ಪರಿಸರ ಹಾನಿ ಆರೋಪ: ಗೌತಮ್ ಅದಾನಿ ಸಂಸ್ಥೆಗೆ 52 ಕೋಟಿ ದಂಡ ವಿಧಿಸಿದ ಹಸಿರು ಪೀಠ

ಪರಿಸರ ಹಾನಿಗೆ ಸಂಬಂಧಿಸಿದ ಆರೋಪದ ಮೇಲೆ ಉಡುಪಿ ಜಿಲ್ಲೆಯಲ್ಲಿರುವ ಗೌತಮ್‌ ಅದಾನಿಗೆ ಸೇರಿದ ಯುಪಿಸಿಎಲ್‌ಗೆ ಚೆನ್ನೈನ ಹಸಿರು ದಕ್ಷಿಣ ವಲಯದ ಪೀಠವು 52 ಕೋಟಿ ರುಪಾಯಿ ದಂಡ ವಿಧಿಸಿದೆ.

ಉಡುಪಿಯ ಪಡುಬಿದ್ರೆ ಸಮೀಪದ ಎಲ್ಲೂರು ಗ್ರಾಮದಲ್ಲಿರುವ ಗೌತಮ್‌ ಅದಾನಿ ಒಡೆತನದ ಕಲ್ಲಿದ್ದಲ್ಲುಆಧಾರಿತ ಉಷ್ಣ ವಿದ್ಯುತ್‌ ಸ್ಥಾವರದಿಂದ ಸುಮಾರು 10 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿಯಾಗಿರುವುದು ದೃಢವಾದ ಹಿನ್ನೆಲೆಯಲ್ಲಿ ಹಸಿರು ಪೀಠ ಈ ದಂಡ ವಿಧಿಸಿದೆ.

ಮೇ 31, 2022 ರಂದೇ ನೀಡಿದ ತೀರ್ಪಿನಲ್ಲಿ, ರಾಷ್ಟ್ರೀಯ ಹಸಿರು ಪೀಠವು ದಕ್ಷಿಣ ವಲಯದ ನ್ಯಾಯಮೂರ್ತಿ ಕೆ ರಾಮಕೃಷ್ಣನ್ ಮತ್ತು ಇಬ್ಬರು ತಜ್ಞ ಸದಸ್ಯರು ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ಗೆ (ಯುಪಿಸಿಎಲ್) 52.02 ಕೋಟಿ ರೂಪಾಯಿ ಪರಿಹಾರವನ್ನು ಪಾವತಿಸಲು ಆದೇಶಿಸಿದ್ದರು. ಆದರೆ ಈ ವರೆಗೂ ಯಾವುದೇ ಬೆಳವಣಿಗೆ ನಡೆದಿರಲಿಲ್ಲ. ಕಂಪನಿಯು ಪಾವತಿಸಿದ ರೂ. 5 ಕೋಟಿ ಮಧ್ಯಂತರ ಪರಿಹಾರವನ್ನು ಗಮನಿಸಿ, ಎನ್‌ಜಿಟಿ ಕಂಪನಿಯು ಉಳಿದ ಮೊತ್ತವನ್ನು ಸಿಪಿಸಿಬಿಗೆ ಪಾವತಿಸಲು ಮೂರು ತಿಂಗಳ ಗಡುವನ್ನು ನಿಗದಿಪಡಿಸಿದೆ.

“ಮೂರು ತಿಂಗಳೊಳಗೆ ಮೊತ್ತವನ್ನು ಪಾವತಿಸದಿದ್ದರೆ, ಕಾನೂನಿಗೆ ಅನುಸಾರವಾಗಿ M/s UPCL ನಿಂದ ಮೊತ್ತವನ್ನು ವಸೂಲಿ ಮಾಡಲು CPCB ಗೆ ನಿರ್ದೇಶಿಸಲಾಗಿದೆ” ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಪಡೆದ ಮಾಹಿತಿಯು ಸೆಪ್ಟೆಂಬರ್ 2022 ರ ಗಡುವು ಮುಗಿದು ಎರಡು ವರ್ಷಗಳಿಗೂ ಹೆಚ್ಚು ಕಾಲ ಕಳೆದರೂ, CPCB ಯುಪಿಸಿಎಲ್ ವಿರುದ್ಧ ಕ್ರಮವನ್ನು ಪ್ರಾರಂಭಿಸಿಲ್ಲ ಎಂದು ಹಸಿರು ಪೀಠವು ಆರೋಪ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು