Monday, June 17, 2024

ಸತ್ಯ | ನ್ಯಾಯ |ಧರ್ಮ

ಲಂಪಿವೈರಸ್‌| ಇದೇನಾ ಬಿಜೆಪಿಯ ಗೋರಕ್ಷಣೆ: ಕಾಂಗ್ರೆಸ್‌ ಟೀಕೆ

ಬೆಂಗಳೂರು: ರಾಜ್ಯದ ಕೆಲವೊಂದು ತಾಲ್ಲೂಕುಗಳಲ್ಲಿ ಪಶು ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಕಂಡುಬಂದಿರು ಹಿನ್ನಲೆಯಲ್ಲಿ 40% ಸರ್ಕಾರಕ್ಕೆ ʼಭ್ರಷ್ಟಗಂಟುʼ ಹೊಡೆಯುವ ರೋಗವಿರುವಾಗ, ಜಾನುವಾರುಗಳ ಚರ್ಮಗಂಟು ರೋಗ ಕಾಣುವುದೇ? ಎಂದು ರಾಜ್ಯ ಸರ್ಕಾರವನ್ನು ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ಟೀಕಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ರಾಜ್ಯದಲ್ಲೂ ಲಂಪಿ ವೈರಸ್‌ ತಾಂಡವವಾಡುತ್ತಿದ್ದು, ರಾಜ್ಯದಲ್ಲಿರುವ ಕೆಲವೊಂದು ಜಿಲ್ಲಾ ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ ಮತ್ತು ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಪಶು ಇಲಾಖೆಯಲ್ಲಿ 70% ಹುದ್ದೆಗಳು ಖಾಲಿ ಇದೆ. ಆದರೂ ಕೂಡ ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ರಾಜ್ಯದಲ್ಲಿ ಜಾನೂವಾರಗಳ ಚರ್ಮರೋಗಕ್ಕೆ ಲಸಿಕೆಗಲಿಲ್ಲ. ಹೀಗಾಗಿ ಗೋರಕ್ಷಕರು ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರಕ್ಕೆ ಗೋವುಗಳ ಆಕ್ರಂದನ ಕೇಳುತ್ತಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಗೋರಕ್ಷಕರು ಎಂದುಕೊಳ್ಳುವ ಬಿಜೆಪಿ ಸರ್ಕಾರ ಜಾನುವಾರಗಳ ಚರ್ಮಗಂಟು ರೋಗ ನಿರ್ವಹಿಸಲು ಸಿದ್ಧಗೊಂಡಿಲ್ಲ. ಇದೇನಾ ಬಿಜೆಪಿಯ ಗೋರಕ್ಷಣೆ? ಎಂದು ರಾಜ್ಯ ಕಾಂಗ್ರೆಸ್‌ ಘಟಕ ವಾಗ್ದಾಳಿ ನಡೆಸಿದೆ.

Related Articles

ಇತ್ತೀಚಿನ ಸುದ್ದಿಗಳು