Tuesday, June 18, 2024

ಸತ್ಯ | ನ್ಯಾಯ |ಧರ್ಮ

ಆಪ್ ನಿಯೋಗದಿಂದ ಕನ್ನಡ ಕಟ್ಟಾಳು ಮ. ರಾಮಮೂರ್ತಿ ಪತ್ನಿ ಕಮಲಮ್ಮನವರ ಭೇಟಿ

ಕನ್ನಡದ ಕಟ್ಟಾಳು, ಕನ್ನಡ ಧ್ವಜದ ನಿರ್ಮಾತೃ, ಕನ್ನಡ ಚಳುವಳಿಯ ಧೀಮಂತ ನಾಯಕ ದಿವಂಗತ. ಮ. ರಾಮಮೂರ್ತಿ ರವರ ಧರ್ಮಪತ್ನಿ 101 ವರ್ಷದ ಕಮಲಮ್ಮನವರನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನಗರದ ಸೇವಾ ಕ್ಷೇತ್ರ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿ ಆಶೀರ್ವಾದ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಕಮಲಮ್ಮನವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ, ಸಹಾಯಧನದ ಚೆಕ್ಕನ್ನು ವಿತರಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು “ಸಾಲುಮರದ ತಿಮ್ಮಕ್ಕನವರಿಗೆ ನೀಡಿರುವ ಗೌರವ ಸವಲತ್ತುಗಳ ರೀತಿಯಲ್ಲಿಯೇ ರಾಮಮೂರ್ತಿಯವರೊಂದಿಗೆ ಜೊತೆಯಾಗಿ ಕನ್ನಡ ಹೋರಾಟವನ್ನು ಕಟ್ಟಿದ ಅವರ ಪತ್ನಿ ಕಮಲಮ್ಮನವರನ್ನೂ ರಾಜ್ಯ ಸರ್ಕಾರವು ಸಾಂಸ್ಕೃತಿಕ ರೂವಾರಿಗಳನ್ನಾಗಿ ನೇಮಿಸಿಕೊಂಡು ಗೌರವಪೂರ್ವಕವಾಗಿ ನಡೆಸಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ತುರ್ತಾಗಿ ಈ ವಿಷಯದತ್ತ ಗಮನಹರಿಸಬೇಕು” ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅವರು ಸೇವಾ ಕ್ಷೇತ್ರ ಆಸ್ಪತ್ರೆಯ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು. ಆಸ್ಪತ್ರೆಯ ಮುಖ್ಯಸ್ಥ ಡಾ. ವಿಜಯ್, ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆವಾನಿ, ಮುಖಂಡರುಗಳಾದ ಡಾ. ರಮೇಶ್ ಬೆಳ್ಳಂಕೊಂಡ, ದರ್ಶನ್ ಜೈನ್, ಸುಷ್ಮಾ ವೀರ್ ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು