Sunday, May 25, 2025

ಸತ್ಯ | ನ್ಯಾಯ |ಧರ್ಮ

ಕುಂದಾಪುರ ಬೀಚ್ ನಲ್ಲಿ ಇಬ್ಬರು ಬೆಂಗಳೂರು ಯುವಕರು ಮುಳುಗಿ ಸಾ*ವು

ಶುಭ ಕಾರ್ಯದ ನಿಮಿತ್ತ ಉಡುಪಿಗೆ ತೆರಳಿದ್ದ ಬೆಂಗಳೂರಿನ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರದ ಬೀಚ್ ಬಳಿ ನಡೆದಿದೆ.

ಕುಂದಾಪುರ ತಾಲೂಕಿನ ಬೀಜಾಡಿ ಬೀಚ್ ನಲ್ಲಿ ಈ ಘಟನೆ ನಡೆದಿದ್ದು ಮೃತಪಟ್ಟ ಯುವಕರು ಬೆಂಗಳೂರಿನವರು ಎಂದು ತಿಳಿದು ಬಂದಿದೆ. ಬೀಜಾಡಿಯ ರೆಸಾರ್ಟ್ ನಲ್ಲಿ ಯುವಕರ ಗುಂಪು ತಂಡ ಇತ್ತು. ಈ ನಡುವೆ ಮರುದಿನ ಬೀಜಾಡಿ ಸಮುದ್ರಕ್ಕೆ ಆಟವಾಡಲು ಹೋದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ವೇಳೆ ಸಮುದ್ರದಲ್ಲಿ ಈಜಲು ಹೋದ 4-5 ಯುವಕರ ಪೈಕಿ ಇಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಒಬ್ಬನ ಶವ ಸಿಕ್ಕಿದೆ. ಮತ್ತೋರ್ವನ ಶವಕ್ಕಾಗಿ ಶೋಧ ಕಾರ್ಯ ನಡೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page