿಯೇಟರ್ ಅಥವಾ ಇನ್ಯಾವುದೇ ವಸ್ತು ಮನೆಯಾಗಬಲ್ಲುದು. ಇದು ಸಿನಿಮಾದೊಳಗೆ ಅಲ್ಲಲ್ಲಿ ವ್ಯಕ್ತವಾಗುತ್ತದೆ. ಮುಖ್ಯವಾಗಿ ಮಿಸುಕಿ ಪಾತ್ರದ ಆಳಕ್ಕಿಳಿದಾಗ ಅದಿನ್ನು ಸ್ಪಷ್ಟವಾಗುತ್ತದೆ. ಎಲ್ಲವೂ ಪರ್ಫೆಕ್ಟ್ ಆಗಿ ಸಾಗಬೇಕು ಅನ್ನುವ ಏಕತಾನತೆಗೆ ಹೊಂದಿಕೊಂಡಿರುವ ಕಫುಕು ಅದಕ್ಕೆ ಸಾಕ್ಷಿಯೆಂಬಂತೆ, ತುಂಬಾ ನೀಟಾಗಿ ಕಾಣಿಸುವ ಅವನ ಹಳೇ ಕಾರಿನಲ್ಲಿ ನೆನಪುಗಳನ್ನು ಸಾಗಿಸುತ್ತಿರುತ್ತಾನೆ. ತನ್ನ ಬದುಕಿನ ಬಗೆಗಿನ ಗಿಲ್ಟ್ ಅನ್ನು ಉಳಿಸಿ ಕೊಂಡಿರುವಾಕೆ ಮಿಸುಕಿ. ಯಾವುದನ್ನೂ ಪೂರ್ತಿಯಾಗಿ ಅಪ್ಪಿಕೊಳ್ಳದೇ, ಬದುಕಿನ ಸಣ್ಣ ಖುಷಿಗಳನ್ನು, ದುಃಖದಿಂದೆಂಬಂತೆ ಅನುಭವಿಸುತ್ತಿರುವಾಕೆ. ತನಗೇನು ಬೇಡ ಎಂಬಂತೆ ಒಂದರಿಂದ ಇನ್ನೊಂದಕ್ಕೆ ಸಾಗುವ ಮಿಸುಕಿ ಕೂಡ ಒಂದು ರೀತಿಯಲ್ಲಿ ಏಕತಾನತೆಯ ಪ್ರತಿನಿಧಿ. ನಾಟಕದ ಪರದೆ ಚೂರು ಚೂರೇ ಸರಿಯುವಂತೆ, ವೈರುಧ್ಯ ತುಂಬಿದ ಅವರವರ ಬದುಕು ಮತ್ತೆ ಮುಂದುವರೆಯುತ್ತದೆ. ಹಿಂದಿನದ್ದನ್ನು ಹಿಂದೆಯೇ ಬಿಟ್ಟು, ಬದುಕಿನೊಂದಿಗೆ ಪ್ರಾಮಾಣಿಕವಾಗಿರ ಬಯಸುವ ಬೀಜ ಚಿಗುರೊಡೆಯುತ್ತದೆ.</p>



<p><br><strong>ಕಾಫ್ಕಾನ ಕೀಟ</strong></p>



<figure class="wp-block-gallery has-nested-images columns-default is-cropped wp-block-gallery-3 is-layout-flex wp-block-gallery-is-layout-flex">
<figure class="wp-block-image size-large"><img decoding="async" width="768" height="1024" data-id="18674" src="https://peepalmedia.com/wp-content/uploads/2022/12/IMG-20221223-WA0006-768x1024.jpg" alt="" class="wp-image-18674" srcset="https://peepalmedia.com/wp-content/uploads/2022/12/IMG-20221223-WA0006-768x1024.jpg 768w, https://peepalmedia.com/wp-content/uploads/2022/12/IMG-20221223-WA0006-225x300.jpg 225w, https://peepalmedia.com/wp-content/uploads/2022/12/IMG-20221223-WA0006-150x200.jpg 150w, https://peepalmedia.com/wp-content/uploads/2022/12/IMG-20221223-WA0006-300x400.jpg 300w, https://peepalmedia.com/wp-content/uploads/2022/12/IMG-20221223-WA0006-696x928.jpg 696w, https://peepalmedia.com/wp-content/uploads/2022/12/IMG-20221223-WA0006.jpg 864w" sizes="(max-width: 768px) 100vw, 768px" /></figure>
</figure>



<p>&#8216;ನಿನ್ನ ಹೆಂಡತಿ, ನಿನ್ನನ್ನು ಪ್ರೀತಿಸುವಷ್ಟೇ ಸಹಜವಾಗಿ ಬೇರೆ ಗೆಳೆಯರೊಂದಿಗೆ ಲೈಂಗಿಕ ಸಾಂಗತ್ಯವನ್ನು ಹೊಂದಿದ್ದಳು ಎಂದ್ಯಾಕೆ ನೀನು ತಿಳಿಯಬಾರದು&#8217; &#8211; ಇದು ಒಂದು ಹಂತದಲ್ಲಿ ಕಫುಕುವಿಗೆ ಮಿಸುಕಿ ಹೇಳುವ ಮಾತುಗಳಿವು. &#8220;ನಮಗೆ ವಿವಿಧ ತರದ ಮನುಷ್ಯ ಸ್ವಭಾವಗಳನ್ನು ಅದು ಇರುವಂತೆಯೇ ನೋಡಲು ಸಾಧ್ಯವಾಗುವುದಿಲ್ಲ. ಅರ್ಥವಾಗದಿರುವ ಸಂದರ್ಭಗಳನ್ನು ಅತೀಂದ್ರಿಯತೆಗೆ ಆರೋಪಿಸಲು ಹಾತೊರೆಯುತ್ತೇವೆ. ಸಹಜವಾದ ನಡವಳಿಕೆಗಳನ್ನು ಸಂಶಯದ ಬಲಿಗಲ್ಲಿಗೆ ಒಡ್ಡುವಾಗ ನಮ್ಮಲ್ಲಿರುವ ಕ್ರೌರ್ಯದ ಅಂಶಗಳನ್ನು ಮರೆಯುತ್ತೇವೆ&#8221; &#8211; ಇವನ್ನೆಲ್ಲಾ ಒರೆಗಲ್ಲಿಗೆ ಹಚ್ಚುವ ಸಿನಿಮಾದ ಸಂಭಾಷಣೆ, ಅಲ್ಲಲ್ಲಿ ಚೂರು ಚೂರೇ ಸಾಣೆ ಹಿಡಿಯುತ್ತದೆ. ಕಫುಕು ಪಾತ್ರದ ಹೆಸರು ಬರುವಲ್ಲೆಲ್ಲಾ, ನಾನು &#8216;ಕಾಫ್ಕಾ&#8217; ಅಂತಾನೆ ಕೇಳಿಸ್ಕೋತಾ ಇದ್ದೆ. ಕಾಫ್ಕಾನ ಕೀಟ ಒಳಗೆಲ್ಲೋ ಸುಳಿದಾಡಿದಂತಿದೆ.</p>



<p></p>



<p>ಯಾರೋ  ಕಿವಿಗೆ ಉಸಿರು ಸೋಕುವಷ್ಟು ಹತ್ತಿರ ಕೂತ್ಕೊಂಡು ಹೇಳಿದಂತಿದೆ ಇಲ್ಲಿನ ಕಥಾನಕಗಳು. 120 ನಿಮಿಷದಷ್ಟು ಉದ್ದವಿರುವ, ತುಂಬಾ ನಿಧಾನವಾಗಿ ಸರಿಯುವ ಸಿನಿಮಾ, ಅದರೊಳಗೆ ಇಳಿಯದಿದ್ದರೆ ಬೋರ್ ಹೊಡೆಸುವ ಸಾಧ್ಯತೆಯಿದೆ. ಇಲ್ಲಿನ ಪಾತ್ರಗಳು ಕಥೆ ಹೇಳುತ್ತಾ, ಹೇಳುತ್ತಾ ಕಥೆಗಳಾಗುತ್ತಾ ಹೋಗುತ್ತವೆ. ಮುರಕಾಮಿ ಕಥೆಗಳನ್ನು ಓದುವುದು ಹಾಗೇ ಇರುತ್ತದೆ; ಈ ಸಿನಿಮಾ ಕೊಡುವ ಫೀಲ್&#8217;ನ ಹಾಗೆ. &#8216;ಹೇಳಲಾಗದ್ದನ್ನು, ಹೇಳದೆಯೇ ಉಳಿಸಿಯೂ, ಓದುಗನೆಡೆಗೆ ತಲುಪಿಸುವ&#8217; ಮುರಕಾಮಿಯ ಕ್ರಾಫ್ಟ್ ಅನ್ನು ಈ ಸಿನಿಮಾದ ನಿರ್ದೇಶಕ &#8216;ಹಮಗುಚಿ ರುಯ್ಯುಸ್ಕೆ&#8217; ಅವಾಹಿಸಿಕೊಂಡಂತಿದೆ.</p>



<p></p>



<p><a></a><a></a><strong>ಗುರು ಸುಳ್ಯ</strong></p>



<p>ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.<strong></strong></p>
]]></content:encoded>
					
		
		
			</item>
		<item>
		<title>ಸೋಶಿಯಲ್ ಮೀಡಿಯಾ‌ ಗೀಳು ಮತ್ತು ಯುವಜನತೆ</title>
		<link>https://peepalmedia.com/social-media-addiction-in-youth/</link>
		
		<dc:creator><![CDATA[Peepal Media]]></dc:creator>
		<pubDate>Fri, 16 Dec 2022 10:16:09 +0000</pubDate>
				<category><![CDATA[ಯುವ ನೋಟ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[yuvanota]]></category>
		<guid isPermaLink="false">https://peepalmedia.com/?p=18565</guid>

					<description><![CDATA[ಯಾವುದೇ ಒಂದು ಆಪ್ ಬಳಸುತ್ತಿದ್ದೇವೆ ಅಂದರೆ ಅದು ನಮಗೆ ಎಷ್ಟು ಉಪಯುಕ್ತ ? ಯಾಕಾಗಿ ಬಳಸಬೇಕು? ನಮ್ಮ ಮನಸ್ಸನ್ನು ಆ ಆಪ್ ಹೇಗೆಲ್ಲ ವಿಚಲಿತ ಗೊಳಿಸಬಲ್ಲದು ಎಂಬುದನ್ನು ಯುವ ಜನರು ಅರ್ಥ ಮಾಡಿಕೊಳ್ಳಲೇ ಬೇಕು. ಇದು ಪ್ರಿಯಾಂಕಾ ಮಾವಿನಕರ್ ಅವರ ಯುವನೋಟ ಇತ್ತೀಚಿನ ದಿನಗಳಲ್ಲಿ ಯುವಜನರು ಅತಿ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಾಲವನ್ನು ಕಳೆಯುತ್ತಿದ್ದಾರೆ.  ಸೋಶಿಯಲ್ ಮೀಡಿಯಾ  ಬಳಸುವವರ ಸಂಖ್ಯೆಯು ಕೂಡ  ನಮ್ಮ ದೇಶದಲ್ಲಿ ಅತಿ ಹೆಚ್ಚಾಗಿದೆ. ಅದರಲ್ಲೂ ಯುವಜನರು ಇದಕ್ಕೆ ಅಂಟಿಕೊಂಡೆ ಬದುಕುತ್ತಿದ್ದಾರೆ. ಈಗೀಗ [&#8230;]]]></description>
										<content:encoded><![CDATA[
<h5 class="has-text-align-center has-very-light-gray-to-cyan-bluish-gray-gradient-background has-background wp-block-heading"><strong>ಯಾವುದೇ ಒಂದು ಆಪ್ ಬಳಸುತ್ತಿದ್ದೇವೆ ಅಂದರೆ ಅದು ನಮಗೆ ಎಷ್ಟು ಉಪಯುಕ್ತ ? ಯಾಕಾಗಿ ಬಳಸಬೇಕು? ನಮ್ಮ ಮನಸ್ಸನ್ನು ಆ ಆಪ್ ಹೇಗೆಲ್ಲ ವಿಚಲಿತ ಗೊಳಿಸಬಲ್ಲದು ಎಂಬುದನ್ನು ಯುವ ಜನರು ಅರ್ಥ ಮಾಡಿಕೊಳ್ಳಲೇ ಬೇಕು. ಇದು ಪ್ರಿಯಾಂಕಾ ಮಾವಿನಕರ್ ಅವರ ಯುವನೋಟ</strong></h5>



