Wednesday, July 3, 2024

ಸತ್ಯ | ನ್ಯಾಯ |ಧರ್ಮ

Factcheck | ಕಂಗನಾ ರಣಾವತ್‌ ಕಪಾಳಕ್ಕೆ ಹೊಡೆದ ಕುಲ್ವಿಂದರ್‌ ಕೌರ್‌ ಬೆಂಗಳೂರಿಗೆ ವರ್ಗಾವಣೆ?

ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಸಂಸದೆ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಕುಲ್ವಿಂದರ್ ಅವರನ್ನು ಚಂಡೀಗಢದಿಂದ ಬೆಂಗಳೂರಿಗೆ ವರ್ಗಾಯಿಸಲಾಗಿದೆ.

ಆದರೆ, ಅವರನ್ನು ಇನ್ನೂ ಅಮಾನತಿನಲ್ಲಿರಿಸಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಸಿಐಎಸ್‌ಎಫ್ ಸ್ಪಷ್ಟಪಡಿಸಿದೆ. ಇತ್ತೀಚೆಗೆ, ಕುಲ್ವಿಂದರ್ ಕೌರ್ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾಗೆ ಕಪಾಳಮೋಕ್ಷ ಮಾಡಿದ್ದರು. ರೈತರ ಚಳವಳಿಗೆ ಸಂಬಂಧಿಸಿದಂತೆ ತನ್ನ ಹಿಂದಿನ ಹೇಳಿಕೆಯಿಂದ ನೋಯಿಸಿದ್ದು ಇದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಕುಲ್ವಿಂದರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಕೆಲವು ಫ್ಯಾಕ್ಟ್‌ ಚೆಕ್‌ಗಳನ್ನು ಬಲಪಂಥೀಯ ಕಂಗನಾ ಬೆಂಬಲಿಗರು ಹಂಚಿಕೊಳ್ಳುತ್ತಿದ್ದು, ಅದರ ಪ್ರಕಾರ ಕುಲದೀಪ್‌ ಕೌರ್‌ ಅವರಿಗೆ ವರ್ಗಾವಣೆಯಾಗಿರುವುದು ಸುಳ್ಳು ಮತ್ತು ಅವರ ವಿರುದ್ಧ ಇನ್ನೂ ತನಿಖೆ ಪ್ರಗತಿಯಲ್ಲಿದೆ. ಇದನ್ನು ANI ಸುದ್ದಿ ಸಂಸ್ಥೆಯೂ ದೃಢಪಡಿಸಿದೆ.

ಕಪಾಳಮೋಕ್ಷ ಘಟನೆ ಬಳಿಕ ಹಲವು ರೈತ ಸಂಘಟನೆಗಳು ಕುಲ್ವಿಂದರ್‌ಗೆ ಬೆಂಬಲ ಸೂಚಿಸಿದ್ದವು. ಇದಲ್ಲದೆ, ಅವರ ಇಡೀ ಕುಟುಂಬ ಮತ್ತು ಗ್ರಾಮಸ್ಥರು ಕುಲ್ವಿಂದರ್ ಬೆಂಬಲಕ್ಕೆ ಬಂದು ಅವರನ್ನು ಕೆಲಸದಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿದರು. ಪೊಲೀಸರು ಕುಲ್ವಿಂದರ್ ವಿರುದ್ಧ ಕ್ರಮ ಕೈಗೊಂಡು ಎಫ್‌ಐಆರ್ ದಾಖಲಿಸಿದ್ದಾರೆ. ಕಂಗನಾ ಅವರನ್ನು ಬೆಂಬಲಿಸಿ ಕಪಾಳಮೋಕ್ಷ ಮಾಡಿದ ಘಟನೆಯನ್ನು ಬಾಲಿವುಡ್ ಚಿತ್ರರಂಗದ ಕೆಲವರು ಖಂಡಿಸಿದ್ದರೆ, ಗಾಯಕ ವಿಶಾಲ್ ದದ್ಲಾನಿ ಸೇರಿದಂತೆ ಹಲವರು ಕುಲ್ವಿಂದರ್ ಬೆಂಬಲಕ್ಕೆ ಬಂದಿದ್ದರು. ಸಿಐಎಸ್ಎಫ್ ಸಿಬ್ಬಂದಿ ಹುದ್ದೆಯಿಂದ ತೆಗೆದು ಹಾಕಿದರೆ ಕೆಲಸ ಕೊಡಿಸುವುದಾಗಿ ವಿಶಾಲ್ ಹೇಳಿದ್ದರು.

ಈ ಘಟನೆಯ ನಂತರ ಸಿಐಎಸ್ಎಫ್ ಉನ್ನತ ಅಧಿಕಾರಿ ವಿನಯ್ ಕಾಜ್ಲಾ ಅವರು ಕುಲ್ವಿಂದರ್ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದ್ದಾರೆ.

ಟ್ರಿಬ್ಯೂನ್ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಭದ್ರತಾ ಲೋಪವಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಕುಲ್ವಿಂದರ್ ಈಗ ಕ್ಷಮೆ ಕೇಳಿದ್ದಾರೆ ಎಂದೂ ಅವರು ಹೇಳಿದ್ದಾರೆ. ಇದಲ್ಲದೇ ನಾನೇ ಕಂಗನಾ ರಣಾವತ್ ಅವರನ್ನು ಭೇಟಿಯಾಗಿ ಕ್ಷಮೆ ಕೇಳಿದ್ದೆ. ಕುಲ್ವಿಂದರ್ ಮತ್ತು ಅವರ ಕುಟುಂಬದ ಬಗ್ಗೆ ಕಂಗನಾ ಕೇಳಿದ್ದರು, ಅವರು ಯಾರು ಮತ್ತು ಕುಟುಂಬದ ಹಿನ್ನೆಲೆ ಏನು ಎಂದು ಕೇಳಿದ್ದರು ಎಂದೂ ಹೇಳಿದ್ದರು.

Related Articles

ಇತ್ತೀಚಿನ ಸುದ್ದಿಗಳು