Saturday, August 3, 2024

ಸತ್ಯ | ನ್ಯಾಯ |ಧರ್ಮ

ವಯನಾಡು ದುರಂತದಲ್ಲಿ ಸಾವಿನ ಸಂಖ್ಯೆ 344ಕ್ಕೆ ಏರಿಕೆ: 5ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ

ವಯನಾಡು: ಇಲ್ಲಿಯವರೆಗಿನ ಮಾಹಿತಿಯ ಪ್ರಕಾರ ವಯನಾಡ್ ಭೂ ಕುಸಿತದಲ್ಲಿ ಮೃತಪಟ್ಟಿರುವವರ ಸಂಖ್ಯೆ 344ಕ್ಕೆ ಏರಿಕೆಯಾಗಿದೆ ಎಂದು ಕೇರಳ ಸರಕಾರ ಪ್ರಕಟಿಸಿದೆ.

ಇಂದಿಗೆ ರಕ್ಷಣಾ ಕಾರ್ಯಾಚರಣೆಯು ಐದನೆಯ ದಿನಕ್ಕೆ ಕಾಲಿಟ್ಟಿದೆ. ಕುಸಿದಿರುವ ಮನೆಗಳು ಹಾಗೂ ಅವಶೇಷಗಳಡಿ ಇನ್ನೂ ಜೀವಂತವಾಗುಳಿದಿರುವವರನ್ನು ಪತ್ತೆ ಹಚ್ಚಲು ಡೀಪ್ ಸರ್ಚ್ ರೇಡಾರ್ ಅನ್ನು ಬಳಸಲಾಗುತ್ತಿದೆ.ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ಡೀಪ್ ಸರ್ಚ್ ರೇಡಾರ್ ಗಳನ್ನು ರವಾನಿಸುವಂತೆ ಕೇಂದ್ರ ಸರಕಾರಕ್ಕೆ ಕೇರಳ ಸರಕಾರ ಮನವಿ ಮಾಡಿದೆ.

ಶನಿವಾರ ಉತ್ತರ ಕಮಾಂಡ್ ನಿಂದ ಒಂದು ಕ್ಸೇವರ್ ರೇಡಾರ್ ಹಾಗೂ ದಿಲ್ಲಿಯ ತಿರಂಗ ಮೌಂಟೇನ್ ರೆಸ್ಕ್ಯೂ ಆರ್ಗನೈಸೇಷನ್ ನಿಂದ ನಾಲ್ಕು ರೀಕೊ ರಡಾರ್ ಗಳನ್ನು ಭಾರತೀಯ ವಾಯು ಪಡೆ ಏರ್ ಲಿಫ್ಟ್ ಮೂಲಕ ವಯನಾಡ್ ಗೆ ರವಾನಿಸಿವೆ.ಇಲ್ಲಿಯವರೆಗೆ 300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆಯಲ್ಲಿ ತಜ್ಞತೆ ಹೊಂದಿರುವ ಖಾಸಗಿ ಕಂಪನಿಗಳು, ಸ್ವಯಂ ಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಜೊತೆಗೂಡಿದ್ದಾರೆ. ಭಾರತೀಯ ಸೇನೆ, ಕೇರಳ ಪೊಲೀಸರು ಹಾಗೂ ತುರ್ತು ಸೇವಾ ಘಟಕಗಳು ಈ ಕಾರ್ಯಾಚರಣೆಯ ನೇತೃತ್ವ ವಹಿಸಿವೆ ಸರ್ಕಾರ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page