<p>ಇತ್ತೀಚಿನ ದಿನಗಳಲ್ಲಿ ಯುವಜನರು ಅತಿ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಾಲವನ್ನು ಕಳೆಯುತ್ತಿದ್ದಾರೆ.  ಸೋಶಿಯಲ್ ಮೀಡಿಯಾ  ಬಳಸುವವರ ಸಂಖ್ಯೆಯು ಕೂಡ  ನಮ್ಮ ದೇಶದಲ್ಲಿ ಅತಿ ಹೆಚ್ಚಾಗಿದೆ. ಅದರಲ್ಲೂ ಯುವಜನರು ಇದಕ್ಕೆ ಅಂಟಿಕೊಂಡೆ ಬದುಕುತ್ತಿದ್ದಾರೆ. ಈಗೀಗ ಓದು ಬರಹಕ್ಕಿಂತಲೂ ರೀಲ್ಸ್ ಮಾಡುವುದರಲ್ಲಿ ಹೆಚ್ಚು ಹೆಚ್ಚಾಗಿ ಆಸಕ್ತಿ ತೋರಿಸ್ತಿದ್ದಾರೆ. ಹಾಗಂತೂ ರೀಲ್ಸ್ ಮಾಡುವುದು ತಪ್ಪು ಎಂದಲ್ಲ, ಮಾಡಬಾರದು ಅಂತಾನೂ ಅಲ್ಲ. ಟಿಕ್ ಟಾಕ್, ರೀಲ್ಸ್ ಗಳಿಂದಾಗಿ ಅನೇಕ‌ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಿರುತೆರೆ ಮತ್ತು ಬೆಳ್ಳಿ ತೆರೆಯ ಮೇಲೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸೈ ಎನ್ನಿಸಿಕೊಂಡವರು ಇದ್ದಾರೆ. ಮತ್ತೆ ಇನ್ನು ಕೆಲವರ  ರೀಲ್ಸ್ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಮಾಡಿದ್ದವುಗಳಾಗಿವೆ.</p>



<p></p>



<p>ಈ ಮೊದಲು ಸೋಶಿಯಲ್ ಮೀಡಿಯಾವೆಂದರೆ  ವಾಟ್ಸ್ಯಾಪ್‌,  ಫೇಸ್‌ಬುಕ್‌, ಇ ಮೇಲ್ ಅಷ್ಟೇ ಇದ್ದವು. ಇತ್ತೀಚಿನ  ದಿನಗಳಲ್ಲಿ ಇನ್ಸ್ಟಾಗ್ರಾಂ, ಟೆಲಿಗ್ರಾಂ, ಟಿಕ್‌ ಟಾಕ್‌, ರೀಲ್ಸ್‌ ಹೊಸ ಹೊಸ ಆಪ್ ಗಳು ಯುವಜನರ ಮನಸ್ಸಿನಲ್ಲಿ ಗಾಢವಾಗಿ ಅಚ್ಚೊತ್ತಿ ಕುಂತಿವೆ. ಮತ್ತೆ ಅತೀ ಹೆಚ್ಚಿನ ಬಳಕೆಯ ಮಾಧ್ಯಮಗಳಾಗಿ ತಲೆ ಎತ್ತಿ ನಿಂತಿವೆ.</p>



<p></p>



<p>ಆದರೆ ಯಾವುದನ್ನು ಎಷ್ಟು ಬಳಸಬೇಕು ಎಂಬುದನ್ನು  ಇಂದಿನ ಯುವಜನರೆ  ನಿರ್ಣಯಿಸ ಬೇಕಾಗಿದೆ.  ಯಾವುದಕ್ಕಾಗಿ ಬಳಸುತ್ತಿದ್ದೇವೆ, ಈ ರೀಲ್ಸ್ ಗೀಳು ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂಬುದರ ಬಗ್ಗೆ ಯುವಜನರು ಆಲೋಚಿಸಬೇಕು.</p>



<p></p>



<p>ಮೊನ್ನೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ 14 ವರ್ಷದ ಹುಡುಗಿಯ ಮೇಲೆ 16  ವರ್ಷದ ಹುಡುಗರು ಅತ್ಯಾಚಾರ ಮಾಡಿ ಕೊಲೆ ಮಾಡಿದ ಘಟನೆ ನೋಡಿದ್ದೇವೆ, ಕೇಳಿದ್ದೇವೆ‌. ಅತ್ಯಾಚಾರ ಮಾಡಿದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಮೊಬೈಲ್ ನಲ್ಲಿ ಅಶ್ಲೀಲ ‌ವಿಡಿಯೋಗಳನ್ನು ನೋಡಿ ಆ ಬಾಲಕಿಯ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು‌ ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ.‌</p>



<p></p>



<p>ಯಾವುದೇ ಒಂದು ಆಪ್ (App.) ಬಳಸುತ್ತಿದ್ದೇವೆ ಅಂದರೆ ಅದು ನಮಗೆ ಎಷ್ಟು ಉಪಯುಕ್ತ ? ಯಾಕಾಗಿ ಬಳಸ ಬೇಕು? ನಮ್ಮ ಮನಸ್ಸನ್ನು ಆ ಆಪ್ ಹೇಗೆಲ್ಲ ವಿಚಲಿತ ಗೊಳಿಸಬಲ್ಲದು ಎಂಬುದನ್ನು ಯುವ ಜನರು ಅರ್ಥ ಮಾಡಿಕೊಳ್ಳಲೇ ಬೇಕು.</p>



<p></p>



<p>ವಿಡಿಯೋ, ಫೋಟೋ, ಗೇಮ್ಸ್  ಮಕ್ಕಳ ಮೇಲೆ ಅತಿ  ಹೆಚ್ಚು ಪರಿಣಾಮ ಬೀರುವಂತವುಗಳಾಗಿವೆ. ತಂದೆ ತಾಯಿಗಳು ಕೂಡ ಮಕ್ಕಳ ಮೇಲೆ ನಿಗಾ ಇಡುವುದು ತುಂಬಾ ಮುಖ್ಯ. ಯಾವುದಕ್ಕೆ ಮೊಬೈಲ್ ಬಳಸಬೇಕು, ಯಾವುದಕ್ಕೆ ಬೇಡ ಎಂಬ ಅರಿವು ಇಂದಿನ ಮಕ್ಕಳಿಗೆ  ಮತ್ತು ಯುವಜನತೆಗೆ  ಅರ್ಥ ಮಾಡಿಸುವ ತುರ್ತಿದೆ. ಈ ಹಿಂದೆ ಟಿಕ್ ಟಾಕ್ ನಲ್ಲಿ ರೀಲ್ಸ್ ಮಾಡಲು ಹೋಗಿ ಅನೇಕ ಯುವಜನರು ತಮ್ಮ  ಪ್ರಾಣವನ್ನೆ ಕಳೆದು ಕೊಂಡಿರುವ ಉದಾಹರಣೆ ನಮ್ಮೆಲ್ಲರ ಕಣ್ಮುಂದೆ ಇದೆ.   </p>



<p></p>



<p>ಇನ್ನು ಕೆಲವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹೋಗಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೆ‌ ಕೈ, ಕಾಲು ಮುರಿದುಕೊಂಡು, ಪ್ರಾಣವನ್ನು ಕಳೆದು ಕೊಂಡು ಅಪ್ಪ ಅಮ್ಮನನ್ನು  ಕಣ್ಣೀರಿನಲ್ಲೆ ಕೈ ತೊಳೆಯುವಂತೆ ಮಾಡಿದ್ದಾರೆ.  ಹುಡುಗಿಯರು ಈ ರೀಲ್ಸ್, ಟಿಕ್ ಟಾಕ್ ನಿಂದ  ಮಾನಸಿಕವಾಗಿ ಹಿಂಸೆಗೊಳಗಾದ ಉದಾಹರಣೆಗಳು ಬೇಕಾದಷ್ಟಿವೆ. ಒಬ್ಬ ಹೆಣ್ಣುಮಗಳು ಡಾನ್ಸ್ ಮಾಡಿದ ವಿಡಿಯೋ ಏನಾದ್ರೂ ಅಪ್ಲೋಡ್ ಮಾಡಿದ್ರೆ ಅದಕ್ಕೆ ಬರುವ ಕಾಮೆಂಟ್ಸ್ ಗಳು ಬಹಳ  ಕೆಟ್ಟದಾಗಿರುತ್ತವೆ. ಇನ್ನು ಕೆಲವು ಪುಂಡರ &#8220;ಬನ್ನಿ ಫ್ರೆಂಡ್ಸ್ ಕಾಮೆಂಟ್ ತಜ್ಞರ ಅಭಿಪ್ರಾಯ ಕೇಳೋಣ ಎಂಬ ವ್ಯಂಗ್ಯವಾದ ಮಾತು ಬೇರೆ. ಅಶ್ಲೀಲ ಕಾಮೆಂಟ್ಸ್ ಗಳನ್ನು ನೋಡಿದರೆ ಹೆಣ್ಣನ್ನು ಭೋಗದ ವಸ್ತುವಾಗಿಯೇ ನೋಡುವುದು ಕಂಡು ಬರುತ್ತದೆ. ಅವಳಿಗೂ ಘನತೆಯ ಬದುಕಿದೆ. ಗಂಡು ಏನಾದರೂ ಮಾಡಬಹುದು. ಆದರೆ ಹೆಣ್ಣುಮಕ್ಕಳಿಗೆ ಅವಕಾಶಗಳೇ ಇಲ್ವಾ.? ಹಾಗೆಲ್ಲ ಕಾಮೆಂಟ್ಸ್  ಹಾಕುವ ಗಂಡು ಮನಸ್ಥಿತಿಗಳ ಬಗ್ಗೆ ನಿಜಕ್ಕೂ ಭಯ ಆಗುತ್ತೆ.</p>



<p></p>



<p>ಈ ಹಿಂದೆ ಒಮ್ಮೆ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾಳ ವೈರಲ್ ಆಗಿತ್ತು &#8221; ಯಾಕಣ್ಣ&#8221; ಎಂಬುದು. ಆ ಹೆಣ್ಣುಮಕ್ಕಳ ಖಾಸಗಿ ವಿಷಯವನ್ನು ವಿಡಿಯೋ ಮಾಡಿ ಹರಿದಾಡಲು ಬಿಟ್ಟ ಆ ಗಂಡು ಮನಸ್ಥಿತಿಗೆ ಹೇಗೆ  ಅರ್ಥ ಆದೀತು ಅವಳು ಅನುಭವಿಸಿದ ಅವಮಾನ, ಮಾನಸಿಕ ಹಿಂಸೆ. ಅವಳ ಸ್ಥಿತಿ ಏನಾಯ್ತು ಎಂಬುದನ್ನು ಆಧಾರವಾಗಿ ಇಟ್ಟುಕೊಂಡೆ ಕನ್ನಡದಲ್ಲಿ  ʼಪಬ್ಲಿಕ್‌ ಟಾಯಿಲೆಟ್‌ʼ ಎಂಬ ಕಿರುಚಿತ್ರ ಮಾಡಿದ್ದಾರೆ. ಅವನು ಕೂಡ ಖಿನ್ನತೆಗೆ ಒಳಗಾದ ಬಗ್ಗೆ ಇದರಲ್ಲಿ ವಿವರಿಸಲಾಗಿದೆ.</p>



<p></p>



<p><strong>ರೀಲ್ಸ್ ಮಾಡುವವರಿಗಾಗಿ ಈ ಮಾತು.</strong></p>



<p></p>



<p>2019 ರಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಗೊಡೆಕೆರೆಯ ಕುಮಾರ ಎನ್ನುವ ಯುವಕ ಟಿಕ್ ಟಾಕ್ ಮಾಡಲು ಹೋಗಿ ಬೆನ್ನುಹುರಿ ಮುರಿದುಕೊಂಡು ಮೃತ ಪಟ್ಟಿದ್ದನು.</p>



<p></p>



<p>ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗನನ್ನೆ ನಂಬಿಕೊಂಡ ವಯಸ್ಸಾದ ತಂದೆ ತಾಯಿಗೆ ಆಸರೆಯಾಗಿ ನಿಲ್ಲಬೇಕಾದ ಮಗ ಟಿಕ್ ಟಾಕ್ ಎಂಬ ಮಾಯಾ ಜಾಲದಲ್ಲಿ ಸಿಲುಕಿ ಪ್ರಾಣವನ್ನೆ ಕಳೆದುಕೊಂಡ ಘಟನೆಯು ನಮ್ಮೆದುರಿಗೇ ಇದೆ.</p>



<p></p>



<p>ಇತ್ತೀಚಿನ ಭಾಳ ಸುದ್ದಿಯಲ್ಲಿದ್ದ ಮಂಗಳೂರಿನ &#8220;ಕಾಫಿ ನಾಡು ಚಂದು&#8221; ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಹೆಚ್ಚು ಸದ್ದು ಮಾಡಿದ್ದವು. ಯಾರದೇ ಹುಟ್ಟುಹಬ್ಬ ಇರಲಿ ಕಾಫಿ ನಾಡ ಚಂದು ಸ್ವತಃ ಹಾಡು ರಚಿಸಿ ಹಾಡಿ, ಹೊಗಳಿ ವಿಷ್ ಮಾಡಿದ್ದು ಇದೆ‌.‌ ಆದರೆ  ಜನರು ಅವರನ್ನು ಮಾನಸಿಕವಾಗಿ, ಭಾವನಾತ್ಮಕವಾಗಿ ಹಿಂಸೆಗೆ ಒಳಪಡಿಸಿದ್ದಾರೆ. ಅವರು ಮಾಡಿದ ಎಲ್ಲ ವಿಡಿಯೋಗಳನ್ನು ಅಳಿಸಿಹಾಕಿದ್ದಾರೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸ ಬೇಕಾದವರೆ ಹೊಸಕಿ ಹಾಕುವುದು ಎಷ್ಟು ಸರಿ.?</p>



<p></p>



<p>ವಿದ್ಯಾರ್ಥಿಗಳು, ಯುವಜನತೆ  ಮೊದಲು ಓದಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ನಮ್ಮ ಸುತ್ತ ಮುತ್ತ ಏನ್ ನಡೀತಿದೆ, ಯಾಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ? ಯುವಜನರಿಗೆ ಯಾಕೆ ಉದ್ಯೋಗ ಸಿಗುತ್ತಿಲ್ಲ? ಅತ್ಯಾಚಾರಗಳೇಕೆ ಹೆಚ್ಚಾಗುತ್ತಿವೆ? ಎಂಬುದನ್ನು ಇಂದಿನ ಯುವಜನರು ಯೋಚಿಸ ಬೇಕು. ಹೀಗೆ ಯೋಚಿಸುವಂತೆ  ತಮ್ಮ ಬದುಕನ್ನು ರೂಪಿಸಿ ಕೊಳ್ಳಬೇಕಿದೆ. ಎಲ್ಲರಿಗೂ ಸಮ ಪಾಲು ಎಲ್ಲರಿಗೂ ಸಮ ಬಾಳು ನಮ್ಮ ನೆಲದಲ್ಲಿ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಮುನ್ನಡೆಯಬೇಕಿದೆ.</p>



<p></p>



<p></p>



<p><a><strong>ಪ್ರಿಯಾಂಕಾ ಮಾವಿನಕರ್</strong></a><strong></strong></p>



<p>ಹವ್ಯಾಸಿ ಬರಹಗಾರ್ತಿ, ಕಲಬುರುಗಿ.</p>
]]></content:encoded>
					
		
		
			</item>
		<item>
		<title>ನಿಮ್ಮ ಹೃದಯದ ಮಾತನ್ನು ಆಲಿಸಿ ಮುನ್ನಡೆಯಿರಿ: ನಿಶಾ</title>
		<link>https://peepalmedia.com/nimma-hrudayada-maatannu-alisi-by-navya/</link>
		
		<dc:creator><![CDATA[Peepal Media]]></dc:creator>
		<pubDate>Fri, 02 Dec 2022 03:18:03 +0000</pubDate>
				<category><![CDATA[ಯುವ ನೋಟ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<category><![CDATA[yuvanota]]></category>
		<guid isPermaLink="false">https://peepalmedia.com/?p=17224</guid>

					<description><![CDATA[ತನಗಾಗದು ಎಂದು ಕೈ ಚೆಲ್ಲಿ ಕುಳಿತಿದ್ದರೆ ಅವರ ಹೆಸರು ಇಂದು ಯಾರಿಗೂ ತಿಳಿಯುತ್ತಿರಲಿಲ್ಲ. ಆ ಒಂದು ಕನಸು ಅವರ ಬದುಕಿನ ಚಿತ್ರಣವನ್ನೇ ಪಲ್ಲಟ ಮಾಡಿ ಬಿಟ್ಟಿತು. ಪತ್ರಕರ್ತೆ ನವ್ಯ ಪರಿಚಯಿಸಿರುವ, ಯುವ ಜನತೆಗೆ ಸ್ಫೂರ್ತಿಯಾಗಬಹುದಾದ ಕಲಾವಿದೆ ನಿಶಾ ಅವರನ್ನು ತಿಳಿದುಕೊಳ್ಳಲು ಮುಂದೆ ಓದಿ.. ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳು ಎದುರಾದಾಗ ತಲೆಮೇಲೆ ಕೈ ಹೊತ್ತು ಕೂರದೆ ಕಷ್ಟಗಳ ಸರಮಾಲೆಗಳನ್ನು ಹೊದೆದೇ ಅಸಾಧಾರಣ ಸಾಧನೆಗಳನ್ನು ಮಾಡಿದವರನ್ನು ಓದಿ ತಿಳಿದು, ಸ್ಪೂರ್ತಿ ಪಡೆಯಬೇಕು. ಸಾಧನೆಗೆ ಯಾವುದೇ ಪರಿಮಿತಿಯಿಲ್ಲ. [&#8230;]]]></description>
										<content:encoded><![CDATA[
<h5 class="has-text-align-center has-very-light-gray-to-cyan-bluish-gray-gradient-background has-background wp-block-heading"><strong>ತನಗಾಗದು ಎಂದು ಕೈ ಚೆಲ್ಲಿ ಕುಳಿತಿದ್ದರೆ ಅವರ ಹೆಸರು ಇಂದು ಯಾರಿಗೂ ತಿಳಿಯುತ್ತಿರಲಿಲ್ಲ. ಆ ಒಂದು ಕನಸು ಅವರ ಬದುಕಿನ ಚಿತ್ರಣವನ್ನೇ ಪಲ್ಲಟ ಮಾಡಿ ಬಿಟ್ಟಿತು. ಪತ್ರಕರ್ತೆ ನವ್ಯ ಪರಿಚಯಿಸಿರುವ, ಯುವ ಜನತೆಗೆ ಸ್ಫೂರ್ತಿಯಾಗಬಹುದಾದ ಕಲಾವಿದೆ ನಿಶಾ ಅವರನ್ನು ತಿಳಿದುಕೊಳ್ಳಲು ಮುಂದೆ ಓದಿ..</strong></h5>



<p>ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳು ಎದುರಾದಾಗ ತಲೆಮೇಲೆ ಕೈ ಹೊತ್ತು ಕೂರದೆ ಕಷ್ಟಗಳ ಸರಮಾಲೆಗಳನ್ನು ಹೊದೆದೇ ಅಸಾಧಾರಣ ಸಾಧನೆಗಳನ್ನು ಮಾಡಿದವರನ್ನು ಓದಿ ತಿಳಿದು, ಸ್ಪೂರ್ತಿ ಪಡೆಯಬೇಕು. ಸಾಧನೆಗೆ ಯಾವುದೇ ಪರಿಮಿತಿಯಿಲ್ಲ. ಸಾಧಿಸಬೇಕು ಎನ್ನುವ ಛಲ, ಹುಮ್ಮಸ್ಸು, ಕಠಿಣ ಶ್ರಮವಿದ್ದರೆ&nbsp; ತಮ್ಮಿಷ್ಟದ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗ ಏರಬಹುದು ಎಂದು ನಿರೂಪಿಸಿದ ಬಹುಮುಖ ಪ್ರತಿಭೆ ನಿಶಾ. ಇವರು ನಟನೆ, ನೃತ್ಯ, ಬೋಧನೆ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ ಪ್ರತಿಭಾನ್ವಿತೆ.</p>



<p>ನಿಶಾ ಮೂಲತಃ ಬೆಂಗಳೂರಿನವರು. ತುಂಬು ಕುಟುಂಬದಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳು. ಬಾಲ್ಯದಲ್ಲಿಯೇ ನೃತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಮಗಳ ಕನಸಿಗೆ ಪೋಷಕರ ಪ್ರೋತ್ಸಾಹ ಇದ್ದೇ ಇತ್ತು. ಶಿಸ್ತಿನಿಂದ ನಿರಂತರ ನೃತ್ಯಾಭ್ಯಾಸ ನಡೆಸಿದ ಬಾಲೆಯ ಪ್ರತಿಭೆ ಕಲಾ ಜಗತ್ತಿನ ಹಲವರ ಕಣ್ಮನ ಸೆಳೆಯಿತು. ಪರಿಣಾಮವಾಗಿ 2010ರಲ್ಲಿ ತೆರೆಕಂಡ ಜಾಕಿ ಸಿನಿಮಾದಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ ಪುನೀತ್‌ ರಾಜ್‌ಕುಮಾರ್‌ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿ ಕೊಂಡರು. “ಅಪ್ಪು ನನ್ನ ನೆಚ್ಚಿನ ನಟ. ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಮರೆಯಲಾರದ ಘಳಿಗೆ” ಎನ್ನುತ್ತಾರೆ ನಿಶಾ.</p>



<p>ತನ್ನಿಷ್ಟದ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಡುವುದಕ್ಕೆ ಆರಂಭಿಸಿದ್ದ ನಿಶಾ ತನ್ನ ಬದುಕಿನಲ್ಲಿ ನಿರೀಕ್ಷಿಸದ ಆಘಾತವೊಂದನ್ನು  ಎದುರಿಸಬೇಕಾಯಿತು. ಕುಟುಂಬದ ಏಕೈಕ ದುಡಿಮೆಗಾರ, ತನ್ನ ಕನಸಿಗೆ ರೆಕ್ಕೆ ಕಟ್ಟಿದ್ದ , ತಂದೆಯ ಅಕಾಲಿಕ ಸಾವು ಬರ ಸಿಡಿಲಿನಂತೆ ಬಂದೆರಗಿ ಅವರು ಕುಸಿದು ಹೋದರು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="683" height="1024" src="https://peepalmedia.com/wp-content/uploads/2022/12/image-1-683x1024.png" alt="" class="wp-image-17229" srcset="https://peepalmedia.com/wp-content/uploads/2022/12/image-1-683x1024.png 683w, https://peepalmedia.com/wp-content/uploads/2022/12/image-1-200x300.png 200w, https://peepalmedia.com/wp-content/uploads/2022/12/image-1-768x1152.png 768w, https://peepalmedia.com/wp-content/uploads/2022/12/image-1-150x225.png 150w, https://peepalmedia.com/wp-content/uploads/2022/12/image-1-300x450.png 300w, https://peepalmedia.com/wp-content/uploads/2022/12/image-1-696x1044.png 696w, https://peepalmedia.com/wp-content/uploads/2022/12/image-1.png 1000w" sizes="auto, (max-width: 683px) 100vw, 683px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="682" height="1024" src="https://peepalmedia.com/wp-content/uploads/2022/12/image-2-682x1024.png" alt="" class="wp-image-17230" srcset="https://peepalmedia.com/wp-content/uploads/2022/12/image-2-682x1024.png 682w, https://peepalmedia.com/wp-content/uploads/2022/12/image-2-200x300.png 200w, https://peepalmedia.com/wp-content/uploads/2022/12/image-2-768x1152.png 768w, https://peepalmedia.com/wp-content/uploads/2022/12/image-2-150x225.png 150w, https://peepalmedia.com/wp-content/uploads/2022/12/image-2-300x450.png 300w, https://peepalmedia.com/wp-content/uploads/2022/12/image-2-696x1044.png 696w, https://peepalmedia.com/wp-content/uploads/2022/12/image-2.png 853w" sizes="auto, (max-width: 682px) 100vw, 682px" /></figure>
</div>
</div>



