Friday, June 14, 2024

ಸತ್ಯ | ನ್ಯಾಯ |ಧರ್ಮ

BREAKING: ಅಸ್ಸಾಂ ಮುಖ್ಯಮಂತ್ರಿ ಪತ್ನಿಯಿಂದ ಭಾರೀ ಹಗರಣ, ಇಕ್ಕಟ್ಟಿಗೆ ಸಿಲುಕಿದ ಹಿಮಂತ ಸರ್ಮ

Himanta Biswa Sarma | ನ್ಯೂಡೆಲ್ಲಿ: ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಸಬ್ಸಿಡಿಗಳು ಬಿಜೆಪಿ ನಾಯಕರು ಮತ್ತು ಅವರ ಹಿಂಬಾಲಕರಿಗೆ ಹಣದ ಮಳೆ ಸುರಿಸುತ್ತಿವೆ. ಈ ನಿಟ್ಟಿನಲ್ಲಿ ಇತ್ತೀಚಿನ ಘಟನೆಯೊಂದು ಅಸ್ಸಾಂನಲ್ಲಿ ಹೊರಬಿದ್ದಿದೆ.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಸರ್ಮ ಅವರ ಪತ್ನಿ ರಿನಿಕ್ ಭುಯಾನ್ ಶರ್ಮಾ ಒಡೆತನದ ಕಂಪನಿಯು ‘ಪಿಎಂ ಕಿಸಾನ್ ಸಂಪದಾ ಯೋಜನೆ’ ಯೋಜನೆಯ ಮೂಲಕ 10 ಕೋಟಿ ರೂ.‌ ಸಾಲ ನೀಡಲಾಗಿದೆ.

ಕೇಂದ್ರ ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿಯೇ ಈ ಕುರಿತು ಮಾಹಿತಿ ಬಂದಿದೆ. ರಿನಿಕ್ ಭುಯಾನ್ ಸರ್ಮ ಅವರ ಕಂಪನಿ ‘ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್’ ಸಂಪದಾ ಯೋಜನೆ ಯೋಜನೆಯಡಿಯಲ್ಲಿ 10 ಕೋಟಿ ರೂಪಾಯಿಗಳ ಸಬ್ಸಿಡಿ ಸಾಲವನ್ನು ಪಡೆದಿದೆ ಎಂದು ವೆಬ್‌ಸೈಟ್ ಹೇಳಿದೆ. ಈ ಪ್ರಕರಣ ಅಸ್ಸಾಂನಲ್ಲಿ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

‘ಬಿಜೆಪಿ ನಾಯಕರನ್ನು ಶ್ರೀಮಂತರನ್ನಾಗಿಸಲು ಪಿಎಂ ಕಿಸಾನ್ ಸಂಪದಾ ಯೋಜನೆಯನ್ನು ಆರಂಭಿಸಲಾಗಿದೆಯೇ? ಎಂದು ವಿರೋಧ ಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ಪ್ರಶ್ನಿಸುತ್ತಿವೆ.

ಕೇಂದ್ರ ಸರ್ಕಾರದ ಯೋಜನೆಗಳು ಸಾಮಾನ್ಯ ರೈತರಿಗಾಗಿಯೋ? ಬಿಜೆಪಿ ನಾಯಕರಿಗಾಗಿಯೋ? ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇತ್ತೀಚೆಗಷ್ಟೇ ಅಸ್ಸಾಂನ ಸುದ್ದಿ ವೆಬ್ ಪೋರ್ಟಲ್‌ಗಳು ಸಿಎಂ ಕುಟುಂಬದ ಸದಸ್ಯರ ಬಗ್ಗೆ ಮತ್ತೊಂದು ಆಘಾತಕಾರಿ ಸುದ್ದಿಯನ್ನು ಪ್ರಕಟಿಸಿವೆ. ಇದರಲ್ಲಿ ಮೊದಲಿಗೆ ನಾಗಾಂವ್ ಜಿಲ್ಲೆಯ ದರಿಗಾಜಿ ಗ್ರಾಮದಲ್ಲಿ ಅಧಿಕಾರಿಗಳು 30 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಭೂಮಿ ಎಂದು ವರ್ಗೀಕರಿಸಿದ್ದಾರೆ. ಇದು ನಡೆದ ಒಂದು ತಿಂಗಳಲ್ಲೇ ಸಿಎಂ ಹಿಮಂತ ಬಿಸ್ವಾ ಸರ್ಮ ಕುಟುಂಬಸ್ಥರು ಭೂಮಿ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ.

ಈ ಬಗ್ಗೆ ನ್ಯಾಯಾಂಗ ತನಿಖೆಗಾಗಿ ಗುವಾಹಟಿ ಹೈಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ. ಆದರೆ ಈ ಆರೋಪಗಳನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಸರ್ಮ ನಿರಾಕರಿಸಿದ್ದಾರೆ. ‘ಪಿಎಂ ಕಿಸಾನ್ ಸಂಪದಾ ಯೋಜನೆ’ ಮೂಲಕ ತಮ್ಮ ಪತ್ನಿ ಮತ್ತು ಅವರ ಕಂಪನಿಗೆ ಯಾವುದೇ ಹಣವನ್ನು ನೀಡಲಾಗಿಲ್ಲ ಎಂದು ಅವರು ವಿವರಿಸಿದರು.

ಅನುದಾನ ಬಿಡುಗಡೆ ಮಾಡಿದವರು ಯಾರು?

ಕೃಷಿ ಉತ್ಪನ್ನಗಳ ಪೂರೈಕೆ ಸರಪಳಿಯಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ‘ಪಿಎಂ ಕಿಸಾನ್ ಸಂಪದಾ ಯೋಜನೆ’ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಕೇಂದ್ರ ಆಹಾರ ಸಂಸ್ಕರಣಾ ಇಲಾಖೆಯಿಂದ ಫಲಾನುಭವಿಗಳಿಗೆ ಸಬ್ಸಿಡಿ ಸಹಿತ ಸಾಲ ನೀಡಲಾಗುತ್ತದೆ. ಆದರೆ, ಕ್ಷೇತ್ರ ಮಟ್ಟದಲ್ಲಿ ಇದರ ಅನುಷ್ಠಾನ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸಿಎಂ ಪತ್ನಿಗೆ ಸೇರಿದ ಕಂಪನಿಗೆ ರೂ.10 ಕೋಟಿ ನೀಡುವುದು ಹೇಗೆ ಎಂಬ ಆರೋಪ ಕೇಳಿಬಂದಿದೆ. ‘ಇಷ್ಟು ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿದವರು ಯಾರು? ಬಿಜೆಪಿಯ ಇತರ ನಾಯಕರಿಗೂ ಇದೇ ರೀತಿ ಹಣ ಸಿಗುತ್ತಿದೆಯೇ? ಇದೇ ರೈತರ ಆದಾಯ ದ್ವಿಗುಣ ಮಾಡುವ ರೀತಿಯೇ?’ ಎಂದು ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಪ್ರಶ್ನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು