Monday, June 17, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್‌ ಬಾಬಾ ಸಾಹೇಬರ ಶವಸಂಸ್ಕಾರಕ್ಕೂ ಜಾಗ ನೀಡಲಿಲ್ಲ : ಬಿಜೆಪಿ

ಬೆಂಗಳೂರು : ಮೀಸಲಾತಿ ಸಂಬಂಧಪಟ್ಟಂತೆ, ಬಿಜೆಪಿ  ಅಧಿಕಾರ ಹಿಡಿದ ಕೇವಲ 3 ವರ್ಷದ ಒಳಗಾಗಿ ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ ಹೊರಡಿಸಿದೆ ಎಂದು ಬಿಜೆಪಿ ಬಿಜೆಪಿ ಸರಣಿ ಟ್ವೀಟ್‌ ಮಾಡಿದೆ.

ಪ.ಜಾತಿ ಮತ್ತು ಪ.ವರ್ಗ ಜನಾಂಗದವರಿಗೆ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಉಭಯ ಸದನಗಳ ನಾಯಕರು ಸೇರಿ ಅಕ್ಟೋಬರ್‌ 7ರಂದು ನಡೆಸಿದ ಸರ್ವಪಕ್ಷ ಸಭೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರ ವರದಿಗಳನ್ನು ಆಧರಿಸಿ ಪ.ಜಾತಿ ಜನಾಂಗದವರ ಶೇ.15 ರಿಂದ ಶೇ 17 ಹಾಗೆಯೇ ಪ.ವರ್ಗ ದವರಿಗೆ ಶೇ.3 ರಿಂದ ಶೇ 7 ಮೀಸಲಾತಿಯನ್ನು ಹೆಚ್ಚಿಸುವಂತೆ ಸುಗ್ರೀವಾಜ್ಞೆ ಹೊರಡಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ʼಕಾಂಗ್ರೆಸ್‌ ಅಂಬೇಡ್ಕರ್‌ ಅವರಿಗೆ ಭಾರತ ರತ್ನ ನೀಡಲು ಕಾಂಗ್ರೆಸ್‌ ಹಿಂದೆ ಮುಂದೆ ನೋಡಿತ್ತು, ಆದರೆ ಅದಾಗಲೇ ಇಂದಿರಾ ಗಾಂಧಿ ತಾನೇ ಭಾರತ ರತ್ನಕ್ಕೆ ಕೊರಳೊಡ್ಡಿದ್ದರು!. ಆದರೆ ಬಿಜೆಪಿ ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಎಂಬ ಪರಮೋಚ್ಛ ಗೌರವ ಲಭಿಸಬೇಕಾದರೆ ಬಿಜೆಪಿ ಬೆಂಬಲಿತ ಸರ್ಕಾರ ಬರಬೇಕಾಯಿತುʼ ಎಂದು ಹೇಳಿದೆ.

ಕಾಂಗ್ರೆಸ್‌ ಅನೇಕ ದಶಕಗಳ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನುಕಾಂಗ್ರೆಸ್ ಪಕ್ಷ ನಿರಾಕರಿಸುತ್ತಲೇ ಬಂದಿತ್ತು.  ಆದರೆ ಬಿಜೆಪಿ  ಅಧಿಕಾರ ಹಿಡಿದ ಕೇವಲ 3 ವರ್ಷದ ಒಳಗಾಗಿ ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ ಹೊರಡಿಸಿದೆ ಎಂದು  ತಿಳಿಸಿದೆ.

ಕಾಂಗ್ರೆಸ್‌ ಬಾಬಾ ಸಾಹೇಬರನ್ನು ಚುನಾವಣೆಯಲ್ಲಿ ಕುತಂತ್ರದಿಂದ ಸೋಲಿಸಿತು. ಬಿಜೆಪಿ ಅತೀ ಹೆಚ್ಚು ದಲಿತರನ್ನು ಗೆಲ್ಲಿಸಿಕೊಂಡು ಕೇಂದ್ರ ಸಂಪುಟದಲ್ಲಿ ಸಚಿವರನ್ನಾಗಿಸಿತು ಕಾಂಗ್ರೆಸ್‌ ಅನ್ನು ದೂರಿದೆ.

ಕಾಂಗ್ರೆಸ್‌ ಬಾಬಾ ಸಾಹೇಬರ ಶವಸಂಸ್ಕಾರಕ್ಕೂ ಜಾಗ ನೀಡಲಿಲ್ಲ ಆದರೆ 52 ಎಕರೆಗೂ ಹೆಚ್ಚಿನ ಸ್ಥಳದಲ್ಲಿ ನೆಹರೂ ಸಮಾಧಿ ನಿರ್ಮಿಸಲಾಗಿದೆ! ಆದರೆ ಬಿಜೆಪಿ ಅಂಬೇಡ್ಕರ್‌ ಜನಿಸಿದ, ವಿದ್ಯಾಭ್ಯಾಸ ಮಾಡಿದ, ಗತಿಸಿದ ಸ್ಥಳ ಸೇರಿದಂತೆ ಪ್ರಮುಖ ಸ್ಥಳಗಳನ್ನು ಮೋದಿ ಸರ್ಕಾರ ಪಂಚತೀರ್ಥ ಎಂಬ ಯೋಜನೆಯಡಿ ಅಭಿವೃದ್ಧಿಗೊಳಿಸಿದೆ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು