Monday, June 17, 2024

ಸತ್ಯ | ನ್ಯಾಯ |ಧರ್ಮ

ನರಬಲಿ ಪ್ರಕರಣ: ಆರೋಪಿಗೆ ಜಾಮೀನು ನಿರಾಕರಿಸಿದ ಕೇರಳ ನ್ಯಾಯಾಲಯ

ಕೇರಳ : ಕೇರಳದಲ್ಲಿ ನಡೆದಿರುವ ನರ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲೈಲಾ ಭಗವಾಲ್ ಸಿಂಗ್ಗೆ ಕೇರಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಕೇರಳದಲ್ಲಿ ನಡೆದಿರುವ ನರ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಸಂಚಲನ ಸೃಷ್ಟಿಯಾಗಿತ್ತು. ಕೇರಳದಲ್ಲಿ ದಂಪತಿಗಳು ತಮ್ಮ ಕುಟುಂಬದ ಸಂಪತ್ತು ಅಭಿವೃದ್ಧಿ ಮಾಡಿಕೊಳ್ಳಲು ʼನರಬಲಿʼ ನೀಡುವ ಧಾರ್ಮಿಕ ಕ್ರಿಯೆ ನಡೆಸಿರುವ ಘಟನೆ ರಾಜ್ಯದ ಪತ್ತನಂತಿಟ್ಟದ ಎಳಂತೂರು ಗ್ರಾಮದಲ್ಲಿ ನಡೆದಿತ್ತು. ಅಮಾಯಕ ಮಹಿಳೆಯರನ್ನು ವಂಚಿಸಿ ಬಲಿ ನೀಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಎರ್ನಾಕುಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ನರಬಲಿ ಪಡೆದ ಮೂರೂ ಜನರನ್ನು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಕಳುಹಿಸಿತ್ತು.

ತದನಂತರ ಮೊಹಮ್ಮದ್‌ ಶಫಿ, ಭಗವಾಲ್‌ ಸಿಂಗ್‌ ಮತ್ತು ಲೈಲಾ ಭಗವಾಲ್‌ ಸಿಂಗ್‌ ಅವರನ್ನು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅವರು 12 ದಿನ ಪೊಲೀಸ್‌ ಕಸ್ಟಡಿಗೆ ನೀಡಿದ್ದರು. ಇದನ್ನು  ಪ್ರಶ್ನಿಸಿ ನೀಡಿರುವುದನ್ನು ಮೂವರು ಆರೋಪಿಗಳು ಕೇರಳ ಹೈಕೋರ್ಟ್‌ ಕದ ತಟ್ಟಿದ್ದರು.

ಆದರೆ ಇಂದು ಕೇರಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿ ಲೈಲಾ ಭಗವಾಲ್ ಸಿಂಗ್ಗೆ ಜಾಮೀನು ನೀಡುವುದನ್ನು ನಿರಾಕರಿಸಿದೆ.

Related Articles

ಇತ್ತೀಚಿನ ಸುದ್ದಿಗಳು