Friday, June 20, 2025

ಸತ್ಯ | ನ್ಯಾಯ |ಧರ್ಮ

63 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ಆರ್.ಟಿ.ಓ. ನೂತನ ಕಛೇರಿಯನ್ನು ಲೋಕಾರ್ಪಣೆಗೊಳಿಸಿದ – ಶಾಸಕ ಹೆಚ್.ಪಿ. ಸ್ವರೂಪ್


ಹಾಸನ : ನಗರದ ಹೊರವಲಯ ಅರಸೀಕೆರೆ ರಸ್ತೆ, ಬಿ. ಕಾಟಿಹಳ್ಳಿ ಬಳಿ ಇರುವ ಸಾರಿಗೆ ಇಲಾಖೆಯ ಆವರಣದಲ್ಲಿ ಗುರುವಾರದಂದು ಸುಮಾರು 63 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ಕಟ್ಟಡ ಹಾಗೂ ದುರಸ್ತಿಗೊಂಡ ಆರ್.ಟಿ.ಓ. ಕಛೇರಿಯನ್ನು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಟೇಪ್ ಕತ್ತರಿಸಿ ಪೂಜೆ ಸಲ್ಲಿಸುವುದರ ಮೂಲಕ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ಆರ್.ಟಿ.ಓ. ಕಛೇರಿ ದುರಸ್ತಿಯಲ್ಲಿತ್ತು. ಬಹಳ ಹಳೆಯದಾದ ಕಟ್ಟಡ. ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರನ್ನು ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಮತ್ತು ಸಾರಿಗೆ ಅಧಿಕಾರಿ ರಾಜಕುಮಾರ್ ಅವರು ಸೇರಿದಂತೆ ಎಲ್ಲಾರೂ ಕೂಡ ಮನವಿ ಮಾಡಲಾಯಿತು. ನಂತರದಲ್ಲಿ 63 ಲಕ್ಷ ರೂಗಳ ಅನುಧಾನ ಬಿಡುಗಡೆ ಮಾಡಿದರು. ಆರ್ ಟಿ ಓ ಇಲಾಖೆ ದುರಸ್ತಿ ಮತ್ತು ಗುಣಮಟ್ಟದ ಹೊಸ ಕೊಠಡಿಯನ್ನು ಕೂಡ ನಿರ್ಮಿಸಿ ಉದ್ಘಾಟಿಸಲಾಗಿದೆ ಎಂದರು. ಹಾಸನ ಆರ್ ಟಿ ಓ ಇಲಾಖೆಯಲ್ಲಿ ಯಾವ ದೊಡ್ಡ ಮಟ್ಟದ ಸಮಸ್ಯೆ ಯಾವುದು ಕಾಣಿಸುತ್ತಿಲ್ಲ. ಪ್ರಾದೇಶಿಕ ಸಾರಿಗೆ ಸಂಸ್ಥೆಯು ಉತ್ತಮವಾದ ಕೆಲಸ ಮಾಡಿಕೊಂಡು ಹೋಗುತ್ತಿದೆ ಇನ್ನು ಹೊರ ಭಾಗದಲ್ಲಿ ಬೈಪಾಸ್ ರಸ್ತೆ ಮಧ್ಯೆ ಕಾಮಗಾರಿ ನಡೆಯುತ್ತಿರುವುದರಿಂದ ನಗರ ಭಾಗದಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿದೆ. ಆರ್.ಟಿ.ಓ. ಇಲಾಖೆಯವರು ಗಮನವಹಿಸಬೇಕು ಎಂದು ಹೇಳಿದರು. ಇಲಾಖೆಯಲ್ಲಿ ಇರುವ ಹೆಚ್ಚಿನ ಕೆಲಸ ನಿರ್ವಹಿಸಲು ಇನ್ನಷ್ಟು ಹೆಚ್ಚಿನ ಕೊಠಡಿಗಳ ಅಗತ್ಯವಿದೆ ಅವುಗಳನ್ನು ಶೀಘ್ರವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ಹೊರ ಭಾಗದಲ್ಲಿ ಬೈಪಾಸ್ ರಸ್ತೆ ಮಧ್ಯೆ ಕಾಮಗಾರಿ ನಡೆಯುತ್ತಿರುವುದರಿಂದ ನಗರ ಭಾಗದಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿದೆ. ಆರ್.ಟಿ.ಓ. ಇಲಾಖೆಯವರು ಗಮನವಹಿಸಬೇಕು ಎಂದು ಸೂಚಿಸಿದರು.


