Thursday, June 20, 2024

ಸತ್ಯ | ನ್ಯಾಯ |ಧರ್ಮ

ಈ ವರ್ಷ ಕೋವಿಡ್‌ ನಿರ್ಬಂಧವಿಲ್ಲದೆ ಗಣೇಶ ಚತುರ್ಥಿ ಆಚರಣೆ ಮಾಡಬಹುದು : ಆರ್‌ ಅಶೋಕ್‌

ಬೆಂಗಳೂರು: ಕರ್ನಾಟಕದಲ್ಲಿ ಈ ವರ್ಷ ಗಣೇಶ ಚತುರ್ಥಿಯನ್ನು ಕೋವಿಡ್-19 ನ ಯಾವುದೇ ನಿರ್ಬಂಧಗಳಿಲ್ಲದೆ ಆಚರಿಸಬಹುದು ಎಂದು ರಾಜ್ಯ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರತೀ ವರ್ಷದಂತೆ ಈ ವರ್ಷವು ಪ್ಲಾಸ್ಟಿಕ್ ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ಯಾವುದೇ ವಿಗ್ರಹಗಳನ್ನು ಆಚರಣೆಗೆ ಅನುಮತಿಸಲಾಗುವುದಿಲ್ಲ, ಪರಿಸರದ ಹಿತ ದೃಷ್ಟಿಯಿಂದ  ಕೇವಲ ಮಣ್ಣಿನ ವಿಗ್ರಹಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು. 
  

Related Articles

ಇತ್ತೀಚಿನ ಸುದ್ದಿಗಳು