Wednesday, August 20, 2025

ಸತ್ಯ | ನ್ಯಾಯ |ಧರ್ಮ

ದನಗಳ ಕಳ್ಳನೆಂದು ಭಾವಿಸಿ 12ನೇ ತರಗತಿ ವಿದ್ಯಾರ್ಥಿಯನ್ನು ಕೊಂದ ಗೋರಕ್ಷಕರು

ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯ ಗಡ್ಪುರಿ ಬಳಿ ವಿದ್ಯಾರ್ಥಿ ಆರ್ಯನ್ ಮಿಶ್ರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಅನಿಲ್ ಕೌಶಿಕ್, ವರುಣ್, ಕೃಷ್ಣ, ಸೌರವ್ ಮತ್ತು ಆದೇಶ್ ಎಂದು ಗುರುತಿಸಲಾಗಿದೆ. ಎಲ್ಲರೂ ಗೋ ರಕ್ಷಕರು ಎಂದು ಹೇಳಲಾಗಿದೆ. ದನ ಕಳ್ಳಸಾಗಣೆದಾರರು ಎಂದು ಭಾವಿಸಿ, ಕಾರಿನಲ್ಲಿ ಕುಳಿತಿದ್ದ ಆರ್ಯನ್ ಮತ್ತು ಆತನ ಮನೆ ಮಾಲಕಿಯನ್ನು ಹೆದ್ದಾರಿಯಲ್ಲಿ ಸುಮಾರು 20 ಕಿಲೋಮೀಟರ್ ದೂರದವರೆಗೆ ಹಿಂಬಾಲಿಸಿ ಗುಂಡು ಹಾರಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಆ.23ರ ರಾತ್ರಿ ಡಸ್ಟರ್ ಮತ್ತು ಫಾರ್ಚುನರ್ ಕಾರುಗಳು ತಿರುಗಾಡುತ್ತಿರುವ ಬಗ್ಗೆ ಮಾಹಿತಿದಾರರಿಂದ ಆರೋಪಿ ಗೋರಕ್ಷಕರು ಮಾಹಿತಿ ಪಡೆದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದರಿಂದ ಅನುಮಾನಗೊಂಡ ಗೋರಕ್ಷಕರು ಕಾರನ್ನು ಹಿಂಬಾಲಿಸಿ ಕಾರನ್ನು ನಿಲ್ಲಿಸಲು ಗುಂಡು ಹಾರಿಸಿದ್ದಾರೆ. ಹೆದ್ದಾರಿಯ ಗಡ್‌ಪುರಿ ಟೋಲ್‌ನಲ್ಲಿ ಆರೋಪಿಗಳು ಕಾರನ್ನು ನಿಲ್ಲಿಸಲು ಹಿಂದಿನಿಂದ ಗುಂಡು ಹಾರಿಸಿದ್ದು, ಗುಂಡು ಕಾರಿನ ಹಿಂಬದಿಯ ಗಾಜು ಒಡೆದು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಆರ್ಯನ್ ಮಿಶ್ರಾ ಅವರ ಕುತ್ತಿಗೆಗೆ ಪೆಟ್ಟು ಬಿದ್ದಿದೆ.

ಇದಾದ ನಂತರ ಕಾರು ಚಾಲಕ ಹರ್ಷಿತ್ ಕಾರನ್ನು ನಿಲ್ಲಿಸಿದ್ದಾರೆ. ನಂತರ ಆರೋಪಿ ಆರ್ಯನ್ ಎದೆಗೆ ಎರಡನೇ ಗುಂಡು ಹಾರಿಸಿದ್ದಾನೆ. ಇದಾದ ನಂತರ ಆರೋಪಿಗಳು ಕಾರಿನಲ್ಲಿ ಹುಡುಗರೊಂದಿಗೆ ಇಬ್ಬರು ಮಹಿಳೆಯರಿದ್ದನ್ನು ನೋಡಿದರು, ಆಗ ಆರೋಪಿಗಳು ತಪ್ಪು ತಿಳುವಳಿಕೆಯಿಂದ ಬೇರೊಬ್ಬರಿಗೆ ಗುಂಡು ಹಾರಿಸಿದ್ದು ತಿಳಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆಗಸ್ಟ್ 24ರಂದು, ಘಟನೆ ನಡೆದ ಎರಡನೇ ದಿನ, ಆರ್ಯನ್ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.

ಈ ವೇಳೆ ಮೃತ ಆರ್ಯನ್ ತಂದೆ ಕೂಡ ಪೊಲೀಸರಿಗೆ ಲಿಖಿತ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಕಂಡು ಅಪರಾಧ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕ್ರೈಂ ಬ್ರಾಂಚ್ ಸಿಸಿಟಿವಿಯನ್ನು ಪರಿಶೀಲಿಸಿದಾಗ, ಆರೋಪಿಗಳು ಪತ್ತೆಯಾಗಿದ್ದಾರೆ, ನಂತರ ಆರೋಪಿಗಳನ್ನು ಅವರ ಮನೆಯಿಂದ ಬಂಧಿಸಲಾಗಿದೆ. ಇದಾದ ಬಳಿಕ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

19 ವರ್ಷದ ಆರ್ಯನ್ ಮಿಶ್ರಾ 12 ನೇ ತರಗತಿಯ ವಿದ್ಯಾರ್ಥಿ. ಎನ್‌ಐಟಿ ಸಂಖ್ಯೆ ಐದರಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಆಗಸ್ಟ್ 23ರಂದು ರಾತ್ರಿ 9:30 ರ ಸುಮಾರಿಗೆ ಆರ್ಯನ್ ತನ್ನ ಮಾಲೀಕರಾದ ಶ್ವೇತಾ ಗುಲಾಟಿ, ಆಕೆಯ ಮಕ್ಕಳಾದ ಹರ್ಷಿತ್, ಶಾಂಕಿ ಮತ್ತು ನೆರೆಯ ಮಹಿಳೆಯೊಂದಿಗೆ ಮ್ಯಾಗಿ ತಿನ್ನಲು ಬದ್ಖಾಲ್ ಮೆಟ್ರೋ ಬಳಿಯ ಮಾಲ್‌ಗೆ ಹೋಗಿದ್ದರು. ಮ್ಯಾಗಿ ತಿಂದು 11:30ರ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page