Sunday, April 27, 2025

ಸತ್ಯ | ನ್ಯಾಯ |ಧರ್ಮ

ಪ್ರಸ್ತುತ ಧರ್ಮ ಮತ್ತು ರಾಜಕಾರಣ ದಾರಿ ತಪ್ಪಿದ್ದು ಸರಿದಾರಿಗೆ ಕರೆದೊಯುವ ಕೆಲಸ ಆಗಲಿ – ಡಾ. ಬೈರಮಂಗಲ ರಾಮೇಗೌಡ

ಹಾಸನ : ಪ್ರಸ್ತುತ ದಿನಗಳಲ್ಲಿ ಧರ್ಮ ಮತ್ತು ರಾಜಕಾರಣ ಸೇರಿದಂತೆ ಇತರೆಗಳಿಂದ ದಾರಿ ತಪ್ಪಿದ್ದು ಅವುಗಳನ್ನು ಸರಿದಾರಿಗೆ ಕರೆದೊಯ್ಯುವ ಕೆಲಸವನ್ನು ಕಾವ್ಯಗಳು ಮಾಡಬೇಕು ಎಂದು ಬಿಎಂಶ್ರೀ ಪ್ರತಿಷ್ಠಾನ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ತಿಳಿಸಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಪ್ರತಿ ಜಿಲ್ಲೆ ಹೊರನಾಡಿನ ಕನ್ನಡ ಪ್ರದೇಶಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿ ತಿಂಗಳ ಮೂರನೇ ಭಾನುವಾರ ಆಯೋಜಿಸಿರುವ ಕವಿಗೋಷ್ಠಿ ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಧರ್ಮ ಮತ್ತು ರಾಜಕಾರಣ ದಾರಿ ತಪ್ಪಿದ್ದು ಅವುಗಳನ್ನು ಸರಿದಾರಿಗೆ ಕರೆದೊಯ್ಯುವ ಕೆಲಸವನ್ನು ಕಾವ್ಯಗಳು ಮಾಡಬೇಕು ಎಂದು ಸಮಾಜದಲ್ಲಿ ನಿತ್ಯ ನಡೆಯುವ ಅಧ್ವಾನ, ಅನಾಚಾರ, ಭ್ರಷ್ಟಾಚಾರಗಳನ್ನು ಸೂಕ್ಷ್ಮವಾಗಿ ಕುಟುಕುವ ಕೆಲಸವನ್ನು ಕಾವ್ಯ ಮಾಡುತ್ತದೆ. ತಪ್ಪುಗಳನ್ನು ಮೊನಚಾದ ಬರಹಗಳ ಮೂಲಕ ಸಮಾಜಕ್ಕೆ ತಿಳಿಸುವ ಕೆಲಸವನ್ನು ಕವಿ ನಿರಂತರವಾಗಿ ಮಾಡುತ್ತಾನೆ. ಕವಿಯು ಅಂತರಂಗದ ಭಾವನೆಯನ್ನು ಬರಹ ರೂಪದಲ್ಲಿ ಪ್ರಕಟಿಸಿದಾಗ ಜೈಲು ಶಿಕ್ಷೆ ಅನುಭವಿಸಿದ ನಿದರ್ಶನಗಳು ಸಾಕಷ್ಟಿವೆ ಎಂದರು. ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮೇರಿಕಾದ ಲೇಖಕ ಗೆಬ್ರಿಯಲ್ ಗಾರ್ಸಿಯಾ ಕೂಡ ವಿಶ್ವದಲ್ಲಿ ರಾಜಕಾರಣ ಮಾತ್ರವಲ್ಲದೆ ಧರ್ಮವೂ ಕಲುಷಿತಗೊಂಡಿದೆ ಎಂದು ಹೇಳಿದ್ದಾರೆ. ರಾಜಕಾರಣವನ್ನು ಸರಿದಾರಿಗೆ ತರಲು, ತಪ್ಪು ಮಾಡುವವರ ಕಿವಿ ಹಿಂಡಲು ಕಾವ್ಯ ನೆರವಾಗುತ್ತದೆ ಎಂದ


ವಾಮನ ರೂಪಿ ಕಾವ್ಯಕ್ಕೆ ತ್ರಿವಿಕ್ರಮ ಶಕ್ತಿ ಇದೆ. ಕಾವ್ಯ ಯಾವಾಗ ಪ್ರಾರಂಭವಾಯಿತೋ ಆಗಿನಿಂದಲೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ. ಸರ್ಕಾರಿ ಪ್ರಾಯೋಜಿತ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಪ್ರತಿಭಾನ್ವಿತ ಕವಿಗಳಿಗೆ ವೇದಿಕೆ ಸಿಗುವುದಿಲ್ಲ. ಅದರಿಂದ ಮನನೊಂದ ಸಮಾನ ಮನಸ್ಕರೆಲ್ಲ ಒಟ್ಟಾಗಿ ಕಾವ್ಯ ಸಂಸ್ಕೃತಿ ಯಾನ ಸಂಘಟನೆ ರಚಿಸಿದ್ದು ಪ್ರತಿ ಜಿಲ್ಲೆಗೂ ಭೇಟಿ ನೀಡುತ್ತಿದ್ದೇವೆ. ಕವಿಗೋಷ್ಠಿ ಆಯೋಜನೆ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. ರಂಗಕರ್ಮಿ, ಕಾವ್ಯ ಸಂಸ್ಕೃತಿ ಯಾನ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನನಸ್ವಾಮಿ ಮಹಾಮನೆ ಪ್ರಸ್ತಾವಿಕ ನುಡಿಯಲ್ಲಿ ಮಾತನಾಡಿ, ಸಮಾಜದಲ್ಲಿ ಸುಧಾರಿಸುವುದು ಇದ್ರೆ ಅದು ಈ ಕಾವ್ಯ. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ಬದುಕೆ ಕಷ್ಟವಾಗಿತು. ಈ ಸಂದರ್ಭದಲ್ಲಿ ಚೈತನ್ಯ ತುಂಬಿರುವುದು ಈ ಕವಿತೆ. ಹೊಸ ಚೈತನ್ಯ. ಕಾವ್ಯ ಎಂಬುದು ಒಂದು ಸಮಾಜಕ್ಕೆ ಸರಳ ಬದುಕು ನೀಡಿತು. ಹೃಯದಕ್ಕೆ ತಟ್ಟಿತು. ಕಾವ್ಯ ಎಂಬುದು, ಯಾರೋಬ್ಬರ ಸ್ವತ್ತು ಅಲ್ಲ. ಸಾಮಾನ್ಯ ಜನರು ಸ್ವತ್ತು. ಕಾವ್ಯ ಬರೆಯುವಾಗ ಯಾವ ಶ್ರೀಮಂತಿಕೆ ಕಾಣುವುದಿಲ್ಲ. ಇಂದು ಇಡೀ ದೇಶದಲ್ಲಿ ಏನು ಕಾಡುತ್ತಿದೆ ಬಗ್ಗೆ ಯೋಚನೆ ಮಾಡಬೇಕು ಎಂದರು.

ನಾಟಕಕಾರ ಡಾ. ಚಂದ್ರು ಕಾಳೇನಹಳ್ಳಿ ಮಾತನಾಡಿ, ಸಮಾಜದಲ್ಲಿ ನಿತ್ಯ ನಡೆಯುವ ಅಧ್ವಾನ, ಅನಾಚಾರ, ಭ್ರಷ್ಟಾಚಾರಗಳನ್ನು ಸೂಕ್ಷ್ಮವಾಗಿ ಕುಟುಕುವ ಕೆಲಸವನ್ನು ಕಾವ್ಯ ಮಾಡುತ್ತದೆ. ಪಂಪನಿAದ ಕುವೆಂಪು ವರೆಗೆ ಹಲವು ಕವಿಗಳನ್ನು ಕನ್ನಡ ನಾಡು ಕಂಡಿದೆ. ಆದರೆ ಯಾರೂ ಕೂಡ ರಾಜ ಪ್ರಭುತ್ವಕ್ಕೆ ಗುಲಾಮರಾಗಲಿಲ್ಲ. ಕವಿಗಳು ನೊಂದವರ ದು:ಖ ದುಮಾನಗಳನ್ನು ಬರವಣಿಗೆ ಮೂಲಕ ಸಮಾಜಕ್ಕೆ ಹೇಳಿದರು. ರಾಜಮನೆತನದ ಆಶ್ರಯ ಪಡೆದರೂ ಸಹ ಗುಲಾಮರಾಗಿರಲಿಲ್ಲ ಎಂದರು. ಕನ್ನಡ ಸಾಹಿತ್ಯ ಹಲವು ಮಜಲುಗಳನ್ನು ಕಂಡಿದೆ. ಕವಿಯಾಗಲು ಕೇವಲ ಕನಸು ಕಂಡರೆ ಸಾಲುವುದಿಲ್ಲ. ಆತ ಕವಿತ್ವವನ್ನು ಮೈಗೂಡಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಹಿರಿಯ ಸಾಹಿತಿ ಭಾನುಮುಸ್ತಾಕ್, ಪ್ರೇಮಕಲಾ, ಚಂದ್ರಶೇಖರ್, ರಂಗಕರ್ಮಿ ಉಲಿವಾಳ್ ಮೋಹನ್, ರಂಗ ಕಲಾವಿದ ಗೋವಿಂದೇಗೌಡ, ಕಸಪಾ ಜಿಲ್ಲಾಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ, ಸಾಹಿತಿ ಹಾಡ್ಳಳ್ಳಿ ನಾಗರಾಜು, ಗುಂಡಣ್ಣ, ಸಂಚಾಲಕ ಚಲಂ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page