Sunday, April 27, 2025

ಸತ್ಯ | ನ್ಯಾಯ |ಧರ್ಮ

ಪಹಲ್ಗಾಮ್ ನಲ್ಲಿ ನಡೆದ ದಾಳಿ ಕಾಂಗ್ರೇಸ್‌ವತಿಯಿಂದ ಮೌನ ಮೆರವಣಿಗೆ

ಹಾಸನ : ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರಿಗೆ ಕಾಂಗ್ರೆಸ್ ಪಕ್ಷದವತಿಯಿಂದ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿದರು. ಜೊತೆಗೆ ಸಾವನಪ್ಪಿದವರಿಗೆ ಇದೆ ವೇಳೆ ಶಾಂತಿ ಕೋರಿದರು. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಇಂದು ಸಂಜೆ ಹೊರಟ ಮೌನ ಮೆರವಣಿಗೆಯು ಎನ್.ಆರ್. ವೃತ್ತಕ್ಕೆ ಬಂದು ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ತಮ್ಮ ಕಾಶ್ಮೀರದಲ್ಲಿ ನಡೆದ ದಾಳಿ ಬಗ್ಗೆ ಆಕ್ರೋಶವ್ಯಕ್ತಪಡಿಸಿದರು. ಇದೆ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷಣ್ ಮಾಧ್ಯಮದೊಂದಿಗೆ ಮಾತನಾಡಿ, ಅಖಂಡ ಭಾರತದ ಜನಸಂಖ್ಯೆಗೆ ಸವಾಲು ಹಾಕಿರುವ ಟೆರೆರಿಸ್ಟ್ ಗಳು ಕಾಶ್ಮೀರದಲ್ಲಿ ನಮ್ಮ ಕನ್ನಡಿಗರನ್ನು ಹಾಗೂ ಭಾರತದ 26 ಜನರನ್ನು ಗುಂಡಿಕ್ಕಿ ಕೊಲೆ ಮಾಡಿರುವುದು ಇಡಿ ದೇಶದಲ್ಲಿ ಪಕ್ಷತೀತವಾಗಿ ಇಡೀ ಭಾರತದ ಜನಸಂಖ್ಯೆ ಒಗ್ಗಟ್ಟಾಗಿ ನಮ್ಮ ದೇಶವನ್ನು ಧ್ವೇಷದಿಂದ ಕಾಡುತ್ತಿರುವ ಪಾಕಿಸ್ತಾನವನ್ನು ಸರ್ವನಾಶ ಮಾಡುವುದಕ್ಕೆ ನಾವು ಎಲ್ಲಾರೂ ಹಾಗೂ ನಮ್ಮ ರಾಷ್ಟಿಯ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಒಂದಾಗಿ ಎದುರಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

ಹಾಸನದಲ್ಲೂ ಕೂಡ ಕಾಂಗ್ರೆಸ್ ಪಕ್ಷದಿಂದ ಸಂತಾಪ ಸೂಚಿಸಿ ಮೌನಮೆರವಣಿಗೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ನಮ್ಮ ದೇಶವನ್ನು ಅಭದ್ರಗೊಳಿಸಲು ಮುಂದಾದ ಉಗ್ರಗಾಮಿಗಳನ್ನು ನಾಶ ಮಾಡಬೇಕು. ಪಾಕಿಸ್ತಾನದವರು ಯಾವತ್ತು ಸರ್ವನಾಶ ಆಗುತ್ತಾರೆ ಅಂದು ಹಬ್ಬದ ರೀತಿ ಆಚರಣೆ ಮಾಡಲಾಗುವುದು ಎಂದು ಆಕ್ರೋಶವ್ಯಕ್ತಪಡಿಸಿದರು.


ಕಾಂಗ್ರೆಸ್ ಯುವ ಮುಖಂಡ ಚಂದ್ರಶೇಖರ್ ಮಾಧ್ಯಮದೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಇರುವ ಅಧಿಕಾರಕ್ಕೆ ನಾವು ಸಹಕಾರ ಕೊಡುತ್ತಿದ್ದೇವೆ. ಇಡೀ ದೇಶವನ್ನು ಎಲ್ಲಾರು ಒಂದಾಗಿ ಎದುರಿಸಬೇಕು ಎಂದು ಸಂದೇಶ ಕೊಡುತ್ತಿರುವುದಾಗಿ ಹೇಳಿದರು. ಏಪ್ರಿಲ್ 22 ರಂದು ಕಾಶ್ಮೀರದ ಪ್ರವಾಸಿ ತಾಣದಲ್ಲಿ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ದಾಳಿಯಲ್ಲಿ ಸಾವನಪ್ಪಿದ ಅವರಿಗೆ ದೇವರು ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಈ ವಿಶ್ವ ಭೂಪಟದಿಂದಲೇ ಪಾಕಿಸ್ತಾನವನ್ನು ಹೊರ ಹಾಕಬೇಕು ಎಂದು ಆಗ್ರಹಿಸಿದರು.
ಮೌನ ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಶರ್ಮ, ತಾರಚಂದನ್, ಅಶ್ರೂ, ವಿನಯ್ ಗಾಂಧಿ, ರಾಮಚಂದ್ರ, ಅಶೋಕ್, ಸ್ವರೂಪ್, ಪ್ರಕಾಶ್, ಕಯಿಂ ಸೇರಿದಂತೆ ಇತರರು ಉಪಸ್ಥಿತರಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page