ಸಹಾಯಕ ಸಾರಿಗೆ ಅಧಿಕಾರಿ ಮತ್ತು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಮಾತನಾಡಿ, ನಮ್ಮ ಆರ್.ಟಿ.ಓ. ಇಲಾಖೆಯಲ್ಲಿ ಸಿಬ್ಬಂದಿಗಳು ಬಹಳ ಕಡಿಮೆ ಇದ್ದು, ಐದು ಜನ ಇದ್ದ ಇನ್ಸ್ ಪೆಕ್ಟರ್ ಈಗ ನಾಲ್ಕು ಜನರು ಮಾತ್ರ ಇದ್ದಾರೆ. ಬೇರೆ ಕಡೆಯಿಂದ ಒಟ್ಟು 15 ಇಲಾಖೆ ಜೀಪುಗಳು ಬಂದು ವಾಹನ ತಪಾಸಣೆಯಲ್ಲಿ ಮೂರು ದಿವಸದಲ್ಲೆ 400 ಕೇಸು ದಾಖಲಿಸಲಾಗಿದೆ. ತಪಾಸಣೆ ವೇಳೆ ಲೋಕಲ್ ನಲ್ಲಿ ಅನೇಕರು ಗಲಾಟಿ ಮಾಡಿದರೂ ವಿಧಿಯಿಲ್ಲದೇ ಕೇಸು ದಾಖಲಿಸಬೇಕಾಯಿತು. ಬೇರೆ ರಾಜ್ಯಗಳಿಂದ ವಾಹನ ಬಂದಾಗ ಒಂದೊಂದು ವಾಹನಕ್ಕೆ 1 ಲಕ್ಷದಿಂದ ನಾಲ್ಕು ಲಕ್ಷದವರೆಗೂ ಟ್ಯಾಕ್ಸ್ ಕಟ್ಟುತ್ತಾರೆ. ವಾಹನ ಚಾಲಕರು ಸರಿಯಾದ ಸಮಯಕ್ಕೆ ಎಫ್.ಸಿ. ಮಾಡಿಸಿ ಟ್ಯಾಕ್ಸ್ ಕಟ್ಟಬೇಕು. ಇನ್ನು ಸರಿಯಾಗಿ ವಾಯುಮಾಲಿನ್ಯ ತಡೆಗಟ್ಟುವ ವಾಹನವನ್ನು ಬಳಸಿ ಎಂದು ವಾಹನ ಮಾಲಿಕರಲ್ಲಿ ಮನವಿ ಮಾಡುತ್ತೇವೆ ಎಂದರು. ಕಾನೂನು ಉಲ್ಲಂಘನೆ ಮಾಡದೇ ವಾಹನ ಚಲಾಯಿಸಿ ಏನಾದರೂ ಕಾನೂನು ಉಲ್ಲಂಘನೆ ಮಾಡಿದರೇ ಯಾವ ಮುಲಾಜು ಇಲ್ಲದೇ ದಂಢ ಹಾಕುತ್ತೇವೆ ಎಂದು ಎಚ್ಚರಿಸಿದರು. ಒಂದೆ ವಾಹನದ ನಂಬರನ್ನು ಊದಾರು ವಾಹನಕ್ಕೆ ಬಳಕೆ ಮಾಡುತ್ತಿರುವುದು ಕಂಡು ಬಂದರೇ ಅಂತಹ ವಾಹನ ಕಂಡರೇ ನಮಗೆ ತಿಳಿಸಿ ಎಂದು ಕೋರಿದರು. ಶಾಲಾ ವಾಹನದ ಬಗ್ಗೆಯೂ ಗಮನಹರಿಸಲಾಗಿದ್ದು, ಮಕ್ಕಳ ಹಿತಾ ದೃಷ್ಠಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.


ಆರ್.ಟಿ.ಓ. ಇಲಾಖೆ ಅಧಿಕಾರಿ ರಾಜಕುಮಾರ್ ಮಾತನಾಡಿ, ವಾಯುಮಾಲಿನ್ಯ ಹೆಚ್ಚಿಸುವ ವಾಹನ ಸೇರಿದಂತೆ ಇತರೆ ಉಲ್ಲಂಘನೆಯ ಸುಮಾರು 400 ವಾಹನಗಳಿಗೆ ಕೇಸು ದಾಖಲಿಸಲಾಗಿದೆ. ಮೂರು ದಿನದಲ್ಲೆ 20 ಲಕ್ಷ ರೂ ದಂಢ ವಿಧಿಸಲಾಗಿದೆ. ಹೆಚ್ಚು ಹೊಗೆ ಬರುವ ವಾಹನಗಳ ಬಗ್ಗೆ ಗಮನಹರಿಸಿ ಅಂತವರಿಗೆ ದಂಢ ವಿಧಿಸುವ ಪ್ರಕ್ರಿಯೆ ಹೆಚ್ಚು ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್.ಟಿ.ಓ. ಇಲಾಖೆಯ ನೂತನ ವಾಹನದ ಕೀಯನ್ನು ಶಾಸಕರಾದ ಹೆಚ್.ಪಿ. ಸ್ವರೂಪ್ ಹಸ್ತಂತರಿಸಿದರು. ಇದೆ ವೇಳೆ ಆರ್.ಟಿ.ಓ. ಇಲಾಖೆ ಸಾರಿಗೆ ಅಧಿಕಾರಿ ರಾಜಕುಮಾರ್, ಯಶವಂತ್, ಕಾರ್ಯಪಾಲಕ ಅಭಿಯಾಂತರ ಅಣ್ಣಪ್ಪ, ನವ್ಯಶ್ರೀ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page