Wednesday, June 19, 2024

ಸತ್ಯ | ನ್ಯಾಯ |ಧರ್ಮ

ಶಿವಮೊಗ್ಗದ ಕರ್ನಾಟಕ ಸಂಘ ಸೇರಿದಂತೆ ಹಲವು ಸಂಸ್ಥೆಗಳು ಮತ್ತು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದ್ದು, ಈ ಹಿಂದೆ ನಿರ್ಧರಿಸಿದ್ದಂತೆ ಒಟ್ಟು 68 ಪ್ರಶಸ್ತಿಗಳನ್ನು ವಿವಿಧ ವಿಭಾಗಗಳಡಿ ನೀಡಲಾಗಿದೆ.

ಪ್ರಶಸ್ತಿ ವಿಜೇತರಲ್ಲಿ ಹಲವು ಗಣ್ಯರು ಮತ್ತು ಸಂಸ್ಥೆಗಳ ಹೆಸರಿದ್ದು, ಪ್ರಶಸ್ತಿಯು 5ಲಕ್ಷ ರೂ. ನಗದು ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಬಹುಮಾನವಾಗು ಹೊಂದಿರಲಿದೆ ಎಂದು ಸಚಿವ ತಂಗಡಗಿ ತಿಳಿಸಿದ್ದಾರೆ.

ಒಟ್ಟು 54 ಪುರುಷ ಸಾಧಕರಿಗೆ ಮತ್ತು 13 ಮಹಿಳಾ ಮತ್ತು ಓರ್ವ ಟ್ರಾನ್ಸ್‌ಜೆಂಡರ್ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.‌ ಅವರಲ್ಲಿ ಇಬ್ಬರು ಪ್ರಶಸ್ತಿ ವಿಜೇತರು ಶತಾಯುಷಿಗಳಾಗಿರುವುದು ವಿಶೇಷ.

ಪ್ರಶಸ್ತಿ ಪಡೆದ ಪ್ರಮುಖರಲ್ಲಿ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು , ನಿಜಗುಣಾನಂದ ಸ್ವಾಮಿಜಿ, ಲಕ್ಷ್ಮೀಪತಿ ಕೋಲಾರ, ಕೆಟಿ ಚಂದು, ಡಾ.ನಯನ ಎಸ್‌ ಮೋರೆ, ನೀಲಾ ಎಂ, ಚಾರ್ಮಾಡಿ ಹಸನಬ್ಬ, ಹಾಜಿ ಅಬ್ದುಲ್ಲ ಪರ್ಕಳ, ಕೆ. ಷರೀಫಾ, ಹಗಲುವೇಷ ಕಲಾವಿದರಾಗಿ ಆರು ದಶಕಗಳಿಂದ ಕೆಲಸ ಮಾಡುತ್ತಿರುವ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಗುಂಡಪ್ಪ ವಿಭೂತಿ ಸೇರಿದ್ದಾರೆ

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ ಪ್ರಶಸ್ತಿಗಾಗಿ ಪರಿಗಣಿಸಿ ಗೌರವಿಸಲಾಗಿದೆ. ಪತ್ರಿಕಾ ವಿತರಕರಾದ ಮೈಸೂರಿನ ಜವರಪ್ಪ ಅವರನ್ನೂ ಈ ಬಾರಿ ಸರ್ಕಾರ ಗುರುತಿಸಿ ಗೌರವಿಸಿದೆ.