<p>ತಂದೆಯ ಸಾವಿನ ಬಳಿಕ ಬದುಕಿನ ಪ್ರತಿ ಗಳಿಗೆಯೂ ನಿಶಾರ ಪಾಲಿಗೆ ದುಸ್ತರವಾಗಿತ್ತು. ಬದುಕು ಹೂವಿನ ಹಾಸಿಗೆಯಲ್ಲ ಎಂಬ ಕಟು ಸತ್ಯ ಅರ್ಥವಾಗತೊಡಗಿತು. ಮನೆಯ&nbsp; ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿತು. ಕುಟುಂಬ ನಿರ್ವಹಣೆಯ ಜವಾಬ್ದಾರಿ 16 ರ ಹರೆಯದ ಆಕೆಯ ಹೆಗಲಿಗೆ ಬಿತ್ತು. ಓದುವ ಕನಸು ಅರ್ಧಕ್ಕೆ ನಿಂತು ಹೋಯಿತು. ಆದರೆ ನಿಶಾ ನಿರಾಶರಾಗಲಿಲ್ಲ. ಮನೆಯ ಜವಾಬ್ದಾರಿಗಳನ್ನು ಹೊತ್ತುಕೊಳ್ಳುತ್ತಲೇ ತನ್ನ ಕನಸನ್ನು ಪೂರೈಸಿಕೊಳ್ಳುವ ಪ್ರಯತ್ನದಲ್ಲಿ ಹೆಜ್ಜೆ ಮುಂದಿಟ್ಟರು. ಆದರೆ ಆ ಪಯಣ ನಿರೀಕ್ಷಿಸಿದಷ್ಟು ಸುಲಭದ್ದಾಗಿರಲಿಲ್ಲ. ಯಾವುದೇ ಗಾಡ್‌ ಫಾದರ್‌ಗಳಿಲ್ಲದೇ ತನ್ನ ಸ್ವಂತ ಪ್ರತಿಭೆಯ ಮೂಲಕ ಸಾಧನೆ ಮಾಡಿದ ನಿಶಾ, ಅವಕಾಶ ವಂಚಿತರಾದಾಗ ಧೃತಿಗೆಡಲಿಲ್ಲ. ಡ್ಯಾನ್ಸ್‌ ಹಾಗೂ ಅಭಿನಯದ ಅವಕಾಶಕ್ಕಾಗಿ ಅದೆಷ್ಟೋ ಆಡಿಷನ್‌ ಗಳಲ್ಲಿ ಭಾಗವಹಿಸಿದರು. ಸೋತರು. ಸೋತಾಗ ನಿರಾಶರಾಗಲಿಲ್ಲ; ಮರಳಿ ಯತ್ನವ ಮಾಡಿದರು.</p>



<p>ಹಲವರು ಹಾಗಾಗಬೇಕು, ಇದನ್ನು ಮಾಡಬೇಕು ಎಂದೆಲ್ಲ ಕನಸು ಕಾಣುತ್ತಾರೆ. ಆದರೆ, ಆ ಸಾಧನೆಗೆ ಶ್ರಮದ ಅಗತ್ಯವಿದೆ ಎಂಬುದನ್ನು ಮರೆತು ಬಿಡುತ್ತಾರೆ. ಯೋಚಿಸಿದ ಬಳಿಕ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬೇಕಾದುದು ಮೊದಲ ಆದ್ಯತೆ. ನಿಶಾ ಇದನ್ನು ಅಕ್ಷರಶ ಪಾಲಿಸಿದರು. ದೂರ ಶಿಕ್ಷಣದ ಮೂಲಕ ಕಲಾ ವಿಭಾಗದಲ್ಲಿ ಪದವಿ ಪೂರೈಸಿದರು. ಬಾಲ್ಯದಲ್ಲೇ ಕಲೆಯ ಒಲವಿದ್ದ ನಿಶಾರನ್ನು ಕಲಾ ಸರಸ್ವತಿ ಕೈಬೀಸಿ ಕರೆದಳು. ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ನಟನಾ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು.&nbsp; ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಛಾಪು ಮೂಡಿಸ ತೊಡಗಿದರು. ಹೆಣ್ಣೊಬ್ಬಳು ಒಂಟಿಯಾಗಿ ತನ್ನ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಲು ಹೊರಟಾಗ ಲೋಕದ ಕುಹಕಗಳು ಸಾಮಾನ್ಯ. ಆದರೆ ನಿಶಾ ಅವುಗಳನ್ನೆಲ್ಲ ಮೀರಿ ಬೆಳೆದರು. ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು; ಪೂರ್ಣಪ್ರಮಾಣದ ಕಲಾವಿದೆಯಾಗಿ ಗುರುತಿಸಿಕೊಂಡರು. ಮತ್ತೆ ಅವರು ಹಿಂದಿರುಗಿ ನೋಡಲಿಲ್ಲ.</p>



<p>ನಿಶಾ ಅವರಲ್ಲಿ ಅಡಗಿದ್ದ ಪರಿಪೂರ್ಣ ಕಲಾವಿದೆಗೆ ಪ್ರಶಸ್ತಿ ಗೌರವಗಳು ಅರಸಿ ಬಂದವು. 2018ರಲ್ಲಿ ದ್ವಿಭಾಷೆಗಳಲ್ಲಿ ಝೀ ವಾಹಿನಿಯಲ್ಲಿ ಪ್ರಸಾರವಾದ ಶ್ರೀ ವಿಷ್ಣು ದಶಾವತಾರದಲ್ಲಿ ಲಕ್ಷ್ಮೀ ಪಾತ್ರವನ್ನು ನಿರ್ವಹಿಸಿ, Zee Most Promising face of the year ಪ್ರಶಸ್ತಿಗೆ ಭಾಜನರಾದರು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="1024" src="https://peepalmedia.com/wp-content/uploads/2022/12/image-5-1024x1024.png" alt="" class="wp-image-17233" srcset="https://peepalmedia.com/wp-content/uploads/2022/12/image-5-1024x1024.png 1024w, https://peepalmedia.com/wp-content/uploads/2022/12/image-5-300x300.png 300w, https://peepalmedia.com/wp-content/uploads/2022/12/image-5-150x150.png 150w, https://peepalmedia.com/wp-content/uploads/2022/12/image-5-768x768.png 768w, https://peepalmedia.com/wp-content/uploads/2022/12/image-5-696x696.png 696w, https://peepalmedia.com/wp-content/uploads/2022/12/image-5-1068x1068.png 1068w, https://peepalmedia.com/wp-content/uploads/2022/12/image-5.png 1080w" sizes="auto, (max-width: 1024px) 100vw, 1024px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-full"><img loading="lazy" decoding="async" width="960" height="843" src="https://peepalmedia.com/wp-content/uploads/2022/12/image-4.png" alt="" class="wp-image-17232" srcset="https://peepalmedia.com/wp-content/uploads/2022/12/image-4.png 960w, https://peepalmedia.com/wp-content/uploads/2022/12/image-4-300x263.png 300w, https://peepalmedia.com/wp-content/uploads/2022/12/image-4-768x674.png 768w, https://peepalmedia.com/wp-content/uploads/2022/12/image-4-150x132.png 150w, https://peepalmedia.com/wp-content/uploads/2022/12/image-4-696x611.png 696w" sizes="auto, (max-width: 960px) 100vw, 960px" /></figure>
</div>
</div>



<p>ನಟಿಯಾದರೂ ನೃತ್ಯದ ಮೇಲಿನ ತನ್ನ ಒಲವನ್ನು ಬಿಟ್ಟಿಲ್ಲ ನಿಶಾ.&nbsp; ಡ್ಯಾನ್ಸ್‌ ಒಲಂಪಿಕ್ಸ್‌ ಎಂದೇ ಕರೆಯಲ್ಪಡುವ dance world cup 2019ರಲ್ಲಿ ಭಾರತವನ್ನು ಪ್ರತಿನಿಧಿಸಿ, ಜಾನಪದ ವಿಭಾಗದಲ್ಲಿ ಎರಡು ಪದಕಗಳನ್ನು ಬಾಚಿಕೊಂಡರು. ಸುಮಾರು 50 ದೇಶಗಳ ಸ್ಪರ್ಧಿಗಳೊಡನೆ ಭಾಗವಹಿಸಿ ಡ್ಯುಯೆಟ್‌ ವಿಭಾಗದಲ್ಲಿ ಚಿನ್ನ ಹಾಗೂ ಸೋಲೋ ವಿಭಾಗದಲ್ಲಿ ಕಂಚಿನ ಪದಕ ಪಡೆದು ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ನೃತ್ಯ ಕ್ಷೇತ್ರದಲ್ಲಿನ ತನ್ನ ಸಾಧನೆಯ ಕೀರ್ತಿಯನ್ನು ಗುರು ರೇಖಾ ಜಗದೀಶ್ ಅವರಿಗೆ ಅರ್ಪಿಸಿ ವಿನಮ್ರತೆ ತೋರವ ನಿಶಾ ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಸರಳ ಸುಂದರಿ.</p>



<p>ಅದ್ರಿಕಾ ನೃತ್ಯ ಸಂಸ್ಥೆ ನಡೆಸುವ ನಿಶಾ, ಗ್ರಾಮೀಣ ಭಾಗದ ನೂರಾರು ಬಡ ಮಕ್ಕಳಿಗೆ ಉಚಿತವಾಗಿ ನೃತ್ಯ ಪಾಠ ಮಾಡಿದ್ದಾರೆ. ʼವುಮೆನ್ಸ್‌ ಡೇʼ ಸಿನಿಮಾದಲ್ಲಿ ನಟಿಸಿರುವ ಇವರು ಮುಂದೆ ತೆರೆಕಾಣಲಿರುವ ಪಂಚಮ ಅಧ್ಯಾಯ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.</p>



<figure class="wp-block-image size-full"><img loading="lazy" decoding="async" width="960" height="640" src="https://peepalmedia.com/wp-content/uploads/2022/12/image-6.png" alt="" class="wp-image-17235" srcset="https://peepalmedia.com/wp-content/uploads/2022/12/image-6.png 960w, https://peepalmedia.com/wp-content/uploads/2022/12/image-6-300x200.png 300w, https://peepalmedia.com/wp-content/uploads/2022/12/image-6-768x512.png 768w, https://peepalmedia.com/wp-content/uploads/2022/12/image-6-150x100.png 150w, https://peepalmedia.com/wp-content/uploads/2022/12/image-6-696x464.png 696w" sizes="auto, (max-width: 960px) 100vw, 960px" /></figure>



<p>ನಟನೆ, ನೃತ್ಯದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವುದು ನಿಶಾ ಕನಸು. ಈಗಾಗಲೇ ಶಿಕ್ಷಕಿಯಾಗಿ ಸೈ ಎನಿಸಿ ಕೊಂಡಿದ್ದಾರೆ. ಪ್ರಸ್ತುತ ಮೆಜೆಸ್ಟಿಕ್ ಶಾಖೆಯ ಸಾರ್ವಜನಿಕ ಸಂವಹನ ಹಾಗೂ ರಂಗಭೂಮಿ ಶಿಕ್ಷಕಿಯಾಗಿ ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.</p>



<p>ʼಜೀವನದಲ್ಲಿ ಅಹಿತಕರ ಘಟನೆಗಳು ಸಂಭವಿಸಿ ಬದುಕು ಕೆಟ್ಟದಾಗಿ ಪರಿಣಮಿಸಿದರೂ, ನಮ್ಮ ನಾಳೆಗಳು ಖಂಡಿತಾ ಚೆನ್ನಾಗಿರುತ್ತವೆʼ ಎಂದು ಅಮೇರಿಕಾದ ಖ್ಯಾತ ಕವಿ ಹಾಗೂ ಹೋರಾಟಗಾರ್ತಿ ಮಾಯಾ ಏಂಜೆಲೋ ಭಾಷಣವೊಂದರಲ್ಲಿ ಹೇಳಿದ್ದರು. ಈ ಮಾತುಗಳನ್ನು ಪುಷ್ಟೀಕರಿಸಲು ನಿಶಾಗಿಂತ ಒಳ್ಳೆಯ ಉದಾಹರಣೆಯನ್ನು ಎಲ್ಲಿ ಹುಡುಕುವುದು? &nbsp;&nbsp;</p>



<p>ʼನಿಮ್ಮ ಹೃದಯದ ಮಾತನ್ನು ಆಲಿಸಿ ಅದು ನಿಮ್ಮನ್ನು ಗುರಿಯೆಡೆಗೆ ಒಯ್ಯುತ್ತದೆ. ಜೀವನವು ಏಳು ಬೀಳುಗಳ ಪಯಣ, ಸರಿಯಾದ ಆಯ್ಕೆ ಮಾಡಿ ಬದುಕಿನ ಹಾದಿಯಲ್ಲಿ ನಡೆಯುವುದು ನಮ್ಮ ಕೈಯ್ಯಲ್ಲಿದೆʼ ಎಂದು ಗೆಲುವಿನ ನಗೆ ಬೀರುವ &nbsp;ನಿಶಾ ಅವರ ಕನಸಿನ ಮನೆ ಇನ್ನಷ್ಟೂ ವಿಸ್ತಾರವಾಗಲಿ, ಯಶಸ್ಸು ಅವರನ್ನು ಹಿಂಬಾಲಿಸಲಿ.</p>



<p>ನವ್ಯಶ್ರೀ</p>



<p>ಪತ್ರಕರ್ತೆ</p>
]]></content:encoded>
					
		
		
			</item>
		<item>
		<title>ಸಾಂತ್ವನದ ಸಾಲುಗಳಿಗೆ ಹಂಬಲಿಸಿದೆ ಮನ</title>
		<link>https://peepalmedia.com/santvanada-saalugalige-hambaliside-mana-by-navyashri-shetty/</link>
		
		<dc:creator><![CDATA[Peepal Media]]></dc:creator>
		<pubDate>Tue, 29 Nov 2022 02:54:04 +0000</pubDate>
				<category><![CDATA[ಯುವ ನೋಟ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[yuvanota]]></category>
		<guid isPermaLink="false">https://peepalmedia.com/?p=16853</guid>

					<description><![CDATA[ಇನ್ನೊಬ್ಬರು ಜೊತೆಯಾಗಬೇಕು, ನಮ್ಮ ನೋವು ಹಂಚಿಕೊಳ್ಳಬೇಕು ಎನ್ನುವ ಅತಿ ನಿರೀಕ್ಷೆಗಳಿಂದ ದೂರವಿರುವುದು ಬಹು ಒಳಿತು. ಮರ ಬೃಹತ್ ಆಗಿ ಬೆಳೆದು ರೆಂಬೆ ಕೊಂಬೆಗಳು ಇದ್ದರೂ ಅದು ನಂಬಿರುವುದು ಬೇರನ್ನು. ನಾವು ಕೂಡ ಮರದಂತೆ ಇರುವುದು ಕಲಿಯಬೇಕಿದೆ ಎಂಬ ಹಂಬಲ ಕುಂದಾಪುರದ ನವ್ಯಶ್ರೀ ಶೆಟ್ಟಿಯವರದು ಸಂಬಂಧಗಳಲ್ಲಿ ಜಗಳ, ಮುನಿಸು, ಮನಸ್ತಾಪ ಎಲ್ಲವೂ ಸಾಮಾನ್ಯ. ಒಮ್ಮೊಮ್ಮೆ ನಾವು ತೀರಾ ಆತ್ಮೀಯರ ಜೊತೆ ಜಗಳ ಮಾಡಿಕೊಂಡಾಗ ಸಾಂತ್ವನದ ಮಾತುಗಳಿಗೆ ಹಂಬಲಿಸುತ್ತೇವೆ. ಅವರಿಂದ ಕ್ಷಮೆಯ ನಿರೀಕ್ಷೆಯ ಜೊತೆಗೆ ಸಮಾಧಾನದ ಮಾತುಗಳಿಗೆ ಹಾತೊರೆಯುತ್ತೇವೆ. ಜಗಳದ [&#8230;]]]></description>
										<content:encoded><![CDATA[
<h5 class="has-text-align-center has-very-light-gray-to-cyan-bluish-gray-gradient-background has-background wp-block-heading"><strong>ಇನ್ನೊಬ್ಬರು ಜೊತೆಯಾಗಬೇಕು, ನಮ್ಮ ನೋವು ಹಂಚಿಕೊಳ್ಳಬೇಕು ಎನ್ನುವ ಅತಿ ನಿರೀಕ್ಷೆಗಳಿಂದ ದೂರವಿರುವುದು ಬಹು ಒಳಿತು. ಮರ ಬೃಹತ್ ಆಗಿ ಬೆಳೆದು ರೆಂಬೆ ಕೊಂಬೆಗಳು ಇದ್ದರೂ ಅದು ನಂಬಿರುವುದು ಬೇರನ್ನು. ನಾವು ಕೂಡ ಮರದಂತೆ ಇರುವುದು ಕಲಿಯಬೇಕಿದೆ ಎಂಬ ಹಂಬಲ </strong><strong>ಕುಂದಾಪುರದ ನವ್ಯಶ್ರೀ ಶೆಟ್ಟಿಯವರದು</strong></h5>



<p class="dropcapp1">ಸಂಬಂಧಗಳಲ್ಲಿ ಜಗಳ, ಮುನಿಸು, ಮನಸ್ತಾಪ ಎಲ್ಲವೂ ಸಾಮಾನ್ಯ. ಒಮ್ಮೊಮ್ಮೆ ನಾವು ತೀರಾ ಆತ್ಮೀಯರ ಜೊತೆ ಜಗಳ ಮಾಡಿಕೊಂಡಾಗ ಸಾಂತ್ವನದ ಮಾತುಗಳಿಗೆ ಹಂಬಲಿಸುತ್ತೇವೆ. ಅವರಿಂದ ಕ್ಷಮೆಯ ನಿರೀಕ್ಷೆಯ ಜೊತೆಗೆ ಸಮಾಧಾನದ ಮಾತುಗಳಿಗೆ ಹಾತೊರೆಯುತ್ತೇವೆ. ಜಗಳದ ಕೋಪ ತಣಿಯುವ ತನಕ ಕಾಯುವ ತಾಳ್ಮೆ ನಮಗಿರುವುದಿಲ್ಲ. ಕ್ಷಣಿಕವಾಗಿ ನಮಗೆ ಸಾಂತ್ವನದ ಮಾತುಗಳು ಬೇಕು.&nbsp;&nbsp;ಅದು ನಾವು ಪ್ರೀತಿಸುವ ಜೀವದಿಂದ ಸಿಕ್ಕರೆ ಇನ್ನಷ್ಟು ಹಿತ. ಇನ್ಯಾರಿಂದ ದೊರೆತರೂ ಅದು ಕಿರಿ ಕಿರಿ.</p>



<p>ಮುನಿಸು ಮುಂದುವರೆದಾಗ ನಮಗೆ ನಾವೇ ಸಂತೈಸಿಕೊಳ್ಳಲು ದಾರಿ ಹುಡುಕುತ್ತೇವೆ. ಆ ದಾರಿಯಲ್ಲಿ ಸಾಗಿದಾಗ ನಮಗೆ ಸಿಗುವುದು ಸಾಲುಗಳು. ಬೇಜಾರಾದಾಗ, ಇನ್ನೊಬ್ಬರ ಬಳಿ ಹೇಳಿಕೊಳ್ಳಲಾಗದ ಸಂದಿಗ್ಧತೆಯಲ್ಲಿದ್ದಾಗ ನಾವು ಇನ್ಯಾರೋ ಬರೆದ ಸಾಲುಗಳ ಮೊರೆ ಹೋಗುತ್ತೇವೆ. ಜಾಲತಾಣಗಳ ಹಲವು ವೇದಿಕೆಗಳಲ್ಲಿ ಸಿಗುವ ಸ್ಪೂರ್ತಿಯ ಹಿತವಚನದ ಮಾತುಗಳನ್ನು ಹುಡುಕುತ್ತೇವೆ. ಆ ಮಾತುಗಳ ಸಾಲುಗಳನ್ನು ನಮಗೆ ನಾವು ಅನ್ವಯಿಸಿಕೊಂಡು ಬಿಡುತ್ತೇವೆ. ಅದಾಗಲೇ ನೊಂದಿರುವ ಮನಕ್ಕೆ ಆ ಸಾಲುಗಳು ಅರೆಕಾಲಿಕ&nbsp; ಉಪಶಮನದಂತೆ ಭಾಸವಾಗುತ್ತದೆ. ನಮ್ಮನ್ನು ನೋಯಿಸಿದವರು ನೋಡಲಿ ಎನ್ನುವ ಕಾರಣಕ್ಕೆ ಸ್ಟೇಟಸ್ ಗಳಲ್ಲಿ ಬರೆದುಕೊಳ್ಳುತ್ತೇವೆ.ಅವರು ನೋಡಿದ ತಕ್ಷಣ ಒಂದು ರೀತಿಯ ನಿಟ್ಟುಸಿರು. ಸಾಲುಗಳು ಸಾಂತ್ವನ ನೀಡಿದ ಸಂತೃಪ್ತಿ ತೆರೆಮರೆಯಲ್ಲಿ ನಮ್ಮನ್ನು ಆವರಿಸಿ ಬಿಡುತ್ತದೆ.</p>



<p>ಆದರೆ ಅದೆಷ್ಟು ವಿಚಿತ್ರ ಅಲ್ವಾ? ಪರಸ್ಪರ ಸಂವಹನ ಬದುಕಿನ ಅವಿಭಾಜ್ಯ ಎಂದು ಭಾವಿಸುವ ನಾವುಗಳೇ ಅಕ್ಷರದ ಸಾಲುಗಳಿಗೆ&nbsp; ನಮ್ಮನ್ನು ನಾವು ಸಂತೈಸಿಕೊಳ್ಳುತ್ತೇವೆ. ಮನುಷ್ಯ ಭಾವುಕ ಜೀವಿ. ಅವನ ಭಾವುಕತೆಗಳನ್ನು ಬದಲಾಯಿಸುವ ಅಲಿಖಿತ ಶಕ್ತಿ ಬರಹ ರೂಪದ ಅಕ್ಷರಕ್ಕಿದೆ. ಜೀವನದ ಖುಷಿ, ದುಃಖಗಳಲ್ಲಿ ಯಾರೋ ಎಂದೋ ಬರೆದ ಸಾಲುಗಳು ಪ್ರಸ್ತುತವಾಗಿ ಬಿಡುತ್ತವೆ.</p>



