Friday, October 18, 2024

ಸತ್ಯ | ನ್ಯಾಯ |ಧರ್ಮ

ಜೈಲಲ್ಲಿರುವ ದರ್ಶನ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ; ಹಳೆ ಕೇಸ್ ಗೆ ಮರುಜೀವ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಸೇರಿ ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರೋ ಆರೋಪಿ ದರ್ಶನ್ ಗೆ ಮತ್ತೆ ಮತ್ತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ಈ ಬಾರಿ ಹಳೇ ಪ್ರಕರಣವೊಂದು ಮರುಜೀವ ಪಡೆದುಕೊಂಡಿದ್ದು, ಬೆದರಿಕೆ ಹಾಕಿದ ಕೇಸ್ ನಲ್ಲಿ ದರ್ಶನ್ ವಿರುದ್ದ NCR ದಾಖಲಾಗಿದೆ.

2022 ರ ಆಗಸ್ಟ್ ನಲ್ಲಿ ಕೆಂಗೇರಿ ಠಾಣೆಯಲ್ಲಿ ನಿರ್ಮಾಪಕ ಭರತ್ಗೆ ಕರೆ ಮಾಡಿ ದರ್ಶನ್ ಬೆದರಿಕೆ ಹಾಕಿದ್ದ ಕೇಸ್ ಇದೀಗ ಮರುಜೀವ ಪಡೆದುಕೊಂಡಿದೆ. ಈ ಕುರಿತಂತೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಎನ್ ಸಿ ಆರ್ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧ್ರುವನ್ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿತ್ತು. ಸಿನಿಮಾ ವಿಚಾರವಾಗಿ ಕೆಲವು ತಕರಾರುಗಳು ಇದ್ದ ಹಿನ್ನೆಲೆಯಲ್ಲಿ ನಟ ದರ್ಶನ್ ಬಳಿ ದ್ರುವನ್ ಹೋಗಿ ತಮ್ಮ ಸಮಸ್ಯೆ ಹಂಚಿಕೊಂಡಿದ್ದರು. ಹಾಗೇ ದರ್ಶನ್ ಮೂಲಕ ನಿರ್ಮಾಪಕ ಭರತ್ ಗೆ ದ್ರುವನ್ ಕರೆ ಮಾಡಿಸಿದ್ದರು. ಸಿನಿಮಾ ಚಿತ್ರೀಕರಣ ಮುಗಿಸದಿದ್ದರೆ ನೀನೇ ಇರುವುದಿಲ್ಲ ಎಂದು ದರ್ಶನ್ ಬೆದರಿಕೆ ಹಾಕಿದ್ದರು.

ಇದೇ ವಿಚಾರವಾಗಿ ನಿರ್ಮಾಪಕ ಭರತ್ ಕೆಂಗೇರಿ ಠಾಣೆಗೆ ಅಂದು ದೂರು ನೀಡಿದ್ದರು. ಧ್ರುವನ್ ದರ್ಶನ್ ಬಳಿ ಹೋಗಿ ಬೆದರಿಕೆ ಹಾಕಿಸಿದ್ದಾನೆಂದು ಅಂದೇ ಎಂಸಿಆರ್ ದಾಖಲಾಗಿತ್ತು. ಆದರೆ ಪೊಲೀಸರು ಧ್ರುವನ್ ಮತ್ತು ದರ್ಶನ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ನಿರ್ಮಾಪಕ ಭರತ್ “ಭಗವಾನ್ ಶ್ರೀ ಕೃಷ್ಣ” ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಅದು ಕೋವಿಡ್ ಸಮಯವಾದ್ದರಿಂದ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಂತು ಹೋಗಿತ್ತು. ಇದೇ ವಿಚಾರವಾಗಿ ಚಿತ್ರದ ನಾಯಕ ನಟ ದ್ರವ ದರ್ಶನ್ ಬಳಿ ಹೋಗಿದ್ದರು.

ಇದೀಗ ಬೆದರಿಕೆ ಆರೋಪದಡಿ ನಟ ಧ್ರುವನ್ ಅಲಿಯಾಸ್ ಸೂರಜ್ ಕುಮಾರ್, ನಟ ದರ್ಶನ್ ಹಾಗೂ ದರ್ಶನ್ ಮ್ಯಾನೇಜರ್ ನಾಗರಾಜ್ ವಿರುದ್ಧ ಹೊಸದಾಗಿ NCR ದಾಖಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page