ಚಲನಚಿತ್ರ ಕ್ಷೇತ್ರ

ಡಿಂಗ್ರಿ ನಾಗರಾಜ್

ಬಿ. ಜನಾರ್ಧನ್ (ಬ್ಯಾಂಕ್ ಜನಾರ್ಧನ್)

ರಂಗಭೂಮಿ ಕ್ಷೇತ್ರ

ಎ.ಜಿ. ಚಿದಂಬರ ರಾವ್ ಜಂಬೆ

ಪಿ. ಗಂಗಾಧರ ಸ್ವಾಮಿ

ಹೆಚ್.ಬಿ.ಸರೋಜಮ್ಮ

ತಯ್ಯಬಖಾನ್ ಎಂ.ಇನಾಮದಾರ

ಡಾ.ವಿಶ್ವನಾಥ್ ವಂಶಾಕೃತ ಮಠ

ಪಿ.ತಿಪ್ಪೇಸ್ವಾಮಿ

ಸಂಗೀತ ಕ್ಷೇತ್ರ

ಡಾ.ನಯನ ಎಸ್.ಮೋರೆ

ನೀಲಾ ಎಂ ಕೊಡ್ಲಿ

ಶಬ್ಬೀರ್ ಅಹಮದ್

ಡಾ.ಎಸ್ ಬಾಳೇಶ ಭಜಂತ್ರಿ

ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ

ಟಿ.ಶಿವಶಂಕರ್

ಕಾಳಪ್ಪ ವಿಶ್ವಕರ್ಮ

ಮಾರ್ಥಾ ಜಾಕಿಮೋವಿಚ್

ಪಿ.ಗೌರಯ್ಯ

ಯಕ್ಷಗಾನ & ಬಯಲಾಟ ಕ್ಷೇತ್ರ

ಅರ್ಗೋಡು ಮೋಹನದಾಸ ಶೆಣೈ

ಕೆ. ಲೀಲಾವತಿ ಬೈಪಾಡಿತ್ತಾಯ

ಕೇಶಪ್ಪ ಶಿಳ್ಳಿಕ್ಯಾತರ

ದಳವಾಯಿ ಸಿದ್ದಪ್ಪ

ಜಾನಪದ ಕ್ಷೇತ್ರ

ಹುಸೇನಾಬಿ ಬುಡೆನ್ ಸಾಬ್ ಸಿದ್ದಿ

ಶಿವಂಗಿ ಶಣ್ಮರಿ

ಮಹದೇವು

ನರಸಪ್ಪಾ

ಶಕುಂತಲಾ ದೇವಲಾನಾಯಕ

ಎಚ್‌.ಕೆ ಕಾರಮಂಚಪ್ಪ

ಶಂಭು ಬಳಿಗಾರ

ವಿಭೂತಿ ಗುಂಡಪ್ಪ

ಚೌಡಮ್ಮ

ಸಮಾಜಸೇವೆ ಕ್ಷೇತ್ರ

ಹುಚ್ಚಮ್ಮ ಬಸಪ್ಪ ಚೌದ್ರಿ

ಚಾರ್ಮಾಡಿ ಹಸನಬ್ಬ

ಕೆ.ರೂಪ್ಲಾ ನಾಯಕ್

ಪೂಜ್ಯ ನಿಜಗುಣಾನಂದ ಮಹಾಸ್ವಾಮಿ ನಿಷ್ಕಲ ಮಂಟಪ

ನಾಗರಾಜು.ಜಿ

ಆಡಳಿತ ಕ್ಷೇತ್ರ

ಬಲರಾಮ್, ತುಮಕೂರು

ವೈದ್ಯಕೀಯ ಕ್ಷೇತ್ರ

ಡಾ.ಸಿ. ರಾಮಚಂದ್ರ, ಬೆಂಗಳೂರು

ಡಾ.ಪ್ರಶಾಂತ್, ದ.ಕನ್ನಡ

ಸಾಹಿತ್ಯ ಕ್ಷೇತ್ರ

ಪ್ರೊ. ಸಿ.ನಾಗಣ್ಣ, ಚಾಮರಾಜನಗರ

ಸುಬ್ಬು ಹೊಲೆಯಾರ್, ಹಾಸನ

ಸತೀಶ್ ಕುಲಕರ್ಣಿ, ಹಾವೇರಿ

ಲಕ್ಷ್ಮೀಪತಿ ಕೋಲಾರ

ಪರಪ್ಪ ಗುರುಪಾದಪ್ಪ ಸಿದ್ದಾಪುರ

ಡಾ. ಕೆ ಷರೀಫಾ

ಶಿಕ್ಷಣ ಕ್ಷೇತ್ರ

ರಾಮಪ್ಪ, ರಾಯಚೂರು

ಕೆ.ಚಂದ್ರಶೇಖರ್, ಕೋಲಾರ

ಕೆ.ಟಿ ಚಂದು, ಮಂಡ್ಯ

ಕ್ರೀಡಾ ಕ್ಷೇತ್ರ

ಟಿ.ಎಸ್​. ದಿವ್ಯಾ