<p>ಬೇಸರವಾದಾಗ, ಖುಷಿಯಾದಾಗ ಮಾತ್ರವಲ್ಲ&nbsp; ನಿತ್ಯದ ಬದುಕಿನ ಜಂಜಾಟಗಳ ನಡುವೆ ನಮಗೊಂದು ಬಿಡುವಿನ ನಿಲ್ದಾಣಬೇಕೆಂದು ಅನಿಸುತ್ತದೆ. ಆ ನಿಲ್ದಾಣ ನಮ್ಮನ್ನು ಎಲ್ಲ ಒತ್ತಡಗಳಿಂದ ಮುಕ್ತಗೊಳಿಸಬೇಕೆಂದು ನಿರೀಕ್ಷೆ ಮಾಡುತ್ತೇವೆ.&nbsp;ಆ ಸಮಯದಲ್ಲಿ ಮತ್ತೆ&nbsp; ಕೆಲವೊಮ್ಮೆ ಮನದ ಮಾತುಗಳನ್ನು ಅಕ್ಷರ ರೂಪದಲ್ಲಿ ಬದಲಾದ ಹಿತ ಸಾಲುಗಳನ್ನು ಅಪ್ಪಿಕೊಳ್ಳುತ್ತೇವೆ.&nbsp;</p>



<p>ಮನುಷ್ಯ ಅಂದಾಗ ಇನ್ನೊಬ್ಬರಿಂದ&nbsp; ನಿರೀಕ್ಷೆ&nbsp; ಮಾಡುವುದು ಸಾಮಾನ್ಯ.&nbsp; ಆ ದೆಸೆಯಲ್ಲಿ ನಿರಾಸೆಗಳು ಆಗುವುದು ಕೂಡ ಸಹಜ. ಈ ವೇಳೆ ನಮ್ಮ ಸ್ಥಿತಿಗೆ ಪೂರಕವಾಗುವಸಾಲು, ಪದ್ಯಗಳ ಮೊರೆ ಹೋಗುತ್ತೇವೆ. ಅವುಗಳ ನಡುವೆ ಕೊಂಚ ನಿರ್ಲಿಪ್ತವಾಗಿ ಬಿಡುತ್ತೇವೆ. ಇದು ಇತ್ತೀಚಿನ ದಿನಗಳಲ್ಲಿ ನೊಂದ ಮನಸುಗಳ ಸಹಜ ಕ್ರಿಯೆ.</p>



<p>ಆದರೆ ಪ್ರತಿ ಬಾರಿ ಅಂತಹ ಕ್ರಿಯೆ ಎಷ್ಟು ಸರಿ ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ.&nbsp;ನಮ್ಮ ಮನದ ನೋವಿಗೆ&nbsp; ಯಾವುದೋ ಸಾಲು, ಪದ್ಯ ಮದ್ದಾಗುವುದು ಪ್ರತಿ ಬಾರಿ ಒಳ್ಳೆಯದಲ್ಲ. ಅದು ಅಭ್ಯಾಸವಾಗಿಅವಲಂಬನೆಯಾಗಿ ಬಿಡುತ್ತದೆ. ನಮಗೆ ಸ್ಪಷ್ಟ ಅರಿವಿರುತ್ತದೆ, ಜಾಲತಾಣಗಳ ಸಾಲುಗಳು ಎಲ್ಲವೂ ವಾಸ್ತವವಲ್ಲ ಅನ್ನುವ ಸತ್ಯ.&nbsp; ಅವುಗಳು ನಮ್ಮ ಕಲ್ಪನಾ ಜಗದ ಅಕ್ಷರಗಳು. ಆದರೆ ಅವುಗಳನ್ನೇ ಒಗ್ಗಿಕೊಂಡು ಬಿಡುವುದು ಸರಿಯಲ್ಲ.</p>



<p>ಬದುಕೇ ಬೇರೆ, ಪದ್ಯ, ಅಕ್ಷರಗಳೇ ಬೇರೆ. ನಿಜ. ಬೇಸರವಾದಾಗ, ಖುಷಿಯಾದಾಗ ಅಂತಹ ಚಟುವಟಿಕೆ&nbsp;ಸಂತೋಷ ಆರಾಮ ಎಲ್ಲವನ್ನೂ ನೀಡಬಹುದು. ಆದರೆ ಅದು ಆ ಕ್ಷಣಕ್ಕೆ ಮಾತ್ರ. ನಮ್ಮ ಆ ಸಮಯದ ಮನಸಿನ ತಳಮಳದ ಮೇಲೆ ಅದು ಪರಿಣಾಮ ಬೀರಬಹುದೇ ಹೊರತು ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ಖುಷಿಯಾದಾಗ ಮುಕ್ತ ಮನಸ್ಸಿನ ಪದ್ಯಗಳನ್ನು ಆಲಿಸಿ, ಬರಹಗಳನ್ನು ಓದಿ. ಆದರೆ ಬೇಸರವಾದಾಗ&nbsp; ಸಾಲುಗಳು ಶಾಶ್ವತ ಸಾಂತ್ವನ ಅನ್ನುವ ಭ್ರಮೆಯಲ್ಲಿರಬೇಡಿ. ಅಕ್ಷರವನ್ನುಅಕ್ಷರವಾಗಿ ನೋಡಿ.&nbsp;</p>



<p>ಅದರಾಚೆಗೆ ನಿಮ್ಮ ಭಾವನೆಗಳ&nbsp; ನಿಯಂತ್ರಿಸಿ ಇಲ್ಲವೆಂದರೆ ಕೆಲವೊಮ್ಮೆ ನೀವೇ ಮೂರ್ಖರಂತೆ ಆಗಿ ಬಿಡುತ್ತೀರಿ. ಬೇಸರವಾದಾಗ ಬರೆದುಪದ್ಯಗಳನ್ನು ಸ್ಟೇಟಸ್ ಹಾಕಿಕೊಂಡು ಬಿಡುವವರನ್ನು ನಾವು ನೋಡಿರುತ್ತೇವೆ. ಒಂದೆರೆಡು ಬಾರಿ ವಿಚಾರಿಸಿ ಕೂಡ ಇರಬಹುದು . ಆದರೆ ಪ್ರತಿ ಸಾರಿ ಹೀಗೆ ಮಾಡಿದಾಗ ಇವರು ಇರೋದೇ ಹೀಗೆ ಎಂದು ನಿರ್ಲಕ್ಷ್ಯ ಮಾಡಿ ಬಿಡುತ್ತೇವೆ. ಅಂತಹ ಮಂದಿಯ ಪಟ್ಟಿಗೆ ನಾವು ಸೇರಬಾರದು. ಇನ್ನೊಬ್ಬರು ನಮ್ಮನ್ನು ಸಂತೈಸುತ್ತಾರೆ ಎನ್ನುವ ಭ್ರಮೆಯನ್ನು ಬಿಟ್ಟುಬಿಡಬೇಕು. ನಮಗೆ ನಾವೇ, ನಮ್ಮನ್ನು ನಾವೇ ಸಂತೈಸಿಕೊಳ್ಳಬೇಕು ಎನ್ನುವ ವಾಸ್ತವನ್ನು ಒಪ್ಪಿಕೊಳ್ಳಬೇಕು.</p>



<p>ಇನ್ನೊಬ್ಬರು ಜೊತೆಯಾಗಬೇಕು, ನಮ್ಮ ನೋವು ಹಂಚಿಕೊಳ್ಳಬೇಕು ಎನ್ನುವ ಅತಿ ನಿರೀಕ್ಷೆಗಳಿಂದ ದೂರವಿರುವುದು ಬಹು ಒಳಿತು. ಮರ ಬೃಹತ್ ಆಗಿ ಬೆಳೆದು ರೆಂಬೆ ಕೊಂಬೆಗಳು ಇದ್ದರೂ ಅದು ನಂಬಿರುವುದು ಬೇರನ್ನು. ನಾವು ಕೂಡ ಮರದಂತೆ ಇರುವುದು ಕಲಿಯಬೇಕಿದೆ. ಎಷ್ಟೇ ಸ್ನೇಹಿತರು, ಸಂಬಂಧಿಕರು, ಹಿತೈಷಿಗಳು ನಮ್ಮ ನಡುವೆ ಇರಬಹುದು. ಆದರೆ ನಮಗೆ ನಾವೇ ಆಸರೆ, ನಮ್ಮ ಬದುಕನ್ನು ನಾವೇ ನೋಡಿಕೊಳ್ಳಬೇಕು ಎನ್ನುವ ಸತ್ಯ ಒಪ್ಪಿಕೊಳ್ಳೋಣ. ಎಲ್ಲವನ್ನೂ ವಾಸ್ತವದ ಕಣ್ಣಿನಿಂದ ನೋಡುವುದನ್ನು ಅಭ್ಯಾಸ ಮಾಡಿಕೊಳ್ಳೋಣ. ಆಗ&nbsp; ಬದುಕಿನ ಹಲವು ದುರಂತಗಳಿಂದ ತಪ್ಪಿಸಿಕೊಳ್ಳಬಹುದು.</p>
]]></content:encoded>
					
		
		
			</item>
		<item>
		<title>ಆ ಫೋಟೋ ಫ್ರೇಮ್ ಒಡೆಯಲಿ</title>
		<link>https://peepalmedia.com/a-photo-frem-odeyali/</link>
		
		<dc:creator><![CDATA[Guru Sulya]]></dc:creator>
		<pubDate>Fri, 14 Oct 2022 12:07:45 +0000</pubDate>
				<category><![CDATA[ಯುವ ನೋಟ]]></category>
		<category><![CDATA[guru sulya]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[yuvanota]]></category>
		<guid isPermaLink="false">https://peepalmedia.com/?p=10683</guid>

					<description><![CDATA[ʼಯುವ ನೋಟʼ&#160; ಜಗತ್ತಿನ ಆಗು ಹೋಗುಗಳ ಕಡೆಗೆ ಬೆರಗು ಕಣ್ಣಿಂದ ನೋಡುತ್ತಾ ತಮ್ಮ ಲೋಕ ದೃಷ್ಟಿಯನ್ನು ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿರುವ ಯುವ ಜನರಿಗೆ ಪೀಪಲ್‌ ಮೀಡಿಯಾ ಒದಗಿಸಿರುವ ವೇದಿಕೆ. ಬರವಣಿಗೆ ಕ್ಷೇತ್ರಕ್ಕೆ ಹೊಸದಾಗಿ ಕಾಲಿಡಲು ಆಶಿಸುವವರಿಗೂ ಈ ವೇದಿಕೆ ಮುಕ್ತವಾಗಿದೆ. ಈ ಅಂಕಣದ ಮೊದಲ ನೋಟ ಗುರು ಸುಳ್ಯ ಅವರದು. &#8220;ಇನ್ನು ಮುಂದೆ ನನ್ನ ಬಯಾಲೋಜಿಕಲ್ ತಂದೆಯ ಜೊತೆ ನನಗೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಮತ್ತು ನನ್ನ ಹೆಸರನ್ನು ನನ್ನಿಷ್ಟದಂತೆ ಬದಲಾಯಿಸಿಕೊಂಡು, ನನ್ನ ತಾಯಿಯ ಹೆಸರನ್ನು ಸರ್ [&#8230;]]]></description>
										<content:encoded><![CDATA[
<p><strong>ʼ</strong><strong>ಯುವ ನೋಟ</strong><strong>ʼ&nbsp; </strong><strong>ಜಗತ್ತಿನ ಆಗು ಹೋಗುಗಳ ಕಡೆಗೆ ಬೆರಗು ಕಣ್ಣಿಂದ ನೋಡುತ್ತಾ ತಮ್ಮ ಲೋಕ ದೃಷ್ಟಿಯನ್ನು ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿರುವ ಯುವ ಜನರಿಗೆ ಪೀಪಲ್‌ ಮೀಡಿಯಾ ಒದಗಿಸಿರುವ ವೇದಿಕೆ. ಬರವಣಿಗೆ ಕ್ಷೇತ್ರಕ್ಕೆ ಹೊಸದಾಗಿ ಕಾಲಿಡಲು ಆಶಿಸುವವರಿಗೂ ಈ ವೇದಿಕೆ ಮುಕ್ತವಾಗಿದೆ. ಈ ಅಂಕಣದ ಮೊದಲ ನೋಟ ಗುರು ಸುಳ್ಯ ಅವರದು.</strong></p>



