Wednesday, August 21, 2024

ಸತ್ಯ | ನ್ಯಾಯ |ಧರ್ಮ

ವಿ.ವಿ. ಘಟಕ ಕಾಲೇಜುಗಳನ್ನು ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಆಂದೋಲನ

ಮಂಗಳೂರು: ಇಲ್ಲಿನ ವಿ ವಿ ಘಟಕ ಕಾಲೇಜುಗಳನ್ನು ರಾಜ್ಯ ಸರಕಾರದ ಅಧೀನಕ್ಕೆ ಪಡೆಯಲು ಆಗ್ರಹಿಸಿ ನಿರ್ಣಯ ಕೈಗೊಳ್ಳವಂತೆ ಕುರ್ನಾಡು, ಬಾಳೆಪುಣಿ,ಬೋಳಿಯಾರ್ ಗ್ರಾಮ ಪಂಚಾಯತ್ ಗಳಿಗೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ಪ್ರಬಲ ಜನಾಭಿಪ್ರಾಯದಿಂದಾಗಿ ಮುಚ್ಚುವ ನಿರ್ಧಾರವನ್ನು ಸಡಿಲಿಸಿ, ಅಡ್ಮಿಷನ್ ಆರಂಭಿಸಲಾಗಿದ್ದ ಮಂಗಳೂರು ವಿ ವಿಯ ನಾಲಕ್ಕು ಘಟಕ ಪದವಿ ಕಾಲೇಜುಗಳನ್ನು ಮುಚ್ಚುವ ಪ್ರಕ್ರಿಯೆ ಮತ್ತೆ ಆರಂಭಗೊಂಡಿವೆ‌. ಕೊಣಾಜೆಯ ಮಂಗಳೂರು ವಿ ವಿ ಆವರಣದಲ್ಲಿರುವ ಪದವಿ ಕಾಲೇಜು, ಹಾಗೂ ನೆಲ್ಯಾಡಿ ಪದವಿ ಕಾಲೇಜುಗಳಲ್ಲಿ ಬಿ ಕಾಂ ಹೊರತು ಪಡಿಸಿ ಉಳಿದ ವಿಭಾಗಗಳಲ್ಲಿ ಅಡ್ಮಿಷನ್ ತಡೆ ಹಿಡಿದು ಪ್ರಥಮ ವರ್ಷದ ತರಗತಿಗಳನ್ನು ರದ್ದುಗೊಳಿಸಲಾಗುತ್ತಿದೆ. ಇನ್ನುಳಿದ ಎರಡು ಘಟಕ ಪದವಿ ಕಾಲೇಜುಗಳ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಈ ಹಿನ್ನಲೆಯಲ್ಲಿ ವಿ ವಿ ಘಟಕ ಪದವಿ ಕಾಲೇಜುಗಳನ್ನು ರಾಜ್ಯ ಸರಕಾರದ ಅಧೀನಕ್ಕೆ ಪಡೆದು ಶಿಕ್ಷಣ ಇಲಾಖೆಯಿಂದಲೇ ನಡೆಸಬೇಕು ಎಂಬ ಬೇಡಿಕೆಯನ್ನು ಬಲಗೊಳಿಸಲು, ಘಟಕ ಕಾಲೇಜುಗಳನ್ನು ಉಳಿಸುವ ಹೋರಾಟವನ್ನು ತೀವ್ರಗೊಳಿಸಲು ಮಂಗಳೂರು ವಿ ವಿ ಘಟಕ ಪದವಿ ಕಾಲೇಜುಗಳ ಉಳಿಸಿ ಹೋರಾಟ ಸಮಿತಿ ನಿರ್ಧರಿಸಿದೆ‌.

ಅದರ ಭಾಗವಾಗಿ ಉಳ್ಳಾಲ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳು “ಘಟಕ ಪದವಿ ಕಾಲೇಜುಗಳನ್ನು ರಾಜ್ಯ ಸರಕಾರವೇ ಅಧೀನಕ್ಕೆ ಪಡೆದು ಶಿಕ್ಷಣ ಇಲಾಖೆಯ ಮೂಲಕ ನಡೆಸಬೇಕು” ಎಂಬ ನಿರ್ಣಯವನ್ನು ಕೈಗೊಂಡು ಸರಕಾರಕ್ಕೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಲು ತೀರ್ಮಾನಿಸಲಾಗಿದೆ.

ಇಂದು ಬೋಳಿಯಾರ್ ,ಕುರ್ನಾಡು ಹಾಗೂ ಬಾಳೆಪುಣಿ ಗ್ರಾಮ ಪಂಚಾಯತ್ ಗಳಿಗೆ ಹೋರಾಟ ಸಮಿತಿಯ ನಿಯೋಗ ಭೇಟಿ ಪಂಚಾಯತ್ ಅಧ್ಯಕ್ಷರುಗಳಿಗೆ ವಿಷಯ ಮನದಟ್ಟು ಮಾಡಿ ವಿನಂತಿ ಪತ್ರವನ್ನು ನೀಡಲಾಯಿತು. ಕುರ್ನಾಡು ಪಂಚಾಯತ್ ನಲ್ಲಿ ಅಧ್ಯಕ್ಷೆ ಶ್ರೀಮತಿ ಲೋಲಾಕ್ಷಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೇಶವ್ ಉಪಸ್ಥಿತಿಯಲ್ಲಿ ವಿನಂತಿ ಪತ್ರ ನೀಡಲಾಯಿತು. ಬೋಳಿಯಾರ್ ಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾರಾಣಿಯವರಿಗೆ ವಿನಂತಿ ಪತ್ರ ನೀಡಲಾಯಿತು.

ಬಾಳೆಪುಣಿ ಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ವೆಂಕಟೇಶ್,ಸದಸ್ಯರಾದ ಯಾಕುಬ್ ಮತ್ತು ಅಬ್ದುಲ್ ರಹಿಮಾನ್ ಉಪಸ್ಥಿತಿಯಲ್ಲಿ ವಿನಂತಿ ಪತ್ರ ನೀಡಲಾಯಿತು. ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹೋರಾಟ ಸಮಿತಿಯ ವಿನಂತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ಹೋರಾಟ ಸಮಿತಿಯ ನಿಯೋಗದಲ್ಲಿ , ಹೋರಾಟ ಸಮಿತಿಯ ಸಂಚಾಲಕ ರಿಝ್ವಾನ್ ಹರೇಕಳ, ಮುಖಂಡರಾದ ರಝಾಕ್ ಮುಡಿಪು ಫಾರೂಕ್ ಕೊಣಾಜೆ, ಬಾಪು ಅಮ್ಮೆಂಬಳ‌,ಶಮೀರ್ ಬೋಳಿಯಾರ್,ಫರಾನ್ ಬೋಳಿಯಾರ್ ,ರಿಯಾಝ್ ಬೋಳಿಯಾರ್ ಮುಂತಾದವರು ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page