ಅದಿತಿ ಅಶೋಕ್

ಅಶೋಕ್ ಗದಿಗೆಪ್ಪ ಏಣಗಿ

ಪರಿಸರ ಕ್ಷೇತ್ರ

ಸೋಮನಾಥ ರೆಡ್ಡಿ ಪೂರ್ಮಾ

ದ್ಯಾವನಗೌಡ ಟಿ ಪಾಟೀಲ

ಶಿವರೆಡ್ಡಿ ಹನುಮರೆಡ್ಡಿ ವಾಸನ

ನ್ಯಾಯಾಂಗ ಕ್ಷೇತ್ರ

ಜ. ವಿ ಗೋಪಾಲ ಗೌಡ

ಸಂಕೀರ್ಣ ಕ್ಷೇತ್ರ

ಎಂಎಂ ಮದರಿ

ಹಾಜಿ ಅಬ್ದುಲ್ಲಾ, ಪರ್ಕಳ

ಮಿಮಿಕ್ರಿ ದಯಾನಂದ್

ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್

ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ

ಮಾಧ್ಯಮ ಕ್ಷೇತ್ರ

ದಿನೇಶ ಅಮೀನ್​​ಮಟ್ಟು

ಜವರಪ್ಪ

ಮಾಯಾ ಶರ್ಮ

ರಫೀ ಭಂಡಾರಿ

ವಿಜ್ಞಾನ ಮತ್ತು ತಂತ್ರಜ್ಞಾನ

ಎಸ್​​​. ಸೋಮನಾಥನ್​​​​ ಶ್ರೀಧರ್​​ ಪನಿಕರ್​​​

ಪ್ರೊ. ಗೋಪಾಲನ್ ಜಗದೀಶ್

ಹೊರನಾಡು ಮತ್ತು ಹೊರದೇಶ

ಸೀತಾರಾಮ ಅಯ್ಯಂಗಾರ್​​​​

ದೀಪಕ್​​​ ಶೆಟ್ಟಿ

ಶಶಿಕಿರಣ್​​​​ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರ

ಪುಟ್ಟಸ್ವಾಮಿ ಗೌಡ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ 10 ಸಂಘ-ಸಂಸ್ಥೆಗಳು

ಕರ್ನಾಟಕ ಸಂಘ, ಶಿವಮೊಗ್ಗ

ಬಿ.ಎನ್​.ಶ್ರೀರಾಮ ಪುಸ್ತಕ ಪ್ರಕಾಶನ, ಮೈಸೂರು

ಮಿಥಿಕ್ ಸೊಸೈಟಿ, ಬೆಂಗಳೂರು

ಕರ್ನಾಟಕ ಸಾಹಿತ್ಯ ಸಂಘ, ಯಾದಗಿರಿ

ಮೌಲಾನಾ ಆಜಾದ್ ಶಿಕ್ಷಣ & ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ, ದಾವಣಗೆರೆ

ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ದಕ್ಷಿಣ ಕನ್ನಡ

ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ, ಬಾಗಲಕೋಟೆ

ಚಿಣ್ಣರಬಿಂಬ, ಮುಂಬೈ

ಮಾರುತಿ ಜನಸೇವಾ ಸಂಘ, ದಕ್ಷಿಣ ಕನ್ನಡ

ವಿದ್ಯಾದಾನ ಸಮಿತಿ, ಗದಗ

Related Articles

ಇತ್ತೀಚಿನ ಸುದ್ದಿಗಳು