<p>&#8220;ಇನ್ನು ಮುಂದೆ ನನ್ನ ಬಯಾಲೋಜಿಕಲ್ ತಂದೆಯ ಜೊತೆ ನನಗೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಮತ್ತು ನನ್ನ ಹೆಸರನ್ನು ನನ್ನಿಷ್ಟದಂತೆ ಬದಲಾಯಿಸಿಕೊಂಡು, ನನ್ನ ತಾಯಿಯ ಹೆಸರನ್ನು ಸರ್ ನೇಮ್ ಆಗಿ ಇಟ್ಟುಕೊಳ್ಳುತ್ತೇನೆ. ಇದಕ್ಕಾಗಿ ಕಾನೂನಿನ ಅನುಮತಿ ಕೋರುತ್ತೇನೆ ಮತ್ತು ಈ ಮೂಲಕ ನನಗೆ ಹೊಸ ಜನ್ಮಪ್ರಮಾಣ ಪತ್ರ ನೀಡಬೇಕಾಗಿ ವಿನಂತಿಸುತ್ತೇನೆ&#8221;. ಇದು ಮನುಷ್ಯರ ದುಡ್ಡಿನ ಲೋಕದ ಅತಿ ಶ್ರೀಮಂತರಲ್ಲಿ ಒಬ್ಬನಾದ &#8216;ಎಲಾನ್ ಮಸ್ಕ್&#8217; ನ &#8216;ಟ್ರಾನ್ಸ್‌ ಜೆಂಡರ್&#8217; ಮಗಳು &#8216;ವಿವಿಯನ್ ಜೆನ್ನ ವಿಲ್ಸನ್&#8217;&nbsp; ನ್ಯೂಯಾರ್ಕಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ. ನ್ಯಾಯಾಲಯ ಇದನ್ನು ಮಾನ್ಯ ಮಾಡಿದೆ ಕೂಡ. ಈ ಘಟನೆಯನ್ನು ಉಲ್ಲೇಖಿಸಿದ್ದು, ನಮ್ಮ ಕುಟುಂಬ ಎನ್ನುವ ಪರಿಕಲ್ಪನೆ, ಒಡೆಯದೆಯೇ ಜಡ್ಡುಗಟ್ಟಿರುವ ಅದರ ಕಟ್ಟುಪಾಡುಗಳ ಬಗ್ಗೆ ಅಲೋಚಿಸಲಿ ಎಂಬ ಕಾರಣಕ್ಕಾಗಿ. ಅನುಕೂಲಸ್ಥರ ಮನೆಗಳಲ್ಲಿ ಇವೆಲ್ಲವು ನಡೆಯುತ್ತದೆ ಎಂದು ನೀವು ಅನ್ನಬಹುದು. ಆದರೆ ಪ್ರತಿ ಮನೆಯ, ಪ್ರತಿ ಮನುಷ್ಯರಿಗೂ ತಮ್ಮ ಬದುಕನ್ನು ರೂಪಿಸಿಕೊಳ್ಳುವ, ಬದುಕುವ ಹಕ್ಕಿದೆ ಅಲ್ವೇ ? &#8216;ಬಡವ ಮಡುಗಿದಂಗಿರು&#8217; ಅನ್ನೋ ಕ್ರೂರವಾದ ನುಡಿಗಟ್ಟುಗಳು ಮೇಲ್ವರ್ಗದವರ ಕೊಡುಗೆಗಳು.&nbsp; ಇದನ್ನು ಒಡೆದು ಬಾಳಬೇಕಾದುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ.</p>



<p>ನಮ್ಮ ಸಮಾಜ ಮತ್ತದರ ನಾಯಕರುಗಳು, ನಮ್ಮ ಮನೆ ಮತ್ತದರ ಯಜಮಾನರುಗಳ ಮುಂದುವರಿಕೆಯಾಗಿಯೇ ಇರುವಂತದ್ದು. ನಮ್ಮ ಸರಕಾರಗಳು, ಸ್ವಾಯತ್ತ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ವ್ಯಾಪಾರ ವಹಿವಾಟುಗಳು ಪುರುಷಾಧಿಪತ್ಯದ ಉಕ್ಕಿನ ಕೈಗಳಲ್ಲಿಯೇ ಇವೆ. ಹೀಗಿರುವಾಗ ಎಲ್ಲವೂ ಸರಿಯಾಗಿದೆ ಅನ್ನುವಂತೆ ಬದುಕೋದು ಯಾಕೆ ಸಾಧ್ಯವಾಗ್ತಿದೆ ? ನಮ್ಮ ನಮ್ಮ ಮನೆಗಳಲ್ಲಿ ಸಮಾನತೆ ಬೇಕೆಂಬ ಅಲೋಚನೆ ಕನಿಷ್ಠ ಪಕ್ಷ ಸಂವಿಧಾನದ ಅರಿವು ಇರುವವರಿಗಾದರು ಬರಬೇಕಲ್ಲವೆ?&nbsp; ತಂದೆ-ತಾಯಿ, ಯಂತ್ರದಂತ ಕೆಲಸ, ತಂದೆ ತಾಯಿಯರ ಋಣ ತೀರಿಸಲು ಎಂಬಂತೆ ಬೆಳೆಸಲ್ಪಡುವ ಮಕ್ಕಳು, ಅವರ ಮದುವೆ ಮತ್ತು ಇವಕ್ಕೆಲ್ಲಾ ಅಂಟಿಸಿಕೊಂಡಿರುವ ಸೆಂಟಿಮೆಂಟ್ ಇವುಗಳಲ್ಲೇ ಮುಳುಗಿ ಹೋದರೆ ಹೇಗೆ!. ಪೂರ್ತಿ ಜಗತ್ತು ವಿಕಸನಗೊಳ್ಳುತ್ತಲೇ ಇದೆ ಎಂಬುದು ಆಧಾರಗಳೊಂದಿಗೆ ವಿಜ್ಞಾನ ಕಂಡುಕೊಂಡಿರುವ ಸತ್ಯ. ಇವನ್ನೆಲ್ಲಾ ಅನ್ವೇಷಿಸಿ ಪತ್ತೆ ಹಚ್ಚಿರುವ ಮನುಷ್ಯರು ಮತ್ತು ನಮ್ಮ ಮೆದುಳು ಕೂಡ ಈ ವಿಕಸನದ ಭಾಗ. ವಿಜ್ಞಾನವೆಂದರೆ ನಮಗೆ ಸಂಬಂಧವಿರದ ಯಾರೋ ಅನ್ವೇಷಿಸುವ ನಿಗೂಢ ಕ್ರಿಯೆಯೇನಲ್ಲ. ಮೊದ ಮೊದಲು ಮಡಿಕೆ ಕಂಡು ಹಿಡಿದ ಮನುಷ್ಯರು ಕೂಡ ವಿಜ್ಞಾನಿಗಳೇ.&nbsp;</p>



<p>ನಮ್ಮ ಇತಿಹಾಸ, ಅನುಭವ, ಬಾಲ್ಯದ trauma ಗಳು ನಮ್ಮನ್ನು ರೂಪಿಸಿದಂತೆಯೇ, ಮನುಷ್ಯ ಬುದ್ಧಿ-ಭಾವಗಳು ನಿತ್ಯ ಹೊಸತಾಗುತ್ತಿರುವುದನ್ನು ಅರಿಯಬೇಕು; ತೆರೆದುಕೊಳ್ಳಬೇಕು. ಮನುಷ್ಯರು &#8216;ಬದುಕು&#8217; ಎಂದು ಏನನ್ನು ವೈಭವವೀಕರಿಸುತ್ತಾರೋ, ಅದು ಜೀವ ವಿಕಾಸದ ಭಾಗವಷ್ಟೇ. ಆದ್ದರಿಂದ, ಕನಿಷ್ಠ ಜೀವಶಾಸ್ತ್ರದ ಪಾಠಗಳನ್ನು ಪೋಷಕರಾಗುವ ಮೊದಲು ಕಲಿಯಬೇಕು. ಆ ಮೂಲಕ ಬೇರೆಯದೆ ಜಗತ್ತನ್ನು ಒಳಗಿಟ್ಟುಕೊಂಡು ಬೆಳೆಯುವ ನಮ್ಮ ಮಕ್ಕಳನ್ನು ವಿಶಾಲವಾಗಿ ಪ್ರೀತಿಸುವುದು, ಬೆಂಬಲಿಸುವುದು ಸಾಧ್ಯವಾಗಬೇಕು. ಸಂಘ ಜೀವಿಗಳಾದ ಮಾನವರು ಗುಂಪುಗಳಾಗಿಯೇ ಬದುಕುವವರು. ಆದರೆ, ಆ ಗುಂಪುಗಳು ಬದಲಾಗುತ್ತಾ ಹೋಗುತ್ತವೆ. ತಾಯಿಯೇ ಪ್ರಧಾನವಾಗಿದ್ದ ಗುಂಪುಗಳಲ್ಲಿ ವಾಸಿಸುತ್ತಿದ್ದ, ಜೊತೆಯಲ್ಲಿ ಬದುಕುವವರೆಲ್ಲರ ಪೋಷಣೆಯಲ್ಲಿ ಬೆಳೆಯುತ್ತಿದ್ದವರು ಮಕ್ಕಳು. ಬಹುಶಃ ಸ್ಥಿರ ಕೃಷಿ ಪದ್ಧತಿಯ ನಂತರದ ದಿನಗಳಲ್ಲಿ ಹೆಚ್ಚು ಪುರುಷ ಪ್ರಧಾನವೂ, ವ್ಯಕ್ತಿ ಸ್ವಾತಂತ್ರ್ಯ ಹರಣವೂ ಆದ ಕುಟುಂಬಗಳಾಗಿ ಬದಲಾಯಿತು. ಆ ರೀತಿಯಲ್ಲಿ ಮಣ್ಣು ಮತ್ತು ಹೆಣ್ಣು ಎರಡರ ಮೇಲೂ ಅತ್ಯಾಚಾರಗಳು ನಿರಂತರವಾದುವು.</p>


<div class="wp-block-image">
<figure class="aligncenter size-full"><img loading="lazy" decoding="async" width="554" height="554" src="https://peepalmedia.com/wp-content/uploads/2022/10/WhatsApp-Image-2022-10-14-at-5.49.41-PM.jpeg" alt="" class="wp-image-10694" srcset="https://peepalmedia.com/wp-content/uploads/2022/10/WhatsApp-Image-2022-10-14-at-5.49.41-PM.jpeg 554w, https://peepalmedia.com/wp-content/uploads/2022/10/WhatsApp-Image-2022-10-14-at-5.49.41-PM-300x300.jpeg 300w, https://peepalmedia.com/wp-content/uploads/2022/10/WhatsApp-Image-2022-10-14-at-5.49.41-PM-150x150.jpeg 150w, https://peepalmedia.com/wp-content/uploads/2022/10/WhatsApp-Image-2022-10-14-at-5.49.41-PM-24x24.jpeg 24w, https://peepalmedia.com/wp-content/uploads/2022/10/WhatsApp-Image-2022-10-14-at-5.49.41-PM-48x48.jpeg 48w, https://peepalmedia.com/wp-content/uploads/2022/10/WhatsApp-Image-2022-10-14-at-5.49.41-PM-96x96.jpeg 96w" sizes="auto, (max-width: 554px) 100vw, 554px" /></figure></div>


