Friday, June 14, 2024

ಸತ್ಯ | ನ್ಯಾಯ |ಧರ್ಮ

ಪೂಂಛ್ ನಲ್ಲಿ ಸೈನಿಕರಿಂದಲೇ ನಾಗರೀಕರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮೂವರು ನಾಗರಿಕರಿಗೆ ಚಿತ್ರಹಿಂಸೆ ನೀಡಿ ಥಳಿಸಿರುವ ವೀಡಿಯೋ ವೈರಲ್ ಆಗುತ್ತಿದೆ. ಮೃತರನ್ನು ಅವರ ಗ್ರಾಮದ ಸರಪಂಚ್ ಮತ್ತು ಇಬ್ಬರ ಸಂಬಂಧಿಕರು ಗುರುತಿಸಿದ್ದು, ಹಿಂಸಿದ ಸೈನಿಕರನ್ನು ಗುರುತಿಸಲಿಲ್ಲ.

ಸಫೀರ್ ಹುಸೇನ್ (48), ಮೊಹಮ್ಮದ್ ಶೋಕತ್ (28) ಮತ್ತು ಶಬ್ಬೀರ್ ಅಹ್ಮದ್ (25) ಪ್ರಾಣ ಭಿಕ್ಷೆಗಾಗಿ ಅಂಗಲಾಚುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಈ ಘಟನೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆಕ್ರೋಶ ವ್ಯಕ್ತವಾಗಿದೆ.

https://twitter.com/Silly12120/status/1738493050958078311/video/1

ಉಗ್ರರ ಜೊತೆಗಿನ ಭೀಕರ ಗುಂಡಿನ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಈ ಘಟನೆಗೆ ಯಅರು ಕಾರಣ ಎಂಬುದನ್ನು ಸೇನೆಯಾಗಲೀ, ಜಮ್ಮು-ಕಾಶ್ಮೀರದ ಆಡಳಿತವಾಗಲೀ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಈ ಹಿನ್ನಲೆಯಲ್ಲಿ ಸ್ಥಳೀಯರನ್ನು ಕಸ್ಟಡಿಗೆ ತೆಗೆದುಕೊಂಡು ಕೊಲ್ಲಲಾಗಿದೆ ಎಂದು ಸೇನೆಯ ಮೇಲೆ ಆರೋಪ ಮಾಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ವೀಡಿಯೋವೊಂದನ್ನು ಹರಿಯಬಿಡಲಾಗಿದೆ.

ಕೇಂದ್ರಾಡಳಿತ ಪ್ರದೇಶದ ಆಡಳಿತವು ಕೇಂದ್ರ ಗೃಹ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಬರುವುದರಿಂದ ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಉದ್ಯೋಗದ ಬರವಸೆಯನ್ನೂ ನೀಡಲಾಗಿದೆ.

ಭಾನುವಾರ ರಾತ್ರಿ, ಭಾರತೀಯ ದಂಡ ಸಂಹಿತೆಯ (ಕೊಲೆ) ಸೆಕ್ಷನ್ 302 ರ ಅಡಿಯಲ್ಲಿ ಜೆ & ಕೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
48-ರಾಷ್ಟ್ರೀಯ ರೈಫಲ್ಸ್ನ ಸೈನಿಕರಿಂದ ಚಿತ್ರಹಿಂಸೆಗೊಳಗಾಗಿ ಸಾವನ್ನಪ್ಪಿರುವ ಇವರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಿದಾಗಿದೆ. ಸದ್ಯ ಪೂಂಚ್ನ ಟೋಪಾ ಪೀರ್ ಗ್ರಾಮಕ್ಕೆ ಅಕ್ಷರಶಃ ಬೀಗ ಜಡಿಯಲಾಗಿದ್ದು, ಮಿಲಿಟರಿ ಪಡೆಗಳಿಂದ ತುಂಬಿ ಹೋಗಿದೆ ಹಾಗೂ ಇಂಟರ್ನೆಟ್ ಸ್ಥಗಿತಗೊಂಡಿದೆ.

ಮೃತರ ಮನೆಗಳನ್ನು ಸೇನೆ ಸುತ್ತುವರಿದಿರುವುದರಿಂದ ಗ್ರಾಮಸ್ಥರಿಗೆ ಅಂತಿಮ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮದ ಸರಪಂಚ್ ಅಹ್ಮದ್ ಹೇಳಿಕೆಯನ್ನು ದಿ ವೈರ್ ವರದಿ ಮಾಡಿದೆ.
ಮೃತ ನಾಗರೀಕ ಮೊಹಮ್ಮದ್ ಶಬ್ಬೀರ್ ಅವರ ತಂದೆ ವಾಲಿ ಮೊಹಮ್ಮದ್ ಅವರು ತಮ್ಮ ಮಗನ ಮೃತ ದೇಹವನ್ನು ನೋಡಿ ಮತಿ ಕಳೆದುಕೊಳ್ಳುತ್ತಿದ್ದು, “ಅವರು ನನ್ನ ಸುಂದರ ಮಗನನ್ನು ಹೊಲಿದು ಈಗ ಒಂದು ದೇಹವನ್ನಾಗಿ ಮಾಡಿದ್ದಾರೆ. ನನಗೆ 60 ವರ್ಷ, ನನ್ನ 27 ವರ್ಷದ ಮಗನ ದೇಹದಾದ್ಯಂತ ಹೊಲಿಗೆ ಹಾಕಲಾಗಿದೆ. ಅವನ ತಲೆ ಮತ್ತು ಎದೆಗೂ ಹೊಲಿಗೆ ಹಾಕಲಾಗಿದೆ. ಶರೀರದ ತುಂಬಾ ವಿದ್ಯುತ್ ಶಾಕ್ ನೀಡಿರುವ ಗುರುತುಗಳಿವೆ,” ಎಂದು ಹೇಳಿರುವುದು ದಿ ವೈರ್ನಲ್ಲಿ ವರದಿಯಾಗಿದೆ.

ಮೊಹಮ್ಮದ್ ಸ್ವತಃ 27-ರಾಷ್ಟ್ರೀಯ ರೈಫಲ್ಸ್ ಮತ್ತು 16-ರಾಷ್ಟ್ರೀಯ ರೈಫಲ್ಸ್ನಲ್ಲಿ ಪೋರ್ಟರ್ ಆಗಿ ಕೆಲಸ ಮಾಡಿದ್ದವರು. ಮಗ ಶಬ್ಬೀರ್ ಕೂಡ ಸೇನೆಯಲ್ಲಿ ಪೋರ್ಟರ್ ಆಗಿದ್ದರು.

ಕ್ಯಾಂಪಿಗೆ ಬರುವಂತೆ ಫೋನ್ ಮಾಡಿ ಕರೆದು ತಮ್ಮದೇ ನೌಕರನನ್ನು ಏಕೆ ವಿಚಾರಣೆಗೆ ಕರೆಯುತ್ತಾರೆ? ನಾವು ಅವರೊಂದಿಗೆ ಕೆಲಸ ಮಾಡಿದ್ದೇವೆ. ಗಡಿಯಲ್ಲಿ ಅವರಿಗೆ ಬೆಂಬಲವಾಗಿದೆ ನಿಂತಿದ್ದೇವೆ. ಅದಕ್ಕಾಗಿ ಸಿಕ್ಕ ಪ್ರತಿಫಲ ಇದು,” ಎಂದು ತಂದೆ ಮೊಹಮ್ಮದ್ ಹೇಳಿದ್ದಾರೆ.

ಜಮ್ಮು-ಕಾಶ್ಮೀರದ ಆಡಳಿತ ನಾಗರೀಕರ ಈ ಸಾವಿಗೆ ಕಾರಣವನ್ನು ನಿರ್ದಿಷ್ಟಪಡಿಸಿಲ್ಲ. ಆದರೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಪರಿಹಾರವನ್ನು ಘೋಷಿಸಿದೆ.

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಮ್ಮು&ಕಾಶ್ಮೀರ, “ಪೂಂಚ್ ಜಿಲ್ಲೆಯ ಬಫ್ಲಿಯಾಜ್ನಲ್ಲಿ ನಿನ್ನೆ ಮೂವರು ನಾಗರಿಕರು ಸಾವನ್ನಪ್ಪಿರುವುದು ವರದಿಯಾಗಿದೆ. ವೈದ್ಯಕೀಯ ಕಾನೂನು ಫರ್ಮಾಲಿಟಿಗಳನ್ನು ನಡೆಸಲಾಗಿದೆ ಮತ್ತು ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು. ಮೃತರಿಗೆ ಸರ್ಕಾರ ಪರಿಹಾರವನ್ನು ಘೋಷಿಸಿದೆ. ಸರ್ಕಾರವು ಪ್ರತಿ ಮೃತರ ಮುಂದಿನ ಸಂಬಂಧಿಕರಿಗೆ ಸಹಾನುಭೂತಿಯ ಉದ್ಯೋಗಗಳನ್ನು ಘೋಷಿಸಿದೆ,” ಎಂದು X ನಲ್ಲಿ ತಿಳಿಸಿದೆ.

“ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ಶಿಕ್ಷೆಗೆ ಒಳಪಡಿಸಲು ಆಗ್ರಹಿಸುವುದು ಕೂಡಾ ಅರ್ಥಹೀನವೆಂದು ತೋರುತ್ತದೆ. ತಪ್ಪಿತಸ್ಥರು ಶಿಕ್ಷೆಗೆ ಒಳಪಡದೆ, ಅವರನ್ನು ಸ್ಕಾಟ್-ಫ್ರೀಯಾಗಿ ಬಿಡುಗಡೆ ಮಾಡುತ್ತಾರೆ. ‘ದಿಲ್ ಕಿ ದೂರಿ ಅಥವಾ ದಿಲ್ಲಿ ಸೆ ದೂರಿʼ ಯನ್ನು ತೊಡೆದು ಹಾಕುವುದು ಃಈಗಲ್ಲ,” ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಜುಲೈ 2020ರಲ್ಲಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರನ್ನು ಕೊಂದ ಆರೋಪಿ ಸೇನಾ ಕ್ಯಾಪ್ಟನ್ ಒಬ್ಬರನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವುದನ್ನು ಉಲ್ಲೇಖಿಸಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಕೂಡ ಪೂಂಚ್ ಹತ್ಯೆಯನ್ನು ಖಂಡಿಸಿದ್ದು, “ಇದು ಬೇರೆ ಯಾವುದೇ ಸರ್ಕಾರದ ಅಡಿಯಲ್ಲಿ ನಡೆದಿದ್ದರೆ, ಗೋದಿ ಮೀಡಿಯಾ ಪ್ರಶ್ನೆ ಮಾಡುತ್ತಿತ್ತು. ಹದಿನೈದು ಜನರನ್ನು ಅವರ ಮನೆಗಳಿಂದ ಎತ್ತಾಕೊಂಡು ಹೋಗಿ ಹಿಂಸೆ ನೀಡಲಾಗಿದೆ. ಅವರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸೈನಿಕರೂ, ಸಾಮಾನ್ಯ ಜನರೂ ಸುರಕ್ಷಿತವಾಗಿಲ್ಲದ ಈ ‘ಖುಶಾಲ್ ಕಾಶ್ಮೀರ’ ಅಥವಾ ‘ನಯಾ ಕಾಶ್ಮೀರ ಹೇಗಿದೆ?” ಎಂದು ಟ್ವೀಟ್ನಲ್ಲಿ ಟೀಕಿಸಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಕೂಡ “ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನೆಯ ವಶದಲ್ಲಿದ್ದ ಮೂವರು ನಾಗರಿಕರನ್ನು ಕ್ರೂರವಾಗಿ ಹತ್ಯೆಗೈದಿರುವುದನ್ನು” ಖಂಡಿಸಿದ್ದು, ಮೃತರ ಕುಟುಂಬಗಳಿಗೆ ಕೇವಲ ಪರಿಹಾರ ಘೋಷಿಸಿದರೆ ಸಾಕಾಗುವುದಿಲ್ಲ ಶೀಘ್ರ ತನಿಖೆಯಾಗಬೇಕು ಮತ್ತು ಹೊಣೆಗಾರರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ. “ಇಂತಹ ಭಯವಿಲ್ಲದೆ ನಡೆಸುವ ಕೃತ್ಯಗಳಿಂದ ದೀರ್ಘಕಾಲದಿಂದ ಬಳಲುತ್ತಿರುವ ಜಮ್ಮು&ಕಾಶ್ಮೀರದ ಜನತೆ, ಈ ಘಟನೆಯಲ್ಲಿ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ” ಎಂದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು