Sunday, April 27, 2025

ಸತ್ಯ | ನ್ಯಾಯ |ಧರ್ಮ

ಮನೆ ಮನೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುವಂತಾಗಬೇಕು : ಚಿಂತಕ ಪ್ರೊ. ಎಂ.ಎಸ್. ಶೇಖರ್

ಹಾಸನ : ಪ್ರಪಂಚದದ್ಯಾಂತ ಡಾ.ಬಿ .ಆರ್ ಅಂಬೇಡ್ಕರ್‌ರವರ ದಿನಾಚರಣೆಯನ್ನು ವಿಶ್ವಜ್ಞಾನಿ ದಿನಾಚರಣೆಯಾಗಿ ಆಚರಿಸುತ್ತಾರೆ, ಆದರೆ ಭಾರತದಲ್ಲಿ ಅವರನ್ನು ಜಾತಿಯ ಹಿನ್ನಲೆಯಲ್ಲಿ ನೋಡಿ ಅವರ ಪೋಟೋಗಳಿಗೆ ಮಸಿ ಬಳಿಯವಂತಹ ಹೇಯ ಕೃತ್ಯಗಳನ್ನು ಮಾಡುತ್ತಾರೆ ಎಂದು ಪ್ರಾಧ್ಯಾಪಕರು, ಪ್ರಸಿದ್ಧ ಚಿಂತಕರು, ಬರಹಗಾರರಾದ ಪ್ರೊ. ಎಂ.ಎಸ್. ಶೇಖರ್ ಬೇಸರ ವ್ಯಕ್ತಪಡಿಸಿದರು.
ನಗರದ ಎಂ.ಕೃಷ್ಣ ಕಾನೂನು ಕಾಲೇಜಿನಲ್ಲಿ ನೆಡೆದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಾಕಾರಾಗಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಇಷ್ಟು ಆಳವಾದ ಜ್ಞಾನವನ್ನು ಸಂಪಾದಿಸುವುದು ಅಷ್ಟು ಸುಲಭವಲ್ಲ ಇವರು ಅಧ್ಯಯನ ಮಾಡದ ವಿಷಯವೇ ಇಲ್ಲ ಆದ್ದರಿಂದ ಇವರನ್ನು ವಿಶ್ವಜ್ಞಾನಿ ಎಂದು ಕರೆಯುತ್ತಾರೆ ದೇಶದಲ್ಲಿ ಇವರನ್ನು ರಾಜಕೀಯ ಬೆಳೆ ಬೆಯಿಸಿಕೊಳ್ಳುವ ಸಲುವಾಗಿ ಮತ್ತು ಓಟಿನ ಬ್ಯಾಂಕಿಗಾಗಿ ಇವರ ಪೋಟೋಗಳನ್ನು ವಲ್ಲದ ಮನಸ್ಸಿಂದ ಆಚರಿಸುತ್ತಾರೆ ಎಂದರು. ಅಂಬೇಡ್ಕರ್ ರವರು ಈ ದೇಶದ ಆಸ್ತಿ, ಹಾಗಾಗಿ ಇವರನ್ನು ಪೊಸ್ಟ್ರ್‌ಗಳಲ್ಲಿ ಅಥವಾ ಬ್ಯಾನರ್‌ಗಳಲ್ಲಿ ರಾರಾಜಿಸುವ ಹೊರತು ಭಾರತದ ಮನೆ ಮನೆಯಲ್ಲಿ ಅವರ ಪೋಟೋ ಇಟ್ಟು ಆಚರಣೆ ಮಾಡುವಂತಹ ವಾತಾವರಣ ಸೃಷ್ಟಿಯಾಗಬೇಕು ಆಗಿದ್ದಾಗ ಮಾತ್ರ ಇವರ ಜನ್ಮ ದಿನಾಚರಣೆಗೆ ಒಂದು ಅರ್ಥವಿರುತ್ತದೆ. ಎಂದು ಮುಂದುವರೆದು ಬಾಬಾಸಾಹೇಬ್ ಅಂಬೇಡ್ಕರ್ ರವರು ಬರೆದಂತಹ ಗ್ರಂಥ ಆದುವೇ “ಸಂವಿಧಾನ” ಅದು ಈ ದೇಶದ ಪವಿತ್ರ ಗ್ರಂಥ. ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸಮಾನ ಬದುಕು, ಸ್ವತಂತ್ರ ಬದುಕು, ರಾಜಕೀಯ ಬದುಕು, ದಾರ್ಮಿಕ ಬದುಕು, ವಿಶೇಷವಾಗಿ ಮಹಿಳೆಯರಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯದಾಗಿ ಸಮಾನವಾಗಿ ಮತ್ತು ಪುರುಷರಿಗೆ ಸರಿಸಮಾನರಾಗಿ ಬದುಕುವ ಹಕ್ಕು ಕಲ್ಪಿಸದಂತಹ ಒಬ್ಬ ಮಹಾನ್ ಪುರುಷ ಡಾ. ಬಿ.ಆರ್ ಅಂಬೇಡ್ಕರವರು, ಭಾರತ ದೇಶ ಈ ದೇಶದ ಪರಂಪರೆ, ಜಾತಿ ವ್ಯವಸ್ಥೆ ರಾಜಕೀಯ ವ್ಯವಸ್ಥೆಯ ಬಗ್ಗೆ ಅಪಾರವಾದಂತಹ ಒಂದು ಜ್ಞಾನವನ್ನು ಅವರು ಹೊಂದಿದ್ದರು. ಹಾಗಾಗಿಯೇ ಅವರು ಈ ದೇಶದ ಸರ್ವಜನಾಂಗದ ರಕ್ಷಣೆಯಾದಂತಹ ಪವಿತ್ರಗ್ರಂಥವಾದ ಭಾರತದ ಸಂವಿಧಾನವನ್ನು ರಚಿಸಿದರು. ಅಂಬೇಡ್ಕರ್ ರವರು ನೆನಪು ಅಂದರೆ ಅದು ಸತ್ಯದ ನೆನಪು ಮಾನವೀಯತೆಯ ನೆನಪು, ಸ್ವಾಭಿಮಾನದ ನೆನಪು ಎಂಬ ಅಭಿಪ್ರಾಯ ವ್ಯಕ್ತಪಡಿಸಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಕೃಷ್ಣ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ವಿ ಶ್ರೀನಿವಾಸ ವಹಿಸಿದ್ದರು, ಕಾರ್ಯಕ್ರಮ ಸಂಯೋಜ ಡಾ. ಉಮೇಶ ಎಂ.ಬಿ ಉಪನ್ಯಾಸಕರಾದ ಚಂದ್ರಹಾಸ ಡಾ. ಹೇಮಂತಕುಮಾರ್ ಶ್ರೀಮತಿ ರೇಖಾ ಕೆ.ಎಸ್. ಮತ್ತು ಸೀಮಾ ಫಿರ್ದೋಸ್ ಮತ್ತು ಭೋದಕೇತರ ಸಿಬ್ಬಂದಿಗಳು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page