<p>ಮನುಷ್ಯರ ನಡುವೆ ಹಲವು ತೆರನಾದ ಆಕರ್ಷಣೆಗಳು, ಅನಾಕರ್ಷಣೆಗಳು ಇವೆ. ಪ್ರೇಮ ಮತ್ತು ಕಾಮಕ್ಕೆ ಪರಿಧಿಯನ್ನು ನಿರ್ಧರಿಸಲಾಗುವುದಿಲ್ಲ.&nbsp; ಪ್ರೇಮ, ಕಾಮ, ಹಂಚುವಿಕೆ, ಹೊಣೆಗಾರಿಕೆ, ಬೆಂಬಲ, ಸ್ಥೈರ್ಯ ಎಲ್ಲವನ್ನೂ ಒಂದರಲ್ಲಿ ಗಂಟುಹಾಕಿ ಮದುವೆ, ಕುಟುಂಬ ಎಂದು ಹಾಕುವ ಚೌಕಟ್ಟು ಸರಿಯಾದುದಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಆಲೋಚಿಸಿದರೆ ಅರ್ಥವಾಗುವಂತದ್ದು. ಆದರೆ ಈಗಾಗಲೇ ಬಹುದೊಡ್ಡ ಹಗರಣವಾಗಿ ಬೆಳೆದಿರುವ ಮುಖ ಮತ್ತು ದೇಹ ಸೌಂದರ್ಯವೆಂಬ ಭ್ರಮೆಯನ್ನು, ಆರ್ಥಿಕ ಅಸಮಾನತೆಯ ಕರಾಳತೆಯನ್ನು ಕಿತ್ತು ಹಾಕುವುದು ಅಷ್ಟು ಸುಲಭವೂ ಅಲ್ಲ. ಅದರ ಭಾಗವಾಗಿಯೇ ಮದುವೆಯ ಸಂಕೋಲೆಗೆ ಕೊರಳೊಡ್ಡುವ ಪದ್ಧತಿ ನಿರಂತರವಾಗಿ ಸಾಗಿದೆ. ಬ್ರಾಹ್ಮಣ್ಯದ ಕಡುವಿರೋಧಿಗಳು, ಸ್ತ್ರೀ ಸಮಾನತೆಯ ಹರಿಕಾರರು ಕೂಡ &#8216;ಮಂತ್ರ ಮಾಂಗಲ್ಯ&#8217; ಕ್ಕೆ ಗಂಟು ಬಿದ್ದಿರುವುದು ಯಾಕೋ ಅರ್ಥವಾಗುತ್ತಿಲ್ಲ. ಮಂತ್ರಗಳು ಸಾಯಿಸಿದ ಜೀವಗಳು, ಮಾಂಗಲ್ಯದ ನೇಣಲ್ಲಿ ಬಿದ್ದು ಸತ್ತವರು, ಇನ್ನೂ ಸಾಯುತ್ತಿರುವವರು ಕಾಣುತ್ತಿಲ್ಲವೇ ! ವಿವಾಹ ಮತ್ತು ವಿಚ್ಛೇದನ ಎರಡನ್ನು ಸಮವಾಗಿ ಕಾಣುವುದಾದರು ಸಾಧ್ಯವೇ ಎಂದರೆ, ಅದೂ ಇಲ್ಲ.</p>



<p>ಭಾರತದಲ್ಲಿ ತಮ್ಮ &#8216;ಜೆಂಡರ್&#8217; ಮತ್ತು &#8216; ಸೆಕ್ಷ್ಯುವಲ್ ಓರಿಯಂಟೇಷನ್&#8217; ಕಾರಣವಾಗಿ, ಸರಿಯಾದ ವಿದ್ಯಾಭ್ಯಾಸವು ದೊರೆಯದೆ ಮನೆ ಬಿಟ್ಟು ಓಡಿ ಹೋಗುವವರು ಅದೆಷ್ಟೋ ಮಂದಿ. &#8216;ಲಿಂಗ ಬದಲಾವಣೆ&#8217; ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಾಗ ಕಳಪೆ ಡಾಕ್ಟರುಗಳ ಕಾರಣವಾಗಿ ಮೈಯೆಲ್ಲಾ ನೋವಿನ ಮುದ್ದೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇರುವ ಹಲವಾರು ಜೀವಗಳಿವೆ ಇಲ್ಲಿ. ಕಳೆದ ವರ್ಷ ಕೇರಳದಲ್ಲೆಲ್ಲಾ ಸುದ್ದಿಯಾದ, ಚುನಾವಣೆಗೂ ನಿಂತಿದ್ದ &#8216;ಅನನ್ಯ ಕುಮಾರಿ ಅಲೆಕ್ಸ್&#8221; ಳ ಆತ್ಮಹತ್ಯೆ ಇದಕ್ಕೆ ಒಂದು ಉದಾಹರಣೆ ಅಷ್ಟೇ. ಅದೇ ರೀತಿ ಲೆಸ್ಬಿಯನ್, ಗೇ, ಬೈ ಸೆಕ್ಷ್ಯುವಲ್ ಜೋಡಿಗಳನ್ನು ನಮ್ಮ ಸಮಾಜ ಹಿಂಸಿಸುತ್ತಿರುವುದು ನಡೆದೇ ಇದೆ. ಈ ಹಿನ್ನೆಲೆಯಲ್ಲಿ ನೋಡಿದರೂ &#8216;ಗಂಡಿಗೊಂದು ಹೆಣ್ಣು&#8217; ಎನ್ನುವ ಮದುವೆಯ ಸಂಪ್ರದಾಯ ಅರ್ಥಹೀನವಾಗಿಯೇ ಕಾಣುತ್ತದೆ.</p>



<figure class="wp-block-image size-full"><img loading="lazy" decoding="async" width="678" height="452" src="https://peepalmedia.com/wp-content/uploads/2022/10/WhatsApp-Image-2022-10-14-at-5.49.41-PM-1.jpeg" alt="" class="wp-image-10695" srcset="https://peepalmedia.com/wp-content/uploads/2022/10/WhatsApp-Image-2022-10-14-at-5.49.41-PM-1.jpeg 678w, https://peepalmedia.com/wp-content/uploads/2022/10/WhatsApp-Image-2022-10-14-at-5.49.41-PM-1-300x200.jpeg 300w, https://peepalmedia.com/wp-content/uploads/2022/10/WhatsApp-Image-2022-10-14-at-5.49.41-PM-1-150x100.jpeg 150w" sizes="auto, (max-width: 678px) 100vw, 678px" /></figure>



<p>ದೇಹದ ವ್ಯವಹಾರದಲ್ಲಿ ತೊಡಗುವ ಮುನ್ನ ದೇಹಕ್ಕೆ ತಗುಲುವ ರೋಗಗಳ ಬಗ್ಗೆ, ಒಪ್ಪಿಗೆಯ ಬಗ್ಗೆ, ಗರ್ಭಧಾರಣೆಯ ಬಗ್ಗೆ, ಪರಸ್ಪರರ ದೇಹಗಳ ಬಗ್ಗೆ&nbsp; ತಿಳುವಳಿಕೆ ಇರಬೇಕಾದದ್ದು ಈ ಕಾಲದ ಸಹಜ ಅಗತ್ಯ. ಅದರಲ್ಲೂ ಹೆಣ್ಣು ದೇಹಕ್ಕೆ ಪ್ರಕೃತಿದತ್ತವಾಗಿ ಹೆಚ್ಚಿನ ಹೊರೆ ಮತ್ತು ನೋವು ದಕ್ಕಿದೆ (ಇದನ್ನು ಸೌಭಾಗ್ಯವೆಂದು, ಹೆಣ್ತನದ ಔನ್ನತ್ಯವೆಂದು ಕೊಂಡಾಡುವವರಿಗೇನು ಕಮ್ಮಿಯಿಲ್ಲ). ವಯಸ್ಸುಗಳನ್ನು ಮೀರಿ ಹೆಣ್ಣು, ಗಂಡು, ಟ್ರಾನ್ಸ್‌ ಜೆಂಡರ್ ಇಂಟರ್ ಸೆಕ್ಸ್ &#8211;&nbsp; ಎಲ್ಲಾ ತರದ ಮನುಷ್ಯರ ನಡುವೆ ವಿವಿಧ ರೀತಿಯ ಬಂಧಗಳು ಸಂಭವಿಸುತ್ತವೆ. ನೆನಪಿಡಿ &#8211; &#8220;ಹೆತ್ತರಷ್ಟೇ ತನ್ನ ಮಗು ಆಗುವುದಿಲ್ಲ. ಕುಟುಂಬ ಎಂದರೆ ರಕ್ತ ಸಂಬಂಧಿಗಳಾಗಿರಬೇಕು ಎಂದೇನು ಇಲ್ಲ&#8221;. ಹೀಗಿಲ್ಲದೆ ಹೋದರೆ ಎಲ್ಲವೂ ಉಲ್ಟಾಪಲ್ಟಾ ಆಗುತ್ತದೆ ಎಂದು ಭ್ರಮೆಯಲ್ಲಿರಬೇಡಿ. ಜವಾಬ್ದಾರಿಯೆಂಬುದು ಸಂಪ್ರದಾಯಗಳ ಕಟ್ಟುಪಾಡುಗಳಲ್ಲಿ ಪರೋಕ್ಷವಾಗಿ ಬಂಧಿಸಿಡುವಂತದ್ದಲ್ಲ. ಲೈಸೆನ್ಸ್ ಇರುವ ಸಲ್ಮಾನ್ ಖಾನ್ ನಂತವರು ಎರ್ರಾಬಿರ್ರಿ ಗಾಡಿ ಓಡಿಸಿ ಕೊಲೆ ಮಾಡಬಲ್ಲರು. ಲೈಸೆನ್ಸ್ ಇಲ್ಲದಿರುವ ಟೀನೇಜ್ ಹುಡುಗಿ ತುಂಬಾ ಜಾಗರೂಕಳಾಗಿ ಗಾಡಿ ಚಲಾಯಿಸಬಲ್ಲಳು; ಮನುಷ್ಯರು ಯಂತ್ರಗಳಲ್ಲ ಎಂಬುದಷ್ಟೇ ಮುಖ್ಯ. ಇದೆಲ್ಲದರಾಚೆಗೂ ಮನುಷ್ಯರು ಅದಾಗಲೇ ಭೂಮಿಗೆ ಮಾರಕವಾಗಿ ಆಗಿದೆ. ಜ್ಞಾನ, ವಿಜ್ಞಾನ, ಪ್ರೇಮಗಳು ನಮಗೆ ನಮ್ಮ ಸರಕಾರ, ಶಾಲೆಗಳು ತಲುಪಿಸಿರುವುದಕ್ಕಿಂತಲೂ ಹೆಚ್ಚು ವಿವರಗಳೊಂದಿಗೆ ಮಾನವ ಸಂಕುಲದ ನಡುವೆ ಲಭ್ಯವಿದೆ. ಅಲ್ಪ ಬುದ್ಧಿಯವರಾಗದೇ, ಬುದ್ಧಿವಂತಿಕೆಯ ಅಹಮ್ಮುಗಳನ್ನು ಹೊಂದದೆ, ಅರಿವು ಹಂಚೋಣ. ನಮ್ಮ ಮುಖಗಳು ಫ್ಯಾಮಿಲಿ ಫೋಟೋ ಫ್ರೇಮಿನೊಳಗೆ ಕಾಣುವಷ್ಟು ನೀರಸವು, ಸಂತುಷ್ಟವು ಆದುದಲ್ಲ. ನಾವು ಆ ಫ್ರೇಮಿನ ಒಳಗೆ ಕೂರಿಸಲ್ಪಟ್ಟವರು ಅಷ್ಟೇ. ಆದ ಕಾರಣ ಆ ಫ್ರೇಮ್ ಒಡೆಯಲಿ, ಪ್ರೀತಿ ಹರಿಯಲಿ.</p>



<p> <strong>ಗುರು ಸುಳ್ಯ</strong><br>ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.</p>
]]></content:encoded>
					
		
		
			</item>
	</channel>
</rss>
