Monday, July 1, 2024

ಸತ್ಯ | ನ್ಯಾಯ |ಧರ್ಮ

ಕನ್ನಡದ ಖ್ಯಾತ ಕಲಾವಿದ ಲೋಹಿತಾಶ್ವ ನಿಧನ

ಬೆಂಗಳೂರು : ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಟ ಲೋಹಿತಾಶ್ವ ಇಂದು ನಿಧನರಾಗಿದ್ದಾರೆ.

ಅವರು, ಈ ಹಿಂದೆ ಅಕ್ಟೋಬರ್‌ 7ನೇ ತಾರೀಕಿನಂದು ಸಂಭವಿಸಿದ ಕಾರ್ಡಿಯಾಕ್‌ ಅಟ್ಯಾಕ್‌ನಿಂದಾಗಿ ನಗರದ ಕುಮಾರಸ್ವಾಮಿ ಲೇಔಟ್‌ ನ ಸಾಗರ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದರು.

ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಅವರ ಆರೋಗ್ಯದ ಸ್ಥಿತಿ ಹೆಚ್ಚಿನ ಮಟ್ಟಿಗೆ ಹದಗೆಟ್ಟು ಇಹಲೋಕ ತ್ಯಜಿಸಿದ್ದಾರೆ.

ಅಭಿಮನ್ಯು, AK 47 ,ದಾದಾ , ಚಾಣಾಕ್ಯಲ, ಮೂರು ಜನ್ಮ , ಕಾಡಿನ ರಾಜ ಹೀಗೆ ನೂರಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿರುವ ಹಿರಿಯ ನಟ ಲೋಹಿತಾಶ್ವ ಇಂದು ಸಂಜೆ ಅಗಲಿದ್ದಾರೆ.

ಲೋಹಿತಾಶ್ವ ಅವರು ಕೇವಲ ಚಿತ್ರನಟರಷ್ಟೇ ಅಲ್ಲದೆ ನಾಟಕಕಾರ ಮತ್ತು ನಿವೃತ್ತ ಇಂಗ್ಲೀಷ್‌ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಸುಮಾರು ಐನೂರಕ್ಕಿಂತಲೂ ಹೆಚ್ಚು ಕನ್ನಡ ಚಿತ್ರಗಳಲು , ನಾಟಕಗಳು ಮತ್ತು ಧಾರವಾಹಿಗಳಲ್ಲಿ ಅಭಿನಯಿಸಿ ಕನ್ನಡಿಗರ ಮೆಚ್ಚುಗೆ ಪಡೆದುಕೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು