Saturday, June 15, 2024

ಸತ್ಯ | ನ್ಯಾಯ |ಧರ್ಮ

ತಮ್ಮನ ಬಂಧನದ ವಿಷಯದಲ್ಲಿ ಪ್ರತಾಪ ಸಿಂಹ ರಾಜಕೀಯ ಮಾಡುತ್ತಿದ್ದಾರೆ: ಡಿ ಕೆ ಶಿವಕುಮಾರ್

ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಮರ ಕಡಿದ ಆರೋಪದಲ್ಲಿ ವಿಕ್ರಂ ಸಿಂಹ ಅವರ ಬಂಧನಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ಈಗಾಗಲೇ ಮೆಲೋಡ್ರಾಮ ಆರಂಭಿಸಿದ್ದು, ಕೆಮೆರಾಗಳ ಮುಂದೆ ಕಣ್ಣೀರು ಸುರಿಸುತ್ತಾ ನನ್ನ ಕುಟುಂಬವನ್ನು ನಾಶಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಗೋಳಾಡಿದ್ದಾರೆ.

ಈ ಬಂಧನವು ಪ್ರಸ್ತುತ ರಾಜಕೀಯ ನಾಟಕಗಳಿಗೆ ದಾರಿ ಮಾಡಿಕೊಟ್ಟಿದ್ದು, ಈ ಕುರಿತು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು “ನಾನು ಈ ವಿಷಯದ ಬಗ್ಗೆ ಕ್ರಾಸ್ ಚೆಕ್ ಮಾಡಿದ್ದೇನೆ ಮತ್ತು ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡಿದ್ದಾರೆ. ಈ ವಿಷಯದಲ್ಲಿ ನಾವು ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಯಾವುದೇ ಪರವಾನಗಿ ಇಲ್ಲದೇ ಹಲವು ಮರಗಳನ್ನು ಕಡಿಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ…” ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, “ನಾವು ಯಾರನ್ನೂ ಟಾರ್ಗೆಟ್‌ ಮಾಡುತ್ತಿಲ್ಲ. ಪ್ರತಾಪ್‌ ಸಿಂಹ ಅವರ ಸಹೋದರ ಮರ ಕಡಿಯುವ ಮೊದಲು ಅನುಮತಿ ಪಡೆದಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಅವರು ಪರವಾನಗಿ ಪಡೆಯದೆ ಅರಣ್ಯ ಪ್ರದೇಶದಲ್ಲಿ ಕಡಿದಿರುವುದು ಅಪರಾಧ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಿರುವಾಗ ನಾವು ಅವರ ಕೆಲಸದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ” ಎಂದು ಹೇಳಿದರು.

ಇತ್ತ ಸಂಸದ ಪ್ರತಾಪ್‌ ಸಿಂಹ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಗುರಿಯಾಗಿಸಿಕೊಂಡು ಮೂದಲಿಸುವುದನ್ನು ಮುಂದುವರೆಸಿದ್ದು, “ಎರಡು ಕಾರಣಗಳಿಗಾಗಿ ನಾನು ಸಿದ್ದರಾಮಯ್ಯ ಸರ್ ಅವರನ್ನು ಹಾರ ಹಾಕಿ ಅಭಿನಂದಿಸಲು ಬಯಸುತ್ತೇನೆ. ತನ್ನ ಮಗನ ಭವಿಷ್ಯಕ್ಕಾಗಿ ಮತ್ತು ಅವನ ರಾಜಕೀಯ ಜೀವನಕ್ಕಾಗಿ, ಅವರು ಯಾವುದೇ ಹಂತಕ್ಕೆ ಹೋಗಬಲ್ಲರು. ಮೈಸೂರು-ಕೊಡಗಿನಿಂದ ತನ್ನ ಮಗನಿಗೆ ಲೋಕಸಭಾ ಸ್ಥಾನ ಕೊಡಿಸುವುದಕ್ಕಾಗಿ ಅವರು ಅಲ್ಲಿರುವ ಯಾರನ್ನೂ ಬೇಕಿದ್ದರೂ ಓಡಿಸಬಲ್ಲರು.” ಎಂದಿದ್ದಾರೆ.

ಅಲ್ಲದೆ ನನ್ನ ತಂಗಿ, ತಾಯಿ ಕೂಡಾ ಅದೇ ಮನೆಯಲ್ಲಿ ಇದ್ದಾರೆ ಅವರನ್ನೂ ಆರೆಸ್ಟ್‌ ಮಾಡಿಸಿಬಿಡಿ ಎಂದು ಅವರು ಮಾಧ್ಯಮಗಳೆದುರು ಅಸಹಾಯಕರಾಗಿ ಗೋಗರೆಯುತ್ತಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು