Sunday, December 8, 2024

ಸತ್ಯ | ನ್ಯಾಯ |ಧರ್ಮ

ಡಿ.9ರಂದು ಕಾವೇರಿ ಕುಡಿಯುವ ನೀರಿನ ಹೊಸ ಸಂಪರ್ಕಗಳ ಅಭಿಯಾನ

ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಗೆ ಬರುವ 110 ಹಳ್ಳಿಗಳ ಪೈಕಿ ಹೆಮ್ಮಿಗೆಪುರ ಗ್ರಾಮದಲ್ಲಿ ಡಿಸೆಂಬರ್‌ ರ್‌ 9ರಂದು ಕುಡಿಯುವ ನೀರಿನ ಹೊಸ ಸಂಪರ್ಕಗಳ ಅಭಿಯಾನ ನಡೆಯಲಿದೆ ಎಂದು ಸರ್ಕಾರಿ ಕಾವೇರಿ ನಿಗಮ ಅಭಿವೃದ್ಧಿ ವಿಭಾಗದ ಅಭಿಯಂತರರಾದ ಜಯಪ್ರಕಾಶ್‌ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆ ಪ್ರಕಟಣೆ ಹೊರಡಿಸಿರುವ ಅವರು, “ಹೆಮ್ಮಿಗೆಪುರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಡಿಸೆಂರ್‌ 9ರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಅಭಿಯಾನ ನಡೆಯಲಿದೆ. ಹೊಸ ಸಂಪರ್ಕ ಪಡೆಯಲು ಬಯಸುವ ನಾಗರಿಕರು ಅಧಿಕೃತ ದಾಖಲೆಗಳೊಂದಿಗೆ ಸಂಪರ್ಕಿಸಬಹುದು” ಎಂದು ತಿಳಿಸಿದ್ದಾರೆ.

“ಅಧಿಕೃತ ದಾಖಲೆಗಳಾದ ಮನೆಯ ಹಕ್ಕು ಪತ್ರ ಅಥವಾ ಕ್ರಯಾ ಪತ್ರ, ಕಂದಾಯ ರಸೀದಿ, ಖಾತಾ ದೃಢೀಕರಣ ಪತ್ರ, ಕಟ್ಟಡ /ಮನೆಯ ಭಾವಚಿತ್ರ, ಮನೆ ಮಾಲೀಕರ ಭಾವಚಿತ್ರ, ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಮಳೆ ನೀರು ಕೊಯ್ಲು ಪದ್ದತಿ ಅಳವಡಿಸಿರುವ ಭಾವ ಚಿತ್ರ(30 ×40 ಚದರ ಅಳತೆ ಮತ್ತು ಅದರ ಮೇಲ್ಪಟ್ಟ ನೀವೇಶನಗಳಿಗೆ)ಗಳೊಂದಿಗೆ www.bwssb.Karnataka.gov.in ಮೂಲಕ ಆನ್‌ಲೈನ್‌ ಅರ್ಜಿ ಸಲಿಸಬಹುದು” ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page