Saturday, June 28, 2025

ಸತ್ಯ | ನ್ಯಾಯ |ಧರ್ಮ

RSS ಬೂಟಾಟಿಕೆ ಬಯಲಾಗಿದೆ: ಸಂಘದ ಸಂವಿಧಾನ ವಿರೋಧಿ ಹೇಳಿಕೆ ವಿರುದ್ಧ CPM ಪ್ರತಿಭಟನೆ

ದೆಹಲಿ: ಭಾರತೀಯ ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕುವ ಕುರಿತು RSS ಪ್ರಧಾನ ಕಾರ್ಯದರ್ಶಿ ಮಾಡಿದ ಪ್ರಸ್ತಾಪವನ್ನು CPM ತೀವ್ರವಾಗಿ ಪ್ರತಿಭಟಿಸಿದೆ.

ಸಂವಿಧಾನವನ್ನು ನಾಶಮಾಡುವ RSS ನ ದೀರ್ಘಕಾಲದ ಗುರಿ ಮತ್ತು ಅದರ ಹಿಂದುತ್ವ ಯೋಜನೆಗೆ ಅನುಗುಣವಾಗಿ ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಉದ್ದೇಶವನ್ನು ಈ ಪ್ರಸ್ತಾಪವು ಬಹಿರಂಗಪಡಿಸುತ್ತದೆ ಎಂದು ಅದು ಹೇಳಿದೆ.

ಭಾರತದ ಸಂವಿಧಾನವು ಸ್ವಾತಂತ್ರ್ಯಕ್ಕಾಗಿ ನಮ್ಮ ಐತಿಹಾಸಿಕ ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ವಿವಿಧ ಧಾರೆಗಳಿಂದ ಬಂದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಆಕಾಂಕ್ಷೆಗಳನ್ನು ಸಾಕಾರಗೊಳಿಸಿದೆ. ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದ’ ಮತ್ತು ‘ಜಾತ್ಯತೀತತೆ’ ಪದಗಳನ್ನು ಸೇರಿಸಿದ್ದು ಏಕಪಕ್ಷೀಯವಾಗಿಯಲ್ಲ. ಹೀದ್-ಎ-ಅಜಮ್ ಭಗತ್ ಸಿಂಗ್ ಮತ್ತು ಅವರ ಅನುಯಾಯಿಗಳಂತಹ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮೂಲ ಮೌಲ್ಯಗಳನ್ನು ಇದು ಪ್ರತಿಬಿಂಬಿಸುತ್ತದೆ. ಅವರ ಆದರ್ಶಗಳನ್ನು ಸಂವಿಧಾನದ ಪ್ರತಿಯೊಂದು ನಿಬಂಧನೆಯಲ್ಲೂ ಪ್ರತಿಷ್ಠಾಪಿಸಲಾಗಿದೆ.

ಈ ಪದಗಳ ಸೇರ್ಪಡೆಯು ಆ ಪರಂಪರೆಯನ್ನು ದೃಢಪಡಿಸುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದ ಆರ್‌ಎಸ್‌ಎಸ್ ಈಗ ಈ ಮೂಲಭೂತ ತತ್ವಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸುತ್ತಿರುವುದು ಬೂಟಾಟಿಕೆಗಳ ಪರಮಾವಧಿ. ಅವರು (RSS) ರಾಷ್ಟ್ರೀಯ ಚಳವಳಿಯ ಮಹಾನ್ ಮೌಲ್ಯಗಳನ್ನು ಮತ್ತು RSS ಬಲಪಂಥೀಯ, ಜನವಿರೋಧಿ ಮತ್ತು ವಿಭಜಕ ಸಿದ್ಧಾಂತಗಳ ವಿರುದ್ದವಿದ್ದ ಹುತಾತ್ಮರನ್ನು ಸಹಿಸುವುದಿಲ್ಲ.

ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲ ಮೌಲ್ಯಗಳನ್ನು ಬದಲಾಯಿಸುವ ಯಾವುದೇ ಪ್ರಯತ್ನವನ್ನು ಸಿಪಿಎಂ ಬಲವಾಗಿ ವಿರೋಧಿಸುತ್ತದೆ. ಎಲ್ಲಾ ಜನರು ಜಾಗರೂಕರಾಗಿರಬೇಕು ಮತ್ತು ತಾನು ಹೇಳಿದಂತೆ ಕಾರ್ಯನಿರ್ವಹಿಸುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಅಂತಹ ಪ್ರಯತ್ನಗಳನ್ನು ಬಲವಾಗಿ ವಿರೋಧಿಸಬೇಕು ಎಂದು ಪೊಲಿಟ್‌ಬ್ಯುರೊ ಮನವಿ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page