Tuesday, March 25, 2025

ಸತ್ಯ | ನ್ಯಾಯ |ಧರ್ಮ

ಉಡುಪಿ: ಪರೀಕ್ಷೆ ಭಯದಿಂದ ಬೊಬ್ಬರ್ಯ ದೈವಕ್ಕೆ ಪತ್ರ ಬರೆದ ವಿದ್ಯಾರ್ಥಿ!

ವಿದ್ಯಾರ್ಥಿಯೊಬ್ಬ ದೈವವೊಂದಕ್ಕೆ ಚೀಟಿಯಲ್ಲಿ ಪತ್ರ ಬರೆದು “ನನ್ನನ್ನು ಜಸ್ಟ್ ಪಾಸ್ ಮಾಡು ಸಾಕು,” ಎಂದು ಹರಕೆ ಇಟ್ಟ ಘಟನೆ ಉಡುಪಿಯ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇವಾಲಯದ ಕಾಣಿಕೆ ಹುಂಡಿಯ ಹಣ ಲೆಕ್ಕಾಚಾರ ಮಾಡುವಾಗ ಈ ಪತ್ರ ಪತ್ತೆಯಾಗಿದೆ.

ಪರೀಕ್ಷೆಗಳನ್ನು ಎದುರಿಸಲು ಮಾನಸಿಕವಾಗಿ ಭಯವನ್ನು ಹುಟ್ಟುಹಾಕುವ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಯ ಫಲವಾಗಿ ವಿದ್ಯಾರ್ಥಿಗಳು ದೇವರು ದಿಂಡಿರ ಮೊರೆ ಹೋಗುವಂತಾಗಿದೆ. ʼಜಸ್ಟ್ ಪಾಸ್ ಆದ್ರೆ ಸಾಕು,ʼ ಎಂಬ ಕೋರಿಕೆಯೊಂದಿಗೆ ವಿದ್ಯಾರ್ಥಿ ಬೊಬ್ಬರ್ಯ ದೈವಕ್ಕೆ ಹರಕೆ ಇಟ್ಟಿದ್ದಾನೆ. ಪತ್ರದಲ್ಲಿ ಯಾವ ವಿಷಯದಲ್ಲಿ ಎಷ್ಟು ಅಂಕ ಬರಬೇಕು ಎಂದು ಕೂಡ ಆತ ಬರೆದಿದ್ದಾನೆ. ಇದಕ್ಕಿಂತ ಕಡಿಮೆ ಅಂಕ ಬರುವುದು ಬೇಡವೇ ಬೇಡ ಎಂದು ಮೊರೆ ಇಟ್ಟಿದ್ದಾನೆ.

ತಮಾಷೆಯಾಗಿ ಕಂಡರೂ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಇರುವ ಭಯವನ್ನು ಇದು ತೋರಿಸುತ್ತದೆ. ವಿದ್ಯಾರ್ಥಿಗಳಲ್ಲಿ ಕುಗ್ಗಿಹೋಗುತ್ತಿರುವ ಆತ್ಮವಿಶ್ವಾಸವನ್ನು ಇದು ತೋರಿಸುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page